Showing posts with label ಅಪ್ಪಾವರು ಮಹಿಮೆ 01 ಇಭರಾಮಪುರ appavaru mahime 01. Show all posts
Showing posts with label ಅಪ್ಪಾವರು ಮಹಿಮೆ 01 ಇಭರಾಮಪುರ appavaru mahime 01. Show all posts

Tuesday, 1 January 2019

ಅಪ್ಪಾವರು ಮಹಿಮೆ 01 ಇಭರಾಮಪುರ appavaru mahime 01

ಮುಮ್ಮಡಿ ಕೃಷ್ಣರಾಜ ಒಡೆಯರ ಚಿತ್ರ ಇಲ್ಲಿದೆ

ಯ ಸಪ್ತಜನ್ಮತಃ ಕರ್ಮವಿಪಾಕಮಖಿಳಂ ಕಿಲ |
ಸ್ಪಷ್ಟದೃಷ್ಟ ವಿಹಪ್ರಾಹ ಮಹತಾಮಿಹ ಶೃಣ್ವತಾಮ್ ||
ಶ್ರೀ ಯೋಗಿ ನಾರಾಯಣಾಚಾರ್ಯರು ರಚಿಸಿರುವ ಶ್ರೀ ಅಪ್ಪಾವರ ಮಹಿಮೆಗಳನ್ನು ಸಾರುವ ಮೇಲಿನ ಸ್ತೋತ್ರಹೇಳುವಂತೆ, ಅಪ್ಪಾವರು ಸಪ್ತಜನ್ಮದ ವೃತಾಂತವನ್ನ ತಿಳಿಸುತ್ತಾ ಇದ್ದರು

ಶ್ರೀ ಅಪ್ಪಾವರ ಮಹಿಮೆ - ಸಪ್ತಜನ್ಮದ ವೃತಾಂತ - ಶ್ರೀ ಅಪ್ಪಾವರ ಮಹಿಮೆ - ಸಪ್ತಜನ್ಮದ ವೃತಾಂತ ಶ್ರೀ ಅಪ್ಪಾವರು ಸಂಚಾರ ನಿಮಿತ್ತವಾಗಿ ಮೈಸೂರಿಗೆ ಬಂದಿದ್ದರು. ಅಪ್ಪಾವರ ಆಗಮನದ ಸುದ್ದಿ ಕೇಳಿದ ಅವಾಗ ಅರಸರಾಗಿದ್ದ ಮುಮ್ಮಡಿ ಕೃಷ್ಣರಾಜೇಂದ್ರ ಒಡೆಯರು ಶ್ರೀ ಅಪ್ಪಾವರನ್ನು ಭೇಟಿಯಾಗಲು ಮಾರು ವೇಷದಲ್ಲಿ ಹೋಗಲು ನಿರ್ಧರಿಸುತ್ತಾರೆ. ಅಪರೋಕ್ಷ ಜ್ಞಾನಿಗಳಾದ ಅಪ್ಪಾವರಿಗೆ ರಾಜರು ತಮ್ಮ ಸಂದರ್ಶನಗೆ ಬರುತ್ತಾರೆ ಎಂದು ಗೋಚರವಾಗುತ್ತದೆ. ಅಪ್ಪಾವರು ತಮ್ಮ ಶಿಷ್ಯರಾದ ಯೋಗಿ ನಾರಾಯಣಾಚಾರ್ಯರಿಗೆ ರಾಜರು ಬರುವ ವಿಷಯ ತಿಳಿಸುತ್ತಾರೆ. ಅಪ್ಪಾವರ ಆಜ್ಞೆಯಂತೆ ಯೋಗಿ ನಾರಾಯಣಾಚಾರ್ಯರು ರಾಜರನ್ನು ಗೌರವದಿಂದ ಬರಮಾಡಿಕೊಳ್ಳುವರು. ನಂತರ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರು ಅಪ್ಪಾವರಿಗೆ ನಮಸ್ಕರಿಸಿ, ಗುರುವಂದನೆಯನ್ನು ಸಮರ್ಪಿಸುತ್ತಾರೆ.

ಅಪ್ಪಾವರ ಸಂದರ್ಶನದಿಂದ ಪುಲಕಿತರಾದ ಒಡೆಯರು ತಮಗೆ ಹಲವುದಿನದಿಂದ ಕಾಡುತ್ತಿರುವ ಒಂದು ಪ್ರಶ್ನೆಯನ್ನು ಅಪ್ಪಾವರಲ್ಲಿ ಕೇಳುತ್ತಾರೆ. ಒಡೆಯರು, ಅಪ್ಪಾವರೇ ಸ್ವಾಮಿ ನನಗೆ ಬಹಳ ದಿನದಿಂದ ಒಂದು ಪ್ರಶ್ನೆ ಕಾಡುತ್ತಿದೆ. ನಾನು ಈ ಜನ್ಮದಲ್ಲಿ ರಾಜನಾಗಬೇಕಾದರೆ ನನಗೆ ಯಾವ ಜನ್ಮದ ಪುಣ್ಯದಿಂದ ಈ ರಾಜಯೋಗ ಬಂದಿದೆ ಎಂದು ತಿಳಿಸಿ ಕೊಡಿರೆಂದು ಅಪ್ಪಾವರಲ್ಲಿ ಪ್ರಾರ್ಥನೆಮಾಡುತ್ತಾರೆ.
ಶ್ರೀ ಅಪ್ಪಾವರು, ಒಡೆಯರೇ ನೀವು ಹಿಂದಿನ ಜನ್ಮದಲ್ಲಿ ತಿರುಪತಿ ಶ್ರೀನಿವಾಸನ ಸೇವಕರಾಗಿದ್ದೀರಿ. ಶ್ರೀನಿವಾಸನಿಗೆ ಪ್ರತಿನಿತ್ಯ ಅರ್ಚನೆಗಾಗಿ ತುಳಸಿತಂದು ಕೊಡೋದು, ಹಾಗೆಯೇ ನಿರ್ಮಾಲ್ಯ ವಿಸರ್ಜನೆ ಮಾಡೋದು ನಿಮ್ಮ ಕೆಲಸವಾಗಿತ್ತು. ಒಂದುದಿನ ನಿರ್ಮಾಲ್ಯ ವಿಸರ್ಜನೆಯ ಸಂದರ್ಭದಲ್ಲಿ
ಶ್ರೀನಿವಾಸನ ರಾಜ ಮುದ್ರಿಕೆ (ಉಂಗುರ) ಬಂದಿರುತ್ತದೆ. ಉಂಗುರದ ತೇಜಸ್ಸನು ನೋಡಿ ಆ ಕ್ಷಣದಲ್ಲಿ ಧರಿಸಿ ನಂತರದಲ್ಲಿ ಮತ್ತೆ ಶ್ರೀನಿವಾಸನ ಅರ್ಚಕರಿಗೆ ವಿಷಯತಿಳಿಸಿ ಆ ಉಂಗುರವನ್ನು ಒಪ್ಪಿಸಿರುತ್ತೀರಿ. ಆ ಕ್ಷಣದಲ್ಲಿ ನೀವು ಧರಿಸಿದ ಆ ಉಂಗುರದಿಂದ ನಿಮಗೆ ಈ ಜನ್ಮದಲ್ಲಿ ರಾಜ ರಾಗಿದ್ದೀರಿ ಎಂದು ಅಪ್ಪಾವರು ಅರಸರಿಗೆ ಅವರ ಪೂರ್ವ ಜನ್ಮದ ವೃತಾಂತ್ತವನ್ನು ಹೇಳುತ್ತಾರೆ
*********


ಶ್ರೀ ಅಪ್ಪಾವರ ಮಹಿಮೆ - ನಂದವಾರ ಇಭರಾಮಪುರ ಗ್ರಾಮಕ್ಕೆ ಹತ್ತಿರವಾದ ಗ್ರಾಮ. ಆ ಗ್ರಾಮದಲ್ಲಿ ನಂದವಾರ ದೇಸಾಯಿ ಮನೆತನದವರು ನೆಲಸಿದ್ರು. ಸುಖ ಸಂಪತಿನಲ್ಲಿ ಇದ್ದ ದೇಸಾಯಿ ಮನೆತನಕೆ ಸಂತಾನ ಭಾಗ್ಯ ಇರಲಿಲ್ಲ. ಸಂತಾನ ಅನುಗ್ರಹಕಾಗಿ ಅಪ್ಪಾವರ ಮೊರೆ ಹೋಗುತ್ತಾರೆ. ಶ್ರೀ ಅಪ್ಪಾವರು ಮಂತ್ರಾಕ್ಷತೆ ಕೊಟ್ಟು ಮುಖ್ಯಪ್ರಾಣನ ಅನುಗ್ರಹ ಆಗುತ್ತೆ ಹೋಗಿ ಬನ್ನಿ ಅಂತ ಹೇಳಿ ಕಳಿಸುತ್ತಾರೆ. ಅಪ್ಪಾವರ ಮಾಡಿದ ಅನುಗ್ರಹ ದೇಸಾಯಿ ಮನೆ ಸೊಸೆ ಗರ್ಭಿಣಿ ಆಗುತ್ತಾಳೆ. ಮನೆಯಲ್ಲಿ ಸಂಭ್ರಮದ ವಾತಾವರಣ.ಸೀಮಂತ ಶಾಸ್ತ್ರ ಅತಿ ವೈಭವದಿಂದ ಮಾಡಿರುತ್ತಾರೆ. ಆದರೆ ವಿಧಿ ಆಟವೇ ಬೇರೆಯಾಗಿತ್ತು. ಸುಸಂಧರ್ಭದ ಮನೆಯಲ್ಲೆ ಮೌನ ವಾತಾವರಣ..ತುಂಬು ಗರ್ಭಿಣಿಗೆ ಗರ್ಭಪಾತ ಉಂಟಾಗುತ್ತದೆ. ದೊಡ್ಡವರ ಅನುಗ್ರಹ ಸುಳ್ಳಾಗಲ್ಲಾ , ದೇಸಾಯಿ ಕುಟುಂಬ ಶ್ರೀ ಅಪ್ಪಾವರ ಮೊರೆ ಹೋಗ್ತಾರೆ. ದೇಸಾಯಿ ಕುಟುಂಬದವರು ಅಪ್ಪಾವರಿಗೆ , ಸ್ವಾಮಿ ಕೊಡೋದು ಕೊಟ್ಟು ಇಂತಹ ಕೂಸು ಅನುಗ್ರಹಿಸಿದ್ದೀರಾ ಏನು ಮಾಡುವದು ಅಂತ ಹೇಳಿದಾಗ ಅಪ್ಪಾವರು ಗರ್ಭಪಾತವಾದ ಆ ಪಿಂಡ ದಾನ ಮಾಡಲು ಹೇಳ್ತಾರೆ. ಅಪ್ಪಾವರು ಆ ಪಿಂಡವನ್ನು ದಾನ ತೆಗೆದುಕೊಂಡು , ಒಂದು ಗಡಿಗೆಯಲ್ಲಿ ಹಾಕಿ ನಿತ್ಯ ಪಂಚಮುಖಿ ಪ್ರಾಣದೇವರ ಅಭಿಷೇಕ ಮಾಡಿದ ಕ್ಷೀರ ಆ ಗಡಿಗೆಯಲ್ಲಿ ಹಾಕುತ್ತಿದರು.ಆ ಮಾಡಿಕೆಯಲ್ಲಿ ಇದ್ದ ಕೂಸು ತಾಯಿಯ ಗರ್ಭದಲ್ಲಿ ಬೆಳವಣಿಗೆ ಹೇಗೆ ಆಗಬೇಕು ಹಾಗೆ ಆಗ್ತಹೋಯಿತು . 9 ತಿಂಗಳ ನಂತರ ಶ್ರೀ ಅಪ್ಪಾವರು ಬೆಳೆವಣಿಗೆಯಾದ ಆ ಕೂಸು ಮತ್ತೆ ದೇಸಾಯಿ ಮನೆಗೆ ಒಪ್ಪಿಸಿ , ದೇಸಾಯಿ ಮನೆತನವನ್ನು ಉದ್ದರಿಸಿ ಅನುಗ್ರಹಿಸುತ್ತಾರೆ. ಶ್ರೀ ಯೋಗಿ ನಾರಾಯಣಾಚಾರ್ಯರು ರಚಿಸಿರುವ ಶ್ರೀ ಅಪ್ಪಾವರ ಮಹಿಮೆಗಳನುಸಾರುವ ಸ್ತೋತ್ರಹೇಳುವಂತೆ
ದರಿದ್ರಾಃ ಅಲ್ಪಧಿಯೋಲ್ಪ ವಂಶೋದ್ಬವಾಶ್ಚ ಮಾನವಾಃ |
ಸದಾಚಾರಶ್ಚ ಸಜ್ಜನಾಃ ಪ್ರೌಢಾಃ ಪ್ರಾಜ್ಞಶ್ಚ ಸಾಧವಃ ||
ಕುಷ್ಠದಿ ಶ್ರೇಷ್ಠ ರೋಗಾ ಯೇ ಗಂಧಕಾಷ್ಠಶ್ಚ ಭಸ್ಮನಾ |
ಮೃತಿಕಾಧೂಪಧೂಮಾದಿ ಸಾಧನೈರ್ತಾಶಿತಾಃ ಸತಾಮ್ ||
ಶ್ರೀ ಅಪ್ಪಾವರು ಕರುಣಾ ಸಮುದ್ರರು . ಶ್ರೀ ಅಪ್ಪಾವರ ತಪೋ ಬಲದಿಂದ ದರಿದ್ರರು - ಅಲ್ಪಮತಿಯರು - ಅಲ್ಪವಂಶದಲ್ಲಿ ಹುಟ್ಟಿದರು ಸಹ ಸದಾಚಾರಿಗಳು ,ಧನ್ಯರು , ಜ್ಞಾನಿಗಳು , ಸಜ್ಜನರಾಗಿದ್ದಾರೆ. ಶ್ರೀ ಅಪ್ಪಾವರ ಪಂಚಮುಖಿ ಪ್ರಾಣದೇವರ ನಿರಂತರ ಉಪಾಸನೆಯಿಂದ ಹಲವು ವ್ಯಾಧಿಗಳ ನಿರ್ಮೂಲನೆ ಮಾಡಿದ್ದಾರೆ
ಸ್ಮರಿಸುವ ನರನೆ ಧನ್ಯ
ಇಭರಾಮಪುರಾಧೀ
*****
from: [6:46 AM, 12/21/2018] +91 95358 37843:
ಇಭರಾಮಪುರ ಅಪ್ಪಾವರ ಮಹಿಮೆ - ಒಮ್ಮೆ ಶ್ರೀಅಪ್ಪಾವರು ಸಂಚಾರತ್ವೇನ ತಮ್ಮ ಭಕ್ತರಾದ ಮುಜಾಮುದಾರರ ಮನೆಗೆ ಬರುತ್ತಾರೆ. ಅವಾಗ ಮುಜಾಮುದಾರರು ಅಪ್ಪಾವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ ಸ್ವಾಮಿ ತಾವು ಎಲ್ಲರಿಗು ಅನುಗ್ರಹ ಮಾಡಿದ್ದೀರಿ ,ಎಲ್ಲರಿಗು ಅವರು ಕೇಳಿದ್ದು ಕೊಟ್ಟಿದ್ದೀರಿ,ತಮ್ಮ ಪಾದುಕೆಗಳು,ಕೋಲು, ಹೀಗೆ ನಮಗು ಸಹ ಅನುಗ್ರಹ ಮಾಡಿ ಅಂತ ಬಹಳ ಕೇಳಿಕೊಂಡಾಗ ಅವಾಗ್ಗೆ ಅಪ್ಪಾವರು ಹೇಳುತ್ತಾರೆ , ನಾನೇ ನಿಮ್ಮ ಮನೆಯಲ್ಲಿ ಇದ್ದೀನಿ ಅಂತಾ ಹೇಳಿ ಮುಂದೆ ಪಯಣವನ್ನು ಬೆಳೆಸುತ್ತಾರೆ. ಒಂದೆರಡು ದಿನಗಳ ನಂತರ ಒಂದು ಘಟನೆ ನಡೆಯುತ್ತದೆ. ಮುಜಾಮುದಾರರು ಅವರದು ಒಂದು ಪದ್ದತಿ. ಸ್ನಾನ ವಾದನಂತರ ದೇವರ ಮನೆ,ಕಟ್ಟಿ ಸ್ವಚ್ಛತೆ ಮಾಡಿ ಅಲ್ಲಿ ಇಟ್ಟಿರುವ ಸಂಪುಷ್ಟ ತೆಗೆದುಕೊಂಡು ತುಳಸಿ ತರುವದು ನಿತ್ಯ ಪದ್ಧತಿ. ಆದಿನ ಸಂಪುಷ್ಟ ಬಹು ಭಾರವಾಗಿ ತೋರಿತು ಯಾಕೆ ಇಷ್ಟು ಭಾರವಾಗಿದೆ ,ಅದರಲ್ಲಿ ಏನು ಇಟ್ಟಿಲ್ಲ !!! ಅಂತ ತೆಗೆದು ನೋಡಲಾಗಿಅಪ್ಪಾವರ ಬೆಳ್ಳಿಯ ಮೂರ್ತೀ ಸುಮಾರು 3inch ಅಳತೆಯ ಪ್ರತಿಮೆ ಕಾಣುತ್ತದೆ ತಕ್ಷಣ, ಮುಜಾಮುದಾರರಿಗೆ ಅಪ್ಪಾವರು ತಮ್ಮ ಮೇಲೆ ಮಾಡಿದ ಅನುಗ್ರಹ ನೆನೆದು ಆನಂದಭರಿತರಾಗುತ್ತಾರೆ. ಆದರೆ ಆ ಪ್ರತಿಮೆಯ ಬಲಗಡೆಯ ಕಿವಿ ಸ್ವಲ್ಪ ದೊಡ್ಡದು ಇರುತ್ತದೆ. ಇದು ಯಾಕೋ ಸರಿ ಕಾಣುತಾ ಇಲ್ಲ ಅಂತ ಹೇಳಿ ಅಕ್ಕಸಾಲಿಗನನ್ನು ಕರೆದು ಸಣ್ಣ ರಂಪದಿಂದ(hack saw blade)ಕೊಯ್ಯಲು ಹೇಳುತ್ತಾರೆ. ಅದನ್ನು ಕೊಯ್ಯಲು ಅದರಿಂದ ಅಂದರೆ ಬಲಕಿವಿಇಂದ ರಕ್ತ ಬರುತ್ತದೆ ತಕ್ಷಣ ಅಕ್ಕಸಾಲಿಗ ಭಯದಿಂದ ಅಲ್ಲಿಗೆ ಬಿಟ್ಟು ಕೈ ಮುಗಿಯುತ್ತಾನೆ. ಆ ನಂತರ ಸ್ವಪ್ನದಲ್ಲಿ ಅಪ್ಪಾವರು ಬಂದು ಮುಜಾಮುದಾರರಿಗೆ ಹೇಳುತ್ತಾರೆ. ನಿನಗೆ ನಾನು ಬೇಕಾ ನನ್ನ ಕಿವಿ ಬೇಕಾ,ಅಂತ ಹೇಳಿ ಅದು ಹಾಗೇ ಇರಲಿ ಅಂತ ಹೇಳುತ್ತಾರೆ ಈಗಲು ಆ ಪ್ರತಿಮೆ ಮುಜಾಮುದಾರರ ಮನೆಯಲ್ಲಿ ಇದೆ.ಕಿತ್ತೂರಿನಲ್ಲಿ ಅವರ ವಂಶಸ್ಥರ ಮನೆಯಲ್ಲಿ ಇದೆ. ಶ್ರೀ ಇಭರಾಮಪುರ ಅಪ್ಪಾವರ ಮೇಲೆ ರಚಿಸಿದ ಸುಳಾದಿ ಯಲ್ಲಿ ಒಂದು ಸಾಲು ಬರುತ್ತದೆ. ನಿಜವಾದ ಭಕುತಿ ಇವರ ಪಾದಸ್ಮರಣೆ ಮಾಡದ ಮನುಜರಿಗೆ ಶ್ರೀ ಪದ್ಮ ರಮಣನು ಸೃಷ್ಟಿ ಸುವ ಆ ಮನುಜಗೋಸುಗ ನರಕ ನರಕಾದೊಳಗಿಟ್ಟು ಕುಟ್ಟುವ ಕ್ಷಣ ಬಿಡದೆ ಎಷ್ಟು ಮಾಡಿದರೇನು ನಿತ್ಯ ದಲ್ಲಿ ಅಪ್ಪಾವರ ಸ್ಮರಣೆ ಮಾಡೋಣ. ಎಲ್ಲಾ ರಿಗು ಅಪ್ಪಾವರು ಅನುಗ್ರಹ ಮಾಡಲಿ. ಆ ಪ್ರತಿಮೆಯ ಚಿತ್ರ ಕೆಳಗಡೆ ಇದೆ.



**********


ಶ್ರೀ ಅಪ್ಪಾವರ ಮಹಿಮೆ
ಶ್ರೀ ಅಪ್ಪಾವರು ತೀರ್ಥ ಯಾತ್ರೆ ಗೆಂದು ಮಂತ್ರಾಲಯ ದಿಂದ ಹೊರಟು ರಾಮೇಶ್ವರ ಶ್ರೀಮುಷ್ಣಂ,ಕುಂಭಕೋಣ ಮುಂತಾದ ಕಡೆಗಳಲ್ಲಿ ಸಂಚರಿಸಿ ಈರೋಡ್ ಹತ್ತಿರ ಇರುವ ಭವಾನಿ ಎಂಬ ಸ್ಥಳಕ್ಕೆ ಹೋಗಿ ತಮ್ಮ ಶಿಷ್ಯ ನಾದ ಶ್ರೀ ಭವಾನಿ ಭುಜಂಗರಾಯರ ಮನೆಯಲ್ಲಿ ವಾಸ ಮಾಡಿ ಪ್ರಾಣದೇವರ ಪೂಜಾದಿಗಳನ್ನು ಮುಗಿಸಿ ,ತೀರ್ಥ ಪ್ರಸಾದ ವಾದ ಮೇಲೆ ಮುಂದಿನ ಪ್ರಯಾಣಕ್ಕೆ ಹೊರಡಬೇಕು ಅಂತ ಇದ್ದಾಗ ಆ ಮನೆಯ ಯಜಮಾನ ಸ್ವಾಮಿ ನನ್ನ ಮಗನಿಗೆ ಮೊನ್ನೆ ತಾನೇ ವಿವಾಹವಾಗಿದೆ.ನಾಳೆ ದಿನ ನಿಷೇಕ‌ಕಾರ್ಯ್ರಕ್ರಮ ಇದೆ. ದಯವಿಟ್ಟು ತಾವು ನೂತನ ದಂಪತಿಗಳಿಗೆ ಆಶೀರ್ವಾದ ಮಾಡಿ ಹೊರಡಬೇಕು ಅಂತ ಒಂದೇ ಸಮನೆ ಬಲವಂತವಾಗಿ ಅಪ್ಪಾವರು ಬಳಿ ಕೇಳಿಕೊಂಡನು. ಅಪ್ಪಾವರು ಆ ದಿನ ಅಲ್ಲಿ ಇಂದ ಹೊರಡಬೇಕು ಅಂತ ಇಚ್ಛೆ. ಆದರೆ ಮನೆಯ ಯಜಮಾನನ ಹಾಗು ಶಿಷ್ಯರು ಒತ್ತಾಯದಿಂದ ಅಲ್ಲಿ ಉಳಿಯಬೇಕಾಯಿತು. ಮರುದಿನ ನಿಷೇಕ ಕಾರ್ಯಕ್ರಮ ದಂಪತಿಗಳನ್ನು ಶಯ್ಯಾಗೃಹಕ್ಕೆ ಕಳುಹಿಸಿದ್ದಾರೆ. ಇದ್ದಕ್ಕಿದ್ದಂತೆ ಹೋ ಎನ್ನುವ ಕೋಲಾಹಲ ,ರೋದನ ಕೇಳಿ ಬರಲು ಶುರುವಾಯಿತು. ಏನೆಂದು ವಿಚಾರಿಸಲಾಗಿ ಮದುಮಗ ಶಯ್ಯಾಗೃಹದ ಒಳಗಡೆ ಹೋದ ತಕ್ಷಣ ದಲ್ಲಿ ಅಪಮೃತ್ಯುವಿಗೆ ಗುರಿಯಾಗಿದ್ದ. ತಕ್ಷಣ ಮನೆಯ ಯಜಮಾನ ಓಡಿಬಂದು ಅಪ್ಪಾವರು ಕಾಲನ್ನು ಹಿಡಿದುನೀವೇ ಗತಿ ನಮ್ಮನ್ನು ಕಾಪಾಡಿ ಅಂತ ಕಣ್ಣೀರು ಇಡುತ್ತಾ ಪ್ರಾರ್ಥನೆ ಮಾಡತೊಡಗಿದ. ಅವಾಗ ಅಪ್ಪಾವರು ಮನೆಯ ಯಜಮಾನನಿಗೆ ಹಾಗು ಶಿಷ್ಯರಿಗೆ ಹೇಳುತ್ತಾರೆ. ಈ ದುರಂತ ನಡೆಯುವದು ಅಂತ ತಿಳಿದು ಇಲ್ಲಿ ಇಂದ ಹೋಗಬೇಕು ಅಂತ ಹೇಳಿದ್ದು. ಆದರೆ ನೀವೆಲ್ಲ ತಡೆದು ಬಿಟ್ಟಿರಿ. ಅಯಿತು ಶ್ರೀ ಹರಿ ವಾಯುಗುರುಗಳ ಇಚ್ಛೆ ಅಂತ ಹೇಳಿ ಆ ಶಯ್ಯಾಗೃಹಕ್ಕೆ ಹೋಗಿ ನಾವಾಗಿ ಬಾಗಿಲನ್ನು ತೆಗೆಯುವವರೆಗು ಯಾರು ತೆಗೆಯಕೂಡದು ಅಂತ ಹೇಳುತ್ತಾರೆ*. ಮರುದಿನ ಸೂರ್ಯೋದಯ ವಾಯಿತು. ಪ್ಪಾವರು ಬಾಗಿಲನ್ನು ತೆರದು ಹೊರ ಬರಲು ಮದುಮಗನು ಬದುಕಿದ್ದನು. ಇದನ್ನು ಕಂಡ ಭುಜಂಗರಾಯರ ಆನಂದದಿಂದ ತಮ್ಮ ವಂಶವನ್ನು ಉಳಿಸಿದ ಅಪ್ಪಾವರು ಕಾಲಿಗೆ ಬಿದ್ದು ತಮ್ಮ ಮಗ ಸೊಸೆಯನ್ನು ಸಹ ಕರೆತಂದು ಅಪ್ಪಾವರ ಪಾದದ ಬಳಿ ನಮಸ್ಕಾರ ಮಾಡಿಸುವ. ಆಗ ಅಪ್ಪಾವರು ಅವರ ಭಕ್ತಿ ಗೆ ಸಂತುಷ್ಟರಾಗಿ ರಾಯರೇ ನಮ್ಮ ಪ್ರಾಣದೇವರಿಗೆ ಸಂಜೀವರಾಯನೆಂದು ಹೆಸರು. ನಮ್ಮ ಶ್ರೀ ಅನಿಲ ದೇವನಿಗೆ ಅಪಮೃತ್ಯುವನ್ನು ಪರಿಹಾರವನ್ನು ಮಾಡುವದು ಹೊಸದಾದ ಕೆಲಸವಲ್ಲ ಇದೆಲ್ಲ ಆ ಭಾರತೀಶನ, ಅವನ ಅಂತರ್ಯಾಮಿಯಾದ ಭಗವಂತನ ಅನುಗ್ರಹ. ಅಂತ ಹೇಳಿ ಎಲ್ಲಾ ಭಕ್ತರಿಗೆ ಆಶೀರ್ವಾದ ಮಾಡಿ ಮುಂದಿನ ಊರಿಗೆ ಪ್ರಯಾಣ ಬೆಳೆಸಿದರು.
ಕಟ್ಟುಕಥೆ ಯಿದು ಅಲ್ಲ ದುಷ್ಟರಿಗೆ ಸಿಗರೊಲ್ಲ, ಗಟ್ಟ್ಯಾಗಿ ಇವರ ಭಜಿಸೆ ಬಿಟ್ಟಿರನು ತಾ ಬಲ್ಲ, ಇಷ್ಟಾರ್ಥ ಸುರಿಮಳೆಯ ಕೊಡುವರಿದು ಸುಳ್ಳಲ್ಲ, ಎಷ್ಟ್ಹೇಳಲಿವರ ಮಹಿಮೆಯ ಅರಿಯೆ ನಾ ಖುಲ್ಲ
***********

ಪ್ರವರರಿಯದವನಿಂದ ಮದವಿಳಿಸಿದೇ| 🙏🙏 ಶ್ರೀ ಇಭರಾಮಪುರ ಅಪ್ಪಾವರ ಚರಿತ್ರೆ ✍ಒಮ್ಮೆ ಮಂತ್ರಾಲಯ ಕ್ಷೇತ್ರಕ್ಕೆ ರಾಮಾಚಾರ್ಯರು ಎಂಬ ಪಂಡಿತರು ಸಂತಾನ ಅಪೇಕ್ಷಿತ ವಾಗಿ ಶ್ರೀ ರಾಯರ ಸೇವೆಗಾಗಿ ಬಂದಿರುತ್ತಾರೆ.ದೊಡ್ಡ ಪಂಡಿತರು. ಪಾಠ ಪ್ರವಚನ ಕುಶಲರು.ಆದರೆ ಅವರಲ್ಲಿ ಒಂದು ದೋಷ.ವಿನಯ ಅವರ ಬಳಿ ಇದ್ದಿಲ್ಲ. ಮಂತ್ರಾಲಯ ಕ್ಕೆ ಸೇವೆಗಾಗಿ ಬಂದ ಅನೇಕ ಅಕ್ಷರಸ್ಥರ ಜೊತೆಯಲ್ಲಿ ಶಾಸ್ತ್ರ ವಿಚಾರವಾಗಿ ವಾದ ಮಾಡಿ ಅವರನ್ನು ನಿರುತ್ತರ ಮಾಡಿ,ಅಹಂಕಾರ ದಿಂದ ವರ್ತನೆ ಮಾಡಲು ಆರಂಭಿಸಿದರು. ಇದು ರಾಯರಿಗೆ ಸರಿ ಕಾಣಲಿಲ್ಲ. ಇವರು ಅಲ್ಲಿ ಇದ್ದಾಗ ಶ್ರೀ ಅಪ್ಪಾವರು ರಾಯರ ದರ್ಶನಕ್ಕೆ ಬಂದಿರುತ್ತಾರೆ. ರಾಯರ ವರ್ಧಂತಿ ಸಹ ಆ ಸಮಯದಲ್ಲಿ ಇರುತ್ತದೆ. ಹಾಗಾಗಿ ರಾಯರ ವರ್ಧಂತಿ ಸಮಾರಾಧನೆಗೆ ರಾಯರ ಹತ್ತಿರ ಬಂದು ಇಭರಾಮಪುರಕ್ಕೆ ಬರಲು ರಾಯರಿಗೆ ಆಹ್ವಾನವನ್ನು ಕೊಡುತ್ತಾರೆ.ರಾಯರ ಜೊತೆಯಲ್ಲಿ ಇವರು ಮಾತನಾಡುವ ಸಾಮರ್ಥ್ಯ ಅವರಿಗೆ ಇತ್ತು. ವೃಂದಾವನದ ಮುಂದೆ ನಿಂತು ಇವರು ಮಾತನಾಡಿದರೆ ರಾಯರು ಒಳಗಡೆ ಇಂದ ಉತ್ತರ ಕೊಡುತ್ತಾ ಇದ್ದರು. ನೋಡುವವರಿಗೆ ಇವರೊಬ್ಬರೇ ಮಾತನಾಡುತ್ತಾ ಇದ್ದಾರೆ ಅಂತ ಭಾವಿಸುತ್ತಾ ಇದ್ದರು. ಅಲ್ಲಿ ಕುಳಿತಿದ್ದ ಆಚಾರ್ಯರಿಗೆ ಸಹ ಆಹ್ವಾನವನ್ನು ನೀಡುತ್ತಾರೆ. ಆದರೆ ಆಚಾರ್ಯರು ಇವರು ಯಾರೋ! ಏನೋ?? ಮಂತ್ರಾಲಯ ಬಿಟ್ಟು ಹೋಗುವದು ಏಕೆ?? ಎಂದು ಅನುಮಾನದಿಂದ ಉತ್ತರ ಕೊಡಲಿಲ್ಲ. ಆ ರಾತ್ರಿ ಸ್ವಪ್ನದಲ್ಲಿ ರಾಯರು ಬಂದು ಪಂಡಿತರಿಗೆ ಇಭರಾಮಪುರಕ್ಕೆ ಹೋಗಲುಸೂಚನೆ ಕೊಡುತ್ತಾರೆ. ಶ್ರೀರಾಯರ ಆಜ್ಞೆಯಂತೆ ಶ್ರೀ ಅಪ್ಪಾವರ ಮೇಲಿನ ಗೌರವದಿಂದ ಆಚಾರ್ಯರು ಮಂತ್ರಾಲಯ ದಿಂದ ಇಭರಾಮಪುರ ಕ್ಕೆ ಹೆಜ್ಜೆ ನಮಸ್ಕಾರ ಹಾಕುತ್ತಾ ಹೊರಟರು. ಇತ್ತ ಇಭರಾಮ ಪುರದಲ್ಲಿ ದೊಡ್ಡ ಉತ್ಸವ. ವಿದ್ವತ್ ಗೋಷ್ಠಿ ನಡೆದಿದೆ.ಎಲ್ಲಾ ಮುಗಿದು ಭೋಜನ ಸಮಯ.ಆದರೆ ಶ್ರೀಅಪ್ಪಾವರು ಮಾತ್ರ ಭೋಜನಕ್ಕೆ ಕೂಡದೇ ಯಾರಿಗೋ ಕಾಯುತ್ತಾ ಇದ್ದಾರೆ.ಜನರೆಲ್ಲಾ ಅಪ್ಪಾವರ ವೀಕ್ಷಣೆ ಮಾಡುತ್ತಾ ಇದ್ದಾರೆ.ಸ್ವಲ್ಪ ಹೊತ್ತಿಗೆ ರಾಮಾಚಾರ್ಯರು ಅಲ್ಲಿ ಗೆ ಬರುತ್ತಾರೆ ಶ್ರೀ ಅಪ್ಪಾವರು ರಾಘವೇಂದ್ರ ಚಿತ್ತಜ್ಞರಾದ್ದರಿಂದ ರಾಯರು ಯಾರಿಗೆ ಏನು ಸೂಚನೆ ಕೊಟ್ಟಿದ್ದಾರೆ ಇವೆಲ್ಲವೂ ಗೊತ್ತಾಗುತ್ತಾ ಇತ್ತು. ತದನಂತರ ಭೋಜನ ಆದ ಮೇಲೆ ತಾಂಬೂಲ ಕೊಡುವ ವೇಳೆ. ಶ್ರೀ ಅಪ್ಪಾವರು ತಮ್ಮ ಮನೆಯಲ್ಲಿ ಕೆಲಸ ಮಾಡುವ ನೀರು ತರುವ ಆಳನ್ನು ಕರೆದು ಅವನನ್ನು ಹಸ್ತದಿಂದ ಸ್ಪರ್ಶಿಸಿ "ಈ ರಾಮಾಚಾರ್ಯರು ಪಂಡಿತರು.ಶ್ರೀ ಮನ್ ನ್ಯಾಯ ಸುಧಾ ಗ್ರಂಥ ದಲ್ಲಿ ಇವರಿಗೆ ಅರ್ಥ ವಾಗದ ವಿಷಯಗಳಿಂದ ಸಂಶಯಗ್ರಸ್ತರಾಗಿದ್ದಾರೆ.ಅವರ ಸಂಶಯಗಳನ್ನು ನಿವಾರಿಸಲು ಹೇಳುತ್ತಾರೆ. ಸುತ್ತ ಇದ್ದ ಜನರಿಗೆಲ್ಲ ಆಶ್ಚರ್ಯಕರವಾಗಿ ತೋರುತ್ತದೆ. ಏನು ಓದು ಬರಹ ಇಲ್ಲದವ ಹೇಗೆ ಸುಧಾನುವಾದ ಮಾಡಿಯಾನು ಎಂದು?? ಶ್ರೀ ಅಪ್ಪಾವರ ಅನುಗ್ರಹದಿಂದ ಸತತ ಎರಡು ಗಂಟೆ ಗಳ ಕಾಲ ಸಂಸ್ಕೃತ ದಲ್ಲಿ ಲೀಲಾಜಾಲವಾಗಿ ಸುಧಾನುವಾದ ಮಾಡಿ ಆಚಾರ್ಯರ ಸಂಶಯವನ್ನು ನೀರಿನವ ನಿವಾರಣೆ ಮಾಡುತ್ತಾನೆ. ಇದರಿಂದ ಆಚಾರ್ಯರಿಗೆ ಗರ್ವಭಂಗವಾಯಿತು. ಇನ್ನೂ ಮುಂದೆ ಈ ತರಹ ಗರ್ವಪಡಬಾರದು.ತತ್ರಾಪಿ ದೊಡ್ಡವರ ಸನ್ನಿಧಿಯಲ್ಲಿ ಸಾಧು ಜನರಿಗೆ ಅಹಂಕಾರ ದಿಂದ ಮಾತನಾಡಿ ಅವರ ಮನಸ್ಸು ನೋಯಿಸುವ ಕೆಲಸ ಮಾಡಬಾರದು ಎಂದು ತಿಳಿದು ಅಪ್ಪಾವರ ಬಳಿ ಕ್ಷಮೆ ಯಾಚನೆಮಾಡುವರು. ಶ್ರೀ ಅಪ್ಪಾವರ ಬಳಿ ಭಕ್ತಿ ಮಾಡಿದ ರಾಮಾಚಾರ್ಯರಿಗೆ ಮುಂದೆ ಸಂತಾನವಾಗುತ್ತದೆ. ಹೀಗೆ ತಮ್ಮ ಹಸ್ತ ಸ್ಪರ್ಶದಿಂದ ಓದು ಬರಹ ಬಾರದ ವ್ಯಕ್ತಿ ಇಂದ ಸಕಲ ಶಾಸ್ತ್ರ ಅರ್ಥ ವನ್ನು ಅನುವಾದ ಮಾಡಿಸಿದ ಈ ಚರಿತ್ರೆ ಮಂತ್ರಾಲಯ ಪ್ರಾಂತ್ಯದಲ್ಲಿ ಬಹು ಜಾಗರೂಕ ವಾಗಿದೆ. ಹೀಗೆ ಭಗವಂತ ತನ್ನ ಭಕ್ತರಲ್ಲಿ ನಿಂತು ಮಾಡುವ ಲೀಲೆ ಬಹು ವಿಚಿತ್ರ ಮತ್ತು ಸೋಜಿಗ. ಶ್ರೀ ಕೃಷ್ಣ ಪರಮಾತ್ಮನ,ವಾಯುದೇವರ ಮತ್ತು,ರಾಯರ ಸಂಪೂರ್ಣ ಅನುಗ್ರಹ ಪಾತ್ರರಾದ ಶ್ರೀ ಅಪ್ಪಾವರು ನಮ್ಮ ಮೇಲೆ ಸಹ ಅನುಗ್ರಹ ಮಾಡಲಿ ಎಂದು ಪ್ರಾರ್ಥನೆ ಮಾಡುತ್ತಾ 🙏ಶ್ರೀ ಕೃಷ್ಣಾರ್ಪಣಮಸ್ತು🙏 ಸಾನುರಾಗದಿ ಇವರ ಮಹಿಮೆಯ ಗಾನ ಮಾಡುತ| ಕುಣಿದು ಹಿಗ್ಗಲು ಶ್ರೀನಿವಾಸನ ಪೂಜೆ ಸುರನದಿ ಸ್ನಾನ ವೆನಿಸುವದು.| 🙏ಶ್ರೀ ಕೃಷ್ಣಾಚಾರ್ಯ ಗುರುಂಭಜೇ🙏
**************

|| ಶ್ರೀಮನ್ಮೂಲರಾಮೋ ವಿಜಯತೇ || || ಶ್ರೀಗುರುರಾಜೋ ವಿಜಯತೇ|| || ಶ್ರೀ ಇಭರಾಮಪುರಾಧೀಯ ನಮಃ || ಶ್ರೀ ಯೋಗಿ ನಾರಾಯಣಾಚಾರ್ಯರು ವೀರನಾರಾಯಣಕೃಪಾಪಾತ್ರಂ ಕೃಷ್ಣಾರ್ಯಗುರುಸೇವಕಮ್ | ಜ್ಞಾನವೈರಾಗ್ಯಸಂಪನ್ನಂ ಯೋಗೀನಾರಾಯಣಗುರುಂ ಭಜೇ || ಶ್ರೀ ಯೋಗಿ ನಾರಾಯಣಾಚಾರ್ಯರು ಕಲಿಯುಗ ಕಲ್ಪವೃಕ್ಷ ಕಾಮಧೇನು ಶ್ರೀರಾಘವೇಂದ್ರ ಗುರುಸಾರ್ವಭೌಮರ ವಿಶೇಷ ಕರುಣಾಸುಪಾತ್ರರು ಹಾಗೂ ಶ್ರೀ ಅಪ್ಪಾವರು ಸಾಕ್ಷಾತ್ ಶಿಷ್ಯರು. ಶ್ರೀಯೋಗಿ ನಾರಾಯಣಾಚಾರ್ಯರು ವಿದ್ಯಾಸಂಪನ್ನರಾದ ಶ್ರೀ ಉಪಾಧ್ಯಾಯ ರಾಮಚಾರ್ಯರಲ್ಲಿ ಸಕಲ ವೇದಾಂತ ಶಾಸ್ತ್ರವನ್ನು ಅಧ್ಯಯನ ಮಾಡಿದರು. ಶ್ರೀ ನಾರಾಯಣಾಚಾರ್ಯರು ಮೂಲತಃ ಗದುಗಿನವರು. ಆಚಾರ್ಯರು ಗದಗ್ ವೀರ ನಾರಾಯಣನ ಅಂತರಂಗ ಭಕ್ತರು. ತಮ್ಮ ಸ್ವರೂಪೊದ್ದಾರಕ ಗುರುಗಳ ಪ್ರಾಪ್ತಿಗಾಗಿ ನಿತ್ಯವೂ ಶ್ರೀ ನಾರಾಯಣಾಚಾರ್ಯರು ವೀರ ನಾರಾಯಣನ ಸೇವೆ ಮಾಡುತಿದ್ದರು. ಸ್ವರೂಪೋಧಾರಕ ಗುರುಗಳ ಪ್ರಾಪ್ತಿ ಆಚಾರ್ಯರ ನಿಷ್ಠೆಯ ಸೇವೆಗೆ ಮೆಚ್ಚಿದ ವೀರ ನಾರಾಯಣ ದೇವರು ಸ್ವಪ್ನದಲ್ಲಿ ಆಚಾರ್ಯರಿಗೆ ನಿಮ್ಮ ಸ್ವರೂಪೊದ್ದಾರಕರು ಅತಿ ಶೀಘ್ರದಲ್ಲಿ ನಿನಗೆ ಭೇಟಿ ಆಗುತ್ತಾರೆ ಅಂತ ಸೂಚನೆ ಕೊಡುತ್ತಾನೆ. ಶ್ರೀ ಅಪ್ಪಾವರು ಸಂಚಾರದ ಅನ್ವಯ ಗದುಗಿಗೆ ಬಂದಿರುತ್ತಾರೆ. ಅಲ್ಲಿ ಮಧ್ಯಾಹ್ನದ ಸಮಯಕೆ ಶ್ರೀ ವೀರ ನಾರಾಯಣನ ದರ್ಶನಕ್ಕೆ ಅಪ್ಪಾವರು ಬಂದರು , ಬಂದ ಸಮಯದಲ್ಲಿ ಅರ್ಚಕರು ದೇವಸ್ಥಾನ ಗರ್ಭಗುಡಿ ಬೀಗ ಹಾಕಿರುತ್ತಾರೆ. ದೇವಸ್ಥಾನದ ಪ್ರಾಂಗಣದಲ್ಲಿ ಅಪ್ಪಾವರು ವೀರ ನಾರಾಯಣನ ಪ್ರಾರ್ಥಿಸುತ್ತಾ ಸ್ವಾಮಿ ನಾನು ನಿನ್ನ ದರ್ಶನಕ್ಕಾಗಿ ಇಭರಾಮಪುರದಿಂದ ಬಂದಿದ್ದೇನೆ ಅಂತ ಪ್ರಾರ್ಥಿಸಿದಾಗ , ದೇವಸ್ಥಾನದ ಗರ್ಭಗುಡಿಯ ಬಾಗಿಲು ತಾನಾಗಿಯೇ ತೆರೆಯುತ್ತದೆ. ಇದೇ ಸಮಯದಲ್ಲಿ ಶ್ರೀ ಯೋಗಿ ನಾರಾಯಣಾಚಾರ್ಯರು ದೇವಸ್ಥಾನ ಪ್ರಾಂಗಣದಲ್ಲಿಯೇ ಇರುತ್ತಾರೆ. ಶ್ರೀ ಅಪ್ಪಾವರನ್ನು ಯಾರೋ ಯಾತ್ರಿಕರು ನಾರಾಯಣನ ದರ್ಶನಕ್ಕಾಗಿ ಬಂದಿದ್ದಾರೆ ಎಂದು ತಿಳಿದಿರುತ್ತಾರೆ ಆದರೆ ಅಲ್ಲಿ ನಡೆದಿದ್ದು ಬೇರೆ. ಅಪ್ಪಾವರ ಪ್ರಾರ್ಥನೆ ದೇವಸ್ಥಾನದ ಗರ್ಭಗುಡಿಯ ಬಾಗಿಲು ತಾನಾಗಿಯೇ ತೆರೆದುದನ್ನು ಕಂಡು ಆಚಾರ್ಯರು ಒಂದು ಕ್ಷಣ ಏನು ತೋಚದೆ ಬೆರಗಾಗುತ್ತಾರೆ . ಶ್ರೀ ಅಪ್ಪಾವರು ವೀರ ನಾರಾಯಣನ ಜೊತೆ ನೇರವಾಗಿ ಸಂದರ್ಶನ ಮಾಡುವುದನ್ನು ಕಂಡು ಸ್ವಪ್ನದಲ್ಲಿ ಸೂಚಿಸಿದ ಹಾಗೆ ತಮಗೆ ಯೋಗ್ಯವಾದ ಗುರುಗಳ ಪ್ರಾಪ್ತಿಯಾಯಿತು ಎಂದು ಶ್ರೀ ಯೋಗಿ ನಾರಾಯಣಾಚಾರ್ಯರು ಅಪ್ಪಾವರಲ್ಲಿ ಶಿಷ್ಯ ಸ್ವೀಕಾರಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. ಆಚಾರ್ಯರ ಪ್ರಾರ್ಥನೆಗೆ ಶ್ರೀ ಅಪ್ಪಾವರು ಸಂತುಷ್ಟರಾಗಿ ಅವರನ್ನು ತಮ್ಮ ಶಿಷ್ಯ ರನ್ನಾಗಿ ಸ್ವೀಕರಿಸುತ್ತಾರೆ. ರಾಯರ ಮೃತಿಕಾ ಬೃಂದಾವನ ಪ್ರತಿಷ್ಠಾಪನೆ: ಶಿಷ್ಯತ್ವ ಸ್ವೀಕಾರದ ಪ್ರತೀಕವಾಗಿ ನಮ್ಮ ಕುಲ ಗುರುಗಳಾದ ಮಂತ್ರಾಲಯ ಗುರುಸಾರ್ವಭೌಮರ ಬೃಂದಾವನ ಪ್ರತಿಷ್ಠಾಪಿಸಲು ಶ್ರೀ ಅಪ್ಪಾವರು ಇಚಿಸುತ್ತಾರೆ. ಅಪ್ಪಾವರ ಅಜ್ಞೆಯಂತೆ ಶ್ರೀ ಯೋಗಿ ನಾರಾಯಣಾಚಾರ್ಯರು ಬೃಂದಾವನ ಕೆತ್ತನೆ ಮಾಡುತ್ತಾರೆ. ಶ್ರೀ ಅಪ್ಪಾವರು ವೀರ ನಾರಾಯಣನ ಸನ್ನಿಧಾನದಲ್ಲಿಯೇ ರಾಯರ ಭವ್ಯ ಬೃಂದಾವನವನು ಪ್ರತಿಷ್ಠಾಪನೆ ಮಾಡುತ್ತಾರೆ. ಶಿಲ್ಪಕಲಾ ನಿಪುಣ : ಶ್ರೀ ಅಪ್ಪಾವರು ಹಾಗೂ ವೀರ ನಾರಾಯಣನ ಅನುಗ್ರಹದಿಂದ ಶ್ರೀ ಯೋಗಿ ನಾರಾಯಣಾಚಾರ್ಯರು ಶಿಲ್ಪಕಲೆಯ ಅನುಗ್ರಹ ಹೊಂದಿರುತ್ತಾರೆ. ವೀರ ನಾರಾಯಣನ ಸನ್ನಿಧಾನದಲ್ಲಿಯೇ ರಾಯರ ಬೃಂದಾವನ , ಅಪ್ಪಾವರ ಕಟ್ಟೆಯಲ್ಲಿ ಮಂಟಪದಲ್ಲಿ ಕೆತ್ತನೆಗಳು , ಮಂತ್ರಾಲಯದ ತುಂಗಾ ತಟದಲ್ಲಿ ರಾಯರು ಅಹ್ನಿಕ ಮಾಡುತಿದ್ದ ಸ್ಥಳ ಗುರುತಿಸಿ ಅಲ್ಲಿ ಅವತಾರತ್ರಯ ಪ್ರಾಣದೇವರು , ಅಪ್ಪಾವರ ಕಟ್ಟೆಯಲ್ಲಿ ಶಾಲಿಗ್ರಾಮ ಶಿಲೆಯಲ್ಲಿ ಚತುರ್ಭುಜ ವೇಣುಗೋಪಾಲ ಹಾಗು ಶ್ರೀ ಅಪ್ಪಾವರ ಭವ್ಯವಾದ ಮೂರ್ತಿಯು ಶ್ರೀ ಯೋಗಿ ನಾರಾಯಣಾಚಾರ್ಯರ ನೈಪುಣ್ಯತೆ ತೋರಿಸುತ್ತೆ. ಗುರುಗಳ ಅನುಗ್ರಹದಿಂದ ಯಾತ್ರೆ: ಶ್ರೀ ಅಪ್ಪಾವರು ಒಂದು ಬಾರಿ ದಕ್ಷಿಣ ಭಾರತದ ತೀರ್ಥ ಯಾತ್ರೆ ಮಾಡಲು ಇಚ್ಚಿಸುತ್ತಾರೆ. ಇದಕ್ಕಾಗಿಯೇ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪರಮ ಗುರುಗಳಾದ ಶ್ರೀ ವಿಜಯೀಂದ್ರತೀರ್ಥರ ದರ್ಶನ ಮಾಡಲು ನಿರ್ಧರಿಸುತ್ತಾರೆ. ಯಾತ್ರೆಯ ಬಗ್ಗೆ ಶ್ರೀ ಅಪ್ಪಾವರು ತಮ್ಮ ಶಿಷ್ಯರಾದ ಯೋಗಿ ನಾರಾಯಣಾಚಾರ್ಯರ ಹತ್ತಿರ ಬಗ್ಗೆ ಹೇಳಿಕೊಳ್ಳುತ್ತಾರೆ. ಶ್ರೀ ಯೋಗಿ ನಾರಾಯಣಾಚಾರ್ಯರು ಅಪ್ಪಾವರ ಮಾತಿನಂತೆಯೇ ಎಲ್ಲಾ ಸಿದ್ಧತೆಗಳನ್ನು ಮಾಡಿರುತ್ತಾರೆ. ದೂರದ ಕುಂಭಕೋಣಕೆ ತಲುಪಲು ಸುಮಾರು ವಾರದ ಸಮಯಬೇಕು. ವಾರಗಳೇ ಕಳೆದವು ಶ್ರೀ ವಿಜಯೀಂದ್ರ ತೀರ್ಥರ ಆರಾಧನೆ ಹತ್ತಿರವಾಗುತ್ತದೆ ಜೇಷ್ಟ ಮಾಸದ ಕೃಷ್ಣ ಪಕ್ಷ ಏಕಾದಶಿಯೂ ಕೂಡ ಬಂತು ಮರುದಿನವೇ ಶ್ರೀ ವಿಜಯೀಂದ್ರ ತೀರ್ಥರ ಆರಾಧನೆ ಆದರೂ ಶ್ರೀ ಅಪ್ಪಾವರು ಯಾತ್ರೆಗೆ ಯಾವಾಗ ಹೊರಡುವ ಬಗ್ಗೆ ಏನು ಸುಳಿವು ಕೊಡಲಿಲ್ಲ. ಏಕಾದಶಿಯ ರಾತ್ರಿ ಅಪ್ಪಾವರು ಶ್ರೀ ನಾರಾಯಣಾಚಾರ್ಯರಿಗೆ ಕರೆದು ನಾಳೆ ಶ್ರೀ ವಿಜಯೀಂದ್ರರ ಆರಾಧನೆ ದರ್ಶನಕ್ಕೆ ಹೊರಡಬೇಕು ಬೆಳಗ್ಗೆ ಬೇಗ ಎದ್ದು ಅಹ್ನಿಕಾದಿಗಳನ್ನು ಮುಗಿಸಲು ಸೂಚಿಸುತ್ತಾರೆ. ದರ್ಶನದ ಭಾಗ್ಯ ದೊರೆಯುತ್ತದೆ ಎನ್ನುವ ಖುಷಿಯಲ್ಲಿ ಇದ್ದ ಆಚಾರ್ಯರಿಗೆ ಇನ್ನೊಂದುಕಡೆ ದೂರದ ಕುಂಭಕೋಣಕೆ ಬೆಳಗಾಗುವುದರಲ್ಲಿ ಹೇಗೆ ಹೋಗಿ ತಲುಪಬೇಕೆಂಬ ಗೊಂದಲ ಮನಸ್ಸಿನಲ್ಲಿ ಮೂಡತ್ತದೆ. ಆದರೂ ಶ್ರೀಅಪ್ಪಾವರ ಆಜ್ಞೆ ಎಂದು ಭಾವಿಸಿ ಬೆಳಗ್ಗೆ ಬೇಗ ಎದ್ದು ಅಹ್ನೀಕಾದಿಗಳನ್ನು ಮುಗಿಸಿದ ಆಚಾರ್ಯರು ಶ್ರೀ ಅಪ್ಪಾವರ ಬಳಿ ಬಂದು ತಮ್ಮ ಮನದಲ್ಲಿನ ಗೊಂದಲಗಳನ್ನು ಹೇಳಿಕೊಳ್ಳುತ್ತಾರೆ . ಅಪ್ಪಾವರು ಆಚಾರ್ಯರ ಗೊಂದಲಕ್ಕೆ ನಗುತ್ತಾ ನನ್ನ ಕೈ ಹಿಡಿಯಿರಿ ಎನ್ನುತ್ತಾರೆ. ಶ್ರೀ ಅಪ್ಪಾವರ ಕೈ ಹಿಡಿದ ಶ್ರೀ ಯೋಗಿ ನಾರಾಯಣಾಚಾರ್ಯರಿಗೆ ಕ್ಷಣಮಾತ್ರದಲ್ಲಿ ಕುಂಭಕೋಣಕೆ ತಲುಪಿಸಿ ಚತುರಧಿಕ ಶತಗ್ರಂಥರತ್ನಗಳ ಒಡೆಯರಾದ ಶ್ರೀ ವಿಜಯೀಂದ್ರ ತೀರ್ಥರ ದರ್ಶನವನ್ನು ಮಾಡಿಸುತ್ತಾರೆ. ಶ್ರೀ ಅಪ್ಪಾವರ ಸ್ತೋತ್ರ : ಶ್ರೀ ಆಚಾರ್ಯರು ತಮ್ಮ ಗುರುಗಳಾದ ಶ್ರೀ ಅಪ್ಪಾವರ ಮಹಿಮೆ ಸಾರುವ ಶ್ರೀ ಇಭಾರಾಮಪುರ ಶ್ರೀ ಕೃಷ್ಣಾರ್ಯ ಸ್ತೋತ್ರ ರಚಿಸಿದ. ತಾವು ಪ್ರತೀಕ್ಷ್ಯವಾಗಿ ಕಂಡ ಹಾಗು ಶ್ರುತಿ ಸ್ಮೃತಿ ಸಮ್ಮತಿಸುವ ಮಹಿಮೆಗಳು ಮತ್ತು ಆ ಮಹಿಗಳು ಯಾವ ಯಾವ ಪುರಾಣಗಳಲ್ಲಿ ಉಲೇಖವಾಗಿದೇ ಎಂದು ಸ್ತೋತ್ರಮಾಡಿದರೆ. ಅಪರೋಕ್ಷ ಜ್ಞಾನ: ಸುರಪುರದ ಆನಂದ ದಾಸರು ತಮ್ಮ ಸಮಕಾಲೀನ ಎಲ್ಲಾ ಅಪರೋಕ್ಷ ಜ್ಞಾನಗಳನು ಗುರುತಿಸಿ ರಚಿಸಿದ ಕೀರ್ತನೆ ಶ್ರೀ ರಾಘವೇಂದ್ರರಾಯರ ಪಾದಾಂಬುಜ । ದಾರಾಧಕರ ಕೊಂಡಾಡಿರೋ ।। ಪಲ್ಲವಿ ।। ಹಲವು ಸಜ್ಜನರೊಳು ತಿಳಿಸಿ ಕೊಳ್ಳದಲಿಪ್ಪ । ಬಲವಂತ ಯೋಗಿ ನಾರಾಯಣಾರ್ಯರ ।। ಮೇಲೆಕಂಡ ಕೀರ್ತನೆಯಿಂದ ಶ್ರೀ ಯೋಗಿ ನಾರಾಯಣಾಚಾರ್ಯರು ಶ್ರೀರಾಘವೇಂದ್ರ ಗುರುಸಾರ್ವಭೌಮರ, ಶ್ರೀ ಅಪ್ಪಾವರ ಹಾಗೂ ತಮ್ಮ ಇಷ್ಟ ದೈವ ಶ್ರೀ ವೀರ ನಾರಾಯಣನ ಅನುಗ್ರಹಕೆ ಪಾತ್ರರಾಗಿ ಅಪರೋಕ್ಷ ಜ್ಞಾನ ಹೊಂದಿದ್ದಾರೆ ಎಂದು ತಿಳಿಯಬಹುದು. ಸಮಕಾಲೀನ ಅಪರೋಕ್ಷ ಜ್ಞಾನಿಗಳ ಜೊತೆ ಒಡನಾಟ : ಶ್ರೀ ಆಚಾರ್ಯರು ತಮ್ಮ ಸಮಕಾಲೀನ ಅಪರೋಕ್ಷ ಜ್ಞಾನಿಗಳಾದ ಸುರಪುರದ ಆನಂದ ದಾಸರು , ಮೊದಲಕಲ್ಲು ಶೇಷದಾಸರು , ವಿಜಯರಾಮಚಂದ್ರ ವಿಠಲರು , ಸುಜ್ಞಾನೇಂದ್ರ ತೀರ್ಥರು , ಗಣೇಶಾಚಾರ್ಯರು , ಯಳಮೇಲಿ ಹಯಗ್ರೀವಾಚಾರ್ಯರು , ಅಂತಃ ಜ್ಞಾನಿಗಳ ಸಮ್ಮುಹರೋಡನೆ ವಿಶೇಷ ಒಡನಾಟ ಹೊಂದಿದವರು ಮತ್ತು ಅವರ ಜೊತೆ ಅನೇಕ ಶಾಸ್ತದವಿಚಾರ ಚರ್ಚೆಮಾಡುತ್ತಿದರು. ಶ್ರವಣ ಶುದ್ಧ ಪಂಚಮಿ ಶ್ರೀಲಯ ಚಿಂತನಾ ಪೂರ್ವಕವಾಗಿ ಹರಿಧ್ಯಾನ ಮಾಡುತ್ತಾ ತಮ್ಮ ಸ್ವರೂಪೋಧಾರ ಅಪ್ಪಾವರ ಸನ್ನಿಧಾನ ಹತ್ತರ ಅದೃಶ್ಯರಾದರು. ಶ್ರೀ ಇಭರಾಮಪುರಾಧೀಶ ವಿಷ್ಣುತೀರ್ಥಚಾರ್ಯ ಇಭರಾಮಪುರ
****************

|| ಶ್ರೀ ಗುರುರಾಜೋ ವಿಜಯತೇ || || ಶ್ರೀ ಇಭರಾಮಪುರಾಧೀಶಾಯ ನಮಃ || ಗುರು ಮಹಿಮೆ: ಮುತ್ತಿನಂತಹ ಮಗ ದಾಸೀಕೃತಾಶೇಷಜನಂ ದಾಸವರ್ಯಾಂಘ್ರಿಮಾನಸಂ | ವಶೀಕೃತಗುರುಂವಂದೇ ವಾಗ್ಙ್ಮನಃಸ್ವಾಮಿಶರ್ಮಕಂ || ಶ್ರೀ ವೆಂಕಟಗಿರಿ ಆಚಾರ್ಯರು ಹಾಗೆ ಶ್ರೀ ಇಭರಾಮಪುರದ ಅಪ್ಪಾವರ ಸ್ನೇಹಿತರು. ಒಬ್ಬರಿಗೊಬ್ಬರು ಅಣ್ಣ ತಮಣ್ಣ ಸಂಬಂಧ ಹಾಗೆ ಇತ್ತು. ಶ್ರೀ ವೆಂಕಟಗಿರಿ ಆಚಾರ್ಯರು ಒಂದು ಸಂದರ್ಭದಲ್ಲಿ ಇಭರಾಮಪುರಕೆ ಬಂದಿರುತ್ತಾರೆ. ಬಂದ ಸಂದರ್ಭದಲ್ಲಿ ಅಪ್ಪಾವರು ಪ್ರಾಣದೇವರ ಪೂಜೆಯಲ್ಲಿ ನಿರತರಾಗಿರುತ್ತಾರೆ, ಆಚಾರ್ಯರು ನೊಂದ ಮನಸ್ಸಿನಿಂದ ಅಪ್ಪಾವರಲ್ಲಿ ಪ್ರಾರ್ಥನೆ ಮಾಡುತ್ತಾರೆ ,ಅಣ್ಣಾ ಎಲ್ಲರಿಗೂ ಅನುಗ್ರಹ ಮಾಡ್ತಿಯ ನನಗೆ ಸಂತಾನ ಇಲ್ಲ ಅಂತ ಬೇಡಿಕೊಳ್ಳುತ್ತಾರೆ. ಅಪ್ಪಾವರು ತಮ್ಮ ಉಪಾಸ್ಯಮೂರ್ತಿಯಾದ ಪಂಚಮುಖಿ ಪ್ರಾಣದೇವರಿಗೆ ಅಭಿಷೆಕ ಮಾಡಿ ಮುತ್ತು ಕೊಡುತ್ತಾ "ವೆಂಕಟಗಿರಿ ನಿನಗೆ ಮುತ್ತಿನಂತಹ ಮಗ ಹುಟ್ಟುತ್ತಾನೆ ಎಂದು ಆಶೀರ್ವಾದ ಮಾಡುತ್ತಾರೆ. ಅಪ್ಪಾವರು ಆಶೀರ್ವಾದದಿಂದ ಗಂಡು ಮಗ ಆಗುತ್ತೆ. ಅವರೇ ಮುಂದೆ ಸ್ವಾಮಿರಾಯ ಆಚಾರ್ಯರಿಂದ ಶ್ರೀ ಗುರುಜಗನ್ನಾಥ ದಾಸರು ೧೮೩೭-೧೯೧೮] ಅಂತ ಜಗನ್ಮಾನ್ಯರಾಗುತ್ತಾರೆ. ಸ್ವಪ್ನದಲ್ಲಿ ಪಾಠ ಶ್ರೀ ಸ್ವಾಮಿರಾಯ (ಶ್ರೀ ಗುರು ಜಗನ್ನಾಥದಾಸರು) ಶ್ರೀಹರಿಯ ಕೃಪರಿಗೆ ಗುರುವೇ ಕಾರಣ ಅತಿರೋಹಿತ ವಿಮಲವಿಜ್ಞಾನಿಗಳಾದ ವಾಯು ದೇವರ ಮೊರೆ ಹೋಗಬೇಕೆಂದು ನಿಶ್ಚಯಸಿದರು. ಸ್ವಗ್ರಾಮ ಕೌತಾಲಂ ಹತ್ತಿರವಾದ ಬುಡಮಲ ದೊಡ್ಡಿ ಯಂಬ ಪವಿತ್ರ ಕ್ಷೇತ್ರ ಸಾಧನೆಗೆ ಯೋಗ್ಯವಾದ ಸ್ಥಳವೆಂದು ನಿರ್ಧರಿಸಿ ಯಾರಿಗೂ ಹೇಳದೆ ಪ್ರಯಾಣ ಬೆರಿಸುತ್ತಾರೆ. ಆ ಕ್ಷೇತ್ರದಲ್ಲಿಯ ವಾಯು ದೇವರ ಸೇವೆ ಆರಂಭಿಸುತ್ತಾರೆ. ಶ್ರೀ ಸ್ವಾಮಿರಾಯರ ಸೇವೆ ಸ್ವೀಕರಿಸಿದ ಮುಖ್ಯಪ್ರಾಣದೇವರು ಸ್ವಪ್ನದಲ್ಲಿ ನಾಲಿಗೆಯಮೇಲೆ ಬೀಜಕ್ಷರ ಬರೆದು ಸ್ವಗ್ರಾಮಕೇ ತೆರೆಳು ನಿನಗೆ ಉಪದೇಶ ಆಗುತ್ತೆ ಎಂದು ಅನುಗ್ರಹಿಸುತ್ತಾರೆ. ವಾಯುದೇವರ ಆಜ್ಞೆಯಂತೆ ಸ್ವಗ್ರಾಮಗೆ ತೆರುಳುತಾರೆ. ರೂಡಿನಾಮ ಸಂವತ್ಸರ ಶ್ರಾವಣ ಶುದ್ಧ ವರಮಹಾಲಕ್ಷ್ಮಿ ದಿನದಂದು ಸ್ವಪ್ನದಲ್ಲಿ ಅಪರೋಕ್ಷ ಜ್ಞಾನಿಗಳಾದ ಶ್ರೀ ಇಭರಾಮಪುರ ಅಪ್ಪಾವರ ಸಮಕ್ಷಮದಲ್ಲಿ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಗುರು ಉಪದೇಶ ಕೊಡುತ್ತಾರೆ. ರಾಯರು ಹಾಗೂ ಅಪ್ಪಾವರ ವಿಶೇಷ ಅನುಗ್ರಹದಿಂದ ಮಹಾಜ್ಞಾನಿಗಳಾದರು. ದಾಸರು ಸ್ವತಃ ಅವರೇ ತಮ್ಮ ಕನ್ನಡದ ರಾಘವೇಂದ್ರವಿಜಯದ ಆದಿಯಲ್ಲಿ ಈ ವಿಷಯವನ್ನು ಕೆಳಕಂಡಂತೆ ಸ್ಪಷ್ಟಪಡಿಸಿರುವರು: ವೇದ ಶಾಸ್ತ್ರ ಪುರಾಣ ಕಥೆಗಳನೋದಿ ಕೇಳದ್ವನಲ್ಲ ತತ್ವದ ಹಾದಿ ತಿಳಿದವನಲ್ಲ ಬುಧಜನಸಂಗ ಮೊದಲಿಲ್ಲ ಮೋದತೀರ್ಥಪದಾಬ್ಜ ಮಧುಕರರಾದ ಶ್ರೀ ಗುರುರಾಘವೇಂದ್ರರ ಪಾದಪದ್ಮ ಪರಾಗಲೇಶದ ಸ್ಪರ್ಶ ಮಾತ್ರದಲಿ || ಕೃತಿಯ ಮಾಡುವ ಶಕುತಿ ಪುಟ್ಟಿತು ಮತಿಯ ಮಾಂದ್ಯವು ತಾನೆ ಪೋಯಿತು ಯತುನವಿಲ್ಲದೆ ಸಕಲ ವೇದಗಳರ್ಥ ತಿಳಿದಿಹದು ಪತಿತ ಪಾವನರಾದ ಗುರುಗಳ ಆತುಳ ಮಹಿಮೆಯವನಾದ ಬಲ್ಲನು ಮತಿಮತಾಂವರ ಬುಧರಿಗಸದಳ ನರರ ಪಾಡೇನು|| ಶಿಷ್ಯ ಸಂಪತ್ತು : ಶ್ರೀಗುರು ಜಗನ್ನಾಥದಾಸರಿಂದ ಎಂಟು ಜನ ಅಂಕಿತ ಪಡೆದು ದೀಕ್ಷೆಯನ್ನು ಹೊಂದಿದರು.ಅವರು: ವರದ ವಿಠಲರು ವರದೇಶ ವಿಠಲರು ಆನಂದ ವಿಠಲರು ವರದೇಂದ್ರ ವಿಠಲರು ಸುಂದರ ವಿಠಲರು ಮುದ್ದು ಗುರುಜಗನ್ನಾಥವಿಠಲರು ಜಗದೀಶ ವಿಠಲರು ಶ್ರೀನಿವಾಸ ವಿಠಲರು ದಾಸಾರ್ಯರ ಸಾಹಿತ್ಯ ಸಂಪತ್ತು: ೧.ಸಂಸ್ಕೃತ ಗ್ರಂಥಗಳು. ಬ್ರಹ್ಮಸೂತ್ರ ಭಾಷ್ಯ ತತ್ವಪ್ರದೀಪಿಕಾ. ಬ್ರಹ್ಮಸೂತ್ರ ಭಾಷ್ಯಾರ್ಥ ಸಂಗ್ರಹ. ಅಧಿಕರಣಸಾರ ಸಂಗ್ರಹ. ಬ್ರಹ್ಮಸೂತ್ರಪ್ರಕಾಶಿಕಾ ಪರಾಪರತತ್ವ ದೀಪಿಕಾ. ದಶೋಪನಿಷತ್ ಖಂಡಾರ್ಥವಿವರಣ. ಭಾಗವತ ವಿಜಯಧ್ವಜೀಯಾನುವಾದ.(ಕನ್ನಡ) ಹರಿಕಥಾಮೃತಸಾರ ಚಂದ್ರಿಕಾ. ಹರಿಕಥಾಮೃತಸಾರ ಪರಿಮಳ. (ಕನ್ನಡ) ಜಯತೀರ್ಥ ಸ್ತೋತ್ರ ವ್ಯಾಖ್ಯಾನ. ಸತ್ತತ್ತ್ವ ರತ್ನಮಾಲಾ ವ್ಯಾಖ್ಯಾನ. ಮನೋರಮಾ.(ಜೈಮಿನಿ ಭಾರತ ವ್ಯಾಖ್ಯಾನ). ಪ್ರಾಣಾಗ್ನಿ ಹೋತ್ರ ಕಲ್ಪ. ಪ್ರಾತಃಕಾಲಾನು ಚಿಂತನ. ಸ್ನಾನ ಸಂಕಲ್ಪ. ೨.ಸಂಸ್ಕ್ರತ ಸ್ತೋತ್ರಗಳು. ಶ್ರೀವೆಂಕಟೇಶ ಸ್ತವರಾಜ. ಲಕ್ಷ್ಮೀ ಸ್ತವರಾಜ. ಶ್ರೀರಾಘವೇಂದ್ರ ಮಹಾತ್ಮ್ಯೆ. ಶ್ರೀರಾಘವೇಂದ್ರ ಸಹಸ್ರನಾಮಾವಳಿ ಸ್ತೋತ್ರ. ಶ್ರೀರಾಘವೇಂದ್ರ ಆಪಾದಮೌಳಿ ಸ್ತೋತ್ರ. ಶ್ರೀರಾಘವೇಂದ್ರಾಷ್ಟಕ. ಶ್ರೀರಾಘವೇಂದ್ರ ಅಶ್ವಧಾಟಿ ಸ್ತೋತ್ರ. ಶ್ರೀರಾಘವೇಂದ್ರ ಪ್ರಾರ್ಥನಾ. ಶ್ರೀರಾಘವೇಂದ್ರ ಕರಾವಲಂಬನ ಸ್ತೋತ್ರ. ಶ್ರೀರಾಘವೇಂದ್ರ ಸರ್ವಕರ್ಮಸಮರ್ಪಣ ಸ್ತೋತ್ರ. ಶ್ರೀವರದೇಂದ್ರ ಸ್ತೋತ್ರ. ಶ್ರೀವರದೇಂದ್ರ ಕರಾವಲಂಬನ ಸ್ತೋತ್ರ. ಶ್ರೀಜಗನ್ನಾಥದಾಸಾರ್ಯ ಸ್ತೋತ್ರ. ಶ್ರೀಜಗನ್ನಾಥದಾಸಾರ್ಯ ಕರಾವಲಂಬನ ಸ್ತೋತ್ರ. ೩. ಕನ್ನಡ ಕೃತಿಗಳು ಶ್ರೀವೆಂಕಟೇಶ ಸ್ತವರಾಜ. ಶ್ರೀಲಕ್ಷ್ಮೀ ಹೃದಯ. ಶ್ರೀ ಪ್ರಹ್ಲಾದ ಚರಿತ್ರೆ. ಶ್ರೀರಾಘವೇಂದ್ರ ವಿಜಯ. ೨೦೦ಕು ಹೆಚ್ಚು ಕೀರ್ತನೆ, ಸುಳಾದಿಗಳು, ಉಗಾಭೋಗಗಳು ರಚಿಸಿ ಶ್ರೀ ಗುರು ಜಗನ್ನಾಥದಾಸರು ದಾಸಸಾಹಿತ್ಯಕೆ ಅಪಾರ ಕೊಡುಗೆ ನೀಡಿದರೆ. ಶ್ರೀ ಇಭರಾಮಪುರಾಧೀಶ ವಿಷ್ಣುತೀರ್ಥಾಚಾರ್ ಇಭರಾಮಪುರ https://drive.google.com/file/d/1cc90bCWYiVCZp4Q3hRWo3AOv-vmZOfGb/view?usp=drivesdk
*****


|| ಶ್ರೀ ಇಭರಾಮಪುರಾಧೀಶಯ ನಮಃ || ಶ್ರೀ ಅಪ್ಪಾವರ ಚರಿತ್ರೆ : ಕಿವಿ ಓಲೆ ಸಾಲಿಗ್ರಾಮವಾಗಿ ಪರಿವರ್ತನೆಯಾದದು ಶ್ರೀ ಅಪ್ಪಾವರ ಕರುಣಾಸುಪಾತ್ರಾರಾದ ಶ್ರೀ ಇಂದಿರೇಶ ದಾಸರು ಶ್ರೀ ಅಪ್ಪಾವರ ಮಹಿಮೆಗಳನ್ನು ಸಾರುವ ಗುರುಕಥಾಮೃತಸಾರವೆಂಬ ಸುಂದರವಾದ ಷಟ್ಪದಿಯಲ್ಲಿ ಅಪ್ಪಾವರ ಮಹಿಮೆಗಳನ್ನು ಸಂಗ್ರಹಿಸಿದ್ದಾರೆ. ಗುರುಕಥಾಮೃತಸಾರ ಮಹಿಮಾ ಸಂಧಿ , ಶೃಂಗಾರ-ವರ್ಣನಾ ಸಂಧಿ, ಭಕ್ತಿಸಂಧಿ ಎಂಬುದಾಗಿ ಮೂರು ವಿಭಾಗದಲ್ಲಿ ವಿಂಗಡಿಸಿ ಅಪ್ಪಾವರ ಚರಿತ್ರೆಯನ್ನು ಹೇಳಿದ್ದಾರೆ. ಕಲಿಮಲಾಪಹರೆನಿಪ ಗುರುಗಳ ಪೊಳೆವ ಗಾತ್ರದ ಮುರುವು ಪೂಜಿಸೆ ಕೆಲವು ದಿನ ಪೋದ ಬಲಿಕದು ಥಳಥಳಿಸುತಲೀ | ಚೆಲುವ ಶಾಲಿಗ್ರಾಮವೆನಿಸಿತು ತಿಳಿಯದವರ ಉತ್ಕೃಷ್ಟ ಮಹಿಮೆಯ ಜಲರುಹೇಕ್ಷಣ ತಾನೆ ಬಲ್ಲನು ಇಳೆಯೊಳಚ್ಚರಿಯ || - ಗುರುಕಥಾಮೃತಸಾರ , ಮಹಿಮಾಸಂಧಿ ಒಂದು ಬಾರಿ ಶ್ರೀ ಅಪ್ಪಾವರ ಸಂದರ್ಶನಕೆ ಬಂದ ಭಕ್ತರೊಬ್ಬರು ಅವರಲ್ಲಿ ಶರಣಾಗಿ ತಮ್ಮ ತಾಪತ್ರಯವನ್ನು ಹೇಳಿಕೊಳುತ್ತಾರೆ. ಬಂದ ಆ ಭಕ್ತನಿಗೆ ಅಭಯ ನೀಡಿ ನಿಮಗೆ ಮುಂದೆ ಶ್ರೀ ಮುಖ್ಯಪ್ರಾಣದೇವರ ವಿಶೇಷ ಅನುಗ್ರಹವಾಗುತ್ತದೆ ಎಂದು ಮಂತ್ರಾಕ್ಷತೆಯನ್ನು ಕೂಟ್ಟು ಅನುಗ್ರಹಿಸುತ್ತಾರೆ. ಆ ವ್ಯಕ್ತಿ ಹೊರಡುವಾಗ ಅವನ ಅಚಲವಾದ ಭಕ್ತಿ , ಶ್ರದ್ಧೆಗೆ ಮೆಚ್ಚಿ ಅಪ್ಪಾವರು ತಾವು ಧರಿಸಿದ ವಜ್ರದ ಓಲೆಯನ್ನು ಕೊಡುತ್ತಾರೆ. ಕರುಣಾ ಸಮುದ್ರರಾದ ಅಪ್ಪಾವರ ಅನುಗ್ರಹದಿಂದ ಬಂದ ಆ ಓಲೆಯನ್ನು ಆ ವ್ಯಕ್ತಿ ಧರಿಸದೆ ಅದನ್ನು ನಿತ್ಯದಲ್ಲಿ ಪೂಜಿಸುತ್ತಾನೆ. ಕೆಲವು ದಿನಗಳ ನಂತರ ಆ ಓಲೆಯು ಸಾಲಿಗ್ರಾಮವಾಗಿ ಪರಿವರ್ತನೆಯಾಗುತ್ತದೆ. ಈ ಮಹಿಮೆಯನ್ನು ಇಂದಿರೇಶ ದಾಸರಾಯರು ಗುರುಕಥಾಮೃತಸಾರ , ಮಹಿಮಾಸಂಧಿಯಲ್ಲಿ ವರ್ಣಿಸಿದ್ದಾರೆ. ಹೀಗೆ ಅಪರೋಕ್ಷ ಜ್ಞಾನಿಗಳು ಧರಿಸುವ , ಬಳಸುವ ಪ್ರತಿಯೊಂದು ವಸ್ತುಗಳಲ್ಲಿ ವಿಶೇಷವಾಗಿ ಭಗವಂತ ಸನ್ನಿಧಾನವಿರುತ್ತದೆ ಎಂದು ಈ ಮಹಿಮೆಯಲ್ಲಿ ನಾವು ನೋಡಬಹುದು. ಶ್ರೀ ಇಭರಾಮಪುರೋಪಾಖ್ಯಾ ಕೃಷ್ಣಾರ್ಯ ಮಹಿಮಾಂ ಭುದೇಃ | ಏಕಸ್ಯಾಲ್ಪ ತರಂಗಸ್ಯ ವರ್ಣನಂ ಸಮುದೀರಿತಮ್ || ಅಪರೋಕ್ಷ ಜ್ಞಾನಿಗಳಾದ ಶ್ರೀ ಮದ್ ಅಪ್ಪಾವರ ಮಹಿಮೆಯು ಅಪಾರ. ಅವರ ಮಹಿಮೆಗಳು ನಮ್ಮ ಊಹೆಗೂ ಮೀರಿದ್ದು , ಅವರ ಸ್ಮರಣೆಯಿಂದ ಸಕಲ ದುರಿತಗಳು ಪರಿಹಾರವಾಗಿ ನಮಗೆ ಸುಜ್ಞಾನದ ಮಾರ್ಗ ದೊರೆಯುತ್ತದೆ. ಅವರು ತೋರಿಸಿದ ಮಹಿಮೆಗಳು ಸಮುದ್ರದ ಆಗಾದ ಅಲೆಗಳಲ್ಲಿ ಒಂದು ಚಿಕ್ಕದಾದ ಅಲೆಯಂತೆ ಯಥಾವತ್ತಾಗಿ ಅವರ ಅನುಗ್ರಹದಿಂದ ಹೇಳುತ್ತಿದ್ದೇನೆ ಎಂದು ಶ್ರೀ ಯೋಗಿ ನಾರಾಯಣಾಚಾರ್ಯರು ಅಪ್ಪಾವರ ಮಹಿಮಾ ಸ್ತೋತ್ರದಲ್ಲಿ ಕೊಂಡಾಡಿದ್ದಾರೆ. ಶ್ರೀ ಇಭರಾಮಪುರಾಧೀಶ ವಿಷ್ಣುತೀರ್ಥಾಚಾರ್ಯ ಇಭರಾಮಪುರ https://drive.google.com/file/d/12SUZ3-Wgt5hIEkNZn3XHB8VQAjtXmF98/view?usp=drivesdk
****

by Sri Nagaraju acharya Haveri

 ಶ್ರೀ ಅಪ್ಪಾವರು - 2 "

" ಅಪ್ರತಿಮ ಪ್ರತಿಭಾ ಸಂಪನ್ನರು "

ಲೌಕಿಕ ವಿದ್ಯೆಯೊಂದಿಗೆ ಶ್ರುತಿ - ಸ್ಮೃತಿ - ಪುರಾಣ - ಇತಿಹಾಸಗಳಲ್ಲಿ ಶ್ರೀ ಅಪ್ಪಾವರಿಗೆ ಅಪೂರ್ವವಾದ ಪ್ರತಿಭೆಯಿತ್ತು. 

ಶ್ರೀಮದಾನಂದತೀರ್ಥರ ಸಿದ್ಧಾಂತವನ್ನು ಮಂಡಿಸುತ್ತಿದ್ದ ರೀತಿಯೇ ಒಂದು ಸೊಬಗು. 

ಗಂಗಾ ಪ್ರವಾಹದಂತೆ ಸಜ್ಜನರ ಮನಸ್ಸನ್ನು ನಿರ್ಮಲಗೊಳಿಸುತ್ತಿದ್ದ ಅವರ ಮಾತುಗಳನ್ನು ಕೇಳುವುದೇ ಆನಂದ. 

ಅವರ ಬೋಧೆ ಸರಳ ಸುಂದರವಾದ ನುಡಿಕಟ್ಟುಗಳಿಂದ ಕೂಡಿರುತ್ತಿತ್ತಲ್ಲದೇ ಶ್ರೀ ಪರಮಾತ್ಮನಲ್ಲಿ ಮಹಾತ್ಮ್ಯಾ ಜ್ಞಾನ ಪೂರ್ವಕವಾದ ಸದೃಢ ಭಕ್ತಿಯನ್ನು ಉದ್ದೀಪನಗೊಳಿಸುತ್ತಿತ್ತು. 

ಪರವಾದಿಗಳು ಎಂಥಹಾ ಪಂಡಿತರೇ ಆಗಿರಲಿ ಅವರನ್ನು ಕ್ಷಣ ಮಾತ್ರದಲ್ಲಿ ನಿರುತ್ತರಗೊಳಿಸುವ ಅಪೂರ್ವವಾದ ವಾಕ್ಚಾತುರ್ಯ ಶ್ರೀ ಅಪ್ಪಾವರಿಗೆ ಸಿದ್ಧಿಸಿತ್ತು!

ಕುಲ ಗುರುಗಳು : ಶ್ರೀ ರಾಘವೇಂದ್ರತೀರ್ಥರು

" ಶ್ರೀ ರಾಯರೊಂದಿಗೆ ಶ್ರೀ ಅಪ್ಪಾವರ ಬಾಂಧವ್ಯ "

ಶ್ರೀ ಅಪ್ಪಾವರಿಗೆ ಶ್ರೀ ಮಂತ್ರಾಲಯ ಪ್ರಭುಗಳನ್ನು ಕಂಡರೆ ಅಪರಿಮಿತವಾದ ಭಕ್ತಿ, ಗೌರವ. 

ಶ್ರೀ ರಾಯರೂಶ್ರೀ ಅಪ್ಪಾವರನ್ನು ಕಂಡರೆ ಅತ್ಯಂತ ಅಂತಃಕರಣ - ಪ್ರೀತಿ - ಮಾತೃವಾತ್ಸಲ್ಯ ತೋರುತ್ತಿದ್ದರು. 

ಇವರಿಬ್ಬರ ಸಂಬಂಧ ಹಸು - ಕರುವಿನ ಸಂಬಂಧ. 

ಶ್ರೀ ರಾಯರೂ ಶ್ರೀ ಅಪ್ಪಾವರ ವಿಷಯದಲ್ಲಿ ಅತ್ಯಂತ ಪ್ರಸನ್ನರಾಗಿದ್ದರು.

ಶ್ರೀ ಅಪ್ಪಾವರು ಪ್ರತಿದಿನ ಇಭರಾಮಪುರದಿಂದ ಮಂತ್ರಾಲಯಕ್ಕೆ ಶ್ರೀ ರಾಯರ ದರ್ಶನಕ್ಕೆ ಬಂದು ಹೋಗುತ್ತಿದ್ದರು. 

ಕಾಲಾಂತರದಲ್ಲಿ ಶ್ರೀ ರಾಯರ ದರ್ಶನಕ್ಕಾಗಿ ಮಂತ್ರಾಲಯದಲ್ಲೇ ನೆಲೆಸಿದರು. 

ಇವರಿಬ್ಬರ ಸಂಬಂಧ ಹೇಗಿತ್ತೆಂದರೆ..

ಶ್ರೀ ರಾಯರು ನಡೆಸುವ ಸಕಲ ವ್ಯಾಪಾರವೂ ಶ್ರೀ ಅಪ್ಪಾರವರಿಗೆ ಮೊದಲೇ ತಿಳಿದಿರುತ್ತಿತ್ತು.

ಶ್ರೀ ರಾಘವೇಂದ್ರ ಚಿತ್ತಜ್ಞ೦ 

ಸಾರಮಾತ್ರ ವದಾವದಂ ।

ದೂರೀಕೃತ ದುರಾಚಾರಂ 

ಕೃಷ್ಣಾಚಾರ್ಯ ಗುರು೦ಭಜೇ ।।

ಅಗಮ್ಯ ಮಹಿಮರೆಂದು ಜಗತ್ಪ್ರಸಿದ್ಧರಾದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಮಹಿಮೆಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳುವ ಸಾಮರ್ಥ್ಯ " ಶ್ರೀ ರಾಘವೇಂದ್ರ ಚಿತ್ತಜ್ಞ೦ " ಎಂದು ಹೆಸರು ಪಡೆದ ಶ್ರೀ ಅಪ್ಪಾವರು ಋಜುಗಳೆಂದು ಸ್ಪಷ್ಟವಾಗುತ್ತದೆ.

" ಭವಿಷ್ಯವಾಣಿ "

ಶ್ರೀ ಕ್ಷೇತ್ರ ಮಂತ್ರಾಲಯದಲ್ಲಿರುವ ವಿದ್ವಾನ್ ಶ್ರೀ ಗಣೇಶಾಚಾರ್ಯರಿಗೂ ಶ್ರೀ ಅಪ್ಪಾವರಿಗೂ ಒಳ್ಳೆಯ ಸ್ನೇಹ ಸಂಬಂಧ. 

ಶ್ರೀ ಗಣೇಶಾಚಾರ್ಯರು ಪ್ರಕಾಂಡ ಪಂಡಿತರೂ - ವಾಗ್ಮಿಗಳೂ -  ಸದ್ಗುಣ ಸಂಪನ್ನರೂ - ವಿದ್ಯೆಗೆ ತಕ್ಕ ವಿನಯ. 

ಇವರಿಗೆ ಶ್ರೀ ಅಪ್ಪಾವರ ಮೇಲೆ ಅತ್ಯಂತ ಗೌರವ. ಅವರನ್ನು ನೋಡಿದಾಗಲೆಲ್ಲಾ ದೀರ್ಘದಂಡಪ್ರಣಾಮಗಳನ್ನರ್ಪಿಸುತ್ತಿದ್ದರು.

ಶ್ರೀ ಸುಜ್ಞಾನೇಂದ್ರತೀರ್ಥರು ಶ್ರೀ ರಾಯರ ಮಠದ ಪೀಠಾಧಿಪತಿಗಳು. 

ಪೀಠಕ್ಕೆ ಉತ್ತರಾಧಿಕಾರಿಗಳನ್ನು ಆರಿಸುವ ವಿಚಾರ ನಂಜನಗೂಡಿನಲ್ಲಿ ನಡೆದಿತ್ತು. 

ಅದೇ ಸಂದರ್ಭದಲ್ಲಿ ಶ್ರೀ ಅಪ್ಪಾವರು ಮಂತ್ರಾಲಯಕ್ಕೆ ಬಂದರು.

ಶ್ರೀ ಗಣೇಶಾಚಾರ್ಯರು ಕೂಡಲೇ ಗೌರವಾದರಗಳಿಂದ ಶ್ರೀ ಅಪ್ಪಾವರಿಗೆ ದೀರ್ಘ ದಂಡಪ್ರಣಾಮಗಳನ್ನು ಮಾಡಿದರು. 

ಆಗ ಅಪ್ಪಾವರು ನಗುತ್ತಾ...

" ಗಣೇಶಾಚಾರ್ಯರೇ ಇಂದು ನೀವು ನಮಗೆ ನಮಸ್ಕಾರ ಮಾಡುತ್ತಿರುವಿರಿ. 

ಆದರೆ ನಾಳೆಯಿಂದ ನಾವು ನಿಮಗೆ ನಮಸ್ಕಾರ ಮಾಡಬೇಕಾಗುವುದು " ಎಂದು ನುಡಿದರು.

ಶ್ರೀ ಗಣೇಶಾಚಾರ್ಯರಿಗೆ ಶ್ರೀ ಅಪ್ಪಾವರ ಮಾತುಗಳು ಕೂಡಲೇ ಅರ್ಥವಾಗಲಿಲ್ಲ. 

ಏನೋ ದೊದ್ದವರು ಆಶೀರ್ವದಿಸುತ್ತಿದ್ದಾರೆಂದು ಅವರು ಅವರು ಸುಮ್ಮನಾದರು. 

ಸ್ವಲ್ಪ ಸಮಯದ ನಂತರ ಶ್ರೀ ಗಣೇಶಾಚಾರ್ಯರಿಗೆ ಶ್ರೀ ಅಪ್ಪಾವರ ಮಾತಿನ ಸತ್ಯ ಅರ್ಥವಾಯಿತು. 

ಕೂಡಲೇ ನಂಜನಗೂಡಿಗೆ ಹೊರಟು ಬರುವಂತೆ ಶ್ರೀ ಗಣೇಶಾಚಾರ್ಯರಿಗೆ ಶ್ರೀ ಸುಜ್ಞಾನೇಂದ್ರತೀರ್ಥರಿಂದ ಆದೇಶ ಬಂದಿತು.

ಶ್ರೀ ಸುಜ್ಞಾನೇಂದ್ರತೀರ್ಥರು ಶ್ರೀ ಗಣೇಶಾಚಾರ್ಯರನ್ನು ತಮ್ಮ ಉತ್ತರಾಧಿಕಾರಿಗಳಾಗಿ ಆರಿಸಿದ್ದರು. 

ಅಪರೋಕ್ಷ ಜ್ಞಾನಿಗಳಾದ ಶ್ರೀ ಅಪ್ಪಾವರಿಗೆ ದೀರ್ಘ ದಂಡ ಪ್ರಣಾಮ ಮಾಡುತ್ತಿದ್ದ ಶ್ರೀ ಗಣೇಶಾಚಾರ್ಯರು ಶ್ರೀ ರಾಯರ ಮಠದ ಪೀಠಾಧಿಪತಿಗಳಾಗಿ " ಶ್ರೀ ಸುಧರ್ಮೇಂದ್ರತೀರ್ಥ " ರೆಂಬ ಅಭಿದಾನದಿಂದ ಪ್ರಖ್ಯಾತರಾದರು.

ಪೀಠಾಧಿಪತಿಗಳಾದ ನಂತರವೂ ಶ್ರೀ ಸುಧರ್ಮೇಂದ್ರತೀರ್ಥರು ಶ್ರೀ ಅಪ್ಪಾವರನ್ನು ಪ್ರೀತಿ ವಿಶ್ವಾಸಗಳಿಂದ ಕಾಣುತ್ತಿದ್ದರು. 

ಉತ್ತಮ ಸಾಧನೆಯನ್ನು ಮಾಡಿ ಸತ್ಕೀರ್ತಿಯನ್ನು ಪಡೆದ ಶ್ರೀ ಸುಧರ್ಮೇಂದ್ರತೀರ್ಥರ ಮೂಲ ಬೃಂದಾವನವು ಶ್ರೀ ಕ್ಷೇತ್ರ ಮಂತ್ರಾಲಯದ ಶ್ರೀ ಗುರುಸಾರ್ವಭೌಮರ ಪರಮ ಪವಿತ್ರವಾದ ಸನ್ನಿಧಾನದಲ್ಲಿದೆ.

ಶ್ರೀ ಸುಧರ್ಮೇಂದ್ರತೀರ್ಥರ ವಿದ್ಯಾ - ಪಂಡಿತ ಪೋಷಣೆ - ಶಿಷ್ಯ ಜನೋದ್ಧಾರ ಇತ್ಯಾದಿ ಮಹಿಮಾ ವೈಭವವನ್ನು ಶ್ರೀ ರಾಯರ ಅಂತರಂಗ ಭಕ್ತರೂ - ಉತ್ತರಾದಿ ಮಠದ ಶಿಷ್ಯರೂ ಆದ ಶ್ರೀ ಕೃಷ್ಣಾವಧೂತರು " ಶ್ರೀ ಸುಧರ್ಮೇಂದ್ರ ಮಹೋದಯಃ "ಎಂಬ ಕೃತಿಯಲ್ಲಿ ಅತಿ ಮನೋಜ್ಞವಾಗಿ ವರ್ಣಿಸಿದ್ದಾರೆ.

" ಶ್ರೀ ಅಪ್ಪರವರಿಂದ ಅನುಗೃಹೀತರು "

1. ಶ್ರೀ ಗಂಧರ್ವಾ೦ಶ ಸುರಪುರದ ಆನಂದದಾಸರು

2. ಶ್ರೀ ಆಹ್ಲಾದಾಂಶ ಗುರು ಜಗನ್ನಾಥದಾಸರು

3. ವಿದ್ವಾನ್ ಶ್ರೀ ಯಲಿಮೇಲಿ ಹಯಗ್ರೀವಾಚಾರ್ಯರು

4. ವಿದ್ವಾನ್ ಶ್ರೀ ಯಲಿಮೇಲಿ ವಿಠಲಾಚಾರ್ಯರು

5. ಶ್ರೀ ವಿಜಯರಾಮಚಂದ್ರದಾಸರು

6. ಶ್ರೀ ಜಯೇಶವಿಠಲರು ( ಅಟಾಚಿ ಶ್ರೀ ವೆಂಕೋಬರಾಯರು )

7. ಶ್ರೀ ಕಾರ್ಪರ ನರಹರಿ ದಾಸರು

8. ಶ್ರೀ ಮುದ್ದು ಭೀಮಾಚಾರ್ಯರು

" ಮಹಿಮೆಗಳು "

1. ಶ್ರೀ ವಿಜಯರಾಮಚಂದ್ರದಾಸರಿಗೆ ಪರಮಾನುಗ್ರಹ ಮಾಡಿದ್ದು.

2. ಮೈಸೂರಿನ ಮಹಾರಾಜರ ಪ್ರಾರ್ಥನೆಯಂತೆ ಅರಮನೆಗೆ ಬಂದಾಗ ಅರಮನೆಯ ಈಶಾನ್ಯ ಮೂಳೆಯ ಸ್ಥಳವನ್ನು ತೋರಿಸಿ ಆಗಿಸಲು ಆದೇಶ ಕೊಟ್ಟರು. 

ಅದರಂತೆ ಆ ಸ್ಥಳದಲ್ಲಿ ಅಗೆಯಲು ಆ ಸ್ಥಳದಲ್ಲಿ ಪಾಂಡವರಿಂದ ಪೂಜಿತ ಸುಂದರವಾದ ಶ್ರೀ ಪಂಚಮುಖಿ ಪ್ರಾಣದೇವರ ಪ್ರತಿಮೆ ಲಭ್ಯವಾಯಿತು.

3. ಗದುಗಿನ ಯೋಗಿ ನಾರಾಯಣಾಚಾರ್ಯರಿಗೆ ಅನುಗ್ರಹಿಸಿದ್ದು.

4. ತಮಿಳುನಾಡಿನ ಭವಾನಿಯಲ್ಲಿ " ಮದು ಮಗನಿಗೆ ಪ್ರಾಣದಾನ "

5. ಶ್ರೀ ಅಪ್ಪಾವರು ಮುಂಡರಗಿ ಜೋಯಿಸ್ ಅವರ ಮನೆಗೆ ಬಂದಾಗ ಅವರು ತಮ್ಮ ಪಾದುಕೆಗಳನ್ನು ಅಲ್ಲಿಯೇ ಬಿಟ್ಟು ಹೋದರು. 

ಜೋಯಿಸರು ನಿತ್ಯವೂ ಆ ಪಾದುಕೆಗಳನ್ನು ಪೂಜೆ ಮಾಡುತ್ತಿದ್ದ ಅವರು ತಮ್ಮ ಸಕಲ ಇಷ್ಟಾರ್ಥಗಳನ್ನೂ ಹೊಂದಿದ್ದರು!!

" ಸುಜ್ಞಾನ ಬೆಳಕಿನ ಕಣ್ಮರೆ "

ಶ್ರೀ ಅಪ್ಪಾವರು ಶ್ರೀ ಪಂಚಮುಖಿ ಪ್ರಾಣದೇವರನ್ನು ಪ್ರತಿನಿತ್ಯ ಪೂಜಿಸುತ್ತಾ - ಪಂಚಮುಖನ ಪಂಚ ರೂಪಗಳನ್ನು ತಮ್ಮ ಮನೋ ಪಂಕಜದಲ್ಲಿ ಸದಾ ಧ್ಯಾನಿಸುತ್ತಾ ಅಪೂರ್ವವಾದ ಆನಂದವನ್ನು ಸೂರೆಗೊಂಡ ಶ್ರೀ ಅಪ್ಪಾವರು ತಮ್ಮ ಕೊನೆಯ ದಿನಗಳಲ್ಲಿ " ಗಾಣಧಾಳದ ಶ್ರೀ ಪಂಚಮುಖಿ ಪ್ರಾಣದೇವರ ಸನ್ನಿಧಿ " ಗೆ ತೆರಳಿ ಆ ಪ್ರಶಾಂತವಾದ ಪರಿಸರದಲ್ಲಿ ಒಂದೆರಡು ದಿನ ಧ್ಯಾನಾಸಕ್ತರಾದರು.

ಅಗಮ್ಯ ಮಹಿಮನಾದ ವಾಯುವಾಹನ ತಮ್ಮ ಮೂಲಕ ಪ್ರಕಟಿಸಿದ ವಿವಿಧ ಮಹಿಮೆಗಳನ್ನು ಮೆಲಕು ಹಾಕಿದರು. 

ತಮ್ಮ ಮೇಲೆ ಶ್ರೀ ಪಂಚಮುಖಿ ಪ್ರಾಣದೇವರು ಸುರಿಸಿದ ಕಾರುಣ್ಯ ವೃಷ್ಟಿಯನ್ನು ಸ್ಮರಿಸಿ ಅವರ ಕಣ್ಣಲೆಗಳು ತೇಲಿ ಬಂದವು. 

ತಮ್ಮ ಜೀವನದಲ್ಲಿ ನಡೆದ ಸಕಲ ಕ್ರಿಯೆಗಳನ್ನೂ ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ನೃಸಿಂಹದೇವರಿಗೆ ಪಾದಾರವಿಂದಗಳಲ್ಲಿ ಸಲ್ಲಿಸಿ " ಶ್ರಾವಣ ಶುದ್ಧ ತೃತೀಯಾ " ಶ್ರೀ ಕೃಷ್ಣ ಪಾದಾರವಿಂದವನ್ನು ಸೇರಿದರು!!



ಗದುಗಿನ ಶ್ರೀ ಯೋಗಿ ನಾರಾಯಣಾಚಾರ್ಯರು...

ಭಾರತೀಶ ಪದದ್ವಂದ್ವ೦ -

ಸಾರಸ ಭ್ರಮರಾಯಿತಮ್ ।

ಸುರವತ್ಕಾಂತಿ ಸಂಪನ್ನಂ -

ಕೃಷ್ಣಾಚಾರ್ಯ ಗುರು೦ಭಜೇ ।।

ಭಾರತೀ ಪತಿಯಾದ ಶ್ರೀ ಮುಖ್ಯಪ್ರಾಣನ ಪಾದ ಕಮಲದಲ್ಲಿ ದುಂಬಿಯಂತಿರುವ - ದೇವತೆಗಳಂತೆ ಪ್ರಕಾಶಮಾನರಾದ ಶ್ರೀ ಕೃಷ್ಣಾಚಾರ್ಯ ಗುರುಗಳನ್ನು ಭಜಿಸುತ್ತೇನೆ!!

ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ.....

ಅಪ್ಪನೇ ಅಪ್ಪಾರ ಮಹಿಮನೇ । ತಿ ।

ಮ್ಮಪ್ಪನ ಕರುಣೆಯ ಕಂದ ರಾಯರ ಪ್ರಿಯನೇ ।

ಕಪಿ ಕುಂಜರ ಪಿತ ವೇಂಕಟನಾಥನ ದೂತಾ ।

ಕಪರ್ದಿ ಮುನಿ ಬಿಂಬನೇ ಇಭರಾಮ ಪುರಾಧೀಶ ಸಲಹೋ ।।  

****