Thursday 30 September 2021

prahladavarada harivittalaru dasaru ಪ್ರಹ್ಲಾದವರದ ಹರಿವಿಠ್ಠಲರು ದಾಸರು

 ..

Name: Prahladavarada harivittalaru

Period:

Ankita: prahladavarada shreehari vittala


ಶ್ರೀ ಪ್ರಹ್ಲಾದವರದ ಹರಿವಿಠ್ಠಲರು 

ಹೆಸರು : ಶ್ರೀ ರಾಘವೇಂದ್ರರಾಯರು., ಬೆಂಗಳೂರು

ಅಂಕಿತ : ಪ್ರಹ್ಲಾದ ವರದ ಶ್ರೀ ಹರಿ ವಿಠ್ಠಲ

ಶ್ರೀ ರಾಘವೇಂದ್ರರಾಯರು ಉಭಯ ಭಾಷಾ ಕೋವಿದರು. ಇವರು ತಮ್ಮ ಇಡೀ ಜೀವಮಾನದಲ್ಲಿ ಒಂದು ಸಲವಾದರೂ ಏಕಾದಶೀ ವ್ರತ ಮತ್ತು ಏಕಾದಶೀ ಜಾಗರಣೆಯನ್ನು ಬಿಟ್ಟವರಲ್ಲ.

ಶ್ರೀ ರಾಘವೇಂದ್ರರಾಯರು ಶ್ರೀ ವಿಜಯರಾಯರ ಮತ್ತು ಶ್ರೀ ಮಂತ್ರಾಲಯ ಪ್ರಭುಗಳ ಅಂತರಂಗ ಭಕ್ತರು.

ಶ್ರೀ ರಾಯರ ಸ್ತೋತ್ರ ಪದ...

ರಾಗ : ದರ್ಬಾರಿ        ತಾಳ : ಆದಿ

ಬಾರೋ ಗುರು ರಾಘವೇಂದ್ರ -

ಸದ್ಗುಣಸಾಂದ್ರ ।। ಪಲ್ಲವಿ ।।

ಭಾವಜನಯ್ಯನ ಭಾವದಿ ಭಜಿಸುವ ।

ಕೋವಿದರರಸನೇ ಕಾಯೋ -

ದೇವನ ದೂತ ।। ಚರಣ ।।

ಸುಧೀಂದ್ರ ಯತಿವರ -

ಕರಕಮಲಜಕಂಜ ।

ಕುಧರಜ ತಟ ವಾಸ -

ಪರಮೇತೇಜ: ಪುಂಜ ।। ಚರಣ ।।

ಪ್ರಹ್ಲಾದ ವರದ ಶ್ರೀ-

ಹರಿ ವಿಠ್ಠಲಗೆ ಪ್ರೀಯ ।

ಆಹ್ಲಾದವೆಮಗಿತ್ತು ನಿರುತ 

ಪೊರೆಯೋ ಜೀಯ್ಯಾ ।। ಚರಣ ।।


ಇನ್ನೊಂದು ಪದ್ಯದಲ್ಲಿ...


ರಾಗ : ಕಾಂಬೋಧಿ     ತಾಳ : ಝ೦ಪೆ


ಧೀರೇಂದ್ರ ಸುಕರಾರ್ಚಿತ -

ಗುರು ರಾಘವೇಂದ್ರ ।। ಪಲ್ಲವಿ ।।


ನೀರದಪ್ರಕಾಶರವರ -

ವೃಂದಾವನಸ್ಥಿತ ।। ಅ ಪ ।।


ಸುಂದರ ಬದರಿಯಿಂದ -

ತಂದ ಶಿಲೆಯಿಂದ ।

ಚೆಂದಾಗಿ ರಚಿಸಿದ -

ವೃಂದಾವನದಿ ನಿಂತ ।। ಚರಣ ।।


ಮಂತ್ರಾಲಯಕೆ ಮಿಗಿಲು -

ತಂತ್ರವ ನಡೆಸುವ ।

ಯಂತ್ರವಾಹಕನ ದಾಸ -

ಶ್ರೀ ಗುರುರಾಜ ।। ಚರಣ ।।


ಮಂದಸ್ಮಿತಯುತ -

ಸುಂದರ ವಿಗ್ರಹ ।

ಮಂದ ಜನಕೆ ಆ-

ನಂದದಾಯಕ ।। ಚರಣ ।।


ತ್ರಿಷಣ ರೂಪನೆ ನಿತ್ಯ 

ಸುಫಲದಾಯಕನಾಗಿ ।

ಚಪಲತೆಯನು ಕಳೆದು -

ಅಪವರ್ಗ ಫಲವೀವೋ ।। ಚರಣ ।।

ನಿನ್ನ ಅಂತರ್ಯಾಮಿ 

ಘನ್ನ ಮಾರುತನೊಳು ।

ಚೆನ್ನಾಗಿ ಸೀತಾರಾಮರನ್ನ -

ನೀ ತೋರಿಸೋ ।। ಚರಣ ।।


ಫಣಿರಾಜ ಶಯನಗೆ -

ಮಣಿದು ಬಿನ್ನೈಸಿ ನಿತ್ಯ ।

ಬಣಗು ಸೇವಕರನ್ನು ಕ್ಷಣ -

ಬಿಡದೆಲೆ ಪೊರೆ ।। ಚರಣ ।।


ಪ್ರಹ್ಲಾದ ವರದ ಶ್ರೀ -

ಹರಿ ವಿಠ್ಠಲನ ಭಜಕ ।

ಸಹ್ಲಾದಾಗ್ರಜನಾದ -

ಪ್ರಹ್ಲಾದನವತಾರನೇ ।। ಚರಣ ।।

***


bhupati vittala dasa kakhandaki ramacharya 1987 bilagi karteeka shukla chaturdashi ಭೂಪತಿವಿಠ್ಠಲ ದಾಸರು



Name: Bhupati vittala dasaru Kakhandaki Ramacharyaru

Punyasmarane place: Bilagi (bagalkot dist)

karteeka shukla chaturdashi


ಭೂಪತಿ ವಿಠಲರು ( ಕಾಖಂಡಕಿ ರಾಮಾಚಾರ್ಯರು )

ಭೂಪತಿ ವಿಠ್ಠಲ ಎಂಬುದು ಶ್ರೀ ರಾಮಾಚಾರ್ಯ ಕಾಖಂಡಕಿಯವರ ಅಂಕಿತ. ಇವರು ಬಾಗಲಕೋಟ ಜಿಲ್ಲೆ, ಬೀಳಗಿ ತಾಲೂಕಿನ ಗಲಗಲಿ ಎಂಬ ಗ್ರಾಮದವರು. ಗಲಗಲಿಯಲ್ಲಿ ಇವರೇ ಸ್ಥಾಪಿಸಿದ ಶ್ರೀ ಪ್ರಸನ್ನ ರಾಘವೇಂದ್ರ ಮಹಾಸ್ವಾಮಿಗಳ ಮಠವಿದೆ. ಈ ವರ್ಷ ಈ ಮಠಕ್ಕೆ ೫ ದಶಕದ ಸಂಭ್ರಮ. 

***

call for details r p kulkarni 9480724256 


25 Nov 2015- ಬೀಳಗಿ: ಭೂಪತಿವಿಠ್ಠಲ ಅಂಕಿತದಿಂದ ಭಕ್ತಿಗೀತೆ, ತ್ರಿಪದಿಗಳನ್ನು ರಚಿಸಿದ ಅಲ್ಲದೇ ಸ್ವಾತ್ಯಂತ್ರಹೋರಾಟಗಾರರೂ ಆಗಿದ್ದ ಸ್ಥಳೀಯ ಪಂ, ರಾಮಾಚಾರ್ಯ ಕಾಖಂಡಕಿ (ಭೂಪತಿ ವಿಠ್ಠಲ) ಯವರ 28 ನೇಯ ಪುಣ್ಯಸ್ಮರಣೆ ಕಾರ್ಯಕ್ರಮ ಇಂದು ಬುಧವಾರ ತಾಲೂಕಿನ ಗಲಗಲಿ ಸ್ಥಳೀಯ ರಾಘವೇಂದ್ರಸ್ವಾಮಿಗಳ ಮಠದಲ್ಲಿ ನಡೆಯಲಿದೆ. ಕಾರ್ಯಕ್ರಮ ನಿಮಿತ್ಯ ಬೆಳೆಗ್ಗೆ ಅಲಂಕಾರ, ಅಭಿಷೇಕ, ಪೂಜೆ, ಉಪನ್ಯಾಸ ಮಧ್ಯಾನ್ಹ ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ಸುಮಂಗಲೆಯರಿಂದ ಭೂಪತಿವಿಠ್ಠಲ ರ ಭಜನೆ ಏರ್ಪಡಿಸಲಾಗಿದೆ ಎಂದು ರಾ.ತ.ಮಿ.ಮಂಡಳಿ ಅಧ್ಯಕ್ಷ ಮೋಹನನಾಯ್ಕ ಹಬ್ಬು ತಿಳಿಸಿದ್ದಾರೆ.

****



tandesripati vittalaru dasaru pushya shukla dwiteeya 1890 harapanahalli pushya shukla dwiteeya ತಂದೆ ಶ್ರೀಪತಿ ವಿಠ್ಠಲರು

 ಶ್ರೀ ತಂದೆ ಶ್ರೀಪತಿ - 1

" ದಿನಾಂಕ : 15.01.2021 ಪುಷ್ಯ ಶುದ್ಧ ದ್ವಿತೀಯಾ ಶುಕ್ರವಾರ - ಶ್ರೀ ರಾಯರ ಕಾರುಣ್ಯಪಾತ್ರರು ಶ್ರೀ ತಂದೆ ಶ್ರೀಪತಿ ವಿಠ್ಠಲರು"

" ಪ್ರಾಸ್ತಾವಿಕ "

ಕನ್ನಡ ಸಾಹಿತ್ಯದ 2000 ವರ್ಷಗಳ ಸುದೀರ್ಘ ಇತಿಹಾಸದಲ್ಲಿ " ಹರಿದಾಸ ಸಾಹಿತ್ಯ " ಒಂದು ಪ್ರಮುಖ ಘಟ್ಟ. 

ಹೆಚ್ಚು ಕಡಿಮೆ 8 ಶತಮಾನಗಳ ವ್ಯಾಪ್ತಿಯ ಈ ಭಕ್ತಿ ಸಾಹಿತ್ಯ ಪ್ರಕಾರವನ್ನು ಸುಮಾರು 6500 ಜನ ಹರಿದಾಸರು ತಮ್ಮ ಬಗೆ ಬಗೆಯ ರಚನೆಯಿಂದ ಮುಖ್ಯವಾಗಿ ಕೀರ್ತನೆಗಳಿಂದ ಸಮೃದ್ಧವಾಗಿಸಿದ್ದಾರೆ. 

ಈ ಕೀರ್ತನೆಗಳು ಇಂದಿಗೂ ಜನಪ್ರಿಯವಾಗಿ ಪ್ರಚಾರದಲ್ಲಿವೆ. 

ಕೆಲವು ಮುಖ್ಯ ಹರಿದಾಸರುಗಳ ಹೆಸರುಗಳು ಮನೆ ಮಾತಾಗಿದೆ. 

ಸಾಹಿತ್ಯಕ ಶ್ರೀಮಂತಿಕೆಯಿಂದ ಮಾತ್ರವಲ್ಲದೆ ದ್ವೈತ ಸಿದ್ಧಾಂತವನ್ನು ಅಧ್ಯಯನ ಮಾಡುವ ದೃಷ್ಟಿಯಿಂದಲೂ " ಹರಿದಾಸ ಸಾಹಿತ್ಯ " ಮಹತ್ವದ್ದಾಗಿದೆ. 

ಕರ್ನಾಟಕ ಸಂಗೀತಕ್ಕೆ ಹರಿದಾಸರ ಕೀರ್ತನೆಗಳ ಕೊಡುಗೆಯಂತೂ ಅಸಾಧಾರಣವಾದುದು. 

" ಶ್ರೀ ತಂದೆ ಶ್ರೀಪತಿ ವಿಠ್ಠಲರ ಸಂಕ್ಷಿಪ್ತ ಚರಿತ್ರೆ "

ಹೆಸರು : ಶ್ರೀ ವೆಂಕಟದಾಸರು 

ಉಪದೇಶ ಗುರುಗಳು : ಶ್ರೀ ಶ್ರೀಪತಿವಿಠ್ಠಲರು

ಜನ್ಮ ಸ್ಥಳ : ಹರಪನಹಳ್ಳಿ 

ಕಾಲ : ಕ್ರಿ ಶ 1800 - 1890 

ಅಂಕಿತ : ಶ್ರೀ ತಂದೆ ಶ್ರೀಪತಿ ವಿಠ್ಠಲ

" ಶ್ರೀ ಶ್ರೀಪತಿ ವಿಠ್ಠಲರ ಸ್ತುತಿ " .... 

ರಾಗ : ಪಂತುವರಾಳಿ    ತಾಳ : ಅಟ್ಟ 

ನಂಬೆಲೋ ಪಾದ ಪೊಂದಲೋ । ಮನದ ।

ಹಂಬಲ ನೀಡುವ ಶ್ರೀಪತಿದಾಸರ ।। ಪಲ್ಲವಿ ।।

ಶ್ರೀನಿಕೇತನ ಧಾರುಣೀಪತಿ ದಶರಥ । 

ಕ್ಷೋಣಿಪ ಜಾತ ವಿಠ್ಠಲ ದಾಸರ ।

ಮೇಣು ಕಾರುಣ್ಯವ ಪಡೆದು ಧರೆಯೊಳು । ಮ ।

ದ್ದಾನೆಯಂತೆ ಸಂಚಾರ ಮಾಡುವರನ್ನ ।। ಚರಣ ।।

ವೇದಗಿರೀ೦ದ್ರ ಧಾರುಣಿ ಪಾಲಕ ಬಾಲಾ ।

ಮೇದಿನಿ ಬೇಡಿದ ಬುಧ ರಾಮ ।

ಯಾದವ ಸರ್ವಜ್ಞ ಹಯಮೊಗನಾದ ।

ಅನಾದಿ ಮೂರುತಿಯ ಸಂತತ ಧೇನಿಪರನ್ನ ।। ಚರಣ ।।

ಇಂದ್ರ ವಿಜಯ ಗೋಪಾಲ ಮೋಹನ ।

ವೇಣು ಚಂದದಿ ಶ್ರೀ ವೇದವ್ಯಾಸ । ರಾಘ ।

ವೇಂದ್ರದಾಸಾಚಾರ್ಯರಿಂದ ಪಾಲಿತ ಎನ್ನ ।

ತಂದೆ ಶ್ರೀಪತಿ ವಿಠ್ಠನ ದಾಸಾರ್ಯರ ನಂಬಿರೋ ।। ಚರಣ ।।

ಈ ಮೇಲ್ಕಂಡ ಪದ್ಯದಲ್ಲಿ ತಮ್ಮ ಗುರುಗಳಾದ ಶ್ರೀ ಶ್ರೀಪತಿವಿಠ್ಠಲರನ್ನು ಸ್ತುತಿಸಿದ್ದಾರೆ. 

ಇದರಲ್ಲಿ " ಇಂದ್ರ " ಯೆಂದರೆ " ಶ್ರೀ ನಾರದಾಂಶ ಶ್ರೀ ಪುರಂದರದಾಸರು  ಮತ್ತು ಶ್ರೀ ಭೃಗು ಮಹರ್ಷಿಗ ಅವತಾರರಾದ ವಿಜಯದಾಸರು, ಶ್ರೀ ವಿಘ್ನೇಶ್ವರ ಅಂಶ ಸಂಭೂತರಾದ ಶ್ರೀ ಗೋಪಾಲದಾಸರು, ಶ್ರೀ ಮಾಂಡವ್ಯ ಮಹರ್ಷಿಗಳ ಅಂಶಜರಾದ ಶ್ರೀ ಮೋಹನದಾಸರು!!

" ವೇಣು " ಯೆಂದರೆ " ಶ್ರೀ ಪಂಗನಾಮದ ತಿಮ್ಮಣ್ಣದಾಸರು!!!

ಶ್ರೀ ವೇದವ್ಯಾಸರದೇವರು ಮತ್ತು ಶ್ರೀ ರಾಘವೇಂದ್ರತೀರ್ಥರು!!!!

" ದಾಸಾಚಾರ್ಯ " ಯೆಂದರೆ " ಶ್ರೀ ಭೂವರಾಹವಿಠ್ಠಲರು ". 

ಮುಂತಾದವರಿಂದ ತಮ್ಮ ತಂದೆಯವರಾದ ಶ್ರೀ ಶ್ರೀಪತಿವಿಠ್ಠಲರುಪಾಲಿತರಾಗಿದ್ದರೆಂದು ಖಚಿತ ಪಡಿಸಿದ್ದಾರೆ. 

" ಶ್ರೀ ರಾಯರ ಸ್ತುತಿ "

ಶ್ರೀ ತಂದೆ ಶ್ರೀಪತಿ ವಿಠ್ಠಲರು ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಬಂದು ತುಂಗಭದ್ರೆಯಲ್ಲಿ ಮಿಂದು ಆಹ್ನೀಕ ಮುಗಿಸಿಕೊಂಡು ಶ್ರೀ ರಾಯರ ದರ್ಶನಕ್ಕೆ ಬಂದು ಶ್ರೀ ರಾಯರ ಮೂಲ ಬೃಂದಾವನದ ಮುಂದೆ ನಿಂತು ಆನಂದ ಭಾಷ್ಪ ಸುರಿಸುತ್ತಾ ಶ್ರೀ ರಾಯರ ಮಹಿಮೆಯನ್ನು ಹೃದಯ ತುಂಬಿ... 

ರಾಗ : ಮೋಹನ ತಾಳ : ರೂಪಕ 

ವೃಂದಾವನದಲಿ ರಾಜಿಪ 

ಯತಿವರನ್ಯಾರೇ ಪೇಳಮ್ಮಯ್ಯಾ ।। ಪಲ್ಲವಿ ।।

ಇಂದಿರೆಯರಸನ ಚಂದದಿ ಭಜಿಸುವ ।

ಕುಂದು ರಹಿತ ರಾಘವೇಂದ್ರ ಕಾಣಮ್ಮಾ ।। ಅ ಪ ।।

ಮಂತ್ರಾಲಯ ಕೃತ ಮಂದಿರ-

ನೆನಿಸುವನ್ಯಾರೆ ಪೇಳಮ್ಮಯ್ಯಾ ।

ತಂತ್ರದೀಪಿಕಾ ಮುಖ ಗ್ರಂಥಕರ್ತ 

ನೆನಿಸುವನ್ಯಾರೇ ಪೇಳಮ್ಮಯ್ಯಾ ।

ಕಂತುಪಿತನ ಸತ್ಪಂಥದಿ 

ಭಜಿಸುವನ್ಯಾರೆ ಪೇಳಮ್ಮಯ್ಯಾ ।

ಚಿಂತಿತ ಫಲದ ದುರಂತಶಕ್ತ 

ಜಯವಂತನೀತ 

ಅಘಶಾಂತ ಕಾಣಮ್ಮಾ ।। ಚರಣ ।।

ಶ್ರೀ ಸುಧೀಂದ್ರ ಕರಕಮಲಜ 

ನೆನಿಸುವನ್ಯಾರೇ ಪೇಳಮ್ಮಯ್ಯಾ ।

ತಾ ಸ್ವಪ್ನದಿ ಮಂತ್ರಾಕ್ಷತೆ 

ಕೊಡುತಿಹನ್ಯಾರೇ ಪೇಳಮ್ಮಯ್ಯಾ ।

ಆಶುಗಮನಮತ ಸ್ಥಾಪಕ 

ನೆನಿಸುವನ್ಯಾರೇ ಪೇಳಮ್ಮಯ್ಯಾ ।

ಭಾಸುರಜ್ಞಾನಿ ವಿಶೇಷವಾಗಿ ಹರಿ 

ದಾಸ್ಯವ ಪಡೆದ 

ಯತೀಶ ಕಾಣಮ್ಮಾ ।। ಚರಣ ।।

ಧಾರುಣಿಪತಿಸುತೆ ತೀರದಿ 

ನೆಲೆಸಿಹನ್ಯಾರೆ ಪೇಳಮ್ಮಯ್ಯಾ ।

ಸಾರಿದ ಭಾಜಕರ ಬಾರಿಬಾರಿಗೆ 

ಪೊರೆಯುವನ್ಯಾರೆ ಪೇಳಮ್ಮಯ್ಯಾ ।

ಕಾರುಣ್ಯನಿಧಿ ಅಪಾರ 

ಮಹಿಮ ನಿವನ್ಯಾರೆ ಪೇಳಮ್ಮಯ್ಯಾ ।

ನಾರಾಯಣ ತಂದೆ ಶ್ರೀಪತಿ -

ವಿಠ್ಠಲನ ಆರಾಧಿಪ 

ರಾಘವೇಂದ್ರ ಕಾಣಮ್ಮಾ ।। ಚರಣ ।।


ಮತ್ತೊಂದು ಕೃತಿ ಹೀಗಿದೆ.... 

ರಾಗ : ಮಾರವಿ  ತಾಳ : ಅಟ್ಟ 

ಗುರುವೇ ಸ್ವಾಶ್ರಿತ 

ಸುರತರುವೆ ನಿಮ್ಮ ।

ಚರಣಕ್ಕೆ ನಮಿಸುವೆನೋ ।

ಕರುಣದಿ೦ದೊಲಿದ್ಯೆ೦ನ 

ದುರಿತ ನಿಚಯ ।

ಪರಿಹರಿಸಿ ಕೈವಿಡಿದು ಉ-

ದ್ಧರಿಸೋ ರಾಘವೇಂದ್ರಾ ।। ಪಲ್ಲವಿ ।।

ಮೂಢನಾದರೂ ಸೇವೆ 

ಮಾಡಲವನಭೀಷ್ಟ ।

ನೀಡುವ ಗುರುಗಳೆಂದು 

ಬೇಡಿಕೊಂಬೆ ದಯ ।

ಮಾಡಿ ನೀ ನೋಡು ಮಾ-

ತಾಡು ಬೇಡಿದದು ।

ನೀಡು ರಾಘವೇಂದ್ರ 

ಗುರುವೇ ।। ಚರಣ ।।

ಶ್ರೀ ಸುಧೀಂದ್ರ ಕರ-

ಕಮಲಜಾ ಸತತ । ರ ।

ಮೇಶ ಪದರಾರಾಧಕ 

ಲೇಸಾಗಿ ಎನಗೆ ।

ಶ್ರೀ ಹರಿ ಸಂರಕ್ಷ-

ಕನೆಂಬ  ಈ । ಸು ।

ನಿಶ್ಚಯ ಮತಿಕೊಟ್ಟು 

ಪಾಲಿಸು ಜಗದ್ಗುರುವೇ ।। ಚರಣ ।।

ಇಂದಿಗೆ ಎನಗೆ ಐದನೇ 

ಬೃಹಸ್ಪತಿಯು ತಾ । 

ಬಂದದರಿದೆ ಫಲವೋ ।

ಸಂದೇಹ್ಯವು ಇಲ್ಲ 

ನಿಮ್ಮಯ ಶ್ರೀ ಪದಾಬ್ಜ ।

ಸಂದರುಶನ ಯೆನ-

ಗಾಯ್ತು ಧನ್ಯನಾದೆ ।। ಚರಣ ।।

ಯತಿಕುಲ ರತುನ 

ಭಾರತಿಪತಿ ನುತ । ರಘು ।

ಪತಿ ಸೇವಾರತ 

ಚಿತ್ತನೊ ಸತತ ಎನಗೆ । ಶ್ರೀ ।

ಪತಿ ತದ್ದಾಸರ ಪದ 

ಸ್ಮೃತಿ ಮಾಡುವಂತೆ । ಸ ।

ನ್ಮತಿಯ ಪಾಲಿಸು 

ಜಗದ್ಗುರುವೇ ।। ಚರಣ ।।

ಕುಂದದೆ ವರ ತುಂಗ 

ತೀರದಲ್ಲಿರುವ । ಬ ।

ಲ್ಛಂದ ಮಂತ್ರಾಲಯದಿ ।

ವೃಂದಾವನದಲ್ಲಿ 

ಶೋಭಿಪೆ ಯತಿವರ । ಕೇ ।

ಳ್ತಂದೆ ಶ್ರೀಪತಿ ವಿಠ್ಠಲನ್ನ 

ತೋರೆನಗೆ ಮದ್ಗುರುವೇ ।। ಚರಣ ।।

***

ಶ್ರೀ ತಂದೆ ಶ್ರೀಪತಿ - 2

ಶ್ರೀ ಕ್ಷೇತ್ರ ಮಂತ್ರಾಲಯದಿಂದ ಶ್ರೀ ತಂದೆ ಶ್ರೀಪತಿ ವಿಠ್ಠಲರು ಗಾನ ಬ್ರಹ್ಮನಾದ ಶ್ರೀ ಪಾಂಡುರಂಗನ ದರ್ಶಾನಾಕಾಂಕ್ಷಿಗಳಾಗಿ ಶ್ರೀ ಕ್ಷೇತ್ರಕ್ಕೆ ದಿಗ್ವಿಜಯ ಮಾಡಿ ಶ್ರೀ ಪಾಂಡುರಂಗನ ದರ್ಶನ ಮಾಡಿ ಸ್ತೋತ್ರ ಮಾಡಿದ್ದಾರೆ.

ರಾಗ : ಸಂದಡಿ    ತಾಳ : ಆದಿ

ಪಾಂಡುರಂಗ ತ್ವತ್ಪಾದ

ತೋರಿಸಯ್ಯಾ ।

ಕರುಣದಿ ಪಿಡಿಯಯ್ಯಾ ।

ಪುಂಡರೀಕ ಮುನಿ

ವರದ ನಮಿಪೆ ನಿನಗೇ ।

ನೀ ತ್ವರಿತದಿಲೆನಗೇ ।। ಪಲ್ಲವಿ ।।

ವನಜ ಭವಾದಿ

ಸಮಸ್ತ ಸುರವ್ರಾತಾ ।

ವಂದಿತ ಶ್ರೀನಾಥಾ ।

ಪ್ರಣತಾರ್ತಿಹರನೆ

ಕಾಮಿತ ಫಲದಾತಾ ।

ಮುನಿಗಣ ಸಂಧ್ಯಾತಾ ।।

ನೆನೆವ ಜನರ ಮನ-

ದೊಳಗಿಹ್ಯ ವಿಖ್ಯಾತ ।

ಭುವನಾಧಿ ನಾಥಾ ।

ಘನ ಮಹಿಮ ಒಲಿದು

ಲಾಲಿಸೆನ್ನ ಮಾತಾ ।

ದಯಮಾಡಿ ತ್ವರಿತಾ ।। ಚರಣ ।।

ಸುರಚಿರ ಮಹಿಮನೆ

ಭಜ ಕಾಮಧೇನೂ ।

ವಸುದೇವ ಸೂನೂ ।

ಧರಣಿಯೊಳಗೆ ನಮ್ಮ

ಹಿರಿಯರ ಉದ್ಧಾರ ।

ಮಾಡಿದ ಘಂಭೀರಾ ।।

ಧೊರೆ ನಿಮ್ಹೊರತು

ಅನ್ಯರನ ನಾನರಿಯೆ ।

ಕೇಳೆಲೊ ನರಹರಿಯೇ ।

ಕರಕರಿ ಭವದೊಳು

ಬಿದ್ದು ಬಾಯಿ ಬಿಡುವೆ ।

ಪೊರಿಯೆಂದು

ನುಡಿವವೇ ।। ಚರಣ ।।

ಬಂದ ಜನರ

ಭವಸಾಗರ ಪರಿಮಿತೀ ।

ತೋರಿಸುತಿಹ್ಯ ರೀತೀ ।

ಛಂದದಿಂದ

ಕರವಿಟ್ಟು ಕಟಿಗಳಲ್ಲಿ ।

ಈ ಸುಕ್ಷೇತ್ರದಲ್ಲಿ ।।

ನಿಂದಿಹ್ಯ ಭೀಮಾ

ತೀರ ಚಂದ್ರಭಾಗಾ ।

ದಲ್ಲಿಹ್ಯ ವೈಭೋಗಾ ।

ತಂದೆ ಶ್ರೀಪತಿ -

ವಿಠ್ಠಲಸುಖ ಸಿಂಧೋ ।

ಅನಾಥ ಬಂಧೋ ।। ಚರಣ ।।

ಎಂದು ಶ್ರೀ ಪಾಂಡುರಂಗನನ್ನು ಸ್ತುತಿಸಿ ಅಲ್ಲಿಂದ ಶ್ರೀ ತಿರುಮಲ ಚೆಲುವ ದರ್ಶನಕ್ಕಾಗಿ ಸಪ್ತಗಿರಿಗೆ ದಿಗ್ವಿಜಯ ಮಾಡಿಸಿದರು.

ಶ್ರೀ ಶ್ರೀನಿವಾಸನನ್ನು ಕಂಡರೆ ಹರಿದಾಸರಿಗೆ ಎಲ್ಲಿಲ್ಲದ ಪ್ರೀತಿ. ಅಂತೆಯೇ ಶ್ರೀ ಶ್ರೀನಿವಾಸನನ್ನು ನೋಡಿದ ಶ್ರೀ ತಂದೆ ಶ್ರೀಪತಿ ವಿಠ್ಠಲರು....

ರಾಗ : ಕಾಂಬೋಧಿ  ತಾಳ : ಆದಿ

ವೆಂಕಟೇಶ ಭವ

ಸಂಕಟ ಪರಿಹರಿಸೋ ।

ನಿನ್ನವರವನೆನಿಸೋ ।

ಪಂಕಜಾಕ್ಷ ಅಕಳಂಕ

ಮಹಿಮ ಹರಿಯೇ ।

ಆಶ್ರಿತರಿಗೆ ಧೊರಿಯೇ ।। ಪಲ್ಲವಿ ।।

ನಾನಾ ಜನುಮಗಳಲಿ

ತೊಳಲಿ ಬಂದೆ ।

ನೀನೆ ಗತಿಯಂದೇ ।

ಜ್ಞಾನಾಜ್ಞಾನ ಕೃತಾ-

ಖಿಳ ದುಷ್ಕರ್ಮ ।

ಅದರಂತೆ ಸುಕರ್ಮಾ ।।

ನಾನಾ ಪರಿಯಲ್ಲಿರು

ತಿರಲನುಭವಿಸೀ ।

ದುರ್ವಿಷಯವ ಬಯಸೀ ।

ಹೀನ ವೃತ್ತಿಯಲಿ ಚರಿಸಿ

ದಿನವು ಕಳದೆ ।

ಈ ಪರಿಯಿಂದುಳದೇ ।। ಚರಣ ।।

ಧಾರುಣಿ ಧನ ವನಿತಾದಿ

ವಿಷಯಗಳಲ್ಲಿ ।

ಕಾಮುಕ ತನದಲ್ಲೀ ।

ಚಾಲುವರಿದೆ ನೀತಿ

ಮಾರ್ಗ ಕಾಣದೆ ನಾನು ।

ಉಪಾಯವಿನ್ನೇನೂ ।।

ದಾರಿಗೆ ಪೇಳೆಲೊ

ಎನ್ನ ವರ್ತಮಾನ ।

ನೀನಿನಿದಾನಾ ।

ತೋರಿಸಿ ಎನ್ನನು

ಬಿಡದೆ ಪಾಲಿಸಪ್ಪಾ ।ಎ

ಣಿಸಾದಿರು ತಪ್ಪಾ ।। ಚರಣ ।।

ಪಾಪಾತ್ಮಕ ನಾನಾ-

ದರೇನೋ ಪೇಳೋ ।

ಪಾವನ ನೀ ಕೇಳೋ ।

ಶ್ರೀ ಪದ್ಮಜ ಭವ

ಪ್ರಮುಖ ನಿರ್ಜರೇಶಾ ।

ನಾ ನಿನ್ನಗೆ ದಾಸಾ ।।

ನೀ ಪಾಲಿಸದಿರೆ ಗತಿ-

ಯಾರೆಲೋ ಮುಂದೆ ।

ಕಾರುಣ್ಯದಿ ತಂದೇ ।

ಶ್ರೀಪತಿ ವಿಠ್ಠಲಕರವ

ಪಿಡಿಯೋ ವೇಗಾ ।

ನೀನುದ್ಧರಿಸೀಗಾ ।। ಚರಣ ।।

ಮತ್ತೊಂದು ಪದದಲ್ಲಿ ಶ್ರೀ ತಂದೆ ಶ್ರೀಪತಿ ವಿಠ್ಠ ರು....

ರಾಗ : ಮೋಹನ  ತಾಳ : ಅಟ್ಟ

ಶ್ರೀಶಾ ಉದ್ಧರಿಸುವ

ಅಶೇಷ ಪಾಲಕ । ಕರು ।

ಣಾ ಸಮುದ್ರನೇ

ಶ್ರೀನಿವಾಸಾ ಕೃಷ್ಣಾ ।

ದೋಷ ದೂರನೇ

ನಿಜ ದಾಸರ ಸನ್ಮನ ।

ತೋಷಕ ಕಲಿ

ಕೃತ ದೋಷ ।

ನಾಶಕ ಸದ್ಗುಣ

ಸುವನಧೀ ।।

ವೀಶಗಮನ ಫ-

ಣೀಶಶಾಯಿ । ಸು ।

ರೇಶ ಭಕುತರ

ಪೋಷಕನೆ । ತ ।

ದ್ದಾಸ ಜನ ಸಹ-

ವಾಸ ಕೊಡು । ಮಹಿ ।

ದಾಸ ಈ ಭವ

ಕ್ಲೇಶ ಕಳೆದು ।। ಪಲ್ಲವಿ ।।

ಕಮಲಾ ರಮಣನೇ

ಹೃತ್ಕಮಲಸ್ಥ ತವ ಪಾದ ।

ಕಮಲ ನಂಬಿದೆ ಯೆನ್ನ

ಶಮಲಾ ಕಳೆದೂ ।

ಕಮಲಜ ಪಿತ ನಿನ್ನ

ವಿಮಲ ಗುಣವನಿತ್ಯಾ ।

ದಮದಿಂದ ಸಂಯುಕ್ತವಾದ ।

ಶಮದಿಂದ ಗ್ರಂಥೋಕ್ತ

ದಿವ್ಯ ಕ್ರಮದಿಂದಾ ।

ಮಾನಸದಿ ಧ್ಯೇನಿಪ

ವಿಪುಲ ಸಂಪದಾ ।

ಯನಗೆ ಕೊಡು ಯಂದು

ಪ್ರಾರ್ಥಿಸುವೆ ನಿನಗೆ ।

ನಮಿಪ ಜನರಿಗೆ ಬದಿಗ-

ನ್ಯೆಂತೆಂದೂ ಈ ಪರಿಯ ತಿಳಿದು ।

ನಮಿಸುವೆನು ನೀ

ಯನಗೆ ನಿಜ ಬಂಧು ।

ಆನಂದ ಸಿಂಧು ಸುಮನಸರ

ಹೃತ್ಕುಮುದವೆನಿಸಿ ।

ಅಮಿತ ಕ್ರಿಯವನು

ಮಾಡಿಸುವಿ ಸಂಯಮಿ ಜನ ವರ ।

ಅಮರ ರಿಪುಕುಲ ದಮನ

ಯನಗೆ ಸುಮನವಿತ್ತು ।। ಚರಣ ।।

ಸಾರ ಹೃದಯರ ಉದ್ಧಾರ

ಮಾಡುವಿ ನೀ । ಉ ।

ದಾರ ಯಾದವ

ಕುಲ ವೀರಾ ಧೀರಾ ।

ಚಾರು ಸನ್ಮಹಿಮಾನೇ

ಮಾರ ಜನಕನೇ

ಸೃಷ್ಟಿ ಕಾರಣ । ಸಂ ।

ಸಾರ ವನಧಿಗೆ ತಾರಣ ।

ಕರಿರಾಜ ರಿಪು ನಿವಾರಣಾ

ನಾ ನಿನ್ನ ಚರಣಕೆ ।

ಸಾರಿದೆನು ಮುರವೈರಿ

ನರಹರಿಯೇ ಉದ್ಧವ ।

ವರದ ಸುಕುಮಾರ

ಅನುಪಮ ಅಮಿತ ಮಹ ।

ಸಿರಿಯೇ ಇಂದ್ರಾತ್ಮಜಗೆ

ನೀ ಸಾರಥಿ ವಿಬುಧೇಶರಿಗೆ ।

ಧೊರಿಯೇ ರಜನೀಶ ಕುಲಜನೆ ।

ವಾರಿಚರ ಕಿಟ

ಮನುಜ ಮೃಗ ಬಲಿ ।

ವೈರಿ ಸ್ವರ್ಗದ ವನ್ಹಿಗನೇ ನಿಜ ।

ವೀರ ಪಾರ್ಥ

ಪಸುಗತ ಕಲ್ಕಿಯೇ ।

ಸಾರ ತತ್ತ್ವ ವಿಚಾರ

ಮತಿ ಕೊಡು ।। ಚರಣ ।\

ಮಂದಜಾನಸ ವಾಯು

ನಂದಿವಾಹನ । ವಿಹ ।

ಗೇಂದ್ರ ಪ್ರಮುಖ ಸುರ

ವೃಂದ ವಂದ್ಯಾ ।

ಇಂದಿರೆ ರಮಣನೇ

ಮಂದಾಕಿನಿಯ ಪಿತ ।

ಯಿಂದೆನ್ನ ಬಿನ್ನಪವ ಕೇಳಿ ।

ಮಂದನ್ನ ದುಷ್ಕಾರ್ಯ ಕಾರಣ ।

ನಿಂದೆನ್ನ ದೂರಿ ಕೃತನ್ನಾ ।

ಚಂದದಿಂದಲೀ ಮಾಡುವನೆ

ನೀನೆ ನಿನ್ಹೊರತು ಇನ್ನು ।

ಪೊಂದಿದವರನು ಪೊರೆವವರನಾ

ಕಾಣೆ ಅಜಾಮಿಳ ಪ್ರಮುಖ ।

ರಾನಂದ ಬಡಿಸಿದ ಪರಮ

ಪ್ರಭು ನೀನೆ । ಅರ ।

ವಿಂದ ನೇತ್ರನೇ ಹಿಂದೆ ಮುಂದೆ

ಇಂದು ನೀ ಗತಿಯೆಂದು ।

ನಂಬಿದೆ ಕರವ ಪಿಡಿಯೋ

ತಂದೆ ಶ್ರೀಪತಿ ವಿಠ್ಠಲಈ ಭವ ।

ಸಿಂಧುವಿನ ಗತಿಯೆಂದು

ಶೀಘ್ರದಿ ।। ಚರಣ ।।

ಶ್ರೀ ತಂದೆ ಶ್ರೀಪತಿ ವಿಠ್ಠಲರು, ನಾವು ಪಡುವ ಈ ಬವಣೆಗೆ ಯಾವುದೋ ಜನ್ಮದ ಅಪರಾಧ ಕಾರಣವಾಗಿರಬೇಕು ಎಂಬುದನ್ನು ಸೂಚಿಸುತ್ತಾ ನಮ್ಮ ಪರವಾಗಿ ಶ್ರೀ ದಾಸಾರ್ಯರು ತಿರುಮಲೆಯ ಚೆಲುವನಾದ ಶ್ರೀ ಶ್ರೀನಿವಾಸನಲ್ಲಿ ಮೊರೆ ಹೋಗುತ್ತಾರೆ.

***

ಶ್ರೀ ತಂದೆ ಶ್ರೀಪತಿ - 3

ಉದರ ಪೋಷಣೆಗಾಗಿ ಕಂಡ ಕಂಡವರನ್ನು ಯಾಚಿಸುತ್ತಾ - ಬಣ್ಣಿಸುತ್ತಾ ಸಾಗಿದ ಅಪರಾಧವನ್ನು ಮನ್ನಿಸಲು ನಮ್ಮ ಪರವಾಗಿ ಹೀಗೆ ಪ್ರಾರ್ಥಿಸಿದ್ದಾರೆ.

ರಾಗ : ಅರಬಿ   ತಾಳ : ಆದಿ

ನಾನಪರಾಧಿ ಖರೆ ಪರಂತು ।

ನೀನುದ್ಧರಿಸೋ ದಯಾಳೋ ।। ಪಲ್ಲವಿ ।।

ಧನದಾಕಾಂಕ್ಷಿಯಲಿಂದ

ನಾ ದುರ್ಜನರ ।

ಮನಿ ಮನಿಗೆ ಪೋಗಿ ।

ಘನತರ ಸ್ತೋತ್ರವ

ಮಾಡಿ ನಾ ಬಲು ।

ವಿನಯದಿಂದ ಚೆನ್ನಾಗಿ ।।

ಜನ ಮೆಚ್ಚುವ ಪರಿಯಲ್ಲಿ

ಕಥಾದಿಗಳನು ।

ದಿನದಲಿ ಅನುವಾಗಿ ।

ಇನಿತು ಮಾಡೆ

ಅವ ಕೊಟ್ಟದಕೆನ್ನಯ ।

ಮನಸಿಗೆ ಹರುಷವು

ಪುಟ್ಟಿದ ಪ್ರಯುಕ್ತ ।। ಚರಣ ।।

ವರಸ್ತ್ರೀ ನೋಟದ

ಪರಸ್ತ್ರೀಯರ ।

ಸುರಚಿರ ಕಚ

ಕುಚ ನೋಡಿ ।

ಮರುಳಾಗೆವರಂಗ

ಸಂಗ ಬಯಸೀ ।

ಪರಿಪರಿ

ಸೊನ್ನಿಯ ಮಾಡಿ ।।

ಕರ ವಶವಾಗಲು

ಅವರೊಳಗೆ ಬೆರೆತು ।

ಹರುಷದಿ ಸವಿ ಮಾತಾಡೀ ।

ಸ್ಮರನಾಟದಿ ಮೈ-

ಮರೆದುನಾ ತ್ವಚ್ಚರಣ ।

ಸ್ಮರಣೆ ಮಾಡದ

ಪ್ರಯುಕ್ತ ।। ಚರಣ ।।

ಪರಲೋಕಕೆ ಪೋದರು

ನಮ್ಹಿರಿಯರು ।

ಹಿರಿಯತನವೆನಗೆ ಬಂತೂ ।

ಹಿರಿಯರೆಲ್ಲೆನಗೆ

ಕಿರಿಯರಾದರು ।

ಅರುಹುವರೆನಗೆನ್ನಿ೦ತೋ ।।

ಅರುಹಿದ ಕಾಲಕು

ಚಿತ್ತೈಸದೆ । ಧಿ ।

ಕ್ಕರಿಸುವೆ ನಾ

ನಿನ್ನೆಂತೋ ।

ಸರಿ ಇಲ್ಲನಗೆಂದರಿತು

ಗರ್ವದಲಿ ।

ದುರುಳರ ಸಂಗದಲ್ಲಿದ್ದ

ಪ್ರಯುಕ್ತ ।। ಚರಣ ।\

ಸದ್ವಿದ್ವಾಂಸರ

ಕಂಡರೆ ನಾ ಬಲು ।

ಬದ್ಧ ಮತ್ಸರನು ಜೀಯ್ಯಾ ।

ಮಧ್ವಶಾಸ್ತ್ರ

ಪ್ರವಚನವೆಂಬೋ ।

ಸುದ್ಧಿಯು ಎನಗಿಲ್ಲವಯ್ಯಾ ।।

ಇದ್ದರೇನು ಸಾರ್ಥ

ಕವೋ ಈ । ದು ।

ರ್ಬುದ್ಧಿ ಪೋಗಲಿಲ್ಲಯ್ಯಾ ।

ಶುದ್ಧ ಭಾವದಲಿ

ಮೋಕ್ಷಪ್ರದ । ಅನಿ ।

ರುದ್ಧ ನಿನ್ನ ಮೊರೆ ಹೋಗದ

ಪ್ರಯುಕ್ತ ।। ಚರಣ ।।

ಕೊಟ್ಟದ್ದಕ್ಕೆ ಸಂತುಷ್ಟನಾಗದೇ ।

ಸಿಟ್ಟಿಲಿ ಬೈವೆನೂ ನಾನೂ ।

ಭ್ರಷ್ಟನು ಪಾಪಿಷ್ಟನೋ ಬಲ್ಕೇ ।

ಳ್ದುಷ್ಟ ಬುದ್ಧಿ ಇನ್ನೇನೋ ।।

ಕೃಷ್ಣನೇ ಸರ್ವೋತ್ಕೃಷ್ಟನೇ ನಮ್ಮಾ ।

ರ್ಯಿಷ್ಟ ಫಲಪ್ರದ ನೀನೂ ।

ಶಿಷ್ಟ ಜನೇಪ್ಸೀತಾ ।

ತಂದೆ ಶ್ರೀಪತಿ ।ವಿಠ್ಠಲ

ಕೇಳ್ ಬುದ್ಹಿ ಪರಾಕು ।। ಚರಣ ।।

ತಿರುಪತಿಯಿಂದ ಶ್ರೀ ದಾಸಾರ್ಯರು ಘಟಿಕಾಚಲಕ್ಕೆ ಬಂದು ಶ್ರೀ ನೃಸಿಂಹನನ್ನು ಮತ್ತು ಶ್ರೀ ಮುಖ್ಯಪ್ರಾಣದೇವರನ್ನೂ ಸ್ತುತಿಸಿದ್ದಾರೆ.

ಭಾರತೀಶ ಮದ್ಭಾರ ನಿನ್ನದೈಯ್ಯಾ ।

ಕರುಣದಿ ಪಿಡಿ ಕೈಯ್ಯಾ ।। ಪಲ್ಲವಿ ।।

ಪೂರೈಸೆನ್ನ ಮನೋಭಿಲಾಷ ಗುರುವೇ ।

ಆಶ್ರಿತ ಸುರತರುವೇ ।। ಅ ಪ ।।

.... ನಡುಮನೆಯೆಂಬ

ದ್ವಿಜನಾ ಗೃಹದಲ್ಲೀ ।

ಅವತರಿಸಿದಿ ಅಲ್ಲೀ ।

ಮೃಡ ಸರ್ವೋತ್ತಮ

ಹರಿಯೇ ತಾನೆಂದು ।

ವಿಶ್ವ ಮಿಥ್ಯವೆಂದೂ ।।

ನುಡಿದ ಜನರ

ಮತಗಳನೆ ನಿರಾಕರಿಸೀ ।

ಸಚ್ಛಾಸ್ತ್ರವ ರಚಿಸೀ ।

ಪೊಡವಿಗೊಡೆಯ ತಂದೆ-

ಶ್ರೀಪತಿ ವಿಠ್ಠಲನ ।

ಪೂಜಿಪರೋ ಘಾನ್ನಾ ।। ಚರಣ ।।

" ಶಿಷ್ಯರು "

ಶ್ರೀ ಶ್ರೀನಿಧಿ ವಿಠಲರು

" ಉಪ ಸಂಹಾರ "

ಶ್ರೀ ಶ್ರೀಪತಿ ವಿಠಲ ದಾಸರಿಂದ " ತಂದೆ ಶ್ರೀಪತಿ ವಿಠ್ಠಲ " ಎಂಬ ಅಂಕಿತವನ್ನು ಪಡೆದು ಪದ - ಸುಳಾದಿ - ಪದ್ಯಗಳನ್ನು ರಚಿಸಿದರು.

ಶ್ರೀ ತಂದೆ ಶ್ರೀಪತಿ ವಿಠ್ಠಲರ ಕವಿತೆಗಳಲ್ಲಿ ಗುರುಗಳಾದ ಶ್ರೀ ಶ್ರೀಪತಿ ವಿಠಲ ದಾಸರ ಜಾಡು, ಜಾಣ್ಮೆಗಳು ಮೈದೋರಿದೆ.

ಸಂಸ್ಕೃತದ ಉದ್ಧಾಮ ಪಂಡಿತರಾಗಿದ್ದರೂ, ತಿರುಳುಗನ್ನಡ ಶೈಲಿಯಲ್ಲಿ ಮನೋಜ್ಞ ಕೀರ್ತನೆಗಳನ್ನು ಕಟ್ಟುವುದು ಶ್ರೀ ತಂದೆ ಶ್ರೀಪತಿ ವಿಠ್ಠಲರ ವೈಶಿಷ್ಟ್ಯವಾಗಿದೆ.

ದ್ರಾಕ್ಷಾ ಪಾಕದಲ್ಲಿ ಸಂಸ್ಕೃತದ ಪುರಾಣ, ಉಪನಿಷತ್ತುಗಳ ಸಾರವನ್ನೆಲ್ಲಾ ಕನ್ನಡೀಕರಿಸುವ ಹದ ಹವಣಗಳು ಶ್ರೀ ತಂದೆ ಶ್ರೀಪತಿ ವಿಠ್ಠಲರಲ್ಲಿ ಅನ್ಯಾದೃಶ್ಯವಾಗಿದೆ.

ಹರಿಯ ಸ್ಮರಣೆ ಮಾಡೋ

ನಿರಂತರ ।। ಪಲ್ಲವಿ ।।

ಪರಗತಿಗಿದು ನಿರ್ಧಾರವೋ ।। ಅ ಪ ।।

... ಬಂಧಕ ಮೋಚಕ

ತಂದೆ ಶ್ರೀಪತಿ । ವಿಠ್ಠ ।

ಲೆಂದು ಸುದೃಢ ಭಾವದಲಿ

ನಿರಂತರ ।। ಚರಣ ।।

ಹೀಗೆ ಶ್ರೀ ತಂದೆ ಶ್ರೀಪತಿ ವಿಠ್ಠರು ಪದ - ಪದ್ಯ - ಸುಳಾದಿಗಳನ್ನು ರಚಿಸಿ ಹರಿದಾಸ ಸಾಹಿತ್ಯಕ್ಕೆ ತಮ್ಮ ಅತ್ಯಮೂಲ್ಯವಾದ ಕೊಡುಗೆಯನ್ನು ಕೊಟ್ಟು ಕ್ರಿ ಶ 1890 ರ ಪುಷ್ಯ ಶುದ್ಧ ದ್ವಿತೀಯಾ ವೈಕುಂಠ ಯಾತ್ರೆ ಮಾಡಿದರು.

ಹರಪನ್ಹಳ್ಳಿ ನಿವಾಸಸ್ಥ೦

ದಾಸ ವೆಂಕಟ ಸಂಜ್ಞಕಂ ।

ಶ್ರೀಪತ್ಯಾರ್ಯ ಪಾದಾಬ್ಜಾಲಿಂ

ವಂದೇಹಂ ತಂದೆ ಶ್ರೀಪತಿಂ ।।

by ಆಚಾರ್ಯ ನಾಗರಾಜು ಹಾವೇರಿ

     ಗುರು ವಿಜಯ ಪ್ರತಿಷ್ಠಾನ

****

year 2021

ಹರಪನಹಳ್ಳಿ ನಿವಾಸಸ್ಥಂ

ದಾಸ ವೆಂಕಟ ಸಂಜ್ಞಕಮ್/

ಶ್ರೀಪತ್ಯಾರ್ಯ ಪಾದಾಬ್ಜಾಲಿಮ್

ವಂದೇಹಮ್

ತಂದೆ ಶ್ರೀಪತಿಮ್//


ಹರಪನಹಳ್ಳಿ ವಾಸ್ತವ್ಯರು, 19ನೇ ಶತಮಾನದವರು, ಗದ್ವಾಲದಾಸರಾದ ಶ್ರೀಪತಿವಿಠಲರ ಶಿಷ್ಯರು, ದೀಪದ ಅಣ್ಣಯಾಚಾರ್ಯರ (ಶ್ರೀನಿಧಿವಿಠಲ) ಗುರುಗಳು, ಶ್ರೀ  ರಾಯರ ಪರಮಭಕ್ತರು, ವೃಂದಾವನದಲಿ ರಾಜಿಪ ಯತಿವರನ್ಯಾರೆ ಪೇಳಮ್ಮಯ್ಯಾ, ಶ್ರೀಶಾ ಉದ್ಧರಿಸೊ ಅಶೇಷಪಾಲಕ, ಪಾಂಡುರಂಗ ತ್ವತ್ಪಾದ ಪಾಲಿಸಯ್ಯಾ ಕರುಣದಿ ಪಿಡಿಕೈಯಾ ಇತ್ಯಾದಿ ಸೊಗಸಾದ ಕೃತಿಗಳನ್ನು ನಮಗೆ ನೀಡಿದ, 90 ವರ್ಷಗಳ ಪೂರ್ಣ ಜೀವನವನ್ನು ಪರಮಾತ್ಮನ, ಮತ್ತು  ದಾಸ ಸಾಹಿತ್ಯದ ಸೇವೆಗೆ ಸಲ್ಲಿಸಿದ ಶ್ರೀ ಹರಪನಹಳ್ಳಿ  ವೆಂಕಟದಾಸರ ಅರ್ಥಾತ್ ಶ್ರೀ ತಂದೆಶ್ರೀಪತಿವಿಠಲರ  ರಾಧನಾ  ಮಹೋತ್ಸವವೂ ಇಂದು

***

vanamali mishra 1720 triyugapur ವನಮಾಲಿ ಮಿಶ್ರರು

 " ಶ್ರೀ ಮಧ್ವ ದೀಕ್ಷಾ - 1 "

" ಶ್ರೀಮನ್ಮಧ್ವಮತ ಸಿದ್ಧಾಂತ ದೀಕ್ಷಾಬದ್ಧರು ಶ್ರೀ ವನಮಾಲಿ ಮಿಶ್ರರು "

ಉತ್ತರ ಭಾರತದಲ್ಲಿ ಮಧ್ವ ಮತದ ಅಭ್ಯುದಯ ಹಾಗೂ ಪ್ರಸಾರಗಳಿಗೆ ಕಾರಣರಾದ ಕೆಲವು ವಿದ್ವದ್ವೈಷ್ಣವ ಚೇತನಗಳಲ್ಲಿ ಶ್ರೀ ವನಮಾಲಿ ಮಿಶ್ರರೂ ಒಬ್ಬರು. 

ವೃಂದಾವನದ ಹತ್ತಿರ ತ್ರಿಯುಗ ಪುರದಲ್ಲಿ ಸುಪ್ರತಿಷ್ಠಿತವಾದ ಭಾರದ್ವಾಜ ಗೋತ್ರದ ಒಂದು ಬ್ರಾಹ್ಮಣ ಕುಟುಂಬದಲ್ಲಿ ಶ್ರೀ ವನಮಾಲಿ ಮಿಶ್ರರು ಜನಿಸಿದರು. 

ಶ್ರೀ ವನಮಾಲಿ ಮಿಶ್ರರ ಕಾಲ : ಕ್ರಿ ಶ 1650 - 1720

ಶ್ರೀ ವನಮಾಲಿ ಮಿಶ್ರರು ಬಿಹಾರ ಮಾಧ್ವ ಮತಾನುಯಾಯಿಗಳಾದ ಗಯಾವಾಡರ ವಂಶದರಾಗಿರಬಹುದೆಂದು ವಿದ್ವಾಂಸರು ತರ್ಕಿಸಿದ್ದಾರೆ. 

ಉತ್ತರಾದಿ ಮಠದ ಶ್ರೀ ವಿದ್ಯಾಧೀಶ ಶ್ರೀಪಾದಂಗಳವರ ಕಾಲದಿಂದಲೇ ಗಯಾ ಕ್ಷೇತ್ರದ ವಿಷ್ಣು ಪಾದದ ಅರ್ಚಕರು ಮಾಧ್ವರಾಗಿದ್ದೂ ಎಲ್ಲರಿಗೂ ತಿಳಿದ ವಿಷಯ. 

ಶ್ರೀ ವನಮಾಲಿ ಮಿಶ್ರರು " ನಿಂಬಾರ್ಕ ಮತಾನುಯಾಯಿ " ಗಳೆಂದು - ಶ್ರೀ ದಾಸಗುಪ್ತರಂಥಾ ವಿಮರ್ಶಕ ಪಂಡಿತರು ಬರೆದದ್ದು ಸೋಜಿಗದ ಸಂಗತಿಯಾಗಿದೆ. 

ಶ್ರೀ ವನಮಾಲಿ ಮಿಶ್ರರು ಬರೆದ ಅಥವಾ ಶ್ರೀ ವನಮಾಲಿ ಮಿಶ್ರರ ಮೇಲೆ ಗ್ರಂಥಗಳನ್ನು ನೋಡೊದರೆ - ಶ್ರೀ ವನಮಾಲಿ ಮಿಶ್ರರು..... 

 " ಅಪ್ಪಟ ಮಾಧ್ವರೆಂಬುದು " 

ಯಾರಿಗಾದರೂ ತಿಳಿಯುವಂಥಾ ಮಾತು. 

" ಗ್ರಂಥಗಳು "

1. ಲೀಲಾ ಪುರುಷೋತ್ತಮ ಶ್ರೀ ಕೃಷ್ಣ 

2. ಶ್ರುತಿ ಸಿದ್ಧಾಂತ ಸಂಗ್ರಹಃ 

3. ಮಧ್ವ ಮುಖಾಲಂಕಾರ 

4. ಗೀತಾ ಗೂಢಾರ್ಥ ಚಂದ್ರಿಕಾ 

5. ವೇದಾಂತ ಸಿದ್ಧಾಂತ ಸಂಗ್ರಹಃ 

6. ಮಧ್ವಾಧ್ವ ಕಂಟಕೋದ್ಧಾರ 

7. ತರಂಗಿಣೀ ಸೌರಭ 

8. ನ್ಯಾಯಾಮೃತ ಸೌಗಂಧ್ಯಾ 

ನ್ಯಾಯಾಮೃತಕ್ಕೆ ವ್ಯಾಖ್ಯಾನವಾಗಿಯೂ - ಅದ್ವೈತಸಿದ್ಧಿಗೆ ಖಂಡನವಾಗಿಯೂ.... 

ಶ್ರೀ ವಿಜಯೀ೦ದ್ರತೀರ್ಥರ ವಿದ್ಯಾ ಶಿಷ್ಯರೂ - ಶ್ರೀ ವ್ಯಾಸರಾಜ ಮಠದ ಶಿಷ್ಯರೂ ಆದ ವಿದ್ವಾನ್ ಶ್ರೀ ವ್ಯಾಸರಾಮಾಚಾರ್ಯರು [ ತರಂಗಿಣೀ ರಾಮಾಚಾರ್ಯರು ].....

 " ನ್ಯಾಯಾಮೃತ ತರಂಗಿಣೀ " 

ಯೆಂಬ ಗ್ರಂಥವನ್ನು ರಚಿಸಿದರು. 

" ನ್ಯಾಯಾಮೃತ ತರಂಗಿಣೀ " ಗೆ ಖಂಡನವಾಗಿ ಶ್ರೀ ಬ್ರಹ್ಮಾನಂದ ಸರಸ್ವತಿಗಳು " ಗುರು ಮತ್ತು ಲಘು ಬ್ರಹ್ಮಾನಂದೀಯಾ " ಯೆಂಬ ಗ್ರಂಥವನ್ನು ರಚಿಸಿದರು - ಇವು ಅದ್ವೈತಸಿದ್ಧಿಗೆ ವ್ಯಾಖ್ಯಾನವಾಗಿಯೂ ಮತ್ತು ನ್ಯಾಯಾಮೃತ ತರಂಗಿಣೀಗೆ ಖಂಡನಾ ರೂಪವಾಗಿದೆ. 

ಇದಾದನಂತರ ಶ್ರೀ ವನಮಾಲಿ ಮಿಶ್ರರು.....

" ಗುರು ಬ್ರಹ್ಮಾನಂದೀಯಾ " ಕ್ಕೆ ಖಂಡನಾ ರೂಪವಾಗಿ.....

" ನ್ಯಾಯಾಮೃತ ಸೌಗಂಧ್ಯ " 

ಮತ್ತು 

" ಲಘು ಬ್ರಹ್ಮಾನಂದೀಯಾ " ಕ್ಕೆ.....

" ತರರಂಗಿಣೀ ಸೌರಭ "  

ಯೆಂಬ ಅತ್ಯದ್ಭುತ ಗ್ರಂಥಗವನ್ನು ರಚಿಸಿ ಶ್ರೀಮನ್ಮಧ್ವ ಸಿದ್ಧಾಂತಕ್ಕೆ ವೈಶಿಷ್ಟ್ಯ ಪೂರ್ಣಾವಾದ ಸೇವೆಯನ್ನು ಸಲ್ಲಿಸಿದ್ದಾರೆ.  

ಮೇಲ್ಕಂಡ ಶ್ರೀ ವನಮಾಲಿ ಮಿಶ್ರರಿಂದ ರಚಿತವಾದ ಗ್ರಂಥಗಳನ್ನು ನೋಡಿದರೆ.... 

ಶ್ರೀ ವನಮಾಲಿ ಮಿಶ್ರರಿಗಿರುವ " ಮಧ್ವ ಸಿದ್ಧಾಂತ ದೀಕ್ಷೆಯನ್ನೂ - ಮತ ದಾರ್ಢ್ಯವನ್ನೂ - ಶ್ರದ್ಧಾ ಜಾಡ್ಯವನ್ನೂ ಎತ್ತಿ ತೋರುತ್ತವೆ. 

ವಾಗ್ವಿಭೂತಿಗಳಿಂದ ದಕ್ಷಿಣದ ಕೊಂಕಣ ಪಟ್ಟಯ ಕರಾವಳಿ ಪ್ರಾಂತದಲ್ಲಿ ಜನಿಸಿದ..... 

 " ಶ್ರೀ ಮಧ್ವ ಮಹಾ ಮುನಿಗಳ ದ್ವೈತ ಸಿದ್ಧಾಂತವು ಬಂಗಾಲ ಉಪ ಸಾಗರದ ವರೆಗೂ ತನ್ನ ತತ್ತ್ವವಾದದ ಕಹಳೆಯನ್ನು ಮೊಳಗಿಸಿ ವಿಶ್ವ ಪ್ರತಿಷ್ಠಿತ ಸೌಕರ್ಯ " ಒದಗಿಸಿತು. 

by ಆಚಾರ್ಯ ನಾಗರಾಜು ಹಾವೇರಿ  

     ಗುರು ವಿಜಯ ಪ್ರತಿಷ್ಠಾನ

*****

lakumeesha dasaru kurudi raghavendracharyaru karthika bahula dwadashi 2006 ಲಕುಮೀಷ ದಾಸರು



Name: Lakumeesha Dasaru 

Period: 1851 - 1929

Ankita: lakumeesha


ಶ್ರೀ ಲಕುಮೀಶ ದಾಸರು ( ಶ್ರೀ ಕುರುಡಿ ರಾಘವೇಂದ್ರಾಚಾರ್ಯರು )

"ಸಂಕ್ಷಿಪ್ತ ಮಾಹಿತಿ "

" ಶ್ರೀ ಶ್ಯಾಮಸುಂದರದಾಸರ - ಶ್ರೀ ರಾಯರ ಕಾರುಣ್ಯ ಪಾತ್ರರು ಶ್ರೀ ಲಕುಮೀಶ ದಾಸರು "

ಹೆಸರು : ಶ್ರೀ ಕುರುಡಿ ರಾಘವೇಂದ್ರಾಚಾರ್ಯ ಜೋಷಿ

ತಂದೆ : ಶ್ರೀ ಬಂಡಾಚಾರ್ಯ ಜೋಷಿ

ತಾಯಿ : ಸಾಧ್ವಿ ನರಸಮ್ಮ

ದೊಡ್ಡಪ್ಪ : ಶ್ರೀ ಮಾನವೀ ಗುಂಡಾಚಾರ್ಯರು ಜೋಷಿ ( ಶ್ರೀ ಶ್ಯಾಮಸುಂದರದಾಸರು )

ಜನನ : ಶಾಲಿವಾಹನ ಶಕೆ 1851 ಕ್ರಿ ಶ 1929

ಸಂವತ್ಸರ ; ಶ್ರೀ ವಿಭವ

ಮಾಸ : ಶ್ರಾವಣ

ತಿಥಿ : ಶುದ್ಧ ದಶಮೀ

ನಕ್ಷತ್ರ : ಆರಿದ್ರಾ

ರಾಶಿ : ಮಿಥುನ

ಜನ್ಮ ಸ್ಥಳ : ಕುರುಡಿ

ವಿದ್ಯೆ : ಜ್ಯೋತಿಷ್ಯ ಮತ್ತು ಪೌರೋಹಿತ್ಯ

ವಿದ್ಯಾ ಗುರುಗಳು : ಶ್ರೀ ಗುಂಜಳ್ಳಿ ವಾದೀಂದ್ರಾಚಾರ್ಯ

ಕಲೆ :

ಶ್ರೀ ಕುರುಡಿ ರಾಘವೇಂದ್ರಾಚಾರ್ಯರು ಮೈಸೂರು ಶ್ರೀ ವಾಸುದೇವಾಚಾರ್ಯರಲ್ಲಿ ವಿಗ್ರಹ ಮಾಡುವ ಕುಸುರಿ ಕೆಲಸವನ್ನು ಕಲಿತರು. ಇವರು ಕೈಯಲ್ಲಿ ತಯಾರಾದ ವಿಗ್ರಹಗಳ ವಿವರ ಹೀಗಿದೆ....

೧. ಶ್ರೀ ಕುರುಡಿ ರಾಘವೇಂದ್ರಾಚಾರ್ಯರ ಕೈಯಿಂದ ಲಿಂಗಸೂಗೂರಿನ ಶ್ರೀ ವರದೇಂದ್ರತೀರ್ಥರ ವೃಂದಾವನಕ್ಕೆ ಶ್ರೀ ಗೋರೆಬಾಳ ಹನುಮಂತರಾಯರು ( ಶ್ರೀ ಸುಂದರವಿಠಲರು ) ಬೆಳ್ಳಿ ಕವಚ ನಿರ್ಮಾಣ ಮಾಡಿಸಿದರು.

೨. ನಂದ್ಯಾಲ ಶ್ರೀ ರಾಯರ ಮಠಕ್ಕೆ ಪಂಚಲೋಹದ ಶ್ರೀ ಪ್ರಹ್ಲಾದರಾಜರ ವಿಗ್ರಹ

೩. ಯಾದಗಿರಿ ಶ್ರೀ ರಾಘವೇಂದ್ರಸ್ವಾಮಿಗಳ ವೃಂದಾವನಕ್ಕೆ ಬೆಳ್ಳಿ ಕವಚ ನಿರ್ಮಾಣ

೪. ಗೋನವಟ್ಲ ಶ್ರೀ ಗೋಪಾಲಕೃಷ್ಣನಿಗೆ ಬೆಳ್ಳಿ ಕವಚ ನಿರ್ಮಾಣ

೫. ಶ್ರೀ ಭೂ ಸಹಿತ ಶ್ರೀನಿವಾಸ ದೇವರುಗಳ ವಿಗ್ರಹಗಳನ್ನೂ, ಆ ವಿಗ್ರಹಕ್ಕೆ ಬೆಳ್ಳಿ ಕವಚವನ್ನೂ ನಿರ್ಮಾಣ ಮಾಡಿದ್ದಾರೆ. ಈ ವಿಗ್ರಹಗಳು ಶ್ರೀ ಅರ್ಚಕ ರಾಘವೇಂದ್ರಾಚಾರ್ಯರ ಮನೆಯಲ್ಲಿವೆ.

ಜೊತೆಯಲ್ಲಿ ದೇವರ ಪೆಟ್ಟಿಗೆ, ಬಾಳೆಕಂಭ, ತೋರಣ ಶಿಲಾ ನಾಮ ಪಲಕಗಳು, ಶಿಲಾ ನಾಗಗಳು ( ಕಲ್ಲಿನ ನಾಗಪ್ಪ ) ಮುಂತಾದವುಗಳನ್ನು ತಯಾರು ಮಾಡುತ್ತಿದ್ದರು.  ಹಾಗೆಯೆ ಚಿತ್ರ ಕಲೆಯೂ ಶ್ರೀ ಆಚಾರ್ಯರಿಗೆ ಕರಗತವಾಗಿತ್ತು.

" ಶ್ರೀ ಶ್ಯಾಮಾಸುಂದರ ದಾಸಾರ್ಯರ ಸಂಪರ್ಕ "

ಶ್ರೀ ಕುರುಡಿ ರಾಘವೇಂದ್ರಾಚಾರ್ಯರ ಮಾತಲ್ಲಿ....

ಸುಮಾರು ಶ್ರೀ ಆಚಾರ್ಯರಿಗೆ ೧೯ ವರ್ಷ ವಯಸ್ಸು. ನನ್ನ ( ಶ್ರೀ ಆಚಾರ್ಯರು ) ದೊಡ್ಡಪ್ಪನವರಾದ ಶ್ರೀ ಮಾನವಿ ಗುಂಡಾಚಾರ್ಯರ ಸಹವಾಸದಲ್ಲಿ ಪ್ರತಿ ವರ್ಷ ಸುಗ್ಗಿಗೆ ಕುರುಡಿಯಲ್ಲಿ ಕೂಡಿ ಇರುವ ಸನ್ನಿವೇಶವು. ನಮ್ಮ ಕಕ್ಕ ಪೂಜ್ಯ ಶ್ರೀ ಕೃಷ್ಣಾಚಾರ್ಯ ಜೋಷಿ ಇವರಲ್ಲಿ ಇರುವ ಸನ್ನಿವೇಶವು ದೇವರ ದಯೆಯಿಂದ ಒದಗುತ್ತಿತ್ತು.

ಒಂದುಸಲ ಶ್ರೀ ಶ್ಯಾಮಸುಂದರದಾಸರ ಅಪೇಕ್ಷೆ ಮೇರೆಗೆ ನಮ್ಮ ಕಕ್ಕ ಶ್ರೀ ಕೃಷ್ಣಾಚಾರ್ಯರು ಶ್ರೀ ಶ್ಯಾಮಸುಂದರ ದಾಸರ ಜೊತೆಯಲ್ಲಿ ನನ್ನನ್ನು ಬಲ್ಲಟಗಿಗೆ ಕಳುಹಿಸಿಕೊಟ್ಟರು.

ಮಾರ್ಗ ಮಧ್ಯದಲ್ಲಿ ಮಾನವಿ ಮುನಿಪುಂಗವರಾದ ಶ್ರೀ ಸಹ್ಲಾದಾಂಶ ಜಗನ್ನಾಥದಾಸರ ದರ್ಶನ ಮಾಡಿಸಿ ಬಲ್ಲಟಗಿಗೆ ಕರೆದೊಯ್ದರು. ಅಲ್ಲಿ ಅವರ ಮನೆಯಲ್ಲಿದ್ದ " ಶ್ರೀ ಹರಿಕಥಾಮೃತಸಾರ " ಪುಸ್ತಕ ನೋಡುವ ಕಾಲದಲ್ಲಿ ನನ್ನನ್ನು ಕರೆದು " ಫಲಶ್ರುತಿ ಪದ್ಯ " ವನ್ನು ತೋರಿಸಿ ನೀನು ಪ್ರತಿದಿನ " ಮಂಗಳಾಚರಣ ಸಂಧಿ, ಕಕ್ಷಾ ತಾರತಮ್ಯ ಸಂಧಿ " ಗಳನ್ನೂ ಭಕ್ತಿಯಿಂದ ಪಾರಾಯಣ ಮಾಡು. ಅದರಿಂದ ನಿನಗೆ ಉಂಟಾಗುವ ಫಲ ಈಗ ತಿಳಿಸಲಾರೆ. ನಿನ್ನ ಸ್ವಾನುಭವಕ್ಕೆ ಬರುತ್ತದೆಂದು ತಿಳಿಸಿದರು. ಅದರಂತೆ ನಾನು ಪ್ರತಿದಿನ " ಶ್ರೀ ಹರಿಕಥಾಮೃತಸಾರ " ಪಾರಾಯಣ ಮಾಡುತ್ತಿದೆ.

" ಶ್ರೀ ಗಣಧಾಳ ಪಂಚಮುಖಿ ಪ್ರಾಣದೇವರ ಪರಮಾನುಗ್ರಹ "

ಒಂದುಸಲ ಗಣಧಾಳದಲ್ಲಿ ನನ್ನ ( ಶ್ರೀ ಕುರುಡಿ ರಾಘವೇಂದ್ರಾಚಾರ್ಯರು  ) ಸೋದರ ಮಾವಂದಿರೂ, ಶ್ರೀ ಪಂಚಮುಖಿ ಪ್ರಾಣದೇವರ ಅರ್ಚಕರೂ ಆದ ಶ್ರೀ ಶ್ಯಾಮಾಚಾರ್ಯರ ಮನೆಯಲ್ಲಿ ನಾನು ದೇವರ ನಾಮಗಳನ್ನು ಹಾಡಿದೆ.

ಆಗ ನನ್ನ ಕೊನೆಯ ತಮ್ಮನಾದ ಚಿ ।। ಪ್ರಹ್ಲಾದನು....

ಅಣ್ಣಾ! ನೀನೇ ಹಾಡುಗಳನ್ನು ರಚನೆ ಮಾಡಿ ಹಾಡಬಹುದು. ರಚನೆ ಮಾಡು ಎಂದು ಹೇಳಿದ!

ನನ್ನ ಅಲ್ಪಮತಿಗೆ ಶಾಸ್ತ್ರಾಧ್ಯಯನ ಮಾಡದ ನನಗೆ ಸಾಧ್ಯವೇ ಎಂದಾಗ, ಪ್ರಯತ್ನ ಮಾಡು ಎಂದು ತಿಳಿಸಿದ.

ಶ್ರೀ ಕ್ಷೇತ್ರ ಗಣಧಾಳ ಪಂಚಮುಖಿ ಪ್ರಾಣದೇವರ ಸನ್ನಿಧಾನದಲ್ಲೇ ಇಷ್ಟ ದೈವವಾದ "  ಶ್ರೀ ಲಕ್ಷ್ಮೀಪತಿ ಮ್ಯಾಲೆ ಪ್ರಪ್ರಥಮ ಕೃತಿ ರಚನೆ ಮಾಡಿದೆ. ಶ್ರೀ ಪ್ರಾಣದೇವರಿಂದ " ಲಕುಮೀಶ " ಎಂಬ ಅಂಕಿತದಿಂದ ಸ್ಫೂರಣಗೊಂಡು ರಚಿತವಾದ ಆ ಕೃತಿ ಹೀಗಿದೆ........

ರಾಗ : ರಾಗಮಾಲಿಕ              ತಾಳ : ಆದಿ

ಶ್ರೀ ಲಕುಮಿಯರಸನೇ ಪಾಲಿಸೋ ಹರಿಯೇ ।। ಪಲ್ಲವಿ ।।

ನೀಲಮೇಘ ಶ್ಯಾಮಲದೆಲೆಯ ।

ಮೇಲೆ ಮಲಗಿದ ಕೃಷ್ಣನೇ ।। ಅ ಪ ।।

ತರುಳ ಪ್ರಹ್ಲಾದನ ಮೊರೆಯ ಕೇಳಿ  ನೀನು ।

ದುರುಳ ರಕ್ಕಸನ ಕರುಳ ಸೀಳಿ ।

ಪರಿಪರಿ ನುತಿಸಿದ ವರ ಬಾಲಕನ ।

ಕರವ ಪಿಡಿದು ಕಾಯ್ದ ನರಹರಿ ರೂಪನೇ ।। ಚರಣ ।।

ಕರಿಯರಸನು ಸರೋವರದಿ ನಕ್ರಗೆ ಸಿಕ್ಕಿ ।

ಭರಿತ ಭಕ್ತಿಯೊಳು ಹರಿಯ ಕೂಗಲು ।

ಕರದ ಧ್ವನಿ ಕೇಳಿ ಭರದಿ ಗರುಡನೇರಿ ।

ತ್ವರಿತದಿ ಓಡಿ ಬಂದು ಶರಣನ ಕಾಯ್ದವ ಪಾಲಿಸೋ ಎನ್ನ ।। ಚರಣ ।।

ದುರುಳ ದುಶ್ಶಾಸನ ತರುಣಿ ದ್ರೌಪದಿಯ ।

ಶರಗ ಪಿಡಿದು ಮತ್ತೆ ಹರುಷದಿ ಬಾಧಿಸಲು ಮರಿಯದೆ ।

ಹರಿ ನಿನ್ನ ಚರಣವ ಸ್ತುತಿಸಲು ಕರುಣದಿ ಅಕ್ಷಯಂ ।

ಬರವಿತ್ತ ಕೃಷ್ಣನೇ ಪಾಲಿಸೋ ಹರಿಯೇ ।। ಚರಣ ।।

ಹಸು ಮಗು ಧ್ರುವನು ನಿಶಿ ಹಗಲೆನ್ನದೆ ।

ಬಿಸಜನಾಭ ನಿನ್ನ ಭಜಿಸುತಿರೆ ।

ಕುಸುಮ ಶರನ ಪಿತ ಶಿಶುವಿಗೆ ಒಲಿಯುತ ।

ಎಸೆವ ಪದವನಿತ್ತ ಅಸುರಾರಿ ಪಾಲಿಸೋ ಎನ್ನ ।। ಚರಣ ।।

ಮಡದಿಯ ಮಾತಿಗೆ ಬಡುವ ಕುಚೇಲನು ।

ಹಿಡಿ ಅವಲಕ್ಕಿಯ ಕೊಡಲು ನಿನಗೆ ಹರಿಯೇ ।

ಒಡೆಯನೆ ತಡೆಯದೆ ದೃಢತರ ಶಿರಕೊಟ್ಟ ।

ಕಡು ಕೃಪಾನಿಧಿ ಶ್ರೀ ಲಕುಮೀಶ ದೇವಾ ಪಾಲಿಸೋ ದೇವಾ ।। ಚರಣ ।।

ಶ್ರೀ  ಲಕುಮೀಶ ದಾಸರು ರಚಿಸಿದ ಕೃತಿಗಳು ವಸ್ತುವಿನ ದೃಷ್ಟಿಯಿಂದ ವೈವಿಧ್ಯಮಯವಾಗಿವೆ.

ಸಂಪ್ರದಾಯದಂತೆ ದಾಸ ಕಕ್ಷೆ, ಯತಿ ಕಕ್ಷೆ, ದೇವತಾ ಕಕ್ಷೆ, ಕ್ಷೇತ್ರ ಮಹಿಮೆ, ಪ್ರಾರ್ಥನಾ ಪರವಾದ ಪದ್ಯಗಳನ್ನಲ್ಲದೆ ಇತರ ಪದ್ಯಗಳನ್ನೂ ರಚಿಸಿದ್ದಾರೆ.

ಮಾನವನಿಗೆ ಬಂದೊದಗುವ ಮೂಲವ್ಯಾಧಿ - ಜ್ವರ - ತಲೆಭಾರ ಮೊದಲಾದ ರೋಗಗಳ ಬಗ್ಗೆ ಹೇಳಹೇಳುತ್ತಾ ಪ್ರತಿಮೆಗಳನ್ನು ಸೃಷ್ಟಿಸಿ ಬಿಡುತ್ತಾರೆ.

ಒಳ್ಳೆಯ ಭಾವ ಸೌಷ್ಠವ, ಸಂಸ್ಕೃತ ಕನ್ನಡ ಮಿಶ್ರಿತ ಶೈಲಿ ಇವರದ್ದು.

ಇವರ ರಚನೆಗಳು ಶ್ರೀ ಶ್ಯಾಮಸುಂದರದಾಸರ ಶೈಲಿಯನ್ನೇ ಹೆಚ್ಚು ಹೆಚ್ಚಾಗಿ ಹೋಲುತ್ತದೆ.

ಶ್ರೀ ಜಗನ್ನಾಥದಾಸರ " ಹರಿಕಾಥಾಮೃತಸಾರ " ಗ್ರಂಥದ ಪಠಣವನ್ನೂ, ಗಮಕ ಕಲೆಯನ್ನೂ " ಶ್ರೀ ಲಕುಮೀಶದಾಸರು ಶ್ರೀ ಶ್ಯಾಮಸುಂದರ ದಾಸರಿಂದಲೇ ಅರಿತವರು.

" ಕೃತಿಗಳು "

ಶ್ರೀ ಲಕುಮೀಶ ಕಾವ್ಯದಲ್ಲಿ ಅರ್ಥಾನುಗುಣವಾದ ಪ್ರಾಸದ ಕಿಂಕಿಣಿ ನಾದವು ಹಿತಮಿತವಾಗಿ ಕಂಡು ಬರುತ್ತವೆ. ಕಥಾ ವಸ್ತು ಹಳೇದಾದರೂ ಕವಿ ಪ್ರಜ್ಞೆಯು ಕಲ್ಪನೆಯ ವೈಚಿತ್ರ್ಯದಿಂದ ಹೊಸತನವನ್ನು ಸಾಧಿಸಿ ತೋರಿಸಿದೆ.

ಈ ಪುರಾಣ ಕಥೆಗಳ ಕಲ್ಪನಾ ಕುಶಾಲವಾದ ಕವಿ ಪ್ರತಿಭೆಯು ಸ್ವಂತಿಕೆಯ ಧೀಮಂತಿಕೆಯಿಂದ ತನ್ನ ತನವನ್ನು ಮೆರೆದಿದೆ.

ಕುಮಾರವ್ಯಾಸ, ಲಕ್ಷ್ಮೀಶರ ಶೈಲಿಯ ಬಿಣ್ಪು, ಕಾವ್ಯದ ಕೆಚ್ಚು ಎರಡೂ ಇವರ ಶಬ್ದ ಶೈಲಿಯಲ್ಲಿ ಜೀವನಾಡಿಗಳಾಗಿ ಮೂಡಿ ಮಿಂಚಿವೆ. ಇವರ ಶೈಲಿಯ ಶ್ರೀಮಂತಿಕೆಯನ್ನು ಅವರ ಕೃತಿಗಳಲ್ಲಿ ಕಾಣಬಹುದು.

ಶ್ರೀ ಲಕುಮೀಶದಾಸರು ತಿಳಿಸಿದಂತೆ ತಮ್ಮ ತಂದೆಯಿಂದ ವೃತ್ತ - ಛಂದೋ ಬಂಧಗಳ ಬಗೆಗೆ ಕಲಿತವರು.

" ಸ್ತೋತ್ರ ಪದಗಳು "

೧. ಶ್ರೀ ಶ್ಯಾಮಸುಂದರದಾಸರ - ೨

೨. ಶ್ರೀ ಕೌತಾಳ ರಂಗಯ್ಯನವರ - ೩

೩. ಶ್ರೀ ಶೇಷದಾಸರ - ೧

೪. ಶ್ರೀ ಜಗನ್ನಾಥದಾಸರ - ೫

೫.  ಶ್ರೀ ಮೋಹನದಾಸರ - ೧

೬. ಶ್ರೀ ಗೋಪಾಲದಾಸರ - ೧

೭. ಶ್ರೀ ಪ್ರಸನ್ನ ವೆಂಕಟದಾಸರ - ೧

೮. ಶ್ರೀ ವಿಜಯರಾಯರ - ೩

೯. ಶ್ರೀ ಮಹಿಪತಿದಾಸರು - ೧

೯ ಶ್ರೀ ಪುರಂದರದಾಸರ - ೨

೧೦. ಶ್ರೀ ರಘುಪ್ರೇಮತೀರ್ಥರು - ೧

೧೧. ಶ್ರೀ ರಾಯರ ಮಠದ ಯತಿ ಪರಂಪರೆ

೧೨. ಹರಿದಾಸ ಪರಂಪರೆ ( ಸುಮಾರು ೪೦ ದಾಸರ ಸ್ತೋತ್ರ ಪದಗಳು )

೧೩. ದೇವತಾ ತಾರತಮ್ಯ ಸ್ತೋತ್ರ ಪದಗಳು

ಶ್ರೀ ಲಕುಮೀಶದಾಸರ  ಪದ - ಪದ್ಯಗಳಲ್ಲಿ ರಸವು ಮಡುವುಗಟ್ಟಿದೆ. ಭಕ್ತಿಯು ಕೋಡಿಗಟ್ಟಿ ಹರಿದಿದೆ. ತಿಳಿಯಾದ ಭಾಷೆ, ನಯವಾದ ಭಾವ, ಸವಿಯಾದ ಬಂಧದಿಂದ ಚಂದ ಚಲುವನಾಂತು ಶ್ರೀ ಲಕುಮೀಶದಾಸರ  ಪದ ಪದ್ಯಗಳು ಚೇತೋಹಾರಿಯಾಗಿವೆ. ಉದಾಹರಣೆಗೆ ಶ್ರೀ ಲಕುಮೀಶದಾಸರ ಕೃತ ಶ್ರೀ ವಾಯುದೇವರ ಅವತಾರ ಸ್ತೋತ್ರ.....

ರಾಗ : ಶಂಕರಾಭರಣ       ತಾಳ : ಆದಿ

ರಥವನೇರಿ ತಾ ಬಂದ ಆನಂದದಿಂದ ।। ಪಲ್ಲವಿ ।।

ಕ್ಷಿತಿಯೊಳು ಭಕುತರ ವ್ಯಥೆ ತತಿ ಕಳಿಯುತ ।

ಕ್ಷಿತಿಸುತೆ ಪತಿ ಧ್ಯಾನ ಸುಜನಕೆ ನೀಡುತ ।। ಅ ಪ ।।

ಬಾಲ ಪಂಚಾನನ ಕಾಳಿ ವದನಾಬ್ಜ ಇನ ।

ಖೂಳ ದೈತ್ಯನ ಪುರ ಬಾಲದಿ ಸುಟ್ಟಿದ ।

ಕೆಳಗೆ ಮಗನಿಗೆ ಶಿಲದಿ ನಿರ್ಮಿಸೆ ನಾ ।

ಪೇಳಿ ಸ್ವಪ್ನದಿ ನಮ್ಮ ಧಾಮದಿ ನಿಂತವನೇ ।। ಚರಣ ।।

ಬಂಡಿ ಅನ್ನವನುಂಡ ಬಕನ ಪ್ರಾಣವಗೊಂಡ ।

ಹಿಂಡು ದೈತ್ಯರ ಗಂಡ ಕೀಚಕನ್ಹಿಂಡ ಮುಂಡ ।

ಚಂಡ ತೇಜದಿ ಸತಿಗೆ ತೋರಿಸಿ ತಾ ಕಂಡ ।

ಭಂಡ ಕುರುಪರನೆಲ್ಲ ರುಂಡ ಮುರಿದುದ್ಧ೦ಡ ।। ಚರಣ ।।

ಪಾಜಕದಲಿ ಪುಟ್ಟಿ ಕುಜನ ಮತಗಳ ಮೆಟ್ಟಿ ।

ತೇಜ ನಿತ್ಯದ ಗ್ರಂಥ ರಾಜಗಳ್ಪರದೊಟ್ಟಿ ।

ಮೋಜಿಲಿ ಲಕುಮೀಶನ ಸ್ಥಾಪಿಸಿ ಉಡುಪಿಲಿಟ್ಟಿ ।

ಮಾಜದೆ ಭಕುತರ ಪೊರೆವ ಶ್ರೀ ಮಧ್ವ ದಿಟ್ಟ ।। ಚರಣ ।।

" ಉಪಸಂಹಾರ "

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ " ಕುರುಡಿ " ಗ್ರಾಮವು ಶ್ರೀ ಲಕುಮೀಶ ದಾಸರ ಜನ್ಮಸ್ಥಳ. ಇವರು ಶ್ರೀ ಶ್ಯಾಮಸುಂದರದಾಸರ -  ಮಾನವಿ ಮುನಿಪುಂಗವರಾದ ಶ್ರೀ ಸಹ್ಲಾದಾಂಶ ಜಗನ್ನಾಥದಾಸರ ಮತ್ತು ಶ್ರೀ ಪ್ರಹ್ಲಾದಾಂಶ ಶ್ರೀ ರಾಘವೇಂದ್ರತೀರ್ಥರ ಅಂತರಂಗ ಭಕ್ತರೂ ಹಾಗೂ ಅವರ ಪೂರ್ಣಾನುಗ್ರಹಕ್ಕೆ ಪಾತ್ರರಾದವರು.

ಶ್ರೀ ಲಕುಮೀಶ ದಾಸರ ಕೃತಿಗಳು ಭಕ್ತಿಭಾವದಿಂದ ತುಂಬಿ ತುಳುಕುತ್ತಿರುವ ಇವರ ರಚನಾ ಶೈಲಿ ಗುರುಗಳಾದ ಶ್ರೀ ಶ್ರೀ ಶ್ಯಾಮಸುಂದರ ದಾಸರ ಶೈಲಿಗೆ ತಕ್ಕಂತೆ ಸುಂದರವಾದ ಪದ ಸಮುಚ್ಛಯಗಳಿಂದ ಕೂಡಿ ಅರ್ಥಗರ್ಭಿತವಾಗಿವೆ.

ಶ್ಲೇಷಾರ್ಥಗಳನ್ನು ಒಳಗೊಂಡ ಅನೇಕ ಪದ ಪ್ರಯೋಗಗಳಿಂದ ಕೂಡಿದ ಇವರ ಪದಗಳನ್ನು ಅರ್ಥಾನುವಾದ ಮಾಡಲು ಶಾಸ್ತ್ರ ಮತ್ತು ಪುರಾಣ ಜ್ಞಾನವು ಅತ್ಯವಶ್ಯಕವಾಗಿದೆ.

ಪೂರ್ಣವಾದ ಹರಿದಾಸ ಸಾಹಿತ್ಯದ ಭಾಂಡಾಗಾರವನ್ನು ತಮ್ಮ ಕೃತಿ ರತ್ನಗಳಿಂದ ಪೂರ್ಣ ಮಾಡಿದ ಮಹನೀಯರು. ನಿಗೂಢವಾದ ಸಾಧನೆಯನ್ನು ಮಾಡಿ ಕಾರಣ ಜನ್ಮರಾದ ಶ್ರೀ ಲಕುಮೀಶದಾಸರು ವ್ಯಯ ನಾಮ ಸಂವತ್ಸರದ ಕಾರ್ತೀಕ ಬಹುಳ ದ್ವಾದಶೀ ( 17.11.2006 ) ವೈಕುಂಠಕ್ಕೆ ತೆರಳಿದರು.

ಲಕುಮೀಶ ದಾಸರ ನೋಡಿರೋ ।

ಲಕುಮೀಧವನ ಅಂಕಿತ ಪೊತ್ತವನಾ ।। ಪಲ್ಲವಿ ।।

ನರಸಮ್ಮ ಬಂಡಾರ್ಯರ ಪ್ರೀತಿಯ ಸುತನ ।

ನರಹರಿ ಪ್ರಿಯ ರಾಯರ ಕಾರುಣ್ಯ ಪಾತ್ರನಾ ।। ಚರಣ ।।

ಶೌರಿ ಕಥಾಮೃತವನು  ಮುದದಿ ।

ಧೀರ ಶ್ಯಾಮಸುಂದರರಿಂದ ತಿಳಿದ ।। ಚರಣ ।।

ವ್ಯಯ ನಾಮ ವತ್ಸರ ಕಾರ್ತೀಕ ವದ್ಯ ದ್ವಾದಶೀಯಂದು ।

ವಯನಗಮ್ಯ ಶ್ರೀ ಹರಿ ಪುರಕೆ ನಡೆದ ಧೀಮಂತ ।। ಚರಣ ।।

by ಆಚಾರ್ಯ ನಾಗರಾಜು ಹಾವೇರಿ.... 

-ಗುರು ವಿಜಯ ಪ್ರತಿಷ್ಠಾನ - ನಾಗರಾಜ ಹಾವೇರಿ 

*******


Shri gurubyO namaha, hari Om... 

Karthika bahuLa dwAdashi is the puNya dina of shri lakumIsha dAsaru. His original name was shri kuruDi rAghavEndra Acharya purohit. 

He has composed several dEvaranAmAs on shri raghuprEma tIrtharu...

Shri krishNArpaNamastu.


20 ನೆಯ ಶತಮಾನದವರು, ಮಹಾನ್ ಜ್ಞಾನಿಗಳು ಆದ ಶ್ರೀ ಶ್ಯಾಮಸುಂದರ ದಾಸಾರ್ಯರ ಪರಮ ಪ್ರೀತಿಪಾತ್ರರಾದವರು, ಶ್ರೀ ಗಾಣಧಾಳ ಪಂಚಮುಖಿ ಪ್ರಾಣದೇವರ ಅನುಗ್ರಹಪಾತ್ರರೂ, 700 ಕ್ಕಿಂತ ಹೆಚ್ಚು ಕೃತಿಗಳು ರಚನೆ ಮಾಡಿದವರು, ಚಿತ್ರಕಲೆ, ಶಿಲ್ಪಕಲೆ ಇತ್ಯಾದಿಗಳಲ್ಲಿ ನೈಪುಣ್ಯತೆ ಇದ್ದವರು,ಜ್ಞಾನ ಭಂಡಾರವಾದರೂ ಸೌಮ್ಯ ವ್ಯಕ್ತಿತ್ವ ಉಳ್ಳವರು ಆದ ಶ್ರೀ ಕುರುಡಿ ರಾಘವೇಂದ್ರಾಚಾರ್ಯರ ಅರ್ಥಾತ್ ಶ್ರೀ ಲಕುಮೀಶ ದಾಸರ ಆರಾಧನೆಯೂ ಇಂದು.

****


" ಶ್ರೀ ಲಕುಮೀಶ - 1 "
" ದಿನಾಂಕ : 12.12..2020 - ಕಾರ್ತೀಕ ಬಹುಳ ದ್ವಾದಶೀ ಶನಿವಾರ - ಶ್ರೀ ಲಕುಮೀಶ ದಾಸರ ಆರಾಧನಾ ಮಹೋತ್ಸವ - ಶ್ರೀ ಕ್ಷೇತ್ರ ಮಂತ್ರಾಲಯ "
" ನಮ್ಮ ಗುರುಗಳೂ - ಶ್ರೀ ಶ್ಯಾಮಸುಂದರ ದಾಸರ - ಶ್ರೀ ರಾಯರ ಅಂತರಂಗ ಭಕ್ತರೂ - ಶ್ರೀ ಲಕುಮೀಶಾಂಕಿತ ಶ್ರೀ ಕುರುಡಿ ರಾಘವೇಂದ್ರಾಚಾರ್ಯ ಪುರೋಹಿತ್ "
" ಪ್ರಸ್ತಾವನೆ "
" ತತ್ತ್ವಜ್ಞಾನ್ ಮುಕ್ತಿಭಾಜ: "
ಕೇವಲ ನೈಜ ತತ್ತ್ವಜ್ಞಾನಾನುಸಂಧಾನದಿಂದ ಮೋಕ್ಷಾದಿ ಫಲ ಪುರುಷಾರ್ಥ ಸಿದ್ಧಿಯೇ ಹೊರತು - ಬರೀ ಭಾಷಾ ಜ್ಞಾನ ಒಂದರಿಂದ ಗುರಿ ಸಾಧಿಸಲಸಾಧ್ಯವಾದಗ - ಶ್ರೀಮದಾನಂದತೀರ್ಥ ಭಗವತ್ಪಾದರು ತಿಳಿಸಿದ ನೈಜ ತತ್ತ್ವಜ್ಞಾನ ಒಂದೇ ಮೋಕ್ಷ ಎಂದಿರುವಾಗ... 
ಒಂದು ವ್ಯಾಸ ಸಾಹಿತ್ಯವಾದ ಸಂಸ್ಕೃತ - ಮತ್ತೊಂದು ದಾಸ ಸಾಹಿತ್ಯವಾದ ನಾಡ ಭಾಷೆಯಲ್ಲಿ ಒಂದೇ ತತ್ತ್ವವನ್ನು ಹೋಲುವ - ವೇದೋಕ್ತವಾದ ಗುರುಗಳ ಸಿದ್ಧಾಂತ ಎರಡು ವಿಧವಾಗಿ ನಮಗೆ ದೊರಕಿದ್ದು - ಈ ಕಲಿಯುಗದಲ್ಲಿ ವೇದಾಧ್ಯಯನ - ಯಾಗಗಳು - ದೇವತಾರಾಧನೆ - ಗುರುಕುಲ ವಾಸ - ಜಪ ತಪಾದಿ ಸೌಲಭ್ಯಗಳಿಲ್ಲದ ಈ ಘೋರ ಕಾಲದಲ್ಲಿ ನಮಗಿರುವ " ಕುರುಡನ ಊರುಗೋಲೆಂದರೆ "... 
ನಮ್ಮ ಮಾತೃ ಭಾಷೆಯಲ್ಲಿ ಮೋಕ್ಷಪ್ರದವಾದ ನೈಜ ತತ್ತ್ವಾದಿಗಳನ್ನು ಅರಿತವರಿಂದ ತಿಳಿದು - ನಮ್ಮ ಯೋಗ್ಯತಾನುಸಾರ ಔಪಾಸನಾದಿಗಳನ್ನು ಮಾಡಿಕೊಂಡು ಉದ್ಧಾರವಾಗಬೇಕಾದಂತೆ - 
ಶ್ರೀ ಧೃವಾಂಶ ಸಂಭೂತರಾದ ಶ್ರೀ ಶ್ರೀಪಾದರಾಜರು... 
ಧ್ಯಾನವು ಕೃತ ಯುಗದಲ್ಲಿ ।
ಯಜನ ಯಜ್ಞವು 
ತ್ರೇತಾ ಯುಗದಲ್ಲಿ ।
ದಾನವಾಂತಕನ 
ದೇವತಾರ್ಚನೆಯು 
ದ್ವಾಪರದಲ್ಲಿ ।
ಈ ಕಲಿಯುಗದಲ್ಲಿ 
ಗಾಯನದಲಿ ಕೇಶವಾ-
ಯೆಂದೊಡೆ 
ಕೈಗೊಟ್ಟು ಸಲಹುವ 
ನಮ್ಮ ರಂಗವಿಠಲ ।।
" ಶ್ರೀ ಲಕುಮೀಶರ ಸಂಕ್ಷಿಪ್ತ ಮಾಹಿತಿ "  
ಹೆಸರು : 
ಶ್ರೀ ಕುರುಡಿ ರಾಘವೇಂದ್ರಾಚಾರ್ಯರು 
ತಂದೆ : 
ಶ್ರೀ ಕುರುಡಿ ಬಂಡ್ಯಾಚಾರ್ಯರು 
ತಾಯಿ : 
ಸಾಧ್ವೀ ನರಸಮ್ಮ 
ಜನನ : 
ಕ್ರಿ ಶ 1928
ಗೋತ್ರ : 
ಗೌತಮ 
ದೊಡ್ಡಪ್ಪ : 
ಶ್ರೀ ಶ್ಯಾಮಸುಂದರ ದಾಸರು 
ಪರಮಪೂಜ್ಯ ಶ್ರೀ ಕುರುಡಿ ರಾಘವೇಂದ್ರಾಚಾರ್ಯ ಪುರೋಹಿತ್ ಅವರು.... 
ಚಿತ್ರಕಲೆ - ಶಿಲ್ಪಕಲೆ - ಸರಳತೆ - ಸಜ್ಜನಿಕೆ - ಸೌಜನ್ಯತೆ - ಸಹೃದಯತೆ ತುಂಬಿದ ಶ್ರೇಷ್ಠ ವ್ಯಕ್ತಿತ್ವದ ಪೂತಾತ್ಮರು. 
ಪರಮಪೂಜ್ಯ ಶ್ರೀ ಆಚಾರ್ಯರನ್ನು - ಶ್ರೀ ಸೂರ್ಯದೇವರ ರಥ ಸಾರಥಿಯಾದ ಶ್ರೀ ಅರುಣದೇವನ ಅವತಾರವೆಂದು ಬಲ್ಲ ಜ್ಞಾನಿಗಳು ಹೇಳುತ್ತಾರೆ - ಈ ಕುರಿತು ಇನ್ನೂ ಹೆಚ್ಚಿನ ಅಧ್ಯಯನ - ಸಂಶೋಧನೆ ಅಗತ್ಯವಿದೆ. 
ಪರಮಪೂಜ್ಯ ಶ್ರೀ ಆಚಾರ್ಯರು ಉಪನಯನ ನಂತರ ಶ್ರೀ ರಾಯರ ಮಠದ ಪೀಠಾಧಿಪತಿಗಳಾದ ಪ್ರಾತಃ ಸ್ಮರಾಮಿ ಪರಮಪೂಜ್ಯ ಶ್ರೀ ಸುಯಮೀ೦ದ್ರತೀರ್ಥರಿಂದ ಉಪದೇಶ ಪಡೆದ ಮಹನೀಯರು. 
ವಿದ್ಯಾ ಗುರುಗಳು :
ಶ್ರೀ ಗುಂಜಳ್ಳಿ ವಾದೀಂದ್ರಾಚಾರ್ಯರು 
ಪರಮಪೂಜ್ಯ ಶ್ರೀ ಆಚಾರ್ಯರು ಶ್ರೀ ಹರಿದಾಸ ಸಾಹಿತ್ಯದಲ್ಲಿ ಬಹಳ ಆಸಕ್ತಿ - ಭಕ್ತಿ - ಶ್ರದ್ಧೆಗಳಿದ್ದು - " ಶ್ರೀ ಹರಿಕಥಾಮೃತಸಾರ " ಯಿವರ ಉಸಿರಾಗಿದ್ದು - ಇವರ ದೊಡ್ಡಪ್ಪಂದಿರಾದ ಶ್ರೀ ಶ್ಯಾಮಸುಂದರಲ್ಲಿ ಭಕ್ತಿ - ಅಚಲ ವಿಶ್ವಾಸಗಳಿದ್ದು - ಇವರ ಸಮಕ್ಷಮದಲ್ಲಿ ಸಾಹಿತ್ಯ ರಚನೆ ಪ್ರಾರಂಭವಾಗಿ - ರಾಘಣ್ಣ ಮುಂದೆ ಕವಿಯಾಗುವನೆಂದು ತಿಳಿದು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು. 
ಅಂಕಿತ : 
ಶ್ರೀ ಕ್ಷೇತ್ರ ಗಾಣಧಾಳ ಶ್ರೀ ಪಂಚಮುಖಿ ಪ್ರಾಣದೇವರ ವರ ಪ್ರಸಾದಾಂಕಿತ " ಲಕುಮೀಶ "
ಉಪದೇಶ ಗುರುಗಳು : 
ಶ್ರೀ ಪಂಚಮುಖಿ ಪ್ರಾಣದೇವರಿಂದ ಪ್ರದಾನವಾದ " ಲಕುಮೀಶ " ಅಂಕಿತದಲ್ಲಿ ಕೃತಿಗಳನ್ನು ರಚಿಸಿ ಶ್ರೀ ಸಹ್ಲಾದಾಂಶ ಜಗನ್ನಾಥದಾಸರ ಪ್ರೀತಿಯ ಕಂದ ಶ್ರೀ ಶ್ಯಾಮಸುಂದರದಾಸರಿಗೆ ತೋರಿಸಿದಾಗ ಶ್ರೀ ದಾಸಾರ್ಯರು ಬಹಳ ಸಂತೋಷ ಪಟ್ಟು ಶ್ರೀ ಮುಖ್ಯಪ್ರಾಣದೇವರ ವರ ಪ್ರಸಾದಾಂಕಿತ ಅತ್ಯಂತ ಶ್ರೇಷ್ಠವಾಗಿದೆ. 
ಇದೆ ಅಂಕಿತದಲ್ಲಿ ಕೃತಿಗಳನ್ನು ರಚಿಸು ಎಂದು ಆಜ್ಞಾಪಿಸಿದರು. 
ಅಂದಿನಿಂದ ಪರಮಪೂಜ್ಯ ಶ್ರೀ ಆಚಾರ್ಯರು " ಲಕುಮೀಶ " ಅಂಕಿತದಲ್ಲಿ ಸುಮಾರು 700 ಪದ ಪದ್ಯಗಳನ್ನು ರಚಿಸಿ ಶ್ರೀ ಹರಿ ದಾಸ ಸಾಹಿತ್ಯಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ಕೊಟ್ಟ ಮಹಾನುಭಾವರು!! 
ಇವರ ಕೃತಿಗಳೆಲ್ಲವೂ ಪ್ರಮೇಯಭರಿತವೂ, ರಸಪೂರಿತವೂ ಆಗಿವೆ!!
ಬಾಲ ಭಾಷೆಯಲ್ಲಿ - ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ ಗುರುಗಳ ಸ್ತೋತ್ರ .... 
ಮಂತ್ರ ಸಿದ್ಧಿ ಕ್ಷೇತ್ರ 
ಮಂತ್ರಾಲಯದಿ ಜನಿಸಿ ।
ಮಂತ್ರಾಲಯ ಪುರಾಧೀಶ್ವರ -
ಪೆಸರಿಂದ ಶೋಭಿಪ ।
ಮಂತ್ರವೇದ್ಯ ಲಕುಮೀಶಾಂ-
ಕಿತದಿ ಪದಗಳ ರಚಿಸಿ ।
ಮಂತ್ರಜ್ಞ ವೇಂಕಟನಾಥನ 
ಕುಣಿಸಿದ ಧೀರಾ ಲಕುಮೀಶ ।।
ಆಚಾರ್ಯ ನಾಗರಾಜು ಹಾವೇರಿ 
ಗುರು ವಿಜಯ ಪ್ರತಿಷ್ಠಾನ
***
" ಶ್ರೀ ಲಕುಮೀಶ - 2 "
ಶ್ರೀ ಲಕುಮೀಶದಾಸರ ಕಾವ್ಯ ವೈಭವ.....
" ಪೂರ್ವ ಜನ್ಮದ ಕರ್ಮವೇ ವ್ಯಾಧಿ ರೂಪದಲ್ಲಿ ಬಾಧಿಸುತ್ತದೆ "
ಶ್ರೀ ಲಕುಮೀಶರು ಒಮ್ಮೆ ಶೀತ ಜ್ವರದಿಂದ ಬಳಲುತ್ತಿದ್ದಾಗ ರಚಿತವಾದ ಪದ್ಯ ಹೀಗಿದೆ....
ರಾಗ : ಶಿವರಂಜನಿ              ತಾಳ : ಆದಿ
ಬರಬಾರದೇ ಅಚ್ಯುತ 
ಸಿರಿವರ ಧನ್ವಂತ್ರೀ ।
ಬರಬಾರದೇ ಅಚ್ಯುತ 
ಇಲ್ಲಿಗೆ ಓಡಿ ।
ಬರಬಾರದೇ ಅಚ್ಯುತ 
ಎನ್ನನು ಪೊರೆಯೆ ।। ಪಲ್ಲವಿ ।।
ಕೀರ್ತನೆಯ ಆರಂಭದಲ್ಲಿ ಈ ಸಾಲುಗಳಲ್ಲಿ ಮತ್ತೆ ಮತ್ತೆ ಪುನರಾವರ್ತಿಕವಾಗುವ " ಬರಬಾರದೇ ಅಚ್ಯುತ " ಎನ್ನುವ " ಕರೆ " ಭಕ್ತನ ತೀವ್ರವಾದ ಆರ್ತ ಸ್ವರವನ್ನು ಕೇಳಿಸುತ್ತದೆ.
ಕೀರ್ತನೆಯು ಮುಂದುವರೆದಂತೆ ಲೌಕಿಕದ " ಜ್ವರ ತಾಪದ ಅನುಭವ ಅಲೌಕಿಕ ಮಟ್ಟಕ್ಕೇರುವುದನ್ನು ಜ್ವರ ಬಾಧೆ - ಭವ ಬಾಧೆಗೆ ಪ್ರತಿಮೆಯಾಗುವುದನ್ನು ಗುರುತಿಸುತ್ತೇವೆ.
ಕರಿಕರ ಭವ ಜ್ವರಕೆ 
ಥರಥರ ನಡುಗುವೆ ।
ಜ್ವರ ಬಾಧೆಯನು ಬೇಗ 
ಪರಿಹರಿಸಲು ಈಗ ।
ಸರ್ವಜ್ಞ ಶಾಸ್ತ್ರದ
 ಸ್ಮೃತಿಗೆ ತಲೆ ಭಾರ ।
ಸರ್ವದ ಕಣ್ಣುರಿ 
ಸರ್ವದಾ ಬಳಲುವೆ ।
ದುಷ್ಟ ಸಂಗದ ವಾತ 
ಕೆಟ್ಟ ಮೈ ಬೇನಿಯು ।
ಅಷ್ಟಿಷ್ಟು ಭವಣೆಯೆ ಬಟ್ಟೆ 
ಉಡಲು ಬರದು ।।
ಇಂಥಾ ಜ್ವರಕ್ಕೆ ಶ್ರೀ ಲಕುಮೀಶದಾಸರು ಇಚ್ಛಿಸುವ ಗುಳಿಗೆ, ಔಷಧ ಪಥ್ಯ ಹೀಗಿದೆ...
ಅಂಗಾಂಗದ ರೋಗ-
ವನಂಗಾದಿ ಬಾಧೆಗೆ ।
ರಂಗಾಖ್ಯ ಗುಳಿಗೆ ಸ-
ತ್ಸಂಗ ಪಥ್ಯದಿ ಕೊಡೆ ।।
ಪ್ರಾರಬ್ಧ ಕರ್ಮಗಳೇ ರೋಗಗಳ ರೂಪದಿಂದ ಆವರಿಸುವುದೆಂಬ ನಂಬುಗೆಯನ್ನು ರಂಗನ ಸ್ಮರಣೆಯೇ ಪರಿಹಾರವೆಂಬ ವಿಶ್ವಾಸವನ್ನು ಇಲ್ಲಿ ಕಾಣುತ್ತೇವೆ.
ಇದೇ ಭಾವವನ್ನು ಪೋಲುವ ಕಾಮ, ಕ್ರೋಧ, ಲೋಭ, ಮೋಹಗಳೇ ಬಾಳಿನಲ್ಲಿ ಗೋಳಿನ ರೂಪದ ಉರಿಯಾಗಿ, ಕಾಯದ ಆಲಯದಲ್ಲಿ ತಾಪಗೊಳಿಸುತ್ತದೆ ಎಂಬುವ ಚಿತ್ರಣದಿಂದ ಕೂಡಿದ ಇನ್ನೊಂದು ವಿಚಾರ ಹೀಗಿದೆ...
ಮೂಲವ್ಯಾಧಿ ಮೂಲವ್ಯಾಧಿ ।
ಬಾಳಿನೊಳಗೆ ಅತಿ 
ಗೋಳಿನ ಉರಿ ರೂಪಿ ।
ಹೇಳದೆ ಕಾಯದ 
ಆಲಯದೊಳು ಸೇರಿ ।
ಧಾಳಿ ಮಾಡುತ ಯಮ-
ಶೂಲಕ್ಕೆ ನೂಕುವ ।
ನೇಮ ನಿಷ್ಠೆಯ ಬಿಟ್ಟು 
ಕಾಮಿನಿಯರ ಕಂಡು ।
ಕಾಮಿಪ ದುರ್ಮತಿ 
ತಾಮಸ ಕಾಮವೇ ।।
ಹೀಗೆ ಸಾಗುವ ಈ ಪದ " ಮೂಲವ್ಯಾಧಿ " ಯ ಸ್ವರೂಪವನ್ನು ಬಣ್ಣಿಸುತ್ತಾ ಹೋಗುತ್ತದೆ. ಒಂದು ರೋಗವಾದ " ಮೂಲವ್ಯಾಧಿ " ಯ ಅರ್ಥ ವಿಸ್ತಾರ, ಅದು ಒಂದು ಪ್ರತಿಮೆಯಾಗಿ ಇಲ್ಲಿನ ಕಾವ್ಯತ್ವವನ್ನು ತೋರುತ್ತದೆ.
ಮಧ್ವ ತತ್ತ್ವದ ಅನುಷ್ಠಾನದಲ್ಲಿ, ಸಾಧನೆಯಲ್ಲಿ " ಸ್ತ್ರೀಯೂ " ಅರ್ಹಳು ಎಂಬ ಶ್ರೀ ದಾಸಾರ್ಯರ ಕಳಕಳಿಯು ಈ ಪದದಲ್ಲಿ ಅಭಿವ್ಯಕ್ತಗೊಂಡು....
ತಾಳಿದ್ದ ಸ್ತ್ರೀ ಭವದಿ 
ತಾಳಿಗ ಗುಣರತ್ನ ।
ಶೀಲೆ ಎಂದೆನಿಸದೆ 
ಕೀಳು ಮಾರ್ಗದಿ ನಡೆಯೇ ।।
ಅನುರಾಗದಲಿ ನಿತ್ಯ 
ಮನಿಯ ಕಾರ್ಯವ ಮಾಡಿ ।
ಇನಿಯನ ಒಲಿಸಲು 
ಮನ ಬರದೆ ಸ್ತ್ರೀ ನಡತೆ ।।
ಸಿರಿ ತುಳಸಿ ಪೂಜಿಸದೆ 
ಹರಿವ್ರತ ಚರಿಸದೆ ।
ಪರರ ನೋವಿಗೆ ಬಲು ಹರುಷಿತ 
ಪೆಣ್ ಗುಣ ಮೂಲವ್ಯಾಧಿ ।।
ಇಂಥಾ ಮೂಲವ್ಯಾಧಿಯ ನಿರ್ಮೂಲನಕ್ಕೆ ಶ್ರೀ ದಾಸಾರ್ಯರು ಸೂಚಿಸುವುದು.....
ಲಕುಮೀಶನೇ ಜ್ಞಾನ 
ಸುಖಪೂರ್ಣನೆಂತೆಂದು ।
ಸಕಲ ವಸ್ಥೆಯಲ್ಲಿ ಭಕುತಿಯಲಿ
ತಿಳಿಯೆ ನಿರ್ ಮೂಲವ್ಯಾಧಿ ।।
ಶ್ರೀ ದಾಸಾರ್ಯರ ಲೋಕಾನುಭವ, ಸಾಮಾನ್ಯ ಮಾನವನ ಬಾಳುವೆಯ ದಿಶೆಯನ್ನು ಕಂಡ ಪರಿ ಹೀಗಿದೆ...
ತಲೆ ಭಾರ ತಲೆ ಭಾರ ।
ಜಲಜಾಕ್ಷ ಪೇಳಿ ಕೊಟ್ಟ 
ಚಲುವ ಮಾರ್ಗಗಳ ।
ತಿಳಿಯದೆ ನಾರಾ ಜನ್ಮ 
ಕಳಕೊಂಬರ ನೋಡಿ ।।
ಎಲರುಣಿ ಶಯ್ಯನ 
ಒಲಿಸಿ ನಲಿಸಿ ತಮ್ಮ ।
ಪೊಳೆವ ಹೃತ್ಕಮಲದಿ 
ನಿಲಿಸದವರ ನೋಡಿ । 
ಸುಖಮುನಿ । ಮತ ।
ದಲಿ ಭಕುತಿ ಪೂರ್ವಕವಾಗಿ 
ಲಕುಮೀಶನ ಕಂಡು 
ಸುಖಿಸದವರ ನೋಡಿ ।।
***
" ಶ್ರೀ ಲಕುಮೀಶ - 3 "
" ಶ್ರೀ ಪ್ರಹ್ಲಾದ - ವ್ಯಾಸ ಮುನಿಯೇ ಗುರು ರಾಘವೇಂದ್ರ "
" ಸುಧಾ ಓದು - ಪದ ಮಾಡು " ಎಂಬಂತೆ ದಾಸ ಸಾಹಿತ್ಯವನ್ನು ಬರೆಯಬೇಕಾದರೆ ಶಾಸ್ತ್ರ ಜ್ಞಾನ ಅತ್ಯವಶ್ಯ ಮತ್ತು ಪುರಾಣ - ಇತಿಹಾಸ ತಿಳಿದವರಿಗೆ ಮಾತ್ರ ದಾಸ ಸಾಹಿತ್ಯ ರಚನೆ ಅತ್ಯಂತ ಸುಲಭ. ಈ ಕೃತಿಯನ್ನು ವ್ಯಾಸ ದಾಸ ಸಾಹಿತ್ಯದ ಹಿನ್ನೆಲೆಯಲ್ಲಿ ವಿವೇಚಿಸೋಣ....
ರಚನೆ : ಶ್ರೀ ಕುರುಡಿ ರಾಘವೇಂದ್ರಾಚಾರ್ಯರು
ಅಂಕಿತ : ಶ್ರೀ ಲಕುಮೀಶ
ರಾಗ : ಹಂಸಾನಂದಿ  ತಾಳ : ಆದಿ
ಬಂದು ನೆಲೆಸಿಹ ನೋಡಿ 
ಶ್ರೀ ರಾಘವೆಂದ್ರನು ।। ಪಲ್ಲವಿ ।।
ಅಂದು ಭೂಮಿಯ 
ಕದ್ದ ದೈತ್ಯನ ।
ಕೊಂದ ವರಹ ಗೋವಿಂದನ 
ಛಂದದ । ಕೋರೆ ।
ಯಿಂದ ಜನಿಸಿದ ಸುಂದರ 
ತುಂಗಾ ನದಿಯ ತೀರದಿ ।। ಅ ಪ ।।
ಪ್ರಥಮ ಯುಗದೊಳು 
ಈತ ಜಾತ ರೂಪ ಕಶ್ಯಪ ।
ಜಾತ ನೆನಿಸಿ ಮೆರೆದಾತ 
ಮತಿಗೆಟ್ಟ ಪಿತನ ।
ಅತುಳ ಬಾಧೆಗಳ್ ಗೆದ್ದಾತ 
ಕೃತಿ ಪತಿಗೆ ಪ್ರೀತ ।।
ವೀತ ಹೋತ್ರನ 
ಪುತ್ರನ ಜನಕನ 
ಸತತ ನಲಿಯುತ 
ನಗುತ । ಭಜಿ ।
ಸುತ ರತುನ ಸ್ತಂಭದಿ 
ಪಿತಗೆ ನರಮೃಗ ।
ತತಿಯ ಪತಿಯನು 
ಜಿತದಿ ತೋರುತ ।। ಚರಣ ।।
ಬ್ರಹ್ಮನಯ್ಯ ಸರ್ವೇಶಾ 
ಎಂದರುಹಿದಾ । ಭಾವಿ ।
ಬ್ರಹ್ಮದೇವನ ಆವೇಶಾ 
ಯಿಂದ ಪುಟ್ಟಿ ಈ ।
ಬ್ರಹ್ಮಾಂಡದೊಳಗೆ 
ವ್ಯಾಸರಾಜ 
ಯತಿಯ ರವಿಭಾಸ ।।
ಬ್ರಹ್ಮಣ್ಯತೀರ್ಥರ ಕುವರ 
ನೆನಿಸುತ ಬ್ರಹ್ಮಜಾ೦ಶಗೆ 
ಗುರುವು ಎನಿಸುತ ।
ಬ್ರಹ್ಮ ತಾನೆಂಬ 
ಕುಮತಿಗಳ । ಮ ।
ನ ಹಮ್ಮು ಮುರಿಯುತ 
ದುಂದುಭಿ ಹೊಡೆಸುತ ।। ಚರಣ ।।
ನಾಗಾದ್ರೀಶನ ದಯದಿ 
ತಿಮ್ಮಣ್ಣಭಟ್ಟರ ।
ಮಗನೆನಿಸೀ ಜಗದಿ 
ವೇಂಕಟೇಶ ನಾಮದಿ ।
ನಿಗಮಾಗಮಗಳೋದಿ 
ವೀಣೆ ಗಾನ । ವಿದ್ಯಾದಿ ।।
ಮಿಗೆ ಪ್ರವೀಣನು ಯೆನಿಸೆ 
ಹರುಷದಿ ಸುಗುಣ ನಿಧಿ ।
ಶ್ರೀ ಗುರು ಸುಧೀಂದ್ರರು 
ರಾಘವೇಂದ್ರನೆಂದು 
ನಾಮ ನೀಡಲು ।
ನಗಧರ ಲಕುಮೀಶ 
ನೊಲಿಸುತ ।। ಚರಣ ।।
ಪರಮಪೂಜ್ಯ ಶ್ರೀ ಲಕುಮೀಶದಾಸರು ಮೂರು ನುಡಿಗಳಲ್ಲಿ ಶ್ರೀ ರಾಯರ ಅವತಾರ - ಮಹಿಮೆಗಳನ್ನು ಪದ್ಯ ರೂಪದಲ್ಲಿ ರಚಿಸಿದ್ದು - ಆ ಕೃತಿಯ ಮೂರು ನುಡಿಗಳೂ ಈ ಕೆಳಕಂಡ ಪ್ರಮಾಣಗಳಿಂದ ಶ್ರೀ ಹರಿವಾಯು ಶ್ರೀ ರಾಯರ - ಶ್ರೀ ವಿಜಯರಾಯರ ಪರಮಾನುಗ್ರಹದಿಂದ ಸಪ್ರಮಾಣಗಳಿಂದ ಕೃತಿಯ ಸಾರವನ್ನು ತಿಳಿಸುವ ಚಿಕ್ಕ ಪ್ರಯತ್ನ ಇಲ್ಲಿದೆ. 
ಪ್ರಮಾಣ :
ರಂಗೋತ್ತುಂಗತರಂಗಮಂಗಲ-
ಕರಶ್ರೀತುಂಗಭದ್ರಾತಟ
ಪ್ರತ್ಯಸ್ಥದ್ವಿಜಪುಂಗವಾಲಯಲಸನ್ 
ಮಂತ್ರಾಲಯಾಖ್ಯೆ ಪುರೇ ।
ನವ್ಯೋ೦ದ್ರೋಪಲನೀಲಭವ್ಯಕರ
ಸದ್ಬೃಂದಾವನಾ೦ತರ್ಗತ:
ಶ್ರೀಮತ್ಸದ್ಗುರುರಾಘವೇಂದ್ರಯತಿರಾಟ್ 
ಕುರ್ಯಾಧ್ರುವಂ ಮಂಗಲಮ್ ।।
ಶಂಖುಕರ್ಣಾಖ್ಯ ದೇವಸ್ತು ಬ್ರಹ್ಮ 
ಶಾಪಾಶ್ಚ ಭೋತಲೇ ।
ಪ್ರಹ್ಲಾದ ಇತಿ ವಿಖ್ಯಾತೋ 
ಭೂಭಾರ ಕ್ಷಪಣೇ ರತಃ ।।
ಸ ಏವ ರಾಘವೇಂದ್ರಾಖ್ಯ ಯತಿ 
ರೂಪೇಣ ಸರ್ವದಾ ।
ಕಲೌಯುಗೇ ರಾಮಸೇವಾಂ 
ಕುರ್ವನ್ ಮಂತ್ರಾಲಯೇ ಭವೇತ್ ।।
ಪ್ರಹ್ಲಾದೋ ಜನ್ಮ ವೈಷ್ಣವಃ ।
ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।
ವಾಸುದೇವೇ ಭಗವತಿ 
ಯಸ್ಯ ನೈಸರ್ಗಿಕೀರತಿಃ ।
ಬ್ರಹ್ಮಣ್ಯಃ ಶೀಲ ಸಂಪನ್ನಃ 
ಸತ್ಯಸಂಧೋ ಜಿತೇಂದ್ರಿಯಃ ।
ಪ್ರಶಾಂತಕಾಮೋ 
ರಹಿತಾಸುರೋಸುರಃ ।।
ಮಹದರ್ಭಕಃ ಮಹದುಪಾಸಕಃ 
ನಿರ್ವೈರಾಯ ಪ್ರಿಯ ಸುಹೃತ್ತಮಃ ।
ಮಾನಸ್ತಂಭ ವಿವರ್ಜಿತಃ 
ಯಥಾ ಭಗವತೀಶ್ವರೇ ।।
ಪ್ರಹ್ಲಾದೋಪಿ ಮಹಾಭಾಗಃ 
ಕರ್ಮದೇವ ಸಮಃ ಸ್ಮೃತಃ ।
ಪ್ರಕೃಷ್ಟಾಹ್ಲಾದ ಯುಕ್ತತ್ವಾತ್ 
ನಾರದಸ್ಯೋಪದೇಶತಃ ।
ಅತಃ ಪ್ರಹ್ಲಾದ ನಾಮಾಸೌ 
ಪೃಥುವ್ಯಾಂ ಖಗಸತ್ತಮಃ ।।
ದೇವಾಃ ಶಾಪ ಬಲದೇವ 
ಪ್ರಹ್ಲಾದಾದಿತ್ವಮಾಗತಾಃ ।
ದೇವಾಃ ಶಾಪಾಭಿಭೂತತ್ವಾತ್ 
ಪ್ರಹ್ಲಾದಾದ್ಯ ಬಭೂವಿರೇ ।।
ಪ್ರಹ್ಲಾದೋ  ಕಯಾಧವಃ 
ವಿರೋಚನಂ ಸ್ವಪುತ್ರಂ ಅಪನ್ಯಧತ್ತ ।।
ಋತೇತು ತಾತ್ವಿರ್ಕಾ 
ದೇವನ್ನಾರದಾದೀನಥೈವ ಚ ।
ಪ್ರಹ್ಲಾದಾದುತ್ತಮಃ ಕೋನು 
ವಿಷ್ಣು ಭಕ್ತೌ ಜಗತ್ತ್ರಯೇ ।।
" ಶ್ರೀ ಪ್ರಹ್ಲಾದರಾಜರಿಗೆ ಜಗನ್ನಾಥನಾದ ಶ್ರೀ ನೃಸಿಂಹನ ಪರಮಾದ್ಭುತ ವಚನ!! "
ವತ್ಸ! ಯದ್ಯದಭೀಷ್ಟಂತೇ 
ತತ್ತದಸ್ತು ಸುಖೀಭವ ।
ಭವಂತಿ ಪುರುಷಾ ಲೋಕೇ 
ಮದ್ಭಾಕ್ತಾಸ್ತ್ವಾಮನುವ್ರತಾಃ ।
ತ್ವಂ ಚ ಮಾಂ ಚ ಸ್ಮರೇಕಾಲೇ 
ಕರ್ಮಬಂಧಾತ್ಪ್ರಮುಚ್ಯತೇ ।।
ವಾಯೂನಾ ಚ ಸಮಾವಿಷ್ಟಂ 
ಹರೇಃ ಪಾದಾಬ್ಜ ಸಂಶಯಂ ।
ವಾಯೂನಾ ಚ ಸಮಾವಿಷ್ಟಃ 
ಮಹಾಬಲ ಸಮನ್ವಿತಃ ।
ಪ್ರಹ್ಲಾದಾದುತ್ತಮಃ ಕೋನು 
ವಿಷ್ಣು ಭಕ್ತೌ ಜಗತ್ತ್ರಯೇ ।।
ಕೃಷ್ಣಗ್ರಹಗ್ರಹೀತಾತ್ಮ....... 
ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।।
ವಾಯೂನಾ ಚ ಸಮಾವಿಷ್ಟಃ 
ಮಹಾಬಲ ಸಮನ್ವಿತಃ । 
ಎಂದರೆ....
ವಾಯೂನಾಚ ನಿತ್ಯ ಸಮಾವಿಷ್ಟತ್ವಾತ್ 
ಪ್ರಹ್ಲಾದೋ ನಿತ್ಯ ಭಕ್ತಿಮಾನ್ ।
" ನಿತ್ಯ " ಪದಕ್ಕೆ ಅರ್ಥವೇನೆಂದರೆ..
ಅವರ ಮುಂದಿನ ಅವತಾರಗಳಾದ ಶ್ರೀ ಬಾಹ್ಲೀಕ - ಶ್ರೀ ವ್ಯಾಸರಾಜ - ಶ್ರೀ ರಾಘವೇಂದ್ರತೀರ್ಥರು. ಇವರಲ್ಲೂ ಸಹಾ ಶ್ರೀ ವಾಯುದೇವರು ನಿತ್ಯಾವೇಶದಿಂದ ಇರುತ್ತಾರೆಂದು ಸ್ಪಷ್ಟ!
ಶ್ರೀ ಪುರಂದರದಾಸರು....
ಶೇಷಾವೇಶ ಪ್ರಹ್ಲಾದನವತಾರ ವೆನಿಸಿದೆ । ವ್ಯಾಸರಾಯನೆಂಬೋ ಪೆಸರು ನಿನಗಂದಂತೆ । ದೇಶಾಧಿಪಗೆ ಬಂದ ಕುಹೂ ಯೋಗವನು ನೂಕಿ । ನೀ ಸಿಂಹಾಸನವೇರಿ ಮೆರೆದೆ ಜಗವರಿಯೇ । ವ್ಯಾಸಾಬ್ಧಿಯನು ಬಿಗಿಸಿ ಕಾಶಿ ದೇಶದೊಳೆಲ್ಲ । ಭಾಸುರ ಕೀರ್ತಿಯನು ಪಡೆದೆ ನೀ ಗುರುರಾಯ । ವಾಸುದೇವ ಪುರಂದರ ವಿಠ್ಠಲನ್ನ ದಾಸರೊಳು । ಲೇಶ ನಿನ್ನಂತೆ ವೆಗ್ಗಳರ ಕಾಣೆನು ನಾನು ।।
ಶ್ರೀ ವಿಜಯೀ೦ದ್ರತೀರ್ಥರು....
ಪ್ರಹ್ಲಾದಸ್ಯಾವತಾರೋ ಸಾ-
ವೀಂದ್ರಸ್ಯಾನುಪ್ರವೇಶನಾತ್ ।
ತೇನೆ ಸತ್ಸೇವಿನಾಂ ನೃಣಾಂ 
ಸರ್ವಮೇತದ್ಭವೇ ಧ್ರುವಮ್ ।।
ಶ್ರೀ ವಿದ್ಯಾರತ್ನಾಕರತೀರ್ಥರು....
ಬ್ರಹ್ಮಣ್ಯತೀರ್ಥಸ್ತ೦ ಕೃತ್ವಾ 
ಯತಿ೦ ಮಂತ್ರಂಮಪಾದಿತತ್ ।
ಶ್ರೀ ವ್ಯಾಸತೀರ್ಥ ನಾಮಾನಾ೦ 
ಚಕ್ರೇ ಶಾಸ್ತ್ರಸ್ಯ ವಿಸ್ತೃತಃ ।।
ಸದ್ವಿಷ್ಟ೦ ಸುತಂ ದ್ವಿಜೇಂದ್ರಪತ್ನೀ 
ಶುಭಲಗ್ನೇ ಪರಿಪೂರ್ಣ ದೃಷ್ಟಿಭಾಜಿ ।
ಅಖಿಲ ದ್ವಿಜರಾಜ ವಂದನೀಯಂ
ದ್ವಿಜರಾಜಂ ದಿಗಿವಾಮರಾಧಿಪಸ್ಯ ।।
ಉದಯಾಸ್ತಪಟರಹೇಮಪೃಥ್ವೀಧರ-
ಪರ್ಯಂತಧರಾಚರೈರ್ಜನೌಗ್ಹೈ: ।
ಅಭಿವಂದ್ಯ ಇತೀವ ಬಾಲಕಸ್ಯ 
ವೃತನೋದ್ವೇ೦ಕಟನಾಥನಾಮ ತಾತಃ ।।
ಉಪಾಸದತ್ತಂ ಕುತುಕೇನ ಶೇಮುಷೀನಿಧಿ: 
ಸ ಲಕ್ಷ್ಮೀ ನರಸಿಂಹ ದೇಶಿಕಮ್ ।
ತಪೋಧಿ ಸಾಂದೀಪಿನಿ ಭೂಸುರೋತ್ತಮಂ 
ಯತಾ ಯಶೋದಾತನಯಸ್ತ್ರಯೀಮಯಃ ।।
ದ್ವಿಪಂಚಕೃತ್ವ: ಶ್ರುತಿಮಾತ್ರತಃ ಶ್ರುತಿ 
ತ್ರಿವಿಷ್ಟಪೋದ್ಯಾವನನೀಮಹೀರುವ ।
ವಟುರ್ದ್ವಿತೀಯಾ೦ ಪಟುಭಿರ್ವಯಸ್ಸ-
ಮೈರಧತ್ತ ಶಾಖಾ೦ ಧರಣೀ ಸುರೇಶ್ವರಃ ।।
ತಸ್ಯ ನಾಮ ಸ ದದೇ ಸದಾಶಿಷಾ 
ರಾಜರಾಜ ಇವ ರಾಜಿತಃ ಶ್ರಿಯಾ ।
ರಾಮಭದ್ರ ಇವ ಭದ್ರಭಾಜನಂ 
ತತ್ಕೃಪೇವ ಜಗತಾಂ ಹಿತೇ ರತಃ ।।
ಶ್ರೀ ಸುರೇಂದ್ರವದಾಯಂ ತಪಸ್ಯಯಾ 
ಶ್ರೀ ಜಯೀ೦ದ್ರ ಇವ ಕೀರ್ತಿ ಸಂಪದಾ ।
ವಿಶ್ರುತೋಹಮಿಹ ವಾದಸಂಗರೇ 
ರಾಘವೇಂದ್ರ ಯತಿರಾಟ್ ಸುಮೇಧಾತಾಮ್ ।।
ಮಂತ್ರೈ: ಪೂತೈರ್ವಾರಿಜಾದ್ಯೈ: ಪ್ರಸೂನೈ
ರ್ಮುಕ್ತಾಮುಖೈರತ್ನಜಾಲೈರುಪೇತೈ: ।
ವಾರ್ಭಿ: ಶಂಖಾಪೂರಿತೈ: ಸೋಭಿಷಿಚ್ಯ 
ಪ್ರಾಜ್ಞ೦ ವಿದ್ಯಾರಾಜ್ಯರಾಜಂ ವಿತೇನೇ ।।
by ಆಚಾರ್ಯ ನಾಗರಾಜು ಹಾವೇರಿ
     ಗುರು ವಿಜಯ ಪ್ರತಿಷ್ಠಾನ
****


***