॥ಶ್ರೀಂ ಶ್ರೀ ಕಂ ಕಪಿಲಾಯ ನಮಃ॰॥
ಬೆಳಗು ಜಾವದಿ ಬಾರೋ ಹರಿಯೇ ನಿನ್ನ ಚರಣಕಮಲ ತೊಳೆದು ಜಲಪಾನ ಮಾಡುವೆನು.....
ಶ್ರೀವರದೇಶವಿಠಲದಾಸರು
(ಸಂತೆಕೆಲೂರು)
ಅವರ ಕೃತಿ
ಪರಮಾತ್ಮನ ದ್ವಂದ್ವ ಕ್ರಿಯೆಯನ್ನು ಸಾರುವಂಥ ಶ್ರೀರಾಮ ಕೃಷ್ಣರ ಅವತಾರ ಮಹಿಮೆಗಳನ್ನು ದಾಸರು ಬಹು ಸ್ವಾರಸ್ಯವಾಗಿ ಭಕ್ತೋದ್ರೇಕ ವಾಗುವಂತೆ ಸ್ತುತಿಸಿದ್ದಾರೆ.
ಜನಕ ಪೇಳೆ ಲಕ್ಷ್ಮಣ ಸೀತಾಸಹ _
ವನಕೆ ತೆರಳಿದ ರಾಮಹರೇ _
ವನಕೆ ಪೋಗಿ ತನ್ನಣುಗರೊಡನೆ ಗೋ _
ವನು ಪಾಲಿಪ ಕೃಷ್ಣಹರೇ....
ತಾಟಕೆ ಖರಮಧು ಕೈಟಭಾರಿ _
ಪಾಪಾಟವಿ ಸುರ ಮುಖ ರಾಮಹರೇ _
ಆಟದಿ ಫಣಿ ಮೇಲ್ ನಾಟ್ಯವ ನಾಡಿದ _
ಖೇಟವಾಹ ಶ್ರೀ ಕೃಷ್ಣಹರೇ...
ರಾಮ ರಾಮ ಎಂದ್ನೇಮದಿ ಭಜಿಪರ _
ಕಾಮಿತ ಫಲದ ಶ್ರೀ ರಾಮಹರೇ_
ಪ್ರೇಮದಿ ಭಕ್ತರ ಪಾಲಿಪ ಶ್ರೀ _
ವರದೇಶ ವಿಠ್ಠಲ ಶ್ರೀ ಕೃಷ್ಣ ಹರೇ...
ಜೈ ಜೈ ರಾಮಹರೇ ಜೈ ಜೈ
ಕೃಷ್ಣಹರೇ _
ರಾಮ ಹರೇ ಹರೇ ರಾಮ ಹರೇ _
ಕೃಷ್ಣ ಹರೇ ಹರೇ ಕೃಷ್ಣ ಹರೇ.
****
YEAR 2021
ಶ್ರೀಂ ಶ್ರೀ ಕಂ ಕಪಿಲಾಯ ನಮಃ
ಆಶ್ವಯುಜ ಶುಕ್ಲ ತೃತೀಯಾ
ವರದೇಂದ್ರ ಪದಾಸಕ್ತ
ವರ ಸುಜ್ಞಾನ ಪೂರಿತಾ/
ಸುರ ಗಂಧರ್ವ ಸಂಪ್ರೀತಾ
ವರದೇಶ ಗುರುಮ್ ಭಜೇ//
ವರದೇಂದ್ರ ಪದಾಂಭೋಜಂ ಸದಾ ಮಾನಸ ಪೂಜಕಂ/
ಗುರುಜಗನ್ನಾಥಪ್ರಿಯಂ ಶಾಂತಂ ವರದೇಶಾರ್ಯ ಗುರುಮ್ ಭಜೇ//
ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪರಮ ಕಾರುಣ್ಯ ಪಾತ್ರರು, ಶ್ರೀ ವರದೇಂದ್ರ ತೀರ್ಥರ ಅರ್ಚನೆ, ಆರಾಧನೆ ಮಾಡಿದವರು, ಶ್ರೀ ವರದೇಂದ್ರ ತೀರ್ಥರ ಸ್ವಪ್ನವೃಂದಾವನಾಖ್ಯಾನ, ಪ್ರಲ್ಹಾದ ಚರಿತ್ರೆಯನ್ನು ರಚನೆ ಮಾಡಿದವರು, ಲಿಂಗಸೂಗೂರಿನವರು, ಶ್ರೀ ಪ್ರಾಣೇಶದಾಸಾರ್ಯರ ದೌಹಿತ್ರ ಸಂತತಿಯಾದವರು, ಶ್ರೀ ಗುರುಜಗನ್ನಾಥವಿಠಲರ ಪರಮಪ್ರೀತಿಯ ಶಿಷ್ಯರೂ, ಅಪರೋಕ್ಷಜ್ಞಾನಿಗಳಾದ ಶ್ರೀ ವರದೇಶವಿಠಲರ ಮಧ್ಯಾರಾಧನಾ ಮಹೋತ್ಸವದ ಶುಭವಂದನೆಗಳು.. ಇವರ ಕೃತಿ ಬಾರೋ ನೂತನ ಗೃಹಕ್ಕೆ ಹರಿಯೆ ಎಂಬ ತುಂಬಾ ಅದ್ಭುತವಾಗಿದೆ. ಅದು ಅವರು ನಿರ್ಮಿಸಿದ ಮನೆಯಲ್ಲಿ, ದ್ವಾರಗಳು ಇತ್ಯಾದಿಗಳನ್ನು ಬ್ರಹ್ಮಾಂಡದ, ಪಿಂಡಾಂಡದ ವರ್ಣನೆ ಎನ್ನುವ ಅನುಸಂಧಾನದಿಂದ ರಚಿಸಿ, ಅದ್ಭುತವಾದ ತತ್ವಗಳನ್ನು ಅಡಗಿಸಿಟ್ಟಿದಂತಹಾ ಈ ಕೃತಿಯದು. ಉಗಾಭೋಗ, ಪದ ಪದ್ಯಗಳನ್ನು ರಚಿಸಿ ದಾಸ ಸಾಹಿತ್ಯದ ಸೇವೆಯನ್ನು ಸಲ್ಲಿಸಿದ ಮಹಾನ್ ಚೇತನರು ಶ್ರೀ ವರದೇಶವಿಠಲ ದಾಸಾರ್ಯರು..
ಶ್ರೀ ದಾಸಾರ್ಯರ ಅನುಗ್ರಹ ಸದಾ ನಮಗಿರಲೆಂದು ಅವರಲ್ಲಿ ಪ್ರಾರ್ಥನೆ ಮಾಡುತ್ತಾ..
-Smt. Padma Sirish
ನಾದನೀರಾಜನದಿಂ ದಾಸಸುರಭಿ 🙏🏽
***
ಶ್ರೀವರದೇಶದಾಸರನ್ನ ಹತ್ತಿರದಿಂದ ಕಂಡವರ ಮಾತು.
"ಒಂದು ಜನುಮದಾಗ ಮುಗಿತೈತೇನ್ ದೊಡ್ಡವರ ಸುದ್ದಿ. ಒಂದು ಹೇಳುತಿನಿ ಕೇಳ್ ಯಂಕಣ್ಣ,..
ಗುರುಗಳ ಸನ್ನಿಧಾನದಾಗ ಸ್ವಾಮಿರಾಯರು(ಶ್ರೀವರದೇಶ ವಿಠ್ಠಲದಾಸರು) ವೈಕುಂಠ ಯಾತ್ರೆ ಮಾಡಿಬಿಟ್ರು, ಮುತ್ಯನಾ(ಶ್ರೀ ಗುರು ಜಗನ್ನಾಥ ದಾಸರು) ಅವರಿಗೆ ಮುಂದಿನ ಕಾರ್ಯ ಮಾಡಿದ್ದು,.ಮೂರನೆ ದಿವ್ಸ ಅಸ್ಥಿ ಸಂಗ್ರಹಕ ಹೋದಾಗ್ಯೆ,.ಸ್ವಾಮಿರಾಯರ(ಶ್ರೀ ವರದೇಶದಾಸರ) ಅಸ್ಥಿಗಳ ಅವಲಾ,.ಅವು ರಾಮ ರಾಮ ಅಂತ ರಾಮಸ್ಮರಣೆ ಮಾಡಕತ್ತಿದ್ದವಂತ.
ಆ ರಾಮ ಸ್ಮರಣೆನಾ, ಮುತ್ಯ, ಅವರ ಜೊತಿಗೆ ಹನುಮಂತರಾವ ಕರಣಂ ಇನ ಇಬ್ಬರು ಇದ್ರಂತ, ಬಹಳ ದಿವಸ ಆದ ಮೇಲೆ ಕೌತಲ ದಿಂದ ಬಂದ ಪತ್ರದಾಗ ತಿಳಿತು ನಮಗ.
ಆಮೆಲೆ ಇದ ವಿಷ್ಯನಾ ವೇ, ಮೂ , ರಾಘವೇಂದ್ರಚಾರ ಮೂರು ವರುಷ ಆದ ಮೇಲೆ ಲಿಂಗಸ್ಗೂರಗೆ ಬಂದಾಗ, ಮತ್ತ ಇದ ಸ್ಮರಿಸಿದ್ರು,
ನೋಡ, ನಮಗರಿವಿಲ್ಲದಂಗ ಹೆಂಗ ಉಸಿರಾಟ ನಡದೈತಿ, ಹಂಗ ಸ್ವಾಮಿರಾಯರು ಉಸಿರಾಟದಂಗ, ಮನಸಿನ್ಯಾಗ ರಾಮಸ್ಮರಣೆ ಮಾಡುತಿದ್ರು,
ಹಳ್ಳೆರಾವ ವೆಂಕಟರಾವ ತಿಳಿಸಿದ್ದು-
✍️ಕೆಲೂರ ವೆಂಕಟರಾವ
***
Sri Varadesha Vittala | 1885-1918 | Swamy Rao | Varadesha Vittala | Sri Guru Jagannatha Vittala | Lingasuguru | Ashwija Shudda Tadiya |
No comments:
Post a Comment