Monday 1 July 2019

shamasundara vittala dasaru 1956 manvi vaishakha shukla navami ಶಾಮಸುಂದರ ವಿಠ್ಠಲ ದಾಸರು shyamasundara


info is from FB madhwanet--->

vaishAka shuddha navami is the ArAdhane of shyAmasundara viTTala dAsaru of mAnavi.

gurugaLu: Asigyalu gOvinda dAsaru
ankita: shyAmasundara viTTala
Period: 1903 - 1956
Original name: gunDAchArya

Shri ShyAmasundara viTTala dAsaru was born in 1903 at Ballatagi, a small village near Manvi in Raichur district. His original name was GundAchArya.  Till the age of five, he could not speak. Worried about what the future would hold for such a boy, his parents took him to Guru Jagannatha dAsaru, a devotee of Raghavendra Swamy and a leading Haridasaru of that time. Guru Jagannatha Dasaru kept his hand on the head of the boy and blessed him. He then told the astonished parents that there was nothing wrong with the boy and that he would go on to become a renowned Haridasa.

A few days after this incident, the boy began speaking and soon exhibited signs of mastery over Kannada. He also learnt Sanskrit. He became a Purohit at Manvi. He then took up the post of a school teacher for a year. He resigned his job and came back to Manvi and continued his job as a Purohit. He also began composing poetry.  

He came in contact with Asigyalu Govinda Dasaru who then gave him the ankita of Shyamasundara viTTala. He had the ability to compose songs on the spot. He made use of his knowledge of Sanskrit in composing devaranamas and even enacted plays based on Ramayana and Mahabharata. He had an excellent command over Sri Harikathamurutasara and other texts.   

He composed many dEvaranAmAs. A compilation of them are available in a book called Shyamasundara Sthotra Mala. 

One of his well-known compositions is kAyO kAvEri ranga, kArunya pAngA. The incident is interesting. He had visited srirangapaTTaNa and had gone to the temple of ranganAtha. But the temple was closed. He had to return the same day and started composing this dEvaranAmA outside the temple. When he finished the dEvaranAma, the temple opened all by itself to the astonishment of everyone. He left to mAnavi after having darshaNa of ranganAtha. 

He attained the feet of shri hari in 1956.

shri shyAmasundara viTTala dAsa guruvAntargata, bhArathiramaNa mukhyaprANantargata, lakshmi pate shri ranganAtha dEvara pAdAravindakke gOvindA, gOvindA…

Shri krishNArpaNamastu
********


ನೋಡಿದೆ ವೆಂಕಟರಮಣನ ದ್ವಾರವಾಡ ಗ್ರಾಮದಿ ನಿಂತ ದೇವನ

ದಾಸ ಸಾಹಿತ್ಯದ ಆಧ್ಯಾತ್ಮ ಕೇಂದ್ರ ರಾಯಚೂರು ಎಂದರೆ ತಪ್ಪಾಗಲಾರದು,  ಮಹಾನ್ ಚೈತನ್ಯಸ್ವರೂಪರ ಅವತಾರ ಕ್ಷೇತ್ರವಾದ ರಾಯಚೂರಿನ ಪರಿಸರ ಸಾಧಕರ ಸಾಧನೆಗಾಗಿ ಭಗವಂತ ವಿಶೇಷವಾಗಿ ಸೃಷ್ಠಿಸಿದ್ದಾನೆ,  ಇಂತಹ ಪರಿಸರದಲ್ಲಿ ಮಾನವಿ ತಾಲೂಕಿಗೆ ಸೇರಿದ ಬಾಗಲವಾಡ ಒಂದು. 

ಶ್ರೀಜಗನ್ನಾಥ ದಾಸರಿಗೆ ಸಾಕ್ಷತ್ ದರ್ಶನ ಕೊಟ್ಟ ವೆಂಕಟರಮಣನ ಭವ್ಯ ಕ್ಷೇತ್ರಯಿದಾಗಿದೆ,  ಈ ಕ್ಷೇತ್ರಸ್ಥ ಪರಮಾತ್ಮನ ಗುಣಗಾನವನ್ನು ಶ್ರೀ ಶಾಮಸುಂದರ ದಾಸರು ಈ ಕೃತಿಯಲ್ಲಿ ಮಾಡಿದ್ದಾರೆ. 


ನೋಡಿದೆ ವೆಂಕಟರಮಣನ ದ್ವಾರ
ವಾಡ ಗ್ರಾಮದಿ ನಿಂತ ದೇವನ 
ರೂಡಿಪದಾಸರಿಗೆ ನೀಡಲು ದರುಶನ 
ಗೂಢಪದಾದ್ರಿಯಿಂ ಬಂದ ಮಹಾತ್ಮನ

ದ್ವಾರವಾಡ = ಬಾಗಲವಾಡ
ರೂಡಿಪದಾಸರು= ರೂಡಿ ಅಂದ್ರೆ ಜಗತ್ತು ಪ ಅದನ್ನಾಳುವವನಾದ ಜಗನ್ನಾಥ, ಆ ಹೆಸರಿನ ದಾಸರಾದ ಜಗನ್ನಾಥ ದಾಸರಿಗೆ ದರುಶನ ನೀಡಲು
ಗೂಢಪದಾದ್ರಿಯಿಂ = ಶೇಷಾದ್ರಿಯಿಂ ಬಂದ ಮಹಾತ್ಮನ

ಈತನೆ ವೈಕುಂಠನಾಥನು ನಿಜ
ಶಾತಕುಂಭೋಧರ ತಾತನು 
ಮಾತಂಗವರದಾತ ಶ್ವೇತವಾಹನ ಸೂತ
ಜಾತರಹಿತ ಧನುಜಾತಕುಲಾಂತಕನ

ಶಾತಕುಂಭೋಧರ ತಾತ = ಶಾತಕುಂಭ+ಉದರ
ಶಾತಕುಂಭ =ಭಂಗಾರ, ಉದರ=ಹೊಟ್ಟೆ
ಭಂಗಾರದಹೊಟ್ಟೆಯವ ಅಂದ್ರೆ ಬ್ರಹ್ಮದೇವರು(ಹಿರಣ್ಯಗರ್ಭ) , ತಾತ=ತಂದೆ
ಶಾತಕುಂಭೋಧರ ತಾತ= ಭಗವಂತ

ಮಾತಂಗವರದಾತ= ಗಜವರದ
ಶ್ವೇತವಾಹನ ಸೂತ = ಅರ್ಜುನನ ಸಾರಥಿ
ಜಾತರಹಿತ=ಹುಟ್ಟು ಇಲ್ಲದವನು ಸ್ವಯಂಭೂ ಶ್ರೀಮನ್ನಾರಾಯಣ

ತೋಂಡಮಾನಗೊಲಿದಾತನ ತನ್ನ
ತೊಂಡಜನಕೆ ಸುಖದಾತನ 
ಅಂಡಜಾತ ಪ್ರಕಾಂಡವರೂಥ ಬ್ರ
ಹ್ಮಾಂಡನಾಯಕನಾದ ಪಾಂಡವಪಾಲನ

ತೋಂಡಮಾನ= ಆಕಾಶರಾಜನ ತಮ್ಮನಾದ ತೋಂಡಮಾನನಿಗೆ ವರವಿತ್ತವನು
ತೋಂಡಜನಕೆ= ಭಕ್ತಜನಕೆ ಸುಖವೀವನು


ಇಂದುಧರಾಮರವಂದ್ಯನ ಶಾಮ
ಸುಂದರವಿಠಲ ಮುಕುಂದನ
ಸಂದರುಶನ ಮಾತ್ರದಿ ಹಿಂದೆಮಾಡಿದ ದೋಷ
ವೃಂದವೆಲ್ಲವು ಇಂದು ಬೆಂದು ಪೋದವು ಘನ

ಇಂದುಧರಾಮರ ವಂದ್ಯ= ಇಂದುಧರ+ಅಮರರು= ಇಂದುಧರನಾದ ಶಿವನಿಂದಲೂ, ಅಮರರಾದ ದೇವತೆಗಳಿಂದ ಸ್ತುತ್ಯನಾದವನಾದ ಶಾಮಸುಂದರವಿಠಲನ ಸಂದರುಶನದಿಂದ ಪ್ರಾರಾಬ್ಧವೆಲ್ಲ ಸುಟ್ಟು ಹೋಗುವವು
✍🏻 ಜಮದಗ್ನಿ
*************

ಶ್ರೀ ಶ್ಯಾಮಸುಂದರ ದಾಸರು
" ಶ್ರೀ ಶ್ಯಾಮಸುಂದರದಾಸರ ಆರಾಧನಾ ಮಹೋತ್ಸವ "

ಜಗನ್ನಾಥ ಗುರೋರ್ದಾಸಂ 
ಜಗದಾನಂದಕಾರಕಮ್ ।
ಶ್ಯಾಮಸುಂದರದಾಸಾರ್ಯಂ 
ವಂದೇ ಸುಜ್ಞಾನದಾಯಕಮ್|| 

" ಶ್ರೀ ಶ್ಯಾಮಸುಂದರದಾಸರ ವಂಶ "
ಶ್ರೀ ಶ್ರೀಪಾದರಾಜರು
ಶ್ರೀ ವ್ಯಾಸರಾಜರು
ಶ್ರೀ ಪುರಂದರದಾಸರು
ಶ್ರೀ ವಿಜಯರಾಯರು
ಶ್ರೀ ಗೋಪಾಲದಾಸರು
ಶ್ರೀ ಜಗನ್ನಾಥದಾಸರು
ಶ್ರೀ ಶ್ಯಾಮಸುಂದರದಾಸರು. 

" ಶ್ರೀ ಶ್ಯಾಮಸುಂದರದಾಸರ ಸಂಕ್ಷಿಪ್ತ ಮಾಹಿತಿ "

ಹೆಸರು : ಶ್ರೀ ಗುಂಡಾಚಾರ್ಯರು
ತಂದೆ : ಶ್ರೀ ಶ್ಯಾಮಾಚಾರ್ಯರು
ತಾಯಿ : ಸಾಧ್ವೀ ಕೊಪ್ರಮ್ಮ
ಕಾಲ : ಕ್ರಿ ಶ 1896 - 1956ಕುಲ 

ಕುಲ ಗುರುಗಳು : ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು
ಸ್ವರೂಪೋದ್ಧಾರಕ ಗುರುಗಳು : ಶ್ರೀ ಜಗನ್ನಾಥದಾಸರು

ವಿದ್ಯಾಗುರುಗಳು : 
ಶ್ರೀ ಐಕೋರು ನರಸಿಂಹಾಚಾರ್ಯರು, ಶ್ರೀ ಅಸ್ಕಿಹಾಳ ಗೋವಿಂದದಾಸರು
ಅಂಕಿತ : ಶ್ರೀ ಜಗನ್ನಾಥದಾಸರಿಂದ ಸ್ವಪ್ನಾಂಕಿತ " ಶ್ಯಾಮಸುಂದರವಿಠ್ಠಲ
ಸಮಕಾಲೀನ ಯತಿಗಳು :
ಶ್ರೀ ಸುಶೀಲೇಂದ್ರತೀರ್ಥರು; ಶ್ರೀ ಸುವ್ರತೀಂದ್ರತೀರ್ಥರು; ಶ್ರೀ ಸುಯಮೀಂದ್ರತೀರ್ಥರು(ರಾಘವೇಂದ್ರ ಮಠ) 
ಶಿಷ್ಯರು :
ಶ್ರೀ ವಿಜಯಸಾರಥಿವಿಠಲ; ಶ್ರೀ ಲಕುಮೀಶದಾಸರು 
( ಶ್ರೀ ಕುರುಡಿ ರಾಘವೇಂದ್ರಾಚಾರ್ಯರು ), ಶ್ರೀ ಅಭಿನವ ಪ್ರಾಣೇಶದಾಸರು;
ಶ್ರೀ ಶ್ರೀಕರವಿಠಲ; 
ಶ್ರೀ ಪದ್ಮನಾಭವಿಠಲ ಮತ್ತು ಶ್ರೀ ಗುರು ಶ್ಯಾಮಸುಂದರದಾಸರು ( ಶ್ರೀ ಸುಶೀಲೇಂದ್ರಾಚಾರ್ಯರು ),
ಉಪದೇಶ ಪಡೆದ ಶಿಷ್ಯರು :
ಮರತೇಡ್ ಶ್ರೀನಿವಾಸರಾಯರು, ಚೀಲಕಪರವೀ ಶ್ರೀ ನರಸಿಂಹದಾಸರು, ದಡದಲ ಶ್ರೀ ನರಸಿಂಗರಾಯರು ಮತ್ತು ದಡದಲ ಶ್ರೀ ಭೀಮಸೇನದಾಸರು ( ಶ್ರೀ ಮೋತಿದಾಸರು )
" ಶ್ರೀ ದಾಮೋದರದಾಸರೇ ಶ್ರೀ ಶ್ಯಾಮಸುಂದರದಾಸರು "

ಶ್ಯಾಮಸುಂದರದಾಸರು ಹಿಂದಿನ ಜನ್ಮದಲಿ ರಂಗ ಒಲಿದ ದಾಸರಾಯರಾದ ಶ್ರೀ ಜಗನ್ನಾಥದಾಸರ ಪುತ್ರರಾದ ಶ್ರೀ ದಾಮೋದರದಾಸರಾಗಿ ಅವತರಿಸಿ ಶ್ರೀ ಜಗನ್ನಾಥದಾಸರ ವದನಾರವಿಂದದಲ್ಲಿ ಹೊರಹೊಮ್ಮಿದ " ಹರಿಕಥಾಮೃತಸಾರ " ದ ಕೆಲವು ಸಂಧಿಗಳನ್ನು ಶ್ರೀ ದಾಸಾರ್ಯರ ಪರಮಾನುಗ್ರಹ ಬಲದಿಂದ ಬರೆದಿದ್ದರ ಫಲದಿಂದ ಶ್ರೀ ಶ್ಯಾಮಸುಂದರದಾಸರಾಗಿ ಅವತರಿಸಿದ್ದಾರೆ ಎಂಬುದನ್ನು ಈ ಕೆಳಗಿನ ಪ್ರಮಾಣಗಳು ಖಚಿತ ಪಡಿಸಿವೆ.
ಶ್ರೀ ವಿಜಯಸಾರಥಿ ವಿಠಲರು....
ಹರಿಕಥಾಮೃತ ವಕ್ತಾರಃ ।
ಪರಮಾನುಗ್ರಹ ಸೂನವೇ ।
ವರ ಕವಿ ಪಂಡಿತಾಚಾರ್ಯ 
ನಮೋ ನಮಃ ।।
ಶ್ರೀ ಶ್ರೀಕರ ವಿಠಲರು...
ಮಾನವಿಯಧಾಮರಾ 
ಪ್ರೇಮದಾ ಸೂನೂ ।
ನೀನೆಂದು ಭಾವಿಸಿ 
ಸ್ತುತಿಪ ಜನರನ್ನು ತಾನೇ ।
ಶ್ರೀಕರವಿಠ್ಠಲ ಪೊರೆಯುವನು 
ವರ ಕಾಮಧೇನು ।।
ಶ್ರೀ ತಂದೆ ವೆಂಕಟೇಶ ವಿಠಲರು...
ಮಾನವೀ ಗುರುವ ಪ್ರಸೂನ 
ಷಟ್ಟರಣ ಕವಿ ।
ಭಾನು ಹೃದ್ಯಾನವದ್ಯಾಭಿಮನ್ಯು 
ಪ್ರಾಣ ಪ್ರಿಯ ತಂದೆ 
ವೆಂಕಟೇಶವಿಠಲನ್ನ ಪದ ।
ರೇಣಿನವನಿವನೆಂದು 
ಸುಮುಖನಾಗೋ ।।

ಶ್ರೀ ಶ್ಯಾಮ ಸುಂದರ ದಾಸರೇ ತಾವು ಶ್ರೀ ಜಗನ್ನಾಥದಾಸರ ಪುತ್ರರೆಂದು ಈ ಕೆಳಕಂಡ ಪ್ರಮಾಣಗಳಿಂದ ಸ್ಪಷ್ಟ ಪಡಿಸಿದ್ದಾರೆ.

ಭೋ ದಾತಾ ಬಾರೋ 
ಗುರುವರ್ಯ ।। ಪಲ್ಲವಿ ।।
ನಂಬಿದೆ ನಾ ನಿನ್ನ ಪಾದ 
ಭೂನಾಥ ದಾಸಾಗ್ರಣೀ ।। ಅ. ಪ ।।
. ಪೋತನೋಳೀಪರಿ 
ಯಾತಕೆ ನಿರ್ದಯ ।
ತಾತನೆ ನಿಮಗಿದು 
ರೀತಿಯೇ ನೋಡೈ ।
ಸುತನಪರಾಧವ 
ಹಿತದಲಿ ಮನ್ನಿಸಿ ।
ಪಾತಕ ಬಿಡಿಸೋ 
ಮತಿ ಬೀರೋ ।।
ಇನ್ನೊಂದು ಪದದಲ್ಲಿ.....
ಕರವ ಪಿಡಿ ಗುರುರಾಯಾ ।
ಶಿರ ಬಾಗಿ ಬೇಡುವೇ ।
ಪೊರೆಯೋ ಸತ್ಕವಿಗೇಯ ।।
ನೆರೆ ನಂಬಿದೆನೋ ನೀ ।
ಮರೆಯದಿರು ಶುಭ ಕಾಯ ಹೇ 
ಸೂರಿವರ್ಯ ।। ಪಲ್ಲವಿ ।।

... ಮಂದ ನಾ ನಿಜವಯ್ಯಾ ।
ಸಂದೇಹವಿಲ್ಲದೇ ।
ಕುಂದು ಎಣಿಸದೆ ಜೀಯಾ ।
ಬಂದೆನ್ನ ಮನದಲಿ ।
ನಿಂದು ನೀ ಸಲಹಯ್ಯಾ ।
ವಂದಿಪೆನು । ಶ್ರೀ ಪು ।।
ರಂದರಾರ್ಯರ ಪ್ರಿಯಾ ।
ಆನಂದ ನಿಲಯಾ ।
ಅಂದು ಸ್ವಪ್ನದಿ ।
ವಚನವು ತಂದೆಯೇ ।
ಇಂದಿಲ್ಲಿ ಪೋಯಿತು ।
ನಂದ ನಂದನನಾದ । 
ಶ್ರೀ ಗೋ ।
ವಿಂದ ಶ್ಯಾಮಸುಂದರನ 
ವಿಧೇಯಾ ।।

ಮತ್ತೊಂದು ಕೃತಿಯಲ್ಲಿ....

ಮಾನಿತ ನಿನಗನು ।
ಮಾನವ್ಯಾತಕೆ ತವ ।
ಸೋನು ನಾನಲ್ಲವೇ ।
ಮಾನವಿ ನಿಲಯನೇ ।।
 ಶ್ರೀ ರಾಘವೇಂದ್ರತೀರ್ಥರ ಕಾರುಣ್ಯ "

ಅಂದಿನ ಸಮಾಜದಲ್ಲಿ ಸುಪ್ರಸಿದ್ಧರು ಶ್ರೀ ಪ್ರಹ್ಲಾದಾವತಾರಿಗಳಾದ ಶ್ರೀ ರಾಘವೇಂದ್ರತೀರ್ಥರ ಅತ್ಯಂತ ಪ್ರಿಯರಾದವರು 

ಶ್ರೀ ಅಹ್ಲಾದಾಂಶ ಶ್ರೀ ಗುರು ಜಗನ್ನಾಥದಾಸರು. ಶ್ರೀ ವಿಜಯರಾಯರ ಪರಂಪರೆಗೆ ಸೇರಿದ ಶ್ರೀ ಜಗನ್ನಾಥದಾಸರ ಪರಮಾನುಗ್ರಹಕ್ಕೆ ಪಾತ್ರರಾದ ಶ್ರೀ ಗುರು ಜಗನ್ನಾಥದಾಸಾರ್ಯರು 

" ಕೋಸಿಗಿ ಮುತ್ಯಾ " ಎಂಬ ಹೆಸರಿನಲ್ಲಿ ಎಲ್ಲಾ ಸಾತ್ವಿಕ ಜನ ಮಾನಸದಲ್ಲಿ ಗುರು ಸ್ಥಾನವನ್ನು ಪಡೆದಿದ್ದರು.
" ಹರಿಕಥಾಮೃತಸಾರ " ವನ್ನು ತಮ್ಮ ಪ್ರತಿ ರಕ್ತದ ಕಣದಲ್ಲೂ ತುಂಬಿಕೊಂಡ ಕೋಸಿಗಿ ಮುತ್ಯಾ ಅವರು ಶ್ರೀ ಜಗನ್ನಾಥದಾಸರ ದರ್ಶನಾಕಾಂಕ್ಷಿಗಳಾಗಿ ಮಾನವಿಗೆ ಬಂದರು.
ಶ್ರೀ ದಾಸಾರ್ಯರ ಆಗಮನವನ್ನರಿತ ಶ್ರೀ ಶ್ಯಾಮಾಚಾರ್ಯ ದಂಪತಿಗಳು ತಮ್ಮ ಮಗನ ಕರೆತಂದು ಅವರ ಅಡಿದಾವರೆಗಳಲ್ಲಿಟ್ಟು ದುಃಖವನ್ನು ತೋಡಿಕೊಂಡರು.
ಶ್ರೀ ಗುರು ಜಗನ್ನಾಥದಾಸರು ಮಮತೆಯಿಂದ ಮಗುವಿನ ತಲೆಯ ಮೇಲೆ ಕೈಯಾಡಿಸುತ್ತಾ...
ಶ್ಯಾಮಾಚಾರ್ಯರೇ! ನಿಮ್ಮ ಮಗನು ಭಗವದನುಗ್ರಹದಿಂದ ನಿರಂತರ ಆಧ್ಯಾತ್ಮಿಕ ತತ್ತ್ವಗಳನ್ನಾಡಬಲ್ಲ ವರ ಕವಿಯಾಗುವನು. 
ಇವನು ಬೂದಿ ಮುಚ್ಚಿದ ಕೆಂಡ ಎಂದು ಹರಿಸಿದರು.ಶ್ರೀ ಗುರು ಜಗನ್ನಾಥದಾಸರ ಪರಮಾನುಗ್ರಹದಿಂದ ಗುಂಡಾಚಾರ್ಯರು ಕೆಲವೇ ತಿಂಗಳುಗಳಲ್ಲಿ ಸ್ವಚ್ಛವಾಗಿ ಮಾತನಾಡಲು ಪ್ರಾರಂಭಿಸಿದನು .
" ಮೂಕೋಪಿಯತ್ಪ್ರಸಾದೇನ 
ಮುಕುಂದ ಶಯನಾಯತೇ.... "

ಎಂಬಂತೆ ಶ್ರೀ ರಾಘವೇಂದ್ರತೀರ್ಥರು ಹಾಗೂ ಶ್ರೀ ಜಗನ್ನಾಥದಾಸರು ಶ್ರೀ ಗುರು ಜಗನ್ನಾಥದಾಸರನ್ನು ಮಾಧ್ಯಮವನ್ನಾಗಿಟ್ಟುಕೊಂಡು ಗುಂಡಾಚರ್ಯರ ಮೇಲೆ ತೋರಿದ ಕಾರುಣ್ಯ. 
ಕಾರಣ ಶ್ರೀ ಪ್ರಹ್ಲಾದರಾಜರೇ ಶ್ರೀ ರಾಘವೇಂದ್ರತೀರ್ಥರು - ಶ್ರೀ ಸಹ್ಲಾದರಾಜರೇ ಶ್ರೀ ಜಗನ್ನಾಥದಾಸರು - ಶ್ರೀ ಆಹ್ಲಾದರಾಜರೇ ಶ್ರೀ ಗುರು ಜಗನ್ನಾಥದಾಸರು ಮತ್ತು ಶ್ರೀ ಜಗನ್ನಾಥದಾಸರ ಪುತ್ರರಾದ ಶ್ರೀ ದಾಮೋದರದಾಸರೇ ಶ್ರೀ ಶ್ಯಾಮಸುಂದರದಾಸರಾಗಿ ಅವತಾರ ಮಾಡಿದ್ದಾರೆಂದ ಮೇಲೆ ಜ್ಞಾನಿತ್ರಯರ ಕಾರುಣ್ಯಕ್ಕೆ ವಿಶೇಷವಾಗಿ ಪಾತ್ರರಾದವರು ಶ್ರೀ ಗುಂಡಾಚಾರ್ಯರು!!
" ಅಂಕಿತ ಪ್ರದಾನ "
ಅದೊಂದು ಶುಭ ಸಮಯ. 
ಶ್ರೀ ಗುಂಡಾಚಾರ್ಯರ ಸ್ವಪ್ನದಲ್ಲಿ ಶ್ರೀ ಜಗನ್ನಾಥದಾಸರು ಕಾಣಿಸಿಕೊಂಡು " ಶ್ಯಾಮಸುಂದರವಿಠಲ " ಎಂಬ ಅಂಕಿತ ನಾಮವನ್ನು ಕರುಣಿಸಿ ಅನುಗ್ರಹಿಸಿದರು. 
ಶ್ರೀ ಗುಂಡಾಚಾರ್ಯರ ವದನಾರವಿಂದದಿಂದ ಭಗವನ್ಮಹಿಮಾ ಪ್ರತಿಪಾದಕವಾದ; ವೇದಾಂತ ರಹಸ್ಯಗಳಿಂದ ಕೂಡಿದ ಕವಿತಾ ತರಂಗಿಣಿಯು ಹೊರಹೊಮ್ಮಿತು. 
ಅಂದಿನಿಂದ ಶ್ರೀ ಗುಂಡಾಚಾರ್ಯರು " ಶ್ರೀ ಶ್ಯಾಮಸುಂದರವಿಠಲ " ರೆಂದು ಪ್ರಸಿದ್ಧಿಯಾದರು.

" ವರ ಕವಿಗಳಿಂದ ವರ ಕವಿಗಳಿಗೆ ಸ್ವಾಗತ "
ಕವಿ ದ ರಾ ಬೇಂದ್ರೆಯವರನ್ನು ಕುರಿತ ಹಾಡು ಸುಂದರವಾಗಿದೆ. 
ಮಾನವಿಯಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನಕ್ಕೆ ಬರುವಂತೆ ವ್ಯವಸ್ಥಾಪಕರು ಮಾಡಿಕೊಂಡ ಮನವಿಯನ್ನು ಕವಿ ಬೇಂದ್ರೆಯವರು ಮನ್ನಿಸದಿದ್ದುದಕ್ಕೆ ಇಡೀ ಸಮ್ಮೇಳನದ ಉತ್ಸಾಹವು ಕುಗ್ಗಿದ್ದನ್ನರಿತ ಶ್ರೀ ಶ್ಯಾಮಸುಂದರದಾಸರು ಕವಿ ಬೇಂದ್ರೆಯವರಿಗೆ ಮಾನವಿಗೆ ಬರುವಂತೆ ಆಹ್ವಾನಿಸಿ ಒಂದು ಸ್ವಾಗತ ಪದವನ್ನು ಬರೆದು ಧಾರವಾಡಕ್ಕೆ ಕಳುಹಿಸಿದರು. 
ಸ್ವಾಗತ ಪದದಲ್ಲಿ ನಿರೂಪಿತ ಸಾಹಿತ್ಯ ಸತ್ವವನ್ನು ಓದಿದ ಕವಿ ಬೇಂದ್ರೆಯವರು ಕೂಡಲೇ ಮಾನವಿಗೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸತ್ಕವೀಂದ್ರ ಬಾ ಬೇಂದ್ರೆ 
ಸುಗುಣ ಸಾಂದ್ರ ।। ಪಲ್ಲವಿ ।।
ನಮ್ಮ ಮಾನವಿ ಸ್ಥಳದಿ 
ಅಚ್ಛಗನ್ನಡದ ನುಡಿಯ ।
ಸಮ್ಮಿಲನ ಸಾಗಿಸಲು 
ನಿಶ್ಚಯಿಸಿದೆ ।
ನಿಮ್ಮ ಬರುವಿಕೆ ಬಯಕೆ ।।
ಇಮ್ಮಡಿಸಿಹುದೆಮಗೆ ।
ಸಮ್ಮತಿಸಿ । ಬಾರ ।
ಯ್ಯ ಸತ್ಕವೀಂದ್ರ ಶ್ರೀ 
ಬೇಂದ್ರೆ ಸುಗುಣೇಂದ್ರ ।। ಚರಣ

... ಪ್ರೇಮದಿಂದಲಿ ನಿನ್ನ 
ಕಾಮಿತಾರ್ಥವಗರೆದು ।
ಶ್ಯಾಮಸುಂದರವಿಠಲ 
ಸಲಹೋ ಎಂದು ।
ನಾಮದಡಿ ಪ್ರಾರ್ಥಿಸುವೆ 
ನೀ ಮಾಡ್ವ ಉಪಕಾರ ।।

" ಶ್ರೀ ಜಗನ್ನಾಥದಾಸರೇ ಸಾರಸರ್ವಸ್ವ "
ಅನೇಕ ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸಿದ ಇವರಿಗೆ ಮಾನವಿಯಲ್ಲಿ ಎಲ್ಲಿಲ್ಲದ ಅಭಿಮಾನ. ಅದೇ ಅವರ ಪಾಲಿಗೆ ಸಕಲ ತೀರ್ಥ ಕ್ಷೇತ್ರಗಳ ಪವಿತ್ರ ನಿಲಯ. ಇದಕ್ಕೆ ಒಡೆಯರಾದ ಶ್ರೀ ಜಗನ್ನಾಥದಾಸರೇ ಇವರ ಪಾಲಿಗೆ ತಂದೆ, ತಾಯಿ, ಬಂಧು, ಬಳಗ, ಗುರು, ದೈವ ಎಲ್ಲವೂ ಆಗಿದ್ದಾರೆ. 
ಶ್ಯಾಮಸುಂದರದಾಸರು ತಮ್ಮ ಒಂದು ಸುಳಾದಿಯಲ್ಲಿ....
ಇವರ ಸಂದರುಶನ ಭಾವ ಬಂಧ ಮೋಚನ । ಇವರ ಚರಣ ಧ್ಯಾನ ಗಂಗಾ ಸ್ನಾನ । ಇವರನ್ನ ಸಾರಿದರೆ ಜವಾನ ಅಂಜಿಕೆಯುಯಿಲ್ಲ । ಇವರ ಕವನ ಸ್ತವನ ಶ್ರವಣದಿಂದ । ಪವನ ಸಚ್ಛಾಸ್ತ್ರದ ಪವಚನ ಫಲವಕ್ಕು ।ಇವರಿಪ್ಪ ಸ್ಥಳ ಕಾಶೀ ರಾಮೇಶ್ವರ । ಇವರಲ್ಲಿ ಸಮಸ್ತ ದಿವಿಜರು ನೆಲೆಸಿದ್ದು । ಇವರಿಂದ ವಚನವ ನಡೆಸುವರು । ಇವರಿಲ್ಲಿರಲು ಬಿಟ್ಟು ಅವನಿ ಸುತ್ತಿದವರಿಗೆ । ಆವಲೇಶವಾದರೂ ಪುಣ್ಯವಿಲ್ಲ । ಇವರನುಗ್ರಹವಾಗೆ ಶ್ರೀ ಶ್ಯಾಮಸುಂದರನು । ತವಕದಿಂದ ಕರ ಪಿಡಿದು ಸಲಹುವ ಸರ್ವದಾ ।।

" ನಿರ್ಯಾಣ "

ಪೂರ್ಣವಾದ ಹರಿದಾಸ ಸಾಹಿತ್ಯದ ಭಾಂಡಾಗಾರವನ್ನು ತಮ್ಮ ಕೃತಿ ರತ್ನಗಳಿಂದ ಪೂರ್ಣ ಮಾಡಿದ ಮಹನೀಯರು. 
ನಿಗೂಢವಾದ ಸಾಧನೆಯನ್ನು ಮಾಡಿ ಕಾರಣ ಜನ್ಮರಾದ ಶ್ರೀ ಶ್ಯಾಮಸುಂದರದಾಸರು ದುರ್ಮುಖಿ ನಾಮ ಸಂವತ್ಸರದ ವೈಶಾಖ ಶುದ್ಧ ನವಮೀ ಶುಕ್ರವಾರ ವೈಕುಂಠಕ್ಕೆ ತೆರಳಿದರು.
ರಾಗ : ಭೈರವಿ ತಾಳ : ಆದಿ
ತೆರಳಿದರು ತೆರಳಿದರು 
ಹರಿಯ ಪುರಕೆ ।
ಪುರ ಬಲ್ಲಟಗಿಯ 
ವರಕವಿ ಶ್ಯಾಮಸುಂದರರು ।। ಪಲ್ಲವಿ ।।
ವೀರ ವೈಷ್ಣವರಲ್ಲಿ 
ಜನಿಸುತಲಿ ಮಾನವಿಯ ।
ಧಾರುಣಿಪ ದಾಸರ 
ಒಲಿಮೆ ಪಡೆದು ।
ಈರ ಮತ ತತ್ತ್ವಗಳ ।
ಪಾರ ಮಹಿಮೆಗಳ 
ಚಾರು ಪದ ಪದ್ಯದಿಂ ।
ಸಾರಿ ನಲಿದವರು ।। ಚರಣ ।।
ಮೂಕ ಬಧಿರರ ತೆರದಿ ।
ಲೋಕಕ್ಕೆ ತೋರುತಲಿ ।
ಕಾಕು ವ್ರುತ್ತಿಗಳನು ನೂಕಿ ಮೆಟ್ಟಿ 
ಈ ಕುಂಭಿಣಿಯೊಳು ।
ಸಾಕೆಂದು ತ್ವರಿತದಲಿ ।
ಕಾಕೋದರಾಗ್ರಾಜನ 
ನಾಮ ಘರ್ಜನೆಗೈದು ।। ಚರಣ
ದುರ್ಮುಖ ಸಂವತ್ಸರದಿ । ವೃಷ 
ಭ ಮಾಸದ । ಶು ।
ಕ್ಲ ಮೂರು ತಿಥಿ 
ಶುಕ್ರವಾರ ಹಗಲು ।
ನಿರ್ಮಲಾನಂದದಿ 
ಲಯವನ್ನು ಚಿಂತಿಸುತ ।
ಭರ್ಮಪಿತ ಅಭಿನವ 
ಪ್ರಾಣೇಶವಿಠಲನ್ನ ನೆನೆಯುತ ।। ಚರಣ ।।
****

" ಶ್ರೀ ವರ್ತುಲಾರ್ಯ 1 " 
" ವರಕವಿ ಶ್ರೀ ಶ್ಯಾಮ ಸುಂದರ ದಾಸರು "
" ಈದಿನ - ದಿನಾಂಕ : 20.05.21 ಗುರುವಾರ - ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಶುದ್ಧ ನವಮೀ -  ಶ್ರೀ ರಾಯರ ಅಂತರಂಗ ಭಕ್ತರೂ - ಶ್ರೀ ಜಗನ್ನಾಥದಾಸರ ಪ್ರೀತಿಪಾತ್ರರೂಶ್ರೀ ಶ್ಯಾಮಸುಂದರದಾಸರ ಆರಾಧನಾ ಮಹೋತ್ಸವ "
ಆಚಾರ್ಯ ನಾಗರಾಜು ಹಾವೇರಿ.... 
ಶ್ಯಾಮಸುಂದರ ದಾಸರ್ಗೆ -
ನಮೋ ನಮೋ ।
ಶ್ಯಾಮಾರ್ಯ ಕೋಪ್ರಮ್ಮರ -
ಪುತ್ರರ್ಗೆ ನಮೋ ನಮೋ ।। ಪಲ್ಲವಿ ।।
ಶೌರಿ ಕಥಾಮೃತ ರಚಿಸಿದ -
ದೇವ ಗುರುವಿನಂಶ ।
ಧೀರ ಮಾನವಿ ಮುನಿಪುಂಗವರ -
ಸೂನುವಾದ ।। ಚರಣ ।।
ಹರಿಕಥಾಮೃತಸಾರ -
ಸಿದ್ಧಿ ಪಡೆದು ।
ವರಕವಿ ಶ್ಯಾಮಸುಂದರ-
ಯೆಂದು ಖ್ಯಾತರಾದ ।। ಚರಣ ।।
ಗುರುಸಾರ್ವಭೌಮರಲಿ -
ಪರಮ ಭಕುತಿ ಮಾಡಿ ।
ಹರಿವಾಯುಗುರುದಾಸರ -
ಮೇಲೆ ಪದ ರಚಿಸಿದ   ।। ಚಾರಣ ।।
 ಗುರು ಜಗನ್ನಾಥದಾಸರ -
ಕರುಣೆಲಿ ಮಾತನಾಡಿ  ।
ವರ ಕವಿಯೆಂದು ಕೀರ್ತಿ -
ಗಳಿಸಿದ ।। ಚರಣ ।। 
ಐಕೂರು ನರಸಿಂಹಾರ್ಯ-
ರಲಿ ಶಿಷ್ಯತ್ವ ವಹಿಸಿ ।
ಅಸ್ಕಿಹಾಳ ಗೋವಿಂದಾರ್ಯರ -
ಅನುಗ್ರಹ ಪಡೆದ  ।। ಚರಣ ।।
ಕುರುಡಿ ರಾಘವೇಂದ್ರಾಚಾರ್ಯ -
ರಿತ್ತಿ ಸುಶೀಲೇಂದ್ರಾ - ।
ರ್ಯರಿಗೆ ಲಕುಮೀಶ ಗುರುಶ್ಯಾಮ -
ಸುಂದರಯೆಂದು ಅಂಕಿತವಿತ್ತ ।। ಚರಣ ।।
ಅಂಬುಧಿಜಾ ವಲ್ಲಭ ವೆಂಕಟನಾಥೋsಭಿನ್ನ ।
ಅಂಬುದಶ್ಯಾಮನ ಪಾದ -
ಪದುಮ ಮಧುಪಾ ।। ಚರಣ ।। 
ಭಾರತ ಭೂಮಿ ಹಲವು ಸಂಸ್ಕೃತಿಗಳ ತವರಾಗಿದೆ. ಹಲವು ಧರ್ಮಗಳ ಆಗರವಾಗಿದೆ. 
ಅದರಲ್ಲೂ ಕರ್ನಾಟಕವಂತೂ ವಿವಿಧ ಭಕ್ತಿ ಪಂಥಗಳ ನೆಲೆಯಾಗಿದೆ. 
ಹರಿದಾಸ ಸಾಹಿತ್ಯದ ಆದ್ಯ ಪ್ರವರ್ತಕರು 13ನೇ ಶತಮಾನದಲ್ಲಿ ಶ್ರೀ ಹರಿಯ ಆಜ್ಞೆಯಂತೆ ಧರೆಗಿಳಿದು ಬಂದ - 99ನೇ ಋಜು ಪದಸ್ಥ " ಶ್ರೀ ಭಾವಿ ಬ್ರಹ್ಮದೇವರೂ - ಪ್ರಸ್ತುತ ಶ್ರೀ ಮನು ನಾಮಕ ವಾಯುದೇವರ ಅಂಶ ಸಂಭೂತರಾದ ಶ್ರೀಮನ್ಮಧ್ವಾಚಾರ್ಯರು.    
ಅವರಿಂದ ಪ್ರಾರಂಭಗೊಂಡ ಹರಿದಾಸ ಸಾಹಿತ್ಯದ ಬೆಳವಣಿಗೆಗೆ ನಾಂದಿ ಹಾಡಿದವರು ಶ್ರೀ ನರಹರಿತೀರ್ಥರು [ ಚಂದ್ರಾ೦ಶ ] . 
ಶ್ರೀ ನರಹರಿತೀರ್ಥರ ನಂತರ ದಾಸ ಸಾಹಿತ್ಯಕ್ಕೆ ಮೆರಗು ಕೊಟ್ಟವರು ಶ್ರೀ ಧ್ರುವಾಂಶ ಶ್ರೀಪಾದರಾಜರು. 
ಶ್ರೀ ಶ್ರೀಪಾದರಾಜರಿಂದ ಮುಂದುವರೆದ ಈ ಸಾಹಿತ್ಯದ ಉಜ್ವಲ ಪರಂಪರೆಯನ್ನು ಬೆಳೆಸಿದವರು ಶ್ರೀ ಶಂಖುಕರ್ಣಾವತಾರಿಗಳಾದ ಶ್ರೀ ವ್ಯಾಸರಾಜ ಗುರುಸಾರ್ವಭೌಮರು. 
ಶ್ರೀ ವ್ಯಾಸರಾಜರ ನೇತೃತ್ವದಲ್ಲಿ ದಾಸಕೂಟ ಪ್ರಾರಂಭವಾಯಿತು. 
96 ನೇ ಋಜು ಪದಸ್ಥ ಶ್ರೀ ಅವ್ಯಕ್ತಾಂಶ ಶ್ರೀ ವಿಜಯೀ೦ದ್ರತೀರ್ಥರು -  97 ನೇ ಋಜು ಪದಸ್ಥ " ಶ್ರೀ  ಗವ್ಯ " ರೆಂದು  ಪ್ರಖ್ಯಾತರಾದ ಶ್ರೀ ವೇದವೇದ್ಯಾತೀರ್ಥರು - 98 ನೇ ಋಜು ಪದಸ್ಥ ಶ್ರೀ ಲಾತವ್ಯಾಂಶ ಭಾವಿ ಸಮೀರ ವಾದಿರಾಜರು - ಶ್ರೀ ಯಮಾಂಶ ಕನಕದಾಸರು ಮತ್ತು ಶ್ರೀ ನಾರದಾಂಶ ಪುರಂದರದಾಸರು ಈ ದಾಸ ಕೂಟಕ್ಕೆ ಸೇರಿದವರು. 
ಶ್ರೀ ಪುರಂದರದಾಸರ ಕಾಲವಂತೂ ಹರಿದಾಸ ಸಾಹಿತ್ಯದ " ಸುವರ್ಣ ಕಾಲ " ವೆನ್ನುತ್ತಿದ್ದರು. 
ಇವರು ಸಾಮಾಜಿಕ ಮತ್ತು ಲೋಕ ನೀತಿಯ ಕುರಿತು ಖಡಾ ಖಂಡಿತವಾಗಿ ಆಡು ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿದ್ದಾರೆ. 
ಶ್ರೀ ಪುರಂದರದಾಸರ ಜಾಡಿನಲ್ಲಿಯೇ ಸಾಗಿದ ಮತ್ತೊಬ್ಬ ದಾಸ ಶ್ರೇಷ್ಠರೆಂದರೆ ಕವಿಸಾರ್ವಭೌಮ ಶ್ರೀ ಕನಕದಾಸರು. 
ಹೀಗೆ ಹರಿದಾಸರುಗಳಿಂದ ಬೆಳೆದು ಹೆಮ್ಮರವಾಗಿ ದಾಸ ಸಾಹಿತ್ಯವು ಫಲವೀಯ್ಯುತ್ತಾ ಪ್ರಥಮ ಘಟ್ಟದ ಬೆಳವಣಿಗೆಗೆ ಸಾಧನವಾಯಿತು. 
ದ್ವಿತೀಯ ಘಟ್ಟದಲ್ಲಿ ಶ್ರೀ ವಿಜಯರಾಯರು ಮತ್ತು ಅವರ ಶಿಷ್ಯ - ಪ್ರಶಿಷ್ಯ ಪರಂಪರೆ.
ತೃತೀಯ ಘಟ್ಟದಲ್ಲಿ ಶ್ರೀ ಪ್ರಾಣೇಶದಾಸರು ಮತ್ತು ಅವರ ಶಿಷ್ಯ ಪ್ರಶಿಷ್ಯರು 
ಈ ಪರಂಪರೆಯನ್ನು ಮುಂದುವರೆಸುವುದರೊಂದಿಗೆ ತಮ್ಮದೇ ಆದ ವೈಶಿಷ್ಟ್ಯ ಪೂರ್ಣವಾದ ಸಾಹಿತ್ಯದಿಂದ ಹರಿದಾಸ ಸಾಹಿತ್ಯವನ್ನು ಜಗತ್ತಿನಾದ್ಯಂತ ವಿಸ್ತರಿಸಿದ್ದಾರೆ. 
ದಾಸ ಸಾಹಿತ್ಯ ಎನ್ನುವುದು ವ್ಯಾಸ ಸಾಹಿತ್ಯದ ಇನ್ನೊಂದು ರೂಪ. 
ವ್ಯಾಸ ಸಾಹಿತ್ಯ ಎನ್ನುವುದು ಹಣ್ಣಿನಂತೆ. 
ದಾಸ ಸಾಹಿತ್ಯ ಎನ್ನುವುದು ಹಣ್ಣಿನ ರಸದಂತೆ. 
ಹಣ್ಣು ತಿನ್ನಲಾಗದಿದ್ದವರು ರಸವನ್ನು ಸುಲಭವಾಗಿ ಕುಡಿಯುವಂತೆ - ಸಂಸ್ಕೃತ ಬಾರದೇ ಇರುವ ಪಾಮರರಿಗೆ ದಾಸ ಸಾಹಿತ್ಯ ಒಂದು ವರದಂತೆ. 
" ಸುಧಾ ಓದು ಪದ ಮಾಡು " 
ಎನ್ನುವ ವಾಕ್ಯದಂತೆ ಪಂಡಿತರಿಗೂ ಕೂಡಾ ದಾಸ ಸಾಹಿತ್ಯ ಕ್ಲಿಷ್ಟವಾಗಬಹುದು. 
ಅಲ್ಲದೇ ಅವರವರ ಯೋಗ್ಯತೆಗೆ ತಕ್ಕಂತೆ ದಾಸ ಸಾಹಿತ್ಯ ಅರ್ಥವಾಗಬಹುದು. 
" ಶ್ರೀ ಶ್ಯಾಮಸುಂದರದಾಸರ ವಂಶ "
ಶ್ರೀ ಹರಿ ನಾರಾಯಣ  
         ।
ಶ್ರೀ ಮಹಾಲಕ್ಷ್ಮೀ 
          ।
ಶ್ರೀ ಬ್ರಹ್ಮ - ಶ್ರೀ ವಾಯುದೇವರು 
          ।
ಶ್ರೀ ಶ್ರೀಪಾದರಾಜರು 
          ।
ಶ್ರೀ ವ್ಯಾಸರಾಜರು 
          ।
ಶ್ರೀ ಪುರಂದರದಾಸರು 
          ।
ಶ್ರೀ ವಿಜಯರಾಯರು 
          ।
ಶ್ರೀ ಗೋಪಾಲದಾಸರು 
          ।
ಶ್ರೀ ಜಗನ್ನಾಥದಾಸರು 
          । 
ಶ್ರೀ ಶ್ಯಾಮಸುಂದರದಾಸರು 
" ಶ್ರೀ ಶ್ಯಾಮಸುಂದರದಾಸರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ಗುಂಡಾಚಾರ್ಯರು 
ತಂದೆ : ಶ್ರೀ ಶ್ಯಾಮಾಚಾರ್ಯರು 
ತಾಯಿ : ಸಾಧ್ವೀ ಕೊಪ್ರಮ್ಮ 
ಕಾಲ : ಕ್ರಿ ಶ 1896 - 1956 
ಕುಲ ಗುರುಗಳು : ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು 
ಸ್ವರೂಪೋದ್ಧಾರಕ ಗುರುಗಳು : ಶ್ರೀ ಜಗನ್ನಾಥದಾಸರು 
ಗುರುಗಳು : 
ಶ್ರೀ ಐಕೋರು ನರಸಿಂಹಾಚಾರ್ಯರು, ಶ್ರೀ ಅಸ್ಕಿಹಾಳ ಗೋವಿಂದದಾಸರು 
ಅಂಕಿತ : 
ಶ್ರೀ ಜಗನ್ನಾಥದಾಸರಿಂದ ಸ್ವಪ್ನಾಂಕಿತ " ಶ್ಯಾಮಸುಂದರವಿಠ್ಠಲ 
ಸಮಕಾಲೀನ ಯತಿಗಳು :
ಶ್ರೀ ಸುಶೀಲೇಂದ್ರತೀರ್ಥರು; ಶ್ರೀ ಸುವ್ರತೀಂದ್ರತೀರ್ಥರು; ಶ್ರೀ ಸುಯಮೀಂದ್ರತೀರ್ಥರು 
ಶಿಷ್ಯರು : 
ಶ್ರೀ ವಿಜಯಸಾರಥಿವಿಠಲ; ಶ್ರೀ ಲಕುಮೀಶದಾಸರು ( ಶ್ರೀ ಕುರುಡಿ ರಾಘವೇಂದ್ರಾಚಾರ್ಯರು ), ಶ್ರೀ ಅಭಿನವ ಪ್ರಾಣೇಶದಾಸರು; ಶ್ರೀ ಶ್ರೀಕರವಿಠಲ; ಶ್ರೀ ಪದ್ಮನಾಭವಿಠಲ ಮತ್ತು ಶ್ರೀ ಗುರು ಶ್ಯಾಮಸುಂದರದಾಸರು ( ಶ್ರೀ ಸುಶೀಲೇಂದ್ರಾಚಾರ್ಯರು ), 
ಉಪದೇಶ ಪಡೆದ ಶಿಷ್ಯರು :
ಮರತೇಡ್ ಶ್ರೀನಿವಾಸರಾಯರು, ಚೀಲಕಪರವೀ ಶ್ರೀ ನರಸಿಂಹದಾಸರು, ದಡದಲ ಶ್ರೀ ನರಸಿಂಗರಾಯರು ಮತ್ತು ದಡದಲ ಶ್ರೀ ಭೀಮಸೇನದಾಸರು ( ಶ್ರೀ ಮೋತಿದಾಸರು )
***
" ಶ್ರೀ ವರ್ತುಲಾರ್ಯ 2 " 
" ಶ್ರೀ ದಾಮೋದರದಾಸರೇ ಶ್ರೀ ಶ್ಯಾಮಸುಂದರದಾಸರು "
ಶ್ಯಾಮಸುಂದರದಾಸರು ಹಿಂದಿನ ಜನ್ಮದಲಿ ರಂಗ ಒಲಿದ ದಾಸರಾಯರಾದ ಶ್ರೀ ಜಗನ್ನಾಥದಾಸರ ಪುತ್ರರಾದ ಶ್ರೀ ದಾಮೋದರದಾಸರಾಗಿ ಅವತರಿಸಿ ಶ್ರೀ ಜಗನ್ನಾಥದಾಸರ ವದನಾರವಿಂದದಲ್ಲಿ ಹೊರಹೊಮ್ಮಿದ " ಹರಿಕಥಾಮೃತಸಾರ " ದ ಕೆಲವು ಸಂಧಿಗಳನ್ನು ಶ್ರೀ ದಾಸಾರ್ಯರ ಪರಮಾನುಗ್ರಹ ಬಲದಿಂದ ಬರೆದಿದ್ದರ ಫಲದಿಂದ ಶ್ರೀ ಶ್ಯಾಮಸುಂದರದಾಸರಾಗಿ ಅವತರಿಸಿದ್ದಾರೆ ಎಂಬುದನ್ನು ಈ ಕೆಳಗಿನ ಪ್ರಮಾಣಗಳು ಖಚಿತ ಪಡಿಸಿವೆ. 
ಶ್ರೀ ವಿಜಯಸಾರಥಿ ವಿಠಲರು.... 
ಹರಿಕಥಾಮೃತ ವಕ್ತಾರಃ ।
ಪರಮಾನುಗ್ರಹ ಸೂನುವೇ ।
ವರ ಕವಿ ಪಂಡಿತಾಚಾರ್ಯ ನಮೋ ನಮಃ ।।
ಶ್ರೀ ಶ್ರೀಕರ ವಿಠಲರು... 
ಮಾನವಿಯಧಾಮರಾ ಪ್ರೇಮದಾ ಸೂನೂ ।
ನೀನೆಂದು ಭಾವಿಸಿ ಸ್ತುತಿಪ ಜನರನ್ನು ತಾನೇ ।
ಶ್ರೀಕರವಿಠ್ಠಲ ಪೊರೆಯುವನು ವರ ಕಾಮಧೇನು ।।
ಶ್ರೀ ತಂದೆ ವೆಂಕಟೇಶ ವಿಠಲರು... 
ಮಾನವೀ ಗುರುವ ಪ್ರಸೂನ ಷಟ್ಟರಣ ಕವಿ ।
ಭಾನು ಹೃದ್ಯಾನವದ್ಯಾಭಿಮನ್ಯು ।
ಪ್ರಾಣ ಪ್ರಿಯ ತಂದೆ ವೆಂಕಟೇಶವಿಠಲನ್ನ ಪದ ।
ರೇಣಿನವನಿವನೆಂದು ಸುಮುಖನಾಗೋ ।।
ಶ್ರೀ ಶ್ಯಾಮ ಸುಂದರ ದಾಸರೇ ತಾವು ಶ್ರೀ ಜಗನ್ನಾಥದಾಸರ ಪುತ್ರರೆಂದು ಈ ಕೆಳಕಂಡ ಪ್ರಮಾಣಗಳಿಂದ ಸ್ಪಷ್ಟ ಪಡಿಸಿದ್ದಾರೆ. 
ಭೋ ದಾತಾ ಬಾರೋ 
ಗುರುವರ್ಯ ।। ಪಲ್ಲವಿ ।।
ನಂಬಿದೆ ನಾ ನಿನ್ನ ಪಾದ -
ಭೂನಾಥ ದಾಸಾಗ್ರಣೀ ।। ಅ. ಪ ।।
... ಪೋತನೋಳೀಪರಿ -
ಯಾತಕೆ ನಿರ್ದಯ ।
ತಾತನೆ ನಿಮಗಿದು -
ರೀತಿಯೇ ನೋಡೈ ।
ಸುತನಪರಾಧವ -
ಹಿತದಲಿ ಮನ್ನಿಸಿ ।
ಪಾತಕ ಬಿಡಿಸೋ -
ಮತಿ ಬೀರೋ ।।
ಇನ್ನೊಂದು ಪದದಲ್ಲಿ..... 
ಕರಾವ ಪಿಡಿ ಗುರುರಾಯಾ ।
ಶಿರ ಬಾಗಿ ಬೇಡುವೇ ।
ಪೊರೆಯೋ ಸತ್ಕವಿಗೇಯ ।।
ನೆರೆ ನಂಬಿದೆನೋ ನೀ ।
ಮರೆಯದಿರು ಶುಭ ಕಾಯ ಹೇ ।
ಸೂರಿವರ್ಯ ।। ಪಲ್ಲವಿ ।।
... ಮಂದ ನಾ ನಿಜವಯ್ಯಾ ।
ಸಂದೇಹವಿಲ್ಲದೇ ।
ಕುಂದು ಎಣಿಸದೆ ಜೀಯಾ ।
ಬಂದೆನ್ನ ಮನದಲಿ ।
ನಿಂದು ನೀ ಸಲಹಯ್ಯಾ ।
ವಂದಿಪೆನು । ಶ್ರೀ ಪು ।।
ರಂದರಾರ್ಯರ ಪ್ರಿಯಾ ।
ಆನಂದ ನಿಲಯಾ ।
ಅಂದು ಸ್ವಪ್ನದಿ ।
 ವಚನವು ತಂದೆಯೇ ।
ಇಂದಿಲ್ಲಿ ಪೋಯಿತು ।
ನಂದ ನಂದನನಾದ । ಶ್ರೀ ಗೋ ।
ವಿಂದ ಶ್ಯಾಮ-
ಸುಂದರನ ವಿಧೇಯಾ ।।
ಮತ್ತೊಂದು ಕೃತಿಯಲ್ಲಿ.... 
ಮಾನಿತ ನಿನಗನು ।
ಮಾನವ್ಯಾತಕೆ ತವ ।
ಸೋನು ನಾನಲ್ಲವೇ ।
ಮಾನವಿ ನಿಲಯನೇ ।।
" ಶ್ರೀ ರಾಘವೇಂದ್ರತೀರ್ಥರ ಕಾರುಣ್ಯ "
ಅಂದಿನ ಸಮಾಜದಲ್ಲಿ ಸುಪ್ರಸಿದ್ಧರು ಶ್ರೀ ಪ್ರಹ್ಲಾದಾವತಾರಿಗಳಾದ ಶ್ರೀ ರಾಘವೇಂದ್ರತೀರ್ಥರ ಅತ್ಯಂತ ಪ್ರಿಯರಾದವರು ಶ್ರೀ ಅಹ್ಲಾದಾಂಶ ಶ್ರೀ ಗುರು ಜಗನ್ನಾಥದಾಸರು. 
ಶ್ರೀ ವಿಜಯರಾಯರ ಪರಂಪರೆಗೆ ಸೇರಿದ ಶ್ರೀ ಜಗನ್ನಾಥದಾಸರ ಪರಮಾನುಗ್ರಹಕ್ಕೆ ಪಾತ್ರರಾದ ಶ್ರೀ ಗುರು ಜಗನ್ನಾಥದಾಸಾರ್ಯರು " ಕೋಸಿಗಿ ಮುತ್ಯಾ " ಯೆಂಬ ಹೆಸರಿನಲ್ಲಿ ಎಲ್ಲಾ ಸಾತ್ವಿಕ ಜನ ಮಾನಸದಲ್ಲಿ ಗುರು ಸ್ಥಾನವನ್ನು ಪಡೆದಿದ್ದರು. 
" ಹರಿಕಥಾಮೃತಸಾರ " ವನ್ನು ತಮ್ಮ ಪ್ರತಿ ರಕ್ತದ ಕಣದಲ್ಲೂ ತುಂಬಿಕೊಂಡ ಕೋಸಿಗಿ ಮುತ್ಯಾ ಅವರು ಶ್ರೀ ಜಗನ್ನಾಥದಾಸರ ದರ್ಶನಾಕಾಂಕ್ಷಿಗಳಾಗಿ ಮಾನವಿಗೆ ಬಂದರು. 
ಶ್ರೀ ದಾಸಾರ್ಯರ ಆಗಮನವನ್ನರಿತ ಶ್ರೀ ಶ್ಯಾಮಾಚಾರ್ಯ ದಂಪತಿಗಳು ತಮ್ಮ ಮಗನ ಕರೆತಂದು ಅವರ ಅಡಿದಾವರೆಗಳಲ್ಲಿಟ್ಟು ದುಃಖವನ್ನು ತೋಡಿಕೊಂಡರು. 
ಶ್ರೀ ಗುರು ಜಗನ್ನಾಥದಾಸರು ಮಮತೆಯಿಂದ ಮಗುವಿನ ತಲೆಯ ಮೇಲೆ ಕೈಯಾಡಿಸುತ್ತಾ... 
ಶ್ಯಾಮಾಚಾರ್ಯರೇ! ನಿಮ್ಮ ಮಗನು ಭಗವದನುಗ್ರಹದಿಂದ ನಿರಂತರ ಆಧ್ಯಾತ್ಮಿಕ ತತ್ತ್ವಗಳನ್ನಾಡಬಲ್ಲ ವರ ಕವಿಯಾಗುವನು. ಇವನು ಬೂದಿ ಮುಚ್ಚಿದ ಕೆಂಡ " ಎಂದು ಹರಿಸಿದರು.
ಶ್ರೀ ಗುರು ಜಗನ್ನಾಥದಾಸರ ಪರಮಾನುಗ್ರಹದಿಂದ ಗುಂಡಾಚಾರ್ಯರು ಕೆಲವೇ ತಿಂಗಳಗಳಲ್ಲಿ ಸ್ವಚ್ಛವಾಗಿ ಮಾತನಾಡಲು ಪ್ರಾರಂಭಿಸಿದನು . 
" ಮೂಕೋಪಿಯತ್ಪ್ರಸಾದೇನ 
ಮುಕುಂದ ಶಯನಾಯತೇ.... "
ಎಂಬಂತೆ ಶ್ರೀ ರಾಘವೇಂದ್ರತೀರ್ಥರು ಹಾಗೂ ಶ್ರೀ ಜಗನ್ನಾಥದಾಸರು ಶ್ರೀ ಗುರು ಜಗನ್ನಾಥದಾಸರನ್ನು ಮಾಧ್ಯಮವನ್ನಾಗಿಟ್ಟುಕೊಂಡು ಗುಂಡಾಚರ್ಯರ ಮೇಲೆ ತೋರಿದ ಕಾರುಣ್ಯ. 
ಕಾರಣ ಶ್ರೀ ಪ್ರಹ್ಲಾದರಾಜರೇ ಶ್ರೀ ರಾಘವೇಂದ್ರತೀರ್ಥರು - ಶ್ರೀ ಸಹ್ಲಾದರಾಜರೇ ಶ್ರೀ ಜಗನ್ನಾಥದಾಸರು - ಶ್ರೀ ಆಹ್ಲಾದರಾಜರೇ ಶ್ರೀ ಗುರು ಜಗನ್ನಾಥದಾಸರು ಮತ್ತು ಶ್ರೀ ಜಗನ್ನಾಥದಾಸರ ಪುತ್ರರಾದ ಶ್ರೀ ದಾಮೋದರದಾಸರೇ ಶ್ರೀ ಶ್ಯಾಮಸುಂದರದಾಸರಾಗಿ ಅವತಾರ ಮಾಡಿದ್ದಾರೆಂದ ಮೇಲೆ ಜ್ಞಾನಿತ್ರಯರ ಕಾರುಣ್ಯಕ್ಕೆ ವಿಶೇಷವಾಗಿ ಪಾತ್ರರಾದವರು ಶ್ರೀ ಗುಂಡಾಚಾರ್ಯರು!!
" ಅಂಕಿತ ಪ್ರದಾನ "
ಅದೊಂದು ಶುಭ ಸಮಯ. ಶ್ರೀ ಗುಂಡಾಚಾರ್ಯರ ಸ್ವಪ್ನದಲ್ಲಿ ಶ್ರೀ ಜಗನ್ನಾಥದಾಸರು ಕಾಣಿಸಿಕೊಂಡು " ಶ್ಯಾಮಸುಂದರವಿಠಲ " ಎಂಬ ಅಂಕಿತ ನಾಮವನ್ನು ಕರುಣಿಸಿ ಅನುಗ್ರಹಿಸಿದರು. 
ಶ್ರೀ ಗುಂಡಾಚಾರ್ಯರ ವದನಾರವಿಂದದಿಂದ ಭಗವನ್ಮಹಿಮಾ ಪ್ರತಿಪಾದಕವಾದ - ವೇದಾಂತ ರಹಸ್ಯಗಳಿಂದ ಕೂಡಿದ ಕವಿತಾ ತರಂಗಿಣಿಯು ಹೊರಹೊಮ್ಮಿತು. 
ಅಂದಿನಿಂದ ಶ್ರೀ ಗುಂಡಾಚಾರ್ಯರು " ಶ್ರೀ ಶ್ಯಾಮಸುಂದರವಿಠಲ " ರೆಂದು ಪ್ರಸಿದ್ಧಿಯಾದರು. 
" ವರ ಕವಿಗಳಿಂದ ವರ ಕವಿಗಳಿಗೆ ಸ್ವಾಗತ "
ಕವಿ ದ ರಾ ಬೇಂದ್ರೆಯವರನ್ನು ಕುರಿತ ಹಾಡು ಸುಂದರವಾಗಿದೆ. 
ಮಾನವಿಯಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನಕ್ಕೆ ಬರುವಂತೆ ವ್ಯವಸ್ಥಾಪಕರು ಮಾಡಿಕೊಂಡ ಮನವಿಯನ್ನು ಕವಿ ಬೇಂದ್ರೆಯವರು ಮನ್ನಿಸದಿದ್ದುದಕ್ಕೆ ಇಡೀ ಸಮ್ಮೇಳನದ ಉತ್ಸಾಹವು ಕುಗ್ಗಿದ್ದನ್ನರಿತ ಶ್ರೀ ಶ್ಯಾಮಸುಂದರದಾಸರು ಕವಿ ಬೇಂದ್ರೆಯವರಿಗೆ ಮಾನವಿಗೆ ಬರುವಂತೆ ಆಹ್ವಾನಿಸಿ ಒಂದು ಸ್ವಾಗತ ಪದವನ್ನು ಬರೆದು ಧಾರವಾಡಕ್ಕೆ ಕಳುಹಿಸಿದರು. 
ಸ್ವಾಗತ ಪದದಲ್ಲಿ ನಿರೂಪಿತ ಸಾಹಿತ್ಯ ಸತ್ವವನ್ನು ಓದಿದ ಕವಿ ಬೇಂದ್ರೆಯವರು ಕೂಡಲೇ ಮಾನವಿಗೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು. 
ಸತ್ಕವೀಂದ್ರ ಬಾ ಬೇಂದ್ರೆ -
ಸುಗುಣ ಸಾಂದ್ರ ।। ಪಲ್ಲವಿ ।।
ನಮ್ಮ ಮಾನವಿ ಸ್ಥಳದಿ -
ಅಚ್ಛಗನ್ನಡದ ನುಡಿಯ ।
ಸಮ್ಮಿಲನ ಸಾಗಿಸಲು ನಿಶ್ಚಯಿಸಿದೆ ।
ನಿಮ್ಮ ಬರುವಿಕೆ ಬಯಕೆ ।।
ಇಮ್ಮಡಿಸಿಹುದೆಮಗೆ ।
ಸಮ್ಮತಿಸಿ । ಬಾರ ।
ಯ್ಯ ಸತ್ಕವೀಂದ್ರ ಶ್ರೀ -
ಬೇಂದ್ರೆ ಸುಗುಣೇಂದ್ರ   ।। ಚರಣ ।।
... ಪ್ರೇಮದಿಂದಲಿ ನಿನ್ನ -
ಕಾಮಿತಾರ್ಥವಗರೆದು ।
ಶ್ಯಾಮಸುಂದರವಿಠಲ -
ಸಲಹೋ ಎಂದು ।
ನಾಮದಡಿ ಪ್ರಾರ್ಥಿಸುವೆ -
ನೀ ಮಾಡ್ವ ಉಪಕಾರ ।।
" ಶ್ರೀ ಜಗನ್ನಾಥದಾಸರೇ ಸಾರಸರ್ವಸ್ವ "
ಅನೇಕ ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸಿದ ಇವರಿಗೆ ಮಾನವಿಯಲ್ಲಿ ಎಲ್ಲಿಲ್ಲದ ಅಭಿಮಾನ. 
ಅದೇ ಅವರ ಪಾಲಿಗೆ ಸಕಲ ತೀರ್ಥ ಕ್ಷೇತ್ರಗಳ ಪವಿತ್ರ ನಿಲಯ. 
ಇದಕ್ಕೆ ಒಡೆಯರಾದ ಶ್ರೀ ಜಗನ್ನಾಥದಾಸರೇ ಇವರ ಪಾಲಿಗೆ ತಂದೆ, ತಾಯಿ, ಬಂಧು, ಬಳಗ, ಗುರು, ದೈವ ಎಲ್ಲವೂ ಆಗಿದ್ದಾರೆ. 
ಶ್ಯಾಮಸುಂದರದಾಸರು ತಮ್ಮ ಒಂದು ಸುಳಾದಿಯಲ್ಲಿ.... 
ಇವರ ಸಂದರುಶನ ಭಾವ ಬಂಧ ಮೋಚನ । ಇವರ ಚರಣ ಧ್ಯಾನ ಗಂಗಾ ಸ್ನಾನ । ಇವರನ್ನ ಸಾರಿದರೆ ಜವಾನ ಅಂಜಿಕೆಯುಯಿಲ್ಲ । ಇವರ ಕವನ ಸ್ತವನ ಶ್ರವಣದಿಂದ । ಪವನ ಸಚ್ಛಾಸ್ತ್ರದ ಪವಚನ ಫಲವಕ್ಕು ।ಇವರಿಪ್ಪ ಸ್ಥಳ ಕಾಶೀ ರಾಮೇಶ್ವರ । ಇವರಲ್ಲಿ ಸಮಸ್ತ ದಿವಿಜರು ನೆಲೆಸಿದ್ದು । ಇವರಿಂದ ವಚನವ ನಡೆಸುವರು । ಇವರಿಲ್ಲಿರಲು ಬಿಟ್ಟು ಅವನಿ ಸುತ್ತಿದವರಿಗೆ । ಆವಲೇಶವಾದರೂ ಪುಣ್ಯವಿಲ್ಲ । ಇವರನುಗ್ರಹವಾಗೆ ಶ್ರೀ ಶ್ಯಾಮಸುಂದರನು । ತವಕದಿಂದ ಕರ ಪಿಡಿದು ಸಲಹುವ ಸರ್ವದಾ ।।
" ನಿರ್ಯಾಣ "
ಪೂರ್ಣವಾದ ಹರಿದಾಸ ಸಾಹಿತ್ಯದ ಭಾಂಡಾಗಾರವನ್ನು ತಮ್ಮ ಕೃತಿ ರತ್ನಗಳಿಂದ ಪೂರ್ಣ ಮಾಡಿದ ಮಹನೀಯರು. 
ನಿಗೂಢವಾದ ಸಾಧನೆಯನ್ನು ಮಾಡಿ ಕಾರಣ ಜನ್ಮರಾದ ಶ್ರೀ ಶ್ಯಾಮಸುಂದರದಾಸರು ದುರ್ಮುಖಿ ನಾಮ ಸಂವತ್ಸರದ ವೈಶಾಖ ಶುದ್ಧ ನವಮೀ ಶುಕ್ರವಾರ ವೈಕುಂಠಕ್ಕೆ ತೆರಳಿದರು. 
ರಾಗ : ಭೈರವಿ   ತಾಳ : ಆದಿ 
ತೆರಳಿದರು ತೆರಳಿದರು -
ಹರಿಯ ಪುರಕೆ ।
ಪುರ ಬಲ್ಲಟಗಿಯ ವರಕವಿ-
ಶ್ಯಾಮಸುಂದರರು ।। ಪಲ್ಲವಿ ।।
ವೀರ ವೈಷ್ಣವರಲ್ಲಿ -
ಜನಿಸುತಲಿ ಮಾನವಿಯ ।
ಧಾರುಣಿಪ ದಾಸರ -
ಒಲಿಮೆ ಪಡೆದು ।
ಈರ ಮತ ತತ್ತ್ವಗಳ ।
ಪಾರ ಮಹಿಮೆಗಳ -
ಚಾರು ಪದ ಪದ್ಯದಿಂ ।
ಸಾರಿ ನಲಿದವರು  ।। ಚರಣ ।।
ಮೂಕ ಬಧಿರರ ತೆರದಿ ।
ಲೋಕಕ್ಕೆ ತೋರುತಲಿ ।
ಕಾಕು ವ್ರುತ್ತಿಗಳನು ನೂಕಿ ಮೆಟ್ಟಿ ।
ಈ ಕುಂಭಿಣಿಯೊಳು ।
ಸಾಕೆಂದು ತ್ವರಿತದಲಿ ।
ಕಾಕೋದರಾಗ್ರಾಜನ -
ನಾಮ ಘರ್ಜನೆಗೈದು   ।। ಚರಣ ।।
ದುರ್ಮುಖ ಸಂವತ್ಸರದಿ । ವೃಷ ।
ಭ ಮಾಸದ  । ಶು ।
ಕ್ಲ ಮೂರು ತಿಥಿ =
ಶುಕ್ರವಾರ ಹಗಲು ।
ನಿರ್ಮಲಾನಂದದಿ -
ಲಯವನ್ನು ಚಿಂತಿಸುತ ।
ಭರ್ಮಪಿತ ಅಭಿನವ -
ಪ್ರಾಣೇಶವಿಠಲನ್ನ -
ನೆನೆಯುತ ।। ಚರಣ ।।
ಜಗನ್ನಾಥ ಗುರೋರ್ದಾಸಂ 
ಜಗದಾನಂದಕಾರಕಂ ।
ಶ್ಯಾಮಸುಂದರದಾಸಾರ್ಯಂ 
ವಂದೇ ಸುಜ್ಞಾನದಾಯಕಮ್ ।।
by ಆಚಾರ್ಯ ನಾಗರಾಜು ಹಾವೇರಿ 
     ಗುರು ವಿಜಯ ಪ್ರತಿಷ್ಠಾನ
******




 (ವೈಶಾಖ ಶುದ್ಧ ನವಮಿ)

ಜಗನ್ನಾಥ ಗುರೋರ್ದಾಸಂ ಜಗದಾನಂದಕಾರಕಂ/
ಶ್ಯಾಮಸುಂದರ ದಾಸಾರ್ಯಂ ವಂದೇ ಸುಜ್ಞಾನದಾಯಕಮ್//
 ಶ್ರೀಮದ್ರಾಘವೇಂದ್ರತೀರ್ಥ ಗುರುಸಾರ್ವಭೌಮರ, ಶ್ರೀ ಮಾನವಿ ಪ್ರಭುಗಳ ಪರಮ ಅನುಗ್ರಹವನ್ನು ಪಡೆದವರು, ಮಹಾನ್ ಸಾಧಕರಾದ ಶ್ರೀ ಐಕೂರು ನರಸಿಂಹಾಚಾರ್ಯರ , ಶ್ರೀ ಅಸ್ಕಿಹಾಳ ಗೋವಿಂದದಾಸರ ಶಿಷ್ಯರು, ಶ್ರೀ ಶೇಷದಾಸರನ್ನು ಭಕ್ತಿಯಿಂದ ಸ್ತುತಿಸಿದವರು, ಸತ್ಯನಾರಾಯಣ ಕಥೆ ಎನ್ನುವ ಮೇರು ಕೃತಿಯಲ್ಲದೆ ಅನೇಕ ಸುಂದರ, ತತ್ವಗರ್ಭಿತ ಕೃತಿಗಳೊಂದಿಗೆ ತಾರತಮ್ಯೋಕ್ತವಾಗಿ ಕೃತಿ ರಚನೆ ಮಾಡಿದವರು,  ಶ್ರೀ ಗುರುಜಗನ್ನಾಥವಿಠಲರಿಂದ ಅನುಗ್ರಹೀತರಾದವರು, ಶ್ರೀ ಜಗನ್ನಾಥ ದಾಸರಿಂದಲೆ ಸ್ವಪ್ಪದಲ್ಲಿ  ಅಂಕಿತೋಪದೇಶವನ್ನು ಪಡೆದವರೂ, ಹಾಗೆ ಶ್ರೀ ಅಭಿನವಪ್ರಾಣೇಶರು, ಶ್ರೀ ವಿಜಯಸಾರಥಿವಿಠಲರು, ಶ್ರೀ ಪದ್ಮನಾಭದಾಸರು,  ಶ್ರೀ ಶ್ರೀಕರವಿಠಲರು,  ಶ್ರೀ ಲಕುಮೀಶ ದಾಸರು, ಶ್ರೀ ಗುರುಶ್ಯಾಮಸುಂದರರೇ ಮೊದಲಾದ ಉತ್ತಮ ದಾಸ ಶಿಷ್ಯರಿಗೆ ಅನುಗ್ರಹ ಮಾಡಿದವರೂ,  ದ್ವಾರವಾಡದ ವೆಂಕಟರಮಣನ ಸ್ತುತಿಸಿ ಅನುಗ್ರಹ ಪಡೆದವರು,  ಶ್ರಿಮದ್ಹರಿಕಥಾಮೃತಸಾರವನ್ನು ಜೀವನ ಪರ್ಯಂತ ಬಿಡದೆ ಪಾರಾಯಣ, ಅರ್ಥಾನುಸಂಧಾನ ಮಾಡಿದವರೂ,  ಸದಾ ಶ್ರೇಷ್ಠ ಹರಿದಾಸರ ಕೃತಿಗಳ ಚಿಂತನೆಯಲ್ಲಿಯೇ ನಿರತರಾಗಿದ್ದವರಾದ ಶ್ರೀ ಶ್ಯಾಮಸುಂದರದಾಸರ ಮಧ್ಯಾರಾಧನೆ ಇಂದು. ಇವರು ಶ್ರೀ ಜಗನ್ನಾಥ ದಾಸಾರ್ಯರ ಪುತ್ರರು ದಾಮೋದರ ದಾಸರೆಂದು ತಾವೇ ತಮ್ಮ ಕೃತಿಗಳಲ್ಲಿ ಹೇಳಿರುತ್ತಾರೆ. ಜೊತೆಗೆ ಅವರ ಶಿಷ್ಯರೂ, ಮತ್ತಿತರ ದಾಸರು ಅವರ ಕೃತಿಗಳಲ್ಲಿ ಉಲ್ಲೇಖಮಾಡಿದ್ದಾರೆ. 
ಹರಿಕಥಾಮೃತಸಾರ ವಕ್ತಾರಃ
ಪರಮಾನುಗ್ರಹ ಸೂನುವೇ
ವರಕವಿ ಪಂಡಿತಾಚಾರ್ಯ ನಮೋನಮಃ 
ಶ್ರೀ ವಿಜಯಸಾರಥಿವಿಠಲರು
ಮಾನವೀ ಗುರುವ ಪ್ರಸೂನ
ಷಟ್ಟರಣ ಕವಿ ಭಾನು ಹೃದ್ದ್ಯಾನವದ್ಯಾಭಿಮನ್ಯು ಪ್ರಾಣ ಪ್ರಿಯ
- ಶ್ರೀ ತಂದೆವೆಂಕಟೇಶವಿಠಲರು 
ಮೊದಲೇ ಇನ್ನಿತರ ಶಿಷ್ಯರು, ದಾಸರುಗಳು ಹಾಡಿ ಹೊಗಳಿರುವುದನ್ನು ಮನದಲ್ಲಿಟ್ಟು
 ಶ್ರೀ ಮಾನವಿ ಗುಂಡಾಚಾರ್ಯರ (ಶ್ರೀ ಶ್ಯಾಮಸುಂದರದಾಸರ) ಮಧ್ಯಾರಾಧನಾ ಮಹೋತ್ಸವವನ್ನು  ಭಕ್ತಿಯಿಂದ  ಆಚರಿಸೋಣ... 

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
*******

" ಶ್ರೀ ಶ್ಯಾಮಸುಂದರ - ೩ "
ದಿನಾಂಕ : 13.05.19 ಸೋಮವಾರ ಶ್ರೀ ಶ್ಯಾಮಸುಂದರದಾಸರ ಆರಾಧನಾ ಮಹೋತ್ಸವ!!!
ಶ್ರೀ ರಾಯರ - ಶ್ರೀ ಜಗನ್ನಾಥದಾಸರ - ಶ್ರೀ ಐಕೂರು ಆಚಾರ್ಯರ - ಶ್ರೀ ಅಸ್ಕಿಹಾಳ ಗೋವಿಂದದಾಸರ ಕಾರಣ್ಯ ಪಾತ್ರರಾದ ಶ್ರೀ ಶ್ಯಾಮಸುಂದರದಾಸರ ಕುರಿತು ಮತ್ತಷ್ಟು ಮಾಹಿತಿ....
" ಆಶು ಕವಿಗಳ ಕಾವ್ಯ ಪ್ರತಿಭೆ "
ಶ್ರೀ ಗುಂಡಾಚಾರ್ಯರು ( ಶ್ರೀ ಶ್ಯಾಮಸುಂದರದಾಸರು ) ವರಕವಿ. ಕಾವ್ಯ ರಚನಾ ಪ್ರತಿಭೆಯು ಅವರಿಗೆ ಬಾಲ್ಯದಿಂದಲೇ ಅಂಕುರಿಸಿತ್ತು. ಮೂರನೆಯ ವರ್ಗದಲ್ಲಿ ಓದುತ್ತಿದ್ದಾಗ ಒಮ್ಮೆ ಶಾಲೆಗೇ ಶಿಕ್ಷಣ ವಿಭಾಗಾಧಿಕಾರಿಯು ಪರ್ಯವೇಕ್ಷಣೆಗಾಗಿ ಬಂದನು. ಶಾಲೆಯ ಅಧ್ಯಾಪಕರಾದ ಶ್ರೀ ವೆಂಕಪ್ಪನವರು ಹುಡುಗರಿಂದ ಒಳ್ಳೇ ಕವಿತೆಯನ್ನು ಹಾಡಿಸಿ ಆ ಅಧಿಕಾರಿಯನ್ನು ಸ್ವಾಗತಿಸಬೇಕೆಂಬ ಆಸೆ. ಆದರೆ ಆ ಕ್ಷಣದಲ್ಲಿ ಸುಂದರವಾದ ಕವಿತೆಯನ್ನು ರಚಿಸುವವರ್ಯಾರು?
ಅವರು ತಮ್ಮ ಅಪೇಕ್ಷೆಯನ್ನು ಮಕ್ಕಳ ಮುಂದೆ ಹೇಳಿದರು. ಆ ಕ್ಷಣದಲ್ಲಿ ಶ್ರೀ ಗುಂಡಾಚಾರ್ಯರು ಒಂದು ಸುಂದರವಾದ ಸ್ವಾಗತದ ಹಾಡನ್ನು ರಚಿಸಿ ಗುರುಗಳಿಗೆ ಗುರು ದಕ್ಷಿಣೆಯ ರೂಪದಲ್ಲಿ ಕೊಟ್ಟರು.
ಶ್ರೀ ಗುಂಡಾಚಾರ್ಯರಲ್ಲಿರುವ ಕವಿತಾ ಶಕ್ತಿಯನ್ನು ಕಂಡು ಗುರುಗಳು ಬೆರಗಾದರು. ಅಧಿಕಾರಿಯೂ ಸಹ ರಚನೆಯಲ್ಲಿರುವ ಶಬ್ದ ಲಾಲಿತ್ಯವನ್ನೂ; ಅರ್ಥ ಗಾಂಭೀರ್ಯವನ್ನೂ ಕಂಡು ಬಹಳ ಸಂತೋಷಪಟ್ಟರು. ಅಲ್ಲಿಯ ವರೆಗೂ ಶ್ರೀ ಗುಂಡಾಚಾರ್ಯರಲ್ಲಿ ಸುಪ್ತವಾಗಿದ್ದ ಕವಿತಾ ಶಕ್ತಿಯು ಅಂದಿನಿಂದ ಪ್ರಕಟವಾಗ ಹತ್ತಿತು. ಶ್ರೀ ಗುಂಡಾಚಾರ್ಯರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾನವಿಯಲ್ಲೇ ಪೂರ್ತಿ ಮಾಡಿ ಮುಂದಿನ ವಿದ್ಯಾಭ್ಯಾಸವನ್ನು ನಿಲ್ಲಿಸಿ ತಂದೆಗೆ ಪೌರೋಹಿತ್ಯದಲ್ಲಿ ಸಹಾಯಕರಾಗಿದ್ದರು.
" ಪುಣ್ಯ ಜೀವಿಗಳು "
ಪುಣ್ಯ ಜೀವಿಗಳು ಪ್ರಾರಬ್ಧ ಕರ್ಮಗಳನ್ನು ಸವಿಸಲೆಂದೇ ಭೂಮಿಯ ಮೇಲೆ ಜನ್ಮ ತಾಳುತ್ತಾರೆ. ಪ್ರಾರಬ್ಧ ಕರ್ಮಾನುಸಾರ ಅವರು ನಿಂದ್ಯಾ ಕರ್ಮಗಳನ್ನು ಮಾಡುತ್ತಾರೆ. ದೇಹಕ್ಕೆ ಅಂಟಿಕೊಂಡ ತಮ್ಮ ಕರ್ಮಗಳನ್ನು ಭಗವಂತನಿಗೆ ಅರ್ಪಿಸಿ ಅಂತರಂಗವನ್ನು ಶುಚಿಯಾಗಿಟ್ಟು ಕೊಳ್ಳುತ್ತಾರೆ.
ಶ್ರೀ ಗುಂಡಾಚಾರ್ಯರು ಮಾನವಿ ಮುನಿಪುಂಗವರಾದ ಶ್ರೀಸಹ್ಲಾದಾಂಶ ಜಗನ್ನಾಥದಾಸರಿಗೆ ಸಂಪೂರ್ಣವಾಗಿ ಶರಣಾಗತರಾಗಿ ಅವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಿದ್ದರು. ಶ್ರೀ ಜಗನ್ನಾಥದಾಸರನ್ನು ಮನತುಂಬಿ ಸ್ತುತಿಸಿ, ಕೀರ್ತಿಸಿ ಕೊಂಡಾಡಿದ್ದಾರೆ.
ರಾಗ : ದೇಶ್ ತಾಳ : ತ್ರಿತಾಳ
ರಂಗವಲಿದ ರಾಯ ನೀ । ಸ ।
ತ್ಸಂಗ ಪಾಲಿಸಯ್ಯಾ ।। ಪಲ್ಲವಿ ।।
ಬುಧ ಜನ ನುತ ಮನುಜ । ಪಂಚ ।
ವದನಾರ್ಯರ ತನುಜ ।
ಪದಯ ನಿನ್ನಯ ಪದ ।।
ಪದುಮವ ಭಜಿಸಿದೆ ।
ಅಧಮನಾದೆ ನಾ ಸದಮಲಕಾಯ ।। ಚರಣ ।।
ನುತಿಸುವೆ ಜಗದೊಡೆಯ ನಾಮಕ ।
ಸತತ ಪಿಡಿಯೊ ಕೈಯ್ಯ ।
ಕ್ಷಿತಿಯೊಳು ಪೂರ್ವದಿ ।।
ಪತಿತರ ಸಲಹಲು ।
ಶತಕ್ರತುರಾಯರ ಸುತನೆನಿಸಿದ ಗುರು ।। ಚರಣ ।।
ವೃಂದಾರಕಸ್ತೋಮ ವಂದಿತ ।
ನಂದನಂದನ । ಶ್ಯಾಮ ।
ಸುಂದರನೊಲಿಮೆಲಿ ।।
ಛಂದದಿ ಸ್ತಂಭ । ಸು ।
ಮಂದಿರದೊಳು ನಿಂದು ಮೆರೆದ ಗುರು ।। ಚರಣ ।।
" ಶ್ರೀ ಶ್ಯಾಮಸುಂದರದಾಸರ ಕಣ್ಣಲ್ಲಿ ಗುರುಗಳಾದ ಶ್ರೀ ಐಕೋರು ನರಸಿಂಹಾಚಾರ್ಯರು "
ಶ್ರೀಮನ್ಮಧ್ವಮತದ ಪಂಡಿತರ ಜೀವನದ ಉಸಿರು ಶ್ರೀಮದ್ಭಾಗವತ ಮಹಾ ಪುರಾಣ. ಅದರ ಅಧ್ಯಯನವೇ ಜೀವನದ ಸಾರ್ಥಕತೆ. ಅದರ ಶ್ರವಣವೇ ಜೀವನದ ಧನ್ಯತೆ. ಶ್ರೀ ಹರಿಯ ದಾಸನಗುವುದೇ ಸಾಧನೆಯ ಗುರಿ. ಶ್ರೀ ಮದ್ಭಾಗವತ ಎಲ್ಲರ ಬದುಕಿನ್ನು ಧರ್ಮದ ದಾರಿಯಲ್ಲಿ ನಡೆಸುವುದು. ತಮ್ಮ ಆತ್ಮೋದ್ಧಾರದ ಜೊತೆಯಲ್ಲಿ ತನ್ನವರೆಲ್ಲರನ್ನೂ ಉದ್ಧಾರ ಮಾಡಬೇಕು. ಇದುವೇ ಫಲವಿದು ಬಾಳ್ದುದಕೆ.
ಅಂತೆಯೇ " ದೇಹ ಸಂಬಂಧಿಭಿಃ ವಿದ್ಯಾ ಸಂಬಂಧಿಭಿಃ.... ಕರಿಷ್ಯೇ ಕಾರಯಿಷ್ಯೇ ಚ " ಎಂದು ಶ್ರೀ ಮಂತ್ರಾಲಯ ಪ್ರಭುಗಳ ವಾಣಿ.
" ದೇಹ ಸಂಬಂಧಿಕರೂ ಅಂದರೆ ಪೀಠಾಧಿಪತಿಗಳು ಮತ್ತು ವಿದ್ಯಾ ಸಂಬಂಧಿಕರು ಅಂದರೆ ದುರಹಂಕಾರವಿಲ್ಲದ ಸಾತ್ವಿಕ ವಿದ್ಯೆಯ ಮುಖಾಂತರ ಸಂಬಂಧಿಗಳಾದ ಸಜ್ಜನರ ಎಲ್ಲರಿಂದಲೂ ಸತ್ಕರ್ಮ; ಧರ್ಮ ಮಾಡಿಸುವೆ - ನಾನು ಮಾಡುವೆ.ಇದು ಬದುಕಿನ ಸಂಕಲ್ಪ!!
ಈ ರೀತಿ ಬಾಳಿದ ಭಾಗವತರ ಪರಂಪರೆಯಲ್ಲಿ ಬಂದ ಸಾಧಕರೂ; ದೈವೀ ಪುರುಷರೂ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಐಕೋರು ನರಸಿಂಹಾಚಾರ್ಯರು. ಸಮಗ್ರ ಮಧ್ವ ಶಾಸ್ತ್ರ ತಿಳಿದ ಪಂಡಿತೋತ್ತಮರೂ - ಭಗವದ್ಭಕ್ತರೂ, ಬಿಂಬೋಪಾಸಕರೂ, ಅನುಸಂಧಾನ ಚತುರರೂ; ಶ್ರೀಮದ್ಭಾಗವತ ಧುರೀಣರೂ; ಪ್ರಭಾವಕಾರಿವ್ಯಾಖ್ಯಾನಕಾರರು. ಕೇವಲ ಶ್ರೀಮದ್ಭಾಗವತ ಹೇಳುವವರಲ್ಲ. ಅದರಂತೆ ಬಾಳಿದವರು.
ಶ್ರೀಮಧ್ಭಾಗವತ ಇವರ ಅಸ್ಥಿಗತವಾಗಿತ್ತು. ಇವರ ದೇಹದಲ್ಲಿರುವ ಪ್ರತಿಯೊಂದು ಅಸ್ಥಿ ಶ್ರೀಮದ್ಭಾಗವತ ಶ್ಲೋಕಗಳನ್ನು ಹೇಳುತ್ತಿತ್ತಂತೆ. ಇದು ಶ್ರೀ ಐಕೋರು ಆಚಾರ್ಯರ ಸಂಪರ್ಕದಲ್ಲಿ ಇದ್ದ ಸಜ್ಜನರಿಗೆಲ್ಲರಿಗೂ ಅನುಭವವಾಗಿದೆ. ಇದು ಶ್ರೀ ಐಕೋರು ಆಚಾರ್ಯರ ಹಿರಿಮೆ!!
ರಾಗ : ಪೂರ್ವಿ ತಾಳ : ತ್ರಿವಿಡಿ
ಬಾರಯ್ಯಾ ಬಾರಯ್ಯಾ ।
ಸೂರಿವರಿಯ ಐಕೋರು ನಿಲಯ ಗುರು ।। ಪಲ್ಲವಿ ।।
ನೀನಾಕಿದ ಸುಜ್ಞಾನದ ಸಸಿಗಳು ।
ಮ್ಲಾನವಾಗುತಿವೆ ಸಾನುರಾಗದಲಿ ।। ಚರಣ ।।
ಸಲೆ ತವ ಕರುಣ ಸಲಿಲವ ಎರದು ।
ಘಳಿಲನೆ ವೃದ್ಧಿಯಗೊಳಿಸಿ ಸಲಹಲು ।। ಚರಣ ।।
ನಾಟಿದ ಸಸಿಗಳು ನೀಟಾಗುವ ಪರಿ ।
ತೋಟಿಗ ನೀ ಕೃಪೆ ನೋಟದಿ ಸಲುಹಲು ।। ಚರಣ ।।
ಕೋವಿದವರ ನೀ ಕಾವಲಿ ಇರಲು । ಕು ।
ಜೀವಿಗಳಿಂದಲಿ ಹಾವಳಿಯಾಗದು ।। ಚರಣ ।।
ನೀ ಮರೆದರೆ ಸುಕ್ಷೇಮವಾಗುದು ।
ಶ್ಯಾಮ ಸುಂದರನ ಪ್ರೇಮದ ಪೋತ ।। ಚರಣ ।।
ಶ್ರೀ ಆಚಾರ್ಯರ ಮೇಲೆ ಶ್ರೀ ಶ್ಯಾಮಸುಂದರದಾಸರ ರಚನೆ...
ಶ್ರೀಮತ್ಕೃಷ್ಣ ತರಂಗ ನಿಲಯ ಐಕೂರು ಗ್ರಾಮ ನಿಲಯ
ಸ್ತಂಭೋದ್ಭವ ನಾಮಧೇಯ ದ್ವಯಭಾರ್ಯಾ ಸುಮನಃ ಪ್ರಿಯಃ ।
ಸದ್ಭಾಕ್ತಾರ್ತಿ ವಿದೂರ ವಿಮಲ ಹೃದಯ ಅತ್ಯಂತ ಕರುಣಾಮಯ
ಅಸ್ಮದ್ ಸದ್ಗುರುವರ್ಯ ಏಯೋ ನಮಗೆ ನೀ ನಿತ್ಯ ಸನ್ಮಂಗಳ ।। ೧ ।।
ಸಾರೋದ್ಧಾರ ಸುಗೀತ ಭಾರತಯುತ ವೇದಾರ್ಥ ಸಂಪೂರಿತ
ಸಲ್ಹಾದಾಂಶಜ ದಾಸವರ್ಯ ವಿರಚಿತ ಶ್ರೀ ಶೌರಿಕಥಾಮೃತ ।
ಪಾರಜ್ಣಂ ಸುಶಿಲೇಂದ್ರ ಮಮತ ಸಂಪೂರ್ಣ ಸಂಪಾದಿತ
ಅಸ್ಮದ್ ಸದ್ಗುರುವರ್ಯ ಏಯೋ ನಮಗೆ ನೀ ನಿತ್ಯ ಸನ್ಮಂಗಳ ।। ೨ ।।
ಅಷ್ಟಪದಲೋಷ್ಟ ಭಾವ ಸಮತ ಧೀಶ ಸನ್ಮಾನಿತ
ಅಷ್ಟೈಕಾಮಲ ಭಕ್ತಿ ಜ್ಞಾನ ಭರಿತ ವೈರಾಗ್ಯ ಸಂಶೋಭಿತ ।
ಸೃಷ್ಟ್ಯಾಂತರ್ಗತ ಬಿಂಬ ಮೂರ್ತಿ ಸತತ ಸಂದರ್ಶನಾ ನಂದಿತ
ಅಸ್ಮದ್ ಸದ್ಗುರುವರ್ಯ ಏಯೋ ನಮಗೆ ನೀ ನಿತ್ಯ ಸನ್ಮಂಗಳ ।। ೩ ।।
ಶೃಂಗಾರಾಂಗ ಸುನಾಮ ದ್ವಾದಶ ಧೃತ ಮುದ್ರಾಕ್ಷತಾಲಂಕೃತ
ಗಂಗಾನಂಗಪಿತಾಂಘ್ರಿ ಕಮಲಜ ಪಿತ ಪದ್ಮಾಕ್ಷಯಾಲಾಂಚಿತ ।
ಇಂಗಿತಜ್ಞ ಸುಸಾಧು ಸಂಗ ಸಹಿತ ಮುಕ್ತ್ಯಾಂಗನಾಲಂಗಿತ
ಅಸ್ಮದ್ ಸದ್ಗುರುವರ್ಯ ಏಯೋ ನಮಗೆ ನೀ ನಿತ್ಯ ಸನ್ಮಂಗಳ ।। ೪ ।।
ತಾಪತ್ರಯ ದೂರ ಪಾಪ ರಹಿತ ಕೋಪಾದಿ ಗುಣ ವರ್ಜಿತ
ಶಾಪಾನುಗ್ರಹಶಕ್ತ ಸುಜನ ಪ್ರೀತ ಸಂಸಾರಘನಮಾರುತ ।
ಗೋಪಾಲಾಖ್ಯದಾಸವರ್ಯ ಕವಿತಾ ಗೂಢಾರ್ಥ ಸಂಬೋಧಿತ
ಅಸ್ಮದ್ ಸದ್ಗುರುವರ್ಯ ಏಯೋ ನಮಗೆ ನೀ ನಿತ್ಯ ಸನ್ಮಂಗಳ ।। ೫ ।।
ಆಧ್ಯಾತ್ಮ ಸುವಿಚಾರ ಶಾಸ್ತ್ರ ಸತತ ಶ್ರುತ್ಯರ್ಥ ಬಹು ಗರ್ಭಿತ
ಸತ್ಯಾವಲ್ಲಭ ಸತ್ಯದೇವ ಚರಿತ ವಕ್ತಾರ ಬುಧ ಸಮ್ಮತ ।
ನಾಡ್ಯಂತರ್ಗತ ಸರ್ವತೀರ್ಥ ಸ್ನಾತ ತನ್ಮೂರ್ತಿ ಪ್ರತ್ಯಕ್ಷಕ
ಅಸ್ಮದ್ ಸದ್ಗುರುವರ್ಯ ಏಯೋ ನಮಗೆ ನೀ ನಿತ್ಯ ಸನ್ಮಂಗಳ ।। ೬ ।।
ಧರ್ಮಾಚಾರ ವಿಚಾರ ಶೀಲ ನಿರತ ಷಟ್ಕರ್ಮ ಸಂಭೂಷಿತ
ನಿರ್ಮತ್ಸರ ಮೋಹ ದೇಹ ಮಮತ ಸುಶರ್ಮ ಕುಲರಾಜಿತ ।
ಭರ್ಮೋದರವಾತಜಾತಪೋತ ಜಾತಾರಿ ಖತಿವರ್ಜಿತ
ಅಸ್ಮದ್ ಸದ್ಗುರುವರ್ಯ ಏಯೋ ನಮಗೆ ನೀ ನಿತ್ಯ ಸನ್ಮಂಗಳ ।। ೭ ।।
" ಶ್ರೀ ಶ್ಯಾಮಸುಂದರದಾಸರ ಮತ್ತೊಬ್ಬ ಗುರುಗಳಾದ ಶ್ರೀ ಅಭಿಮನ್ಯುನ ಅವತಾರರಾದ ಶ್ರೀ ಅಸ್ಕಿಹಾಳ ಗೋವಿಂದದಾಸರು "
ರಾಗ : ಮೋಹನ ತಾಳ : ತ್ರಿವಿಡಿ
ನಿಂದೆ ಯಾಕೆ ಮಾಡುವೆ ।
ಮಂದ ಮಾನವನೇ । ಗೋ ।
ವಿಂದದಾಸಾರ್ಯರನ್ನ ।।
ಎಂದೆಂದಿಗೀಮಾತು ।
ಇಂದಿರೇಶನ ಭಕುತ ।
ವೃಂದ ಮೆಚ್ಚುವುದಿಲ್ಲವೋ ಮೂಢಾ ।। ಪಲ್ಲವಿ ।।
ಬಾಲಕತನದಾರಾಭ್ಯ ।
ಶೀಲ ಸದ್ಭಕ್ತಿಯಲಿ ।
ತಾಳ ತಂಬೂರಿ ಪಿಡಿದು ।
ಶ್ರೀಲೋಲ ಮಹಿಮೆಗಳ ।।
ಪೇಳುತಲಿ ಸತತ ।
ಗೋಪಾಲ ವೃತ್ತಿಯನು ಮಾಡಿ ।
ಕಾಲವನು ಕಳೆದವರ ।। ಚರಣ ।।
ಕುಸುಮಶರ ವಟ್ಟುಳಿಗೆ ।
ವಶವಾಗದಿರಿಯೆಂದು ।
ಉಸುರುತಲಿ ಶಿಷ್ಯ ಗಣಕೆ ।
ಅಸುರಾರಿ ಮಹಿಮೆಯನು ।।
ರಸವತ್ಕವಿತೆಯಲಿಂದ ।
ನಿಶಿ ಹಗಲು ವರ್ಣಿಸಿದ ।
ಅಸಿಗ್ಯಾಳು ನಿಲಯರನ ।। ಚರಣ ।।
ಆಶೆ ಕ್ರೋಧವ ತೊರೆದು ।
ಕ್ಲೇಶ ಶುಭ ಸಮ ತಿಳಿದು ।
ಲೇಸಾಗಿ ಗುರು ಸೇವೆಗೈದು ।
ವಾಸವಾನುಜನಾದ ।।
ಶ್ರೀ ಶ್ಯಾಮಸುಂದರನ ।
ವಾಸ ಸ್ಥಾನಕೆ । ತೆರಳಿ ।
ದ ಸುಗುಣರನು ವ್ಯರ್ಥ ।। ಚರಣ ।।
ಶ್ರೀ ಜಗನ್ನಾಥದಾಸರನ್ನೇ ನಿತ್ಯದಲ್ಲೂ ನಂಬಿದ್ದ ಶ್ರೀ ಗುಂಡಾಚಾರ್ಯರು ರಾಯಚೂರು ಜಿಲ್ಲೆಯ " ಅಸ್ಕಿಹಾಳ " ಯೆಂಬ ಗ್ರಾಮಕ್ಕೆ ಬಂದರು. ಅಲ್ಲಿ ಶ್ರೀ ಗೋವಿಂದದಾಸರೆಂಬ ಜ್ಞಾನಿಗಳಿದ್ದರು.
ಸಾತ್ವಿಕರಾದ ದೀನ ಜನರ ಉದ್ಧಾರಕಾಗಿ ತಮ್ಮ ಜೀವನವನ್ನೇ ಮೀಸಲಾಗಿಟ್ಟ ಧನ್ಯ ಜೀವಿಗಳು ಶ್ರೀ ಗೋವಿಂದದಾಸರು. ನೂರಾರು ಹರಿಜನರನ್ನು ಸನ್ಮಾರ್ಗ ಪ್ರವೃತ್ತರನ್ನಾಗಿ ಮಾಡಿ ಅವರಿಗೆ ವೈಷ್ಣವ ದೀಕ್ಷೆಯನ್ನು ನೀಡಿ ಸಾಧನೆಯ ಮಾರ್ಗವನ್ನು ತೋರಿಸಿಕೊಟ್ಟ ಮಹಾನ್ ಕ್ರಾಂತಿ ಪುರುಷರು ಶ್ರೀ ಗೋವಿಂದದಾಸರು!
ಶ್ರೀ ದಾಸರ ಬೇಟೆಗಾಗಿ ಶ್ರೀ ಗುಂಡಾಚಾರ್ಯರು ಅವರ ಮನೆಗೆ ಬಂದರು. ಶ್ರೀ ದಾಸರು ಸ್ನಾನಕ್ಕಾಗಿ ಬಾವಿಗೆ ಹೋಗಿರುವುದಾಗಿ ತಿಳಿದು ತಾವೂ ಬಾವಿಯ ಕಡೆಗೆ ಹೋದರು. ತಮ್ಮ ಕಡೆಗೆ ಬರುತ್ತಿದ್ದ ಶ್ರೀ ಗುಂಡಾಚಾರ್ಯರನ್ನು ಕಂಡು ಶ್ರೀ ದಾಸರು ಕೋಪಗೊಂಡವರಂತೆ ಚಿಕ್ಕ ಕಲ್ಲನ್ನು ತೆಗೆದುಕೊಂಡು ಶ್ರೀ ಆಚಾರ್ಯರ ಮೇಲೆ ಎಸೆದರು. ಅದು ಅವರ ತಲೆಗೆ ಬಡೆದು ಗಾಯವಾಗಿ ರಕ್ತ ಸುರಿಯಿತು.
ಶ್ರೀ ಗೋವಿಂದದಾಸರು ಮಮತೆಯಿಂದ ರಕ್ತವನ್ನು ಒರೆಸಿ ಶ್ರೀ ಆಚಾರ್ಯರ ಬೆನ್ನನ್ನು ಸವರಿದರು. ಶ್ರೀ ಗುಂಡಾಚಾರ್ಯರ ತಲೆಯಿಂದ ರಕ್ತದೊಟ್ಟಿಗೆ ಉಳಿದ ಅಲ್ಪಸ್ವಲ್ಪ ಅಜ್ಞಾನವೂ ಹೊರಟು ಹೋಯಿತು. ಶ್ರೀ ದಾಸರ ಅನುಗ್ರಹವೂ ಆಯಿತು. ಜ್ಞಾನಿಗಳ ಕೋಪ ತಾಪಗಳು ಸಹ ಜನರ ಉದ್ಧಾರಕ್ಕೆ ಕಾರಣವಾಗುತ್ತದೆ.
ವಿಶ್ವಾಮಿತ್ರನ ಕೋಪ ಹರಿಶ್ಚಂದ್ರನಿಗೆ ಶಾಶ್ವತವಾದ ಕೀರ್ತಿಯನ್ನು ತಂದು ಕೊಟ್ಟಿತು. ಕೊನೆಗೆ ಎಲ್ಲಾ ದೇವತೆಗಳ ಅನುಗ್ರಹವೂ ಅಭ್ಯವಾಯಿತು. ಇಂದು ಸತ್ಯಕ್ಕೆ ಹರಿಶ್ಚಂದ್ರನು ಉದಾಹರಣೆಯಾಗಿದ್ದಾನೆ.
ಶ್ರೀ ಗೋವಿಂದದಾಸರ ನಾಟಕೀಯ ಕೋಪವು ಶ್ರೀ ಗುಂಡಾಚಾರ್ಯರ ಅಪೂರ್ವ ಜ್ಞಾನದ ಉದಯಕ್ಕೆ ಕಾರಣವಾಯಿತು. ಅಂದಿನಿಂದ ಶ್ರೀ ಗುಂಡಾಚಾರ್ಯರ ಸರ್ವ ಕಾರ್ಯ ಕಲಾಪಗಳು ಭಗವಂತನಿಗೆ ಮೀಸಲಾಯಿತು. ಅವರು ತಮ್ಮ ಎಲ್ಲಾ ಲೌಕಿಕಾಲೌಕಿಕ ವ್ಯಾಪಾರವನ್ನು ಸಹಾ ಶ್ರೀ ಹರಿವಾಯುಗಳಿಗೆ ಅರ್ಪಿಸಿ ನಿರ್ಲಿಪ್ತರಾದರು.
" ಆನಂದಾನುಭವ "
ಶ್ರೀ ಶ್ಯಾಮಸುಂದರದಾಸರುಪ್ರತಿನಿತ್ಯ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಮುಸುಗಿಟ್ಟುಕೊಂಡು ಒಂದೆರಡು ಘಂಟೆಗಳ ಕಾಲ ಕುಳಿತು ಬಿಡುತ್ತಿದ್ದರು. ಯಾರಿಗೂ ತೋರಗೊಡದೆ ಮಾನಸಿಕವಾಗಿ ಭಗವಂತನಿಗೆ ತಮ್ಮ ಪೂಜಾದಿಗಳನ್ನು ಸಲ್ಲಿಸಿ ಬಿಡುತ್ತಿದ್ದರು.
ಶ್ರೀ ಶ್ಯಾಮಸುಂದರದಾಸರಿಗೆ " ಹರಿಕಥಾಮೃತಸಾರ " ವೆಂದರೆ ಎಲ್ಲಿಲ್ಲದ ಅಭಿಮಾನ ಮತ್ತು ಪ್ರಾಣ. ಶ್ರುತಿ - ಸ್ಮೃತಿ - ಪುರಾಣ ತತ್ತ್ವ ರಹಸ್ಯಗಳನ್ನು ತನ್ನಲ್ಲಡಿಗಿಸಿಕೊಂಡ ಈ ದಾಸ ಸಾಹಿತ್ಯದ ಮೇರು ಕೃತಿಯನ್ನು ನಿತ್ಯ ನಿರಂತರವಾಗಿ ಮನನ ಮಾಡುತ್ತಿದ್ದರು. ಜಿಜ್ಞಾಸುಗಳಾಗಿ ಬಂದ ಆಪ್ತರಿಗೆ ತತ್ತ್ವ ರಹಸ್ಯಗಳನ್ನು ತಿಳಿಯ ಹೇಳುತ್ತಿದ್ದರು. ಕೆಲವೊಮ್ಮೆ ತಮಗಾದ ಆನಂದದ ಅನುಭವವನ್ನು ಕೃತಿಗಳ ರೂಪದಲ್ಲಿ ಹೇಳುತ್ತಿದ್ದರು. ಶಿಷ್ಯರು ಯಾರಾದರೂ ಈ ಹಾಡನ್ನು ಬರೆದಿಡುತ್ತಿದ್ದರು.ಉದಾಹರಣೆಗಾಗಿ....
ರಾಗ : ರೇಗುಪ್ತಿ ತಾಳ ತ್ರಿವಿಡಿ
ಕಂಬುಕಂಧರ ಸತತ ಬಿಡದೆ । ರಕ್ಷಿ ।
ಸಂಬುಜೋದ್ಭವನ ತಾತ ।
ಜಂಭಾರಿ ವೈರಿ ಕುಲಾಂಬುಧಿ ಕುಂಭಜ ।
ಕುಂಭಿಣಿ ಸುರಾ ನಿಕುರಂಬ ಪೋಷಕ ದೇವಾ ।। ಪಲ್ಲವಿ ।।
ನಳಿನಾಕ್ಷ ನರಕೇಸರಿ ನಂಬಿದೆ ನಿನ್ನ ।
ಹಲಧರಾನುಜನೆ ಶೌರಿ ।
ಇಳಿಜದಾಯಕ ಸಿರಿ ನಿಲಯ ನಿತ್ಯಾನಂದ ।
ಎಲರುಣಿ ವರಶಾಯಿ ಕಲುಷ ಸಂಹಾರಕ ।।
ಜಲದರಿಪುವಿನ ತನಯನನುಜನ ।
ಕಲಹದೊಳು ಜೈಸಿದನ ತಾತನ ।
ಕುಲ ವಿರೋಧಿಯ ಧ್ವಜನ ಜನಕಗೆ ।
ಒಲಿದು ಬೆಂಬಲವಾದ ಕೇಶವ ।। ಚರಣ ।।
ನಿಗಮ ರಕ್ಷಕ ಕೂರ್ಮ ಕಿಟ ಮಾನವ ।
ಮೃಗ ವಟು ಪರಶುರಾಮ ।
ಅಗಜೇಶ ಶರಕಾಲ ನೃಗಪತಿ ವರದನೆ ।
ವಿಗತ ವಸನ ಕಲ್ಕಿ ಅಗಣಿತ ಮಹಿಮನೆ ।।
ಗಗನ ರಾಜನ ಮಗಳ ಗೋಸುಗ ।
ನಗುತ ಮಡದಿಯನಗಲಿ ಬಂದು ।
ಜಗವ ಪೊತ್ತನ ನಗದಿ ನೆಲೆಸಿದೆ ।
ತ್ರಿಗುಣ ವರ್ಜಿತ ಖಗವರೂಢನೆ ।। ಚರಣ ।।
ಮಂದರೋದ್ಧರ ವಿಶಾಲ ಮಹಿಮನಾದ ।
ಸಿಂಧೂರ ಪರಿಪಾಲ ।
ಕಂದರ್ಪ ಪಿತ ಶ್ಯಾಮಸುಂದರವಿಠಲನೆ ।
ವಂದಿಸುವೆನು ಎನ್ನ ಬಂಧನ ಬಿಡಿಸಯ್ಯ ।।
ಗಂಧವಾಹನ ವೀಂದ್ರ ಫಣಿಪತಿ ।
ಸಿಂಧುಜೋದ್ಭವೆಪತಿ ವಿರೋಧಿ । ಪು ।
ರಂದರಾಮರ ವೃಂದ ವಂದ್ಯ ।
ನಂದಿಸುತ ಗೋವಿಂದ ಗೋಪತಿ ।। ಚರಣ ।।
" ಆತ್ಮ ಪ್ರಬೋಧಕ ಪತ್ರಗಳು ( ಕಾಗದಗಳು ) "
ಶ್ರೀ ಶ್ಯಾಮಸುಂದರ ದಾಸರಿಗೆ ಮತ್ತೊಂದು ಉತ್ತಮ ಅಭ್ಯಾಸವಿತ್ತು. ಅವರು ತಮ್ಮ ಆಪ್ತರಿಗೆ ಆಗಾಗ್ಗೆ ಕಾಗದಗಳನ್ನು ಬರೆಯುತ್ತಿದ್ದರು. ಆ ಕಾಗದಗಳು ಸಾಮಾನ್ಯ ಕಾಗದಳಾಗಿರದೇ " ಅಧ್ಯಾತ್ಮಿಕ ಪ್ರಭೋಧಕ " ಗಳಾಗಿರುತ್ತಿದ್ದವು. ಪ್ರತಿ ಕಾಗದದಲ್ಲೂ ಯಾವುದೋ ಒಂದು ವೇದಾಂತದ ವಿಷಯವನ್ನು ಕೂಲಂಕುಷವಾಗಿ ಚರ್ಚಿಸುತ್ತಿದ್ದರು. ಈ ರೀತಿಯಲ್ಲಿ ಕಾಗದ ಬರೆಯುವುದು ಅನಾದಿಯಿಂದ ಸಿದ್ಧವಾದುದು.
ಶ್ರೀ ಶ್ಯಾಮಸುಂದರದಾಸರು ಬರೆದ ಅನೇಕ ಪತ್ರಗಳು ಇಂದಿಗೂ ಲಭ್ಯವಿದೆ. ಆದರೆ ಶ್ರೀ ಶ್ಯಾಮಸುಂದರದಾಸರು ಈ ಯಾವುದನ್ನೂ ಜನರ ಮನಸ್ಸನ್ನು ಮೆಚ್ಚಿಸುವುದಕ್ಕಾಗಲೀ ಮಾಡುತ್ತಿರಲಿಲ್ಲ. ಎಲ್ಲವನ್ನೂ ಶ್ರೀ ಹರಿಯ ಪ್ರೀತಿಗಾಗಿ ಮಾಡಿದ ಪುಣ್ಯಾತ್ಮರು!!!
ಕರ್ನಾಟಕದ ಹರಿದಾಸರೆಲ್ಲರೂ ಸದಾಚಾರದಲ್ಲೇ ಜೀವನವನ್ನು ಸಾಗಿಸಿರುವರು. ತಾವು ಉದ್ಧೃತರಾಗುವುದರೊಂದಿಗೆ ಅಕ್ಕಪಕ್ಕದ ಜನರನ್ನೂ ಉದ್ಧರಿಸಬೇಕೆಂಬ ಕಳಕಳಿ ಈ ಹರಿದಾಸರದ್ದು. ಇದಕ್ಕಾಗಿಯೇ ಹರಿದಾಸರು " ಯಾಯಿವಾರ " ಮಾಡುತ್ತಿದ್ದರು. ಅರುಣೋದಯಕ್ಕೆ ಎದ್ದು ಕಾಲಿಗೆ ಗೆಜ್ಜೆಕಟ್ಟಿ, ಕೈಯಲ್ಲಿ ತಂಬೂರಿ ಮೀಟುತ್ತಾ ಹರಿನಾಮ ಸಂಕೀರ್ತನೆಯನ್ನು ಮಾಡುತ್ತಾ ಬೀದಿ ಬೀದಿಗಳಲ್ಲಿ ಅಲೆಯುತ್ತಿದ್ದರು.
ಜೀವನದ ಗುರಿಯನ್ನರಿಯದೇ ಸಂಸಾರದಲ್ಲಿ ಮುಳುಗಿದ್ದ ಜನರ ಕಿವಿಗೆ ಹರಿ ನಾಮವನ್ನು ಕೇಳಿಸಿ; ಧರ್ಮದ ಸಂದೇಶವನ್ನು ನೀಡಿ; ಅವರ ಮನಸ್ಸನ್ನು ಜಾಗೃತಗೊಳಿಸುತ್ತಿದ್ದರು. ದಲಿತ ಜನಾಂಗದ ಉದ್ಧಾರಕ್ಕಾಗಿ ಶ್ರಮಿಸಿದರು. ಶ್ರೀ ಶ್ಯಾಮಸುಂದರದಾಸರು ಕೂಡಾ ಈ ವಿಷಯದಲ್ಲಿ ತಮ್ಮ ಅಳಿಲು ಸೇವೆಯನ್ನು ಸಮಾಜಕ್ಕೆ ಸಲ್ಲಿಸಿರುವರು!!!
" ಕೊಪ್ಪರ ಶ್ರೀ ನರಸಿಂಹ ದೇವರ ಸ್ತುತಿ "
ರಾಗ : ತೋಡಿ ತಾಳ : ಝಂಪೆ
ನಮೋ ನಮೋ ನರಮೃಗರಾಜಾ । ಸದಾ ।
ನಮಿಪೆ ಸುಜನರಿಗೆ ಅಮರ ಮಹಿಜ ।। ಪಲ್ಲವಿ ।।
ಕಮಲಸಂಭವ ಸುಮನಸೇಂದ್ರ ಪ್ರಮುಖ ।
ನಮಿತ ಸುಮಹಿಮ । ಗಜರಿಪು ।
ದಮನ ದ್ವಿಜವರ ಗಮನ ಗುಣನಿಧಿ ।
ಕಮಲೆಯಳ ಮುಖ ಕುಮುದ ಹಿಮಕರ ।। ಅ. ಪ ।।
ಜಾತ ರಹಿತ ಜಗಧೀಶ । ದನು ।
ಜಾತ ವ್ರಾತಾರಣ್ಯ ಜಾತ ವೇಧಸ ।
ಶೀತಾಂಶು ಭಾನು ಸಂಕಾಶ । ಶ್ರೀ ಭೂ ।
ನಾಥ ಭೂತೇಶ ಹೃತ್ಪಾಥೋಜ ವಾಸ ।।
ಶಾತಕುಂಭಕಶ್ಯಪನ ಗರ್ವ । ಜೀ ।
ಮೂತ ವೃಂದಕೆ ವಾತನೆನಿಸುತ ।
ಪೋತ ಪ್ರಹ್ಲಾದಗೆ ಒಲಿದು । ಸಂ ।
ಪ್ರೀತಿಯಲಿ ಪೊರೆದಾತ ದಾತನೆ ।। ಚರಣ ।।
ಮಾತುಳ ವೈರಿ ಗೋಪಾಲ । ವೇಣು ।
ಗೀತ ಸಂಪ್ರೀತ ಶ್ರೀ ರುಕ್ಮಿಣೀ ಲೋಲ ।
ಧಾತಾಂಡೋಧರ ವನಮಾಲಾ ದೃತ ।
ಪೂತನ ಬಕ ಶಕಟಾರಿ ಹೃತ್ಶೂಲ ।।
ಪಾತಕಾದ್ರಿ ಶತಧಾರ ಶುಭಕರ ।
ಶ್ವೇತದ್ವೀಪಾನಂತ ಪೀಠ । ಪು ।
ನೀತ ವರ ವೈಕುಂಠ ಘನ । ಸು ।
ಕೇತನ ತ್ರಯವೀತ ಭವ ಭಯಹರ ।। ಚರಣ ।।
ಮಾರ ಜನಕ ಶುಭಕಾಯ ಕೃಷ್ಣಾ ।
ತೀರ ಸುಶೋಭಿತ ಕಾರ್ಪರ ನಿಲಯ ।
ದೂರ ನೋಡದೇ ಪಿಡಿ ಕೈಯ್ಯ । ಶ್ರೀ ಸ ।
ಮೀರ ಸನ್ನುತ ಶ್ಯಾಮಸುಂದರೇಯ ।।
ವಾರಿಚರ ಗಿರಿ ಭಾರಧರ । ಭೂ ।
ಚೋರ ಹರ ಗಂಭೀರ ವಟು । ಕು ।
ಠಾರಕರ ರಘುವೀರ । ನಂದ ।
ವಸನ ವಿದೂರ ಹಯಧ್ವಜ ।। ಚರಣ ।।
" ವಿಶೇಷ ವಿಚಾರ "
ಕ್ರಿ ಶ 2009 ರಲ್ಲಿ ಜರ್ಮನಿಯ ಶ್ರೀ ಫಿಲಿಪ್ಸ್ ಎಂಬುವರು ಸಂಶೋಧನೆಗಾಗಿ ಬೆಂಗಳೂರಿಗೆ ಬಂದಿದ್ದರು. ಅವರು ಜರ್ಮನಿ ಪ್ರಜೆಯಾದರೂ ವೇದ ಸಾಹಿತ್ಯ ಮತ್ತು ಹರಿದಾಸ ಸಾಹಿತ್ಯದಲ್ಲಿ ಬಹಳಷ್ಟು ಜ್ಞಾನವನ್ನು ಸಂಪಾದಿಸಿದ್ದವರು. ಅಲ್ಲದೇ  ಅವರು ತಮ್ಮ ಭಾಷೆಯ ಜೊತೆಯಲ್ಲಿ ಕನ್ನಡ, ತೆಲುಗು ಮತ್ತು ಸಂಸ್ಕೃತದಲ್ಲಿ ಜ್ಞಾನ ಹೊಂದಿದವರು. ನನಗೆ ಅವರು ಜಯನಗರದ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಕೀರ್ತಿಶೇಷ ಶ್ರೀ ರಾಜಾ ಎಸ್ ರಾಜಗೋಪಾಲಚಾರ್ಯರ ಮುಖಾಂತರ  ಭೇಟಿಯಾಗಿತ್ತು ಮತ್ತು ಅವರು ಶ್ರೀ ಮಠದಲ್ಲಿ ಸುಮಾರು 15 ದಿನಗಳು ಇದ್ದರು. ಆಗ ನನ್ನ ಜೊತೆ ಅವರು ಮಾತಾಡುವ ಸಂದರ್ಭದಲ್ಲಿ ಶ್ರೀ ಶ್ಯಾಮಸುಂದರದಾಸರ ಬಗ್ಗೆ ಕೊಟ್ಟ ಹೇಳಿಕೆ ಪರಮ ಅದ್ಭುತವಾಗಿದೆ.
" ಶ್ರೀ ಶ್ಯಾಮ ಸುಂದರ ದಾಸರ ಕೃತಿಗಳನ್ನು ನೋಡಿದಾಗ 18ನೇ ಶತಮಾನದಲ್ಲಿ ಇದ್ದ ಶ್ರೀ ಜಗನ್ನಾಥದಾಸರ ಕೀರ್ತನೆಗಳು ಜ್ಞಾಪಕಕ್ಕೆ ಬರುತ್ತವೆ. ಕಾರಣ ಅವರು ಮಾಡಿದ ಪದ ಪ್ರಯೋಗ ಮತ್ತು ಆ ಪದಗಳು ಅತ್ಯಂತ ಲಾಲಿತ್ಯದಿಂದ ಕೂಡಿವೆ "
ಎಂದು ಅವರು ಹೇಳಿದಾಗ ಆಶ್ಚರ್ಯ ಮತ್ತು ಆನಂದ ಎರಡೂ ಆಯಿತು. ಅಂದರೆ ಶ್ರೀ ಹರಿದಾಸ ಸಾಹಿತ್ಯವು ಇಡೀ ಪ್ರಪಂಚದ ಜನರೇ ಇಷ್ಟ ಪಡುವಂಥಾ ಸಾಹಿತ್ಯ - ಇದುವೇ ಹರಿದಾಸ ಸಾಹಿತ್ಯದ ಹಿರಿಮೆ!!
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
" ಶ್ರೀ ಶ್ಯಾಮಸುಂದರ - 1 "
" ದಿನಾಂಕ : 02.05.2020 - ವೈಶಾಖ ಶುದ್ಧ ನವಮೀ ಶನಿವಾರ - ನನ್ನ ಪ್ರೀತಿಯ ಗುರುಗಳೂ - ಗುಪ್ತ ಸಾಧಕರೂ - ಶ್ರೀ ರಾಯರ ಮತ್ತು ಶ್ರೀ ಜಗನ್ನಾಥದಾಸರ ಕಾರುಣ್ಯಪಾತ್ರರೂ ಆದ ಶ್ರೀ ಶ್ಯಾಮಸುಂದರದಾಸರ ಆರಾಧನಾ ಮಹೋತ್ಸವ., ಮಾನವಿ ( ರಾಯಚೂರು ಜಿಲ್ಲೆ  ). "
ಶ್ರೀ ಶ್ಯಾಮಸುಂದರ ದಾಸರ ಕೃತಿಗಳು ಹೆಸರಿಗೆ ತಕ್ಕಂತೆ ಬಲು ಸುಂದರ. ಅಷ್ಟೇ ಅರ್ಥ ಗರ್ಭಿತವೂ, ಪ್ರಮೇಯ ಭರಿತವೂ ಆಗಿದೆ. 
ಅಂಥಾ ಶ್ರೀ ಶ್ಯಾಮಸುಂದರದಾಸರ ಕೃತಿಗಳ ಅವಲೋಕನೆಯ ಚಿಕ್ಕ ಪ್ರಯತ್ನಯಿಲ್ಲಿದೆ. 
" ಪ್ರಸ್ತಾವನ " 
ಭಾರತ ಭೂಮಿ ಹಲವು ಸಂಸ್ಕೃತಿಗಳ ತವರಾಗಿದೆ. ಹಲವು ಧರ್ಮಗಳ ಆಗರವಾಗಿದೆ. ಅದರಲ್ಲೂ ಕರ್ನಾಟಕವಂತೂ ವಿವಿಧ ಭಕ್ತಿ ಪಂಥಗಳ ನೆಲೆಯಾಗಿದೆ.
ಹರಿದಾಸ ಸಾಹಿತ್ಯದ ಆದ್ಯ ಪ್ರವರ್ತಕರು 13ನೇ ಶತಮಾನದಲ್ಲಿ ಶ್ರೀ ಹರಿಯ ಆಜ್ಞೆಯಂತೆ ಧರೆಗಿಳಿದು ಬಂದ ಶ್ರೀ ವಾಯುದೇವರ ಅವತಾರಿಗಳಾದ ಶ್ರೀಮನ್ಮಧ್ವಾಚಾರ್ಯರು. 
ಶ್ರೀಮನ್ಮಧ್ವಾಚಾರ್ಯರಿಂದ ಪ್ರಾರಂಭಗೊಂಡ ಹರಿದಾಸ ಸಾಹಿತ್ಯದ ಬೆಳವಣಿಗೆಗೆ ನಾಂದಿ ಹಾಡಿದವರು ಶ್ರೀ ನರಹರಿತೀರ್ಥರು.
ಶ್ರೀ ನರಹರಿತೀರ್ಥರ ನಂತರ ದಾಸ ಸಾಹಿತ್ಯಕ್ಕೆ ಮೆರಗು ಕೊಟ್ಟವರು ಶ್ರೀ ಧ್ರುವಾಂಶ ಶ್ರೀಪಾದರಾಜರು. 
ಶ್ರೀ ಶ್ರೀಪಾದರಾಜರಿಂದ ಮುಂದುವರೆದ ಈ ಸಾಹಿತ್ಯದ ಉಜ್ವಲ ಪರಂಪರೆಯನ್ನು ಬೆಳೆಸಿದವರು ಶ್ರೀ ಶಂಖುಕರ್ಣಾವತಾರಿಗಳಾದ ಶ್ರೀ ಪ್ರಹ್ಲಾದರೇ ವ್ಯಾಸರಾಜ ಗುರುಸಾರ್ವಭೌಮರು. 
ಶ್ರೀ ವ್ಯಾಸರಾಜರ ನೇತೃತ್ವದಲ್ಲಿ ದಾಸಕೂಟ ಪ್ರಾರಂಭವಾಯಿತು.
ಶ್ರೀ ಭಾವಿಸಮೀರ ವಾದಿರಾಜರು - ಶ್ರೀ ಯಮಾಂಶ ಕನಕದಾಸರು ಮತ್ತು ಶ್ರೀ ನಾರದಾಂಶ ಪುರಂದರದಾಸರು ಈ ದಾಸ ಕೂಟಕ್ಕೆ ಸೇರಿದವರು.
ಶ್ರೀ ಪುರಂದರದಾಸರ ಕಾಲವಂತೂ ಹರಿದಾಸ ಸಾಹಿತ್ಯದ " ಸುವರ್ಣ ಕಾಲ " ವೆನ್ನುತ್ತಿದ್ದರು. ಇವರು ಸಾಮಾಜಿಕ ಮತ್ತು ಲೋಕ ನೀತಿಯ ಕುರಿತು ಖಡಾ ಖಂಡಿತವಾಗಿ ಆಡು ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿದ್ದಾರೆ.
ಶ್ರೀ ಪುರಂದರದಾಸರ ಜಾಡಿನಲ್ಲಿಯೇ ಸಾಗಿದ ಮತ್ತೊಬ್ಬ ದಾಸ ಶ್ರೇಷ್ಠರೆಂದರೆ ಕವಿಸಾರ್ವಭೌಮ ಶ್ರೀ ಕನಕದಾಸರು.
ಹೀಗೆ ಹರಿದಾಸರುಗಳಿಂದ ಬೆಳೆದು ಹೆಮ್ಮರವಾಗಿ ದಾಸ ಸಾಹಿತ್ಯವು ಫಲವೀಯ್ಯುತ್ತಾ ಪ್ರಥಮ ಘಟ್ಟದ ಬೆಳವಣಿಗೆಗೆ ಸಾಧನವಾಯಿತು.
ದ್ವಿತೀಯ ಘಟ್ಟದಲ್ಲಿ ಶ್ರೀ ವಿಜಯರಾಯರು ಮತ್ತು ಅವರ ಶಿಷ್ಯ - ಪ್ರಶಿಷ್ಯ ಪರಂಪರೆ; ತೃತೀಯ ಘಟ್ಟದಲ್ಲಿ ಶ್ರೀ ಪ್ರಾಣೇಶದಾಸರು ಮತ್ತು ಅವರ ಶಿಷ್ಯ ಪ್ರಶಿಷ್ಯರು ಈ ಪರಂಪರೆಯನ್ನು ಮುಂದುವರೆಸುವುದರೊಂದಿಗೆ ತಮ್ಮದೇ ಆದ ವೈಶಿಷ್ಟ್ಯ ಪೂರ್ಣವಾದ ಸಾಹಿತ್ಯದಿಂದ ಹರಿದಾಸ ಸಾಹಿತ್ಯವನ್ನು ಜಗತ್ತಿನಾದ್ಯಂತ ವಿಸ್ತರಿಸಿದ್ದಾರೆ.
ದಾಸ ಸಾಹಿತ್ಯ ಎನ್ನುವುದು ವ್ಯಾಸ ಸಾಹಿತ್ಯದ ಇನ್ನೊಂದು ರೂಪ. ವ್ಯಾಸ ಸಾಹಿತ್ಯ ಎನ್ನುವುದು ಹಣ್ಣಿನಂತೆ. ದಾಸ ಸಾಹಿತ್ಯ ಎನ್ನುವುದು ಹಣ್ಣಿನ ರಸದಂತೆ. ಹಣ್ಣು ತಿನ್ನಲಾಗದಿದ್ದವರು ರಸವನ್ನು ಸುಲಭವಾಗಿ ಕುಡಿಯುವಂತೆ; ಸಂಸ್ಕೃತ ಬಾರದೇ ಇರುವ ಪಾಮರರಿಗೆ ದಾಸ ಸಾಹಿತ್ಯ ಒಂದು ವರದಂತೆ.
" ಸುಧಾ ಓದು ಪದ ಮಾಡು " ಎನ್ನುವ ವಾಕ್ಯದಂತೆ ಪಂಡಿತರಿಗೂ ಕೂಡಾ ದಾಸ ಸಾಹಿತ್ಯ ಕ್ಲಿಷ್ಟವಾಗಬಹುದು. ಅಲ್ಲದೇ ಅವರವರ ಯೋಗ್ಯತೆಗೆ ತಕ್ಕಂತೆ ದಾಸ ಸಾಹಿತ್ಯ ಅರ್ಥವಾಗಬಹುದು. 
" ಶ್ರೀ ಗಣಪತಿ ಸ್ತೋತ್ರ "
ತಂತ್ರಸಾರಸಂಗ್ರಹ " ದಲ್ಲಿ...
ಹೋದರೊ ಗಜಮುಖಃ 
ಪಾಶದಂತಾಂಕುಶಾಭಯೇ ।
ಬಿಭ್ರದ್ಧ್ಯೇಯೋ ವಿಘ್ನಹರಃ 
ಕಾಮದಸ್ತ್ವರಯಾ ಹ್ಯಯಮ್ ।।
ರಾಗ : ಕಾಂಬೋಧಿ     ತಾಳ : ಝ೦ಪೆ 
ಆರಂಭದಲಿ ನಮಿಪೆ -
ಬಾಗಿ ಶಿರವ ।
ಹೇರಂಬ ನೀನೊಲಿದು -
ನೀಡೆಮಗೆ ವರವ ।। ಪಲ್ಲವಿ ।।
ದ್ವಿರದ ವದನನೆ ನಿರುತ ।
ದ್ವಿರದ ವಂದ್ಯನ ಮಹಿಮೆ ।
ಹರುಷದಿಂದಲಿ ।
ಕರ ಜಿಂಹೆಯೆರಡರಿಂದ ।।
ಒರೆದು ಪಾಡುವುದಕ್ಕೆ ।
ಬರುವ ವಿಘ್ನವ ತರಿದು ।
ಕರುಣದಿಂದಲಿ ಯೆನ್ನ ।
ಕರ ಪಿಡಿದು ಸಲಹೆಂದು ।। ಚರಣ ।।
ಕುಂಭಿಣಿಜೆ ಪರಿ ರಾಮ ।
ಜಂಭಾರಿ ಧರ್ಮಜರು । 
ಅಂಬಾರಾಧಿಪ । ರಕು ।
ತಾಂಬರನೆ ನಿನ್ನ ।।
ಸಂಭ್ರಮದಿ ಪೂಜಿಸಿದ -
ರೆಂಬ ವಾರುತಿ ಕೇಳಿ ।
ಹಂಬಲವ ಸಲಿಸೆಂದು ।
ನಂಬಿ ನಿನ್ನಡಿಗಳಿಗೆ ।। ಚರಣ ।।
ಸೋಮ ಶಾಪದ ವಿಜಿತ ।
ಕಾಮ ಕಾಮಿತ ದಾತ ।
ವಾಮದೇವ ತನಯ ।
ನೇಮದಿಂದ ।।
ಶ್ರೀ ಮನೋಹರನಾದ ।
ಶ್ಯಾಮಸುಂದರ ಸ್ವಾಮಿ ।
ನಾಮ ನೆನೆಯುವ ಭಾಗ್ಯ ।
ಪ್ರೇಮದಲಿ ಕೊಡುಯೆಂದು ।। ಚರಣ ।।
" ವಿವರಣೆ "
" ಆರಂಭದಲಿ ನಮಿಪೆ "
ಶ್ರೀ ವಿಘ್ನರಾಜನು ಶ್ರೀ ಹರಿಯ ವರ ಪ್ರಸಾದದಿಂದ ಆದಿ ಪೂಜಿತನು. 
ದ್ವಿರದ ವದನನೆ = ಗಜಮುಖನೆ 
ದ್ವಿರದ ವಂದ್ಯನೆ = ಶ್ರೀ ವಿಘ್ನರಾಜನಿಂದ ವಂದ್ಯನಾದ ಶ್ರೀ ವಿಶ್ವ ನಾಮಕ ಪರಮಾತ್ಮ
ಕುಂಭಿಣಿಜೆ = ಶ್ರೀ ಸೀತಾದೇವಿ 
ಜಂಭಾರಿ =  ಶ್ರೀ ಇಂದ್ರದೇವರು 
ಅಂಬರಾಧಿಪ = ಆಕಾಶದಭಿಮಾನಿಯಾದ ಶ್ರೀ ಗಣಪತಿ 
ವಿಜಿತ ಕಾಮ = ಕಾಮವನ್ನು ಗೆದ್ದವ ( ಜಿತೇಂದ್ರಿಯ )
ಮತ್ತೊಂದು ಕೃತಿಯಲ್ಲಿ.... 
ರಾಗ : ದುರ್ಗಾ  ತಾಳ : ದಾದರ 
ಲಂಬೋದರನೆ ನಿನ್ನ ।
ನಂಬಿರುವೆನು ಯೆನ್ನ ।
ಬೆಂಬಿಡದೆಲೆ ಪೊರೆ ।
ಅಂಬಿಕಾ ತನಯನೆ ।। ಪಲ್ಲವಿ ।\
ಖೇಶನೆ ಎನ್ನನು- ।
ದಾಸಿನ ಮಾಡದೆ ।
ಲೇಸಾಗಿ ಪೋಷಿಸು ।
ವಾಸುಕೀ ಭೂಷಣ ।। ಚರಣ ।।
ನಾಕೇಶ ವಂದಿತ ।
ಆಖು ವಾಹನ ಎನ್ನ ।
ಕಾಕುಮತಿ ಕಳೆದು ।
ನೀ ಕಾಯೋ ಕರುಣದಿ ।। ಚರಣ ।।
ಶ್ರೀ ಮನೋಹರ ಸ್ವಾಮಿ ।
ಶ್ಯಾಮಸುಂದರ ಸಖ ।
ಕಾಮಹರ ಸುತ ।
ಸಾಮಜ ವದನನೆ ।। ಚರಣ ।।
" ವಿವರಣೆ "
ಲಂಬೋದರನೆ = ದೊಡ್ಡ ಹೊಟ್ಟೆ ಉಳ್ಳವನೆ 
ಅಂಬಿಕಾ ತನಯ = ಶ್ರೀ ಪಾರ್ವತೀ ದೇವಿಯ ಮಗ 
ಖೇಶನೆ = ಆಕಾಶಕ್ಕೆ ಅಭಿಮಾನಿಯಾದ ಶ್ರೀ ಗಣಪತಿ 
ನಾಕೇಶ = ಶ್ರೀ ಇಂದ್ರದೇವರು 
ಆಖು ವಾಹನ = ಮೂಷಕ ವಾಹನ 
ಕಾಮಹರಸುತ = ಶಿವ ಪುತ್ರ 
ಇನ್ನೊಂದು ಕೃತಿಯಲ್ಲಿ.... 
ರಾಗ : ಪೂರ್ವಿ    ತಾಳ : ಝ೦ಪೆ 
ನಂಬಿದೆನು ನಿನ್ನ ಪಾದ-
ಲಂಬೋದರ ।
ಅಂಬರಾಧಿಪತಿ ಮನದ ।
ಹಂಬಲವ ನೀಡೆಂದು ।। ಪಲ್ಲವಿ ।। 
ನಾಕನಾಥನುತ ಪಿನಾಕಿಸುತ  ।
ಕಾಕುಮತಿಯ ಕಳೆದು ಕಾಯೋ ।
ಆಖು ವಾಹನ ಏಕದಂತ ।। ಚರಣ ।।
ಭದ್ರ ಮೂರುತಿಯೆ ಕರು-
ಣಾಬ್ಧಿ ತ್ವರಿತ ।
ಉದ್ಧರಿಸು ಎಂದು ನಮಿಪೆ ।
ಅದ್ರಿಜೆ ಕುಮಾರ ನಿರುತ ।। ಚರಣ ।।
ಸಿಂಧೂರ ವದನನೆ ಸುರ    
ವೃಂದ ವಂದಿತ ।
ವಂದಿಸಿ ಬೇಡುವೆ ಶ್ಯಾಮ-
ಸುಂದರನ ಪ್ರೀತಿ ಪಾತ್ರ ।। ಚರಣ ।।
" ವಿವರಣೆ "
ಅಂಬರಾಧಿಪ = ಅಂತರಿಕ್ಷಾಭಿಮಾನಿಯಾದ ಶ್ರೀ ಗಣಪತಿ 
ನಾಕನಾಥ = ಸ್ವರ್ಗ ಲೋಕದೊಡೆಯ ಶ್ರೀ ಇಂದ್ರದೇವರು 
[ ನಾಕ = ಸ್ವರ್ಗ ಲೋಕ,  ನಾಥ = ಒಡೆಯ ]
ಆದ್ರಿಜೆ ಕುಮಾರ = ಶ್ರೀ ಪಾರ್ವತೀ ಸುತ 
ಸಿಂಧೂರ ವದನನೆ = ಗಜಮುಖನೆ 
ಮಗದೊಂದು ಕೃತಿಯಲ್ಲಿ....
ರಾಗ : ದೇಶ್     ತಾಳ : ದಾದರ 
ದ್ವಿರದ ವಾದನ ಪಾಹಿ -
ವಿಘ್ನ ವಿದೂರ ।
ನಭೇಶ ಕೃಪಾಬ್ಧಿ  
ಗೌರಿ ಸುಕುಮಾರ ।। ಪಲ್ಲವಿ ।।
ಸಿದ್ಧಿ ವಿನಾಯಕ ।
ವಿದ್ಯಾ ಪ್ರದಾಯಕ ।
ಉದ್ಧರಿಸೈ -
ಸುಜನೋಪಕಾರಿ ।। ಚರಣ ।।
ಉಂದುರ ವಾಹನ ।
ಬಂಧ ವಿಮೋಚಕ ।
ಚಂದಿರ ಶಾಪದ -
ಮಾರವಿದಾರ ।। ಚರಣ ।।       
ಶ್ಯಾಮಸುಂದರ -
ಸ್ವಾಮಿಯ ನಾಮ ।
ಪ್ರೇಮದಿ ಜಿಹ್ವೆಗೆ -
ಕರುಣಿ ಸುದಾರ ।। ಚರಣ ।\
" ವಿವರಣೆ " 
ಉಂದುರ = ಇಲಿ 
ಉಂದುರ ವಾಹನ = ಶ್ರೀ ಗಣಪತಿ
***
" ಶ್ರೀ ಶ್ಯಾಮಸುಂದರ - 2 "
"ಶ್ರೀ ರಾಯರ, ಶ್ರೀ ಮಾನವಿರಾಯರ ಆಪ್ತರು ವರಕವಿ ಶ್ರೀ ಶ್ಯಾಮ ಸುಂದರ ದಾಸರು"
ದಿನಾಂಕ : 13.05.19 ಸೋಮವಾರ ಶ್ರೀ ಶ್ಯಾಮಸುಂದರದಾಸರ ಆರಾಧನಾ ಮಹೋತ್ಸವ!!!
" ಶ್ರೀ ಶ್ಯಾಮಸುಂದರದಾಸರ ನುಡಿಮುತ್ತುಗಳಲ್ಲಿ ಶ್ರೀ ರಾಘವೇಂದ್ರತೀರ್ಥರು "
ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ " ಬಲ್ಲಟಗಿ " ಗ್ರಾಮವು ಶ್ರೀ ಶ್ಯಾಮಸುಂದರದಾಸರ ಜನ್ಮಸ್ಥಳ. ಇವರು ಶ್ರೀ ಮಾನವಿ ಮುನಿಪುಂಗವರಾದ ಶ್ರೀ ಸಹ್ಲಾದಾಂಶ ಜಗನ್ನಾಥದಾಸರ ಮತ್ತು ಶ್ರೀ ಪ್ರಹ್ಲಾದಾಂಶ ಶ್ರೀ ರಾಘವೇಂದ್ರತೀರ್ಥರ ಅಂತರಂಗ ಭಕ್ತರೂ ಹಾಗೂ ಅವರ ಪೂರ್ಣಾನುಗ್ರಹಕ್ಕೆ ಪಾತ್ರರಾದವರು.
ಶ್ರೀ ಶ್ಯಾಮಸುಂದರದಾಸರ ಕೃತಿಗಳು ಭಕ್ತಿಭಾವದಿಂದ ತುಂಬಿ ತುಳುಕುತ್ತಿರುವ ಇವರ ರಚನಾ ಶೈಲಿ ಶ್ರೀ ದಾಸರ ಹೆಸರಿಗೆ ತಕ್ಕಂತೆ ಸುಂದರವಾದ ಪದ ಸಮುಚ್ಛಯಗಳಿಂದ ಕೂಡಿ ಅರ್ಥಗರ್ಭಿತವಾಗಿವೆ.
ಶ್ಲೇಷಾರ್ಥಗಳನ್ನು ಒಳಗೊಂಡ ಅನೇಕ ಪದ ಪ್ರಯೋಗಗಳಿಂದ ಕೂಡಿದ ಇವರ ಪದಗಳನ್ನು ಅರ್ಥಾನುವಾದ ಮಾಡಲು ಶಾಸ್ತ್ರ ಮತ್ತು ಪುರಾಣ ಜ್ಞಾನವು ಅತ್ಯವಶ್ಯಕವಾಗಿದೆ.
ಈ ಮೊದಲೇ ಹೇಳಿದಂತೆ ಶ್ರೀ ಶ್ಯಾಮಸುಂದರದಾಸರಿಗೆ ಶ್ರೀ ರಾಯರನ್ನು ಕಂಡರೆ ಅತ್ಯಂತ ಪ್ರೀತಿ. ಶ್ರೀ ರಾಯರ ಮೂಲ ಬೃಂದಾವನದ ಮುಂದೆ ನಿಂತರೆ ಸಾಕು ಶ್ರೀ ಶ್ಯಾಮಸುಂದರದಾಸರ ವದನಾರವಿಂದದಲ್ಲಿ ಶ್ರೀ ರಾಯರ ಅಗಣಿತ, ಅತಿಶಯವಾದ ಮಹಿಮೆಗಳು ಗಂಗಾ ಪ್ರವಾಹದಂತೆ ಹರಿಯುತ್ತದೆ.
ರಾಗ : ದುರ್ಗಾ ತಾಳ : ಆದಿ
ಎಂಥ ದಯವಂತನೋ ಮಂತ್ರಮುನಿ ನಾಥನೋ ।
ಸಂತತದಿ ತನ್ನನು ಚಿಂತಿಪರಿಗೆ ಸುರಧೇನು ।। ಪಲ್ಲವಿ ।।
ವರ ಪ್ರಹ್ಲಾದನೂ ಮರಳಿ ಬಾಹ್ಲೀಕನೋ ।
ಗುರು ವ್ಯಾಸರಾಯನೋ ,ಪರಿಮಳಾಚಾರ್ಯನೋ ।। ಚರಣ ।।
ಇರುವ ತುಂಗಾ ತಟದಲ್ಲಿ ಬರುವ ತಾನು ಕರೆದಲ್ಲಿ ।
ಕರವ ಪಿಡಿದು ಪೊರೆವಲ್ಲಿ ಸರಿಗಾಣೆ ಧರೆಯಲ್ಲಿ ।। ಚರಣ ।।
ಮರುತಾವೇಶಯುಕ್ತನು ದುರಿತ ಕಳೆವ ಶಕ್ತನು ।
ತರಣಿ ನಿಭಗಾತ್ರನು ಪರಮ ಸುಚರಿತ್ರನು ।। ಚರಣ ।।
ಶಿಶುವಿಗಸುವಗರೆದನು ವಸುಧಿ ಸುರರ ಪೊರೆದನು ।
ಅಸಮ ಮಹಾ ಮಹಿಮನೋ ಸುಶೀಲೇಂದ್ರ ವರದನೋ ।। ಚರಣ ।।
ಭೂಮಿಯೊಳು ಖ್ಯಾತನು ಶ್ಯಾಮಸುಂದರ ಪ್ರೀತನು ।
ಕಾಮಿತಾರ್ಥದಾತನು ಸ್ವಾಮಿ ನಮಗೆ ಈತನು ।। ಚರಣ ।।
" ಪ್ರಮಾಣ "
ಶ್ರೀ ನೃಸಿಂಹ ಪುರಾಣ....
ಶಂಖುಕರ್ಣಾಖ್ಯ ದೇವಸ್ತು ಬ್ರಹ್ಮ ಶಾಪಾಶ್ಚ ಭೋತಲೇ ।
ಪ್ರಹ್ಲಾದ ಇತಿ ವಿಖ್ಯಾತೋ ಭೂಭಾರ ಕ್ಷಪಣೇ ರತಃ ।।
ಸ ಏವ ರಾಘವೇಂದ್ರಾಖ್ಯ ಯತಿ ರೂಪೇಣ ಸರ್ವದಾ ।
ಕಲೌಯುಗೇ ರಾಮಸೇವಾಂ ಕುರ್ವನ್ ಮಂತ್ರಾಲಯೇ ಭವೇತ್ ।।
ಪ್ರಹ್ಲಾದೋ ಜನ್ಮ ವೈಷ್ಣವಃ ।।
ಶ್ರೀ ಬ್ರಹ್ಮಾಂಡಪುರಾಣದಲ್ಲಿ...
ಪ್ರಹ್ಲಾದೋಪಿ ಮಹಾಭಾಗಃ ಕರ್ಮದೇವ ಸಮಃ ಸ್ಮೃತಃ ।
ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।।
" ಶ್ರೀಮದ್ಭಾಗವತ ಮಹಾ ಪುರಾಣ "
ವಾಸುದೇವೇ ಭಗವತಿ ಯಸ್ಯ ನೈಸರ್ಗಿಕೀರತಿಃ ।
ಬ್ರಹ್ಮಣ್ಯಃ ಶೀಲ ಸಂಪನ್ನಃ ಸತ್ಯಸಂಧೋ ಜಿತೇಂದ್ರಿಯಃ ।
ಪ್ರಶಾಂತಕಾಮೋ ರಹಿತಾಸುರೋಸುರಃ ।।
ಮಹದರ್ಭಕಃ ಮಹದುಪಾಸಕಃ ನಿರ್ವೈರಾಯ ಪ್ರಿಯ ಸುಹೃತ್ತಮಃ ।
" ಶ್ರೀ ಗರುಡಪುರಾಣದ ಬ್ರಹ್ಮಕಾಂಡ " ದಲ್ಲಿ.....
ಮಾನಸ್ತಂಭ ವಿವರ್ಜಿತಃ ಯಥಾ ಭಗವತೀಶ್ವರೇ ।।
ಪ್ರಕೃಷ್ಟಾಹ್ಲಾದ ಯುಕ್ತತ್ವಾತ್ ನಾರದಸ್ಯೋಪದೇಶತಃ ।
ಅತಃ ಪ್ರಹ್ಲಾದ ನಾಮಾಸೌ ಪೃಥುವ್ಯಾಂ ಖಗಸತ್ತಮಃ ।।
" ಸೂತ್ರ ಭಾಷ್ಯ " ದಲ್ಲಿ....
ದೇವಾಃ ಶಾಪ ಬಲದೇವ ಪ್ರಹ್ಲಾದಾದಿತ್ವಮಾಗತಾಃ ।
ದೇವಾಃ ಶಾಪಾಭಿಭೂತತ್ವಾತ್ ಪ್ರಹ್ಲಾದಾದ್ಯ ಬಭೂವಿರೇ ।।
" ಯಜುರ್ವೇದ ಬ್ರಾಹ್ಮಣ ೫ನೇ ಖಂಡ "
ಪ್ರಹ್ಲಾದೋ ವೈ ಕಯಾಧವಃ ವಿರೋಚನಂ ಸ್ವಪುತ್ರಂ ಅಪನ್ಯಧತ್ತ ।।
" ಶ್ರೀ ಸ್ಕಂದ ಪುರಾಣ " ದಲ್ಲಿ..
ಋತೇತು ತಾತ್ವಿರ್ಕಾ ದೇವನ್ನಾರದಾದೀನಥೈವ ಚ ।
ಪ್ರಹ್ಲಾದಾದುತ್ತಮಃ ಕೋನು ವಿಷ್ಣು ಭಕ್ತೌ ಜಗತ್ತ್ರಯೇ ।।
" ಶ್ರೀ ಪ್ರಹ್ಲಾದರಾಜರಿಗೆ ಜಗನ್ನಾಥನಾದ ಶ್ರೀ ನೃಸಿಂಹನ ಪರಮಾದ್ಭುತ ವಚನ "
ಶ್ರೀ ಮದ್ಭಾಗವತ ಮಹಾ ಪುರಾಣದಲ್ಲಿ....
ವತ್ಸ! ಯದ್ಯದಭೀಷ್ಟಂತೇ ತತ್ತದಸ್ತು ಸುಖೀಭವ ।
ಭವಂತಿ ಪುರುಷಾ ಲೋಕೇ ಮದ್ಭಾಕ್ತಾಸ್ತ್ವಾಮನುವ್ರತಾಃ ।
ತ್ವಂ ಚ ಮಾಂ ಚ ಸ್ಮರೇಕಾಲೇ ಕರ್ಮಬಂಧಾತ್ಪ್ರಮುಚ್ಯತೇ ।।
" ಶ್ರೀ ಪ್ರಹ್ಲಾದರೇ ಬಾಹ್ಲೀಕರಾಜರು " ....
ಶ್ರೀಮದಾಚಾರ್ಯರು - ಮ ಭಾ ತಾ ನಿ - ೧೧ - ೮
ಬಾಹ್ಲೀಕೋರಾಜ ಸತ್ತಮಃ ಹಿರಣ್ಯಕಶಿಪೋ ಪುತ್ರಃ ।
ಪ್ರಹ್ಲಾದಃ ಭಗವತ್ಪ್ರಿಯಃ ವಾಯೂನಾ ಚ ಸಮಾವಿಷ್ಟಃ ।।
" ಶ್ರೀ ಪ್ರಹ್ಲಾದರೇ ಶ್ರೀ ವ್ಯಾಸರಾಜರು ".....
ಶ್ರೀಪುರಂದರದಾಸರು....
ಶೇಷಾವೇಶ ಪ್ರಹ್ಲಾದನವತಾರ ವೆನಿಸಿದೆ । ವ್ಯಾಸರಾಯನೆಂಬೋ ಪೆಸರು ನಿನಗಂದಂತೆ । ದೇಶಾಧಿಪಗೆ ಬಂದ ಕುಹೂ ಯೋಗವನು ನೂಕಿ । ನೀ ಸಿಂಹಾಸನವೇರಿ ಮೆರೆದೆ ಜಗವರಿಯೇ । ವ್ಯಾಸಾಬ್ಧಿಯನು ಬಿಗಿಸಿ ಕಾಶಿ ದೇಶದೊಳೆಲ್ಲ । ಭಾಸುರ ಕೀರ್ತಿಯನು ಪಡೆದೆ ನೀ ಗುರುರಾಯ । ವಾಸುದೇವ ಪುರಂದರ ವಿಠ್ಠಲನ್ನ ದಾಸರೊಳು । ಲೇಶ ನಿನ್ನಂತೆ ವೆಗ್ಗಳರ ಕಾಣೆನು ನಾನು ।।
ಶ್ರೀ ಕನಕದಾಸರು....
ವ್ಯಾಸರಾಯರಿಗೆ ಮೂರು ಜನ್ಮ । ( ಶ್ರೀ ಪ್ರಹ್ಲಾದ - ಶ್ರೀ ಬಾಹ್ಲೀಕ - ಶ್ರೀ ವ್ಯಾಸರಾಜರು ), ದಾಸರಿಗೆ ಎರಡು ಜನ್ಮ । ( ಮಹಾಭಾರತದಲ್ಲಿನ ಶ್ರೀ ವಿದುರ ಮತ್ತು ಶ್ರೀ ಕನಕದಾಸರು ), ಶ್ರೀ ವ್ಯಾಸರಾಯರೇ ರಾಘವೇಂದ್ರರಾಯರು ( ಶ್ರೀ ವ್ಯಾಸರಾಜರ ಮುಂದಿನ ಅವತಾರವೇ ಶ್ರೀರಾಯರು ), ರಾಮಚಂದ್ರನ ಆಶ್ರಿತ ಜನ ಕೋಟಿಯೊಳಗೆ । ಉತ್ಕ್ರುಷ್ಠರಾದವರು । ನಾರದರ ಅಂಶವೇ ಪುರಂದರ ದಾಸರು । ತಮ್ಮ ಕೂಸಾದ ಭೃಗು ಮುನಿಯಲ್ಲಿ । ತಾವು ಒಂದು ಅಂಶದಿ ನಿಂದು ವಿಜಯದಾಸರೆಂದು ಪೆಸರು ಪಡೆವ । ನಾ ಯಮನು ಮುಂದೆ ಮಾಂಡವ್ಯ ಶಾಪದಿಂದ ಎರಡು ಜನ್ಮ ಶೂದ್ರ ಯೋನಿಯಲ್ಲಿ ಪೊಕ್ಕೆನಲು । ಒಂದು ಜನುಮ ವಿದುರನಾಗಿ ಕುರುಬ ಕುಲದಲ್ಲೀಗ ಪುಟ್ಟಿದೆ । ಎನಗೆ ಈ ಜನ್ಮದಲ್ಲಿ ಮುಕುತಿ ಎಂತೆಂಬೆ । ವರದಪ್ಪನೇ ಸೋಮ । ಗುರುರಾಯ ದಿನಕರನು । ಅಭಿನವ ಬೃಹಸ್ಪತಿ । ಮಧ್ವಪತಿ ಭೃಗು ಅಂಶದಿ ಮೆರೆವ । ಮಹಾ ಮಹಿಮೆ ಪೊಗಳುವೆನು । ಭಾಗವತರೊಳು ಯೋಗೀಂದ್ರ ಕೃಷ್ಣನ್ನ । ಬಾಗಿ ನಮಿಸುವ ದಾಸ ಜನರ ಪೋಷಕ ಕಾಗಿನೆಲೆಯಾದಿ ಕೇಶವರಾಯ । ದಾಸೋತ್ತಮರ ಗುಣವನ್ನು ಕನಕದಾಸ ಪೇಳಿದನು ।।
ಶ್ರೀ ವಿಜಯೀ೦ದ್ರತೀರ್ಥರು ಶ್ರೀ ವ್ಯಾಸರಾಜ ಸ್ತೋತ್ರದಲ್ಲಿ....
ಪ್ರಹ್ಲಾದಸ್ಯಾವತಾರೋ ಸಾವೀಂದ್ರಸ್ಯಾನುಪ್ರವೇಶನಾತ್ ।
ತೇನೆ ಸತ್ಸೇವಿನಾಂ ನೃಣಾಂ ಸರ್ವಮೇತದ್ಭವೇ ಧ್ರುವಮ್ ।।
ಶ್ರೀ ವಿಜಯರಾಯರು....
ವೃಕೋದರನಿಂದ ನೊಂದು ದೇಹವನು ಬಿಡುವಾಗ । ಬಾ । ಹ್ಲೀಕ ರಾಯನಾಗಿ ಹುಟ್ಟಿದ್ದ ಪ್ರಹ್ಲಾದ । ತಾ ।
ನುಕುತಿಯಲಿ ಪೊಗಳಿ ವರವ ಬೇಡಿದನು ವೈದಿಕ ಮಾರ್ಗವನೇ ಪಿಡಿದು ।। ಉಕಿತಿಯನು ಸಾಧಿಸುತ ಕಲಿಯೊಳಗೆ ನಿಮ್ಮ । ಪೂ । ಜಕನಾಗಿ ಬಾಳುವೆನು ಎಂದು ತಲೆವಾಗಿದನು । ಭಕುತಿಗೆ ಮೆಚ್ಚಿ ಕೈಸಲೆ ಎಂದ ಮಾತಿಂದು ಪ್ರಕಟವಾಯಿತು ಧರೆಯೊಳು ।।
" ಶ್ರೀ ಪ್ರಹ್ಲಾದರೇ ಶ್ರೀ ರಾಘವೇಂದ್ರತೀರ್ಥರು "
ಶ್ರೀ ಗೋಪಾಲದಾಸರು...
ಶೇಷಾಂಶ ಪ್ರಹ್ಲಾದ ವ್ಯಾಸ ಮುನಿಯೇ ರಾಘವೇಂದ್ರ ।
ಈ ಸುಬಗೆ ಪುಣ್ಯ ಇವರಿಗೆ ಕೇಶವನೆ ತಾ ಮಾಡಿಸಿ ।।
ಪ್ರಥಮ ಪ್ರಹ್ಲಾದ ವ್ಯಾಸ ಮುನಿಯೇ ।
ಯತಿ ರಾಘವೇಂದ್ರ ।।
ಶ್ರೀ ಪ್ರಾಣೇಶದಾಸರು...
ರಾಯರ ನೋಡಿರಿ ಗುರು ರಾಯರ ಪಾಡಿರೈ ।
ಸಿರಿ ಪ್ರಹ್ಲಾದ ವರ ಬಾಹ್ಲೀಕ ಗುರು ವ್ಯಾಸ ರಾಘವೇಂದ್ರ ।।
ಶ್ರೀ ಶ್ರೀಕರವಿಠಲರು...
ಸಹ್ಲಾದಣ್ಣನಣ್ಣ ಬಾರೋ । ಪ್ರಹ್ಲಾದರಾಜಾ ।
ಬಾಹ್ಲೀಕ ವ್ಯಾಸನಾಗಿ ಉಹ್ಲಾಸದಿಂದ ಬಾರೋ ।।
ರಾಜ ಬಾರೋ ಗುರುರಾಜ ಬಾರೋ ।
ರಾಜಾಧಿರಾಜ ಗುರುರಾಜ ಬಾರೋ ।।
" ಶ್ರೀ ವಾಯುದೇವರ ನಿತ್ಯಾವೇಶಯುಕ್ತರು ಶ್ರೀ ರಾಘವೇಂದ್ರತೀರ್ಥರು "
" ಬ್ರಹ್ಮಕಾಂಡ "
ವಾಯೂನಾ ಚ ಸಮಾವಿಷ್ಟಂ ಹರೇಃ ಪಾದಾಬ್ಜ ಸಂಶಯಂ ।
ಶ್ರೀಮದಾಚಾರ್ಯರು....
ವಾಯೂನಾ ಚ ಸಮಾವಿಷ್ಟಃ ಮಹಾಬಲ ಸಮನ್ವಿತಃ ।
ಪ್ರಹ್ಲಾದಾದುತ್ತಮಃ ಕೋನು ವಿಷ್ಣು ಭಕ್ತೌ ಜಗತ್ತ್ರಯೇ ।।
ಕೃಷ್ಣಗ್ರಹಗ್ರಹೀತಾತ್ಮ....... ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।।
ವಾಯೂನಾ ಚ ಸಮಾವಿಷ್ಟಃ ಮಹಾಬಲ ಸಮನ್ವಿತಃ । ಎಂದರೆ ವಾಯೂನಾಚ ನಿತ್ಯ ಸಮಾವಿಷ್ಟತ್ವಾತ್
ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।
" ನಿತ್ಯ " ಪದಕ್ಕೆ ಅರ್ಥವೇನೆಂದರೆ..
ಅವರ ಮುಂದಿನ ಅವತಾರಗಳಾದ ಶ್ರೀ ಬಾಹ್ಲೀಕ - ಶ್ರೀ ವ್ಯಾಸರಾಜ - ಶ್ರೀ ರಾಘವೇಂದ್ರತೀರ್ಥರು. ಇವರಲ್ಲೂ ಸಹಾ ಶ್ರೀ ವಾಯುದೇವರು ನಿತ್ಯಾವೇಶದಿಂದ ಇರುತ್ತಾರೆಂದು ಸ್ಪಷ್ಟ!
ಇನ್ನೊಂದು ಪದದಲ್ಲಿ....
ರಾಗ : ಹಂಸಾನಂದೀ ತಾಳ : ಆದಿ
ರಾಯರೇ ಗತಿಯು ನಮಗೆ ।
ವಾಯುಸುಮತೋದ್ಧಾರ ಶ್ರೀ ರಾಘವೇಂದ್ರ ಗುರು ।। ಪಲ್ಲವಿ ।।
ಶುಕ ಪಿಕ ಮೊದಲಾದ ವಿಕುಲಕ್ಕೆ ಮಧುರ ಫಲ ।
ಯುಕುತಮಾಗಿಹ ಚೂತ ಸುಕುಜ ಗತಿಯೋ ।
ಮುಕುತಿಗೆ ಸುಜ್ಞಾನ ಭಕುತಿ ವಿರುಕುತಿ ಗತಿಯು ।
ಅಕಳಂಕ ಶ್ರೀಮಂತ ಮಂದಿರದಿ ನೆಲಸಿಪ್ಪ ।। ಚರಣ ।।
ಋಷಿಗಳಿಗೆ ಪ್ರಣವವೇ ಗತಿ ಝಷಗಳಿಗೆ ಜಲವೇ ಗತಿ ।
ಸಸಿಗಳಭಿವೃದ್ಧಿಗೆ ಶಶಿಯೇ ಗತಿಯು ।
ಶಿಶುಗಳಿಗೆ ಜಲವೆ ಗತಿ ಪಶುಗಳಿಗೆ ತೃಣವೆ ಗತಿ ।
ಈಸು ಮಹಿಮೆಲಿ ಮೆರೆವ ಮಿಸುನಿ ಶಯ್ಯಜರಾದ ।। ಚರಣ ।।
ಕಾಮಿನೀ ಮಣಿಯರಿಗೆ ಕೈಪಿಡಿದ ಕಾಂತ ಗತಿ ।
ಭೂಮಿ ವಿಬುಧರಿಗೆ ಮಧ್ವ ಶಾಸ್ತ್ರ ಗತಿಯೋ ।
ತಾಮರಸ ಸಖ ಸುತನ ಭಯ ಪೋಪುವುದಕೆ । ಶ್ರೀ ।
ಶ್ಯಾಮಸುಂದರ ವಿಠ್ಠಲ ಸ್ವಾಮಿ ನಾಮವೇ ಗತಿಯೋ ।। ಚರಣ ।।
ವಿವರಣೆ :
ಶುಕ = ಗಿಳಿ
ಪಿಕ = ಕೋಗಿಲೆ
ವಿಕುಲ = ಪಕ್ಷಿ ಕುಲ
ಚೂತ ಸುಕುಜ = ಒಳ್ಳೆಯ ಮಾವಿನ ಮರ
ಪ್ರಣವ = ಓಂಕಾರ
ರುಷಗಳು = ಜಲಚರ ಪ್ರಾಣಿಗಳು
ಮಿಸುನಿಶಯ್ಯಜ = ಹಿರಣ್ಯಕಶಿಪುವಿನ ಮಗ
ತಾಮರಸ ಸಖ = ಕಮಲದ ಹೂವಿಗೆ ಮಿತ್ರನಾದ ಸೂರ್ಯ
ಸುತನ = ಯಮಧರ್ಮರಾಜರ
ಧಾಮ = ಪುರಕ್ಕೆ
ಶ್ರೀ ರಾಯರನ್ನು ಯಾರು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಪೂಜಿಸುತ್ತಾರೋ, ಭಜಿಸುತ್ತಾರೋ, ಶ್ರೀ ರಾಯರೇ ಗತಿಯೆಂದು ಸರ್ವ ಕಾಲಗಳಲ್ಲಿಯೂ ಸೇವಿಸುತ್ತಾರೋ ಅವರಿಗೆ ಶ್ರೀ ಯಮಧರ್ಮರಾಜರ ಭಯವು ಅಂದರೆ " ನರಕ " ದ ಭಯ ಇಲ್ಲ ಎನ್ನುವುದನ್ನು ಶ್ರೀ ಶ್ಯಾಮಸುಂದರದಾಸರು ಶ್ರೀ ರಾಘವೇಂದ್ರ ಗುರುರಾಯರ ಅದ್ಭುತ ಮಹಿಮೆಯನ್ನು ಅತಿ ಮನೋಜ್ಞವಾಗಿ ಸರಳ ಸುಂದರವಾಗಿ ತಿಳಿಸಿದ್ದಾರೆ.
ಮತ್ತೊಂದು ಪದ್ಯದಲ್ಲಿ....
ರಾಗ : ಕಾಂಬೋಧಿ ತಾಳ : ಝಂಪೆ
ಸತತ ಪಾಲಿಸೋ ಯೆನ್ನ ।
ಯತಿ ರಾಘವೇಂದ್ರ ।
ಪತಿತ ಪಾವನ ಪಾವನ ।
ಸುತ ಮತಾಂಬುಧಿ ಚಂದ್ರ ।। ಪಲ್ಲವಿ ।।
ನಂಬಿದೆನೋ ನಿನ್ನ ಚರಣಾಂಬುಜವ ಮನ್ಮನದ ।
ಹಂಬಲವ ಪೂರೈಸೋ ಬೆಂಬಿಡದಲೆ ।
ಕುಂಭಿಣೀಸುರ ನಿಕುರುಂಬ ವಂದಿತ ಜಿತ ।
ಶಂಬರಾಂತಕ ಶಾತಕುಂಭ ಕಶ್ಯಪ ತನಯ ।। ಚರಣ ।।
( ಕುಂಭಿಣೀಸುರ = ಭೂಸುರ; ನಿಕುರುಂಬ = ಸಮೂಹ; ಶಾತಕುಂಭ = ಬಂಗಾರ; ಶಾತಕುಂಭಕಶ್ಯಪ = ಹಿರಣ್ಯಕಶಿಪು; ಶಾತಕುಂಭಕಶ್ಯಪ ತನಯ = ಹಿರಣ್ಯಕಶಿಪುವಿನ ಮಗ ಪ್ರಹ್ಲಾದ )
ಕ್ಷೋಣಿಯೊಳು ನೀ ಕುಂಭಕೋಣ ಕ್ಷೇತ್ರದಿ ಜನಿಸಿ ।
ವೀಣಾ ವೇಂಕಟ ಅಭಿದಾನದಿಂದ ।
ಸಾನುರಾಗದಿ ದ್ವಿಜನ ಪ್ರಾಣ ಉಳುಹಿದ ಮಹಿಮ ।
ಯೇನೆಂದು ಬಣ್ಣಿಸಲಿ ಜ್ಞಾನಿಕುಲ ತಿಲಕ ।। ಚರಣ ।।
ಮಂದಮತಿಗಳ ಸಂಗದಿಂದ ನಿನ್ನಯ ಚರಣ ।
ಇಂದಿನ ತನಕ ನಾ ಪೊಂದಲಿಲ್ಲ ।
ಕುಂದು ಯೆಣಿಸದೆ ಕಾಯೋ ಕಂದರ್ಪ ಪಿತ । ಶ್ಯಾಮ ।
ಸುಂದರನ ದಾಸ ಕರ್ಮಂದಿ ಕುಲವರಿಯ ।। ಚರಣ ।।
ನಮ್ಮ ನಿಮ್ಮೆಲ್ಲರಿಗೂ ರಾಯರೇ ಗತಿಯು ನಮಗೆ ಶ್ರೀ ರಾಘವೇಂದ್ರ ಗುರುರಾಯರೇ ಗತಿಯು!!!!!
ನಮ್ಮ ಪ್ರೀತಿಯ ಗುರುಗಳಾದ ಶ್ರೀ ಶ್ಯಾಮಸುಂದರ ದಾಸರ ಕೃತಿ ಸ್ಮರಣೆ ಮಾಡಿ ಅವರ ಅವರ ಅಂತರ್ಯಾಮಿ ಶ್ರೀ ಜಗನ್ನಾಥದಾಸರ, ಶ್ರೀ ರಾಯರ ಅಂತರ್ಯಾಮಿ ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀಮನ್ಮೂಲರಘುಪತಿ ವೇದವ್ಯಾಸೋsಭಿನ್ನ ಶ್ರೀ ಲಕ್ಷ್ಮೀನಾರಾಯಣನು ಎಲ್ಲಾ ಸಜ್ಜನ ವೃಂದಕ್ಕೆ ಪರಮಾನುಗ್ರಹ ಮಾಡಲಿ ಎಂದು ಪ್ರಾರ್ಥಿಸುವ....
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
****
" ಶ್ರೀ ಶ್ಯಾಮಸುಂದರ - 3 "
" ಶ್ರೀ ಮಹಾರುದ್ರದೇವರ ಪರವಾದ ಸ್ತೋತ್ರ ಸಾಹಿತ್ಯ "
" ಹಂಪಿ ಕ್ಷೇತ್ರಸ್ಥ ಶ್ರೀ ವಿರೂಪಾಕ್ಷ ಸ್ತೋತ್ರ "
ರಾಗ : ಕಾಂಬೋಧಿ  ತಾಳ : ಝ೦ಪೆ
ಪಾಲಿಸೆನ್ನನು ಪಂಪಾಕ್ಷೇತ್ರ ವಾಸ ।
ಫಾಲಲೋಚನ ಶಂಭೋ
ವ್ಯೋಮಕೇಶ ।। ಪಲ್ಲವಿ ।।
ನೀಲಲೋಹಿತ ವೀತಚೈಲ
ಭೂಷಿತಭಸಿತ ।
ಕಾಲಾರಿ ಶಿವ ದ್ರೌಣಿ
ಶೂಲಪಾಣಿ ।
ವ್ಯಾಳಮಾಲನೆ ನೀನು
ಕಾಲಕೂಟವ ಮೆದ್ದು ।
ತಾಳಲಾರದೆ ಕೊಂಡ
ಮೇತೌಷಧವನಿತ್ತು ।। ಚರಣ ।।
ವ್ಯಾಧ ರೂಪದಿ ರಣದಿ
ಕಾದು ಪಾರ್ಥಗೆ ಸೋತು ।
ನೀ ದಯದಿ ದಿವ್ಯಾಸ್ತ್ರ
ಕರುಣಿಸಿದೆಯೋ ।
ಮೇದಿನೀಶಗೆ ಶಾಸ್ತ್ರ
ಬೋಧಿಸಿದ ಮುನಿವರ್ಯ ।
ವೇಧನಂದನ ನಿನ್ನ
ಪಾದಕ್ಕೆ ನಮಿಸುವೆನು ।। ಚರಣ ।।
ಕಾಮಾರಿ ಸುಪವಿತ್ರ
ಸೋಮಾರ್ಕ ಶಿಖಿನೇತ್ರ ।
ಶ್ಯಾಮಸುಂದರಸ್ವಾಮಿ ಮಿತ್ರ ।
ಭೀಮ ಪಾವನ ಗಾತ್ರ
ಪ್ರೇಮಾಬ್ಧಿ ಸುಚರಿತ್ರ ।
ಹೈಮವತಿ ಕಳತ್ರ
ಮಹಿಮಾ ವಿಚಿತ್ರ ।। ಚರಣ ।।
ಇನ್ನೊಂದು ಕೃತಿಯಲ್ಲಿ....
" ಮಾನ್ವಿ ತಾಲೂಕಿನ ಶಿರಿವಾರ ಕ್ಷೇತ್ರಸ್ಥ ಶ್ರೀ ರಾಮಲಿಂಗದೇವರ ಸ್ತೋತ್ರ "
ರಾಗ : ಶಂಕರಾಭರಣ   ತಾಳ : ಅಟ
ಪಾಲಿಸೊ ಸದಾ ಪಾಲಿಸೊ ।। ಪಲ್ಲವಿ ।।
ಪಾಲಿಸೊ ಪಾರ್ವತಿರಮಣ । ತ್ರಿದ ।
ಶಾಲಯ ಪತಿನುತ ಚರಣ ।। ಆಹಾ ।।
ನಾಲಿಗೆಯಿಂದಲಿ ಶ್ರೀಲಕುಮೀಶನ ।
ಲೀಲೆ ಪಾಡುವ ಸುಖ
ಕಾಲಕಾಲಕೆ ಕೊಟ್ಟು ।। ಅ ಪ ।।
ಭೇಶ ಪಾವಕ ಪತಂಗ - ನಯನ ।
ಭಾಸುರ ಸ್ಫಟಿಕ ನಿಭಾಂಗ - ಹರಿ ।
ದಾಸ ಜನರ ಸುಸಂಗ - ವಿತ್ತು ।
ದೋಷ ಕಳೆಯೋ ರಾಮಲಿಂಗ ।। ಆಹಾ ।।
ವಾಸುಕಿ ಭೂಷ ಶಿರಿವಾಸರನಿಕಟಾಗ ।
ವಾಸ ವಿವರ್ಜಿತ ವಾಸ ದುರ್ವಾಸನೆ ।। ಚರಣ ।।
ಕೇರ ಕುಮಾರ ಕುಮಾರ - ಪಿತ ।
ಕೀರ ನಾಮಕನವತಾರ - ಕೀರ ।
ದೇರನ ಗರ್ವ ಪರಿಹಾರ - ತಾಟ ।
ಕಾರಿ ನಾಮ ಸವಿಗಾರ ।। ಆಹಾ ।।
ಕಾರುಣ್ಯಶರಧಿ ವೈಕಾರಿಕ ತತ್ತ್ವಾಧಿ-
ಕಾರಿ ವಿಕಾರಿ ಕ್ಷಕಾರ ಪದಾರ್ಚಕ ।। ಚರಣ ।।
ನಂದಿವಾಹನ ನಗಶರನೇ - ನೀಲ ।
ಕಂಧರ ಸುರನದಿ ಧರನೆ - ಶ್ಯಾಮ ।
ಸುಂದರ ವಿಠಲನ ಸಖನೆ - ಮಹಿ ।
ಸ್ಯಂದನ ಶಿವ ಶಂಕರನೆ ।। ಆಹಾ ।।
ಒಂದೂರಾರ್ಯರ
ಕರದಿಂದ ಪೂಜಿತನಾಗಿ ।
ನಿಂದು ಭಜಪರಿಗಾನಂದವೀವ
ದೇವ ।। ಚರಣ ।।
" ವಿವರಣೆ "
" ಭೇಶ ಪಾವಕ ಪತಂಗ ನಯನ "
[ ಭೇಶ = ಚಂದ್ರ; ಪಾವಕ = ಅಗ್ನಿ; ಪತಂಗ = ಸೂರ್ಯ ]
ಬಳಗಣ್ಣಿನಲ್ಲಿ ಸೂರ್ಯ; ಎಡಗಣ್ಣಿನಲ್ಲಿ ಚಂದ್ರ ಮತ್ತು ಫಾಲ ನೇತ್ರದಲ್ಲಿ ಅಗ್ನಿ - ಹೀಗೆ ಮುಕ್ಕಣ್ಣನಾದ ಶ್ರೀ ಮಹಾರುದ್ರದೇವರು.
ಭಾಸುರ = ಮನೋಹರವಾದ
ಸ್ಫಟಿಕ = ಬಿಳಿ ಬಣ್ಣಯುಕ್ತ
ನಿಭಾಂಗ = ಪ್ರಕಾಶಮಾನವಾದ ದೇಹ ಕಾಂತಿಯುಳ್ಳ
ಸಿರಿವಾಸರ = ಶ್ರೀದೇವಿಯನ್ನು ತನ್ನ ವಕ್ಷದಲ್ಲಿ ಧರಿಸಿರುವ ಶ್ರೀ ಹರಿ
" ನಿಕಟಾಗ "
ಶ್ರೀ ಹರಿಗೆ ಸಮೀಪ  ವರ್ತಿಯಾದ ಅಂದರೆ ಶ್ರೀ ಹರಿಯ ದ್ವಿತೀಯಾಂಗ ಭೂತರು.
ವಾಸ ವಿವರ್ಜಿತ = ದಿಗಂಬರ
" ಕೇರ ಕುಮಾರ "
ಶ್ರೀ ಚತುರ್ಮುಖ ಬ್ರಹ್ಮದೇವರು ಮತ್ತು ಶ್ರೀ ವಾಯುದೇವರ ಮಕ್ಕಳು
[ ಕ + ಈರ = ಕೇರ; ಕ = ಶ್ರೀ ಬ್ರಹ್ಮದೇವರು, ಈರ = ಶ್ರೀ ವಾಯುದೇವರು ]
ಕೀರ = ಗಿಳಿ
ಕೀರನಾಮಕನವತಾರ = ಶ್ರೀ ಶುಕಾಚಾರ್ಯರು
ಕೀರದೇರನ = ಗಿಳಿಯನ್ನೇ ವಾಹನವನ್ನಾಗಿ ಉಳ್ಳ ಮನ್ಮಥ
" ತಾಟಕಾರಿ ನಾಮ ಸವಿಗಾರ "
ಶ್ರೀ ರಾಮ ತಾರಕ ನಾಮದ ಸವಿಯನ್ನು ಸದಾ ಉಂಡು ಆನಂದಿಸುತ್ತಿರುವ ಶ್ರೀ ಮಹಾರುದ್ರದೇವರು
" ವೈಕಾರಿಕ "
ಶ್ರೀ ಮಹಾರುದ್ರದೇವರು ಅಹಂಕಾರ ತತ್ತ್ವಕ್ಕೆ ಅಭಿಮಾನಿ.
ಅಹಂಕಾರ ತತ್ತ್ವವು ವೈಕಾರಿಕ - ತೈಜಸ - ತಾಮಸ ಎಂದು ಮೂರು ಪ್ರಕಾರ.
" ಕ್ಷಕಾರ ಪದಾರ್ಚಕ "
ಕ್ಷಕಾರ ವಾಚ್ಯನಾದ ಶ್ರೀ ಲಕ್ಷ್ಮೀ ನರಸಿಂಹದೇವರ ಪಾದ ಪದ್ಮಾರ್ಚಕರು ಶ್ರೀ ರುದ್ರದೇವರು.
[ ಶ್ರೀ ರುದ್ರದೇವರ ಬಿಂಬ ಶ್ರೀ ಸಂಕರ್ಷಣಾsಭಿನ್ನ ಶ್ರೀ ಲಕ್ಷ್ಮೀ ನರಸಿಂಹದೇವರು ]
ನೀಲಕಂಧರ = ವಿಷಕಂಠ
ಸುರನದಿಧರನೆ = ಗಂಗಾಧರನೆ
ಮಹಿಶ್ಯಂದನ = ಭೂಮಿಯನ್ನೇ ರಥವನ್ನಾಗಿ ಮಾಡಿಕೊಂಡವನು
ಒಂದೂರಾರ್ಯರ = ಶ್ರೀ ಐಕೂರು ಆಚಾರ್ಯರು
( ಒಂದು + ಊರು = ಐಕೂರು )
ಮತ್ತೊಂದು ಕೃತಿಯಲ್ಲಿ.....
" ಶ್ರೀ ರಾಮೇಶ್ವರ ಕ್ಷೇತ್ರಸ್ಥ ಶ್ರೀ ರಾಮೇಶ್ವರನ ಸ್ತೋತ್ರ "
ರಾಗ : ಮಾಲಕೌಂಸ   ತ್ರಿತಾಳ
ರಾಮೇಶ್ವರನ ನೋಡೋ -
ಹೇ ಮಾನವ ।
ರಾಮೇಶ್ವರನ ನೋಡೋ
ನೇಮದಿ ಕೊಂಡಾಡೊ ।
ನೀ ಮಾಡಿದಂಥ ಪಾಪ -
ಸ್ತೋಮಗಳ ಈಡ್ಯಾಡೋ ।। ಪಲ್ಲವಿ ।।
ಘೋರಾಘದೂರವು
ಭಯವಾರಿಧಿ
ಮಧ್ಯದಲ್ಲಿ ।
ನಾರಶೂರ ರಘುವೀರನು
ಸ್ಥಾಪಿಸಿದ ।। ಚರಣ ।।
ಚಿತ್ತಶುದ್ಧಿಲಿ ಬಂದ ಭೃತ್ಯ
ಜನರ ಬ್ರಹ್ಮ-
ಹತ್ಯಾದಿ ದೋಷ ಕ
ಳೆದು ಉತ್ತಮ
ಗತಿ ಕೊಡುವ ।। ಚರಣ ।।
ಶ್ರೀ ಶ್ಯಾಮಸುಂದರ
ದಾಶರಥಿಯ ಮಹಿಮೆ ।
ಲೇಸಾಗಿ ಸತಿಗೆ
ಪೇಳ್ದ ಭೇಶ
ಶೇಖರನಾದ ।। ಚರಣ ।।
ಮಗದೊಂದು ಕೃತಿಯಲ್ಲಿ....
ರಾಗ : ಪೀಲು   ತಾಳ : ದೀಪಚಂದಿ
ಕರುಣದಿ ಕೊಡು ವರವ ।
ಗುರು ಮಹಾದೇವ ।। ಪಲ್ಲವಿ ।।
ನಿರುತ ಸ್ಮರಿಸುವ ।
ಶರಣ ಸಂಜೀವ ।
ಪರಿಪಾಲಿಸನುದಿನ ।।
ಹರಿ ಕುಮಾರನ ।
ಗರ್ವವನದಾವ -
ಮಹಾನುಭಾವ ।। ಅ ಪ ।।
ಸ್ಫಟಿಕ ಸನ್ನಿಭ ಧವಳ ಶುಭಗಾತ್ರ ।
ಕುಟಿಲ ದಾನವ ಕಟಕ
ವಂಚಕ ಯಕ್ಷಪತಿ ಮಿತ್ರ ।
ಚಟುಲ ವಿಕ್ರಮ
ಸುಗಮದಯ ಧೂರ್ಜಟಿಯೆ
ಸುಚರಿತ್ರ ।
ಹೇ ನಿಟಿಲ ನೇತ್ರ ।। ಚರಣ ।।
ಆದ್ರಿ ವೈರಿಯ ತನಯ-
ನೊಡನೆ ಯುದ್ಧಗೈದಾತ ।
ಭದ್ರದಾಯಕ ರುದ್ರದೇವ
ಪ್ರಸಿದ್ಧ ಮುನಿ ನಮಿತ ।
ಸ್ವರ್ದುನೀಧರ ದದ್ದಲಾಪುರಸದ್ಮ
ಸುಖದಾತ ಹೇ ಸದ್ಯೋಜಾತ ।। ಚರಣ ।।
ಶ್ಯಾಮಸುಂದರ ಸ್ವಾಮಿ
ಪ್ರಿಯ ಸಖ ಸೋಮಶೇಖರನೆ ।
ಪ್ರೇಮದಿಂದಲಿ ರಕ್ಷಿಸೆನ್ನನು
ಭೂಮಿಸ್ಯಂದನನೇ ।
ಕಾಮಿತಪ್ರದ ವಾಮದೇವನೇ
ಹೇಮವತಿಧವನೇ
ನಿಸ್ಸೀಮ ಮಹಿಮನೆ ।। ಚರಣ ।।
ಮತ್ತೊಂದು ಕೃತಿಯಲ್ಲಿ....
ರಾಗ : ಕಾಂಬೋಧಿ  ತಾಳ : ಝ೦ಪೆ
ಅಂಬಿಕಾಪತಿ ಶಂಭು ರಕ್ಷಿಸೆನ್ನ ।
ಶಂಬರಾರಿ ಹರನೆ
ನಂಬಿದೆನೋ ನಿನ್ನ ।। ಪಲ್ಲವಿ ।।
ಭವ  ಕಮಲಭವ ಭೃಕುಟಿ
ಭವ ಹರನೆ ನೀ ಯೆನ್ನ ।
ಅವಗುಣಗಳೆಣಿಸದಿರು
ಕವಿಗೆಯನೇ ।
ಅವನಿಯೊಳಗೀಗ
ಸುವಿವೇಕಿಗಳ ಸಂಗ ।
ಜವದಿ ಪಾಲಿಸು ಮುದದಿ
ಜವನಾರಿ ಶಿವನೇ ।। ಚರಣ ।।
ಬಲ ವಿರೋಧಿ ವಿನುತಾ
ಇಳೆವರೂಥನೆ ನಿರುತ ।
ತಲೆ ಬಾಗಿ ಬೇಡುವೆನು
ಸಲಹೆಂದು ನಾ ।
ಎಲರುಣಿ ಭೂಷಣನೆ
ಒಲಿದು ಪಾಲಿಸು ದಯದಿ ।
ಛಳಿ ಗಿರೀಶನ ಅಳಿಯ
ನಳಿನಾರಿಧರನೇ ।। ಚರಣ ।।
ಸಿರಿ ಶ್ಯಾಮಸುಂದರ
ವಿಠಲನ ಸಖನೇ ।
ಮೊರೆಹೊಕ್ಕೆ ಮರೆಯದಿರು
ಗರಗೊರಳನೇ ।
ಕರುಣದಿಂದಲಿ ನಿನ್ನ
ಚಾರಣ ಸೇವೆಯನಿತ್ತು ।
ಕರ ಪಿಡಿದು ಕಾಪಾಡೊ
ಕರಿಚರ್ಮಧರನೆ ।। ಚರಣ ।।
" ಶ್ರೀ ರುದ್ರದೇವರ ಕುರಿತು ಮತ್ತಷ್ಟು ಮಾಹಿತಿ "
೧. ಶ್ರೀ ರುದ್ರದೇವರು ೫ನೇ ಕಕ್ಷಾಪನ್ನರು.
೨. ಶ್ರೀ ಗರುಡ - ಶ್ರೀ ಶೇಷ - ಶ್ರೀ ರುದ್ರದೇವರು ಸಮರು.
೩. ಸ್ವರೂಪ ಯೋಗ್ಯತೆಯಿಂದ ಶ್ರೀ ರುದ್ರದೇವರು, ಶ್ರೀ ಶೇಷದೇವರಿಂದ ಸಮರಾದರೂ, ಪದ ನಿಮಿತ್ತವಾದ ಅಲ್ಪ ನ್ಯೂನತೆಯುಳ್ಳವರು. ಶ್ರೀ ರುದ್ರದೇವರು ಶ್ರೀ ಶೇಷದೇವರ ಪದವಿಯಿಂದಲೇ ಮುಕ್ತರಾಗುವರು.
೪. ಮಹಾದೇವ - ರುದ್ರ - ಶಿವ - ಪರಮೇಶ್ವರ ಈ ಮೊದಲಾದ ನಾಮಗಳು ಅಹಂಕಾರ ತತ್ತ್ವದ ಅಭಿಮಾನಿ ದೇವತೆಯ ನಾಮಗಳು.
೫. ಅಹಂಕಾರ ತತ್ತ್ವವು ವೈಕಾರಿಕ, ತೈಜಸ, ತಾಮಸಗಳೆಂಬ ಮೂರು ಪ್ರಭೇದಗಳುಳ್ಳದ್ದು.
ಆ) ವೈಕಾರಿಕದಿನ ಮನಸ್ಸು ಮತ್ತು ತತ್ತ್ವಾಭಿಮಾನಿ ದೇವತೆಗಳೂ ( ಇಂದ್ರಾದಿ ದೇವತೆಗಳ ಸೂಕ್ಷ್ಮ ದೇಹಗಳೂ;
ಆ) ತೈಜಸದಿಂದ ಜ್ಞಾನ ಕರ್ಮೇಂದ್ರಿಯಗಳೂ;
ಇ) ತಾಮಸದಿಂದ ತನ್ಮಾತ್ರಗಳೂ, ಪಂಚ ಭೂತಗಳೂ ಉತ್ಪನ್ನವಾಗಿವೆ.
ಹೀಗಿರುವುದರಿಂದ ವೈಕಾರಿಕದಿಂದ ಹುಟ್ಟಿದ ಮನಸ್ತತ್ತ್ವಕ್ಕೂ ಶ್ರೀ ರುದ್ರದೇವರೇ ಅಭಿಮಾನಿಗಳೂ - ನಿಯಾಮಕರು.
ಈ) ಇಂದ್ರಿಯಗಳಿಂದ ವಿಷಯಗಳನ್ನು ಭೋಗಿಸಬೇಕೆಂಬ ಇಚ್ಛೆಯೂ, ತಜ್ಜನ್ಮ ಸುಖವೇ ಪುರುಷಾರ್ಥವೆಂದು ಭ್ರಮಿಸಿ, ವಿಷಯ ಭೋಗಗಳಲ್ಲಿ ಆಸಕ್ತರಾಗುವುದು " ರಾಗ " ವೆನಿಸುತ್ತದೆ.
ರಾಗವಿಲ್ಲದಿರುವುದೇ ವೈರಾಗ್ಯವು.
ವೈರಾಗ್ಯಕ್ಕೆ ಮನಸ್ಸೇ ಆಶ್ರಯ ಸ್ಥಾನವು.
ಮನೋ ನಿಯಾಮಕರಾದ ಶ್ರೀ ಮಹಾರುದ್ರದೇವರೇ ರಾಗವನ್ನು ಹೊರ ಹೊರಡಿಸಿ ವೈರಾಗ್ಯವನ್ನು ಕೊಡುವವರು. ಆದ್ದರಿಂದ ಶ್ರೀ ಮಹಾರುದ್ರದೇವರೇ ವೈರಾಗ್ಯವನ್ನು ಕರುಣಿಸಬೇಕು. ಅದಕ್ಕಾಗಿ ಶ್ರೀ ಮಹಾರುದ್ರದೇವರನ್ನೇ ಪ್ರಾರ್ಥಿಸಬೇಕು.
೬. ಶ್ರೀ ರುದ್ರದೇವರ ಸೃಷ್ಟಿ " ಹರಿವಂಶ " ದಲ್ಲಿ.....
ತತೋsಸೃಜತ್ ಪುನರ್ಬ್ರಹ್ಮಾ ರುದ್ರಂ
ರೋಷಾತ್ ಸಂಭವಮ್ ।
ಸನತ್ಕುಮಾರಂ ಚ ವಿಭು೦
ಪೂರ್ವೇಷಾಮಪಿ ಪೂರ್ವಜಮ್ ।। 32 ।।
ಸಪ್ತೈತೇ ಜನಯಂತಿ ಸ್ಮ ಪ್ರಜಾ ರುದ್ರಶ್ಚ
ಭಾರತ ।ಸಂಧ: ಸನತ್ಕುಮಾರಶ್ಚ
ತೇಜ: ಸಂಕ್ಷಿಪ್ಯ ತಿಷ್ಠತ: ।। 33 ।।
ಮುಂದೆ ಶ್ರೀ ಬ್ರಹ್ಮದೇವರು ತಮ್ಮ ಮನಸ್ಸಿನಿಂದ ಸನಕಾದಿ ಪುತ್ರರನ್ನು ಸೃಷ್ಟಿಸಿದರು.
" ನೀವೆಲ್ಲರೂ ಪ್ರಜಾ ಸೃಷ್ಟಿಯಲ್ಲಿ ತೊಡಗಿರಿ " ಎಂದು ಆಜ್ಞಾಪಿಸಿದರು.
ಅವರು ಪ್ರವೃತ್ತ ಧರ್ಮದಲ್ಲಿ ತೊಡಗಲು ಇಚ್ಛಿಸಲಿಲ್ಲ.
ಶ್ರೀ ಹರಿ ಪರಾಯಣರಾದ ಅವರು ಪ್ರಜಾ ಸೃಷ್ಟಿ ಕಾರ್ಯದಲ್ಲಿ ಪ್ರವೃತ್ತರಾಗಲಿಲ್ಲ.
ಮಕ್ಕಳು ತಂದೆಯ ಆಜ್ಞೆಯನ್ನು ಪಾಲಿಸದ ಕಾರಣ ವಿಧಿಯು ಕೋಪದಿಂದ ಕಿಡಿಯಾದರು.
ಹೀಗೆ ಕೋಪಗೊಂಡ ಶ್ರೀ ಬ್ರಹ್ಮದೇವರ ಭ್ರೂ ಮಧ್ಯದಿಂದ ಒಬ್ಬ ಬಾಲಕನು  ಇವರು ಕಾಲಾಗ್ನಿಯಂತೆ ಪ್ರಕಾಶಿಸುತ್ತಿದ್ದರು.
ಪರಮ ಕೋಪಿಷ್ಟರಾಗಿದ್ದರು.
ಕೋಪದಿಂದಾಗಿ ಅಳಲು ಪ್ರಾರಂಭಿಸಿದರು. ಇದಕ್ಕಾಗಿ " ರುದ್ರ " ರೆಂದು ಕರೆಯಲ್ಪಟ್ಟರು.
೭. ಅವತಾರಗಳು :-
ತಪ - ಶುಕ - ದುರ್ವಾಸ - ಅಶ್ವತ್ಥಾಮ - ವಾಮದೇವ - ಅಘೋರ - ಸದ್ಯೋಜಾತ - ಔರ್ವ ಇವು ೮ ಪ್ರಸಿದ್ಧ ಅವತಾರಗಳು. ಸದಾಶಿವ - ಊರ್ಧ್ವರೇತ - ಲಂಪಟ - ಜೈಗೀಷವ್ಯಗಳೆಂಬ ರೂಪಗಳೂ ಸೇರಿ ೧೨ ಎಂದು ಹೇಳಲಾಗಿದೆ.
೮. ಕಪಾಲ, ರುಂಡಮಾಲಗಳುಳ್ಳವನು, ಸ್ಮಶಾನವಾಸಿಯೂ ಆದ್ದರಿಂದ ಅಮಂಗಳನು ಎಂದು ತಿಳಿಯದಿರಲು " ಶಿವ " ಎಂದು ಕರೆಯಲ್ಪಡುವವರು.
೯. 28 ಲಕ್ಷಣಗಳಿಂದ ಶೋಭಿತರು.
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
" ಶ್ರೀ ಶ್ಯಾಮಸುಂದರ - 4 "
" ಶ್ರೀ ಶೇಷದೇವರ ಸ್ತುತಿ "
ರಾಗ : ಕಾಂಬೋಧಿ    ತಾಳ : ಝ೦ಪೆ 
ಪೋಷಿಸೆನ್ನನು ನಿರುತ 
ಶೇಷದೇವ ।
ದೋಷ ನಾಶನಗೊಳಿಸಿ 
ಲೇಸಾಗಿ ಪಿಡಿ ಕರವ ।। ಪಲ್ಲವಿ ।।
ವನಧಿಶಯನಿಗೆ ತಲ್ಪ 
ಅನುಜ ಪೂರ್ವಜನಾ ।
ಘನ ಸೇವೆಯನು ಗೈದ 
ಫಣಿರಾಜನೇ ।
ವಿನಯದಲಿ ಬಿನ್ನೈಪೆ 
ನಿನಗ ಶನವಾದಾತ ।
ಎನಗೊಲಿದು ಪೊರೆವಂತೆ 
ಅನುಗ್ರಹಿಸಿ ಅನುದಿನ ।। ಚರಣ ।।
ಭೂ ಗಗನ ಪಾತಾಳ 
ಸಾಗರವ ವ್ಯಾಪಿಸಿದ ।
ಯೋಗ ಸಾಧನ ಶೂರ 
ನಾಗನಾಥ ।
ಬಾಗಿ ಬೇಡುವೆ ಭವದ 
ರೋಗಕೌಷಧವಾದ ।
ಭಾಗವತ ಶ್ರವಣ ಸುಖ
ರಾಗದಲಿ ನೇ ಕೊಟ್ಟು ।। ಚರಣ ।।
ಸಾಸಿರಾಂಬಕ ನಮಿತ 
ಸಾಸಿರಾನನನಾದ ।
ವಾಸುಕೀಪರ ವಾರುಣೀಶ 
ನಿನ್ನ ।
ಹಾಸಿಗೆಯಗೈದಂಥ 
ಶ್ರೀ ಶ್ಯಾಮಸುಂದರನ ।
ದಾಸರಾದವರ ಸಹ
ವಾಸ ಪಾಲಿಸಿ ನಿತ್ಯ ।। ಚರಣ ।।
" ವಿವರಣೆ "
ವನಧಿಶಯನಗೆ = ಕ್ಷೀರ ಸಮುದ್ರ ಶಯನನಾದ ಶ್ರೀ ಹರಿಗೆ 
ತಲ್ಪ = ಹಾಸಿಗೆ 
ಅನುಜ = ಶ್ರೀ ಲಕ್ಷ್ಮಣದೇವರು  
ಪೂರ್ವಜನಾ = ಶ್ರೀ ಬಲರಾಮ ದೇವರು   
" ನಿನಗಶನವಾದಾತ ಎನಗೊಲಿದು ಪೊರೆವಂತೆ ಅನುಗ್ರಹಿಸಿ ಅನುದಿನದಿ " 
ಸರ್ಪಕ್ಕೆ ಆಹಾರವಾದ ಶ್ರೀ ವಾಯುದೇವರು. ಅಂದರೆ,
ಶ್ರೀ ವಾಯುದೇವರು ಎನಗೆ ಅನುಗ್ರಹಿಸಿ ರಕ್ಷಿಸುವಂತೆ ಮಾಡುಯೆಂದು ಶ್ರೀ ದಾಸಾರ್ಯರ ವಚನ. 
" ಭವದ ರೋಗಕೌಷಧವಾದ ಭಾಗವತ ಶ್ರವಣ ಸುಖರಾಗದಲಿ ನೇ ಕೊಟ್ಟು "
ಪ್ರಸಕ್ತ ಬ್ರಹ್ಮ ಕಲ್ಪದಲ್ಲಿರುವ ಶ್ರೀ ರುದ್ರದೇವರೇ ಶ್ರೀ ಭಾವಿ ಶೇಷದೇವರು. 
ಅಂತಹ ಶ್ರೀ ಶೇಷದೇವರು ಹಿಂದಿನ ಕಲ್ಪದಲ್ಲಿ ಶ್ರೀ ಮಹಾರುದ್ರದೇವರಾಗಿದ್ದಾಗ ಶ್ರೀ ಶುಕ ಮುನಿಗಳಾಗಿ ಪ್ರಯೋಪವೇಶ ದೀಕ್ಷಾಪರನಾಗಿದ್ದ ಶ್ರೀ ಪರೀಕ್ಷಿತ ಮಹಾರಾಜನಿಗೆ ಶ್ರೀಮದ್ಭಾಗವತ ಶಾಸ್ತ್ರವನು ಶ್ರವಣ ಮಾಡಿಸಿದವರು. 
ಸಾಸಿರಾಂಬಕ ನಮಿತ = ಸಹಸ್ರಾಕ್ಷರಾದ ಶ್ರೀ ಇಂದ್ರದೇವರಿಂದ ವಂದಿತರು 
ವಾರುಣೀಶ   ವಾರುಣೀದೇವಿಯರ ಪತಿ 
" ಹಾಸಿಗೆಯಗೈದಂಥ ಶ್ರೀ ಶ್ಯಾಮಸುಂದರನ 
ದಾಸರಾದವರ ಸಹವಾಸ ಪಾಲಿಸಿ ನಿತ್ಯ "
ನಿನ್ನನ್ನೇ ತನ್ನ ಹಾಸಿಗೆಯನ್ನಾಗಿ ಮಾಡಿಕೊಂಡ ಯೆನ್ನ ಬಿಂಬ ರೂಪಿಯಾದ ಶ್ರೀ ಶ್ಯಾಮಸುಂದರೋsಭಿನ್ನ ಶ್ರೀ ಹರಿಯ ದಾಸರ ಸಹವಾಸವನ್ನು ಎನಗಿತ್ತು ನನ್ನನ್ನು ನಿತ್ಯದಲಿ ಪರಿಪಾಲಿಸು ಎಂದು ಶ್ರೀ ಶ್ಯಾಮಸುಂದರ ದಾಸರು ನಮ್ಮ ಪರವಾಗಿ ಪ್ರಾರ್ಥಿಸಿದ್ದಾರೆ.  
" ಶ್ರೀ ಶೇಷದೇವರ ಕುರಿತು ಮತ್ತಷ್ಟು ಮಾಹಿತಿ "
" ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮ ವಿರಚಿತ ಪ್ರಮೇಯಸಂಗ್ರಹಃ " ದಲ್ಲಿ - ಶ್ರೀ ಶೇಷದೇವರು ".
।। ತತಃ ಸೂಕ್ಷ್ಮ ಸೃಷ್ಟಿ ಪ್ರಕಾರಃ ।।
ವಾಸುದೇವಾತ್ ಮಾಯಾಯಾ೦ 
ಪುರುಷನಾಮ ಜಾತಃ । 
ಸಂಕರ್ಷಣಾತ್ ಜಯಾಯಾ೦ 
ಸೂತ್ರ ನಾಮಾ ವಾಯುರ್ಜಾತಃ । 
ಪ್ರದ್ಯುಮ್ನಾತ್ ಪ್ರಕೃತ್ಯಾಂ
ಪ್ರಧಾನಸಂಜ್ಞಾ ಸರಸ್ವತೀ, ಶ್ರದ್ಧಾ, 
ಸಂಜ್ಞಾ, ಭಾರತೀ ಚ ಜಾತಾ ಇತಿ । 
ತತಃ ಪುರುಷನಾಮ್ನೋ ಬ್ರಹ್ಮಣಃ 
ಪ್ರಧಾನಸಂಜ್ಞಾಯಾ೦ ಸರಸ್ವತ್ಯಾಂ 
ಶೇಷನಾಮಕ ಜೀವೋ ಜಾತಃ । 
ಸೂತ್ರನಾಮ್ನೋ ವಾಯೋ: 
ಶ್ರದ್ಧಾಸಂಜ್ಞಾಯಾಂ ಭಾರತ್ಯಾಂ 
ಕಾಲನಾಮ ಗರುಡ ಉತ್ಪನ್ನ: ।।
ಶ್ರೀ ವಾಸುದೇವನಿಂದ ಶ್ರೀ ಮಾಯಾದೇವಿಯಲ್ಲಿ " ಪುರುಷ " ನೆಂಬುವನು ಹುಟ್ಟಿದನು.
ಶ್ರೀ ಸಂಕರ್ಷಣನಿಂದ ಶ್ರೀ ಜಯಾದೇವಿಯಲ್ಲಿ " ಸೂತ್ರ " ನಾಮಕರಾದ ಶ್ರೀ ವಾಯುದೇವರು ಹುಟ್ಟಿದರು.
ಶ್ರೀ ಪ್ರದ್ಯುಮ್ನನಿಂದ ಶ್ರೀ  ಕೃತೀದೇವಿಯಲ್ಲಿ " ಪ್ರಧಾನ " ಎಂಬ ಹೆಸರುಳ್ಳ ಶ್ರೀ ಸರಸ್ವತೀದೇವಿಯರೂ, " ಶ್ರೀ ಶ್ರದ್ಧಾ " ಎಂಬ ಹೆಸರುಳ್ಳ ಶ್ರೀ ಭಾರತೀದೇವಿಯರು ಹುಟ್ಟಿದರು.
ಅನಂತರ ಶ್ರೀ ಪುರುಷ ನಾಮಕರಾದ ಶ್ರೀ ಬ್ರಹ್ಮದೇವರಿಂದ ಶ್ರೀ ಪ್ರಧಾನ ಎಂಬ ಹೆಸರುಳ್ಳ ಶ್ರೀ ಸರಸ್ವತೀದೇವಿಯರಲ್ಲಿ " ಶ್ರೀ ಶೇಷ " ನೆಂಬ ಜೀವನು ( ಜೀವಾಭಿಮಾನಿಯು ) ಹುಟ್ಟಿದರು.
" ಸೂತ್ರ " ವೆಂದರೆ ಶ್ರೀ ಮುಖ್ಯಪ್ರಾಣದೇವರು. ಅವರಿಂದ ಶ್ರೀ ಶ್ರದ್ಧೆ ಯೆಂಬ ಹೆಸರಿನ ಶ್ರೀ ಭಾರತೀದೇವಿಯರಲ್ಲಿ " ಕಾಲ " ನೆಂಬ ಹೆಸರಿನ ಶ್ರೀ ಗರುಡನು ಉತ್ಪನ್ನರಾದರು.
ಸೂಕ್ಷ್ಮ ಸೃಷ್ಟಿಯಲ್ಲಿ ಶ್ರೀ ಮಾಯಾ ಪತಿ ಶ್ರೀ ವಾಸುದೇವನಿಂದ " ಪುರುಷ " ನಾಮಕ " ವಿರಿಂಚಿ ", ಶ್ರೀ ಜಯಾ ಪತಿ ಶ್ರೀ ಸಂಕರ್ಷಣನಿಂದ " ಸೂತ್ರ " ನಾಮಕ ಶ್ರೀ ವಾಯುದೇವರು ( 2 ವರ್ಷಗಳ ನಂತರ ) ಪ್ರಾರಂಭದಲ್ಲಿ; ಶ್ರೀ ಕೃತಿ ಪತಿ ಶ್ರೀ ಪ್ರದ್ಯುಮ್ನ ನಿಂದ ಪ್ರಕೃತಿ ಮತ್ತು ಶ್ರದ್ಧಾ ದೇವಿಯರು ( 3 ವರ್ಷಗಳ ನಂತರ ) ಉತ್ಪತ್ತಿಯಾದರು.
ತರುವಾಯ ಮುಂದಿನ 2 ವರ್ಷಗಳ ಅವಧಿಯಲ್ಲಿ " ಪುರುಷ " ನಾಮಕ ಶ್ರೀ ಬ್ರಹ್ಮದೇವರಿಂದ " ಪ್ರಕೃತಿ " ( ಸರಸ್ವತೀ ) ಯಲ್ಲಿ " ಜೀವ " ನಾಮಕ ಶ್ರೀ ಶೇಷದೇವರು ಸ್ರಷ್ಟರಾದರು.
ತಾರತಮ್ಯ ಕ್ರಮದಲ್ಲಿ 5ನೇ ಕಕ್ಷಾಪನ್ನರು ಶ್ರೀ ಶೇಷದೇವರು.
ಅಹಂಕಾರ ತತ್ತ್ವಾಭಿಮಾನಿಗಳಾದ ಶ್ರೀ ಗರುಡ - ಶ್ರೀ ಶೇಷ - ಶ್ರೀ ರುದ್ರದೇವರುಗಳು ಸಮ ಕಕ್ಷೆಯಲ್ಲಿದ್ದಾರೆ.
ಶ್ರೀ ಶೇಷದೇವರು ಪದವಿ ದೃಷ್ಟಿಯಿಂದ ಶ್ರೀ ರುದ್ರದೇವರಿಗಿಂತ ಕಿಂಚಿತ್ ಅಧಿಕರು.
ಶ್ರೀ ಶೇಷದೇವರು " ಪ್ರಾಕ್ ಬ್ರಹ್ಮ ಕಲ್ಪದ " ಶ್ರೀ ರುದ್ರದೇವರು. 
ಅಂದರೆ ಪ್ರಸಕ್ತ ಕಲ್ಪದಲ್ಲಿ ಸಾಧನ ಮಾಡುತ್ತಿರುವ ಶ್ರೀ ರುದ್ರದೇವರಿಗೆ ಮುಂದಿನ ಬ್ರಹ್ಮ ಕಲ್ಪದಲ್ಲಿ " ಶೇಷ ಪದವಿ " ಪ್ರಾಪ್ತಿ. ಆ ಪದವಿಯಿಂದ ಶ್ರೀ ರುದ್ರದೇವರಿಗೆ ಮುಕ್ತಿ.
ಅಹಂಕಾರ ತತ್ತ್ವದಲ್ಲಿ ಶ್ರೀ ಶೇಷದೇವರು ಜೀವಾಭಿಮಾನಿಗಳಾಗಿದ್ದಾರೆ. ವೈರಾಗ್ಯೋಪೇತವಾದ ಮನಸ್ಸಿಗೆ ಅಭಿಮಾನಿಗಳು.
5ನೇ ಕಕ್ಷೆಯಲ್ಲಿ ಶ್ರೀ ಗರುಡದೇವರಿಗೆ ಪದವಿ ದೃಷ್ಟಿಯಿಂದ ಕಿಂಚಿತ್ ನ್ಯೂನರು. 
ಈ ಕಾರಣದಿಂದಿಲ್ಲಿ ಅವರೋಹಣ ತಾರತಮ್ಯ ಕ್ರಮದಲ್ಲಿ ಶ್ರೀ ಗರುಡ - ಶ್ರೀ ಶೇಷ - ಶ್ರೀ ರುದ್ರ ಎನ್ನುತ್ತೇವೆ.
ಒಂದು ಬ್ರಹ್ಮ ಕಲ್ಪದಲ್ಲಿ ಶೇಷ ಪದವಿಗೆ ಸಾಧನ ಮಾಡುವ ಜೀವರ ಸಂಖ್ಯ 100. ಆದರೆ ಪದಾಧಿಕಾರಿಗಳು ಒಬ್ಬರೇ!
" ಶ್ರೀ ಶೇಷದೇವರ ಅವತಾರಗಳು "
1. ನರ - ಮೂರ್ತಾದೇವಿಯರಲ್ಲಿ ( ಶ್ಯಾಮಲಾ ) ಶ್ರೀ ಯಮದೇವರಿಂದ " ನರ " ನಾಮಕನಾಗಿ ಅವತರಿಸಿದರು. 
ಇದು ಶ್ರೀ ಹರಿವಾಯುಗಳ ಆವೇಶವುಳ್ಳ ಅವತಾರ.
2. ಶ್ರೀ ಲಕ್ಷ್ಮಣ - ಶ್ರೀ ರಾಮಚಂದ್ರದೇವರ ತಮ್ಮಂದಿರು. 
ಸೌಮಿತ್ರೀ ಪುತ್ರರು. 
ಶ್ರೀ ಸಂಕರ್ಷಣ ನಾಮಕ ಶ್ರೀ ಹರಿಯ ಆವೇಶವುಳ್ಳ ಅವತಾರ!
3. ಶ್ರೀ ಬಲರಾಮದೇವರು - ರೋಹಿಣೀ ಪುತ್ರ ಶ್ರೀ ಕೃಷ್ಣದೇವರ ಅಣ್ಣಂದಿರು.
ಶ್ರೀ ಹರಿಯ ಶುಕ್ಲಾಕ್ಲೇಶಾವೇಶಯುತರು.
ಶ್ರೀಮದಾನಂದತೀರ್ಥರು " ದ್ವಾದಶ ಸ್ತೋತ್ರ " ದಲ್ಲಿ.....
ತತ್ಪಾದ ಪಂಕಜ ಮಹಾಸನತಾಮವಾಪ
ಶರ್ವಾದಿ ವಂದ್ಯ ಚರಣೋ 
ಯದಪಾಂಗಲೇಶಮ್ ।
ಆಶ್ರಿತ್ಯ ನಾಗಪತಿರನ್ಯಸುರೈರ್ದುರಾಪಾ೦
ಶ್ರೀರ್ಯತ್ಕಟಾಕ್ಷ ಬಲವತ್ಯಜಿತಂ ನಮಾಮಿ ।।
***
" ಶ್ರೀ ಶ್ಯಾಮಸುಂದರ - 5 "
" ಶ್ರೀ ಗರುಡದೇವರ ಸ್ತುತಿ " 
ರಾಗ : ದುರ್ಗಾ ತಾಳ : ತ್ರಿಪುಟ
ರಕ್ಷಿಸೆನ್ನನು ಪಕ್ಷೀ೦ದ್ರನೇ ನೀನು ।। ಪಲ್ಲವಿ ।।
ರಕ್ಷಿಸೆನ್ನನು ಪಕ್ಷಿಪ ಕರುಣಾ । ಕ ।
ಟಾಕ್ಷದಿಂದೀಕ್ಷಿಸು ತೀಕ್ಷಣ ಬಿಡದೆ ।। ಅ ಪ ।।
ತಂದೆಯನುಜ್ಞದಿ 
ಸಿಂಧೂರ ಕೂರ್ಮ ।
ದ್ವಂದ್ವ ಪ್ರಾಣಿಗಳ 
ತಿಂದ ಮಹಾತ್ಮ ।। ಚರಣ ।।
ಅಂದು ಪೀಯೂಷವ 
ತಂದು ಮಾತೆಯ ।
ಬಂಧನ ಬಿಡಿಸಿದ 
ಬಂಧುರ ಮಹಿಮನೆ ।। ಚರಣ ।।
ಗಗನಗಮನ ಪ-
ನ್ನಗವಗೆ ಪ್ರಾರ್ಥಿಪೆ ।
ಮಿಗೆ ಕರುಣದಿ ಎ-
ನ್ನಘ ದೂರೋಡಿಸಿ ।। ಚರಣ ।।
ಧಾರುಣಿಯೊಳವತಾ-
ರ ರಹಿತ । ಶೃಂ ।
ಗಾರವಾದ ಬಂಗಾರ 
ಶರೀರ ।। ಚರಣ ।।
ವಂದಿಪೆ ವಿನುತ 
ನಂದನ । ಶ್ಯಾಮ ।
ಸಂದರ ವಿಠಲನ-
ಸ್ಯ೦ದನ ಶೂರ ।। ಚರಣ ।।
" ವಿವರಣೆ "
" ತಂದೆಯನುಜ್ಞದಿ ಸಿಂಧೂರ ಕೂರ್ಮ ದ್ವಂದ್ವ ಪ್ರಾಣಿಗಳ ತಿಂದ ಮಹಾತ್ಮ "
ಸಮುದ್ರ ಮಧ್ಯದಲ್ಲಿ ಬೃಹದಾಕಾರವಾದ ಆನೆ ಮತ್ತು ಕೂರ್ಮಗಳ ರೂಪದಲ್ಲಿ ನಾವಿಕರನ್ನು ಪೀಡಿಸಿ ತಿನ್ನುತ್ತಿದ್ದ ದೈತ್ಯರನ್ನು ತಂದೆಯ ಆದೇಶದಂತೆ ತನ್ನ ಹಸ್ತ ದ್ವಯಗಳಿಂದ ಎತ್ತಿಕೊಂಡು ಹೋಗಿ ಭಕ್ಷಿಸಿ ಸಜ್ಜನರನ್ನು ರಕ್ಷಿಸಿದರು ಶ್ರೀ ಗರುಡದೇವರು ಎಂದು - ಪದ್ಮಪುರಾಣ, ಹರಿವಂಶ, ಗರುಡಪುರಾಣಗಲ್ಲಿ ಉಲ್ಲೇಖಿಸಲ್ಪಟ್ಟಿದೆ.  
" ಅಂದು ಪೀಯೂಷವ ತಂದು ಮಾತೆಯ ಬಂಧನ ಬಿಡಿಸಿದ "
ಸ್ವರ್ಗ ಲೋಕಕ್ಕೆ ಹೋಗಿ ಅಮೃತ ಕಲಶವನ್ನು ತಂದು ತಾಯಿಯಾದ ವಿನುತೆಯನ್ನು ಮಲತಾಯಿ ಕದ್ರುವಿನ ದಾಸ್ಯದಿಂದ ಬಿಡಿಸಿದನು. 
ಬಂಧುರ ಮಹಿಮ  = ಮಹೋಹರವಾದ ಮಹಿಮಾ ಸಂಪನ್ನರು  
" ಬಂಗಾರ ಶರೀರ "
 ಬಂಗಾರ ವರ್ಣದಿಂದ ಪರಿಶೋಭಿತವಾದ ದೇಹವನ್ನು ಉಳ್ಳವರು. 
" ಶ್ರೀ ಗರುಡದೇವರ ಬಗ್ಗೆ ಮತ್ತಷ್ಟು ಮಾಹಿತಿ "
।। ತತಃ ಸೂಕ್ಷ್ಮ ಸೃಷ್ಟಿ ಪ್ರಕಾರಃ ।।
ವಾಸುದೇವಾತ್ ಮಾಯಾಯಾ೦ 
ಪುರುಷನಾಮ ಜಾತಃ । 
ಸಂಕರ್ಷಣಾತ್ ಜಯಾಯಾ೦ 
ಸೂತ್ರ ನಾಮಾ ವಾಯುರ್ಜಾತಃ । 
ಪ್ರದ್ಯುಮ್ನಾತ್ ಪ್ರಕೃತ್ಯಾಂ 
ಪ್ರಧಾನಸಂಜ್ಞಾ ಸರಸ್ವತೀ, ಶ್ರದ್ಧಾ, 
ಸಂಜ್ಞಾ, ಭಾರತೀ ಚ ಜಾತಾ ಇತಿ । 
ತತಃ ಪುರುಷನಾಮ್ನೋ ಬ್ರಹ್ಮಣಃ 
ಪ್ರಧಾನಸಂಜ್ಞಾಯಾ೦ ಸರಸ್ವತ್ಯಾಂ 
ಶೇಷನಾಮಕ ಜೀವೋ ಜಾತಃ । 
ಸೂತ್ರನಾಮ್ನೋ ವಾಯೋ: 
ಶ್ರದ್ಧಾಸಂಜ್ಞಾಯಾಂ ಭಾರತ್ಯಾಂ 
ಕಾಲನಾಮ ಗರುಡ ಉತ್ಪನ್ನ: ।।
ಶ್ರೀ ವಾಸುದೇವನಿಂದ ಶ್ರೀ ಮಾಯಾದೇವಿಯಲ್ಲಿ " ಪುರುಷ " ನೆಂಬುವನು ಹುಟ್ಟಿದನು.
ಶ್ರೀ ಸಂಕರ್ಷಣನಿಂದ ಶ್ರೀ ಜಯಾದೇವಿಯಲ್ಲಿ " ಸೂತ್ರ " ನಾಮಕರಾದ ಶ್ರೀ ವಾಯುದೇವರು ಹುಟ್ಟಿದರು.
ಶ್ರೀ ಪ್ರದ್ಯುಮ್ನನಿಂದ ಶ್ರೀ  ಕೃತೀದೇವಿಯಲ್ಲಿ " ಪ್ರಧಾನ " ಎಂಬ ಹೆಸರುಳ್ಳ ಶ್ರೀ ಸರಸ್ವತೀದೇವಿಯರೂ, " ಶ್ರೀ ಶ್ರದ್ಧಾ " ಎಂಬ ಹೆಸರುಳ್ಳ ಶ್ರೀ ಭಾರತೀದೇವಿಯರು ಹುಟ್ಟಿದರು.
ಅನಂತರ ಶ್ರೀ ಪುರುಷ ನಾಮಕರಾದ ಶ್ರೀ ಬ್ರಹ್ಮದೇವರಿಂದ ಶ್ರೀ ಪ್ರಧಾನ ಎಂಬ ಹೆಸರುಳ್ಳ ಶ್ರೀ ಸರಸ್ವತೀದೇವಿಯರಲ್ಲಿ " ಶ್ರೀ ಶೇಷ " ನೆಂಬ ಜೀವನು ( ಜೀವಾಭಿಮಾನಿಯು ) ಹುಟ್ಟಿದರು.
" ಸೂತ್ರ " ವೆಂದರೆ ಶ್ರೀ ಮುಖ್ಯಪ್ರಾಣದೇವರು. ಅವರಿಂದ ಶ್ರೀ ಶ್ರದ್ಧೆ ಯೆಂಬ ಹೆಸರಿನ ಶ್ರೀ ಭಾರತೀದೇವಿಯರಲ್ಲಿ " ಕಾಲ " ನೆಂಬ ಹೆಸರಿನ ಶ್ರೀ ಗರುಡನು ಉತ್ಪನ್ನರಾದರು.
ಶ್ರೀ ಗರುಡದೇವರು ೫ನೇ ಕಕ್ಷಾಪನ್ನರು.
ಶ್ರೀ ಗರುಡ - ಶ್ರೀ ಶೇಷ - ಶ್ರೀ ರುದ್ರದೇವರು ಸಮಾನ ಕಕ್ಷಾಪನ್ನರು.
ಸೂಕ್ಷ್ಮ ಸೃಷ್ಟಿಯಲ್ಲಿ ಶ್ರೀ ಸರಸ್ವತೀದೇವಿಯರು, ಶ್ರೀ ಭಾರತೀದೇವಿಯರು ಜನಿಸಿದ ಎರಡು ವರ್ಷಕ್ಕೆ ಶ್ರೀ ಪುರುಷ ನಾಮಕ ಶ್ರೀ ಚತುರ್ಮುಖ ಬ್ರಹ್ಮದೇವರಿಗೆ ಶ್ರೀ ಪ್ರಕೃತಿ ನಾಮಕ ಶ್ರೀ ಸರಸ್ವತೀದೇವಿಯರಲ್ಲಿ ಶ್ರೀ ಶೇಷದೇವರು ಜನಿಸಿದ ಅವಧಿಯಲ್ಲಿ, ಶ್ರೀ ಜಯಾ ಪತಿ ಶ್ರೀ ಸಂಕರ್ಷಣ ದೆಸೆಯಿಂದ ಜನಿಸಿದ ಶ್ರೀ ಸೂತ್ರ ನಾಮಕ ಶ್ರೀ ವಾಯುದೇವರಿಂದ ಶ್ರೀ ಭಾರತೀದೇವಿಯರಲ್ಲಿ " ಕಾಲನಾಮಕ ಶ್ರೀ ಗರುಡದೇವರ ಉತ್ಪನ್ನವಾಯಿತು.
ಪದವಿ ದೆಸೆಯಿಂದ ಶ್ರೀ ಗರುಡದೇವರು, ಶ್ರೀ ಶೇಷದೇವರಿಗಿಂತ ಕಿಂಚಿತ್ ಅಧಿಕರು.
" ನ ವೀಂದ್ರಸ್ಯ ಅವತಾರೋತ್ಪತ್ತಿ ಭ್ಯೂಮ್ಯಾಮ್ " 
ಎಂಬ ಪ್ರಮಾಣ ವಚನದಂತೆ ಶ್ರೀ ಗರುಡದೇವರಿಗೆ ಭೂಮಿಯಲ್ಲಿ ಅವತಾರವಿಲ್ಲ!!
ಶ್ರೀ ಸೌಪರ್ಣೀದೇವಿಯರು ಶ್ರೀ ಗರುಡದೇವರ ಪತ್ನೀ!
ಶ್ರೀ ಗರುಡದೇವರಂತೆ ಶ್ರೀ ಸೌಪರ್ಣೀದೇವಿಯರಿಗೂ ಭೂಮಿಯಲ್ಲಿ ಅವತಾರವಿಲ್ಲ.
ಒಂದು ಬ್ರಹ್ಮ ಕಲ್ಪದಲ್ಲಿ ಶ್ರೀ ಗರುಡ ಪದವಿಗಾಗಿ ಸಾಧನ ಮಾಡುವ ಜೀವರ ಸಂಖ್ಯೆ 100. ಅದರಲ್ಲಿ ಒಬ್ಬರು ಮಾತ್ರ ಪದಾರ್ಹರು.
ಶ್ರೀ ಕಶ್ಯಪ ಮಹಾ ಮುನಿಗಳಿಗೆ 13 ಮಂದಿ ಪತ್ನಿಯರು. 
ಅವರಲ್ಲಿ ವಿನುತಾ ದೇವಿಯಲ್ಲಿ ಶ್ರೀ ಗರುಡದೇವರು ಜನಿಸಿದರು.
ವಿನುತಾತ್ಮಜನಾದ ಶ್ರೀ ಗರುಡದೇವರ ಅಣ್ಣ ಶ್ರೀ ಸೂರ್ಯದೇವರ ರಥ ಸಾರಥಿಯಾದ ಶ್ರೀ ಅರುಣ.
ಸ್ವರ್ಗ ಲೋಕಕ್ಕೆ ಹೋಗಿ, ಶ್ರೀ ಇಂದ್ರದೇವರೊಡನೆ ಯುದ್ಧ ಮಾಡಿ, ಅಮೃತ ಕಲಶವನ್ನು ಮಲತಾಯಿಯಾದ ಕದ್ರುವಿಗೆ ಕೊಟ್ಟು, ತನ್ನ ಮಾತೆಯಾದ ವಿನುತೆಯನ್ನು ಕದ್ರುವಿನ ದಾಸ್ಯದಿಂದ ಮುಕ್ತಗೊಳಿಸಿದ ಮಹಾ ಮಹಿಮರು ಶ್ರೀ ಗರುಡದೇವರು.
ಶ್ರೀ ಹರಿಯ ವಾಹನ. ಇದರಿಂದ ಶ್ರೀ ಹರಿಯು ಗರುಡಗಮನನು.
ಆಲದ ಮರದ ಕೆಳಗೆ ತಪಸ್ಸು ಮಾಡುತ್ತಿದ್ದ ಶ್ರೀ ವಾಲಖಿಲ್ಯರ ಅನುಗ್ರಹವನ್ನು ಸಂಪಾದಿಸಿದವರು.
***
" ಶ್ರೀ ಶ್ಯಾಮಸುಂದರ - 6 "
" ಶ್ರೀ ಭಾರತೀದೇವಿ ಸ್ತೋತ್ರ ಪದ "
ರಾಗ : ಆನಂದಭೈರವಿ    ತಾಳ : ಆದಿ 
ಎಂತು ನೀ ವಶವಾದಿಯೇ 
ಭಾರತೀದೇವಿ ।
ಎಂತು ನೀ ಮರುಳಾದಿಯೇ ।। ಪಲ್ಲವಿ ।।
ಎಂಟು ನೀ ವಶವಾದಿ ।
ಕಂತುಹರನ ತಾಯಿ ।
ದಂತಿಗಮನೆ । ದಮ ।
ಯಂತಿ ಕಾಂತ ಸುತೆ ।। ಅ ಪ ।।
ಧರೆಯಲಿ ಪುಟ್ಟುತಲಿ ಆಕಾಶಕೆ ।
ಭರದಿಂದ ಜಿಗಿಯುತಲಿ ।
ಸರಿಸಿಜ ಸಖನಾದ ।।
ತರಣಿಯ ಫಲವೆಂದು ।
ಅರಿತು ಭಕ್ಷಿಸಲ್ಹೋದ ।
ತರುಚರ ರೂಪಿಗೆ ।। ಚರಣ ।।
ಪುಂಡರೀಕಾಕ್ಷೆ ಕೇಳಿ -
ದ್ವಾಪರದಿ । ಪ್ರ ।
ಚಂಡಗೆ ಒಲಿಯುತಲಿ ।
ಭಂಡ ಬಕನ ಶಿರ - ।। 
ದಂಡುಗೆಡಹಿ ಅವನ ।
ಭಂಡಿ ಓದನ  । 
ಉಂಡ ಪುಂಡಗೆ 
ಮಾತೆ ।। ಚರಣ ।।
 ಶ್ರೀ ಶ್ಯಾಮಸುಂದರನನೇ 
ತ್ರೈಲೋಕಕ್ಕೆ ।
ಈಶನೆಂಬುದು ತಾನು ।
ಲೇಸಾಗಿ ಪೇಳಲು ।।
ಲೇಶವಾದರು ನಿನ್ನ ।
ಆಶೆ ಇಲ್ಲದ ತಾ ।
ಸಂನ್ಯಾಸಿ ಆದವನಿಗೆ ।। ಚರಣ ।। 
" ವಿವರಣೆ "
ಕಂತುಹರನ ತಾಯಿ = ಮನ್ಮಥನ ಸುಟ್ಟ ಶ್ರೀ ಮಹಾರುದ್ರದೇವರ ತಾಯಿ. 
ದಂತಿಗಮನೆ = ಗಜಗಮನೆ 
" ದಮಯಂತಿ ಕಾಂತ ಸುತೆ "
ದಮಯಂತಿಯಿಂದ ಜನಿಸಿದ ನಳನಂದಿನಿ ಇಂದ್ರಸೇನಾ ನಾಮಕಳಾದ ಶ್ರೀ ಭಾರತೀದೇವಿ 
ಸರಸಿಜ ಸಖ = ಕಮಲ ಮಿತ್ರನಾದ ಸೂರ್ಯ 
ತರುಚರ ರೂಪಿ = ವೃಕ್ಷ ಚರನಾದ ವಾನರ ರೂಪಿ ಶ್ರೀ ಹನೂಮಂತದೇವರು
ಓದನ = ಅನ್ನ 
" ವಿಶೇಷ ವಿಚಾರ "
ಶ್ರೀ ಶ್ಯಾಮಸುಂದರದಾಸರು ತಮ್ಮಿಂದ ರಚಿತವಾದ ಈ ಕೃತಿಯಲ್ಲಿ.... 
ಮೊದಲನೆಯ ನುಡಿಯಲ್ಲಿ " ಶ್ರೀ ಹನೂಮಂತದೇವರು "
ಎರಡನೆಯ ನುಡಿಯಲ್ಲಿ " ಶ್ರೀ ಭೀಮಸೇನದೇವರು "
ಮೂರನೆಯ ನುಡಿಯಲ್ಲಿ " ಶ್ರೀ ಸರ್ವಜ್ಞಾಚಾರ್ಯರು "
ಶ್ರೀ ವಾಯುದೇವರ ಅವತಾರತ್ರಯಗಳಿಗೆ ನೀನು ಹೇಗೆ ವಶವಾದಿ ಮತ್ತು ಮರುಳಾದೆಯಮ್ಮಾ ಎಂದು ಶ್ರೀ ಭಾರತೀದೇನ್ನು ಕೇಳಿದ್ದಾರೆ. 
" ಶ್ರೀ ಭಾರತೀದೇವಿಯರ ಕುರಿತು ಮತ್ತಷ್ಟು ಮಾಹಿತಿ "
" ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮ ವಿರಚಿತ ಪ್ರಮೇಯಸಂಗ್ರಹಃ " ದಲ್ಲಿ - ಶ್ರೀ ಭಾರತೀದೇವಿಯರು  ".
।। ತತಃ ಸೂಕ್ಷ್ಮ ಸೃಷ್ಟಿ ಪ್ರಕಾರಃ ।।
ವಾಸುದೇವಾತ್ ಮಾಯಾಯಾ೦ 
ಪುರುಷನಾಮ ಜಾತಃ । 
ಸಂಕರ್ಷಣಾತ್ ಜಯಾಯಾ೦ 
ಸೂತ್ರ ನಾಮಾ ವಾಯುರ್ಜಾತಃ । 
ಪ್ರದ್ಯುಮ್ನಾತ್ ಪ್ರಕೃತ್ಯಾಂ ಪ್ರಧಾನಸಂಜ್ಞಾ 
ಸರಸ್ವತೀ, ಶ್ರದ್ಧಾ, ಸಂಜ್ಞಾ, 
ಭಾರತೀ ಚ ಜಾತಾ ಇತಿ ।
ಶ್ರೀ ವಾಸುದೇವನಿಂದ ಶ್ರೀ ಮಾಯಾದೇವಿಯಲ್ಲಿ " ಪುರುಷ " ನೆಂಬುವನು ಹುಟ್ಟಿದನು.
ಶ್ರೀ ಸಂಕರ್ಷಣನಿಂದ ಶ್ರೀ ಜಯಾದೇವಿಯಲ್ಲಿ " ಸೂತ್ರ " ನಾಮಕರಾದ ಶ್ರೀ ವಾಯುದೇವರು ಹುಟ್ಟಿದರು.
ಶ್ರೀ ಪ್ರದ್ಯುಮ್ನನಿಂದ ಶ್ರೀ  ಕೃತೀದೇವಿಯಲ್ಲಿ " ಪ್ರಧಾನ " ಎಂಬ ಹೆಸರುಳ್ಳ ಶ್ರೀ ಸರಸ್ವತೀದೇವಿಯರೂ, " ಶ್ರೀ ಶ್ರದ್ಧಾ " ಎಂಬ ಹೆಸರುಳ್ಳ ಶ್ರೀ ಭಾರತೀದೇವಿಯರು ಹುಟ್ಟಿದರು.
ಚತುರವಿಂಶತಿ ತತ್ತ್ವಪತಿ ದೇವತೆಗಳಿಗೆ = 24 ತತ್ತ್ವಾಭಿಮಾನಿ ದೇವತೆಗಳಿಗೆ
" 24 ತತ್ತ್ವಗಳು "
ಮಹತ್ತತ್ತ್ವ - ಶ್ರೀ ಚತುರ್ಮುಖ ಬ್ರಹ್ಮದೇವರು ಮತ್ತು ಶ್ರೀ ವಾಯುದೇವರು 
ಇವರಿಬ್ಬರೂ ಗುರುಸ್ಥಾನದಲ್ಲಿರುವವರು. ಶ್ರೀ ವಾಯುದೇವರು ಭಾವಿ ಶ್ರೀ ಬ್ರಹ್ಮದೇವರು ಆದ್ದರಿಂದ ಅವರಿಬ್ಬರೂ ತತ್ತ್ವಾಭಿಮಾಗಳೂ ಹಾಗೂ ತತ್ತ್ವಾಭಿಮಾನಿಗಳಿಗೆ ಗುರುಗಳು.
ಅವ್ಯಕ್ತ ತತ್ತ್ವ - ಶ್ರೀ ಸರಸ್ವತೀದೇವಿಯರು ಮತ್ತು ಶ್ರೀ ಭಾರತೀದೇವಿಯರು
" ಅವ್ಯಕ್ತ ತತ್ತ್ವ ರೂಪಿಣ್ಯೌ ಭಾರತೀ ಚ ಸರಸ್ವತೀ ।। "
ಅಹಂಕಾರ ತತ್ತ್ವ -
ಶ್ರೀ ಗರುಡದೇವರು, ಶ್ರೀ ಶೇಷದೇವರು,ಶ್ರೀ ರುದ್ರದೇವರು - 02
( ಶ್ರೀ ರುದ್ರದೇವರು ಮನಸ್ ತತ್ತ್ವಕ್ಕೂ ಅಭಿಮಾನಿಗಳು )
* ಅಹಂಕಾರ ತತ್ತ್ವದಲ್ಲಿ ಮೂರು ಪ್ರಕಾರಗಳಿರುತ್ತವೆ. ಅದರಲ್ಲಿ ಎರಡಕ್ಕೆ ಶ್ರೀ ಗರುಡದೇವರು, ಶ್ರೀ ಶೇಷದೇವರು ಅಭಿಮಾನಿಯಾಗಿರುತ್ತಾರೆ. ಇನ್ನೊಂದಕ್ಕೆ ಶ್ರೀ ರುದ್ರದೇವರು ಅಭಿಮಾನಿಯಾಗಿರುತ್ತಾರೆ.
ಮನಸ್ ತತ್ತ್ವ - ಇಂದ್ರ, ಕಾಮರು
ಪಂಚ ಜ್ಞಾನೇಂದ್ರಿಯಗಳು -
ಶ್ರೋತ್ರ - ಇಂದ್ರ, ಚಂದ್ರ ಮೊದಲಾದ ದಿಗ್ದೇವತೆಗಳು
ತ್ವಕ್ - ಆಹಾಂಕಾರಿಕ ಪ್ರಾಣ
ಕಣ್ಣು - ಸೂರ್ಯ
ಜಿಹ್ವೆ - ವರುಣ
ಘ್ರಾಣ - ಅಶ್ವನೀ ದೇವತೆಗಳು
" ಪಂಚ ಕರ್ಮೇಂದ್ರಿಯಗಳು "
ವಾಕ್ - 
ಅಗ್ನಿ, ವಾಣಿ, ಶಚಿ, ರತಿ, ಅನಿರುದ್ಧ, ಸ್ವಯಂಭುವಮನು, ದಕ್ಷ ಹಾಗೂ ಬೃಹಸ್ಪತಿ
ಪಾದ - ಜಯಂತ, ವೃಷಭ
ಪಾಯು - ಮಿತ್ರ
ಉಪಸ್ಥ - ವಶಿಷ್ಠಾದಿ ಸಪ್ತ ಋಷಿಗಳು
" ಪಂಚ ತನ್ಮಾತ್ರಗಳು "
ಶಬ್ದ - ಅಹಂಕಾರಿಕ ಪ್ರಾಣ, ಬೃಹಸ್ಪತಿ
ರೂಪ - ವ್ಯಾನ
ರಸ - ಉದಾನ
ಸ್ಪರ್ಶ - ಅಪಾನ
ಗಂಧ - ಸಮಾನ
" ಪಂಚ ಭೂತಗಳು  "
ಆಕಾಶ - ಗಣೇಶ
ವಾಯು - ಮರೀಚೀ
ಜಲ - ವರುಣ
ತೇಜಸ್ - ಅಗ್ನಿ
ಪೃಥುವೀ - ಧರಾ
ಒಟ್ಟು ತತ್ತ್ವಾಭಿಮಾನಿ ದೇವತೆಗಳು = 24
ತಾರತಮ್ಯ ಕ್ರಮದಲ್ಲಿ 4ನೇ ಕಕ್ಷಾಪನ್ನರು.
ಇದೇ ಕಕ್ಷದಲ್ಲಿರುವ ಶ್ರೀ ಸರಸ್ವತೀದೇವಿಯರಗಿಂತ ಪದ ಪ್ರಯುಕ್ತ ಕಿಂಚಿತ್ ಅವರರು.
ಸೂಕ್ಷ್ಮ ಸೃಷ್ಟಿಯಲ್ಲಿ ಶ್ರೀ ಪ್ರದ್ಯುಮ್ನ ರೂಪಿ ಶ್ರೀ ಹರಿಯಿಂದ ಶ್ರೀ ಕೃತಿ ನಾಮಕಳಾದ ಶ್ರೀ ರಮಾದೇವಿಯಲ್ಲಿ " ಪ್ರಕೃತಿ " ನಾಮಕ " ಸರಸ್ವತೀದೇವಿಯರೂ, ಶ್ರೀ ಶ್ರದ್ಧಾ ನಾಮಕ ಭಾರತೀದೇವಿಯರು ಎಂಬ ಇಬ್ಬರು ಪುತ್ರಿಯರು ಜನಿಸಿದರು.
ಸತ್ವ ಪ್ರಾಚುರ್ಯವಾದ " ಮಹತ್ತತ್ತ್ವ ಶರೀರ " ಉಳ್ಳವರು.
ಪರಶುಕ್ಲತ್ರಯ ವರ್ಗಕ್ಕೆ ಸೇರಿದವರು.
ಮೂಲ ಮತ್ತು ಅವತಾರ ಶರೀರಗಳು ಶ್ರೀ ವಾಯುದೇವರಂತೆಯೇ ಶುಕ್ಲ ಶೋಣಿತ ಸಂಬಂಧ ರಹಿತವಾದುದು.
ಒಂದು ಬ್ರಹ್ಮ ಕಲ್ಪದಲ್ಲಿ 200 ಮಂದಿ ಋಜು ಗಣಸ್ಥರೂ ಮತ್ತು ತತ್ಪತ್ನಿಯರೂ ಇರುತ್ತಾರೆ.
ಋಜು ಪತ್ನಿಯರ ಪೈಕಿ ಭಾರತೀ ಪದಸ್ಥ ಜೀವರು ಒಬ್ಬರೇ ಇರುತ್ತಾರೆ.
ಇವರ ಸಾಧನ ಕಲ್ಪದ ಅವಧಿಯು ತಮ್ಮ ಪತಿಯಾದ ಶ್ರೀ ವಾಯುದೇವರರಷ್ಟೇ ಇರುವುದು.
ಶ್ರೀ ಭಾರತೀದೇವಿಯರು ತಮ್ಮ ಪತಿಯಾದ ಶ್ರೀ ವಾಯುದೇವರಿಗಿಂತ 100 ಗುಣ ನ್ಯೂನವುಳ್ಳವರು.
ಪ್ರಸಕ್ತ ಬ್ರಹ್ಮ ಕಲ್ಪದಲ್ಲಿರುವ ಶ್ರೀ ಭಾರತೀದೇವಿಯರಿಗೆ ಮುಂದಿನ ಕಲ್ಪ ಶ್ರೀ ಸರಸ್ವತೀದೇವಿಯರ ಪದವಿಯಿಂದ ಮುಕ್ತಿ. ಇದರಿಂದ ಭಾವಿ ಸರಸ್ವತೀ ಪದಾರ್ಹರು.
ಭಕ್ತಿಗೆ ಅಭಿಮಾನಿ ದೇವತೆ!
ಕಾಲಾಭಿಮಾನಿಗಳು. ಜೀವರ ಸ್ಥೂಲ ಶರೀರಗತ ಎಡ ಪಾರ್ಶ್ವದಲ್ಲಿರುವ 36000 ಸ್ತ್ರೀ ನಾಡಿಗಳಲ್ಲಿ " ರಯೀ " ಯೆಂಬ ಹೆಸರಿಂದ ನಾಡ್ಯಾಭಿಮಾನಿ ದೇವತೆಗಳಿಗೆ ನಿಯಾಮಕರು.
" ಅವತಾರಗಳು "
ನಳ ನಂದಿನಿಯಾದ " ಇಂದ್ರಸೇನಾ.
ಕಾಶೀರಾಜನ ಪುತ್ರಿ ಕಾಳೀ
ಭುಜೀ
ಚಂದ್ರಾ
ದ್ರುಪದರಾಜನ ಪುತ್ರಿ ದ್ರೌಪದೀದೇವಿಯರು
ಪಾಂಚಾಲಿ ನಾಮಕಳಾದ ದ್ರೌಪದಿಯಲ್ಲಿ ಶಾಪಗ್ರಸ್ತರಾದ ಪಾರ್ವತೀ, ಶಚೀ, ಶ್ಯಾಮಲಾ, ಉಷಾ ಈ ಸ್ತ್ರೀ ದೇವತೆಗಳಿಗೆ ಆಶ್ರಯದಾತರು.
" ಬೃಹದ್ಭಾಷ್ಯ " ದಲ್ಲಿ.....
ಸರಸ್ವತೀ ಚ ಗಾಯತ್ರೀ 
ಶ್ರದ್ಧಾದ್ಯಾ ಪ್ರೀತಿರೇವ ಚ ।
ಸರ್ವ ವೇದಾತ್ಮಿಕಾ ಬುದ್ಧಿರಾನುಭೂತಿ: 
ಸುಖಾತ್ಮಿಕಾ ।
ಗುರುಭಕ್ತಿರ್ಹರೌ ಪ್ರೀತಿ: 
ಸರ್ವ ಮಂತ್ರಾತ್ಮಿಕಾ ಭುಜಿ: ।।
ವಾಸುದೇವನ ಮೂರ್ತಿ ಹೃದಯಾ ।
ಕಾಶ ಮಂಡಲ ಮಧ್ಯದಲಿ । ತಾ ।
ರೇಶನಂದದಿ ಕಾಣುತತಿ 
ಸಂತೋಷದಲಿ ತುತಿಪ ।।
ಆ ಸರಸ್ವತೀ ಭಾರತೀಯರಿಗೆ ।
ನಾ ಸಂತತ ವಂದಿಸುವೆ । ಪರಮೋ ।
ಲ್ಲಾಸದಲಿ ಸುಜ್ಞಾನ 
ಭಕುತಿಯ ಸಲ್ಲಿಸಲೆಮಗೆಂದು ।। ಹ ಕ ಸಾ 32/7 ।।
***
" ಶ್ರೀ ಶ್ಯಾಮಸುಂದರ - 7 "
" ಶ್ರೀ ಸರಸ್ವತೀದೇವಿಯರ ಸ್ತೋತ್ರ "
ರಾಗ : ಮಧ್ಯಮಾವತಿ    ತಾಳ : ಆದಿ 
ವಾಣಿಯೇ ವೀಣಾಪಾಣಿ 
ಪಾಲಿಸು ಸದಾ ।। ಪಲ್ಲವಿ ।।
ಸ್ಥಾಣು ಜನನಿ ಚತುರಾನನ 
ರಾಣಿ । ಶ್ರೀ ।। ಅ ಪ ।।
ಯತಿತತಿನುತೆ ಕೃತಿಸುತೆ 
ಸರಸ್ವತೀದೇವಿ ।
ಹಿತದಿಂದಲೆನ್ನನು 
ಸುತನೆಂದು ಭಾವಿಸೆ ।। ಚರಣ ।।
ಬುದ್ಧ್ಯಾಭಿಮಾನಿ 
ಸದ್ವಿದ್ಯಾಪ್ರದಾಯಿನಿ ।
ಶುದ್ಧ ಸುಮತಿ ಕೊಟ್ಟು 
ಉದ್ಧರಿಸನುದಿನ ।। ಚರಣ ।।
ಶಾರದೆ ದಯವ್ಯಾಕೆ 
ಬಾರದೆ ಯನ್ನೊಳು ।
ನಾರದ ಸೇವಿತೇ 
ಸೇರಿದೆ ತ್ವತ್ಪಾದ ।। ಚರಣ ।।
ಪವನಾಂತರ್ಗತ ಮಾಧವನ 
ಸನ್ಮಹಿಮೆಯ ।ಕವನದಿಂದಲಿ 
ಸುಸ್ತವನವ ಮಾಡಿಸೆ ।। ಚರಣ ।\
ಸಾಮಗಾನ ವಿಲೋಲ 
ಶ್ಯಾಮಸುಂದರ ಸೊಸೆ ।
ಪ್ರೇಮದಿ ಮನ್ಮುಖಧಾಮದಿ 
ವಾಸಿಸೆ ।। ಚರಣ ।।
" ವಿವರಣೆ "
ಸ್ಥಾಣು ಜನನಿ = ಶ್ರೀ ರುದ್ರದೇವರ ತಾಯಿ 
ಚತುರಾನನ ರಾಣಿ = ಶ್ರೀ ಚತುರ್ಮುಖ ಬ್ರಹ್ಮದೇವರ ನೀತ ಪತ್ನೀ
ಯತಿತತಿನುತೆ = ಯತಿ / ಮುನಿಗಳ ಸಮೂಹದಿಂದ ಸ್ತುತ್ಯಳಾದವಳೇ 
" ಕೃತಿಸುತೆ "
ಕೃತಿ ಪತಿ ಪ್ರದ್ಯುಮ್ನನಿಂದ " ಪಕೃತಿ " ನಾಮಕಳಾದ ಶ್ರೀ ಸರಸ್ವತೀದೇವಿ ಮತ್ತು " ಶ್ರದ್ಧಾ " ನಾಮಕಳಾದ " ಶ್ರೀ ಭಾರತೀದೇವಿ " ಯೆಂಬ ಇಬ್ಬರು ಹೆಣ್ಣು ಮಕ್ಕಳು ಜನಿಸಿದರು. 
" ಸದ್ವಿದ್ಯಾಪ್ರದಾಯಿನಿ "
ಸಮೀಚೀನವಾದ ಭಗವತ್ಪರವಾದ ದಿವ್ಯ ವಿದ್ಯೆಯನ್ನು ಕೊಡತಕ್ಕವಳು.   
ಸಾಮ = ಸಾಮವೇದ 
ಸಾಮಗ = ಶ್ರೀ ಮಹಾವಿಷ್ಣು 
ಗಾನ = ಸಂಕೀರ್ತನೆ 
ಲೋಲ = ಭಕ್ತಿಗೆ ಸುಲಭವಾಗಿ ಒಲಿಯುವ 
" ಶ್ರೀ ಶ್ಯಾಮಸುಂದರ ಸೊಸೆ "
ಎನ್ನ ಬಿಂಬೋsಭಿನ್ನ ಶ್ರೀ ಶ್ಯಾಮಸುಂದರ ರೂಪಿ ಶ್ರೀ ಹರಿಯ ಹಿರಿಯ ಸೊಸೆಯಾದ ನೀನು  
" ಮನ್ಮುಖಧಾಮದಿ "
ನನ್ನ ವದನವೆಂಬ ಮನೆಯಲ್ಲಿ ಬಂದು ಸ್ಥಿರವಾಗಿ ನೆಲೆಸು ಅಂದರೆ, ನನ್ನ ವಾಗಿಂದ್ರಿಯವಾದ ನಾಲಿಗೆಯಲ್ಲಿ ನೆಲೆಸು ಎಂದು ಸತ್ಯಲೋಕ ವಾಸಿಯಾದ ಶ್ರೀ ಸರಸ್ವತೀದೇವಿಯರನ್ನು ಶ್ರೀ ಶ್ಯಾಮಸುಂದರದಾಸರು ಅತ್ಯಂತ ಮನೋಜ್ಞವಾಗಿ ಸ್ತುತಿಸಿದ್ದಾರೆ.    
" ಶ್ರೀ ಹರಿಯ ಹಿರಿಯ ಸೊಸೆ, ಶ್ರೀ ಚತುರ್ಮುಖ ಬ್ರಹ್ಮದೇವರ ಮಡದಿ, ವಿದ್ಯಾ ದೇವತೆ ಶ್ರೀ ಸರಸ್ವತೀದೇವಿಯರ ಬಗ್ಗೆ ಮತ್ತಷ್ಟು ಮಾಹಿತಿ  "
ವಾಗ್ವಾಣೀ ಭಾರತೀ ಬ್ರಾಹ್ಮೀ 
ಭಾಷಾಗೀ: ಶಾರದಾ ಸ್ವರಾ ।
ಸರಸ್ವತೀ ಕಾಮಧೇನು: 
ವೇದಗರ್ಭಾsಕ್ಷಾರಾತ್ಮಿಕಾ ।
ದ್ವಾದಶೈತಾನಿ ನಾಮಾನಿ 
ಸರಸ್ವತ್ಯಾ ಸ್ತ್ರೀ ಸಂಧಿಷು ।।
ಜಪನ್ ಸರ್ವಜ್ಞತಾಂ ಮೇಧಾ೦ 
ವಾಕ್ಪಟುತ್ವ೦ ಲಭೇದ್ರುವಮ್ ।
ಷಣ್ಮಾಸ್ಯಾನ್ನಿ: ಸ್ಪೃಹೋ ಲಬ್ಧ್ವಾ 
ಲಭೇತ್ ಜ್ಞಾನಂ ವಿಮುಕ್ತಿದಮ್ ।।
ಶ್ರೀ ಜಗನ್ನಾಥದಾಸರು....
ಚತುರ ವದನನ ರಾಣಿ । 
ಅತಿ ರೋ ।
ಹಿತ ವಿಮಲ ವಿಜ್ಞಾನಿ ನಿಗಮ ।
ಪ್ರತತಿಗಳಿಗಭಿಮಾನಿ 
ವೀಣಾ ಪಾಣಿ ಬ್ರಹ್ಮಾಣೀ ।।
ನುತಿಸಿ ಬೇಡುವೆ ಜನನಿ 
ಲಕುಮೀ ।ಪತಿಯ ಗುಣಗಳ 
ತುತಿಪುದಕೆ । ಸ ।
ನ್ಮತಿಯ ಪಾಲಿಸಿ ನೆಲೆಸು 
ನೀ ಮದ್ವದನಸದನದಲಿ ।। ಹ ಕ ಸಾ ೧/೫ ।।
ಸರಸವತಿ ವೇಧಾತ್ಮಿಕಾ ಭುಜಿ ।
ನರಹರಿ ಗುರುಭಕ್ತಿ ಬ್ರಾಹ್ಮೀ ।
ಪರಮ ಸುಖ ಬಲಪೂರ್ಣೇ 
ಶ್ರದ್ಧಾ ಪ್ರೀತಿ ಗಾಯತ್ರೀ ।।
ಗರುಡ ಶೇಷರ ಜನನಿ । 
ಶ್ರೀ ಸಂ ।ಕರುಷಣ ಜಯಾ 
ತನುಜೆ ವಾಣೀ ।
ಕರಣನೀಯಾಮಕೆ 
ಚತುರ್ದಶ ಭುವನ 
ಸನ್ಮಾನ್ಯೇ ।। ಹ ಕ ಸಾ ೨೧/೯ ।।
" ಪ್ರಮಾಣಗಳು "
" ಐತರೇಯ ಭಾಷ್ಯ " ದಲ್ಲಿ....
ಆಧಾರಃ ಸರ್ವವೇದಾನಾ೦ 
ವೇದಾಣೀ ಪ್ರಾಣ ಉಚ್ಯತೇ ।
ತಸ್ಮಿನ್ ಸ್ಥಿತೋ ಹರಿರ್ನಿತ್ಯ-
ಮಾಣೀಸ್ಥಇತಿ ಗೀಯತೇ ।। ಇತಿ ಶಬ್ದತತ್ತ್ವೇ ।।
ಆವಿರಾವೀರೀತಿ ದೀರ್ಘ್ಯಮತಿಶಯಾರ್ಥೇ । 
ಆಧಿಕ್ಯೇsಧಿಕಮಿತಿ ಸೂತ್ರಾತ್ । 
ಅಣಶಬ್ದಸ್ಯ ಗತಿವಾಚಿತ್ವಾಚ್ಚಲಮಾಣ ಮುಚ್ಯತೇ । 
ತಸ್ಯ ಧಾರಣೇನ ತದ್ವಾನಾಣೀ । ಸ್ಥಾಪಕ ಇತ್ಯರ್ಥ ।।
" ಬೃಹದ್ಭಾಷ್ಯ " ದಲ್ಲಿ.....
ಅನಂತ ವೇದ ರೂಪತ್ವಾತ್ 
ಸೈವ ಬ್ರಹ್ಮೇತಿ ಕೀರ್ತಿತಾ ।
ಆಣಿ೦ ನ ರಥ್ಯಮಮೃತಾದಿತ-
ಸ್ಥುರಿಹಬ್ರವೀತು ಯ ಉತಚ್ಛಿರ್ಕೇತತ್ ।।
ಮಹತೀ ನಾರದಸ್ಯ ಸ್ಯಾತ್ 
ಸರಸ್ವತ್ಯಾಸ್ತು ಕಚ್ಛಪೀ ।।
ಸರಸ್ವತೀ ಚ ಗಾಯತ್ರೀ 
ಶ್ರದ್ಧಾದ್ಯಾ ಪ್ರೀತಿರೇವ ಚ ।
ಸರ್ವ ವೇದಾತ್ಮಿಕಾ ಬುದ್ಧಿರನುಭೂತಿ: 
ಸುಖಾತ್ಮಿಕಾ ।
ಗುರುಭಕ್ತಿರ್ಹರೌ 
ಪ್ರೀತಿ: ಸರ್ವ ಮಂತ್ರಾತ್ಮಿಕಾ ಭುಜಿ: ।।
" ಶ್ರೀಮನ್ಮಭಾರತ ತಾತ್ಪರ್ಯ ನಿರ್ಣಯ " ದಲ್ಲಿ ಶ್ರೀಮದಾಚಾರ್ಯರು...
ಸಂಕರ್ಷಣಾಚ್ಛಾಪಿ ಜಯಾತನೂಜೋ 
ಬಭೂವ ಸಾಕ್ಷಾದ್ಬಲಸಂವಿದಾತ್ಮಾ ।
ವಾಯುರ್ಯ ಏವಾಥ ವಿರಿಂಚಿನಾಮಾ 
ಭವಿಷ್ಯ ಆದ್ಯೋ ನ ಪರಸ್ತತೋ ಹಿ ।। ೩/೧೦ ।।
ತಾರತಮ್ಯದಲ್ಲಿ ಶ್ರೀ ಸರಸ್ವತೀದೇವಿಯರು 4ನೇ ಕಕ್ಷಾಪನ್ನರು.
ಪದವಿ ನಿಮಿತ್ತ ಶ್ರೀ ಭಾರತೀದೇವಿಯರಿಗಿಂತ ಕಿಂಚಿತ್ ಅಧಿಕರು.
ಶ್ರೀ ಚತುರ್ಮುಖ ಬ್ರಹ್ಮದೇವರ ಪಟ್ಟದ ರಾಣಿ ( ನೀತ ಪತ್ನೀ )
ಶ್ರೀ ಕೃತಿ ಪತಿ ಶ್ರೀ ಪ್ರದ್ಯುಮ್ನನ ಪುತ್ರಿ " ಪ್ರಕೃತಿ " ನಾಮಕಳು.
ಸತ್ವ ಗುಣ ಪ್ರಾಚುರ್ಯವಾದ ಮಹತ್ತತ್ತ್ವ ಶರೀರ ಉಳ್ಳವರು.
ಪರಶುಕ್ಲತ್ರಯ ವರ್ಗಕ್ಕೆ ಸೇರಿದವರು.
ಎಂದೆಂದಿಗೂ ಅಜ್ಞಾನಾದಿ ದೋಷಗಳಾಗಲೀ, ಕಲ್ಯಾದಿ ಆವೇಶಗಳಿಂದ ನಿತ್ಯ ರಹಿತರು.
ಶ್ರೀ ಚತುರ್ಮುಖ ಬ್ರಹ್ಮದೇವರ ಉಪದೇಶದಿಂದ ಶ್ರೀ ಹರಿಯ ಅಂತರಂಗ ಉಪಾಸಕರು. ಇದರಿಂದ ಜಗನ್ಮಾತೆಯಾದ ಶ್ರೀ ಮಹಾಲಕ್ಷ್ಮೀದೇವಿಯರ ನಂತರ ವೇದಗಳಿಗೆ ಅಭಿಮಾನಿಯಾಗಿದ್ದಾರೆ.
ಬುದ್ಧಿಗೆ ಅಭಿಮಾನಿ ದೇವತೆ.
ಭಗವದ್ವಿಷಯದಲ್ಲಿ ಸಾಧಕರಿಗೆ ವಿವೇಚನಾ ಶಕ್ತಿಪ್ರದಳು.
ಅತಿರೋಹಿತ ವಿಮಲ ವಿಜ್ಞಾನಿಯಾದ್ದರಿಂದ, ಶ್ರೀ ಹರಿಯ ವಿಶೇಷ ಅನುಗ್ರಹ ಬಲದಿಂದ ಮಹಾ ಪ್ರಳಯ ಕಾಲದಲ್ಲಿಯೂ ಅಜ್ಞಾನಾದಿ ದೋಷಗಳಿಂದ ದೂರರಾಗಿದ್ದರೆ ಶ್ರೀ ಸರಸ್ವತೀದೇವಿಯರು!!
" ಗರುಡ ಪುರಾಣ " ದಲ್ಲಿ.....
ವಾಯೋರ್ಮಮ ಪ್ರಳಯ ಸೃಷ್ಟಿ 
ಕಾಲೇ ತಥಾ ಗಾಯತ್ರ್ಯಾ: ।
ನಾಸ್ತಿ ನಾಸ್ತೇನ ಮೋಹಃ 
ಗಾಯತ್ರೀವದ್ಧಾರತಿಮ್ ।।
ಒಂದು ಬ್ರಹ್ಮ ಕಲ್ಪದಲ್ಲಿ ಶ್ರೀ ಸರಸ್ವತೀ ಪದಾರ್ಹ ಜೀವರು 200 ಮಂದಿ ಇರುತ್ತಾರೆ. 
ಇವರಲ್ಲಿ ಶ್ರೀ ಸರಸ್ವತೀ ಪದಸ್ಥರು ಒಬ್ಬರು ಮಾತ್ರ!
ಪತಿಯಾದ ಶ್ರೀ ಚತುರ್ಮುಖ ಬ್ರಹ್ಮದೇವರಿಗಿಂತ 100 ಗುಣ ಅವರರು.
" ಶ್ರೀ ಸರಸ್ವತೀದೇವಿಯರ ನಾಮಗಳು "
" ಸರಸ್ವತೀ "
" ಸರಸ್ " ಯೆಂದರೆ ಎಲ್ಲಾ ಕಡೆಯಲ್ಲಿಯೂ ಗತಿಸುವುದರಿಂದ ಸರ್ವತ್ರ  ವ್ಯಾಪ್ತನಾದ ಶ್ರೀ ಹರಿಗೆ " ಸರಸ್ " ಎಂದು ಹೆಸರು.
ಅಂತಹ ಶ್ರೀ ಹರಿಗೆ ಪ್ರೀತಿಯ ವಿಷಯಳಾದ್ದರಿಂದಲೂ, ಶ್ರೀ ಹರಿಯನ್ನು ಪ್ರಾಪ್ತಿಸಿ ಕೊಡುಳುವುದರಿಂದಲೂ " ಸರಸ್ವತೀ " ಯೆಂದು ಅಭಿದಾನ.
ಸರಣಾತ್ ಸರ್ವ ಗತ್ವೇನ 
ಸರ್ವಗ್ನೋವಾಸರೋ ಹರಿಃ ।
ಸರಸಃ ಸರಸ್ವತೀತ್ವಾದ್ವಾ 
ತದ್ವತ್ತ್ಯೇವ ಸರಸ್ವತೀ ।।
ಸರಃ ಪ್ರಸ್ರವಣಂ 
ಸರ್ವತ್ರಾಸ್ತೀತಿ ಸರಸ್ವತೀ ।। 
ಎಂಬ ಪರಿಷ್ಕಾರದಿಂದ ಶ್ರೀ ಹರಿಯ ವಿಷಯದಲ್ಲಿ ಸದ್ಭಕ್ತಿ, ಸದ್ವಿದ್ಯೆ ಇವುಗಳನ್ನು ಕೊಡುವಳಾದ್ದರಿಂದ " ಸರಸ್ವತೀ " ನಾಮಕಳು!
" ಬ್ರಹ್ಮಾಣೀ "
ಬ್ರಹ್ಮ - ವೇದಗಳನ್ನೂ;ಣಯತಿ - ಹೊಂದಿಸುವವಳು
ವೇದ ಪ್ರಾಪ್ತಿಪ್ರದೆ ಆದುದರಿಂದ " ಬ್ರಹ್ಮಾಣಿ " ಯು.
ಗಾಯತ್ರೀ = ಮಹಾ ವಿರಿಂಚಿಯ ಪತ್ನಿಯಾಗಿ " ಗಾಯತ್ರೀ " ನಾಮಕಳು
" ಸಾವಿತ್ರೀ "
ಶ್ರೀ ವಿಧಿ ನಾಮಕ ಶ್ರೀ ಬ್ರಹ್ಮದೇವರ ಪತ್ನಿಯಾದ್ದರಿಂದ " ಸಾವಿತ್ರೀ " ನಾಮಕಳು.
" ವೇದಾತ್ಮಿಕೆ "
ಶ್ರೀ ಗಾಯತ್ರೀ ರೂಪದಿಂದ ಸಕಲ ವೇದಗಳಿಗೆ ಅಭಿಮಾನಿ ಆಗಿರುವುದರಿಂದ " ವೇದಾತ್ಮಿಕೆ " ಎಂದು ಹೆಸರು.
ತಾರತಮ್ಯದಲ್ಲಿ ಶ್ರೀ ಗರುಡ - ಶ್ರೀ ಶೇಷ - ಶ್ರೀ ರುದ್ರದೇವರಿಗಿಂತ ೧೦೦ ಗುಣ ಅಧಿಕಳು.
ಶ್ರೀ ಬ್ರಹ್ಮದೇವರಂತೆ ಶ್ರೀ ಸರಸ್ವತೀ ದೇವಿಯರಿಗೂ ಭೂಲೋಕದಲ್ಲಿ ಅವತಾರವಿಲ್ಲ!!
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
" ಶ್ರೀ ಶ್ಯಾಮಸುಂದರ - 8 "
" ನನ್ನ ಸಂಗ್ರಹದಲ್ಲಿರು - ಶ್ರೀ ಶ್ಯಾನಸುಂದರದಾಸರು ರಚಿಸಿರುವ ಶ್ರೀ ವಾಯುದೇವರ ಸ್ತೋತ್ರ ಪದಗಳ ಪಟ್ಟಿ  "
೧. ಬಾರೈ ಬಾರೈ ಭಾರತೀ ಮನೋಹರ 
೨. ಬಾರಯ್ಯ ಬಾರಯ್ಯ ಭಾರತಿ ಚಿತ್ತ ಚಕೋರ ಶಶಾಂಕ 
೩. ಹನುಮ ಭೀಮ ಮುನಿಪ ಯೆನ್ನ ಮನಕೆ ಬಾರೆಲೋ 
೪. ಪ್ರಥಮಾಂಗ ಪ್ರಥಮಾಂಗ ಪೃಥುವಿ ಸುರಾರ್ಚಿತ ಅತುಳ ಮಹಿಮ ಗುರು
೫. ದೇವ ಹನುಮ ಶೆಟ್ಟಿ ರಾಯ ಜಗಜ್ಜಟ್ಟಿ ಕಾವುದು ಬಾವಿ ಪರಮೇಷ್ಠಿ 
೬. ಭಾರತೀವರ ಗುರು ಮಾರುತಿ ಕರುಣಿಸೋ 
೭. ಹನುಮಂತ ಪಾಹಿ ಗುರು ಹನುಮಂತ
೮. ಕಾಯೊ ದಯಾಭರಿತ ಮಾರುತಿ 
೯. ಸಲಹೊ ಪವನಜ ದೇವಾ ಸದಾ 
೧೦. ಪವಮಾನ ಸದಾ ಸಲಹೈ ಪ್ರೇಮಾಂಬುಧಿಯೆ ದೇವ 
೧೧. ಕಾಯೋ ಕಪಿವರ ಕಾಯಜವೈರಿವಿನಮಿತ 
೧೨. ಸಂಜೀವರಾಯ ಪೊರೆವುದು 
೧೩. ಕರುಣಿಸೋ ಗುರು ಮಾರುತಿ 
೧೪. ನಮಿಸುವೆ ಪಾಲಿಸೋ ಪ್ರಾಣಪತೇ 
೧೫. ಸಲಹೊ ಸಂತತ ಸಂತೆಕೆಲವೂರು ನಿಲಯಾ 
೧೬. ಹನುಮಂತ ಪಾಹಿ ಹನುಮಂತ 
೧೭. ಇಂದು ಪವಮಾನ ಪಿಡಿ ಎನ್ನ ಕೈಯ್ಯ 
೧೮. ಅಡವಿ ನಿಲಯ ನಿನ್ನಡಿಗೆರಗುವೆ 
೧೯. ಕೃಪಾಳೂ ಗುರುವರ  ಶ್ರೀ ಪವಮಾನ 
೨೦. ಕರುಣಾವಾರಿಧಿ ಕೀಶ ಭಾರತೀಶ 
೨೧.ಪವಮಾನ ದೇವ ಪರಿಪಾಲಿಸೋ ತವ ಪಾದವ ನೆರೆನಂಬಿದೆ ನಾ 
೨೨. ಜವದಿ ಪಾಲಿಸೊ  ಪ್ಲವಗೋತ್ತುಮ ಮರುತ ನಂಬಿದೆ ನಿರುತ 
೨೩. ಧ್ಯಾನಿಸು ಮನುಜ ಮುದಮುನಿ ಪದವ 
೨೪. ಪೋತನ ಪಾಲಿಸೊ ಪವಮಾನಾ 
೨೫. ಜಯದೇವಿ ತನಯಗೆ ಜಯಮಂಗಲಂ 
೨೬. ನಾನೇನು ನಿನಗಂದೆನೋ.... 
ರಾಗ : ಆನಂದಭೈರವಿ    ತಾಳ : ಅಟ್ಟ 
ನಾನೇನು ನಿನಗಂದೆನೋ ಬಿಡದೆ । ಪವ ।
ಮಾನ ಪಾಲಿಸೋ ಎನ್ನನು ।। ಪಲ್ಲವಿ ।।
ದೀನರ ಪಾಲಿಪ 
ದಾನವಾಂತಕ ನಿನ್ನ ।
ಜ್ಞಾನಾನಂದದ ನಾಮ 
ಧ್ಯಾನವಗೈದೆನೋ ।। ಅ ಪ ।।
ಎರಡನೇ ಯುಗದಲ್ಲಿ 
ಶರಧಿ ಲಂಘಿಸಿ । ರಘು ।
ವರನ ಕುಶಲ ವಾರ್ತೆ 
ಧರಿಜಾತಗೆ ।
ಅರುಹಿ ದಶಾಶ್ಯನ 
ಪುರವ ದಹಿಸಿದಂಥ ।
ಪರಮ ಸಮರ್ಥನೆಂ-
ದರಿತು ಕೊಂಡಾಡಿದೆ ।
ತರುಚರವರನೆಂದೆನೇ 
ಪತ್ನಿಯ ಸುಖ - ।।
ವಿರಹಿತಾದವನೆಂದೆನೆ 
ಶಿರದಿ । ಕಲ್ಲು ।
ಧರಿಸಿ ತಂದವನೆಂದೆನೆ 
ಬ್ರಹ್ಮಾಸ್ತ್ರಕೆ ।
ಭರದಿ ಸಿಲ್ಕಿಡಿ 
ಯೆ೦ದೆನೆ ಭಕ್ತಿಲಿ । ಭಾವಿ ।
ಸರಸಿಜಾಸನನೆಂದು
ಸ್ಮರಿಸಿದೆನಲ್ಲದೆ ।। ಚರಣ ।।
ತೃತೀಯ ಯುಗಾದಿ 
ಕುಂತಿ ಸುತನಾಗಿ ಜನಿಸುತ ।
ರತಿಪಿತನಂಘ್ರಿ ಭಜಿಸುತಲಿ ।
ಕ್ಷಿತಿ ಭಾರ ಖಳತತಿಯ 
ಸಂಹರಿಸಿದಾ ।
ಪ್ರತಿಮಲ್ಲ ನೀನೆಂದು 
ಸ್ತುತಿಸಿದೆಬಲ್ಲದೇ ।
ಖತಿವಂತ ನೀನೆಂದೆನೆ 
ದನುಜಾತೆಗೆ ।।
ಪತಿಯಾದವನೆಂದೆನೆ 
ಅವಳ ಕೂಡಿ ।
ಸುತನ ಪೆತ್ತವನೆಂದೆನೆ 
ಯಾಮಿನಿಯಲ್ಲಿ ।
ಸತಿಯೆನಿಸಿದ ಎಂದೆನೆ 
ನಿನ್ನನು ಬಿಟ್ಟು ।
ಗತಿ ನಮಗಿಲ್ಲೆಂದು 
ಸ್ತುತಿಸಿದೆನಲ್ಲದೆ ।। ಚರಣ ।।
ನಡುಮನಿ ಸುತನಾಗಿ 
ಪೊಡವಿಯೊಳಗೆ ಪುಟ್ಟಿ ।
ಉಡುಪಿ ಕ್ಷೇತ್ರದಿ ಶ್ಯಾಮಸುಂದರನ ।
ದೃಢವಾಗಿ ಸ್ಥಾಪಿಸಿ 
ಜಡಕು ಮಾಯ್ಗಳ ಗೆದ್ದ ।
ಸಡಗರ ಮುನಿಯೆಂದು 
ನುಡಿದೆ ನಾನಲ್ಲದೆ - 
ಹುರಳಿಮೆದ್ದ ।
ಬಡ ದ್ವಿಜ ಶಿಶು 
ಎಂದೆನೆ ಎತ್ತಿನ ಬಲ ।।
ಹಿಡಿದೋಡಿದವನೆಂದೆನೇ 
ಬೇಸರದಿಂದ ।
ಮಡದಿ ಬಿಟ್ಟವನೆಂದೆನೇ 
ಕಡೆಗೆ । ಬೋರೆ ।
ಗಿಡವ ಸೇರಿದೆನೆಂದನೆ 
ಒಲಿದು ನಿನ್ನ ।
ಒಡೆಯನ ತೋರೆಂದು 
ಅಡಿಗಳಿಗೆರಗಿದೆ ।। ಚರಣ ।।
ಈ ಕೃತಿಯನ್ನು ಶ್ರೀ ಶ್ಯಾಮಸುಂದರದಾಸರು ಶ್ರೀ ಕ್ಷೇತ್ರ ಗಣಧಾಳದಲ್ಲಿ ರಚಿಸಿದ ಸರಳ ಸುಂದರವಾದ ಪುರಾಣ ಇತಿಹಾಸಗಳಿಂದ ಕೂಡಿದ ನಿಂದಾ ಸ್ತುತಿ ಮತ್ತು ಸ್ತೋತ್ರ ರೂಪವಾದ ಕೃತಿ. 
ಎರಡನೇ ಯುಗ = ತ್ರೇತಾಯುಗ 
ಧರೆಜಾತೆಗೆ = ಭೂ ಪುತ್ರಿಯಾದ ಶ್ರೀ ಸೀತಾದೇವಿಗೆ 
ತರುಚರ = ವೃಕ್ಷಗಳ ಮೇಲೆ ಸಂಚರಿಸುವ ಕಪಿಗಳು 
ತರುಚರವರ = ಕಪಿ ಶ್ರೇಷ್ಠರಾದ ಶ್ರೀ ಹನೂಮಂತದೇವರು 
" ಶಿರದಿ ಕಲ್ಲು "
ಸೇತು ನಿರ್ಮಾಣದ ಕಾರ್ಯದಲ್ಲಿ ಇತರ ಕಪಿಗಳೊಂದಿಗೆ ಸಮುದ್ರಕ್ಕೆ ಪರ್ವತದ ಕಲ್ಲುಗಳನ್ನು ಕಿತ್ತು ತಂದು ಹಾಕಿದ್ದು. 
" ಬ್ರಹ್ಮಾಸ್ತ್ರಕೆ "
ಇಂದ್ರಜಿತುವಿನಿಂದ ಪ್ರಯೋಗಿಸಲ್ಪಟ್ಟ ಬ್ರಹ್ಮಾಸ್ತ್ರಕ್ಕೆ ಸಿಲುಕಿದಂತೆ ಬಂಧನಕ್ಕೊಳಗಾದರು
ಭಾವಿ ಸರಸಿಜಾಸನ = ಭಾವಿ ಬ್ರಹ್ಮ ಪದವಿಗೆ ಬರುವ ಅಂದರೆ ಭಾವಿ ಬ್ರಹ್ಮದೇವರು  
ತೃತೀಯ ಯುಗದಿ = ದ್ವಾಪರದಲ್ಲಿ 
ರತಿ ಪತಿ ಪಿತ  = ರತಿ ಪತಿಯಾದ ಮನ್ಮಥನ ಜನಕನಾದ ಶ್ರೀ ಕೃಷ್ಣ ಪರಮಾತ್ಮ 
ಕ್ಷಿತಿ ಭಾರಕೆ = ಭೂಮಿಗೆ ಭಾರವಾದ 
ಖಳತತಿಯ = ದುಷ್ಟರಾದ ರಾಕ್ಷಸರ ಸಮೂಹ 
ಅಪ್ರತಿಮಲ್ಲ =ಅಸದೃಶ ಸಾಹಸವಂತ 
ಖತಿವಂತ = ಕೋಪಿಷ್ಠ 
ದನುಜಾತೆಗೆ = ರಾಕ್ಷಸರ ಕುಲದಲ್ಲಿ ಹುಟ್ಟಿದ ಹಿಡಂಬೆ 
ಸುತನ ಪೆತ್ತನೆಂದೆನೇ = ಹಿಡಂಬಾ ಮಗನಾದ ಘಟೋತ್ಕಚನನ್ನು ಪಡೆದವ ಎಂದೆನೆ 
" ಯಾಮಿನಿಯಲ್ಲಿ ಪತಿಯೆನಿಸಿದೆಯೆಂದನೆ "
ರಾತ್ರಿಯಲ್ಲಿ ಸ್ತ್ರೀ ರೂಪದಲ್ಲಿ ಕೀಚಕ ವಧೆ ಮಾಡಿದ ಪ್ರಸಂಗ 
ನಡುಮನಿ ಸುತನಾಗಿ = ಶ್ರೀ ಮಧ್ಯಗೇಹ ಭಟ್ಟರ ಮಗನಾಗಿ 
ಜಡ = ಹುರುಳಿಲ್ಲದ, ದುರ್ವಾದಿಗಳ ಮತ 
" ಮಡದಿ ಬಿಟ್ಟವ "
ಶ್ರೀ ಭಾರತೀದೇವಿಯಂಥಾ ಪತ್ನಿಯನ್ನು ಬಿಟ್ಟು ಯತ್ಯಾಶ್ರಮ ಧರಿಸಿದವರು 
" ಕಡೆಗೆ ಬೋರೆಗಿಡವ ಸೇರಿದಿ ಎಂದೆನೆ "
ಬೋರೆ ಗಿಡದ ಅಡಿಯಲ್ಲಿ ಕುಳಿತು ಉಪದೇಶ ಮಾಡುತ್ತಿರುವ ಶ್ರೀ ಕ್ಷೇತ್ರ ಬದರೀ ವಾಸ - ಜಗದೊಡೆಯನಾದ ಶ್ರೀ ವೇದವ್ಯಾಸದೇವರ ಸಮೀಪವನ್ನು ಸೇರಿದವರು ಶ್ರೀಮನ್ಮಧ್ವಾಚಾರ್ಯರು.   
ಮತ್ತೊಂದು ಕೃತಿಯಲ್ಲಿ.... 
ರಾಗ : ಶಂಕರಾಭರಣಂ ತಾಳ : ಅಟ್ಟ
ಹನುಮಂತ ಪಾಹಿ ಹನುಮಂತ ।
ಮುನಿವ್ಯಾಸ ಕರಕಮಲಾರ್ಚಿತ 
ಜಯವಂತ ।। ಪಲ್ಲವಿ ।।
ಭೂಲೋಲ ಕೋಲಜಕೂಲ 
ಸುಮಂದಿರ ।
ಫಾಲಾಕ್ಷ ಪೌಲೋಮಿಪತಿ 
ವಂದಿತ ।
ಕಾಲಕಾಲದಿ ನಿನ್ನ 
ಓಲೈಸುವರ ಸಂಗ ।
ಪಾಲಿಸು ಕರುಣದಿ 
ಕಾಳೀ ಮನೋಹರ ।। ಚರಣ ।।
ಬಾಣ ರೂಪನೆ ಪಂಚ-
ಬಾಣ ನಿರ್ಜಿತನೆ । ಷ ।
ಟ್ಕೋಣ ಮಧ್ಯದಿ 
ಬಂದು ನೀ ನೆಲೆಸಿ ।
ಕ್ಷೋಣೀಗೀರ್ವಾಣ ಸು-
ಶ್ರೇಣಿಯಿಂದರ್ಚನೆ ।
ಮಾಣದೆ ಕೈಕೊಂಬ 
ವಾಣೀಶ ಸ್ಥಾನಾರ್ಹ ।। ಚರಣ ।।
ಸಿಂಧು ಬಂಧನ ಶ್ಯಾಮ-
ಸುಂದರವಿಠ್ಠಲನ ।
ದ್ವಂದ್ವ ಪಾದಾರವಿಂದಕೆ 
ಮಧುಪ ।
ನೆಂದೆನಿಸಿದ ಗುರು 
ಗಂಧವಾಹನ । ನಿನ ।
ಗೊಂದಿಸುವೆನು ಭವ-
ಬಂಧ ಬಿಡಿಸಿ ಕಾಯೋ ।। ಚರಣ ।।
ವಿವರಣೆ :
ಶ್ರೀ ಶ್ಯಾಮಸುಂದರದಾಸರು ಹಂಪೆಯ ಚಕ್ರತೀರ್ಥದ ಬಳಿಯಿರುವ ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಅಮೃತ ಹಸ್ತಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಯಂತ್ರೋದ್ಧಾರಕ ಮುಖ್ಯ ಪ್ರಾಣದೇವರ ಸನ್ನಿಧಿಗೆ ಬಂದು ಅಲ್ಲಿ ಸ್ಥಿರವಾಗಿ ನೆಲೆನಿಂತ ಯಂತ್ರೋದ್ಧಾರಕ ಹನುಮಂತರಾಯನನ್ನು ವರ್ಣಿಸಿದ್ದಾರೆ.
ಭೂಲೋಲ = ಭೂದೇವಿ ರಮಣ
ಕೋಲ = ಹಂದಿ
ಕೊಲಾಜ = ವರಾಹದೇವರ ಕೋರೆದಾಡೆಗಳಿಂದ ಉದ್ಭವವಾದ ತುಂಗಭದ್ರಾ ನದಿ
ಕೂಲಸ್ಥ ಮಂದಿರ = ನದಿಯ ತೀರದಿ ( ಚಕ್ರತೀರ್ಥದ ಸಮೀಪ )
ಪಾಲಾಕ್ಷ = ರುದ್ರದೇವರು ( ಹಣೆಯಲ್ಲಿ ಕಣ್ಣುಳ್ಳವರು )
ಪೌಲೋಮಿಪತಿ = ಶಚೀಪತಿ ಇಂದ್ರದೇವರು
ಓಲೈಸುವ = ಸೇವಿಸುವ
ಕಾಳೀ ಮನೋಹರ = ಕಾಳೀ ನಾಮಕ ಭಾರತೀದೇವಿಯರ 
ಪತಿಪಂಚ ಬಾಣ = ಅಶೋಕಾದಿ ಪಂಚ ಪುಷ್ಪಗಳನ್ನು ಬಾಣವನ್ನಗಿ ಉಳ್ಳ ಮನ್ಮಥನನ್ನು
ನಿರ್ಜಿತನೆ = ಗೆದ್ದವರು ' ಅಜೇಯರು ( ಅಂದರೆ ಜಿತೇಂದ್ರಿಯರು )
ಷಟ್ಕೋಣ = ಶ್ರೀ ವ್ಯಾಸರಾಜರು ಯಂತ್ರೋದ್ಧಾರಕ ಪ್ರಾಣದೇವರನ್ನು ಪ್ರತಿಷ್ಠಾಪಿಸಿದ್ದಾರೆ. 
ಆ ಷಟ್ಕೋಣ. ಅದರ ಸುತ್ತಲೂ ವಲಯಾಕಾರ. 
ಅದರ ಸುತ್ತಲೂ ಪದ್ಮದಳಗಳು. 
ಅದರ ಮೇಲೆ ಒಂದಕ್ಕೊಂದು ಹಣೆದುಕೊಂಡಿರುವ ಹನ್ನೆರಡು ಕಪಿಗಳಿಂದ ಯಂತ್ರ ಬಿಗಿಯಲ್ಪಟ್ಟಿದೆ. 
ಯಂತ್ರದ ಮಧ್ಯದಲ್ಲಿ ಜಪಮಾಲಾಧಾರಿಗಳಾಗಿ, ಯೋಗಾಸನಾರೂಢರಾಗಿ, ಶ್ರೀ ಮುಖ್ಯ ಪ್ರಾಣದೇವರು ಧ್ಯಾನ ಮಗ್ನರಾಗಿದ್ದಾರೆ. 
ಇದುವೇ ಶ್ರೀ ಯಂತ್ರೋದ್ಧಾರಕ ಪ್ರಾಣದೇವರ ದಿವ್ಯ ಭವ್ಯ ಚಿತ್ರಣ.
ಶ್ರೀ ಶ್ಯಾಮಸುಂದರದಾಸರ ಹೆಸರಿಗೆ ತಕ್ಕಂತೆ ಅವರ ವದನಾರವಿಂದದಲ್ಲಿ ಹೊರಹೊಮ್ಮಿದ ಸುಂದರವಾದ ಸ್ತೋತ್ರ ಪದ!
***
" ಶ್ರೀ ಶ್ಯಾಮಸುಂದರ - 9 "
"  ಜಗನ್ಮಾತೆ ಶ್ರೀ ಮಹಾಲಕ್ಷ್ಮೀದೇವಿಯರ ಸ್ತೋತ್ರ ಪದ "
ರಾಗ : ದುರ್ಗಾ    ತಾಳ : ತ್ರಿತಾಳ 
ಕಾಯೆ ದುರ್ಗಾಂಭ್ರಣಿಯೆ ।
ಕಾಯೆ ಶ್ರೀ ರುಗ್ಮಿಣಿಯೆ ।। ಪಲ್ಲವಿ ।।
ಕಾಯೆ ಕಾಯೆ ಶುಭ ।
ಕಾಯೆ ದಯದಿ ಹರಿ ।
ಕಾಯ ನಿಲಯೆ ವಿಧಿ ।
ಕಾಯಜ ತಾಯೆ ।। ಅ ಪ ।।
ಮಾ ಕಮಲೆ ಶ್ರೀ ಕರಳೆ -
ಪೋತನ ನುಡಿ ಕೇಳೆ ।
ಭೀಕರಳೆಣಿಸುತ -
ವ್ಯಾಕುಲ ಗೊಳಿಸದೆ । 
ನೀ ಕರುಣಿಸು ।
ರತ್ನಾಕರನ ಮಗಳೆ ।। ಚರಣ ।।
ಸೀತೆ ಸಾರಸನಯನೆ ।
ಶೀತಾಂಶುವಿನ ಭಗಿನಿ ।
ಮಾತೆ ನಮಿಪೆ ।।
ತವ ಘಾತಕ ವ್ರಾತದ ।
ಭೀತಿಯ ತೋರದೆ ।
ಪ್ರೀತಿಯೊಂದೊಲಿದು ।। ಚರಣ ।।
ಲಕ್ಷ್ಮೀ ಕೃತಿ ಕಾಂತಿ ।
ಅಕ್ಷರಳೆ ಜಯವಂತಿ ।
ಈಕ್ಷಣ ಕರುಣ । ಕ ।। 
ಟಾಕ್ಷದಿಂದೀಕ್ಷಿಸು ।
ಪೇಕ್ಷೆಯ ಮಾಡದೆ ।
ಮೋಕ್ಷದಾಯಕಳೆ ।। ಚರಣ ।।
ವಟದೆಲೆಯೊಳು ಮಲಗಿರಲು ।
ವಟು ರೂಪಿ ಪತಿ ಪದವ ।
ಪಠಿಸುತಬ್ಜಸೀ ಕರ ।।
ಪುಟದಿ ನಮಿಸುವಂಥ ।
ಕುಟಿಲ ರಹಿತೆ । ಶತ ।
ತಟಿತ ಸನ್ನಿಭಳೆ ।। ಚರಣ ।।
ಭಾಮೆ ಶ್ರೀ ಭೂಸುತೆಯೆ ।
ಶ್ಯಾಮಸುಂದರ ಸತಿಯೆ ।
ನಾ ಮೊರೆಹೊಕ್ಕೆನು ।।
ಪ್ರೇಮದಿಂದಲಿ । ಸು ।
ಕ್ಷೇಮಗರೆದು ಮಮ ।
ಧಾಮದಿ ನೆಲೆಸು ।। ಚರಣ ।।
" ವಿವರಣೆ "
ದುರ್ಗಾ = ತಮೋ ಗುಣಾಭಿಮಾನಿ ದುರ್ಗಾ ನಾಮಕಳು 
ಸುಜೀವಿಗಳಿಗೆ ಸದಾ ಸರ್ವತ್ರ ಅಭಯ ಸ್ಥಾನವಾದ ಕೋಟೆಯಂತೆ ರಕ್ಷಳಾಗಿರುವಳು 
( ಸತಾಮಭಯಭೂಮಿತ್ವಾತ್ )
ಬೃಹದಾರಣ್ಯಕೋಪನಿಷತ್....
ಯಸ್ತಮಸಿ ತಿಷ್ಠನ್ ತಮಸೋs೦ತರೋ 
ಯಂ ತಮೋ ನ ವೇದ
ಯಸ್ಯ ತಮಃ ಶರೀರಂ, 
ಯಸ್ತಮೋs೦ತರೋ ಯಮಯತಿ
ಏಷ ತೇ ಆತ್ಮಾ ಅಂತರ್ಯಾಮ್ಯಮೃತಃ ।।
ಯಾರು ತಮೋ ನಾಮಕಳಾದ ಶ್ರೀ ದುರ್ಗಾದೇವಿಯಲ್ಲಿದ್ದು ಶ್ರೀ ದುರ್ಗಾದೇವಿಯಿಂದ ಭಿನ್ನನೋ, 
ಶ್ರೀ ದುರ್ಗಾದೇವಿಯು ಯಾರನ್ನು ತಿಳಿದಿಲ್ಲವೋ, 
ಶ್ರೀ ದುರ್ಗಾದೇವಿಯು ಯಾರಿಗೆ ಶರೀರದಂತಿರುವಳೋ, 
ಯಾರು ಶ್ರೀ ದುರ್ಗಾದೇವಿಯಲ್ಲಿದ್ದು ಸುಖವನ್ನುಂಟು ಮಾಡುವನೋ ಮತ್ತು ನಿಯಮಿಸುವನೋ ಅವನೇ ನಿನ್ನ ನಿಯಾಮಕನಾದ ಅಂತರ್ಯಾಮಿ...
ತಮೋ ದುರ್ಗಾ ಪ್ರಕೀರ್ತಿತಾ 
ಯತಃ ಸಂಗ್ಲಪಯೇತ್ ಸರ್ವಾಮ್ ।।
ತಮಸ್ = 
ಶ್ರೀ ದುರ್ಗಾದೇವಿಏಕೆಂದರೆ ಪ್ರಳಯ ಕಾಲದಲ್ಲಿ ಎಲ್ಲರಿಗೂ ದುಃಖವನ್ನುಂಟು ಮಾಡುತ್ತಾಳೆ.   
" ದುರ್ಗ "
ದುರ್ಗೇಷು ಗತಸ್ತನ್ನಾಮಾ
ದುಃಖಿಷು ದುಃಖಿಭಿರವಗಮ್ಯತೇ
ದುಃಖೇನ ಚಾವಗತಃ
ಅನವಗತಶ್ಚ ದುಷ್ಟಾನಾಮ್
ಶಿಷ್ಟ ಪಾಲನಾಯ ದುಷ್ಟಾನನಭಿಗಚ್ಛಟಿ ಚ
ಅಪಗಮಯತಿ ದುಃಖಂ ದುರಿತಂ ಚ ।।  
" ಅಂಭ್ರಣೀ "
ಪ್ರಳಯ ಕಾಲದಲ್ಲಿ ನಿರಂತರ ತನ್ನ ಪತಿಯಾದ ಶ್ರೀ ಹರಿಯನ್ನು ವೇದ ವಾಕ್ಕುಗಳಿಂದ ಸ್ತೋತ್ರ ಮಾಡುವ ವೇದಾಭಿಮಾನಿಯಾದ ಶ್ರೀ ಮಹಾಲಕ್ಷ್ಮೀ ರೂಪವೇ " ವಾಕ್ " = ಅಂಭ್ರಣೀ . 
ಅಂ ಅಕಾರ ವಾಚ್ಯಂ ಬ್ರಹ್ಮ - ಅ ಇತಿ ಬ್ರಹ್ಮ ಇತಿ ಶ್ರುತೇ: ಇವನನ್ನು ಭಿಭರ್ತೀತಿ - ಅಂಭ್ರಣೀ. 
" ಅ " ಕಾರ ವಾಚ್ಯನಾದ ಶ್ರೀ ಹರಿಯನ್ನು ಸದಾ ಕಾಲ ಮನಸ್ಸಿನಲ್ಲಿ ಧರಿಸಿರುವವಳು ಅಂಭ್ರಣೀ. 
ಪ್ರಳಯೋದಕದಲ್ಲಿ ಯೋಗ ನಿದ್ರೆಯಲ್ಲಿರುವ ಶ್ರೀ ಹರಿ ಅಂಭ್ರ 
( ಅಂಭಸಿರಮತೆ ಇತಿ ಅಂಭ್ರ: ) - 
ಇಂತಹ ತನ್ನ ಪತಿಯಾದ ಶ್ರೀಮನ್ನಾರಾಯಣನನ್ನು ಸ್ತುತಿಸುವವಳೇ " ಅಂಭ್ರಣೀ ".
" ಅಂಭ್ರ " ಯೆಂದರೆ ಶ್ರೀ ಹರಿಯನ್ನು ಸದಾ ಕಾಲ ಹೃದಯದಲ್ಲಿ ಧರಿಸಿರುವವ ಶ್ರೀ ವಾಯುದೇವ ( ಅಂಭರತೀತಿ ಅಂಭ್ರ: ) - 
ಇಂತಹ ನಿಜ ಭೃತ್ಯರಾದ ಶ್ರೀ ವಾಯುದೇವರ ಸ್ವಾಮಿ ಅಂಭ್ರ: = ಶ್ರೀ ಹರಿ. 
ಶ್ರೀ ಹರಿಯ ಪತ್ನಿ ಅಂಭ್ರಣೀ = ವಾಕ್ ದೇವತೆಯಾದ ಶ್ರೀ ಮಹಾಲಕ್ಷ್ಮೀ 
ಶ್ರೀ ದುರ್ಗಾ ರೂಪಳಾದ ಶ್ರೀ ಮಹಾಲಕ್ಷ್ಮೀದೇವಿಯೇ ಶ್ರೀ ಅಂಭ್ರಣೀ ನಾಮಕಳು. 
ರುಗ್ಮಿಣಿಯೆ = ಶ್ರೀ ಕೃಷ್ಣ ಪರಮಾತ್ಮನ ಪಟ್ಟದರಸಿ 
ಶುಭ ಕಾಯೆ = ಮಂಗಳ ಸ್ವರೂಪಳೇ 
ಹರಿಕಾಯನಿಲಯೆ = ಶ್ರೀ ಹರಿಯ ವಕ್ಷಸ್ಥಳ ವಾಸಿನಿ 
ರತ್ನಾಕರನ ಮಗಳೇ = ಕ್ಷೀರ ಸಾಗರ ಕನ್ನಿಕೆ 
ಶೀತಾಂಶುವಿನ ಭಗಿನಿ = ಚಂದ್ರ ಸಹೋದರಿ 
ಸಾರಸನಯನೆ = ಕಮಲದಳಾಯತಾಕ್ಷಿ 
ಲಕ್ಷ್ಮೀ = ಶ್ರೀ ಹರಿ ಪತ್ನಿ 
ಕೃತೀ = ಪ್ರದ್ಯುಮ್ನನ ಪತ್ನಿ 
ಶಾಂತಿ = ಅನಿರುದ್ಧನ ಪತ್ನಿ 
ಶಾಂತಿ = ಶುಭ ಹಾಗೂ ಮಂಗಳ ಸ್ವರೂಪಳು 
[ ಶಾಂತಿ - ಕಲ್ಯಾಣ ಶಮಯೋ ]
ಅಕ್ಷರಳೆ = ಯಾವ ವಿಧವಾದ ನಾಶ, ದೇಹ ವಿಕಾರವಿಲ್ಲದ " ಅಕ್ಷರ " ನಾಮಕಳು.  
ವಟು ರೂಪಿ = ಬಾಲ ರೂಪಿ ಶ್ರೀ ಹರಿ 
ಅಬ್ಜಸೀಕರಪುಟದಿ = ಕರಕಮಲಗಳಿಂದ ಪೂಜಿಸುತ್ತ 
ಕುಟಿಲ ರಹಿತೆ = ನಿರ್ದೋಷಳೇ 
ಶತತಟಿತಸನ್ನಿಭಳೇ = ಅಸಂಖ್ಯ ಕೋಟಿ ಮಿಂಚಿನ ಕಾಂತಿಯುಳ್ಳ ದೇಹವುಳ್ಳವಳೇ 
ಶ್ರೀ = ಯೆನ್ನ ಸ್ವಸ್ತಿಗಾಗಿ ಅನುಗ್ರಹಿಸಲಿ 
ಭೂಸುತೆಯೆ = ಭೂ ಪುತ್ರಿಯಾದ ಸೀತೆ ( ಪದ್ಮಾವತಿ )
" ಶ್ಯಾಮಸುಂದರ ಸತಿಯೆ "
ಶ್ಯಾಮಸುಂದರ ನಾಮಕನಾದ ಎನ್ನ ಭಿನ್ನ ರೂಪಿಯೇ ಶ್ರೀ ಹರಿ. ಆ ಶ್ರೀ ಹರಿ ಪರಮಾತ್ಮನ ಪಟ್ಟದರಸಿಯಾದ ನೀನು... 
" ಮಮ ಧಾಮದಿ ನೆಲೆಸೆ "
ಯನ್ನ ಹೃದಯ ಮಂದಿರದಲ್ಲಿ ಸ್ಥಿರವಾಗಿ ನೆಲೆಸೆಂದು ಶ್ರೀ ಶ್ಯಾಮಸುಂದರದಾಸರು ನಮ್ಮ ಪರವಾಗಿ ಪ್ರಾರ್ಥಿಸಿದ್ಧಾರೆ. 
ಶ್ರೀ ಶ್ಯಾಮಸುಂದರ ದಾಸರು ಕುರಿತು ಕೃತಿಗಳು .... 
೧. ಬಾರೇ ಭಾಗ್ಯದ ನಿಧಿಯೆ ಬಾರೇ ಶ್ರೀ ಜಾನಕಿಯೆ 
೨. ಇಂದಿರೆ ಮಜ್ಜನನೀ ಇಂದಿರೆ 
೩.  ಏಕೆ ನೀ ಮರುಳಾದಿ ನಾಕೇಶ ವಿನುತೆ ರತ್ನಾಕರನ ತಾಯಿಯೆ 
೪.ಕುಂದಣದ ಹಾಸಿಗೆ ಚಂದದಲಿ ಬಾರೆ ಸಿಂಧುಕುಮಾರಿ 
೫. ಪಾಲಿಸೆನ್ನ ಮಾತೆ ಕರುಣಾದಿ ಪಾಲಾಂಬುಧಿ ಜಾತೆ 
೬. ಶರಧಿ ಸಂಭೂತೆ ಕಾಯೆ ಶಿರಬಾಗಿ ಬೇಡುವೆ ತಾಯಿ 
೭. ಕೊಡು ವರವ ನೀ ಪಿಡಿ ಕರವ 
೮. ಜನನಿ ಪಾಲಿಸೆ ಶುಭಾಂಗಿ 
೯. ಆರತಿ ಬೆಳಗೆ ವಾರಿಧಿ ಸುತೆಗೆ ಸಾರ ಸಂಗೀತದಿಂದಲಿ
***
" ಶ್ರೀ ಶ್ಯಾಮಸುಂದರ - 10 "
" ನನ್ನ ಸಂಗ್ರಹದಲ್ಲಿರುವ - ಶ್ರೀ ಶ್ಯಾಮಸುಂದರ ದಾಸರಿಂದ ರಚಿತವಾದ - ಜಗದೊಡೆಯ ಜಗನ್ನಾಥನಾದ ಶ್ರೀ ಹರಿಯ ಸ್ತೋತ್ರ ಪದಗಳು "
ಕ್ಷೇತ್ರ ಚರಿಸಲಾರೆ ।
ಕ್ಷೇತ್ರದೊಳಗೆ ಬಾರೋ ।
ಕ್ಷೇತ್ರ ಮೂರುತಿ ।
ಶ್ಯಾಮಸುಂದರವಿಠಲ ।।
೧. ಎಂದು ಕಾಂಬೆನೊ ನಂದಗೋಪನ ಕಂದ ಶ್ರೀ ಗೋವಿಂದನ 
೨. ಭಕ್ತಿ ಪಾಠ ಸಲ್ಲಿಸೈ ಸತತ ಸುಖಿ ಮುರವೈರಿ 
೩. ಹರಿಯೇ ಬಾರೋ ತ್ವರಾ 
೪. ಸ್ಮರಿಪ ಭಕ್ತರ ಬಂಧು ಶ್ರೀಕಾಂತ ಗಾನವಿಲೋಲ 
೫.ಕಂಡೆ ನಾ ಕಣ್ಣಾರೆ ನಾ ಕಂಡೆ ನಾ 
೬. ನೋಡಿದೆ ವೆಂಕಟರಮಣನ ದ್ವಾರವಾಡ ಗ್ರಾಮದಿ ನಿಂತ ದೇವನ 
೭. ರಂಗನ ನೋಡಿರೈ ಮಾನವಸಿಂಗನ ಪಾಡಿರೈ 
೮. ನಮೋ ನಮೋ ನರಮೃಗರಾಜ ಸದಾ ನಮಿಪೆ ಸುಜನರಿಗೆ ಅಮರ ಮಹಿಜ 
೯. ಅರಿತವರನು ಕಾಣೆ ನಿನ್ನ ದೇವ 
೧೦. ಕಂತು ಜನಕ ಶ್ರೀಕಾಂತನ ಸ್ತುತಿಸಲನಂತನಿಗಸದಳವೈ 
೧೧. ದೀನ ಜನ ಮಂದಾರ ಶ್ರೀಧರಾ ದಾನವ ಕುಲ ಹರಣ ಕೃಪಾಳೋ 
೧೨.ರಕ್ಷಿಸೋ ಬೇಗನೆ ಬಂದು ರಕ್ಷಿಸೋ 
೧೩. ಕರುಣದಲಿ ಪಿಡಿ ಕೈಯ್ಯ ಸಿರಿ ಮನುಜ ಕೇಶರಿ ಧರನು ಸುಮನಸ ಗೇಯ 
೧೪. ರಕ್ಷಿಸೆನ್ನನು ನಿರುತ ನಾರಾ ಮೃಗನಾಥಾ 
೧೫. ಕಾಯೋ ಕಾವೇರಿ ರಂಗ ಕಾರುಣ್ಯಾಪಾಂಗ 
೧೬. ಕಂಬುಕಂಧರ ಸತತ ರಕ್ಷಿಸಂಬುಜೋದ್ಭವನ ತಾತ 
೧೭. ಕರುಣಾಕರ ದೇವಾಧಿದೇವ 
೧೮. ಕರುಣದಿಂ ಪಾಲಿಸೆನ್ನ ಶ್ರೀ ಹಯವದನ 
೧೯. ಕಾಯೋ ಕಾಯೋ ಕಂಸಾರಿ ನಿನ್ನ ಪದ 
೨೦. ಶ್ರೀನಾಥ ಸಲಹೋ ಸತತ ನಿನ್ನ ಪದ ಧ್ಯಾನಾನಂದವಿತ್ತು 
೨೧. ಪಾಂಡುರಂಗ ಪರಿಪಾಲಿಸೋ - ನುಡಿಲಾಲಿಸೋ - ನಿನ್ನ ತೋಂಡನೆಂದೆನಿಸೊ 
( ವೃತ್ತನಾಮ )
೨೨. ಹಯವದನ ಈ ಭವಭಯತಾರಿಸೋ ಸುಜ್ಞಾನ ಪ್ರೇರಿಸೋ 
೨೩. ವಧುವರರ ಉದ್ಧರಿಸೋ ಉದ್ಧಶಯನ 
೨೪. ಶ್ರೀ ಮನೋಹರ ಸಲಹೋ ಯೆನ್ನ 
೨೫. ರಘುರಾಮ ರಘುರಾಮ ಮುಗಿವೆ ಕರವ ಎನ್ನಘ ಓಡಿಸಿ ಪೊರೆ 
೨೬. ಇಂದು ನಿನ್ನ ಪಾದ ಕಮಲವ ಪೊಂದಿದೆ ದೇವ 
೨೭. ಸ್ಮರಿಸುವೆ ಮುರಹರನ ಪರಮ ಪುರುಷನ 
೨೮. ನಂಬಿದೆ ತವ ಚರಣ ಅಂಬುಧಿಸುತೆ ರಮಣ 
೨೯. ಬಲುಕಷ್ಟ ಬರಗಾಲ ಬಂದಿತಮ್ಮ 
೩೦. ಬೆಳಗೋಣ ಹರಿಗೆ ಆರತಿಯ ಸಂಗೀತ ಪಾಡಿ ಪಾಡಿ 
೩೧. ಮಂಗಳೆಂದು ಪಾಡಿರಿ ಶ್ರೀರಂಗನಿಗೀಗ 
೩೨. ಶ್ರೀ ರಂಗನಾಥನ ಸೇವೆಯ ಮಾಡಿರೈ ಸದಾ 
೩೩. ಆನಂದ ಆನಂದಪ್ರದವೋ ದಾಶರಥಿಯ ಧ್ಯಾನ 
೩೪. ಶ್ರೀಧರನ ದೂತರಿಗೆ ಖೇದವುಂಟೆ ಕ್ರೋಧ ಜೈಸಿದ ನರಗೆ 
೩೫. ಹರಿಕಥಾಮೃತ ಸಾರ ಸರಸ ಸೂಗ್ರಂಥವಾ 
೩೬. ಗಂಧವಾಹನ ಮತವ ಪೊಡದವರು ಹಂದಿ ನಾಯಿಗಳಾಗಿ ಬಹುಕಾಲ ಕಳೆದಂತೆ 
೩೭.ಕೇಳಮ್ಮಾ ತಂಗಿ ಕೇಳಮ್ಮಾ ( ಜಾನಪದ )
೩೮. ಜೀವಿಸು ಜಗದಿ ಬಾಲಕ ನೀ ಚಿರಂಜೀವಿಯಾಗುತ 
೩೯. ಸುಖದಿ ಜೀವಿಸು ಬಾಳೆ ಸುಗುಣ ಶೀಲೆ 
೪೦. ಎನಗ್ಯಾಕೆ ಕವಿಯೆಂಬ ಶ್ರೇಷ್ಠ ನಾಮ 
"  ಉಪದೇಶ ಪದ "  
೪೧. ನೆಚ್ಚದಿರು ಸಂಸಾರ ಕಾಡಗಿಚ್ಛೆನಂದದಿ ದಹಿಸುವದತಿಘೋರ ೪೨. ಕಳೆಯ ಬೇಡವೋ ಕಾಲವ ತಿಳಿ ನೀ ಮಾನವಾ    
೪೩. ಶ್ರೀ ಸತ್ಯನಾರಾಯಣ ಕಥೆ ( ಕನ್ನಡ ಪದ್ಯ ರೂಪ )
ರಾಗ : ರೇಗುಪ್ತಿ  ತಾಳ : ತ್ರಿವಿಡ 
ಕಂಬುಕಂಧರ ಸತತ ಬಿಡದೆ । 
ರಕ್ಷಿ ।ಸಂಬುಜೋದ್ಭವನ ತಾತ ।। ಪಲ್ಲವಿ ।।
ಜಂಭಾರಿ ವೈರಿಕುಲಾಂಬುಧಿ 
ಕುಂಭಜ ।
ಕುಂಭಿಣಿ ಸುರ ನಿಕರಂಬ 
ಪೋಷಕ ದೇವ ।। ಆ. ಪ ।।
ನಳಿನಾಕ್ಷ ನರಕೇಶರಿ 
ನಂಬಿದೆ ನಿನ್ನ ।
ಹಲಧರಾನುಜನೆ ಶೌರಿ ।
ಇಳಜದಾಯಕ ಸಿರಿ ।
ನಿಲಯ ನಿತ್ಯಾನಂದ ।
ಎಲರುಣಿ ವರಶಾಯಿ ।
ಕಲುಷ ಸಂಹಾರಕ ।
ಜಲದ ರಿಪುವಿನ 
ತನಯನನುಜನ ।
ಕಲಹದೊಳು 
ಜೈಸಿದನ ತಾತನ ।
ಕುಲ ವಿರೋಧಿಯ ಧ್ವ
ಜನ ಜನಕಗೆ ।
ಒಲಿದು ಬೆಂಬಲನಾದ 
ಕೇಶವ ।। ಚರಣ ।।
ನಿಗಮರಕ್ಷಕ ಕೂರ್ಮ 
ಕಿಟ ಮಾನವ -
ಮೃಗ ವಟು ಪರಶುರಾಮ ।
ಅಗಜೇಶ ಶರಕಾಲ ।
ನೃಗಪತಿ ವರದನೆ ।
ಗಗನರಾಜನ ಮಗಳ 
ಗೋಸುಗ ।
ನಗುತ ಮಡದಿಯನಗಲಿ 
ಬಂದು ।
ಜಗವ ಪೊತ್ತನ 
ನಗದಿ ನೆಲೆಸಿದ ।
ತ್ರಿಗುಣ ವರ್ಜಿತ 
ಖಗವರೂಢನೆ ।। ಚರಣ ।।
ಮಂದರೋದ್ಧರ ವಿಶಾಲ 
ಮಹಿಮನಾದ ।
ಸಿಂಧೂರ ಪರಿಪಾಲ ।
ಕಂದರ್ಪ ಪಿತ 
ಶ್ಯಾಮಸುಂದರ ವಿಠಲನೆ ।
ವಂದಿಸುವೆನು ಯೆನ್ನ 
ಬಂಧನ ಬಿಡಿಸಯ್ಯ ।
ಗಂಧವಾಹನ ವೀಂದ್ರ
ಫಣಿಪತಿ ।
ಸಿಂಧುಜೋದ್ಭವೆಪತಿವಿರೋಧಿ । 
ಪು ।ರಂದರಾಮರ 
ವೃಂದ ವಂದಿತ ।
ನಂದಸುತ ಗೋವಿಂದ 
ಗೋಪತಿ ।। ಚರಣ ।।
" ವಿವರಣೆ "
ಕಂಬುಕಂಧರ = ಶಂಖದಂಥಹ ಕೊರಳುಳ್ಳವ 
ಜಂಭಾರಿ ವೈರಿ = ಇಂದ್ರಜಿತ್ 
ಇಳಿಜ = ಭೂಮಿಪುತ್ರ ಮಂಗಳ 
ಜಲದ ರಿಪುವಿನ = ಮೇಘಗಳ ಶತ್ರುವಾದ ಶ್ರೀ ವಾಯುದೇವರ 
ತನಯನ = ಮಗನಾದ ಶ್ರೀ ಭೀಮಸೇನದೇವರ 
ಅನುಜನ = ತಮ್ಮನಾದ  ಅರ್ಜುನನ 
ಕಲಹದೊಳು ಜೈಸಿದನ = ಯುದ್ಧದಲ್ಲಿ ಗೆದ್ದ ಬಬ್ರುವಾಹನ 
ತಾತನ = ತಾಯಿಯ ತಂದೆಯಾದ ಹಾವಿನ 
" ಕುಲ ವಿರೋಧಿ ಧ್ವಜನ "
ವಂಶಕ್ಕೆ ಶತ್ರುವಾದ ನವಿಲನ್ನೇ ಧ್ವಜವಾಗಿ ಉಳ್ಳ ಷಣ್ಮುಖನ 
ಜನಕಗೆ = ಶ್ರೀ ರುದ್ರದೇವರಿಗೆ 
ನಿಗಮರಕ್ಷಕ = ಶ್ರೀ ಮತ್ಸ್ಯ ರೂಪಿ ಶ್ರೀ ಹರಿ 
ಕಿಟ = ಶ್ರೀ ವರಾಹದೇವರು 
ಅಗಜೆ  = ಪಾರ್ವತಿಯ 
ಈಶ = ಪತಿಯಾದ ಶ್ರೀ ಮಹಾರುದ್ರದೇವರ 
ಶರ = ಧನಸ್ಸಿಗೆ 
" ಕಾಲ ನೃಗಪತಿ ವರದನೆ "
ಕಾಲ ಯಮನಂತೆ ಇರುವ ಶ್ರೀ ಮೂಲರಾಮಚಂದ್ರದೇವರು 
ಗಗನರಾಜ = ಆಕಾಶರಾಜ 
ಮಗಳ = ಪದ್ಮಾವತಿಯ 
 ಮಡದಿಯನಗಲಿ = ಶ್ರೀ ಮಹಾಲಕ್ಷ್ಮೀಯನ್ನು ಬಿಟ್ಟು 
" ಜಗವ ಪೊತ್ತನ ನಾಗದಿ ನೆಲೆಸಿದ "
ವರಾಹ ರೂಪಿ ಶ್ರೀ ಹರಿ ವಾಸವಾದ ಬೆಟ್ಟದಲ್ಲಿ ನೆಲೆಸಿದ ಶ್ರೀನಿವಾಸ 
ಸಿಂಧೂರ ಪರಿಪಾಲ = ಗಜೇಂದ್ರನನ್ನು ರಸಖಿಸಿದ 
ಕಂದರ್ಪ ಪಿತ = ಮನ್ಮಥನ ತಂದೆಯಾದ 
" ಶ್ಯಾಮಸುಂದರ ವಿಠಲನೇ"
ಯೆನ್ನ ಬಿಂಬ ಶ್ರೀ ಶ್ಯಾಮಸುಂದರವಿಠಲೋsಭಿನ್ನ  ಶ್ರೀ ಶ್ರೀನಿವಾಸನೆ 
ವಂದಿಸುವೆನು = ನಮಸ್ಕರಿಸುವೆನು.
***
" ಶ್ರೀ ಶ್ಯಾಮಸುಂದರ - 11 "
ಹರಿದಾಸ ಸಾಹಿತ್ಯದಲ್ಲಿ ರಚನೆಗಳಲ್ಲಿ ಅನೇಕ ಪ್ರಕಾರಗಳಿವೆ. ಅದರಲ್ಲಿ... 
ಪದ  -  ಉಗಾಭೋಗ - ಸುಳಾದಿ - ಜಾವಳಿ - ವೃತ್ತನಾಮ - ಜನ ಪದ ಮೊದಲಾದವು ಪ್ರಮುಖ ಪ್ರಕಾರಗಳು. 
ಶ್ರೀ ಶ್ಯಾಮಸುಂದರದಾಸರು " ಶ್ರೀ ಪಾಂಡುರಂಗದೇವರ " ಮೇಲೆ ರಚಿಸಿರುವ " ವೃತ್ತ ನಾಮ " ಹೀಗಿದೆ. 
ಪಾಂಡುರಂಗ ಪರಿಪಾಲಿಸೋ ।
ನುಡಿಲಾಲಿಸೋ ।
ನಿನ್ನ ತೋಂಡನೆಂದೆನಿಸೋ ।। ಪಲ್ಲವಿ ।।
ಶ್ಲೋಕ :
ಶ್ರುತಿ । ಸುಮನ ಪಾಲ । ಕ್ಷಿತಿಮಗು ಪರಿಪಾಲ ।
ಅತಿ ಕೋಮಲ ಬಾಲ । ಪತಿತ ರಾಜ ಕುಲ ಕಾಲ ।
ಯತಿನುತ ನಿಜಶೀಲ । ಧೃತ ಗೋವರ್ಧನಶೈಲ ।
ವಿತತವಿಗತ ಚೈಲ । ಪಾಹಿ ಕಲ್ಕಿ ಸುಲೀಲ ।। 
ಪದ :
ಹರಿ ನಿನ್ನ ಕರುಣ ಕಟಾಕ್ಷದಿ । ಭರತ ಖಂಡದಿ । ವರಭೂಸುರ ಕುಲದಿ । ನರ ಜನ್ಮವೆತ್ತಿ ನಾ ಜನಿಸಿದೆ । ನಿನ್ನ ನೆನಿಸದೆ ।। ದುರಿತ ಭರಿತ ನಾನಾದೆ । ಅರುಹಲು ರವಿಜಗೆ ಬಾಯಲ್ಲಾ । ಲಕುಮಿನಲ್ಲಾ । ನಿನ್ಹೊರತು ದಿಕ್ಕಿಲ್ಲಾ ।। ೧ ।।
ಶ್ಲೋಕ :
ಕಪಿವರನುತ ಚರಣ । ಕಾಕೋದರ ವರ ಶಯನ ।
ಕಪಿಲ ತುರಗ ವದನ । ದ್ವಿಪವರ ರಿಪು ದಮನ ।
ಖಪತಿ ಸುತೆಯ ರಮಣ । ಖಚರಾಧಿಪ ಗಮನ ।
ತಪನ ಭಾರ್ಯ ನಯನ । ತ್ರಿಪುರಾರಿಯ ಬಾಣ ।।
ಪದ :
ನಂದ ಯಶೋದೆಯ ನಂದನ । ಸಂಕ್ರಂದನ । ಗರ್ವ ಜೀಮೂತ ಪವನ । ತಂದೆ ಭವ್ಯಾಗ್ನಿಯೊಳ್ ಬೆಂದೆನೊ ।ಬಲು ನೊಂದೆನೊ । ಗತಿ ಮುಂದೆ ಇನ್ನೇನೊ । ಇಂದಿರಾಧವ ಶಿಂಧು ಶಯನನೇ । ಬಂದು ಬೇಗನೆ । ಕರ ಪಿಡಿದೀಗ ನೀನೆ ।। ೨ ।।
ಶ್ಲೋಕ :
ವಿಜಯದಸುದರಾರಿ । ಗದಾರವಿಂದಧಾರಿ ।
ಅಜಿತಾನಂತಾವತಾರಿ । ದ್ವಿಜ ಸುಜನೋಪಕಾರಿ ।
ವಿಜಯಸಖ ಕಾರಿ । ಅಜಮಿಳನುದ್ಧಾಶೌ ।
ಕುಜ ಬಕ ಧೇನುಹಾರಿ । ಭಜಿಪೆನು ನಿನ್ನ ಸಾರಿ ।।
ಪದ :
ಸದಮಲ ಸುಚರಿತ್ರಪ್ರವಿವಿಕ್ತ । ಸಾರರಸ ಭೋಕ್ತ । ಸರ್ವ ಕರ್ತ ಸುಶಕ್ತ । ಅಧಮ ಸುಯೋಧನನ ಧಿಕ್ಕಾರ ।ಗೈದ ಶ್ರೀಕರ । ವಿದುರನ ಸತ್ಕಾರ । ಮುದದಿ ಸ್ವೀಕರಿಸಿದ ಸಾಕಾರ । ಕರುಣಾಕರ । ದೂರಷಡುವಿಕಾರ ।ಮುದಮುನಿ ಮಾನಸ ಮಂದಿರ । ಕಂಬುಕಂಧರ । ಭಕ್ತ ಜನ ಮಂದಾರ ।। ೩ ।।
ಶ್ಲೋಕ :
ರವಿ ವಂಶೋದ್ಧಾರ । ರವಿ ಸನ್ನಿಭ ಶರೀರ ।
ರವಿ ಜನ ಭಯಹಾರ । ರವಿಧರ ಯದುವೀರ ।
ರವಿಜೆ ತಟ ವಿಹಾರ । ರವಿಜ ಸುತ ಸುಕುಮಾರ ।
ರವಿ ಜನ ಪ್ರಿಯ ಧೀರ । ರವಿಯಂತಸ್ಥಪಾರ ।।
ಪದ :
ಧೃವ ಕರಿ ಪ್ರಹ್ಲಾದ ಪಾಂಚಾಲಿ । ಪರೀಕ್ಷಿತ ಬಲಿ । ಮುನಿಯುವತಿ ಕಪಾಲಿ । ದಿವಿಜೇಶ ಮೊದಲಾದ ಶರಣರ । ಬಂಧ ಪರಿಹಾರ । ಗೈದ ದಯಪಾರವಾರ । ಅವನಿಯೊಳ್ ನಿನಗೆ ನಾ ಭಾರವೇ । ಪರಮಾತ್ಮನೆ । ನವನೀತ ತಸ್ಕರನೆ ।। ೪ ।।
ಶ್ಲೋಕ :
ಅಂಬುಜಭವ ವಾಸ । ಸಂಭವ ಮಹಿದಾಸ ।
ಶಂಭು ವಿನುತ ಶೇಷ । ಕುಂಭಿನೀಧರ ನಿವಾಸ ।
ಜಾಂಬೂನದ ವಾಸ । ಜಾಂಬವತೀ ಧವ ದೋಷ - 
ಕುಂಭೀನಸವೀಶ । ಜಂಭಾರಿ ಮದ ವಿನಾಶ ।।
ಪದ :
ಅಚ್ಯುತಾನಂತ ಶ್ರೀ ಗೋವಿಂದ । ಸಚ್ಚಿದಾನಂದ । ಮೆಚ್ಚಿ ವಿಕೃತಾಂಗಿ ಗಂಧ । ಹಚ್ಚಿದಾಕ್ಷಣ ಡೊಂಕು ತಿದ್ದೀದಿ । ಮುಕ್ತಿ ನೀಡಿದಿ । ವತ್ಸಾಸುರನ ವಿರೋಧಿ । ಕಚ್ಚಿದವನ ತಪ್ಪು ಕ್ಷಮಿಸಿದಿ । ಭಯ ಬಿಡಿಸಿದಿ । ಭಕ್ತವತ್ಸಲ ದಯದಿ ।। ೫ ।।
ಶ್ಲೋಕ :
ಶತಧೃತಿ - ಪ್ರಥಮಾಂಗ - ನುತ ಬಲ ಗಜಸಿಂಗ ।
ರತಿಪತಿ ಸುರಗಂಗಾ । ಪಿತ ಪಾವನ ಕೋಮಲಾಂಗ ।
ಅತಿಶಯ ದಯಾಪಾಂಗ । ವ್ರತಿಜನರಂತರಂಗ ।
ವೃತತಿಜ ಪತಂಗ । ಸತತ ಕರುಣಿಸೋ ಸಾಧುಸಂಗ ।।
ಪದ :
ವರ ಪುಂಡರೀಕನ ದೃಢಮನ । ಕೇಳಿ ನಿಜಸ್ಥಾನ । ತೊರೆದು ಸಾರಸನಯನ । ತೆರಳಿ ಬಂದು । ನೀ ನೋಡಿದಿ ವಿಧು ಭಾಗದಿ । ಸ್ಥಿರವಾಗಿ ನೆಲಿಸಿದಿ । ಶರಣರ ಭಕ್ತಿಗೆ ಸೋಲುವಿ । ಆಳಾಗುವಿ । ಅವರ ಛಲ ನಡೆಸುವಿ ।। ೬ ।।
ಶ್ಲೋಕ :
ಜಾತರಹಿತ ಸ್ವರತ । ಧಾಮತ್ರಯ ನಾಥ ।
ಶ್ವೇತವಾಹನ ಸೂತ । ಸಾಮ ಗಾಯನ ಪ್ರೀತ ।
ಪಾತಕ ಘನವಾತ । ಖ್ಯಾತ ಶೌರಿಜಾತ ।
ದಾತ ತ್ರಿಗುಣ ರಹಿತ । ಪೋತ ಭವಾಬ್ಧಿ ಪೋತ ।\
ಪದ :
ಗೋಮಿನಿಹೃತ್ಕುಮುದ ಚಂದಿರ । ಹೇಮಾಂಬರ । ಸ್ವಾಮಿ ಶ್ಯಾಮಸುಂದರ । ಕಾಮಿತಪ್ರದ ನಿನ್ನ ಪಾಡದೆ । ಪ್ರೇಮವಾರಿಧೆ । ಬಲು ಪಾಮರನಾದೆ । ನೀ ಮನ್ನಿಸೆನ್ನಪರಾಧವಾ । ಭೂಮಿಜಾಧವ । ಭಕ್ತ ಜನ ಸಂಜೀವಾ ।। ೭ ।।   
" ವಿವರಣೆ "
ಶ್ರುತಿ ಪರಿಪಾಲ = ವೇದ ಸಂರಕ್ಷಕ ಶ್ರೀ ಮತ್ಸ್ಯ ರೂಪಿ ಶ್ರೀ ಹರಿ 
ಸುಮನಸ ಪರಿಪಾಲ = ದೇವತೆಗಳ ಸಂರಕ್ಷಕ ಶ್ರೀ ಕೂರ್ಮ ರೂಪಿ ಶ್ರೀ ನಾರಾಯಣ 
ಕ್ಷಿತಿ ಪರಿಪಾಲ = ಭೂ ಸಂರಕ್ಷಕ ಶ್ರೀ ವರಹಾ ರೂಪಿ ಶ್ರೀ ಹರಿ 
ಮಗು ಪರಿಪಾಲ = ಶ್ರೀ ಪ್ರಹ್ಲಾದ ರಕ್ಷಕ ಶ್ರೀ ನರಸಿಂಹ ದೇವರು 
ಅತಿ ಕೋಮಲ ಬಾಲ = ಶ್ರೀ ವಾಮನ
ಪತಿತ ರಾಜ ಕುಲ ಕಾಲ = ಶ್ರೀ ಪರಶುರಾಮ 
ಯತಿನುತ ನಿಜ ಶೀಲ = ಶ್ರೀ ಮೂಲರಾಮಚಂದ್ರದೇವರು 
ಧೃತ ಗೋವರ್ಧನ ಶೈಲ  = ಶ್ರೀ ಕೃಷ್ಣ ಪರಮಾತ್ಮ 
ವಿತತ ವಿಗತ ಚೈಲ = ಶ್ರೀ ಭೌದ್ಧಾವತಾರ 
ಕಾಕೋದರವರಶಯನ = ಶೇಷಶಾಯಿ ಶ್ರೀ ಹರಿ 
ರವಿ ವಂಶೋದ್ಧಾರ = ಶ್ರೀ ರಾಮಚಂದ್ರ 
" ರವಿ ಜನ ಭಯಹಾರ "
ಶ್ರೀ ಯಮಧರ್ಮರಾಜರ ಮತ್ತು ಶ್ರೀ ಶನಿ ಮಹಾತ್ಮನ ಭಯ ಪರಿಹಾರ ಮಾಡುವ 
ರವಿಧರ ಯದುವೀರ = ಬೆಟ್ಟವನ್ನು ಧರಿಸಿದ ಶ್ರೀ ಕೃಷ್ಣ ಪರಮಾತ್ಮ 
ರವಿಜೆ ತಟ ವಿಹಾರ = ಯಮನ ನದೀ ತೀರದಲ್ಲಿ ವಿಹರಿಸುವ 
ರವಿಜ ಸುತ = ಶ್ರೀ ಯಮಧರ್ಮರಾಜರು 
ಸುಕುಮಾರ = ಮಗನಾದ ನಾರಾಯಣನ 
" ರವಿಜಪ್ರಿಯ "
ರವಿಜ = ಶ್ರೀ ಸೂರ್ಯದೇವರಿಂದ ಹುಟ್ಟಿದ ಶ್ರೀ ಯಮಧರ್ಮರಾಜರಿಂದ
" ಜ "
ಹುಟ್ಟಿದವನು ನರ, ಇವರಿಗೆ ಪ್ರಿಯನಾದವನು ನಾರಾಯಣ ಅಂದರೆ ಶ್ರೀ ಕೃಷ್ಣ ಪರಮಾತ್ಮ  
" ಧಾಮತ್ರಯನಾಥ "
ಅನಂತಾಸನ - ಶ್ವೇತದ್ವೀಪ - ವೈಕುಂಠಗಳ ಒಡೆಯನಾದ ಶ್ರೀಮನ್ನಾರಾಯಣ  
ಶ್ವೇತವಾಹನ ಸೂತ  = ಅರ್ಜುನನ ರಥ ಸಾರಥಿ ಶ್ರೀ ಕೃಷ್ಣ ಪರಮಾತ್ಮ
***
" ಶ್ರೀ ಶ್ಯಾಮಸುಂದರ - 12 "
ಭಗವಂತನ ಪ್ರಸಾದಕ್ಕೆ ಸಜ್ಜನರು ಮಾಡಬೇಕಾದ ಸಾಧನೆಯನ್ನು ಅಚ್ಛ ಕನ್ನಡದಲ್ಲಿ ಸರಳ ಸುಂದರವಾಗಿ ಜನಪದ ಶೈಲಿಯಲ್ಲಿ ಶ್ರೀ ಶ್ಯಾಮಸುಂದರದಾಸರು ಅತ್ಯಂತ ಮನೋಜ್ಞವಾಗಿ ತಿಳಿಸಿದ್ದಾರೆ. 
ಕೇಳಮ್ಮಾ ತಂಗಿ ಕೇಳಮ್ಮಾ ।। ಪಲ್ಲವಿ ।।
ಕೇಳಿ ಪುರಾಣದಿ ಪೇಳಿದ ಕೃಷ್ಣನ ।
ಲೀಲೆಯ ಪಾಡುತ " ಬಾಳಮ್ಮ " ।। ಚರಣ ।।
ನಿಷ್ಟಿಲಿಂದ ಬಲು ಶಿಷ್ಯಳಾಗುತಾ ।
ದುಷ್ಟರಿಂದ " ದೂರಾಗಮ್ಮ  ।। ಚರಣ ।।
ಹರಿದಾಸರ ಪದ ಹರುಷದಿ ಪಾಡುತ ।
ಗುರು ಹಿರಿಯರ ಮನ " ಕೊಪ್ಪಮ್ಮ " ।। ಚರಣ ।।
ಹಾಳು ಹರಟೆಯಲ್ಲಿ ಕಾಲ ಕಳೆಯದೆ ।
ಶೀಲವಂತಿ " ನೀ ನಾಗಮ್ಮ " ।। ಚರಣ ।।
ವಿದ್ಯಯ ಕಲಿತು ಬುದ್ದಿ ವಂತಳಾ -
ಗಿದ್ದರೆ ಸುಖಶತ " ಸಿದ್ಧಮ್ಮಾ " ।। ಚರಣ ।।
ವಂದಿಸಿ ತುಲಸಿ ವೃಂದಾವನ ಪೂಜಿಸಿ ।
ಮುಂದೆ ನಿನಗೆ " ಆನಂದಮ್ಮ " ।। ಚರಣ ।।
ಹೀನರ ಬೆರೆಯದೆ ಮೌನ ವ್ರತದಲಿ ।
ಜ್ಞಾನಿ ಜನರ " ನೀನರಸಮ್ಮ " ।। ಚರಣ ।।
ಮೂಢ ಜನರ ಒಡನಾಡದೆ ಭಕ್ತಿಲಿ ।
ಮಾಡು ಸಜ್ಜನರ " ಸಂಗಮ್ಮ " ।। ಚರಣ ।।
ಧರ್ಮದಿಂದ ಸತ್ಕರ್ಮ ಮಾಡುತ ।
ನಿರ್ಮಲಗೊಳಿಸಂತ " ರಂಗಮ್ಮ " ।। ಚರಣ ।।
ಪವನ ಪಿತನ ಕಥಾ ಶ್ರವಣವೆ ಪುಣ್ಯವು ।
ಭವವಿದು ಕತ್ತಲು " ಕಾಳಮ್ಮ " ।। ಚರಣ ।।
ಸದನಕೆ ಬಂದಿಹ ಬುಧರಾದರಿಸಲು ।
ಮುದ ಬಲು ನಿನಗಿದ " ರಿಂದಮ್ಮ " ।। ಚರಣ ।।
ಎಂದೆಂದಿಗು ಪರನಿಂದೆಯ ಮಾಡದೆ ।
ಮಂದಿರದಿರುವುದೆ " ಚಂದಮ್ಮ " ।। ಚರಣ ।।
ಸಾರಿದ ಜನರಘ ದೂರಗೈದು ಹರಿ ।
ತೋರುವ ನಿಜ ಗುರು " ಈರಮ್ಮ " ।। ಚರಣ ।।
ಅತ್ತಿಯ ಮನೆಗೆ ಹೆತ್ತವರಿಗೆ ।
ಉತ್ತಮ ಕೀರುತಿ " ತಾರಮ್ಮ " ।। ಚರಣ ।।
ಗೋ ವಿಪ್ರಾವಳಿ ಸೇವಿಸುತ್ತಿರುವುದೆ ।
ಕೋವಿದರಿಗೆ ಬಲು " ಜೀವಮ್ಮ " ।। ಚರಣ ।।
ಭವದೊಳಗೆ ಪರದೇವನೆ ಪತಿಯಂದು ।
ಭಾವಿಸುತಲಿ ಪಡಿ " ಭೋಗಮ್ಮ " ।। ಚರಣ ।।
ಭೇದ ಜ್ಞಾನ ಸಂಪಾದಿಸು ಕ್ಷಮಿಸುವ ।
ಶ್ರೀಧರ ನಿನ್ನಪ " ರಾಧಮ್ಮ " ।। ಚರಣ ।।
ಕೋಪದಿ ಪರರಿಗೆ ತಾಪವ ಬಡಿಸಲು ।
ಲೇಪವಾಗುವದು " ಪಾಪಮ್ಮ " ।। ಚರಣ ।।
ಇಂಗಡಲಾತ್ಮಜೆಯಂಘ್ರಿ ಸರೋಜಕೆ ।
ಭೃಂಗಳೆಣಿಸು ಸತಿ " ತುಂಗಮ್ಮ " ।। ಚರಣ ।।
ದಾಸ ಜನರ ಸಹವಾಸದೊಳಗಿರುವುದೆ ।
ಕಾಶಿಗಿಂತ ವಿ " ಶೇಷಮ್ಮ " ।। ಚರಣ ।।
ಕಲಿಯುಗದಲಿ ಸಿರಿ ನಿಲಯನ ನೆನೆದರೆ ।
ಸುಲಭ ಮುಕ್ತಿ ತಿಳಿ " ಕಂದಮ್ಮ " ।। ಚರಣ ।।
ಪತಿಯ ಸದ್ಗತಿಗೆ ಗತಿಯಂದರಿತಿಹ ।
ಮತಿಯುತ ಸತಿಯೆ " ಯಮನಮ್ಮ " ।। ಚರಣ ।।
ಮಧ್ವ ಸಿದ್ಧಾಂತದ ಪದ್ಧತಿ ತಪ್ಪದೆ ।
ಇದ್ದರೆ ಹರಿ ಗತಿ " ಮುದ್ದಮ್ಮ " ।। ಚರಣ ।।
ಸೋಗಿಗೆ ನೀ ಮರುಳಾಗಿ ನಡೆದರೆ ।
ಯೋಗಿ ಜನರ ಮನ " ಕಲ್ಲಮ್ಮ " ।। ಚರಣ ।।
ಶೀಲ ಗುಣದಿ ಪಾಂಚಾಲಿಯು ಎಲ್ಲ ।
ಬಾಲೆಯರೊಳು ತಾ " ಮೇಲಮ್ಮ " ।। ಚರಣ ।।
ನೆಮಾಡಿ ನಡೆದರೆ ಪ್ರೇಮದಿ ಸಲಹುವ ।
ಶ್ಯಾಮಸುಂದರನು " ಸತ್ಯಮ್ಮ " ।। ಚರಣ ।।
***
" ಶ್ರೀ ಶ್ಯಾಮಸುಂದರ - 13 "
"ಶ್ರೀ ಶ್ಯಾಮಸುಂದರದಾಸರ ಕಣ್ಣಲ್ಲಿ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರು "
ಶ್ರೀ ಶ್ಯಾಮಸುಂದರದಾಸರು ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಬಂದು ಕಲಿಯುಗ ಕಲ್ಪವೃಕ್ಷ ಕಾಮಧೇನುವೆಂದು ಜಗತ್ಪ್ರಸಿದ್ಧರಾದ ಶ್ರೀ ರಾಘವೇಂದ್ರತೀರ್ಥ ಗುರುಸರ್ವಭೌಮರ ವೃಂದಾವನದ ಮುಂದೆ ನಿಂತು ಆನಂದ ಭಾಷ್ಪ ಸುರಿಸುತ್ತಾ ಶ್ರೀ ರಾಯರನ್ನೇ ನೋಡುತ್ತಾ ಹೆಸರಿಗೆ ತಕ್ಕಂತೆ ಸುಂದರ ಪದಗಳೊಂದಿಗೆ ಸ್ತೋತ್ರ ಮಾಡಿದ್ದಾರೆ. 
ಈ ಕೃತಿಯಲ್ಲಿ ಶ್ರೀ ರಾಯರು ಶ್ರೀ ಪ್ರಹ್ಲಾದಾವತಾರಿಗಳೆಂದು ಸ್ಪಷ್ಟ ಪಡಿಸಿದ್ದಾರೆ. 
ರಾಗ : ಕಾಂಬೋಧಿ  ತಾಳ : ಝಂಪೆ 
ಸತತ ಪಾಲಿಸೋ ಯೆನ್ನ ।
ಯತಿ ರಾಘವೇಂದ್ರ ।
ತಿತ ಪಾವನ ಪಾವನ ।
ಸುತ ಮತಾಂಬುಧಿ ಚಂದ್ರ ।। ಪಲ್ಲವಿ ।।
ನಂಬಿದೆನೋ ನಿನ್ನ ಚರ-
ಣಾಂಬುಜವ ಮನ್ಮನದ ।
ಹಂಬಲವ ಪೂರೈಸೋ 
ಬೆಂಬಿಡದಲೆ ।
ಕುಂಭಿಣೀಸುರ ನಿಕು-
ರುಂಬ ವಂದಿತ ಜಿತ ।
ಶಂಬರಾಂತಕ ಶಾತ-
ಕುಂಭ ಕಶ್ಯಪ ತನಯ ।। ಚರಣ ।।
ಕ್ಷೋಣಿಯೊಳು ನೀ ಕುಂಭ-
ಕೋಣ ಕ್ಷೇತ್ರದಿ ಜನಿಸಿ ।
ವೀಣಾ ವೇಂ-
ಕಟ ಅಭಿದಾನದಿಂದ ।
ಸಾನುರಾಗದಿ ದ್ವಿಜನ 
ಪ್ರಾಣ ಉಳುಹಿದ ಮಹಿಮ ।
ಯೇನೆಂದು ಬಣ್ಣಿಸಲಿ
ಜ್ಞಾನಿಕುಲ ತಿಲಕ ।। ಚರಣ ।।
ಮಂದಮತಿಗಳ ಸಂಗ-
ದಿಂದ ನಿನ್ನಯ ಚರಣ ।
ಇಂದಿನ ತನಕ ನಾ 
ಪೊಂದಲಿಲ್ಲ ।
ಕುಂದು ಯೆಣಿಸದೆ ಕಾಯೋ 
ಕಂದರ್ಪ ಪಿತ ಶ್ಯಾಮ ।
ಸುಂದರನ ದಾಸ ಕ-
ರ್ಮಂದಿ ಕುಲವರಿಯ ।। ಚರಣ ।।
" ವಿವರಣೆ "
ಕುಂಭಿಣೀಸುರ = ಭೂಸುರ
ನಿಕುರುಂಬ = ಸಮೂಹ
ಶಾತಕುಂಭ = ಬಂಗಾರ
ಶಾತಕುಂಭಕಶ್ಯಪ = ಹಿರಣ್ಯಕಶಿಪು 
ಶಾತಕುಂಭಕಶ್ಯಪ ತನಯ = ಹಿರಣ್ಯಕಶಿಪುವಿನ ಮಗ ಪ್ರಹ್ಲಾದ 
" ಶ್ರೀ ಶ್ಯಾಮಸುಂದರ ದಾಸರು ರಚಿಸಿರುವರ ಶ್ರೀ ರಾಯರ ಮೇಲಿನ ಕೃತಿಗಳು "
೧. ಇಂಥಾ ಗುರುಗಳ ಕಾಣೆ ನಾ ಭೂತಳದೊಳಗಿಂಥಾ ಯತಿಗಳ ಕಾಣೆ ನಾ 
೨. ರಾಘವೇಂದ್ರ ಗುರುರಾಯ 
೩. ತುಂಗಾತೀರದಿ ಕಂಗೊಳಿಸುವ ಮುನಿಪುಂಗವ ರಾಯರ 
೪. ಶ್ರೀ ರಾಘವೇಂದ್ರ ಗುರುರಾಜ ಬಾರಯ್ಯ 
೫. ಸಾಗಿ ಬಾರೋ ಗುರುರಾಘವೇಂದ್ರ ರಾಯ 
೬. ಪಾಲಿಸು ರವಿತೇಜ ಮಂತ್ರಾಲಯ ಗುರುರಾಜ 
೭. ಯತಿರಾಜ ಯತಿರಾಜ ಕ್ಷಿತಿ ದೇವತಿ ತುತಿನುತ ರಾಘವೇಂದ್ರ 
೮. ಎಂಥಾ ದಯವಂತನೋ  ಮಂತ್ರಮುನಿನಾಥನೋ 
೯. ಸತತ ಪಾಲಿಸು ಯೆನ್ನ ಯತಿ ರಾಘವೇಂದ್ರ 
೧೦. ಯೋಗಿ ಕುಲಪುಂಗವ ಕಾಯೋ 
೧೧. ಕರುಣಿಸೋ ಗುರುವಾರ ಪರಿಮಳಾಚಾರ್ಯ 
೧೨. ಸಲಹೋ ಸಲಹೋ ಕರುಣಾಶರಧಿಯೇ 
೧೩. ಸ್ಮರಿಸುವೆನು ಗುರುರಾಯಾ ವರಮಂತ್ರ ಪುರಾಧಿಪ 
೧೪. ಕರುಣದಿ ಪಿಡಿ ಕೈಯ ಗುರು ಪರಿಮಳಾರ್ಯ 
೧೫. ರಾಘವೇಂದ್ರ ಗುರುರಾಯ ಬಾಗಿ ನಮಿಸುವೆ ಕೈಯ್ಯ 
೧೬. ರಾಯರೇ ಗತಿಯು ನಮಗೆ 
" ಶ್ರೀ ಶ್ಯಾಮಸುಂದರ ದಾಸರ ರಚನೆಗಳು "
1. ವಂದಿಪೆ ಚರಣಾರವಿಂದಕೆ ಸದ್ಗುರು ವಾದಿರಾಜ 
2.ಗುರು ವ್ಯಾಸರಾಯ ಪಾಲಿಸೋ 
3. ಕಾಯೋ ಜಿತಾಮಿತ್ರ ಯಮಿಕುಲನಾಯಕ ಸುಚರಿತ್ರ 
4.ಶ್ರೀಪಾದರಾಜ ಗುರುವೇ ನುತ ಸುರತರುವೆ 
5. ದಯದಿ ಸಲಹೋ ಜಯರಾಯ 
6. ಜಯತೀರ್ಥ ಜಯತೀರ್ಥ 
7. ವರಣಿಸಲು ಸಾಧ್ಯವೇ ಧರೆಯೊಳಿನ್ನು ವರದೇಂದ್ರ ಗುರು 
8. ವರದೇಂದ್ರ ವರದೇಂದ್ರ 
9. ನಿತ್ಯ ವ್ಯಾಸತತ್ತ್ವಜ್ಞನಂಘ್ರಿ ಭಜಿಸೋ 
10.ಕಾಯೋ ಕಾಯೋ ಜಿತಕಾಯಜಾ ಗುರು ಬಾದರಾಯಣತತ್ತ್ವಜ್ಞರಾಯ 
11. ಶ್ರೀ ಮಾದನೂರು ವಿಷ್ಣುತೀರ್ಥರ ಸ್ತುತಿ 
12. ಸ್ಮರಿಸು ಮಾನವ ನಿರುತ ಶ್ರೀ ಸುಶೀಲೇಂದ್ರತೀರ್ಥರು 
[  ಶ್ರೀ ಶ್ಯಾಮಸುಂದರದಾಸರು ತಮ್ಮ ಪ್ರೀತಿಯ ಗುರುಗಳಾದ ಶ್ರೀ ಸುಶೀಲೇಂದ್ರತೀರ್ಥರ ಮೇಲೆ ಸುಮಾರು 70ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ.  ]
13. ಪಾಂಡುನಂದನರಂತೆ ತೋರುತಿಹರು ( ಶ್ರೀ ಸತ್ಯಧ್ಯಾನರು )
14. ಏನು ಧನ್ಯರೋ ಜಗದಿ ಎಂಥ ಮಾನ್ಯರೊ ( ಶ್ರೀ ರಘುಪ್ರೇಮ ತೀರ್ಥರ ಸ್ತುತಿ )
15. ಪೊಂದಿ ಭಜಿಸೋ ನಿರುತ ಮಾನವ ಮಹಿ ವೃಂದಾರಕ ವ್ರಾತ 
( ಶ್ರೀ ಸುಯಮೀ೦ಡ್ರಾ ಸ್ತುತಿ )
" ಹರಿದಾಸರ ಸ್ತುತಿ "
ಶ್ರೀ ಪುರಂದರದಾಸರ ಮೇಲೆ ೫ ಕೃತಿಗಳು 
ಶ್ರೀ ವಿಜಯದಾಸರ ಮೇಲೆ ೧ ಪದ್ಯ ಮತ್ತು ೧ ಸುಳಾದಿ 
ಶ್ರೀ ಗೋಪಾಲದಾಸರ ಮೇಲೆ ೨ ಪದ್ಯಗಳು 
ಶ್ರೀ ಜಗನ್ನಾಥದಾಸರ ಮೇಲೆ ೩೦ಕ್ಕೂ ಅಧಿಕ ಪದಗಳು, ೧ ಸುಳಾದಿ, ೧ ರಗಳೆ 
ಶ್ರೀ ಪ್ರಾಣೇಶದಾಸರ ಮೇಲೆ ೧ ಪದ 
ಶ್ರೀ ಮೊದಲಕಲ್ಲು ಶೇಷದಾಸರ ಮೇಲ ೧ ಪದ 
ಶ್ರೀ ಅಸ್ಕಿಹಾಳ ಗೋವಿಂದದಾಸರ ಮೇಲೆ ೧ ಪದ 
ಶ್ರೀ  ಗುರು ಜಗನ್ನಾಥದಾಸರ ಮೇಲ ೨ ಪದಗಳು
ಶ್ರೀ ವರದೇಶದಾಸರ ಮೇಲೆ  ೧ ಪದ 
ಶ್ರೀ ಕೊಪ್ಪರದ ಭೀಮಸೇನಾಚಾರ್ಯರ ಸ್ತೋತ್ರ - ೧
ಶ್ರೀ ಐಕೂರು ಆಚಾರ್ಯರ ಮೇಲೆ - 
೦೬ ಪದಗಳು, ೧ ಸುಳಾದಿ, ೧ ಅಷ್ಟಕ ಮತ್ತು ೧ ನಕ್ಷತ್ರ ಮಾಲಿಕಾ ಸ್ತೋತ್ರ 
ಶ್ರೀ ಹರಿದಾಸರ ಕೋಲುಪದ
***
" ಶ್ರೀ ಶ್ಯಾಮಸುಂದರ - 14 "
" ವರಕವಿ ಶ್ರೀ ಶ್ಯಾಮ ಸುಂದರ ದಾಸರು "
" ದಿನಾಂಕ : 02.05.2020 ಶನಿವಾರ ಶ್ರೀ ಶ್ಯಾಮಸುಂದರದಾಸರ ಆರಾಧನಾ ಮಹೋತ್ಸವ "
ಜಗನ್ನಾಥ ಗುರೋರ್ದಾಸಂ 
ಜಗದಾನಂದಕಾರಕಂ ।
ಶ್ಯಾಮಸುಂದರದಾಸಾರ್ಯಂ 
ವಂದೇ ಸುಜ್ಞಾನದಾಯಕಮ್ ।।
" ಶ್ರೀ ಶ್ಯಾಮಸುಂದರದಾಸರ ವಂಶ "
ಶ್ರೀ ಹರಿ ನಾರಾಯಣ
ಶ್ರೀ ಮಹಾಲಕ್ಷ್ಮೀ
ಶ್ರೀ ಬ್ರಹ್ಮ - ಶ್ರೀ ವಾಯುದೇವರು
ಶ್ರೀ ಶ್ರೀಪಾದರಾಜರು
ಶ್ರೀ ವ್ಯಾಸರಾಜರು
ಶ್ರೀ ಪುರಂದರದಾಸರು
ಶ್ರೀ ವಿಜಯರಾಯರು
ಶ್ರೀ ಗೋಪಾಲದಾಸರು
ಶ್ರೀ ಜಗನ್ನಾಥದಾಸರು
ಶ್ರೀ ಶ್ಯಾಮಸುಂದರದಾಸರು
" ಶ್ರೀ ಶ್ಯಾಮಸುಂದರದಾಸರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ಗುಂಡಾಚಾರ್ಯರು
ತಂದೆ : ಶ್ರೀ ಶ್ಯಾಮಾಚಾರ್ಯರು
ತಾಯಿ : ಸಾಧ್ವೀ ಕೊಪ್ರಮ್ಮ
ಕಾಲ : ಕ್ರಿ ಶ 1896 - 1956ಕುಲ 
ಕುಲ ಗುರುಗಳು : ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು
ಸ್ವರೂಪೋದ್ಧಾರಕ ಗುರುಗಳು : ಶ್ರೀ ಜಗನ್ನಾಥದಾಸರು
ಗುರುಗಳು : 
ಶ್ರೀ ಐಕೋರು ನರಸಿಂಹಾಚಾರ್ಯರು, ಶ್ರೀ ಅಸ್ಕಿಹಾಳ ಗೋವಿಂದದಾಸರು
ಅಂಕಿತ : ಶ್ರೀ ಜಗನ್ನಾಥದಾಸರಿಂದ ಸ್ವಪ್ನಾಂಕಿತ " ಶ್ಯಾಮಸುಂದರವಿಠ್ಠಲ
ಸಮಕಾಲೀನ ಯತಿಗಳು :
ಶ್ರೀ ಸುಶೀಲೇಂದ್ರತೀರ್ಥರು; ಶ್ರೀ ಸುವ್ರತೀಂದ್ರತೀರ್ಥರು; ಶ್ರೀ ಸುಯಮೀಂದ್ರತೀರ್ಥರು
ಶಿಷ್ಯರು :
ಶ್ರೀ ವಿಜಯಸಾರಥಿವಿಠಲ; ಶ್ರೀ ಲಕುಮೀಶದಾಸರು ( ಶ್ರೀ ಕುರುಡಿ ರಾಘವೇಂದ್ರಾಚಾರ್ಯರು ), ಶ್ರೀ ಅಭಿನವ ಪ್ರಾಣೇಶದಾಸರು; ಶ್ರೀ ಶ್ರೀಕರವಿಠಲ; ಶ್ರೀ ಪದ್ಮನಾಭವಿಠಲ ಮತ್ತು ಶ್ರೀ ಗುರು ಶ್ಯಾಮಸುಂದರದಾಸರು ( ಶ್ರೀ ಸುಶೀಲೇಂದ್ರಾಚಾರ್ಯರು ),
ಉಪದೇಶ ಪಡೆದ ಶಿಷ್ಯರು :
ಮರತೇಡ್ ಶ್ರೀನಿವಾಸರಾಯರು, ಚೀಲಕಪರವೀ ಶ್ರೀ ನರಸಿಂಹದಾಸರು, ದಡದಲ ಶ್ರೀ ನರಸಿಂಗರಾಯರು ಮತ್ತು ದಡದಲ ಶ್ರೀ ಭೀಮಸೇನದಾಸರು ( ಶ್ರೀ ಮೋತಿದಾಸರು )
" ಶ್ರೀ ದಾಮೋದರದಾಸರೇ ಶ್ರೀ ಶ್ಯಾಮಸುಂದರದಾಸರು "
ಶ್ಯಾಮಸುಂದರದಾಸರು ಹಿಂದಿನ ಜನ್ಮದಲಿ ರಂಗ ಒಲಿದ ದಾಸರಾಯರಾದ ಶ್ರೀ ಜಗನ್ನಾಥದಾಸರ ಪುತ್ರರಾದ ಶ್ರೀ ದಾಮೋದರದಾಸರಾಗಿ ಅವತರಿಸಿ ಶ್ರೀ ಜಗನ್ನಾಥದಾಸರ ವದನಾರವಿಂದದಲ್ಲಿ ಹೊರಹೊಮ್ಮಿದ " ಹರಿಕಥಾಮೃತಸಾರ " ದ ಕೆಲವು ಸಂಧಿಗಳನ್ನು ಶ್ರೀ ದಾಸಾರ್ಯರ ಪರಮಾನುಗ್ರಹ ಬಲದಿಂದ ಬರೆದಿದ್ದರ ಫಲದಿಂದ ಶ್ರೀ ಶ್ಯಾಮಸುಂದರದಾಸರಾಗಿ ಅವತರಿಸಿದ್ದಾರೆ ಎಂಬುದನ್ನು ಈ ಕೆಳಗಿನ ಪ್ರಮಾಣಗಳು ಖಚಿತ ಪಡಿಸಿವೆ.
ಶ್ರೀ ವಿಜಯಸಾರಥಿ ವಿಠಲರು....
ಹರಿಕಥಾಮೃತ ವಕ್ತಾರಃ ।
ಪರಮಾನುಗ್ರಹ ಸೂನುವೇ ।
ವರ ಕವಿ ಪಂಡಿತಾಚಾರ್ಯ 
ನಮೋ ನಮಃ ।।
ಶ್ರೀ ಶ್ರೀಕರ ವಿಠಲರು...
ಮಾನವಿಯಧಾಮರಾ 
ಪ್ರೇಮದಾ ಸೂನೂ ।
ನೀನೆಂದು ಭಾವಿಸಿ 
ಸ್ತುತಿಪ ಜನರನ್ನು ತಾನೇ ।
ಶ್ರೀಕರವಿಠ್ಠಲ ಪೊರೆಯುವನು 
ವರ ಕಾಮಧೇನು ।।
ಶ್ರೀ ತಂದೆ ವೆಂಕಟೇಶ ವಿಠಲರು...
ಮಾನವೀ ಗುರುವ ಪ್ರಸೂನ 
ಷಟ್ಟರಣ ಕವಿ ।
ಭಾನು ಹೃದ್ಯಾನವದ್ಯಾಭಿಮನ್ಯು ।
ಪ್ರಾಣ ಪ್ರಿಯ ತಂದೆ 
ವೆಂಕಟೇಶವಿಠಲನ್ನ ಪದ ।
ರೇಣಿನವನಿವನೆಂದು 
ಸುಮುಖನಾಗೋ ।।
ಶ್ರೀ ಶ್ಯಾಮ ಸುಂದರ ದಾಸರೇ ತಾವು ಶ್ರೀ ಜಗನ್ನಾಥದಾಸರ ಪುತ್ರರೆಂದು ಈ ಕೆಳಕಂಡ ಪ್ರಮಾಣಗಳಿಂದ ಸ್ಪಷ್ಟ ಪಡಿಸಿದ್ದಾರೆ.
ಭೋ ದಾತಾ ಬಾರೋ 
ಗುರುವರ್ಯ ।। ಪಲ್ಲವಿ ।।
ನಂಬಿದೆ ನಾ ನಿನ್ನ ಪಾದ 
ಭೂನಾಥ ದಾಸಾಗ್ರಣೀ ।। ಅ. ಪ ।।
... ಪೋತನೋಳೀಪರಿ 
ಯಾತಕೆ ನಿರ್ದಯ ।
ತಾತನೆ ನಿಮಗಿದು 
ರೀತಿಯೇ ನೋಡೈ ।
ಸುತನಪರಾಧವ 
ಹಿತದಲಿ ಮನ್ನಿಸಿ ।
ಪಾತಕ ಬಿಡಿಸೋ 
ಮತಿ ಬೀರೋ ।।
ಇನ್ನೊಂದು ಪದದಲ್ಲಿ.....
ಕರವ ಪಿಡಿ ಗುರುರಾಯಾ ।
ಶಿರ ಬಾಗಿ ಬೇಡುವೇ ।
ಪೊರೆಯೋ ಸತ್ಕವಿಗೇಯ ।।
ನೆರೆ ನಂಬಿದೆನೋ ನೀ ।
ಮರೆಯದಿರು ಶುಭ ಕಾಯ ಹೇ ।
ಸೂರಿವರ್ಯ ।। ಪಲ್ಲವಿ ।।
... ಮಂದ ನಾ ನಿಜವಯ್ಯಾ ।
ಸಂದೇಹವಿಲ್ಲದೇ ।
ಕುಂದು ಎಣಿಸದೆ ಜೀಯಾ ।
ಬಂದೆನ್ನ ಮನದಲಿ ।
ನಿಂದು ನೀ ಸಲಹಯ್ಯಾ ।
ವಂದಿಪೆನು । ಶ್ರೀ ಪು ।।
ರಂದರಾರ್ಯರ ಪ್ರಿಯಾ ।
ಆನಂದ ನಿಲಯಾ ।
ಅಂದು ಸ್ವಪ್ನದಿ ।
ವಚನವು ತಂದೆಯೇ ।
ಇಂದಿಲ್ಲಿ ಪೋಯಿತು ।
ನಂದ ನಂದನನಾದ । 
ಶ್ರೀ ಗೋ ।
ವಿಂದ ಶ್ಯಾಮಸುಂದರನ 
ವಿಧೇಯಾ ।।
ಮತ್ತೊಂದು ಕೃತಿಯಲ್ಲಿ....
ಮಾನಿತ ನಿನಗನು ।
ಮಾನವ್ಯಾತಕೆ ತವ ।
ಸೋನು ನಾನಲ್ಲವೇ ।
ಮಾನವಿ ನಿಲಯನೇ ।।
" ಶ್ರೀ ರಾಘವೇಂದ್ರತೀರ್ಥರ ಕಾರುಣ್ಯ "
ಅಂದಿನ ಸಮಾಜದಲ್ಲಿ ಸುಪ್ರಸಿದ್ಧರು ಶ್ರೀ ಪ್ರಹ್ಲಾದಾವತಾರಿಗಳಾದ ಶ್ರೀ ರಾಘವೇಂದ್ರತೀರ್ಥರ ಅತ್ಯಂತ ಪ್ರಿಯರಾದವರು 
ಶ್ರೀ ಅಹ್ಲಾದಾಂಶ ಶ್ರೀ ಗುರು ಜಗನ್ನಾಥದಾಸರು. ಶ್ರೀ ವಿಜಯರಾಯರ ಪರಂಪರೆಗೆ ಸೇರಿದ ಶ್ರೀ ಜಗನ್ನಾಥದಾಸರ ಪರಮಾನುಗ್ರಹಕ್ಕೆ ಪಾತ್ರರಾದ ಶ್ರೀ ಗುರು ಜಗನ್ನಾಥದಾಸಾರ್ಯರು 
" ಕೋಸಿಗಿ ಮುತ್ಯಾ " ಯೆಂಬ ಹೆಸರಿನಲ್ಲಿ ಎಲ್ಲಾ ಸಾತ್ವಿಕ ಜನ ಮಾನಸದಲ್ಲಿ ಗುರು ಸ್ಥಾನವನ್ನು ಪಡೆದಿದ್ದರು.
" ಹರಿಕಥಾಮೃತಸಾರ " ವನ್ನು ತಮ್ಮ ಪ್ರತಿ ರಕ್ತದ ಕಣದಲ್ಲೂ ತುಂಬಿಕೊಂಡ ಕೋಸಿಗಿ ಮುತ್ಯಾ ಅವರು ಶ್ರೀ ಜಗನ್ನಾಥದಾಸರ ದರ್ಶನಾಕಾಂಕ್ಷಿಗಳಾಗಿ ಮಾನವಿಗೆ ಬಂದರು.
ಶ್ರೀ ದಾಸಾರ್ಯರ ಆಗಮನವನ್ನರಿತ ಶ್ರೀ ಶ್ಯಾಮಾಚಾರ್ಯ ದಂಪತಿಗಳು ತಮ್ಮ ಮಗನ ಕರೆತಂದು ಅವರ ಅಡಿದಾವರೆಗಳಲ್ಲಿಟ್ಟು ದುಃಖವನ್ನು ತೋಡಿಕೊಂಡರು.
ಶ್ರೀ ಗುರು ಜಗನ್ನಾಥದಾಸರು ಮಮತೆಯಿಂದ ಮಗುವಿನ ತಲೆಯ ಮೇಲೆ ಕೈಯಾಡಿಸುತ್ತಾ...
ಶ್ಯಾಮಾಚಾರ್ಯರೇ! ನಿಮ್ಮ ಮಗನು ಭಗವದನುಗ್ರಹದಿಂದ ನಿರಂತರ ಆಧ್ಯಾತ್ಮಿಕ ತತ್ತ್ವಗಳನ್ನಾಡಬಲ್ಲ ವರ ಕವಿಯಾಗುವನು. 
ಇವನು ಬೂದಿ ಮುಚ್ಚಿದ ಕೆಂಡ " ಎಂದು ಹರಿಸಿದರು.ಶ್ರೀ ಗುರು ಜಗನ್ನಾಥದಾಸರ ಪರಮಾನುಗ್ರಹದಿಂದ ಗುಂಡಾಚಾರ್ಯರು ಕೆಲವೇ ತಿಂಗಳಗಳಲ್ಲಿ ಸ್ವಚ್ಛವಾಗಿ ಮಾತನಾಡಲು ಪ್ರಾರಂಭಿಸಿದನು .
" ಮೂಕೋಪಿಯತ್ಪ್ರಸಾದೇನ 
ಮುಕುಂದ ಶಯನಾಯತೇ.... "
ಎಂಬಂತೆ ಶ್ರೀ ರಾಘವೇಂದ್ರತೀರ್ಥರು ಹಾಗೂ ಶ್ರೀ ಜಗನ್ನಾಥದಾಸರು ಶ್ರೀ ಗುರು ಜಗನ್ನಾಥದಾಸರನ್ನು ಮಾಧ್ಯಮವನ್ನಾಗಿಟ್ಟುಕೊಂಡು ಗುಂಡಾಚರ್ಯರ ಮೇಲೆ ತೋರಿದ ಕಾರುಣ್ಯ. 
ಕಾರಣ ಶ್ರೀ ಪ್ರಹ್ಲಾದರಾಜರೇ ಶ್ರೀ ರಾಘವೇಂದ್ರತೀರ್ಥರು - ಶ್ರೀ ಸಹ್ಲಾದರಾಜರೇ ಶ್ರೀ ಜಗನ್ನಾಥದಾಸರು - ಶ್ರೀ ಆಹ್ಲಾದರಾಜರೇ ಶ್ರೀ ಗುರು ಜಗನ್ನಾಥದಾಸರು ಮತ್ತು ಶ್ರೀ ಜಗನ್ನಾಥದಾಸರ ಪುತ್ರರಾದ ಶ್ರೀ ದಾಮೋದರದಾಸರೇ ಶ್ರೀ ಶ್ಯಾಮಸುಂದರದಾಸರಾಗಿ ಅವತಾರ ಮಾಡಿದ್ದಾರೆಂದ ಮೇಲೆ ಜ್ಞಾನಿತ್ರಯರ ಕಾರುಣ್ಯಕ್ಕೆ ವಿಶೇಷವಾಗಿ ಪಾತ್ರರಾದವರು ಶ್ರೀ ಗುಂಡಾಚಾರ್ಯರು!!
" ಅಂಕಿತ ಪ್ರದಾನ "
ಅದೊಂದು ಶುಭ ಸಮಯ. 
ಶ್ರೀ ಗುಂಡಾಚಾರ್ಯರ ಸ್ವಪ್ನದಲ್ಲಿ ಶ್ರೀ ಜಗನ್ನಾಥದಾಸರು ಕಾಣಿಸಿಕೊಂಡು " ಶ್ಯಾಮಸುಂದರವಿಠಲ " ಎಂಬ ಅಂಕಿತ ನಾಮವನ್ನು ಕರುಣಿಸಿ ಅನುಗ್ರಹಿಸಿದರು. 
ಶ್ರೀ ಗುಂಡಾಚಾರ್ಯರ ವದನಾರವಿಂದದಿಂದ ಭಗವನ್ಮಹಿಮಾ ಪ್ರತಿಪಾದಕವಾದ; ವೇದಾಂತ ರಹಸ್ಯಗಳಿಂದ ಕೂಡಿದ ಕವಿತಾ ತರಂಗಿಣಿಯು ಹೊರಹೊಮ್ಮಿತು. 
ಅಂದಿನಿಂದ ಶ್ರೀ ಗುಂಡಾಚಾರ್ಯರು " ಶ್ರೀ ಶ್ಯಾಮಸುಂದರವಿಠಲ " ರೆಂದು ಪ್ರಸಿದ್ಧಿಯಾದರು.
" ವರ ಕವಿಗಳಿಂದ ವರ ಕವಿಗಳಿಗೆ ಸ್ವಾಗತ "
ಕವಿ ದ ರಾ ಬೇಂದ್ರೆಯವರನ್ನು ಕುರಿತ ಹಾಡು ಸುಂದರವಾಗಿದೆ. 
ಮಾನವಿಯಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನಕ್ಕೆ ಬರುವಂತೆ ವ್ಯವಸ್ಥಾಪಕರು ಮಾಡಿಕೊಂಡ ಮನವಿಯನ್ನು ಕವಿ ಬೇಂದ್ರೆಯವರು ಮನ್ನಿಸದಿದ್ದುದಕ್ಕೆ ಇಡೀ ಸಮ್ಮೇಳನದ ಉತ್ಸಾಹವು ಕುಗ್ಗಿದ್ದನ್ನರಿತ ಶ್ರೀ ಶ್ಯಾಮಸುಂದರದಾಸರು ಕವಿ ಬೇಂದ್ರೆಯವರಿಗೆ ಮಾನವಿಗೆ ಬರುವಂತೆ ಆಹ್ವಾನಿಸಿ ಒಂದು ಸ್ವಾಗತ ಪದವನ್ನು ಬರೆದು ಧಾರವಾಡಕ್ಕೆ ಕಳುಹಿಸಿದರು. 
ಸ್ವಾಗತ ಪದದಲ್ಲಿ ನಿರೂಪಿತ ಸಾಹಿತ್ಯ ಸತ್ವವನ್ನು ಓದಿದ ಕವಿ ಬೇಂದ್ರೆಯವರು ಕೂಡಲೇ ಮಾನವಿಗೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸತ್ಕವೀಂದ್ರ ಬಾ ಬೇಂದ್ರೆ 
ಸುಗುಣ ಸಾಂದ್ರ ।। ಪಲ್ಲವಿ ।।
ನಮ್ಮ ಮಾನವಿ ಸ್ಥಳದಿ 
ಅಚ್ಛಗನ್ನಡದ ನುಡಿಯ ।
ಸಮ್ಮಿಲನ ಸಾಗಿಸಲು 
ನಿಶ್ಚಯಿಸಿದೆ ।
ನಿಮ್ಮ ಬರುವಿಕೆ ಬಯಕೆ ।।
ಇಮ್ಮಡಿಸಿಹುದೆಮಗೆ ।
ಸಮ್ಮತಿಸಿ । ಬಾರ ।
ಯ್ಯ ಸತ್ಕವೀಂದ್ರ ಶ್ರೀ 
ಬೇಂದ್ರೆ ಸುಗುಣೇಂದ್ರ ।। ಚರಣ ।।
... ಪ್ರೇಮದಿಂದಲಿ ನಿನ್ನ 
ಕಾಮಿತಾರ್ಥವಗರೆದು ।
ಶ್ಯಾಮಸುಂದರವಿಠಲ 
ಸಲಹೋ ಎಂದು ।
ನಾಮದಡಿ ಪ್ರಾರ್ಥಿಸುವೆ 
ನೀ ಮಾಡ್ವ ಉಪಕಾರ ।।
" ಶ್ರೀ ಜಗನ್ನಾಥದಾಸರೇ ಸಾರಸರ್ವಸ್ವ "
ಅನೇಕ ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸಿದ ಇವರಿಗೆ ಮಾನವಿಯಲ್ಲಿ ಎಲ್ಲಿಲ್ಲದ ಅಭಿಮಾನ. ಅದೇ ಅವರ ಪಾಲಿಗೆ ಸಕಲ ತೀರ್ಥ ಕ್ಷೇತ್ರಗಳ ಪವಿತ್ರ ನಿಲಯ. ಇದಕ್ಕೆ ಒಡೆಯರಾದ ಶ್ರೀ ಜಗನ್ನಾಥದಾಸರೇ ಇವರ ಪಾಲಿಗೆ ತಂದೆ, ತಾಯಿ, ಬಂಧು, ಬಳಗ, ಗುರು, ದೈವ ಎಲ್ಲವೂ ಆಗಿದ್ದಾರೆ. 
ಶ್ಯಾಮಸುಂದರದಾಸರು ತಮ್ಮ ಒಂದು ಸುಳಾದಿಯಲ್ಲಿ....
ಇವರ ಸಂದರುಶನ ಭಾವ ಬಂಧ ಮೋಚನ । ಇವರ ಚರಣ ಧ್ಯಾನ ಗಂಗಾ ಸ್ನಾನ । ಇವರನ್ನ ಸಾರಿದರೆ ಜವಾನ ಅಂಜಿಕೆಯುಯಿಲ್ಲ । ಇವರ ಕವನ ಸ್ತವನ ಶ್ರವಣದಿಂದ । ಪವನ ಸಚ್ಛಾಸ್ತ್ರದ ಪವಚನ ಫಲವಕ್ಕು ।ಇವರಿಪ್ಪ ಸ್ಥಳ ಕಾಶೀ ರಾಮೇಶ್ವರ । ಇವರಲ್ಲಿ ಸಮಸ್ತ ದಿವಿಜರು ನೆಲೆಸಿದ್ದು । ಇವರಿಂದ ವಚನವ ನಡೆಸುವರು । ಇವರಿಲ್ಲಿರಲು ಬಿಟ್ಟು ಅವನಿ ಸುತ್ತಿದವರಿಗೆ । ಆವಲೇಶವಾದರೂ ಪುಣ್ಯವಿಲ್ಲ । ಇವರನುಗ್ರಹವಾಗೆ ಶ್ರೀ ಶ್ಯಾಮಸುಂದರನು । ತವಕದಿಂದ ಕರ ಪಿಡಿದು ಸಲಹುವ ಸರ್ವದಾ ।।
" ನಿರ್ಯಾಣ "
ಪೂರ್ಣವಾದ ಹರಿದಾಸ ಸಾಹಿತ್ಯದ ಭಾಂಡಾಗಾರವನ್ನು ತಮ್ಮ ಕೃತಿ ರತ್ನಗಳಿಂದ ಪೂರ್ಣ ಮಾಡಿದ ಮಹನೀಯರು. 
ನಿಗೂಢವಾದ ಸಾಧನೆಯನ್ನು ಮಾಡಿ ಕಾರಣ ಜನ್ಮರಾದ ಶ್ರೀ ಶ್ಯಾಮಸುಂದರದಾಸರು ದುರ್ಮುಖಿ ನಾಮ ಸಂವತ್ಸರದ ವೈಶಾಖ ಶುದ್ಧ ನವಮೀ ಶುಕ್ರವಾರ ವೈಕುಂಠಕ್ಕೆ ತೆರಳಿದರು.
ರಾಗ : ಭೈರವಿ ತಾಳ : ಆದಿ
ತೆರಳಿದರು ತೆರಳಿದರು 
ಹರಿಯ ಪುರಕೆ ।
ಪುರ ಬಲ್ಲಟಗಿಯ 
ವರಕವಿ ಶ್ಯಾಮಸುಂದರರು ।। ಪಲ್ಲವಿ ।।
ವೀರ ವೈಷ್ಣವರಲ್ಲಿ 
ಜನಿಸುತಲಿ ಮಾನವಿಯ ।
ಧಾರುಣಿಪ ದಾಸರ 
ಒಲಿಮೆ ಪಡೆದು ।
ಈರ ಮತ ತತ್ತ್ವಗಳ ।
ಪಾರ ಮಹಿಮೆಗಳ 
ಚಾರು ಪದ ಪದ್ಯದಿಂ ।
ಸಾರಿ ನಲಿದವರು ।। ಚರಣ ।।
ಮೂಕ ಬಧಿರರ ತೆರದಿ ।
ಲೋಕಕ್ಕೆ ತೋರುತಲಿ ।
ಕಾಕು ವ್ರುತ್ತಿಗಳನು ನೂಕಿ ಮೆಟ್ಟಿ ।
ಈ ಕುಂಭಿಣಿಯೊಳು ।
ಸಾಕೆಂದು ತ್ವರಿತದಲಿ ।
ಕಾಕೋದರಾಗ್ರಾಜನ 
ನಾಮ ಘರ್ಜನೆಗೈದು ।। ಚರಣ ।।
ದುರ್ಮುಖ ಸಂವತ್ಸರದಿ । ವೃಷ ।
ಭ ಮಾಸದ । ಶು ।
ಕ್ಲ ಮೂರು ತಿಥಿ 
ಶುಕ್ರವಾರ ಹಗಲು ।
ನಿರ್ಮಲಾನಂದದಿ 
ಲಯವನ್ನು ಚಿಂತಿಸುತ ।
ಭರ್ಮಪಿತ ಅಭಿನವ 
ಪ್ರಾಣೇಶವಿಠಲನ್ನ ನೆನೆಯುತ ।। ಚರಣ ।।
***
" ಶ್ರೀ ಶ್ಯಾಮಸುಂದರ - 15 "
ಶ್ರೀ ಶ್ಯಾಮಸುಂದರದಾಸರ ಕುರಿತು ಮತ್ತಷ್ಟು ಮಾಹಿತಿ....
" ಆಶು ಕವಿಗಳ ಕಾವ್ಯ ಪ್ರತಿಭೆ "
ಶ್ರೀ ಗುಂಡಾಚಾರ್ಯರು ( ಶ್ರೀ ಶ್ಯಾಮಸುಂದರದಾಸರು ) ವರಕವಿ. 
ಕಾವ್ಯ ರಚನಾ ಪ್ರತಿಭೆಯು ಅವರಿಗೆ ಬಾಲ್ಯದಿಂದಲೇ ಅಂಕುರಿಸಿತ್ತು. 
ಮೂರನೆಯ ವರ್ಗದಲ್ಲಿ ಓದುತ್ತಿದ್ದಾಗ ಒಮ್ಮೆ ಶಾಲೆಗೇ ಶಿಕ್ಷಣ ವಿಭಾಗಾಧಿಕಾರಿಯು ಪರ್ಯವೇಕ್ಷಣೆಗಾಗಿ ಬಂದನು. ಶಾಲೆಯ ಅಧ್ಯಾಪಕರಾದ ಶ್ರೀ ವೆಂಕಪ್ಪನವರು ಹುಡುಗರಿಂದ ಒಳ್ಳೇ ಕವಿತೆಯನ್ನು ಹಾಡಿಸಿ ಆ ಅಧಿಕಾರಿಯನ್ನು ಸ್ವಾಗತಿಸಬೇಕೆಂಬ ಆಸೆ. 
ಆದರೆ ಆ ಕ್ಷಣದಲ್ಲಿ ಸುಂದರವಾದ ಕವಿತೆಯನ್ನು ರಚಿಸುವವರ್ಯಾರು?
ಅವರು ತಮ್ಮ ಅಪೇಕ್ಷೆಯನ್ನು ಮಕ್ಕಳ ಮುಂದೆ ಹೇಳಿದರು.
ಆ ಕ್ಷಣದಲ್ಲಿ ಶ್ರೀ ಗುಂಡಾಚಾರ್ಯರು ಒಂದು ಸುಂದರವಾದ ಸ್ವಾಗತದ ಹಾಡನ್ನು ರಚಿಸಿ ಗುರುಗಳಿಗೆ ಗುರು ದಕ್ಷಿಣೆಯ ರೂಪದಲ್ಲಿ ಕೊಟ್ಟರು.
ಶ್ರೀ ಗುಂಡಾಚಾರ್ಯರಲ್ಲಿರುವ ಕವಿತಾ ಶಕ್ತಿಯನ್ನು ಕಂಡು ಗುರುಗಳು ಬೆರಗಾದರು. 
ಅಧಿಕಾರಿಯೂ ಸಹ ರಚನೆಯಲ್ಲಿರುವ ಶಬ್ದ ಲಾಲಿತ್ಯವನ್ನೂ; ಅರ್ಥ ಗಾಂಭೀರ್ಯವನ್ನೂ ಕಂಡು ಬಹಳ ಸಂತೋಷಪಟ್ಟರು. 
ಅಲ್ಲಿಯ ವರೆಗೂ ಶ್ರೀ ಗುಂಡಾಚಾರ್ಯರಲ್ಲಿ ಸುಪ್ತವಾಗಿದ್ದ ಕವಿತಾ ಶಕ್ತಿಯು ಅಂದಿನಿಂದ ಪ್ರಕಟವಾಗ ಹತ್ತಿತು. 
ಶ್ರೀ ಗುಂಡಾಚಾರ್ಯರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾನವಿಯಲ್ಲೇ ಪೂರ್ತಿ ಮಾಡಿ ಮುಂದಿನ ವಿದ್ಯಾಭ್ಯಾಸವನ್ನು ನಿಲ್ಲಿಸಿ ತಂದೆಗೆ ಪೌರೋಹಿತ್ಯದಲ್ಲಿ ಸಹಾಯಕರಾಗಿದ್ದರು.
" ಪುಣ್ಯ ಜೀವಿಗಳು "
ಪುಣ್ಯ ಜೀವಿಗಳು ಪ್ರಾರಬ್ಧ ಕರ್ಮಗಳನ್ನು ಸವಿಸಲೆಂದೇ ಭೂಮಿಯ ಮೇಲೆ ಜನ್ಮ ತಾಳುತ್ತಾರೆ. 
ಪ್ರಾರಬ್ಧ ಕರ್ಮಾನುಸಾರ ಅವರು ನಿಂದ್ಯಾ ಕರ್ಮಗಳನ್ನು ಮಾಡುತ್ತಾರೆ. 
ದೇಹಕ್ಕೆ ಅಂಟಿಕೊಂಡ ತಮ್ಮ ಕರ್ಮಗಳನ್ನು ಭಗವಂತನಿಗೆ ಅರ್ಪಿಸಿ ಅಂತರಂಗವನ್ನು ಶುಚಿಯಾಗಿಟ್ಟು ಕೊಳ್ಳುತ್ತಾರೆ.
ಶ್ರೀ ಗುಂಡಾಚಾರ್ಯರು ಮಾನವಿ ಮುನಿಪುಂಗವರಾದ ಶ್ರೀಸಹ್ಲಾದಾಂಶ ಜಗನ್ನಾಥದಾಸರಿಗೆ ಸಂಪೂರ್ಣವಾಗಿ ಶರಣಾಗತರಾಗಿ ಅವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಿದ್ದರು. 
ಶ್ರೀ ಜಗನ್ನಾಥದಾಸರನ್ನು ಮನತುಂಬಿ ಸ್ತುತಿಸಿ, ಕೀರ್ತಿಸಿ ಕೊಂಡಾಡಿದ್ದಾರೆ.
ರಾಗ : ದೇಶ್ ತಾಳ : ತ್ರಿತಾಳ
ರಂಗವಲಿದ ರಾಯ ನೀ । ಸ ।
ತ್ಸಂಗ ಪಾಲಿಸಯ್ಯಾ ।। ಪಲ್ಲವಿ ।।
ಬುಧ ಜನ ನುತ ಮನುಜ ।
ಪಂಚ ।
ವದನಾರ್ಯರ ತನುಜ ।
ಪದಯ ನಿನ್ನಯ ಪದ ।।
ಪದುಮವ ಭಜಿಸಿದೆ ।
ಅಧಮನಾದೆ ನಾ 
ಸದಮಲಕಾಯ ।। ಚರಣ ।।
ನುತಿಸುವೆ ಜಗದೊಡೆಯ 
ನಾಮಕ ।
ಸತತ ಪಿಡಿಯೊ ಕೈಯ್ಯ ।
ಕ್ಷಿತಿಯೊಳು ಪೂರ್ವದಿ ।।
ಪತಿತರ ಸಲಹಲು ।
ಶತಕ್ರತುರಾಯರ 
ಸುತನೆನಿಸಿದ ಗುರು ।। ಚರಣ ।।
ವೃಂದಾರಕಸ್ತೋಮ 
ವಂದಿತ ।
ನಂದನಂದನ । ಶ್ಯಾಮ ।
ಸುಂದರನೊಲಿಮೆಲಿ ।।
ಛಂದದಿ ಸ್ತಂಭ । ಸು ।
ಮಂದಿರದೊಳು ನಿಂದು 
ಮೆರೆದ ಗುರು ।। ಚರಣ ।।
" ಶ್ರೀ ಶ್ಯಾಮಸುಂದರದಾಸರ ಕಣ್ಣಲ್ಲಿ ಗುರುಗಳಾದ ಶ್ರೀ ಐಕೋರು ನರಸಿಂಹಾಚಾರ್ಯರು "
ಶ್ರೀಮನ್ಮಧ್ವಮತದ ಪಂಡಿತರ ಜೀವನದ ಉಸಿರು ಶ್ರೀಮದ್ಭಾಗವತ ಮಹಾ ಪುರಾಣ. ಅದರ ಅಧ್ಯಯನವೇ ಜೀವನದ ಸಾರ್ಥಕತೆ. ಅದರ ಶ್ರವಣವೇ ಜೀವನದ ಧನ್ಯತೆ. 
ಶ್ರೀ ಹರಿಯ ದಾಸನಗುವುದೇ ಸಾಧನೆಯ ಗುರಿ. 
ಶ್ರೀ ಮದ್ಭಾಗವತ ಎಲ್ಲರ ಬದುಕಿನ್ನು ಧರ್ಮದ ದಾರಿಯಲ್ಲಿ ನಡೆಸುವುದು. 
ತಮ್ಮ ಆತ್ಮೋದ್ಧಾರದ ಜೊತೆಯಲ್ಲಿ ತನ್ನವರೆಲ್ಲರನ್ನೂ ಉದ್ಧಾರ ಮಾಡಬೇಕು. 
ಇದುವೇ ಫಲವಿದು ಬಾಳ್ದುದಕೆ.
ಅಂತೆಯೇ " ದೇಹ ಸಂಬಂಧಿಭಿಃ ವಿದ್ಯಾ ಸಂಬಂಧಿಭಿಃ.... ಕರಿಷ್ಯೇ ಕಾರಯಿಷ್ಯೇ ಚ " ಎಂದು ಶ್ರೀ ಮಂತ್ರಾಲಯ ಪ್ರಭುಗಳ ವಾಣಿ.
" ದೇಹ ಸಂಬಂಧಿಕರೂ ಅಂದರೆ ಪೀಠಾಧಿಪತಿಗಳು ಮತ್ತು ಸಾತ್ವಿಕ ವಿದ್ಯೆಯ ಮುಖಾಂತರ ಸಂಬಂಧಿಗಳಾದ ಸಜ್ಜನರ ಎಲ್ಲರಿಂದಲೂ ಸತ್ಕರ್ಮ; ಧರ್ಮ ಮಾಡಿಸುವೆ - ನಾನು ಮಾಡುವೆ.
ಇದು ಬದುಕಿನ ಸಂಕಲ್ಪ!!
ಈ ರೀತಿ ಬಾಳಿದ ಭಾಗವತರ ಪರಂಪರೆಯಲ್ಲಿ ಬಂದ ಸಾಧಕರೂ; ದೈವೀ ಪುರುಷರೂ ಪ್ರಾತಃ ಸ್ಮರಣೀಯ ಪರಮಪೂಜ್ಯ ಶ್ರೀ ಐಕೋರು ನರಸಿಂಹಾಚಾರ್ಯರು. 
ಸಮಗ್ರ ಮಧ್ವ ಶಾಸ್ತ್ರ ತಿಳಿದ ಪಂಡಿತೋತ್ತಮರೂ - ಭಗವದ್ಭಕ್ತರೂ, ಬಿಂಬೋಪಾಸಕರೂ, ಅನುಸಂಧಾನ ಚತುರರೂ; ಶ್ರೀಮದ್ಭಾಗವತ ಧುರೀಣರೂ; ಪ್ರಭಾವಕಾರಿವ್ಯಾಖ್ಯಾನಕಾರರು. ಕೇವಲ ಶ್ರೀಮದ್ಭಾಗವತ ಹೇಳುವವರಲ್ಲ. 
ಅದರಂತೆ ಬಾಳಿದವರು.ಶ್ರೀಮಧ್ಭಾಗವತ ಇವರ ಅಸ್ಥಿಗತವಾಗಿತ್ತು. 
ಇವರ ದೇಹದಲ್ಲಿರುವ ಪ್ರತಿಯೊಂದು ಅಸ್ಥಿ ಶ್ರೀಮದ್ಭಾಗವತ ಶ್ಲೋಕಗಳನ್ನು ಹೇಳುತ್ತಿತ್ತಂತೆ. 
ಇದು ಶ್ರೀ ಐಕೋರು ಆಚಾರ್ಯರ ಸಂಪರ್ಕದಲ್ಲಿ ಇದ್ದ ಸಜ್ಜನರಿಗೆಲ್ಲರಿಗೂ ಅನುಭವವಾಗಿದೆ. 
ಇದು ಶ್ರೀ ಐಕೋರು ಆಚಾರ್ಯರ ಹಿರಿಮೆ!!
ರಾಗ : ಪೂರ್ವಿ ತಾಳ : ತ್ರಿವಿಡಿ
ಬಾರಯ್ಯಾ ಬಾರಯ್ಯಾ ।
ಸೂರಿವರಿಯ ಐಕೋರು 
ನಿಲಯ ಗುರು ।। ಪಲ್ಲವಿ ।।
ನೀನಾಕಿದ ಸುಜ್ಞಾನದ 
ಸಸಿಗಳು ।
ಮ್ಲಾನವಾಗುತಿವೆ 
ಸಾನುರಾಗದಲಿ ।। ಚರಣ ।।
ಸಲೆ ತವ ಕರುಣ 
ಸಲಿಲವ ಎರದು ।
ಘಳಿಲನೆ ವೃದ್ಧಿಯಗೊಳಿಸಿ 
ಸಲಹಲು ।। ಚರಣ ।।
ನಾಟಿದ ಸಸಿಗಳು 
ನೀಟಾಗುವ ಪರಿ ।
ತೋಟಿಗ ನೀ ಕೃಪೆ 
ನೋಟದಿ ಸಲುಹಲು ।। ಚರಣ ।।
ಕೋವಿದವರ ನೀ 
ಕಾವಲಿ ಇರಲು । ಕು ।
ಜೀವಿಗಳಿಂದಲಿ 
ಹಾವಳಿಯಾಗದು ।। ಚರಣ ।।
ನೀ ಮರೆದರೆ ಸುಕ್ಷೇಮವಾಗುದು ।
ಶ್ಯಾಮ ಸುಂದರನ 
ಪ್ರೇಮದ ಪೋತ ।। ಚರಣ ।।
ಶ್ರೀ ಆಚಾರ್ಯರ ಮೇಲೆ ಶ್ರೀ ಶ್ಯಾಮಸುಂದರದಾಸರ ರಚನೆ...
ಶ್ರೀಮತ್ಕೃಷ್ಣ ತರಂಗ ನಿಲಯ 
ಐಕೂರು ಗ್ರಾಮ ನಿಲಯ
ಸ್ತಂಭೋದ್ಭವ ನಾಮಧೇಯ 
ದ್ವಯಭಾರ್ಯಾ ಸುಮನಃ ಪ್ರಿಯಃ ।
ಸದ್ಭಾಕ್ತಾರ್ತಿ ವಿದೂರ ವಿಮಲ 
ಹೃದಯ ಅತ್ಯಂತ ಕರುಣಾಮಯ
ಅಸ್ಮದ್ ಸದ್ಗುರುವರ್ಯ ಏಯೋ 
ನಮಗೆ ನೀ ನಿತ್ಯ ಸನ್ಮಂಗಳ ।। ೧ ।।
ಸಾರೋದ್ಧಾರ ಸುಗೀತ ಭಾರತಯುತ 
ವೇದಾರ್ಥ ಸಂಪೂರಿತ
ಸಲ್ಹಾದಾಂಶಜ ದಾಸವರ್ಯ 
ವಿರಚಿತ ಶ್ರೀ ಶೌರಿಕಥಾಮೃತ ।
ಪಾರಜ್ಣಂ ಸುಶಿಲೇಂದ್ರ ಮಮತ 
ಸಂಪೂರ್ಣ ಸಂಪಾದಿತ
ಅಸ್ಮದ್ ಸದ್ಗುರುವರ್ಯ ಏಯೋ 
ನಮಗೆ ನೀ ನಿತ್ಯ ಸನ್ಮಂಗಳ ।। ೨ ।।
ಅಷ್ಟಾಪದಲೋಷ್ಟ ಭಾವ 
ಸಮತ ಧೀಶ ಸನ್ಮಾನಿತ
ಅಷ್ಟೈಕಾಮಲ ಭಕ್ತಿ ಜ್ಞಾನ 
ಭರಿತ ವೈರಾಗ್ಯ ಸಂಶೋಭಿತ ।
ಸೃಷ್ಟ್ಯಾಂತರ್ಗತ ಬಿಂಬ ಮೂರ್ತಿ 
ಸತತ ಸಂದರ್ಶನಾ ನಂದಿತ
ಅಸ್ಮದ್ ಸದ್ಗುರುವರ್ಯ ಏಯೋ 
ನಮಗೆ ನೀ ನಿತ್ಯ ಸನ್ಮಂಗಳ ।। ೩ ।।
ಶೃಂಗಾರಾಂಗ ಸುನಾಮ ದ್ವಾದಶ 
ಧೃತ ಮುದ್ರಾಕ್ಷತಾಲಂಕೃತ
ಗಂಗಾನಂಗಪಿತಾಂಘ್ರಿ ಕಮಲಜ 
ಪಿತ ಪದ್ಮಾಕ್ಷಯಾಲಾಂಚಿತ ।
ಇಂಗಿತಜ್ಞ ಸುಸಾಧು ಸಂಗ 
ಸಹಿತ ಮುಕ್ತ್ಯಾಂಗನಾಲಂಗಿತ
ಅಸ್ಮದ್ ಸದ್ಗುರುವರ್ಯ ಏಯೋ 
ನಮಗೆ ನೀ ನಿತ್ಯ ಸನ್ಮಂಗಳ ।। ೪ ।।
ತಾಪತ್ರಯ ದೂರ ಪಾಪ ರಹಿತ 
ಕೋಪಾದಿ ಗುಣ ವರ್ಜಿತ
ಶಾಪಾನುಗ್ರಹಶಕ್ತ ಸುಜನ 
ಪ್ರೀತ ಸಂಸಾರಘನಮಾರುತ ।
ಗೋಪಾಲಾಖ್ಯದಾಸವರ್ಯ
ಕವಿತಾ ಗೂಢಾರ್ಥ ಸಂಬೋಧಿತ
ಅಸ್ಮದ್ ಸದ್ಗುರುವರ್ಯ ಏಯೋ 
ನಮಗೆ ನೀ ನಿತ್ಯ ಸನ್ಮಂಗಳ ।। ೫ ।।
ಆಧ್ಯಾತ್ಮ ಸುವಿಚಾರ ಶಾಸ್ತ್ರ 
ಸತತ ಶ್ರುತ್ಯರ್ಥ ಬಹು ಗರ್ಭಿತ
ಸತ್ಯಾವಲ್ಲಭ ಸತ್ಯದೇವ 
ಚರಿತ ವಕ್ತಾರ ಬುಧ ಸಮ್ಮತ ।
ನಾಡ್ಯಂತರ್ಗತ ಸರ್ವತೀರ್ಥ 
ಸ್ನಾತ ತನ್ಮೂರ್ತಿ ಪ್ರತ್ಯಕ್ಷಕ
ಅಸ್ಮದ್ ಸದ್ಗುರುವರ್ಯ ಏಯೋ 
ನಮಗೆ ನೀ ನಿತ್ಯ ಸನ್ಮಂಗಳ ।। ೬ ।।
ಧರ್ಮಾಚಾರ ವಿಚಾರ ಶೀಲ 
ನಿರತ ಷಟ್ಕರ್ಮ ಸಂಭೂಷಿತ
ನಿರ್ಮತ್ಸರ ಮೋಹ ದೇಹ 
ಮಮತ ಸುಶರ್ಮ ಕುಲರಾಜಿತ ।
ಭರ್ಮೋದರವಾತಜಾತಪೋತ 
ಜಾತಾರಿ ಖತಿವರ್ಜಿತ
ಅಸ್ಮದ್ ಸದ್ಗುರುವರ್ಯ ಏಯೋ 
ನಮಗೆ ನೀ ನಿತ್ಯ ಸನ್ಮಂಗಳ ।। ೭ ।।
***
ಶ್ರೀ ಶ್ಯಾಮಸುಂದರ - 16 "
" ಶ್ರೀ ಶ್ಯಾಮಸುಂದರದಾಸರ ಮತ್ತೊಬ್ಬ ಗುರುಗಳಾದ ಶ್ರೀ ಅಭಿಮನ್ಯುನ ಅವತಾರರಾದ ಶ್ರೀ ಅಸ್ಕಿಹಾಳ ಗೋವಿಂದದಾಸರು "
ರಾಗ : ಮೋಹನ ತಾಳ : ತ್ರಿವಿಡಿ
ನಿಂದೆ ಯಾಕೆ ಮಾಡುವೆ ।
ಮಂದ ಮಾನವನೇ । ಗೋ ।
ವಿಂದದಾಸಾರ್ಯರನ್ನ ।।
ಎಂದೆಂದಿಗೀಮಾತು ।
ಇಂದಿರೇಶನ ಭಕುತ ।
ವೃಂದ ಮೆಚ್ಚುವುದಿಲ್ಲವೋ 
ಮೂಢಾ ।। ಪಲ್ಲವಿ ।।
ಬಾಲಕತನದಾರಾಭ್ಯ ।
ಶೀಲ ಸದ್ಭಕ್ತಿಯಲಿ ।
ತಾಳ ತಂಬೂರಿ ಪಿಡಿದು ।
ಶ್ರೀಲೋಲ ಮಹಿಮೆಗಳ ।।
ಪೇಳುತಲಿ ಸತತ ।
ಗೋಪಾಲ ವೃತ್ತಿಯನು 
ಮಾಡಿ ।
ಕಾಲವನು ಕಳೆದವರ ।। ಚರಣ ।।
ಕುಸುಮಶರ ವಟ್ಟುಳಿಗೆ ।
ವಶವಾಗದಿರಿಯೆಂದು ।
ಉಸುರುತಲಿ ಶಿಷ್ಯ ಗಣಕೆ ।
ಅಸುರಾರಿ ಮಹಿಮೆಯನು ।।
ರಸವತ್ಕವಿತೆಯಲಿಂದ ।
ನಿಶಿ ಹಗಲು ವರ್ಣಿಸಿದ ।
ಅಸಿಗ್ಯಾಳು ನಿಲಯರನ ।। ಚರಣ ।।
ಆಶೆ ಕ್ರೋಧವ ತೊರೆದು ।
ಕ್ಲೇಶ ಶುಭ ಸಮ ತಿಳಿದು ।
ಲೇಸಾಗಿ ಗುರು ಸೇವೆಗೈದು ।
ವಾಸವಾನುಜನಾದ ।।
ಶ್ರೀ ಶ್ಯಾಮಸುಂದರನ ।
ವಾಸ ಸ್ಥಾನಕೆ । ತೆರಳಿ ।
ದ ಸುಗುಣರನು ವ್ಯರ್ಥ ।। ಚರಣ ।।
ಶ್ರೀ ಜಗನ್ನಾಥದಾಸರನ್ನೇ ನಿತ್ಯದಲ್ಲೂ ನಂಬಿದ್ದ ಶ್ರೀ ಗುಂಡಾಚಾರ್ಯರು ರಾಯಚೂರು ಜಿಲ್ಲೆಯ " ಅಸ್ಕಿಹಾಳ " ಯೆಂಬ ಗ್ರಾಮಕ್ಕೆ ಬಂದರು. 
ಅಲ್ಲಿ ಶ್ರೀ ಗೋವಿಂದದಾಸರೆಂಬ ಜ್ಞಾನಿಗಳಿದ್ದರು.
ಸಾತ್ವಿಕರಾದ ದೀನ ಜನರ ಉದ್ಧಾರಕಾಗಿ ತಮ್ಮ ಜೀವನವನ್ನೇ ಮೀಸಲಾಗಿಟ್ಟ ಧನ್ಯ ಜೀವಿಗಳು ಶ್ರೀ ಗೋವಿಂದದಾಸರು. 
ನೂರಾರು ಹರಿಜನರನ್ನು ಸನ್ಮಾರ್ಗ ಪ್ರವೃತ್ತರನ್ನಾಗಿ ಮಾಡಿ ಅವರಿಗೆ ವೈಷ್ಣವ ದೀಕ್ಷೆಯನ್ನು ನೀಡಿ ಸಾಧನೆಯ ಮಾರ್ಗವನ್ನು ತೋರಿಸಿಕೊಟ್ಟ ಮಹಾನ್ ಕ್ರಾಂತಿ ಪುರುಷರು ಶ್ರೀ ಗೋವಿಂದದಾಸರು!
ಶ್ರೀ ದಾಸರ ಬೇಟೆಗಾಗಿ ಶ್ರೀ ಗುಂಡಾಚಾರ್ಯರು ಅವರ ಮನೆಗೆ ಬಂದರು.
ಶ್ರೀ ದಾಸರು ಸ್ನಾನಕ್ಕಾಗಿ ಬಾವಿಗೆ ಹೋಗಿರುವುದಾಗಿ ತಿಳಿದು ತಾವೂ ಬಾವಿಯ ಕಡೆಗೆ ಹೋದರು. 
ತಮ್ಮ ಕಡೆಗೆ ಬರುತ್ತಿದ್ದ ಶ್ರೀ ಗುಂಡಾಚಾರ್ಯರನ್ನು ಕಂಡು ಶ್ರೀ ದಾಸರು ಕೋಪಗೊಂಡವರಂತೆ ಚಿಕ್ಕ ಕಲ್ಲನ್ನು ತೆಗೆದುಕೊಂಡು ಶ್ರೀ ಆಚಾರ್ಯರ ಮೇಲೆ ಎಸೆದರು. 
ಅದು ಅವರ ತಲೆಗೆ ಬಡೆದು ಗಾಯವಾಗಿ ರಕ್ತ ಸುರಿಯಿತು.
ಶ್ರೀ ಗೋವಿಂದದಾಸರು ಮಮತೆಯಿಂದ ರಕ್ತವನ್ನು ಒರೆಸಿ ಶ್ರೀ ಆಚಾರ್ಯರ ಬೆನ್ನನ್ನು ಸವರಿದರು. 
ಶ್ರೀ ಗುಂಡಾಚಾರ್ಯರ ತಲೆಯಿಂದ ರಕ್ತದೊಟ್ಟಿಗೆ ಉಳಿದ ಅಲ್ಪಸ್ವಲ್ಪ ಅಜ್ಞಾನವೂ ಹೊರಟು ಹೋಯಿತು. 
ಶ್ರೀ ದಾಸರ ಅನುಗ್ರಹವೂ ಆಯಿತು. 
ಜ್ಞಾನಿಗಳ ಕೋಪ ತಾಪಗಳು ಸಹ ಜನರ ಉದ್ಧಾರಕ್ಕೆ ಕಾರಣವಾಗುತ್ತದೆ.
ವಿಶ್ವಾಮಿತ್ರನ ಕೋಪ ಹರಿಶ್ಚಂದ್ರನಿಗೆ ಶಾಶ್ವತವಾದ ಕೀರ್ತಿಯನ್ನು ತಂದು ಕೊಟ್ಟಿತು. 
ಕೊನೆಗೆ ಎಲ್ಲಾ ದೇವತೆಗಳ ಅನುಗ್ರಹವೂ ಅಭ್ಯವಾಯಿತು. 
ಇಂದು ಸತ್ಯಕ್ಕೆ ಹರಿಶ್ಚಂದ್ರನು ಉದಾಹರಣೆಯಾಗಿದ್ದಾನೆ.
ಶ್ರೀ ಗೋವಿಂದದಾಸರ ನಾಟಕೀಯ ಕೋಪವು ಶ್ರೀ ಗುಂಡಾಚಾರ್ಯರ ಅಪೂರ್ವ ಜ್ಞಾನದ ಉದಯಕ್ಕೆ ಕಾರಣವಾಯಿತು. 
ಅಂದಿನಿಂದ ಶ್ರೀ ಗುಂಡಾಚಾರ್ಯರ ಸರ್ವ ಕಾರ್ಯ ಕಲಾಪಗಳು ಭಗವಂತನಿಗೆ ಮೀಸಲಾಯಿತು. 
ಅವರು ತಮ್ಮ ಎಲ್ಲಾ ಲೌಕಿಕಾಲೌಕಿಕ ವ್ಯಾಪಾರವನ್ನು ಸಹಾ ಶ್ರೀ ಹರಿವಾಯುಗಳಿಗೆ ಅರ್ಪಿಸಿ ನಿರ್ಲಿಪ್ತರಾದರು.
" ಆನಂದಾನುಭವ "
ಶ್ರೀ ಶ್ಯಾಮಸುಂದರದಾಸರುಪ್ರತಿನಿತ್ಯ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಮುಸುಗಿಟ್ಟುಕೊಂಡು ಒಂದೆರಡು ಘಂಟೆಗಳ ಕಾಲ ಕುಳಿತು ಬಿಡುತ್ತಿದ್ದರು. 
ಯಾರಿಗೂ ತೋರಗೊಡದೆ ಮಾನಸಿಕವಾಗಿ ಭಗವಂತನಿಗೆ ತಮ್ಮ ಪೂಜಾದಿಗಳನ್ನು ಸಲ್ಲಿಸಿ ಬಿಡುತ್ತಿದ್ದರು.
ಶ್ರೀ ಶ್ಯಾಮಸುಂದರದಾಸರಿಗೆ " ಹರಿಕಥಾಮೃತಸಾರ " ವೆಂದರೆ ಎಲ್ಲಿಲ್ಲದ ಅಭಿಮಾನ ಮತ್ತು ಪ್ರಾಣ. 
ಶ್ರುತಿ - ಸ್ಮೃತಿ - ಪುರಾಣ ತತ್ತ್ವ ರಹಸ್ಯಗಳನ್ನು ತನ್ನಲ್ಲಡಿಗಿಸಿಕೊಂಡ ಈ ದಾಸ ಸಾಹಿತ್ಯದ ಮೇರು ಕೃತಿಯನ್ನು ನಿತ್ಯ ನಿರಂತರವಾಗಿ ಮನನ ಮಾಡುತ್ತಿದ್ದರು. 
ಜಿಜ್ಞಾಸುಗಳಾಗಿ ಬಂದ ಆಪ್ತರಿಗೆ ತತ್ತ್ವ ರಹಸ್ಯಗಳನ್ನು ತಿಳಿಯ ಹೇಳುತ್ತಿದ್ದರು. 
ಕೆಲವೊಮ್ಮೆ ತಮಗಾದ ಆನಂದದ ಅನುಭವವನ್ನು ಕೃತಿಗಳ ರೂಪದಲ್ಲಿ ಹೇಳುತ್ತಿದ್ದರು. 
ಶಿಷ್ಯರು ಯಾರಾದರೂ ಈ ಹಾಡನ್ನು ಬರೆದಿಡುತ್ತಿದ್ದರು.
ಉದಾಹರಣೆಗಾಗಿ....
ರಾಗ : ಆರಭಿ  ತಾಳ ಅಟ್ಟ 
ಹರಿಕಥಾಮೃತಸಾರ ಸರಸ 
ಸುಗ್ರಂಥವ ।
ಧರಣಿ ಸುರರಿಗಲ್ಲದೆ 
ದುರಳಸಾಷಂಡಿಗಳರಿತು 
ಇದರ ಮರ್ಮ ।
ಹರುಷಿತರಾಗುವರೇ  ।। ಪಲ್ಲವಿ ।\
ಹಿಮ ಮಯೂಖನ 
ನೋಡಿ ಕುಮುದ ।
ಅರಳುವುದೇ? ।।
ಯಮಿಜನರಂದದಿ 
ದಿನಮಣಿಯು ದಯದಿ ।
ತಿಮಿರರ್ಘ್ಯ ಕೊಡ 
ಬಲ್ಲದೆ? ।। ಚರಣ ।।
ಚಿನ್ನದಾ ಭರಣಗಳಿಡಲು 
ದಾಸಿಯು ದೇವ ।
ಕನ್ನಿಕೆಯಾಗುವಳೇ ? ।
ಮನ್ನಣೆಯರಿಯದ 
ಮನುಜರ ಶಿರ 
।ಪುಣ್ಯ ಪುರುಷ-
ರಿಗೆರಗುವದೇ ? ।। ಚರಣ ।।
ಗಂಧವಾಹನ ಮತ 
ಪೊಂದದವರಿಗೆ ।
ಯಮ ಬಂಧ 
ತಪ್ಪುವುದೇ? ।
ಮಂದಮತಿಗೆ ಶ್ಯಾಮ-
ಸುಂದರವಿಠಲನ ।
ಮಂದಿರ ದೊರಕುವುದೇ ? ।। ಚರಣ ।।
" ಆತ್ಮ ಪ್ರಬೋಧಕ ಪತ್ರಗಳು ( ಕಾಗದಗಳು ) "
ಶ್ರೀ ಶ್ಯಾಮಸುಂದರ ದಾಸರಿಗೆ ಮತ್ತೊಂದು ಉತ್ತಮ ಅಭ್ಯಾಸವಿತ್ತು.
ಅವರು ತಮ್ಮ ಆಪ್ತರಿಗೆ ಆಗಾಗ್ಗೆ ಕಾಗದಗಳನ್ನು ಬರೆಯುತ್ತಿದ್ದರು. ಆ ಕಾಗದಗಳು ಸಾಮಾನ್ಯ ಕಾಗದಳಾಗಿರದೇ " ಅಧ್ಯಾತ್ಮಿಕ ಪ್ರಭೋಧಕ " ಗಳಾಗಿರುತ್ತಿದ್ದವು. 
ಪ್ರತಿ ಕಾಗದದಲ್ಲೂ ಯಾವುದೋ ಒಂದು ವೇದಾಂತದ ವಿಷಯವನ್ನು ಕೂಲಂಕುಷವಾಗಿ ಚರ್ಚಿಸುತ್ತಿದ್ದರು. 
ಈ ರೀತಿಯಲ್ಲಿ ಕಾಗದ ಬರೆಯುವುದು ಅನಾದಿಯಿಂದ ಸಿದ್ಧವಾದುದು.
ಶ್ರೀ ಶ್ಯಾಮಸುಂದರದಾಸರು ಬರೆದ ಅನೇಕ ಪತ್ರಗಳು ಇಂದಿಗೂ ಲಭ್ಯವಿದೆ. 
ಆದರೆ ಶ್ರೀ ಶ್ಯಾಮಸುಂದರದಾಸರು ಈ ಯಾವುದನ್ನೂ ಜನರ ಮನಸ್ಸನ್ನು ಮೆಚ್ಚಿಸುವುದಕ್ಕಾಗಲೀ ಮಾಡುತ್ತಿರಲಿಲ್ಲ. 
ಎಲ್ಲವನ್ನೂ ಶ್ರೀ ಹರಿಯ ಪ್ರೀತಿಗಾಗಿ ಮಾಡಿದ ಪುಣ್ಯಾತ್ಮರು!!!
ಕರ್ನಾಟಕದ ಹರಿದಾಸರೆಲ್ಲರೂ ಸದಾಚಾರದಲ್ಲೇ ಜೀವನವನ್ನು ಸಾಗಿಸಿರುವರು. 
ತಾವು ಉದ್ಧೃತರಾಗುವುದರೊಂದಿಗೆ ಅಕ್ಕಪಕ್ಕದ ಜನರನ್ನೂ ಉದ್ಧರಿಸಬೇಕೆಂಬ ಕಳಕಳಿ ಈ ಹರಿದಾಸರದ್ದು. 
ಇದಕ್ಕಾಗಿಯೇ ಹರಿದಾಸರು " ಯಾಯಿವಾರ " ಮಾಡುತ್ತಿದ್ದರು. 
ಅರುಣೋದಯಕ್ಕೆ ಎದ್ದು ಕಾಲಿಗೆ ಗೆಜ್ಜೆಕಟ್ಟಿ, ಕೈಯಲ್ಲಿ ತಂಬೂರಿ ಮೀಟುತ್ತಾ ಹರಿನಾಮ ಸಂಕೀರ್ತನೆಯನ್ನು ಮಾಡುತ್ತಾ ಬೀದಿ ಬೀದಿಗಳಲ್ಲಿ ಅಲೆಯುತ್ತಿದ್ದರು.
ಜೀವನದ ಗುರಿಯನ್ನರಿಯದೇ ಸಂಸಾರದಲ್ಲಿ ಮುಳುಗಿದ್ದ ಜನರ ಕಿವಿಗೆ ಹರಿ ನಾಮವನ್ನು ಕೇಳಿಸಿ; ಧರ್ಮದ ಸಂದೇಶವನ್ನು ನೀಡಿ; ಅವರ ಮನಸ್ಸನ್ನು ಜಾಗೃತಗೊಳಿಸುತ್ತಿದ್ದರು. 
ದಲಿತ ಜನಾಂಗದ ಉದ್ಧಾರಕ್ಕಾಗಿ ಶ್ರಮಿಸಿದರು. 
ಶ್ರೀ ಶ್ಯಾಮಸುಂದರದಾಸರು ಕೂಡಾ ಈ ವಿಷಯದಲ್ಲಿ ತಮ್ಮ ಅಳಿಲು ಸೇವೆಯನ್ನು ಸಮಾಜಕ್ಕೆ ಸಲ್ಲಿಸಿರುವರು!!!
ರಾಗ : ಕಾಪಿ   ತಾಳ : ತ್ರಿತಾಳ 
ರಾಘವೇಂದ್ರ ಗುರುರಾಯ ।
ಶುಭಕಾಯ ಕವಿಗೇಯ 
ಪಿಡಿಕೈಯ್ಯ ।। ಪಲ್ಲವಿ ।।
ಪ್ರಥಮ ಯುಗದಿ ಶ್ರೀಪತಿಯ
ಸ್ತಂಭದೊಳು ।
ಪಿತನಿಗೆ ತ್ವರ ತೋರಿಸದ ।
ಪ್ರಹ್ಲಾದ ಶ್ರೀಪಾದ 
ಕೊಡು ಮೋದ ।। ಚರಣ ।।
ತುಂಗಭದ್ರ ಸುತರಂಗಿಣಿ 
ತೀರದಿ ।
ಕಂಗೊಳಿಸುವ 
ಯತಿನಾಥ ।
ದ್ವಿಜವ್ರಾತ ನುತದಾತ ಪ್ರ
ಖ್ಯಾತ ।। ಚರಣ ।।
ಕಾಮಧೇನು ಸುಮ
ಕಾಮಿತದಾಯಕ ।
ಶ್ಯಾಮಸುಂದರನದಾಸ ।
ಅಘ ನಾಶ ನತ 
ಪೋಷ ಮುನಿ ವ್ಯಾಸ ।। ಚರಣ ।। 
" ವಿಶೇಷ ವಿಚಾರ "
ಕ್ರಿ ಶ 2009 ರಲ್ಲಿ ಜರ್ಮನಿಯ ಶ್ರೀ ಫಿಲಿಪ್ಸ್ ಎಂಬುವರು ಸಂಶೋಧನೆಗಾಗಿ ಬೆಂಗಳೂರಿಗೆ ಬಂದಿದ್ದರು. 
ಅವರು ಜರ್ಮನಿ ಪ್ರಜೆಯಾದರೂ ವೇದ ಸಾಹಿತ್ಯ ಮತ್ತು ಹರಿದಾಸ ಸಾಹಿತ್ಯದಲ್ಲಿ ಬಹಳಷ್ಟು ಜ್ಞಾನವನ್ನು ಸಂಪಾದಿಸಿದ್ದವರು. 
ಅಲ್ಲದೇ ಅವರಿಗೆ ತಮ್ಮ ಭಾಷೆಯ ಜೊತೆಯಲ್ಲಿ ಕನ್ನಡ, ತೆಲುಗು ಮತ್ತು ಸಂಸ್ಕೃತದಲ್ಲಿ ಜ್ಞಾನ ಹೊಂದಿದವರು. 
ನನಗೆ ಅವರು ಜಯನಗರದ ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಬೇಟಿಯಾಗಿತ್ತು ಮತ್ತು ಅವರು ನನ್ನ ಪ್ರೀತಿಯ ಮಿತ್ರರೂ, ದಾಸ ಸಾಹಿತ್ಯದ ಮಾರ್ಗದರ್ಶಕರೂ ಆದ ಶ್ರೀ ರಾಜಾ ಎಸ್  ರಾಜಗೋಪಾಲಚಾರ್ಯರು - ಶ್ರೀ ಶ್ರೀಗಳವರ ಆಪ್ತಕಾರ್ಯದರ್ಶಿಗಳು ಅವರ ಆದೇಶದ ಮೇರೆಗೆ ಶ್ರೀ ಮಠದಲ್ಲಿ ಸುಮಾರು 15 ದಿನಗಳು ಇದ್ದರು. 
ಆಗ ನನ್ನ ಜೊತೆ ಅವರು ಮಾತಾಡುವ ಸಂದರ್ಭದಲ್ಲಿ ಶ್ರೀ ಶ್ಯಾಮಸುಂದರದಾಸರ ಬಗ್ಗೆ ಕೊಟ್ಟ ಹೇಳಿಕೆ ಪರಮ ಅದ್ಭುತವಾಗಿದೆ.
" ಶ್ರೀ ಶ್ಯಾಮ ಸುಂದರ ದಾಸರ ಕೃತಿಗಳನ್ನು ನೋಡಿದಾಗ 18ನೇ ಶತಮಾನದಲ್ಲಿ ಇದ್ದ ಶ್ರೀ ಜಗನ್ನಾಥದಾಸರ ಕೀರ್ತನೆಗಳು ಜ್ಞಾಪಕಕ್ಕೆ ಬರುತ್ತವೆ. 
ಕಾರಣ ಅವರು ಮಾಡಿದ ಪದ ಪ್ರಯೋಗ ಮತ್ತು ಲಾಲಿತ್ಯದಿಂದ ಕೂಡಿವೆ "
ಎಂದು ಅವರು ಹೇಳಿದಾಗ ಆಶ್ಚರ್ಯ ಮತ್ತು ಆನಂದ ಎರಡೂ ಆಯಿತು.
ಅಂದರೆ ಶ್ರೀ ಹರಿದಾಸ ಸಾಹಿತ್ಯವು ಇಡೀ ಪ್ರಪಂಚದ ಜನರೇ ಇಷ್ಟ ಪಡುವಂಥಾ ಸಾಹಿತ್ಯ.
ಇದುವೇ ಶ್ರೀ ಶ್ಯಾಮಸುಂದರ ದಾಸರ  ಸಾಹಿತ್ಯದ ಹಿರಿಮೆ!!
***
" ಶ್ರೀ ಶ್ಯಾಮಸುಂದರ - 17 "
" ಶ್ರೀ ಶ್ಯಾಮಸುಂದರದಾಸರ ನುಡಿಮುತ್ತುಗಳಲ್ಲಿ ಶ್ರೀ ರಾಘವೇಂದ್ರತೀರ್ಥರು "
ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ " ಬಲ್ಲಟಗಿ " ಗ್ರಾಮವು ಶ್ರೀ ಶ್ಯಾಮಸುಂದರದಾಸರ ಜನ್ಮಸ್ಥಳ. 
ಇವರು ಶ್ರೀ ಮಾನವಿ ಮುನಿಪುಂಗವರಾದ ಶ್ರೀ ಸಹ್ಲಾದಾಂಶ ಜಗನ್ನಾಥದಾಸರ ಮತ್ತು ಶ್ರೀ ಪ್ರಹ್ಲಾದಾಂಶ ಶ್ರೀ ರಾಘವೇಂದ್ರತೀರ್ಥರ ಅಂತರಂಗ ಭಕ್ತರೂ ಹಾಗೂ ಅವರ ಪೂರ್ಣಾನುಗ್ರಹಕ್ಕೆ ಪಾತ್ರರಾದವರು.
ಶ್ರೀ ಶ್ಯಾಮಸುಂದರದಾಸರ ಕೃತಿಗಳು ಭಕ್ತಿಭಾವದಿಂದ ತುಂಬಿ ತುಳುಕುತ್ತಿರುವ ಇವರ ರಚನಾ ಶೈಲಿ ಶ್ರೀ ದಾಸರ ಹೆಸರಿಗೆ ತಕ್ಕಂತೆ ಸುಂದರವಾದ ಪದ ಸಮುಚ್ಛಯಗಳಿಂದ ಕೂಡಿ ಅರ್ಥಗರ್ಭಿತವಾಗಿವೆ.
ಶ್ಲೇಷಾರ್ಥಗಳನ್ನು ಒಳಗೊಂಡ ಅನೇಕ ಪದ ಪ್ರಯೋಗಗಳಿಂದ ಕೂಡಿದ ಇವರ ಪದಗಳನ್ನು ಅರ್ಥಾನುವಾದ ಮಾಡಲು ಶಾಸ್ತ್ರ ಮತ್ತು ಪುರಾಣ ಜ್ಞಾನವು ಅತ್ಯವಶ್ಯಕವಾಗಿದೆ.
ಈ ಮೊದಲೇ ಹೇಳಿದಂತೆ ಶ್ರೀ ಶ್ಯಾಮಸುಂದರದಾಸರಿಗೆ ಶ್ರೀ ರಾಯರನ್ನು ಕಂಡರೆ ಅತ್ಯಂತ ಪ್ರೀತಿ. ಶ್ರೀ ರಾಯರ ಮೂಲ ಬೃಂದಾವನದ ಮುಂದೆ ನಿಂತರೆ ಸಾಕು ಶ್ರೀ ಶ್ಯಾಮಸುಂದರದಾಸರ ವದನಾರವಿಂದದಲ್ಲಿ ಶ್ರೀ ರಾಯರ ಅಗಣಿತ, ಅತಿಶಯವಾದ ಮಹಿಮೆಗಳು ಗಂಗಾ ಪ್ರವಾಹದಂತೆ ಹರಿಯುತ್ತದೆ.
ರಾಗ : ದುರ್ಗಾ ತಾಳ : ಆದಿ
ಎಂಥ ದಯವಂತನೋ 
ಮಂತ್ರಮುನಿ ನಾಥನೋ ।
ಸಂತತದಿ ತನ್ನನು 
ಚಿಂತಿಪರಿಗೆ ಸುರಧೇನು ।। ಪಲ್ಲವಿ ।।
ವರ ಪ್ರಹ್ಲಾದನೂ 
ಮರಳಿ ಬಾಹ್ಲೀಕನೋ ।
ಗುರು ವ್ಯಾಸರಾಯನೋ 
ಪರಿಮಳಾಚಾರ್ಯನೋ ।। ಚರಣ ।।
ಇರುವ ತುಂಗಾ ತಟದಲ್ಲಿ 
ಬರುವ ತಾನು ಕರೆದಲ್ಲಿ ।
ಕರವ ಪಿಡಿದು ಪೊರೆವಲ್ಲಿ 
ಸರಿಗಾಣೆ ಧರೆಯಲ್ಲಿ ।। ಚರಣ ।।
ಮರುತಾವೇಶಯುಕ್ತನು 
ದುರಿತ ಕಳೆವ ಶಕ್ತನು ।
ತರಣಿ ನಿಭಗಾತ್ರನು 
ಪರಮ ಸುಚರಿತ್ರನು ।। ಚರಣ ।।
ಶಿಶುವಿಗಸುವಗರೆದನು 
ವಸುಧಿ ಸುರರ ಪೊರೆದನು ।
ಅಸಮ ಮಹಾ ಮಹಿಮನೋ
ಸುಶೀಲೇಂದ್ರ ವರದನೋ ।। ಚರಣ ।।
ಭೂಮಿಯೊಳು ಖ್ಯಾತನು 
ಶ್ಯಾಮಸುಂದರ ಪ್ರೀತನು ।
ಕಾಮಿತಾರ್ಥದಾತನು 
ಸ್ವಾಮಿ ನಮಗೆ ಈತನು ।। ಚರಣ ।।
" ಪ್ರಮಾಣ "
ಶ್ರೀ ನೃಸಿಂಹ ಪುರಾಣ....
ಶಂಖುಕರ್ಣಾಖ್ಯ ದೇವಸ್ತು 
ಬ್ರಹ್ಮ ಶಾಪಾಶ್ಚ ಭೋತಲೇ ।
ಪ್ರಹ್ಲಾದ ಇತಿ ವಿಖ್ಯಾತೋ
ಭೂಭಾರ ಕ್ಷಪಣೇ ರತಃ ।।
ಸ ಏವ ರಾಘವೇಂದ್ರಾಖ್ಯ 
ಯತಿ ರೂಪೇಣ ಸರ್ವದಾ ।
ಕಲೌಯುಗೇ ರಾಮಸೇವಾಂ 
ಕುರ್ವನ್ ಮಂತ್ರಾಲಯೇ ಭವೇತ್ ।।
ಪ್ರಹ್ಲಾದೋ ಜನ್ಮ ವೈಷ್ಣವಃ ।।
ಶ್ರೀ ಬ್ರಹ್ಮಾಂಡಪುರಾಣದಲ್ಲಿ...
ಪ್ರಹ್ಲಾದೋಪಿ ಮಹಾಭಾಗಃ 
ಕರ್ಮದೇವ ಸಮಃ ಸ್ಮೃತಃ ।
ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।।
" ಶ್ರೀಮದ್ಭಾಗವತ ಮಹಾ ಪುರಾಣ "
ವಾಸುದೇವೇ ಭಗವತಿ 
ಯಸ್ಯ ನೈಸರ್ಗಿಕೀರತಿಃ ।
ಬ್ರಹ್ಮಣ್ಯಃ ಶೀಲ ಸಂಪನ್ನಃ 
ಸತ್ಯಸಂಧೋ ಜಿತೇಂದ್ರಿಯಃ ।
ಪ್ರಶಾಂತಕಾಮೋ
 ರಹಿತಾಸುರೋಸುರಃ ।।
ಮಹದರ್ಭಕಃ ಮಹದುಪಾಸಕಃ 
ನಿರ್ವೈರಾಯ ಪ್ರಿಯ ಸುಹೃತ್ತಮಃ ।
" ಶ್ರೀ ಗರುಡಪುರಾಣದ ಬ್ರಹ್ಮಕಾಂಡ " ದಲ್ಲಿ.....
ಮಾನಸ್ತಂಭ ವಿವರ್ಜಿತಃ 
ಯಥಾ ಭಗವತೀಶ್ವರೇ ।।
ಪ್ರಕೃಷ್ಟಾಹ್ಲಾದ ಯುಕ್ತತ್ವಾತ್
ನಾರದಸ್ಯೋಪದೇಶತಃ ।
ಅತಃ ಪ್ರಹ್ಲಾದ ನಾಮಾಸೌ 
ಪೃಥುವ್ಯಾಂ ಖಗಸತ್ತಮಃ ।।
" ಸೂತ್ರ ಭಾಷ್ಯ " ದಲ್ಲಿ....
ದೇವಾಃ ಶಾಪ ಬಲದೇವ 
ಪ್ರಹ್ಲಾದಾದಿತ್ವಮಾಗತಾಃ ।
ದೇವಾಃ ಶಾಪಾಭಿಭೂತತ್ವಾತ್ 
ಪ್ರಹ್ಲಾದಾದ್ಯ ಬಭೂವಿರೇ ।।
" ಯಜುರ್ವೇದ ಬ್ರಾಹ್ಮಣ 5ನೇ ಖಂಡ "
ಪ್ರಹ್ಲಾದೋ ವೈ ಕಯಾಧವಃ 
ವಿರೋಚನಂ ಸ್ವಪುತ್ರಂ ಅಪನ್ಯಧತ್ತ ।।
" ಶ್ರೀ ಸ್ಕಂದ ಪುರಾಣ " ದಲ್ಲಿ..
ಋತೇತು ತಾತ್ವಿರ್ಕಾ 
ದೇವನ್ನಾರದಾದೀನಥೈವ ಚ ।
ಪ್ರಹ್ಲಾದಾದುತ್ತಮಃ ಕೋನು 
ವಿಷ್ಣು ಭಕ್ತೌ ಜಗತ್ತ್ರಯೇ ।।
" ಶ್ರೀ ಪ್ರಹ್ಲಾದರಾಜರಿಗೆ ಜಗನ್ನಾಥನಾದ ಶ್ರೀ ನೃಸಿಂಹನ ಪರಮಾದ್ಭುತ ವಚನ "
ಶ್ರೀ ಮದ್ಭಾಗವತ ಮಹಾ ಪುರಾಣದಲ್ಲಿ....
ವತ್ಸ! ಯದ್ಯದಭೀಷ್ಟಂತೇ 
ತತ್ತದಸ್ತು ಸುಖೀಭವ ।
ಭವಂತಿ ಪುರುಷಾ ಲೋಕೇ 
ಮದ್ಭಾಕ್ತಾಸ್ತ್ವಾಮನುವ್ರತಾಃ ।
ತ್ವಂ ಚ ಮಾಂ ಚ ಸ್ಮರೇಕಾಲೇ 
ಕರ್ಮಬಂಧಾತ್ಪ್ರಮುಚ್ಯತೇ ।।
" ಶ್ರೀ ಪ್ರಹ್ಲಾದರೇ ಬಾಹ್ಲೀಕರಾಜರು " ....
ಶ್ರೀಮದಾಚಾರ್ಯರು - ಮ ಭಾ ತಾ ನಿ - 11/8.......
ಬಾಹ್ಲೀಕೋರಾಜ ಸತ್ತಮಃ 
ಹಿರಣ್ಯಕಶಿಪೋ ಪುತ್ರಃ ।
ಪ್ರಹ್ಲಾದಃ ಭಗವತ್ಪ್ರಿಯಃ 
ವಾಯೂನಾ ಚ ಸಮಾವಿಷ್ಟಃ ।।
" ಶ್ರೀ ಪ್ರಹ್ಲಾದರೇ ಶ್ರೀ ವ್ಯಾಸರಾಜರು ".....
ಶ್ರೀಪುರಂದರದಾಸರು....
ಶೇಷಾವೇಶ ಪ್ರಹ್ಲಾದನವತಾರ ವೆನಿಸಿದೆ । ವ್ಯಾಸರಾಯನೆಂಬೋ ಪೆಸರು ನಿನಗಂದಂತೆ । ದೇಶಾಧಿಪಗೆ ಬಂದ ಕುಹೂ ಯೋಗವನು ನೂಕಿ । ನೀ ಸಿಂಹಾಸನವೇರಿ ಮೆರೆದೆ ಜಗವರಿಯೇ । ವ್ಯಾಸಾಬ್ಧಿಯನು ಬಿಗಿಸಿ ಕಾಶಿ ದೇಶದೊಳೆಲ್ಲ । ಭಾಸುರ ಕೀರ್ತಿಯನು ಪಡೆದೆ ನೀ ಗುರುರಾಯ । ವಾಸುದೇವ ಪುರಂದರ ವಿಠ್ಠಲನ್ನ ದಾಸರೊಳು । ಲೇಶ ನಿನ್ನಂತೆ ವೆಗ್ಗಳರ ಕಾಣೆನು ನಾನು ।।
ಶ್ರೀ ಕನಕದಾಸರು....
ವ್ಯಾಸರಾಯರಿಗೆ ಮೂರು ಜನ್ಮ । ( ಶ್ರೀ ಪ್ರಹ್ಲಾದ - ಶ್ರೀ ಬಾಹ್ಲೀಕ - ಶ್ರೀ ವ್ಯಾಸರಾಜರು ), ದಾಸರಿಗೆ ಎರಡು ಜನ್ಮ । ( ಮಹಾಭಾರತದಲ್ಲಿನ ಶ್ರೀ ವಿದುರ ಮತ್ತು ಶ್ರೀ ಕನಕದಾಸರು ), ಶ್ರೀ ವ್ಯಾಸರಾಯರೇ ರಾಘವೇಂದ್ರರಾಯರು ( ಶ್ರೀ ವ್ಯಾಸರಾಜರ ಮುಂದಿನ ಅವತಾರವೇ ಶ್ರೀರಾಯರು ), ರಾಮಚಂದ್ರನ ಆಶ್ರಿತ ಜನ ಕೋಟಿಯೊಳಗೆ । ಉತ್ಕ್ರುಷ್ಠರಾದವರು । ನಾರದರ ಅಂಶವೇ ಪುರಂದರ ದಾಸರು । ತಮ್ಮ ಕೂಸಾದ ಭೃಗು ಮುನಿಯಲ್ಲಿ । ತಾವು ಒಂದು ಅಂಶದಿ ನಿಂದು ವಿಜಯದಾಸರೆಂದು ಪೆಸರು ಪಡೆವ । ನಾ ಯಮನು ಮುಂದೆ ಮಾಂಡವ್ಯ ಶಾಪದಿಂದ ಎರಡು ಜನ್ಮ ಶೂದ್ರ ಯೋನಿಯಲ್ಲಿ ಪೊಕ್ಕೆನಲು । ಒಂದು ಜನುಮ ವಿದುರನಾಗಿ ಕುರುಬ ಕುಲದಲ್ಲೀಗ ಪುಟ್ಟಿದೆ । ಎನಗೆ ಈ ಜನ್ಮದಲ್ಲಿ ಮುಕುತಿ ಎಂತೆಂಬೆ । ವರದಪ್ಪನೇ ಸೋಮ । ಗುರುರಾಯ ದಿನಕರನು । ಅಭಿನವ ಬೃಹಸ್ಪತಿ । ಮಧ್ವಪತಿ ಭೃಗು ಅಂಶದಿ ಮೆರೆವ । ಮಹಾ ಮಹಿಮೆ ಪೊಗಳುವೆನು । ಭಾಗವತರೊಳು ಯೋಗೀಂದ್ರ ಕೃಷ್ಣನ್ನ । ಬಾಗಿ ನಮಿಸುವ ದಾಸ ಜನರ ಪೋಷಕ ಕಾಗಿನೆಲೆಯಾದಿ ಕೇಶವರಾಯ । ದಾಸೋತ್ತಮರ ಗುಣವನ್ನು ಕನಕದಾಸ ಪೇಳಿದನು ।।
ಶ್ರೀ ವಿಜಯೀ೦ದ್ರತೀರ್ಥರು ಶ್ರೀ ವ್ಯಾಸರಾಜ ಸ್ತೋತ್ರದಲ್ಲಿ....
ಪ್ರಹ್ಲಾದಸ್ಯಾವತಾರೋ 
ಸಾವೀಂದ್ರಸ್ಯಾನುಪ್ರವೇಶನಾತ್ ।
ತೇನೆ ಸತ್ಸೇವಿನಾಂ ನೃಣಾಂ 
ಸರ್ವಮೇತದ್ಭವೇ ಧ್ರುವಮ್ ।।
ಶ್ರೀ ವಿಜಯರಾಯರು....
ವೃಕೋದರನಿಂದ ನೊಂದು ದೇಹವನು ಬಿಡುವಾಗ । ಬಾ । ಹ್ಲೀಕ ರಾಯನಾಗಿ ಹುಟ್ಟಿದ್ದ ಪ್ರಹ್ಲಾದ । ತಾ । ನುಕುತಿಯಲಿ ಪೊಗಳಿ ವರವ ಬೇಡಿದನು ವೈದಿಕ ಮಾರ್ಗವನೇ ಪಿಡಿದು ।। ಉಕಿತಿಯನು ಸಾಧಿಸುತ ಕಲಿಯೊಳಗೆ ನಿಮ್ಮ । ಪೂ । ಜಕನಾಗಿ ಬಾಳುವೆನು ಎಂದು ತಲೆವಾಗಿದನು । ಭಕುತಿಗೆ ಮೆಚ್ಚಿ ಕೈಸಲೆ ಎಂದ ಮಾತಿಂದು ಪ್ರಕಟವಾಯಿತು ಧರೆಯೊಳು ।।
" ಶ್ರೀ ಪ್ರಹ್ಲಾದರೇ ಶ್ರೀ ರಾಘವೇಂದ್ರತೀರ್ಥರು " ಶ್ರೀ ಗೋಪಾಲದಾಸರು...
ಶೇಷಾಂಶ ಪ್ರಹ್ಲಾದ ವ್ಯಾಸ 
ಮುನಿಯೇ ರಾಘವೇಂದ್ರ ।
ಈಸುಬಗೆ ಪುಣ್ಯ ಇವರಿಗೆ 
ಕೇಶವನೆ ತಾ ಮಾಡಿಸಿ ।।
ಪ್ರಥಮ ಪ್ರಹ್ಲಾದ 
ವ್ಯಾಸ ಮುನಿಯೇ ।
ಯತಿ ರಾಘವೇಂದ್ರ ।।
ಶ್ರೀ ಪ್ರಾಣೇಶದಾಸರು...
ರಾಯರ ನೋಡಿರಿ ಗುರು 
ರಾಯರ ಪಾಡಿರೈ ।
ಸಿರಿ ಪ್ರಹ್ಲಾದ ವರ ಬಾಹ್ಲೀಕ 
ಗುರು ವ್ಯಾಸ ರಾಘವೇಂದ್ರ ।।
ಶ್ರೀ ಶ್ರೀಕರವಿಠಲರು...
ಸಹ್ಲಾದಣ್ಣನಣ್ಣ ಬಾರೋ । 
ಪ್ರಹ್ಲಾದರಾಜಾ ।
ಬಾಹ್ಲೀಕ ವ್ಯಾಸನಾಗಿ 
ಉಹ್ಲಾಸದಿಂದ ಬಾರೋ ।।
ರಾಜ ಬಾರೋ ಗುರು-
ರಾಜ ಬಾರೋ ।
ರಾಜಾಧಿರಾಜ ಗುರು-
ರಾಜ ಬಾರೋ ।।
" ಶ್ರೀ ವಾಯುದೇವರ ನಿತ್ಯಾವೇಶಯುಕ್ತರು ಶ್ರೀ ರಾಘವೇಂದ್ರತೀರ್ಥರು "" 
" ಬ್ರಹ್ಮಕಾಂಡ " ....
ವಾಯೂನಾ ಚ ಸಮಾವಿಷ್ಟಂ 
ಹರೇಃ ಪಾದಾಬ್ಜ ಸಂಶಯಂ ।
ಶ್ರೀಮದಾಚಾರ್ಯರು....
ವಾಯೂನಾ ಚ ಸಮಾವಿಷ್ಟಃ 
ಮಹಾಬಲ ಸಮನ್ವಿತಃ ।
ಪ್ರಹ್ಲಾದಾದುತ್ತಮಃ ಕೋನು 
ವಿಷ್ಣು ಭಕ್ತೌ ಜಗತ್ತ್ರಯೇ ।।
ಕೃಷ್ಣಗ್ರಹಗ್ರಹೀತಾತ್ಮ....... ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।।
ವಾಯೂನಾ ಚ ಸಮಾವಿಷ್ಟಃ 
ಮಹಾಬಲ ಸಮನ್ವಿತಃ । 
ಎಂದರೆ 
ವಾಯೂನಾಚ ನಿತ್ಯ ಸಮಾ-
ವಿಷ್ಟತ್ವಾತ್ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।
" ನಿತ್ಯ " ಪದಕ್ಕೆ ಅರ್ಥವೇನೆಂದರೆ..ಅವರ ಮುಂದಿನ ಅವತಾರಗಳಾದ ಶ್ರೀ ಬಾಹ್ಲೀಕ - ಶ್ರೀ ವ್ಯಾಸರಾಜ - ಶ್ರೀ ರಾಘವೇಂದ್ರತೀರ್ಥರು. ಇವರಲ್ಲೂ ಸಹಾ ಶ್ರೀ ವಾಯುದೇವರು ನಿತ್ಯಾವೇಶದಿಂದ ಇರುತ್ತಾರೆಂದು ಸ್ಪಷ್ಟ!
ಇನ್ನೊಂದು ಪದದಲ್ಲಿ....
ರಾಗ : ಹಂಸಾನಂದೀ ತಾಳ : ಆದಿ
ರಾಯರೇ ಗತಿಯು ನಮಗೆ ।
ವಾಯುಸುಮತೋದ್ಧಾರ 
ಶ್ರೀ ರಾಘವೇಂದ್ರ ಗುರು ।। ಪಲ್ಲವಿ ।।
ಶುಕ ಪಿಕ ಮೊದಲಾದ 
ವಿಕುಲಕ್ಕೆ ಮಧುರ ಫಲ ।
ಯುಕುತಮಾಗಿಹ 
ಚೂತ ಸುಕುಜ ಗತಿಯೋ ।
ಮುಕುತಿಗೆ ಸುಜ್ಞಾನ 
ಭಕುತಿ ವಿರುಕುತಿ ಗತಿಯು ।
ಅಕಳಂಕ ಶ್ರೀಮಂತ 
ಮಂದಿರದಿ ನೆಲಸಿಪ್ಪ ।। ಚರಣ ।।
ಋಷಿಗಳಿಗೆ ಪ್ರಣವವೇ ಗತಿ 
ಝಷಗಳಿಗೆ ಜಲವೇ ಗತಿ ।
ಸಸಿಗಳಭಿವೃದ್ಧಿಗೆ 
ಶಶಿಯೇ ಗತಿಯು ।
ಶಿಶುಗಳಿಗೆ ಜಲವೆ ಗತಿ 
ಪಶುಗಳಿಗೆ ತೃಣವೆ ಗತಿ ।
ಈಸು ಮಹಿಮೆಲಿ ಮೆರೆವ 
ಮಿಸುನಿ ಶಯ್ಯಜರಾದ ।। ಚರಣ ।।
ಕಾಮಿನೀ ಮಣಿಯರಿಗೆ 
ಕೈಪಿಡಿದ ಕಾಂತ ಗತಿ ।
ಭೂಮಿ ವಿಬುಧರಿಗೆ 
ಮಧ್ವ ಶಾಸ್ತ್ರ ಗತಿಯೋ ।
ತಾಮರಸ ಸಖ ಸುತನ 
ಭಯ ಪೋಪುವುದಕೆ । ಶ್ರೀ ।
ಶ್ಯಾಮಸುಂದರ ವಿಠ್ಠಲ 
ಸ್ವಾಮಿ ನಾಮವೇ ಗತಿಯೋ ।। ಚರಣ ।।
" ವಿವರಣೆ "
ಶುಕ = ಗಿಳಿ
ಪಿಕ = ಕೋಗಿಲೆ
ವಿಕುಲ = ಪಕ್ಷಿ ಕುಲ
ಚೂತ ಸುಕುಜ = ಒಳ್ಳೆಯ ಮಾವಿನ ಮರ
ಪ್ರಣವ = ಓಂಕಾರ
ರುಷಗಳು = ಜಲಚರ ಪ್ರಾಣಿಗಳು
ಮಿಸುನಿಶಯ್ಯಜ = ಹಿರಣ್ಯಕಶಿಪುವಿನ ಮಗ
ತಾಮರಸ ಸಖ = ಕಮಲದ ಹೂವಿಗೆ ಮಿತ್ರನಾದ ಸೂರ್ಯ
ಸುತನ = ಯಮಧರ್ಮರಾಜರ
ಧಾಮ = ಪುರಕ್ಕೆ
ಶ್ರೀ ರಾಯರನ್ನು ಯಾರು ಅತ್ಯಂತ ಭಕ್ತಿ ಶ್ರದ್ಧೆಗಳಿಂದ ಪೂಜಿಸುತ್ತಾರೋ, ಭಜಿಸುತ್ತಾರೋ, ಶ್ರೀ ರಾಯರೇ ಗತಿಯೆಂದು ಸರ್ವ ಕಾಲಗಳಲ್ಲಿಯೂ ಸೇವಿಸುತ್ತಾರೋ ಅವರಿಗೆ ಶ್ರೀ ಯಮಧರ್ಮರಾಜರ ಭಯವು ಅಂದರೆ " ನರಕ " ದ ಭಯ ಇಲ್ಲ ಎನ್ನುವುದನ್ನು ಶ್ರೀ ಶ್ಯಾಮಸುಂದರದಾಸರು ಶ್ರೀ ರಾಘವೇಂದ್ರ ಗುರುರಾಯರ ಅದ್ಭುತ ಮಹಿಮೆಯನ್ನು ಅತಿ ಮನೋಜ್ಞವಾಗಿ ಸರಳ ಸುಂದರವಾಗಿ ತಿಳಿಸಿದ್ದಾರೆ.
ನಮ್ಮ ನಿಮ್ಮೆಲ್ಲರಿಗೂ ರಾಯರೇ ಗತಿಯು 
ಶ್ರೀ ರಾಘವೇಂದ್ರ ಗುರುರಾಯರೇ ಗತಿಯು..... 
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
***


ಶ್ರೀಶ್ಯಾಮಸುಂದರ ವಿಠಲದಾಸರ ಪವಿತ್ರವಾದ ಜೀವನ ಪರಿಚಯ ಮಾಡುವ ಒಂದು ಸಣ್ಣ ಪ್ರಯತ್ನ.

ಹರಿದಾಸರ ತಾಣವೆಂದೇ ಸುಪ್ರಸಿದ್ಧವಾದ ನಮ್ಮ ನಾಡಿನ‌ ರಾಯಚೂರು ಪ್ರಾಂತ್ಯ ನೀಡಿದ ಮತ್ತೊಂದು ಕೊಡುಗೆ ಮಾನವಿ ಅಥವಾ ಬಲ್ಲಟಗಿ ಶ್ರೀಗುಂಡಾಚಾರ್ಯರು.
ಶ್ಯಾಮಸುಂದರವಿಠಲಾಂಕಿತರಾದ ಶ್ರೀಗುಂಡಾಚಾರ್ಯರು  ೨೦ ನೇ ಶತಮಾನದಲ್ಲಿ  ಅಪೂರ್ವ ಸಾಧನೆಗೈದ ಹರಿದಾಸರು.
ವರಕವಿ, ಆಶುಕವಿ, ಜೀವಂತ ಅರ್ಥ ಕೋಶ ಎಂದೆಲ್ಲಾ ಪ್ರಸಿದ್ದ ರಾದವರು.

ಮೂಲ ನಾಮಧೇಯ:
ಗುಂಡಾಚಾರ್ಯ / ಗುರಾಚಾರ್ಯ

ಜನನ: ೧೯೫೬ ಮಾನ್ವಿ ಬಳಿಯ ಕುರ್ಡಿ ಗ್ರಾಮದಲ್ಲಿ

ತಂದೆ:
ಶ್ರೀ ಶ್ಯಾಮಾಚಾರ್ಯರು.
ತಾಯಿ: ಶ್ರೀಮತಿ ಕೊಪ್ರಮ್ಮ
ಅಂಕಿತ: ಶ್ಯಾಮಸುಂದರ ವಿಠ್ಠಲ.

ತಾಯಿಯ ತಂಗಿ  ರಿಂದಮ್ಮ
ಮತ್ತು ಅವರ ಪತಿ ಶ್ರೀಗುರುಭೀಮಾಚಾರ್ಯರಿಗೆ
ಗಂಡು ಸಂತಾನವಿಲ್ಲದ ಕಾರಣ ಗುಂಡಾಚಾರ್ಯರನ್ನು ಅವರ ಮಗನಂತೆ ಬೆಳಸಿದರು.
ಕಾಲ ಕ್ರಮೇಣ  ಗುಂಡಾಚಾರ್ಯರು ಶ್ರೀಗುರುಭೀಚಾರ್ಯರಿಂದ ಸಂಸ್ಕೃತ ಮತ್ತು ಪೌರೋಹಿತ್ಯವನ್ನು ಕಲಿತು 
ಕುರ್ಡಿ,  ಮಾನ್ವಿ ,ಬಲ್ಲಟಗಿ
ಗ್ರಾಮಗಳಲ್ಲಿ ಪೌರೋಹಿತ್ಯ  ನಡೆಸಿ, ನಂತರ ಸರ್ಕಾರಿ‌ ಶಿಕ್ಷಣ ವೃತ್ತಿಯಲ್ಲಿಯೂ ಇದ್ದವರು. 
ಸಣ್ಣ ವಯಸ್ಸಿನಲ್ಲೆ ಶ್ರೀಜಗನ್ನಾಥದಾಸರ ಹರಿಕಥಾಮೃತಸಾರವನ್ನು
ಆಳವಾಗಿ ಅಧ್ಯಯನ‌ಮಾಡಿ 
ಅಲ್ಲಿ ಹೇಳಿದ ಸಕಲ‌ ತತ್ತ್ವಪ್ರಮೇಯಗಳನ್ನು‌
ಅರಗಿಸಿಕೊಂಡವರು.
ಹಾಗೆಯೇ ಪರಂಪರೆಯಿಂದ ಬಂದ ಪೌರೋಹಿತವೃತ್ತಿಯು 
ಅವರಲ್ಲಿ  ಸಾಕಷ್ಟು ಸಂಸ್ಕೃತದ  ಭಾಷಾ ಜ್ಞಾನವನ್ನು  ರೂಢಿಸಿತ್ತು.
ಅಧ್ಯಾತ್ಮಿಕ ಒಲವು ಹೆಚ್ಚಾದಂತೆ ಶಿಕ್ಷಕ ವೃತ್ತಿಯನ್ನು ತೊರೆದರು.
 ಆ ಪ್ರಾಂತ್ಯದ ಆಗಿನ‌ ಮತ್ತೊಬ್ಬ ಪ್ರಮುಖ ಹರಿದಾಸರಾದ ಶ್ರೀಅಸ್ಕಿಹಾಳ ಗೋವಿಂದದಾಸರ ಬಗ್ಗೆ ಅಪಾರ ಗೌರವಾದರವನ್ನು ಹೊಂದಿದ್ದರು.
ಜೊತೆ ಜೊತೆಗೆ ಲಿಂಗಸೂರಿನ 
ಶ್ರೀಪ್ರಾಣೇಶದಾಸರ ಪರಂಪರೆಯಲ್ಲಿ ಬಂದ
ಶ್ರೀ ವರದೇಶ ವಿಠಲರು
ಶ್ರೀಸುಂದರವಿಠಲರು
(ಗೋರೆಬಾಳ ಹನುಮಂತರಾಯರು),
ಶ್ರೀಸುಳಾದಿ ಕುಪ್ಪೇರಾಯರು,
ಅಭಿನವ ಪ್ರಾಣೇಶದಾಸರು
ಇವರೆಲ್ಲರಿಗೂ ಆತ್ಮೀಯರಾದರು.
ಗುಂಡಾಚಾರ್ಯರು  ಸುಳಾದಿ ಕುಪ್ಪೇರಾಯರು, ಸಿರಿವಾರದ ಶ್ರೀ ರಾಮಚಂದ್ರ ರಾಯರು ಸಿರಿವಾರದ ಶ್ರೀರಾಮಾಚಾರ್ಯ
ರೊಂದಿಗೆ ಮಧ್ವ ಶಾಸ್ತ್ರ ಸಂಪನ್ನ ರಾದ ಕೃಷ್ಣಾತೀರದ ಪೂಜ್ಯ ಐಕೂರು ನರಂಸಿಂಹಾಚಾರ್ಯರಲ್ಲಿಗೆ ತೆರಳಿ ಮಧ್ವಸಿದ್ಧಾಂತದ ಪ್ರಮೇಯಗಳನ್ನು ಚರ್ಚಿಸುತ್ತಿದ್ದರು.
ಚಿತ್ರದುರ್ಗದ ತಂದೆ ವೆಂಕಟೇಶವಿಠ್ಠಲರ ( ಶ್ರೀರಾಮಚಂದ್ರರಾಯರು)
ಸತ್ಸಂಗವೂ ಗುಂಡಾಚಾರ್ಯರಿಗೆ ಒದಗಿ ಬಂದಿತು.
ಅಸಾಧಾರಣ ಕಾವ್ಯಪ್ರತಿಭೆ, 
ಕನ್ನಡ ಹಾಗೂ ಸಂಸ್ಕೃತ ದಲ್ಲಿ ಪ್ರಕಾಂಡ ಪಾಂಡಿತ್ಯ ಗಳಿಸಿದ ದಾಸರು ಬಹು ದೊಡ್ಡ ಆಶುಕವಿಗಳಾಗಿ ಮಾನವಿ ಪ್ರಾಂತ್ಯದಲ್ಲಿ ಪ್ರಖ್ಯಾತರಾಗಿದ್ದರು.

ದಾಸರು ರಚಿಸಿದ ಕೀರ್ತನೆಗಳು ಮಧ್ವ ಸಂಪ್ರದಾಯದ ದೇವಕಕ್ಷ,, ಯತಿ ಕಕ್ಷ , ದಾಸ ಕಕ್ಷದ ಶ್ರೇಣಿಯಲ್ಲಿದೆ.ಸಂಸ್ಕೃತ ಭೂಯಿಷ್ಟವಾದ ಸಂಗೀತದ ಚೌಕಟ್ಟಿನಲ್ಲಿ ಕೂಡಿಸಿದ್ದು ಪ್ರಚಲಿತ ರಾಗಗಳನ್ನೆ ಬಳಸಿದ್ದಾರೆ.
ದೇವತಾ ತಾರತಮ್ಯ ,
ಯತಿತಾರತಮ್ಯ ಅನುಸರಿಸಿ 
ಅನೇಕ ಕೃತಿಗಳನ್ನು ರಚಿಸಿದ್ದಾರೆ.
ಅವುಗಳಲ್ಲಿನ ಕೆಲವು:
*ಕಾಯೋ ಕಾವೇರಿ ರಂಗ ಕಾರುಣ್ಯ ಪಾಂಗಾ *
*ಪಾಂಡುರಂಗ ಪರಿಪಾಲಿಸೊ
ನುಡಿಲಾಲುಸೊ *

*ಕಾಯೇ ದುರ್ಗಾಂಭ್ರಣಿಯೇ 
ಕಾಯೇ ಕಾಯೇ ರುಕ್ಮೀಣಿಯೇ *
"ಆರಂಭದಲಿ ನಮಿಪೆ ಬಾಗಿ ಶಿರವ *

*ತೋರೈ ಪಾವರ್ವತಿಯೇ ಶಂಕರನ *

"ಅಂಬಿಕಾಪತಿ ರಕ್ಷಿದೆಸೆನ್ನಾ "

*ಪಾಲಿಸೆನ್ನನು ಪಂಪಾಕ್ಷೇತ್ರವಾಸ *
 * ಯೋಗಿಗಳ ಹೃದಯಕೆ  ನಿಲುಕ‌ ನಿಗಮಾಗಮೈ ಕವಿನುತನ *

*ರಕ್ಷಿಸೆನ್ನನು  ಪಕ್ಷಂದ್ರನೇ ನೀನು‌ *

*ಪೊರೆವುದೋ ಸಂಜೀವರಾಯ *

*ಹನುಮಂತಾ ಪಾಹಿ ಗುರು ಹನುಮಂತ *

*ದೇವ ಹನುಮಾಶೆಟ್ಟಿ 
ರಾಯಾ ಜಗಜೆಟ್ಟಿ *

*ಹನುಮಂತ ಪಾಹಿ ಹನುಮಂತ 
ಮುನಿ ವ್ಯಾಸ ಕರಕಮಲಾರ್ಚಿತ *

*ಎಂದು ಕಾಂಬೆ‌ನೋ  ನಂದಗೋಪನ‌ ಕಂದ ಶ್ರೀಗೋವಿಂದನ "

ಪೊಂದಿ ಭಜಿಸಿ ನಿರುತ
ಮಾನವ ಮಹಿಳ  ವೃಂದಾರಕ 
(ಶ್ರೀ ಸುವ್ರತೀಂದ್ರರು) 

ಏನು ಧನ್ಯರೊ ಜಗದಿ ಎಂಥ ಮಾನ್ಯರೊ
(ಶ್ರೀರಘುಪ್ರೇಮತೀರ್ಥರು)

ವರದಾತೀರದಿ ನೆಲಸಿಹ ಗುರುವರನ್ಯಾರೆ ಪೇಳಮ್ಮಯ್ಯ
ಶ್ರೀಸುಶೀಲೇಂದ್ರರು  (ಹೊಸರಿತ್ತಿ)

ಪಾಂಡು ನಂದನರಂತೆ ತೋರುತಿಹರು ಪಂಡಿತರಂತೆ (ಸತ್ಯಧ್ಯಾನತೀರ್ಥರು    
     ಪಂಢರಾಪುರ )

ನಿತ್ಯ ವ್ಯಾಸತತ್ತ್ವಜ್ಞರಂಫ್ರಿ ಭಜಿಸೊ  ಕೃತ್ಯಕೃತ್ಯನೆಂದೆನುಸೊ
(ಶ್ರೀ ವೇಣಿಸೋಮಾಪುರ)

ಸತತ ಪಾಲಿಸೊ ಎನ್ನ ಯತಿ ರಾಘವೇಂದ್ರ

ಎಂಥ ದಯವಂತನೋ ಮಂತ್ತ ಮುನಿ ನಾಥನೋ
(ಶ್ರೀರಾಘವೇಂದ್ರರು)

*ರಂಗ ಓಲಿದ ದಾಸರಾಯ 
ಸಾಧು ಸಂಗ ವಹಿಸಿ ಕರುಣದಿ ಪಿಡಿ‌ ಕೈಯ *
(ಶ್ರೀ ಜಗನ್ನಾಥದಾಸರು)

ಅನೇಕ ಕ್ಷೇತ್ರ ಸಂದರ್ಶಿಸಿ ದಾಸರು ಕ್ಷೇತ್ರ ಮಹಿಮೆ ಸಾರುವ ಪದಗಳನ್ನು ಹೇರಳವಾಗಿ ರಚಿಸಿದ್ದಾರೆ.

ಮತ್ತೊಂದು ಅವರು ಹೊಂದಿದ್ದ ಲೋಕ ಜೀವನ ಸೂಕ್ಷ ಸಂವೇದನೆಯ ದಾಸರ ಸಮಷ್ಟಿ ಪ್ರಜ್ಞೆಯ ಮನೋಧರ್ಮ*
ದಾಸರು ಅನೇಕ ಬಯಲಾಟಗಳನ್ನು , ಧಾರ್ಮಿಕ ಒಗಟುಗಳನ್ನು ಪ್ರಾಸಬದ್ಧ ರಹಸ್ಯ ತತ್ತ್ವಾರ್ಥಗಳಿಂದ ರಚಿಸಿದ್ದಾರೆ.
ಅನೇಕ ಬಯಲು‌ ನಾಟಕಗಳು‌ ರಂಗಭೂಮಿ ಪ್ರದರ್ಶನ ಕಂಡಿವೆ.
ರಚಿಸಿದ ಬಯಲು ನಾಟಕಗಳು 
ಭೋಜ ಪ್ರಬಂಧ, ರುಕ್ಮಾಂಗದ ಚರಿತ್ರೆ,
ಶ್ರೀರಾಮ ಪಾದುಕಾಪಟ್ಟಾಭಿಷೇಕ,
ಲಂಕಾದಹನ,
ಶ್ರೀನಿವಾಸ ಕಲ್ಯಾಣ.
ದಾಸರ ಅನೇಕ ಬಯಲಾಟಗಳು ಪ್ರಾಂತ್ಯದಲ್ಲಿ  ರಂಗಭೂಮಿ ಪ್ರದರ್ಶನ ಕಂಡಿವೆ.

ದಾಸರು ಅತಿಯಾದ ಮಡಿಯ ವೇಷ ಭೂಷಣವಿಲ್ಲದೆ ಸರಳ ಬದುಕಿನ ಮುಖೇನ ಜನಸಾಮಾನ್ಯರಲ್ಲಿ ಅಧ್ಯಾತ್ಮಿಕ ದೃಷ್ಟಿಕೋನ ಬಿತ್ತಿದರು.
ಜನಸಾಮಾನ್ಯರು ಹಿಡಿದ ಕೆಟ್ಟ ಮಾರ್ಗವನ್ನು ತಮ್ಮ ಕೃತಿಯ ಆದಿಯಲ್ಲಿ ಮೆಚ್ಚುಗೆ ಸೂಚಿಸಿದಂತೆ ನುಡಿದು ಅಂತ್ಯದಲ್ಲಿ ಸಾಧನೆಗೆ ಒದಗುವಂತಹ ನಡಾವಳಿಗಳ ಅವಶ್ಯಕತೆಯನ್ನು ಸಾರಿ ಹೇಳುವ ವೈಶಿಷ್ಟ್ಯ ಕಲೆಗಾರಿಕೆ ಯನ್ನು  ದಾಸರು ಕರತಲಾಮಕ ಮಾಡಿಕೊಂಡಿದ್ದರು .
ಅವರು ರಚಿಸಿದ 
ಕೇಳ್  ಕೇಳ್ ಲೋ ತತ್ತ್ವ ಜ್ಞಾನ ಎನ್ನುವ ಕೀರ್ತನೆಯಲ್ಲಿ 
ಮೋಟಾರು ವಾಹನ, ನಾಟಕದರುಶನ, ಹೋಟೆಲೊಳಗೆ ಸುಭೋಜನ, ಇವುಗಳು ಪೀಯೂಷಪಾನವಾಗಿವೆ.
ವೇಶ್ಯಾಲಯ ಪ್ರವೇಶಿಸುವುದೇ ಘನ ಕಾಶಿ ಪ್ರಯಾಗಕ್ಕೆ ಸಮಾನ, ಸೋಪು ತೀಡಿಸುವ, ಕ್ರಾಪು ಬುಡುವವೇ ವೇದಾಧ್ಯಯನ,
ಸೋಡಾಪಾನ ಬೀಡಿ ಸೇದೋಣ, ಕೂಡಿ ಇಸ್ಪೀಟು ಆಡೋಣ ಮುಂತಾದವು ಭವಕ್ಲೇಶ ಭಂಜನಗಳು ಮೇಲ್ನೋಟಕ್ಕೆ ಎಲ್ಲವನ್ನೂ ಮೆಚ್ಚಿಕೊಂಡಂತೆ ನುಡಿದ ದಾಸರು ನೀಡುವ ಪದದ ಅಂತಿಮ ಸಂದೇಶ
ಈ ಕಲಿ ಬೋಧ ನಿರಾಕರಿಸುವವರಿಗೆ ಶ್ರೀಕರ ಶ್ಯಾಮಸುಂದರನ ದಿವ್ಯಾನಂದ ಭವನ

ದುಶ್ಚಟಗಳು ತರುವ ಅಪಾರ 
ಅನರ್ಥಗಳನ್ನು ತಮ್ಮ ಇನ್ನೊಂದು ಪದದಲ್ಲಿ 
ಜಾಣೆ ನಂಬಿದೆ  ಇಸ್ಪೆಟ್ ರಾಣಿ 
ನೀನೊಲಿದೆನ್ನ ಪಾಣಿಯೊಳಗೆ ಬಂದು ಕಾಣಮ್ಮ
ರಚನೆಯ ಅಂತ್ಯದಲ್ಲಿ ಜನರು ಈ ದುಶ್ಚಟದಿಂದ ದನಕರು ಹೊಲಮನೆ ಕಳೆದುಕೊಳ್ಳುವ ಹಾಗು ಉಣಲು, ಉಡಲು ಪಡುವ ಬವಣೆ ಮನದಟ್ಟಾಗುವಂತೆ ಎಚ್ಚರಿಕೆಯ ಸಂದೇಶ ನೀಡುತ್ತಾರೆ.
ಬಲು ಕಷ್ಟ  ಬರಗಾಲ ಬಂದಿತಯ್ಯ ಶಿಶುಗಳಿಗೆ ಹಾಲಿಲ್ಲ ಪಶುಗಳಿಗೆ ಮೇವಿಲ್ಲ
ಉಸುರಲು ಬಾಯಿಲ್ಲ ವೃದ್ಧ ಜನಕೆ 

ಜನ ತಮ್ಮನ್ನು ವರಕವಿ ಎಂದು ಗೌರವಿಸಿದರೆ 
ದಾಸರು ತಮ್ಮ ಒಂದು
 ಕೃತಿ ಯಲ್ಲಿ
ಎನಗಾಕೆ ಕವಿಯೆಂಬ ಶ್ರೇಷ್ಠ ನಾಮ ಎಂಬ ವಿನಮ್ರತೆ ತೋರಿದ್ದಾರೆ.
ಅವರ ಶಿಷ್ಯರಲ್ಲಿ 
ಮೂರ್ತ ಪ್ಪ ಹರಿಜನನಾಗಿದ್ದುದು ತಿಳಿದು ಬರುತ್ತದೆ‌. ಆತ್ಮೋದ್ಧಾರಕ್ಕಾಗಿ ಹಂಬಲಿಸುವ ಎಲ್ಲರನ್ನೂ ಹರಿದಾಸ ಪಂಥ ಮುಕ್ತಮನದಿಂದ ಸ್ವಾಗತಿಸುತ್ತದೆ ಎನ್ನುವುದನ್ನು ಶ್ರೀ ಶ್ಯಾಮಸುಂದರ ದಾಸರು ತಮ್ಮ ಜೀವಿತದಲ್ಲಿ ಪ್ರಯಾಣಿಕರುಸಿದ್ದಾರೆ.
ಅವರ ಶಿಷ್ಯ ರಲ್ಲಿ ಪ್ರಮುಖರು:
ಶ್ರೀ ಅಭಿನವ ಪ್ರಾಣೇಶದಾಸರು , ಶ್ರೀ ಪದ್ಮನಾಭ ದಾಸರು, ಶ್ರೀ ಲಕುಮೀಶ ವಿಠ್ಠಲದಾಸರು, ಶ್ರೀ ರಘುಪತಿ ವಿಠ್ಠಲ ದಾಸರು, ಶ್ರೀ ಭುಜಂಗಶಯನರು, ಶ್ರೀ ವಿಜಯ ಸಾರಥಿದಾಸರು‌.
ಶ್ರೀದಾಸರು ಶ್ರೀಹರಿಯಪಾದಸಾಕ್ಷಿಯ ಅನುಭವದಿಂದ ಮಧ್ವ ಮತದ ತಿರುಳನ್ನು ಅಸ್ವಾದಿಸಿ 
ತಮ್ಮ ಆಶುಕವಿತಾ ಸಾಮರ್ಥ್ಯದಿಂದ ಎಲ್ಲರ ಮನವನ್ನು ಗೆದ್ದಿದ್ದರು.
ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದವರು ಇಂಥಾ ಗೂಢಾರ್ಥ, ಪ್ರಮೇಯ ತತ್ವಗಳನ್ನು ಬರೆದು , ಪದ ಪದ್ಯ ಸುಳಾದಿಗಳ ರಚನೆ 
ಸಾಧ್ಯವೇ?
ಪೂರ್ವ ಜನ್ಮ ಸಂಸ್ಕಾರದ ಪುಣ್ಯ ಕರ್ಮಗಳಿಂದಷ್ಟೇ ಮಾತ್ರ ಸಾಧ್ಯ.
ಹರಿವಾಯುಗುರುಗಳ ಸಂಪೂರ್ಣ ಕೃಪಾಕಟಾಕ್ಷ ಹೊಂದಿದ್ದ ಶ್ರೀಗುಂಡಾಚಾರ್ಯರು ಆರ್ವಾಚೀನ ದಾಸ ಸಾಹಿತ್ಯದ ಪ್ರಸಾರ, ಸ್ವರಚನೆ
ಮತ್ತು ಶಿಷ್ಯಪರಂಪರೆಯನ್ನು 
ಮುಂದುವರೆಸಿ ಹರಿದಾಸ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವಪೂರ್ಣ ಸ್ಥಾನ ಪಡೆದಿದ್ದಾರೆ.


" ವರ ಕವಿಗಳಿಂದ ವರ ಕವಿಗಳಿಗೆ ಸ್ವಾಗತ "

ಕವಿ ದ ರಾ ಬೇಂದ್ರೆಯವರನ್ನು ಕುರಿತ ಹಾಡು ಸುಂದರವಾಗಿದೆ. 

ಮಾನವಿಯಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನಕ್ಕೆ ಬರುವಂತೆ ವ್ಯವಸ್ಥಾಪಕರು ಮಾಡಿಕೊಂಡ ಮನವಿಯನ್ನು ಕವಿ ಬೇಂದ್ರೆಯವರು ಮನ್ನಿಸದಿದ್ದುದಕ್ಕೆ ಇಡೀ ಸಮ್ಮೇಳನದ ಉತ್ಸಾಹವು ಕುಗ್ಗಿದ್ದನ್ನರಿತ ಶ್ರೀ ಶ್ಯಾಮಸುಂದರದಾಸರು ಕವಿ ಬೇಂದ್ರೆಯವರಿಗೆ ಮಾನವಿಗೆ ಬರುವಂತೆ ಆಹ್ವಾನಿಸಿ ಒಂದು ಸ್ವಾಗತ ಪದವನ್ನು ಬರೆದು ಧಾರವಾಡಕ್ಕೆ ಕಳುಹಿಸಿದರು. 

ಸ್ವಾಗತ ಪದದಲ್ಲಿ ನಿರೂಪಿತ ಸಾಹಿತ್ಯ ಸತ್ವವನ್ನು ಓದಿದ ಕವಿ ಬೇಂದ್ರೆಯವರು ಕೂಡಲೇ ಮಾನವಿಗೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು. 

ಸತ್ಕವೀಂದ್ರ ಬಾ ಬೇಂದ್ರೆ -

ಸುಗುಣ ಸಾಂದ್ರ ।। ಪಲ್ಲವಿ ।।

ನಮ್ಮ ಮಾನವಿ ಸ್ಥಳದಿ -

ಅಚ್ಛಗನ್ನಡದ ನುಡಿಯ ।

ಸಮ್ಮಿಲನ ಸಾಗಿಸಲು ನಿಶ್ಚಯಿಸಿದೆ ।

ನಿಮ್ಮ ಬರುವಿಕೆ ಬಯಕೆ ।।

ಇಮ್ಮಡಿಸಿಹುದೆಮಗೆ ।

ಸಮ್ಮತಿಸಿ । ಬಾರ ।

ಯ್ಯ ಸತ್ಕವೀಂದ್ರ ಶ್ರೀ -

ಬೇಂದ್ರೆ ಸುಗುಣೇಂದ್ರ   ।। ಚರಣ ।।

ದಾಸರುಹರಿಪಾದ ಸೇರಿದ್ದು *
ದುರ್ಮುಖಿ ನಾಮ ಸಂವತ್ಸರ ವೈಶಾಖ ಶುದ್ಧ ನವಮಿ
ಕ್ರಿ.ಶ .೧೮೫೬

ಹರೇ ಶ್ರೀನಿವಾಸ 

ಸಂಗ್ರಹ :
ವಿವಿಧ ಮೂಲಗಳಿಂದ
ದೊ.ವೆಂ.ಶ್ರೀ
****



Sri Shyamasundara Dasa1903-1956Manvi Gunda CharyaShyamasundara(swapnalabda)Asigyalu Govinda DasaLingasuguruVyshaka Shudda Navami

**********



No comments:

Post a Comment