Showing posts with label sukruteendra teertharu nanjangud 1912 rayara mutt yati 33 ಸುಕೃತೀಂದ್ರ ತೀರ್ಥರು. Show all posts
Showing posts with label sukruteendra teertharu nanjangud 1912 rayara mutt yati 33 ಸುಕೃತೀಂದ್ರ ತೀರ್ಥರು. Show all posts

Wednesday, 1 May 2019

sukruteendra teertharu nanjangud 1912 matha rayara mutt yati 33 ashwija shukla dashami ಸುಕೃತೀಂದ್ರ ತೀರ್ಥರು






info from sumadhwaseva.com--->

Sri Sukruteendra Theertha
Period – 1903-1912
Vrundavana: Nanjangud
Aradhana – Ashwayuja Shudda Dashami
Ashrama Gurugalu –  Sri Supragnendra Thirtharu
Ashrama Shishyaru – Sri Susheelendra Thirtharu


ಸುವಿದ್ವತ್ಕಮಲೋಲ್ಲಾಸಮಾರ್ತಾಂಡಂ ಸುಗುಣಾಕರಂ
ಸಚ್ಚಾಶಾಸ್ತ್ರಸಕ್ತಹೃದಯಂ ಸುಕೃತೀಂದ್ರಗುರುಂ ಭಜೇ |
सुविद्वत्कमलोल्लासमार्तांडं सुगुणाकरं
सच्चाशास्त्रसक्तहृदयं सुकृतींद्रगुरुं भजे ।
suvidvatkamalōllāsamārtāṁḍaṁ suguṇākaraṁ
saccāśāstrasaktahr̥dayaṁ sukr̥tīṁdraguruṁ bhajē |

**********

" ಶ್ರೀ ಸುಕೃತೀಂದ್ರತೀರ್ಥರು "
ಈದಿನ : 26.10.2020 ಸೋಮವಾರ ಶ್ರೀ ಸುಕೃತೀಂದ್ರತೀರ್ಥರ ಆರಾಧನಾ ಮಹೋತ್ಸವ., ನಂಜನಗೂಡು 
ಶ್ರೀ ವರದೇಶವಿಠಲರು... 
ದೋಷ ವರ್ಜಿತ ಹರಿದಾಸ ಜನರ ಪ್ರಿಯ ।
ಶ್ರೀಶ ಪದಾರ್ಚಕ ಸುಕೃತೀಂದ್ರತೀರ್ಥಾ ।। 
ಶ್ರೀ ವೇಣುಗೋಪಾಚಾರ್ಯರ ಬಾಲ್ಯ ವಿದ್ಯಾಭ್ಯಾಸ ಅವರ ಹಿರಿಯರಲ್ಲೇ ಆಯಿತು. 
ಪ್ರಸಿದ್ಧ ಪಂಡಿತರಾದ ನ್ಯಾಮಗೊಂಡಲು ಶ್ರೀ ಶ್ಯಾಮಾಚಾರ್ಯರಲ್ಲಿ ನ್ಯಾಯಶಾಸ್ತ್ರ; ಆಪ್ತರೂ, ಅನುಬಂಧಿಗಳೂ ಆದ ಹುಲಿ ಶ್ರೀ ಹನುಮಂತಾಚಾರ್ಯರಲ್ಲಿ ವೇದಾಂತ ಶಾಸ್ತ್ರ ವ್ಯಾಸಂಗ ಮಾಡಿ ಚತುಃ ಶಾಸ್ತ್ರ ಪಂಡಿತರೆಂದು ವಿಖ್ಯಾತರಾದ ಸಾತ್ವಿಕ ಸದಾಚಾರ ಸಂಪನ್ನರು. 
ಶ್ರೀ ವೇಣುಗೋಪಾಚಾರ್ಯರು -  ಮುಂದೆ ಶ್ರೀ ರಾಯರ ಮಠದ ಶ್ರೀ ಸುಪ್ರಜ್ಞೇಂದ್ರತೀರ್ಥರಿಂದ ತುರ್ಯಾಶ್ರಮ ಸ್ವೀಕಾರ ಮಾಡಿ " ಶ್ರೀ ಸುಕೃತೀಂದ್ರತೀರ್ಥ " ರೆಂದು ಪ್ರಖ್ಯಾತರಾದರು. 
ಇವರ ಕಾಲದಲ್ಲಿ ಶ್ರೀ ರಾಯರ ಮಠವು ಸರ್ವತೋಮುಖ ಅಭಿವೃದ್ಧಿ ಹೊಂದಿತು. 
ಇವರು " ನ್ಯಾಯಬೋಧಿನೀ ಪರಿಚಯಮ್ " ಯೆಂಬ ಗ್ರಂಥವನ್ನು ರಚಿಸಿದ್ದು, ಇವರ ಕಾಲ ಕ್ರಿ. ಶ. 1903 - 1912. 
ಆಗಿನ ಕಾಲದ ಪ್ರಸಿದ್ಧ ಪಂಡಿತರಾದ ಶ್ರೀಮುಷ್ಣಂ ಗೋಪಾಲಾಚಾರ್ಯರು; ಶ್ರೀ ಸುಬ್ಬರಾಮಾಚಾರ್ಯರು; ಶ್ರೀ ಎಲತ್ತೂರು ಕೃಷ್ಣಾಚಾರ್ಯರು; ತೋತಾದ್ರಿ ಮಠದ ವಿದ್ವಾಂಸರೇ ಮೊದಲಾದವರು ಶ್ರೀ ಶ್ರೀಗಳವರ ವಿದ್ವತ್ತನ್ನು ಮೆಚ್ಚಿದ್ದರು. 
ಆಶ್ವಯುಜ ಶುದ್ಧ ದಶಮೀ ( ವಿಜಯದಶಮೀ ) ಶ್ರೀ ಸುಕೃತೀಂದ್ರತೀರ್ಥರ ಆರಾಧನಾ ಮಹೋತ್ಸವ!! 
ಶ್ರೀ ಸುಕೃತೀಂದ್ರತೀರ್ಥರ ಮೂಲ ವೃಂದಾವನ ನಂಜನಗೂಡಿನಲ್ಲಿದೆ. 
ಶ್ರೀ ಸುಶೀಲೇಂದ್ರತೀರ್ಥರು... 
ಸುವಿದ್ವತ್ಕಮಲೋಲ್ಲಾಸ 
ಮಾರ್ತಾಂಡಂ ಸುಗುಣಾಕರಮ್ ।
ಸಚ್ಚಾಸ್ತ್ರಾಸಕ್ತಹೃದಯಂ 
ಸುಕೃತೀಂದ್ರ ಗುರು೦ಭಜೇ ।।
ಶ್ರೀ ಲಕುಮೀಶಾಂಕಿತ ಕುರುಡಿ ರಾಘವೇಂದ್ರಾಚಾರ್ಯರು., ಮಂತ್ರಾಲಯ...... 
ಶ್ರೀ ಸುಕೃತೀಂದ್ರರ 
ನೀ ಸೇವಿಸೆ ವೈಕುಂಠ ।
ವಾಸುದೇವ ಒಲಿವ ।। ಪಲ್ಲವಿ ।।
ಹೇಸಿ ಭವ ಕ್ಲೇಶ ರಾಶಿ ಬಿಡಿಸಿ ।
ಶ್ರೀ ಸಮೀರರ ಶಾ
ಸ್ತ್ರ ಜ್ಞಾನವಿತ್ತು ।
ದೋಷಿ ಜನರ ಸಂಗ ಬಿಡಿಸುತ ।
ತೋಷದಿಂದಲಿ ಸತತ ರಕ್ಷಿಪ ।। ಅ ಪ ।।
ಮಧ್ವ ಶಾಸ್ತ್ರದ ಶ್ರೀ 
ಉದ್ಧಾಮ ಬುಧರೆನಿಸಿ ।
ಗೆದ್ದು ದುರ್ವಾದಿಗಳ ।
ಮುದ್ದು ವೇಣುಗೋಪಾಲಾರ್ಯರೆನ್ನಿ ।
ಶ್ರದ್ಧೆಯಲಿ ಶ್ರೀ ಸುಪ್ರಜ್ಞೇ೦ದ್ರರ ।
ಪದ್ಮಕರ ಸಂಭೂತರೆನಿಸುತ ।
ಗದ್ದುಗೆಯಲ್ಲಿ ಮೆರೆದು 
ಮಾನ್ಯರಾದ ।। ಚರಣ ।।
ಕ್ಷೇತ್ರ ಶ್ರೀಮುಷ್ಣ ಶ್ರೀರಂಗ 
ಕುಂಭಕೋಣ ।
ಯಾತ್ರಾದಿಗಳ ಚರಿಸಿ ।
ಸೂತ್ರಭಾಷ್ಯ ಸುಧೆಯ ಬೋಧಿಸಿ ।
ಸೂತ್ರನಾಮಕ ಒಲಿಮೆಗಳಿಸಿ ।
ಮೂರ್ತಿ ಮೂಲರಾಮನ್ನ ಅರ್ಚಿಸಿ ।
ಕೀರ್ತಿಯ ಪಡೆದು 
ಮಹಾತ್ಮರಾದ ।। ಚರಣ ।।
ಸಕಲ ವೈಭವದಿಂದ 
ಸುಶೀಲೇಂದ್ರತೀರ್ಥರಿಗೆ ।
ನಿಖಿಳ ವಿಧಿಲಿ ಪಟ್ಟಗಟ್ಟಿ ।
ಸಕಲ ವೈಷ್ಣವ ಮಂತ್ರ ಬೋಧಿಸಿ ।
ಮುಕುತಿಗಾಗಿ ಪಥವ ತೋರಿಸಿ ।
ಸುಖ ಮುನಿಯ ಹೃದಯವಾಸ ಶ್ರೀ -
ಲಕುಮೀಶನ ದಯದಿ 
ಬಾಳೆಂದು ।। ಚರಣ ।। 
 by ಆಚಾರ್ಯ ನಾಗರಾಜು ಹಾವೇರಿ
      ಗುರು ವಿಜಯ ಪ್ರತಿಷ್ಠಾನ
******