Monday 1 July 2019

jayesha vittala dasaru kattemane mysore 1932 vaishakha bahula dwiteeya ಜಯೇಶ ವಿಠಲ ದಾಸರು



Sri Jayesha Vittala Dasaru1850-1932Attaji Venkata RaoJeyesha VittalaSri Vijaya Ramachandra Vittala DasaruMysoreVyshaka Bahula dwithiya
Sri. Jayesha Vittala Dasaru
Original Name: Sri. Attaji Venkata Rao
Period: 1850 - 1932
Ankita: Jayesha Vittala
Preceptor: Sri. Vijayaramachandra Vittala Dasaru
Place: Mysore

Aradhana: Vyshaka Bahula dwithiya 

jayEsha viTTalam dAsam Ibarama  gurupriyam|
Shri krishNapAda sadbhaktham vande sugnAna siddhayE||


VaishAka BahuLa Dwitiya ArAdhane of Shri Jayesha Vittala Dasaru of Kattemane,  Mysore.

He was a devotee of Sri Ibharamapura Appavaru just like his gurugaLu. He has composed more than 500 devaranAmAs and 10 suLAdIs. Made enormous contribution to Dasa Sahitya and Dasa Parampare.

He attained the feet is shri hari in 1932.

*****

ಜಯೇಶ ವಿಠಲರು ( ಕಟ್ಟೆಮನೆ ವೆಂಕಟರಾವ್ ), 1850 – 1923

info from kannadasiri.in

ಜಯೇಶವಿಠಲರು (1850-1932)

ಇಪ್ಪತ್ತನೆಯ ಶತಮಾನದ ಹರಿದಾಸರಲ್ಲಿ ಉನ್ನತ ಮಟ್ಟದ ಚಿಂತಕರೆಂದು ಹೆಸರಾದವರು ವಿಜಯ ರಾಮಚಂದ್ರವಿಠಲರ ಶಿಷ್ಯರಾದ ಜಯೇಶವಿಠಲರು. ಲೌಕಿಕವಿದ್ಯೆ, ಅಧಿಕಾರ, ಅಪಾರವಾದ ಐಶ್ವರ್ಯ ಇವೆಲ್ಲದರ ನಡುವೆ ಇದ್ದರೂ e್ಞÁನಾರ್ಜನೆ, ತತ್ವಚಿಂತನೆ, ಇವುಗಳಿಗೆ ಪ್ರಾಮುಖ್ಯತೆ ನೀಡಿ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಿದವರು ಇವರು. ಇವರ ಜನ್ಮಸ್ಥಳ ಬೆಂಗಳೂರು.

ಮಹಾರಾಷ್ಟ್ರದ ಪೇಶ್ವೆಯವರ ಆಡಳಿತ ಕಾಲದಲ್ಲಿ ಸೈನ್ಯದ ಅಧಿಕಾರದಲ್ಲಿದ್ದ ಅನೇಕ ಅಧಿಕಾರಿಗಳು ಬ್ರಿಟಿಷರ ಆಡಳಿತ ಕಾಲದಲ್ಲಿ ಬೆಂಗಳೂರಿನಲ್ಲಿ ಬಂದು ನೆಲೆಸಿದರು. ಈ ಅಧಿಕಾರಿಗಳಿಗೆ ಮೀರ್ ಅಮೀರ್ ಎಂಬ ಹೆಸರಿತ್ತು. ಈ ಮೀರ್ ಅಮೀರ್ ವಂಶೀಯರಲ್ಲಿ ಒಬ್ಬರಾದ ರಾಮರಾಯರಿಗೆ ಇಬ್ಬರು ಪತ್ನಿಯರು. ಮೊದಲ ಪತ್ನಿಗೆ ಒಬ್ಬ ಹೆಣ್ಣುಮಗಳು ಇದ್ದಳು. ಅವಳ ಹೆಸರು ಜೀವಣ್ಣಿಬಾಯಿ. ಮಂಗಳೂರಿನ ಹತ್ತಿರದ ಕೊಡೆಯಾಲದ ಜಹಗೀರದಾರನ ಮಗನೊಂದಿಗೆ ಈಕೆಯ ವಿವಾಹವಾಗಿತ್ತು. ಎರಡನೆಯ ಪತ್ನಿ ರಾಧಾಬಾಯಿಗೆ ಶೇಷಗಿರಿ, ಶ್ರೀನಿವಾಸ, ವೆಂಕಟರಾಯ ಎಂಬ ಮೂರು ಮಕ್ಕಳು. ಈ ವೆಂಕಟರಾಯರೇ ಮುಂದೆ ಜಯೇಶವಿಠಲರೆಂದು ಖ್ಯಾತರಾದ ಹರಿದಾಸರು.

ವೆಂಕಟರಾಯರ ಅಕ್ಕ ಜೀವಣ್ಣಿಬಾಯಿಯ ಪತಿ ಸೈನ್ಯದಲ್ಲಿ ಕ್ಯಾಪ್ಟನ್ ಆಗಿದ್ದು, ಯೌವ್ವನಾವಸ್ಥೆಯಲ್ಲೇ ನಿಧನ ಹೊಂದಿದ. ಲಕ್ಷಾಂತರ ರೂಪಾಯಿಗಳ ಜಹಗೀರಿ, ಆಸ್ತಿಯನ್ನು ಉಳಿಸಿಕೊಳ್ಳುವುದು ಜೀವಣ್ಣಿಬಾಯಿಗೆ ಕಷ್ಟವಾಗಿತ್ತು.

ಹಿರಿಯರ ಸಲಹೆಯಂತೆ ಜೀವಣ್ಣಿಬಾಯಿ ವೆಂಕಟರಾಯರನ್ನು ದತ್ತು ತೆಗೆದು ಕೊಂಡು ಆತನ ಉಪನಯನವನ್ನು ತನ್ನ ನೇತೃತ್ವದಲ್ಲಿ ನೆರವೇರಿಸಿದಳು. ಈ ದತ್ತಕ ನ್ಯಾಯಬದ್ಧವಲ್ಲವೆಂದು ದಾಯಾದಿಗಳು ಕೋರ್ಟಿನಲ್ಲಿ ಖಟ್ಲೆ ಹೂಡಿದರು. ಈ ಖಟ್ಲೆ ಹೈಕೋರ್ಟಿನಲ್ಲೂ ಇತ್ಯರ್ಥವಾಗದೆ ಬ್ರಿಟಿಷ್ ಪಾರ್ಲಿಮೆಂಟ್‍ವರೆಗೂ ಹೋಯಿತು. ಪಾರ್ಲಿಮೆಂಟ್ ಕೋರ್ಟುಗಳ ತೀರ್ಪುಗಳನ್ನು ರದ್ದುಗೊಳಿಸಿ ದತ್ತಕವನ್ನು ಸಕ್ರಮಗೊಳಿಸಿದ್ದರಿಂದ ಆ ಕಾಲಕ್ಕೆ ಲಕ್ಷಾಂತರ ರೂಪಾಯಿಗಳ ಜಹಗೀರಿ ಜೀವಣ್ಣಿಬಾಯಿಯ ಮತ್ತು ವೆಂಕಟರಾಯರ ವಶವಾಯಿತು. ಹೀಗೆ ಬಾಲ್ಯದಲ್ಲೇ ಶ್ರೀಮಂತಿಕೆಯ ನಡುವೆ ಬೆಳೆದವರು ವೆಂಕಟರಾಯರು.

ವೆಂಕಟರಾಯರ ಬಾಲ್ಯ ವಿದ್ಯಾಭ್ಯಾಸ ಮಂಗಳೂರಿನಲ್ಲಿ ನಡೆಯಿತು. ಹೈಸ್ಕೂಲು ವಿದ್ಯಾಭ್ಯಾಸ ಮತ್ತು ಮೆಟ್ರಿಕ್ ಪರೀಕ್ಷೆ ಓದುವುದಕ್ಕೆ ಬೆಂಗಳೂರಿನಲ್ಲಿ ವ್ಯವಸ್ಥೆ ಮಾಡಲಾಯಿತು. ಇದಕ್ಕಾಗಿ ಒಂದು ಮನೆಯನ್ನೇ ಕೊಂಡುಕೊಂಡು ಸಿಬ್ಬಂದಿಯನ್ನೂ ನೇಮಿಸಿ ಮಗನ ವಿದ್ಯಾಭ್ಯಾಸಕ್ಕೆ ಜೀವಣ್ಣಿಬಾಯಿ ಅನುಕೂಲಗಳನ್ನು ಕಲ್ಪಿಸಿದಳು. ಮೇಧಾವಿಗಳಾದ ವೆಂಕಟರಾಯರು 1868ರ ಮೆಟ್ರಿಕ್ ಪರೀಕ್ಷೆಯಲ್ಲಿ ಮೈಸೂರು ದೇಶಕ್ಕೇ ಮೊದಲನೆಯವರಾಗಿ ಉತ್ತೀರ್ಣರಾದರು. ಮುಂದೆ 1899ರಲ್ಲಿ ಎಫ್.ಎ. ಪರೀಕ್ಷೆಯಲ್ಲಿ ಉನ್ನತ ದರ್ಜೆಯಲ್ಲಿ ತೇರ್ಗಡೆಯಾದರು. ಅನಂತರ ಮದರಾಸಿನ ಪ್ರೆಸಿಡÉನ್ಸಿ ಕಾಲೇಜಿನಿಂದ 1870ರಲ್ಲಿ ಬಿ.ಎ. ಪದವಿ ಪಡೆದರು.

ಯುವಕರಾದ ವೆಂಕಟರಾಯರು ಜಹಗೀರ್‍ದಾರರಿಗೆ ತಕ್ಕ ಬೆಲೆಬಾಳುವ ಉಡುಪು ಮತ್ತು ಆಭರಣಗಳನ್ನು ಧರಿಸಿ ಶ್ರೀಮಂತ ಜೀವನ ನಡೆಸಿದರು. ಅವರಿಗೆ ಒಬ್ಬ ಅಂಗರಕ್ಷಕನೂ ಇದ್ದ. ತಿರುವಾಂಕೂರಿನ ದಿವಾನರಾಗಿದ್ದ ಸರ್.ಟಿ. ಮಾಧವರಾಯರ ತಮ್ಮ ಹರಿರಾಯರೆಂಬುವರು ಮದರಾಸಿನಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಅವರ ಮಗಳು ರಾಧಾಬಾಯಿಯ ಜೊತೆ ವೆಂಕಟರಾಯರ ವಿವಾಹವಾಯಿತು.

ಪದವೀಧರರಾದ ಮೇಲೆ ವೆಂಕಟರಾಯರು ನಾಮಕಲ್ ನರಸಿಂಹನ ದರ್ಶನಕ್ಕೆ ಹೊರಟು ಒಂದು ವಾರ ಅಲ್ಲಿ ಕಳೆÀದರು. ಅದೇ ವೇಳೆಯಲ್ಲಿ ಅಲ್ಲಿಗೆ ಬಂದಿದ್ದ ಮೈಸೂರಿನ ಅನೇಕ ಭಕ್ತರ ಪರಿಚಯವಾಯಿತು. ಇವರೆಲ್ಲ ವಿಜಯ ರಾಮಚಂದ್ರವಿಠಲರ ಶಿಷ್ಯರು. ಇವರಿಂದ ಗುರುಗಳ ಮಹಿಮೆಯನ್ನು ಕೇಳಿ ವೆಂಕಟರಾಯರು ಮೈಸೂರಿನಲ್ಲಿ ಗುರುಗಳನ್ನು ಕಾಣಲು ಪ್ರಯಾಣ ಬೆಳೆಸಿದರು. ಹಲವಾರು ದಿನ ವಿಜಯ ರಾಮಚಂದ್ರರ ಗುರುಕುಲ ವಾಸದಲ್ಲಿ e್ಞÁನ ಸಂಪಾದನೆ ಮಾಡಿದರು. ವಿವಾಹಿತನಾದ ಮಗ ತಾರುಣ್ಯದಲ್ಲೇ ವೈರಾಗ್ಯ ಪರನಾದುದನ್ನು ತಿಳಿದ ಜೀವಣ್ಣಿಬಾಯಿ ಮೈಸೂರಿನಲ್ಲೇ ಮನೆಯನ್ನು ಮಾಡಿ ಸೊಸೆಯನ್ನು ಕರೆಸಿಕೊಂಡಳು. ಗುರುಗಳ ಉಪದೇಶದಂತೆ ವೆಂಕಟರಾಯರು ತಾಯಿಯ ಮನೆಗೆ ಹಿಂತಿರುಗಿದರು. ವೆಂಕಟರಾಯರು ಗುರುಕುಲವಾಸದಲ್ಲಿ ಮಾಡಿದ ಶುಶ್ರೂಷೆಗೆ ಸಂತೋಷಗೊಂಡ ಗುರುಗಳು ಜಯೇಶವಿಠಲ ಎಂಬ ಅಂಕಿತವನ್ನು ನೀಡಿದರು. ಅವರು ಅಂಕಿತ ಪಡೆದಾಗ ಅವರ ವಯಸ್ಸು ಕೇವಲ 23. ಈ ವಯಸ್ಸಿನಲ್ಲೇ ಭಕ್ತಿ, ನಿಷ್ಠೆ, ಅನುಷ್ಠಾನ, ವೈರಾಗ್ಯ ಭಾವನೆಗಳನ್ನು ಬೆಳೆಸಿಕೊಂಡಿದ್ದರು. ಅವರ ಐಶ್ವರ್ಯ ಮತ್ತು ಲೌಕಿಕ ವಿದ್ಯಾಭ್ಯಾಸದ ಪದವಿಗಳು ವೈರಾಗ್ಯ ಭಾವನೆಗೆ ಅಡ್ಡಿಯಾಗಲಿಲ್ಲ.

1875ರಲ್ಲಿ ವೆಂಕಟರಾಯರಿಗೆ ಸರ್ಕಾರಿ ಹುದ್ದೆ ದೊರೆಯಿತು. ಪ್ರೊಬೇಷನರಿ ಅಸಿಸ್ಟೆಂಟ್ ಕಮೀಷನರ್‍ಗೆ ಸಮನಾದ ಅಟ್ಯಾಚಿ ಹುದ್ದೆಯು ದೊರೆಯಿತು. ಸಿರಿವಂತ ರೈತರು ಸಂಗ್ರಹಿಸಿ ಇಟ್ಟಿದ್ದ ಧಾನ್ಯವನ್ನು ಸರ್ಕಾರ ನಿಗದಿಪಡಿಸಿದ ಬೆಲೆ ನೀಡಿ ವಶಪಡಿಸಿಕೊಂಡು ಅದನ್ನು ಬಡವರಿಗೆ ಹಂಚುವುದು ಅಟ್ಯಾಚಿ ಅಧಿಕಾರಿಗಳ ಕೆಲಸ. ಈ ಹುದ್ದೆಯಲ್ಲಿ ಎಷ್ಟು ಜನಪ್ರಿಯರಾದರೆಂದರೆ ಜನರ ಬಾಯಲ್ಲಿ ಅಟ್ಟಾಜಿ ವೆಂಕಟರಾಯರೆಂದೇ ಪ್ರಸಿದ್ಧರಾದರು. ಅಟ್ಯಾಚಿ ಎಂಬ ಇಂಗ್ಲೀಷ್ ಪದದ ರೂಪಾಂತರವೇ ಅಟ್ಟಾಜಿ. 1882ರಲ್ಲಿ ಅಟ್ಯಾಚಿ ಹುದ್ದೆಯಲ್ಲಿದ್ದವರನ್ನೆಲ್ಲ ಅಮಲ್ದಾರರ ದರ್ಜೆಗೆ ವರ್ಗಾಯಿಸಿದರು. ಒಂದು ವರ್ಷ ಕಾಲ ವೆಂಕಟರಾಯರು ರಜೆ ಹಾಕಿದರು. ಶ್ರೀ ಶೇಷಾದ್ರಿ ಅಯ್ಯರ್ ಅವರು ದಿವಾನರಾಗಿ ಬಂದಾಗ ವೆಂಕಟರಾಯರಿಗೆ ಮತ್ತೆ ಅಸಿಸ್ಟೆಂಟ್ ಕಮೀಷನರ್ ಹುದ್ದೆ ದೊರೆಯಿತು. ತುಮಕೂರು, ಸಕಲೇಶಪುರ, ಚಿಕ್ಕಬಳ್ಳಾಪುರ ಈ ಸ್ಥಳಗಳಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ಅನಂತರ ಡೆಪ್ಯುಟಿ ಕಮೀಷನರ್ ಆದರು. ಶಿವಮೊಗ್ಗ, ಕಡೂರು, ತುಮಕೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಡೆಪ್ಯುಟಿ ಕಮೀಷನರ್ ಆಗಿ ಕಾರ್ಯ ನಿರ್ವಹಿಸಿದರು. ಮೈಸೂರಿನ ಮ್ಯಾಜಿಸ್ಟ್ರೇಟರಾಗಿ 1907ರಲ್ಲಿ ನಿವೃತ್ತರಾದರು.

ವೆಂಕಟರಾಯರಿಗೆ ಮೂರು ಮಂದಿ ಪತ್ನಿಯರು. ಮೊದಲ ಪತ್ನಿ ರಾಧಾಬಾಯಿಗೆ ಮೂರು ಮಂದಿ ಮಕ್ಕಳು. ಮೊದಲ ಪತ್ನಿ ತೀರಿಕೊಂಡ ಮೇಲೆ 1882ರಲ್ಲಿ ವೆಂಕಟರಾಯರು ಎರಡನೆಯ ಮದುವೆಯಾದರು. ಎರಡನೆಯ ಪತ್ನಿಗೆ ಮಕ್ಕಳಿರಲಿಲ್ಲ. ಆಕೆಯೂ ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡಳು. ಅನಂತರ ಕುಂಭಕೋಣದ ದೇವಾಜಿರಾಯರ ಹಿರಿಯ ಮಗಳು ಕಮಲಾಬಾಯಿಯವರ ಜೊತೆ ವೆಂಕಟರಾಯರ ಲಗ್ನವಾಯಿತು. ರಾಯರ ಆಧ್ಯಾತ್ಮಿಕ ಸಾಧನೆಗೆ ಲೌಕಿಕ ವ್ಯವಹಾರಗಳಿಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡುತ್ತಿದ್ದ ಕಮಲಾಬಾಯಿ ಪತಿಯಂತೆಯೇ ಧಾರ್ಮಿಕ ಮನೋಭಾವದವರೂ ಚಿಂತಕರೂ ಆಗಿದ್ದರು. ತಮ್ಮ ಪತಿಯಿಂದಲೇ `ಗುರು ಜಯೇಶವಿಠಲ ' ಎಂಬ ಅಂಕಿತ ಪಡೆದು ಕೀರ್ತನೆಗಳನ್ನು ರಚಿಸಿದರು (ನೋಡಿ ಅನುಬಂಧ-4)

ಜಯೇಶವಿಠಲರು ತಾವು ಅಧಿಕಾರದಲ್ಲಿದ್ದಾಗ ಮತ್ತು ನಿವೃತ್ತರಾದ ಮೇಲೆ ಮೈಸೂರಿನ 'ಕಟ್ಟೆಮನೆ' ಎಂಬ ಸ್ಥಳವನ್ನು ತಮ್ಮ ಆಧ್ಯಾತ್ಮಿಕ ಸಾಧನೆಯ ಕೇಂದ್ರವಾಗಿಸಿಕೊಂಡಿದ್ದರು. ಹರಿಗುರುಗಳ ಸೇವೆ, e್ಞÁನಿಗಳ ಸಂಪರ್ಕ, ಶಿಷ್ಯರ ಜೊತೆ ಚರ್ಚೆ, ಬೋಧನೆ ಇವೆಲ್ಲ ನಡೆಯುತ್ತಿದ್ದ ಕಟ್ಟೆಮನೆ ಒಂದು ಹರಿದಾಸ ಕೇಂದ್ರವೇ ಆಗಿತ್ತು. ಕಟ್ಟೆಮನೆಯ ಭಕ್ತವರ್ಗದವರೊಂದಿಗೆ ತೀರ್ಥಕ್ಷೇತ್ರಗಳ ಸಂದರ್ಶನವನ್ನು ಜಯೇಶವಿಠಲರು ಹಲವಾರು ಬಾರಿ ಮಾಡಿದ್ದರು. ಹೊಳವನಹಳ್ಳಿ ನರಸಿಂಗರಾಯರು (ಪ್ರಸನ್ನವಿಠಲ), ಎಸ್.ನಾರಾಯಣರಾಯರು (ಪರಾತ್ಪರವಿಠಲ), ವೆಂಕಟರಮಣಾಚಾರ್ಯರು (ಕರಿವರದವಿಠಲ), ಶ್ರೀನಿವಾಸರಾಯರು (ಯದುಪತಿವಿಠಲ) ಅರ್ಚಕ ರಾಮರಾಯರು (ರಾಮವಿಠಲ), ಮುರಾರಿರಾಯರು (ಸರ್ವಜ್ಞವಿಠಲ) ಹೀಗೆ ಜಯೇಶವಿಠಲರು ಹಲವು ಶಿಷ್ಯರಿಗೆ ದಾಸದೀಕ್ಷೆ ನೀಡಿದ್ದರು.

ಎಂಭತ್ತೆರಡು ವರ್ಷಗಳ ತುಂಬು ಜೀವನವನ್ನು ಆಧ್ಯಾತ್ಮಿಕ ಪರಿಸರದಲ್ಲೇ ಕಳೆದ ಜಯೇಶವಿಠಲರು ಆಂಗೀರಸ ಸಂವತ್ಸರದ ವೈಶಾಖ ಬಹುಳ ದ್ವಿತೀಯ (21-5-1923) ಶನಿವಾರ ಹರಿಪದವನ್ನು ಸೇರಿದರು. ಸ್ವಾತಂತ್ರ್ಯಪೂರ್ವದ ಹಳೆಯ ಮೈಸೂರು ಪ್ರಾಂತ್ಯದಲ್ಲಿ ಒಂದು ಆಧ್ಯಾತ್ಮಿಕ ಶಕ್ತಿಯಾಗಿ ಚಿಂತಕರಿಗೆ ಮಾರ್ಗದರ್ಶನ ಮಾಡಿದವರು ಜಯೇಶವಿಠಲರು.

ಅದೇ ಕಾಲದಲ್ಲಿ ಹರಿದಾಸ ಮಾರ್ಗದಲ್ಲಿ ಪ್ರಸಿದ್ಧರಾಗಿದ್ದ ತಂದೆ ಮುದ್ದು ಮೋಹನದಾಸರು, ಗೋವಿಂದದಾಸರು, ಜಯೇಶವಿಠಲರ ಆಧ್ಯಾತ್ಮಿಕ ಬಂಧುಗಳಾಗಿದ್ದರು. ರೋಗರುಜಿನಗಳ ಉಪಟಳ, ಬರಗಾಲ, ಯುದ್ಧಗಳ ಭೀತಿ ಇವುಗಳ ನಡುವೆ ಬದುಕುತ್ತಿದ್ದ ಜನರ ಹತಾಶ ಭಾವನೆಗಳನ್ನು ದೂರಮಾಡಿ ಅವರನ್ನು ಆಧ್ಯಾತ್ಮಪರರಾಗುವಂತೆ ಮಾಡಿದ ಈ ಮೂವ್ವರ ಕಾರ್ಯ ಉಲ್ಲೇಖನೀಯ.

ಜಯೇಶವಿಠಲರ ಕೃತಿಗಳು ಪೂರ್ಣವಾಗಿ ದೊರೆತಿಲ್ಲ. ತಮ್ಮ ಗುರುಗಳು ಆತ್ಮಸಂತೋಷಕ್ಕಾಗಿ ಮತ್ತು ಚಿಂತನೆಗಾಗಿ ರಚಿಸಿದ ಕೃತಿಗಳು ಅವರ ಶಿಷ್ಯವರ್ಗಕ್ಕೆ ಮಾತ್ರ ಸೀಮಿತವಾಗಿರಬೇಕು ಎಂದು ಭಾವುಕರಾಗಿ ಹೇಳುವ ದಾಸರ ಅಭಿಮಾನಿಗಳು ಅವರ ಕೃತಿಗಳನ್ನು ಪ್ರಕಟಿಸಿಲ್ಲ. ಆದರೂ ಬಿಡಿಬಿಡಿಯಾಗಿ ಜಯೇಶವಿಠಲರ ಕೀರ್ತನೆಗಳನ್ನು ಹಾಡುವವರು ಅನೇಕ ಮಂದಿ ಇದ್ದಾರೆ.

ಜಯೇಶವಿಠಲರ ಕೀರ್ತನೆಗಳು ಪ್ರೌಢವೂ ಅರ್ಥಗರ್ಭಿತವೂ ಆದ ಬಿಗಿಯಾದ ಬಂಧಗಳು. ವಿಜಯದಾಸರ ಸುಳಾದಿಗಳು, ಜಗನ್ನಾಥದಾಸರ ಹರಿಕಥಾಮೃತಸಾರ, ತತ್ವಸುವ್ವಾಲಿ, ಮೊದಲಾದ ಗ್ರಂಥಗಳಲ್ಲಿ ಪ್ರತಿಪಾದಿತವಾದ ತಾತ್ವಿಕ ವಿಷಯಗಳ ಅಧ್ಯಯನದಿಂದ ರೂಪುಗೊಂಡ ಗಂಭೀರ ಚಿಂತನೆಗಳು ಇಲ್ಲಿ ಕೀರ್ತನೆಗಳ ರೂಪ ತಳೆದಿದೆ. ತತ್ವ ಚಿಂತನೆಯೇ ಈ ಕೃತಿಗಳ ಪ್ರಮುಖ ವಸ್ತು ಹಾಸ್ಯ, ಸಮಾಜ ವಿಡಂಬನೆ, ನೀತಿ ಬೋಧನೆ ಮೊದಲಾದ ಲೌಕಿಕ ವಿಷಯಗಳಿಗೆ ಇಲ್ಲಿ ಆಸ್ಪದವೇ ಇಲ್ಲ. ತತ್ವÀಚಿಂತನೆಯನ್ನು ತೂಕ ತಪ್ಪದಂತೆ ಗಂಭೀರವಾಗಿ ನಿರ್ವಹಿಸುವುದರಲ್ಲಿ ದಾಸರಿಗಿದ್ದ ಅಪಾರ ಶ್ರದ್ಧೆ ಕೀರ್ತನೆಗಳಲ್ಲಿ ವ್ಯಕ್ತವಾಗಿದೆ.

ದೇಹ ಮತ್ತು ಮನಸ್ಸುಗಳು ಲೌಕಿಕ ವಿಷಯಗಳನ್ನು ಬಯಸಿ ಅವನ್ನು ಪಡೆಯಲು ಸದಾ ಹಂಬಲಿಸುತ್ತವೆ. ಆದರೆ ಇದರಿಂದ ಕೊನೆಗೆ ದೊರೆಯುವುದು ದುಃಖವೇ ಹೊರತು ಸುಖವಲ್ಲ. ಈ ಆಸೆಗಳು ಮನುಷ್ಯನ ನಿರ್ಧಾರಗಳನ್ನು ಮೆಟ್ಟಿ ಅವನನ್ನು ನಿಯಂತ್ರಿಸಲು ಪ್ರಯತ್ನಿಸುತ್ತವೆ. ದೈವಿಕ ವಿಷಯಗಳಲ್ಲಿ ಆಸಕ್ತಿ ತೋರಲು ಅವಕಾಶವನ್ನೇ ಕೊಡುವುದಿಲ್ಲ. ಮನುಷ್ಯನ 'ಹೀನಯೋಗ್ಯತೆ'ಯ ಸ್ವರೂಪವೇ ಹೀಗೆ :

1. ಮನಕರಣಗಳು ಎನ್ನ ತಮ್ಮ ಸೆರೆಯಲಿ ಇಟ್ಟು

ಘನಯಾತನೆಯಪಡಿಸಿ ಮೂರ್ಛೆಗೊಳಿಸಿ

ಕ್ಷಣ ಬಿಡದೆ ದಣಿಸುವುದು ಮೊರೆಯಿಡಲು ಮುಖವಿಲ್ಲ (ಕೀ. 87)

2. ಎನ್ನ ಹೀನತೆ ನೋಡಿ ಘನ್ನ ಭಯಗೊಂಡಿಹೆನೊ (ಕೀ. 88)

3. ಲಜ್ಜೆಯಾಗುತಿದೆ ಎನ್ನ ದೋಷರಾಶಿಗಳೊರೆಯೆ (ಕೀ. 94)

4. ಕರ್ಮದಾಧೀನದಲಿ ಅಹಂ ಮಮಕರ ಪೊಂದಿ

ದುಮ್ಮನವ ಬೆಳೆಸಿದೆನೊ ಅವಶನಾಗಿ (ಕೀ. 75)

ಈ ಹೀನ ಯೋಗ್ಯತೆಯಿಂದ ಮನಶ್ಶಾಂತಿಯನ್ನು ಕಳೆದುಕೊಂಡು ಜೀವ ತಲ್ಲಣಿಸುತ್ತದೆ. `ಯಾತನೆಯಲಿ ಹಣ್ಣಾದೆ , ಪಾತಕಕೆ ಕೊನೆಗಾಣೆ, ದೋಷಪುಂಜನು ನಾನು, ಬನ್ನಬಟ್ಟೆನೊ ಬಹಳ ಬಲು ಹೀನ ವೃತ್ತಿಯಲಿ, ಹುಸಿ ನಂಬಿ ತೆರಳುತಿಹೆ ಹರುಷ ಕಾಣದೆ ನಿಜದೆ, ಕಾತರವ ಪಡುತಿಹೆನೊ ಅಸುರ ಕರ್ಮದಿ ಸಿಕ್ಕಿ, ತಾಮಸದಿ ಸಿಗಿ ಬಿದ್ದು ಪಾಮರ ನಾನಾದೆ, ಮನೋವಿಕಾರಗಳೆಂಬ ದುಃಖಾರ್ಣವದಿ ಬಿದ್ದು ಅನುಮಾನ ಮಾಡಿದೆನೊ'-ಹೀಗೆ ಜಯೇಶವಿಠಲರು ಹೆಜ್ಜೆಹೆಜ್ಜೆಗೂ ಆತ್ಮಶೋಧನೆ ಮಾಡಿಕೊಂಡು ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರಯತ್ನಿಸುತ್ತಾರೆ. ನಾನು ನನ್ನದು ಎಂಬ ಅe್ಞÁನವೇ ಎಲ್ಲ ಯಾತನೆಗಳ ಮೂಲ. ಈ ಅe್ಞÁನ ಮನುಷ್ಯನನ್ನು ವಿಷಯ ಸುಖವೆಂಬ ದುರ್ಗುಣದ ಪಂಕದಲ್ಲಿ ಕೆಡವಿ ವಿಷಕ್ರಿಮಿಯಾಗುವಂತೆ ಮಾಡುತ್ತದೆ. ಪಾತಕಿಗಳ ಸಹವಾಸದಲ್ಲಿ ಕಾತರ ಪಡುವಂತೆ ಮಾಡುತ್ತದೆ (ಕೀ.46) ಇದನ್ನೇ `ಅಸುರಕರ್ಮ' ಎಂದು ದಾಸರು ಕರೆಯುತ್ತಾರೆ. `ಅಸು' ಎಂದರೆ ಇಂದ್ರಿಯಗಳ ವಿಷಯಾಸಕ್ತಿ. ಈ ಇಂದ್ರಿಯಗಳನ್ನು ತೃಪ್ತಿಪಡಿಸುವುದರಲ್ಲಿ ನಿರತರಾದವರೇ ಅಸುರರು. ದೈವಚಿಂತನೆಯನ್ನು ಬಿಟ್ಟು ವಿಷಯಾಸಕ್ತ ಕಾರ್ಯಗಳಲ್ಲಿ ನಿರತನಾಗುವುದೇ `ಅಸುರಕರ್ಮ'. ಮನುಷ್ಯನಾಗಿ ಹುಟ್ಟಿ ಈ ಅಸÀುರಕರ್ಮವನ್ನು ಮಾಡುವುದು ಮಾನವಧರ್ಮಕ್ಕೇ ಅಪಚಾರ. ಮನುಷ್ಯನ ಖೋಡಿಗುಣ, ನಾಸ್ತಿಕಪ್ರಜ್ಞೆ, ಮತಿಭ್ರಷ್ಟತೆ ಇವಕ್ಕೆಲ್ಲ ಕಾರಣವಾದ ಮರುವೆಂಬ ಮಾರಿಯನ್ನು ದೂರ ಮಾಡಿದಾಗ ಮಾತ್ರ ಹರಿಯ ಒಲುಮೆಯನ್ನು ಪಡೆಯಲು ಸಾಧ್ಯ ಎಂದು ಜಯೇಶವಿಠಲರು ಭಾವಿಸುತ್ತಾರೆ. ಹೀಗೆ ಆತ್ಮಶೋಧನೆ ಮಾಡಿಕೊಂಡಾಗ ಅಹಂ ಮಮಕಾರಗಳು ದೂರವಾಗುತ್ತವೆ.

1. ದರ್ವಿಯಂದದಿ ನಾನು ನೀ ಸರ್ವ ಸ್ವಾತಂತ್ರ್ಯ

ನಿರ್ವಾಹ ನಿನ್ನಿಂದ ಸರ್ವ ಜಗಕೆ (ಕೀ.41)

2. ಸರ್ವಕೂ ನೀ ಮೂಲ ಹರಿಯೆ ಕೇಳೊ

ದರ್ವಿ ಜೀವರ ಕೈಲಿ ಏನಾಹುದೆಲೊ ದೇವ (ಕೀ.74)

ಎಂಬ ವಿನಯ ಮೂಡುತ್ತದೆ. `ದರ್ವಿ' ಎಂದರೆ ಸೌಟು, ಸಟ್ಟುಗ ಎಂದು ಅರ್ಥ. ಸೌಟು ಆಹಾರ ಪದಾರ್ಥಗಳ ಸಂಪರ್ಕದಲ್ಲೇ ಇದ್ದರೂ, ಅವುಗಳ ಬಣ್ಣ, ವಾಸನೆ, ರುಚಿ, ಸ್ವಾದಗಳನ್ನು ಅನುಭವಿಸುವ ಶಕ್ತಿ ಪಡೆದಿಲ್ಲ. ಜೀವಿಗಳ ಸ್ವಾತಂತ್ರ್ಯ ಕೂಡ ಈ ಸೌಟಿನಂತೆಯೆ. ಸೃಷ್ಟಿ, ಸ್ಥಿತಿ, ಸಂಹಾರ, ನಿಯಮನ, e್ಞÁನಪ್ರದತ್ವ, ಅe್ಞÁನಪ್ರದತ್ವ, ಸಂಸಾರ ಬಂಧನ, ಮೋಕ್ಷಪ್ರದತ್ವ ಈ ಅಷ್ಟಕರ್ತೃತ್ವಗಳನ್ನು ಮಾಡುವ ಶಕ್ತಿ ಇರುವುದು ಹರಿಯೊಬ್ಬನಿಗೇ ಆದ್ದರಿಂದ, ಹರಿಯೊಬ್ಬನೇ ಸ್ವತಂತ್ರ ಉಳಿದವರೆಲ್ಲ ಅವನ ದಾಸರು ಎಂಬ ದಾಸತ್ವ ಭಾವನೆಗೆ ಆತ್ಮಶೋಧನೆ ಅನುವು ಮಾಡಿಕೊಡುತ್ತದೆ.

ದೇವರು ಮತ್ತು ಭಕ್ತರ ಸಂಬಂಧವನ್ನು ಪ್ರಸ್ತಾಪಿಸುವಾಗ ಜೀವಿಗಳು ಅಸ್ವಾತಂತ್ರ್ಯರೆಂದೂ, ಹರಿಯೊಬ್ಬನೇ ಸ್ವತಂತ್ರನೆಂದೂ ದಾಸರು ಭಾವಿಸುತ್ತಾರೆ. ಜೀವಿಗಳಿಗೆ ಸ್ವತಂತ್ರ ಕರ್ತೃತ್ವ ಇಲ್ಲ. ಇದೆ ಎಂದು ಭಾವಿಸುವುದಾದರೆ ಅದು ಕೇವಲ ಭ್ರಮೆ. e್ಞÁನ, ಪ್ರಾಣ, ಜೀವ, ಜಡ, ಕಾಲ, ಕರ್ಮ ಎಲ್ಲಕ್ಕೂ ಹರಿಯೆ ಮೂಲ ಕಾರಣ ಎಂದು ದಾಸರ ನಂಬಿಕೆ.

1. ನೀನೆಂತು ನಮ್ಮಲ್ಲಿ ನಿಂತು ಕುಣಿಸಿದರಂತು

e್ಞÁನೇಚ್ಛೆ ಯತ್ನ ಮನ ಕರಣದೇವ ಕೀ.55

2. ಒಳಗಿದ್ದು ಎನ್ನಲ್ಲಿ ಎಂತೆಂತು ನೀನಾದೆ

ತಲೆಮಣಿದು ನಾನಂತು ಮಾಡಬೇಕು ಕೀ.47

3. ಕಾಣುವುದು ಕೇಳುವುದು ಗಂಧ, ರಸ, ಸ್ಪರ್ಶಗಳು

ನಾನಾ ಬಗೆ ವಿಷಯಗಳು ನೀನೆ ರಂಗ ಕೀ.56

ಸಾಧನೆ ಮಾಡುವ ವಿಷಯದಲ್ಲೂ ಜೀವಿಗಳಿಗೆ ಸ್ವಾತಂತ್ರ್ಯವಿಲ್ಲ. ತನು, ಮನ, ಕರಣತ್ರಯಗಳು ಶ್ರೀಹರಿಯ ಅಧೀನವೇ ಆಗಿರುವುದರಿಂದ ಮನುಷ್ಯನ ಸಾಧನೆ ಕೂಡ ಹರಿಚಿತ್ತದಂತೆಯೇ ನಡೆಯುತ್ತದೆ. ನಮ್ಮದೆಂದು ನಾವು ಭಾವಿಸುವ ಸಾಧನೆಗಳು ವಾಸ್ತವವಾಗಿ ನಮ್ಮದಲ್ಲ. 'ಈ ಪಾತ್ರದೊಳಗಿದ್ದು ನೀ ಮಾಳ್ಪ ಸಾಧನವೋ’ (ಕೀ.77) ಎಂಬ ತಾತ್ವಿಕ ನೆಲೆಯನ್ನು ಜೀವಿ ತಲುಪಿದಾಗ ತನ್ನ ನಡೆ ನುಡಿ, ದೃಷ್ಟಿಗಳಲ್ಲಿ ಲೌಕಿಕ ಅಪೇಕ್ಷೆಯನ್ನು ಮೀರಿದ ದೈವತ್ವವನ್ನೇ ಕಾಣುತ್ತಾನೆ.

ನಡೆವುದೇ ಯಾತ್ರೆಗಳು ನುಡಿವುದೇ ಸ್ತೋತ್ರಗಳು

ಬಿಡದೆ ನೋಡುವುದೆಲ್ಲ ನಿನ್ನ ಮೂರ್ತಿ

ಒಡನೆ ಕೇಳುವ ಶಬ್ದ ನಿನ್ನ ಮಂಗಳ ಕೀರ್ತಿ

ಪಡುವ ಭೋಗಗಳೆಲ್ಲ ನಿನ್ನ ಉಪಚಾರ ಕೀ.77

`ಜನರ ಮನ್ನಣೆ ದೃಷ್ಟಿ ಕನಸಿನಲಾದರೂ ಬೇಡ' (ಕೀ.50) ಎನ್ನುವ ಜಯೇಶವಿಠಲರು ಎಂದೂ ಕೀರ್ತಿಗಾಗಿ ಹಂಬಲಿಸಿದವರಲ್ಲ. `ನಿಜಭಕ್ತ ಪದವೀಯೊ ಋಜುವರ್ಗ ಸಂಪೂಜ್ಯ’ (ಕೀ.50) ಎಂದು ಪ್ರಾರ್ಥಿಸುವ ಇವರು ಭಕ್ತಿ, e್ಞÁನ, ಮತ್ತು ಹರಿಕರುಣೆಯನ್ನು ಮಾತ್ರ ಅಪೇಕ್ಷಿಸುತ್ತಾರೆ. ಭಗವಂತ ಕೊಟ್ಟಿದ್ದನ್ನು ಭಕ್ತಿಯಿಂದ ಸಂತೋಷದಿಂದ ಅನುಭವಿಸಿ ಸಾಕು ಬೇಕನ್ನದೆ ನಿರ್ಲಿಪ್ತ ಜೀವನ ನಡೆಸುವ ಸಂತೃಪ್ತ ಮನೋಭಾವ ದಾಸರದು. ನಮ್ಮ ಹಿತಾಹಿತಗಳು ಯಾವುದೆಂಬುದು ನಮಗಿಂತಲೂ ಆ ಭಗವಂತನಿಗೇ ಚೆನ್ನಾಗಿ ಗೊತ್ತು. ಸಮಸ್ತ ಜೀವರಾಶಿಯ ನಿತ್ಯಮಿತ್ರನಾಗಿ ಅನಂತ ಸಂಸಾರವನ್ನು ಅನುಗಾಲ ನಿರ್ವಹಿಸುವವನಿಗೆ ಹೇಳಬೇಕಾದಾದ್ದರೂ ಏನಿದೆ? ನಮ್ಮ ಕ್ಷೇಮದ ಜವಾಬ್ದಾರಿಯನ್ನು ಹೊತ್ತಿರುವ ಅನಿಮಿತ್ತ ಬಂಧು ಅವನು. ಆದ್ದರಿಂದ ಲೌಕಿಕ ವಿಷಯಗಳಿಗಾಗಿ ಪ್ರಾರ್ಥಿಸದೆ e್ಞÁನ ನೀಡುವಂತೆ ಕೋರುತ್ತಾರೆ.

1. ಎಲ್ಲ ಗುಣತ್ರಯ ರೂಪ ನಿನ್ನದೆಂಬೊ e್ಞÁನ

ಎಲ್ಲ ಕಾಲದಿ ಕೊಟ್ಟು ಶಿಷ್ಟರಲಿ ಇಡು ಎನ್ನ ಕೀ.56

2. ವಿದ್ಯೆ ಬುದ್ಧಿ e್ಞÁನ ಮನ ಕರಣಶಕ್ತಿ

ಸದ್ಧೈರ್ಯ ಸುಖನಿಧಿಯು ನಿರ್ಭೀತ ಪದವಿ

ಅದ್ವಯನೆ ನೀನೆನಗೆ ಅನಿಮಿತ್ತ ಬಂಧು ಹರಿ

ಸಿದ್ಧಿಸೈ ಈ e್ಞÁನ ಸರ್ವಕಾಲಕು ದೇವ ಕೀ.60

3. ಉದ್ಧವನ ಗುರು ಸುಧಾಮ ಮಿತ್ರನೆ ಮನ

ತಿದ್ದಯ್ಯ e್ಞÁನ ನಿನ್ನಲ್ಲಿ ನಿಲುವಂತೆ ಕೀ.63

4. ಮೋಚಕನೆ ಜಯೇಶವಿಠಲನೆ ವಿಧಿವಂದ್ಯ

ಯಾಚಿಪೆನು ವಿe್ಞÁನ ಕರುಣಿಸೆಂದು ಕೀ.49

e್ಞÁನ ಎಂದರೆ ವೇದಾದಿಗಳಲ್ಲಿ ಹೇಳಿರುವ ವಿಷ್ಣುಸರ್ವೋತ್ತಮತ್ವ e್ಞÁನ. ಇದರ ಜೊತೆ ವಿಷ್ಣುವಿನ ಸರ್ವಜ್ಞತ್ವ, ಸರ್ವಕರ್ತೃತ್ವ, ಮೊದಲಾದ ವಿಶೇಷ ಮಹಿಮೆಗಳ ಪರಿe್ಞÁನ ಸೇರಿದರೆ ವಿe್ಞÁನವೆನಿಸಿಕೊಳ್ಳುತ್ತದೆ. ಇತರ ಶಾಸ್ತ್ರಗಳಿಗಿಂತ ಭಿನ್ನವಾದ ವಿಷ್ಣುತತ್ವe್ಞÁನವೇ ವಿe್ಞÁನ. ಇಂಥ e್ಞÁನವನ್ನು ಕರುಣಿಸಬೇಕೆಂದು ದಾಸರು ಹರಿಯನ್ನು ಬೇಡುತ್ತಾರೆ. ಲೌಕಿಕ ಜೀವನದಲ್ಲಿ ಹಲವು ಪದವಿಗಳನ್ನು ಅನುಭವಿಸಿದರೂ, ದಾಸರು ಅಪೇಕ್ಷಿಸಿದ ಮಹಾಪದವಿ `ಹರಿದಾಸ್ಯ'. ಹರಿದಾಸ್ಯ ದೊರೆಯುವುದೂ ಅಷ್ಟೇನು ಸುಲಭವಲ್ಲ. ಹರಿ `ಮಹಿದಾಸ' ಎನಿಸಿಕೊಂಡವನು. ಮಹಿಮಾವಂತರಾದ ಲಕ್ಷ್ಮಿ ಬ್ರಹ್ಮಾದಿಗಳನ್ನೇ ದಾಸರನ್ನಾಗಿ ಮಾಡಿಕೊಂಡು `ಮಹಿದಾಸ ಪೂಜ್ಯ ಚರಣ' ಎನಿಸಿಕೊಂಡವನು. ರಮಾ ಬ್ರಹ್ಮರುದ್ರೇಂದಾದಿ ವಂದ್ಯನಾದ ಶ್ರೀಹರಿಯ ದಾಸ್ಯ ಮನುಷ್ಯ ವರ್ಗಕ್ಕೆ ದೊರೆಯುವುದಾದರೆ ಅದೇ ಮಹಾಪದವಿ. ಈ ಪದವಿ ದೊರೆಯುವುದಕ್ಕೂ ಹರಿಕರುಣೆ ಬೇಕು. ಹರಿಕರುಣೆ ಇಲ್ಲದವರು ಹರಿದಾಸರಾಗಲಾರರು. ಆದ್ದರಿಂದ ಭಗವಂತನ ಕರುಣೆಗಾಗಿ ದಾಸರು ಹಂಬಲಿಸುತ್ತಾರೆ.

1. ತಂದೆ ನಿನ್ನಯ ಕರುಣ ಉಂಬುವನೆ ಬಹುಧನ್ಯ ಕೀ.57

2. ಗೋಗೊಲ್ಲರಲಿ ಕರುಣ ಸುರಿದ ದೀನ ಬಂಧು

ಭಾಗ್ಯ ಪಾಲಿಸು ಭಕ್ತಿಯೋಗವಿತ್ತು ಕೀ.57

3. ಗುಣವಿಲ್ಲ ದೋಷಿಲ್ಲದೆಡೆಯಿಲ್ಲ ಎನ್ನಲ್ಲಿ

ದನುಜಾರಿ ನಿನ್ನವರ ಕರುಣ ಉಂಟೊ ಕೀ.54

4. ಮರುವೆಂಬ ಮಾರಿಯನು ಪರಿಹರಿಸು ಪರಿಪೂರ್ಣ

ಸುರಿ ನಿನ್ನ ಕರುಣ ರಸ ಪ್ರಾಣನಾಥ ಕೀ.58

5. ಮಹಿದಾಸ ಹರಿದಾಸ್ಯ ಮಹಪದವಿ ಕರುಣಿಸಯ್ಯ ಕೀ.66

6. ವೃಷಭಾದ್ರಿಪ ಸಖ ಜಯೇಶವಿಠಲನೆ ಕರುಣಾಬ್ಧಿ

ವರ್ಷಿಸೋ ಕೃಪೆವೃಷ್ಟಿ ಮದ್ಬಿಂಬಗಿದು ವಿಹಿತ ಕೀ.68

ಭಗವಂತ ತನ್ನ ಭಕ್ತರ ವಿಷಯದಲ್ಲಿ ಮಹಾಕರುಣಿ. ಇದು ಆರೋಪಿತ ಕಾರುಣ್ಯವಲ್ಲ. ತಾಯಿ ಮಕ್ಕಳ ಸಂಬಂಧದಂತೆ ಅತ್ಯಂತ ಸಹಜವಾದ ಮಾತೃಕರುಣೆ.

1. ಮಾಯೇಶ ಮಧುವೈರಿ ತಾಯಿಯಂದದಿ ಕಾಯೋ ಕೀ.60

2. ಅನುಗಾಲ ಸಲಹುವಿ ತಾಯಿಯಂತೆ ಕೀ.61

3. ಧೇನುವತ್ಸದ ತೆರದಿ ನೀ ಹಿತತೋರು ಕೀ.58

ಹೀಗೆ ಭಗವಂತನಲ್ಲಿ ಮಾತೃಪ್ರೇಮದ ವಾತ್ಸಲ್ಯವನ್ನು ಜಯೇಶವಿಠಲರು ಗುರುತಿಸುತ್ತಾರೆ. ಮಕ್ಕಳ ದೋಷಗಳನ್ನು ಎಣಿಸದೆ ಅವರನ್ನು ಅಕ್ಕರೆಯಿಂದ ನೋಡುವ, ತಿದ್ದುವ, ರಕ್ಷಿಸುವ ತಾಯಿಯ ಕರುಣೆಯಂತೆಯೇ ಭಗವಂತನ ಕರುಣೆ. ಈ ಕರುಣೆಯನ್ನು ಸಂಪಾದಿಸುವುದೇ ಭಕ್ತನ ಜೀವನದ ಧ್ಯೇಯ ಎಂಬುದು ದಾಸರ ಭಾವನೆ. ಇಂಥ ಆಧ್ಯಾತ್ಮಿಕ ಔನ್ನತ್ಯವನ್ನು ತಲುಪಿದ ಜೀವಿ ದೈವ ಸಾಕ್ಷಾತ್ಕಾರವನ್ನು ಬಿಟ್ಟು ಬೇರೇನನ್ನೂ ಬಯಸುವುದಿಲ್ಲ. ಅe್ಞÁನಾದಿ ದೋಷಗಳೆಂಬ ವಕ್ರಮಾರ್ಗರಹಿತವಾದ ಮನಸ್ಸು ಭಗವದ್ವಿಷಯಗಳಲ್ಲಿ ಪ್ರಾಮಾಣಿಕವಾಗಿ ವರ್ತಿಸುತ್ತದೆ.

1. ಎನ್ನಲ್ಲಿ ನಿನ್ನ ಕ್ರಿಯ ಅನುಭವದಿ ತಿಳಿಸೆನಗೆ

ಎನ್ನ ಮನ ಒಡಲಲ್ಲಿ ನಿನ್ನ ಮೂರ್ತಿಯ ತೋರೋ ಕೀ.75

2. ಹೃದ್ಧಾಮದಲಿ ನಿನ್ನ ದರುಶನವ ನೀಡಯ್ಯ ಕೀ.76

ಹೀಗೆ ಅಪರೋಕ್ಷಾನುಭವ ಪಡೆಯುವುದಕ್ಕೆ ಜೀವ ಹಂಬಲಿಸುತ್ತದೆ. `ಬಿಂಬ ನೀ ಪ್ರತಿಬಿಂಬ ನಾ ನಿನಗೆ ಎಂದೆಂದು' (ಕೀ.43) ಎಂದು ಭಾವಿಸಿ ತನ್ನ ಬಿಂಬರೂಪಿಯ ಸಾಕ್ಷಾತ್ಕಾರ ಹೊಂದುವುದೇ ಅಪರೋಕ್ಷಾನುಭವ. `ಬಿಂಬದಲಿ ನಡೆದ ಶ್ರೇಯ ನಿನ್ನದೆಂಬೊ e್ಞÁನ ಬೆಂಬಿಡದೆ ಪಾಲಿಸಿ ಬಿಂಬ ದರುಶನ ನೀಡೊ ' (ಕೀ.43)

ಇದು ಜಯೇಶವಿಠಲರ ಆಧ್ಯಾತ್ಮ ಜೀವನದ ಅಪೇಕ್ಷೆ.
****



ಇಂದುಮೌಳಿ ಪದಾಬ್ಜಾಳಿಂ/ ಮಂದ ಸಜ್ಜನ ತಾರಕಂ/
ಇಂದ್ರಕಾಮ ಸಮಾಭಾಸಂ/ ಸುಂದರಾಂಗ ಸಮನ್ವಿತಂ/
ವಿಜಯೋಪದೋಪೇತಮ್/ ಅಜಜಾತ ಸುತಾಖ್ಯಜಮ್/
ಶ್ರೀ ಜಯೇಶೇತಿ ದಾಸಾಖ್ಯಂ ಭಜೇ ವೈರಾಗ್ಯಶಾಲಿನಮ್//


 ವೈಶಾಖ ಬಹುಳ ದ್ವಿತೀಯ ಅಪ್ಪಾವರ ಪರಮಾನುಗ್ರಹಕೆ ಪಾತ್ರರಾದ ಶ್ರೀ ವಿಜಯರಾಮಚಂದ್ರವಿಠ್ಠಲ ಶಿಷ್ಯರಾದ ಜಯೇಶವಿಠಲರ ಆರಾಧನೆ , ಕಟ್ಟೆ ಮನೆ ಮೈಸೂರ

ಹೆಸರು : ಅಟ್ಟಜಿ ವೆಂಕಟರಾಯರು
ಅಂಕಿತ ನಾಮ : ಶ್ರೀಜಯೇಶವಿಠಲ
ಅಂಕಿತ ಪ್ರದಾನ : ಶ್ರೀವಿಜಯರಾಮಚಂದ್ರವಿಠ್ಠಲ
ಅಂಶ : ಮನ್ಮಥ

ಇಂದುಮೌಳಿ ಪದಾಬ್ಜಾಳಿಂ | 
ಮಂದ ಸಜ್ಜನ ತಾರಕಂ | 
ಇಂದ್ರಕಾಮ ಸಮಾಭಾಸಂ | 
ಸುಂದರಾಂಗ ಸಮನ್ವಿತಂ ||
ವಿಜಯೋಪದೋಪೇತಂ |
ಅಜಜಾತ ಸುತಾಖ್ಯಾಜಂ | 
ಶ್ರೀ ಜಯೇಶೇತಿ ದಾಸಾಖ್ಯಂ | 
ಭಜೇ ವೈರಾಗ್ಯಶಾಲಿನಂ ||

ಜಗದ್ಗುರು ಶ್ರೀಮನ್ ಮಧ್ವಾಚಾರ್ಯರ ಸಿದ್ಧಾಂತದ ಪ್ರಮೇಯಗಳನ್ನು ಸರಳವಾಗಿ ಜನಮನಕ್ಕೆ ಮುಟ್ಟುವಂತೆ ಮಾಡಿದವರು ನಮ್ಮ ಹರಿದಾಸರು. ಅಂತಹ ಹರಿದಾಸರಲ್ಲಿ ಜ್ಞಾನ ಭಕ್ತಿ ವೈರಾಗ್ಯ ಗುರುಭಕ್ತಿಯ ಪ್ರತೀಕವೇ ಶ್ರೀಜಯೇಶವಿಠಲ ದಾಸರು.

ಸಾತ್ವಿಕ ಮನೆತನದ ಶ್ರೀ ರಾಮರಾಯರು ಮತ್ತು ಶ್ರೀಮತಿ ರಾಧಾ ಬಾಯಿಯವರ ಪುತ್ರರತ್ನವಾಗಿ ಜನಿಸಿದ ದಾಸರಿಗೆ ಶ್ರೀ ವೆಂಕಟ ರಾಯರು ಅಂತ ನಾಮಕರಣವನ್ನು  ಮಾಡುತ್ತಾರೆ. ಇವರು  ಶ್ರೀಮಂತಿಕೆಯ ಸುಪತ್ತಿನಲ್ಲಿ ಬೆಳೆದವರು. ನೋಡಲು ತುಂಬಾ   ಸ್ಪೂರದ್ರೂಪಿಗಳು. ಅವರನ್ನು ನೋಡಿಕೊಳ್ಳಲು ಅಂಗರಕ್ಷಕರನು ನೇಮಿಸಿರುತ್ತಾರೆ ಅಂತಹ ಶ್ರೀಮಂತಿಕೆಯಲ್ಲಿ ಬೆಳೆದ ಶ್ರೀ ವೆಂಕಟರಾಯರು ಒಮ್ಮೆ ತಮ್ಮ ಮೈಮೇಲೆ ಹಾಕಿಕೊಂಡ ಆಭರಣವೆಲ್ಲವನ್ನು ರಸ್ತೆಯಲ್ಲಿ ಹಾಕಿ ತಮಗೆ ಈ ಜಡವಸ್ತುಗಳ ಮೇಲಿನ ಮೋಹ ಬೇಡ ಅಂತ  ತೇಜಿಸುತ್ತಾರೆ. ಜೊತೆಯಲ್ಲಿ ಇದ್ದ ಅಂಗರಕ್ಷರು ಈ ವಿಷಯವನ್ನು ಶ್ರೀರಾಮರಾಯರಿಗೆ ತಿಳಿಸುತ್ತಾರೆ.  ಎಲ್ಲ ಮೋಹಕವಾದ ಜಡವಸ್ತುಗಳು ಮೇಲಿನ ಮೋಹ ತೊರೆದು ಅಧ್ಯಾತ್ಮದ ಕಡೆ ಒಲವು ಹೆಚ್ಚಿಸಿಕೊಳ್ಳುತ್ತಾರೆ.

ಗುರು ಪ್ರಾಪ್ತಿ ಮತ್ತು ಅಂಕಿತ ಪ್ರದಾನ :
ಶ್ರೀ ಮುಖ್ಯಪ್ರಾಣ ಹಾಗೂ ನರಸಿಂಹ ದೇವರ ಸೇವೆಗೆಂದು 7 ದಿವಸ ಶ್ರೀದಾಸರು ನಾಮಕಲ್ ಕ್ಷೇತ್ರಕ್ಕೆ ಬಂದಿರುತ್ತಾರೆ. ಅಲ್ಲಿ ಬಂದ ಕೆಲವರು ಶ್ರೀವಿಜಯರಾಮಚಂದ್ರ ದಾಸರ ಸಾಧನೆ ಮತ್ತೆ ಮಹಿಮೆಗಳ ಬಗ್ಗೆ ಮಾತಾಡುವುದು ಅವರ ಕಿವಿಗೆ ಕೇಳಿಸುತ್ತದೆ, ಶ್ರೀವಿಜಯರಾಮಚಂದ್ರರ ಹೆಸರು ಕೇಳಿದಾಕ್ಷಣದಿಂದ ಶ್ರೀದಾಸರಿಗೆ ಮೈಯಲ್ಲಿ ರೋಮಾಂಚನ , ಮನಸ್ಸಲ್ಲಿ ಖುಷಿ ಯಾವುದೋ ಜನ್ಮದ ತುಂಬಾ ಹತ್ತಿರದ ಸಂಬಂಧದ ಹಾಗೆ ಅನುಭವ. ಮರುದಿನ ಮುಂಜಾನೆ ಬ್ರಾಹ್ಮಿ ಮುಹೂರ್ತದ ಸ್ವಪ್ನದಲ್ಲಿ ಮುಖ್ಯಪ್ರಾಣ ದೇವರು ಶ್ರೀವಿಜಯರಾಮಚಂದ್ರವಿಠಲ ದಾಸರ ಸಂದರ್ಶನ ಮಾಡಿ ಅವರ ಶಿಷ್ಯತ್ವ ಸ್ವೀಕರಿಸಲು ಸೂಚನೆ ಆಗುತ್ತದೆ ತಮಗಾದ ಸಾಕ್ಷಾತ್ ಶ್ರೀ ಮುಖ್ಯಪ್ರಾಣ ಹಾಗೂ ನರಸಿಂಹ ದೇವರ ಈ ಅನುಗ್ರಹ  ವರ್ಣಿಸಲು ಅಸಾಧ್ಯ. 

ತಮ್ಮ ಸ್ವರೂಪೋದ್ದಾರಕ ಗುರುಗಳನ್ನು ಆ ಕ್ಷಣವೇ ಭೇಟಿ ಮಾಡಲು ಹೊರಡುತ್ತಾರೆ. ನಾಮಕಲ್ ಇಂದ ಸೇಲಂಗೆ ಬರಿಗಾಲಿನಿಂದ ತೆರಳಿ ಅಲ್ಲಿಂದ ತಕ್ಷಣೆವೆ ಮೈಸೂರಿಗೆ ಪ್ರಯಾಣಿಸುತ್ತಾರೆ.

ಜ್ಞಾನಿಗಳಾದ ಶ್ರೀವಿಜಯರಾಮಚಂದ್ರವಿಠಲರಿಗೆ ತಮ್ಮಗೆ ಓರ್ವ ಯೋಗ್ಯನಾದ ಶಿಷ್ಯನ ಪ್ರಾಪ್ತಿಯಾಗುತ್ತದೆ ಎಂದು ಗೋಚರವಾಗಿ ಆತುರದಿಂದ ಕಾಯುತ್ತಿರುತ್ತಾರೆ. ಶ್ರೀ ವೆಂಕಟ ರಾಯರು ಮೈಸೂರಿಗೆ ತಲುಪಿ ಶ್ರೀವಿಜಯರಾಮಚಂದ್ರವಿಠಲರನ್ನು ಭೇಟಿಯಾಗುತ್ತಾರೆ. ತಮಗಾದ ಸ್ವಪ್ನದ ಬಗ್ಗೆ ತಿಳಿಸುತ್ತಾ ಗುರುಗಳ ಚರಣಕ್ಕೆ ನಮಸ್ಕರಿಸುತ್ತಾ ತಮ್ಮ ಶಿಷ್ಯರಾಗಿ ಸ್ವೀಕಾರ ಮಾಡಲು ನೀವೇದನೆ ಮಾಡಿಕೊಳ್ಳುತ್ತಾರೆ. ಶ್ರೀ ವೆಂಕಟರಾಯರ ಗುರು ಭಕ್ತಿಗೆ ಮೆಚ್ಚಿ ತಮ್ಮ ಶಿಷ್ಯರಾಗಿ ಸ್ವೀಕರಿಸಿ ಶ್ರೀವಿಜಯರಾಮಚಂದ್ರವಿಠಲರು ತಮ್ಮ ಶಿಷ್ಯನಿಗೆ ತಾಯಿಯಂತೆ ಪ್ರೀತಿ ತೋರಿ ಅವರನು ಆಲಿಂಗನ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ವೆಂಕಟರಾಯರಿಗೆ ಶ್ರೀ ಜಯೇಶವಿಠಲವೆಂದು ಅಂಕಿತ ಪ್ರದಾನಮಾಡಿ ಅನುಗ್ರಹಿಸುತ್ತಾರೆ.

ಕರುಣಿಸು ಜಯೇಶ ವಿಠಲ | 
ವರ ಅಂಕಿತವಿದನು ಇತ್ತೆ || ಪ || 
ತರುಳ ನಿನ್ನವನೆಂದು | 
ಗುರುವಾತ ಸ್ಥಿತನಾಗಿ | ಭರದಿ ಪಾಲಿಸಿದೆ ಇವನ | 
ಹರಿ ನೀ ನಿದ್ದೆಡೆಗೆ ಕರೆಸಿ || ಅ. ಪ || 

ಇರಿಸು ವರ್ಣಾಶ್ರಮ ವರಧರ್ಮ ಕರ್ಮಗಳಲ್ಲಿ, ಮರೆಸಿ ಕಾಮ್ಯ ಕರ್ಮಗಳೆಲ್ಲವನ್ನು, 
ಸ್ಮರಿಸದಂತೆ ಮಾಡು ಪರಸತಿಯರೊಲಿಮೆ, ಮರೆಯದಂತಿರಲಿ ಪರತತ್ವವನ್ನು || 1 || 

ಅತಿಥಿ ಅಭ್ಯಾಗತರ ಪೂಜೆ ಸತಿ ಸುತ ಪರಿವಾರದಿ ಕೃತ ಕೃತ್ಯನಾಗಿ ಮಾಡಿಸಿ, 
ಪತಿತರಾ ಸಹವಾಸ ಹಿತವೆಂದರುಪದೇ, 
ಸದ್ಗತಿ ನೀವ ಮಾರ್ಗ ತಿಳಿಸಿ || 2 || 

ನಿರುತ ತತ್ವ ನಿಶ್ಚಯದಲ್ಲಿ ಜ್ಞಾನ, ಗುರುಹಿರಿಯರಲಿ ಭಕ್ತಿ, ದುರ್ವಿಷಯದಲಿ ವಿರಕ್ತಿನಿತ್ತು, 
ವರ ವಿಜಯ ರಾಮಚಂದ್ರ| 
ವಿಠಲ ಸುರರೊಡೆಯ ಒರೆದು ನಾಮಾಮೃತವ ನುಡಿಸೀ || 3 ||

ತಂಜಾವೂರುನಲ್ಲಿ ತೋರಿದ ಮಹಿಮೆ :
ಶ್ರೀ ದಾಸರು ಸಂಜೀವರಾಯ ಎಂಬುವರ ಮನೆಯಲ್ಲಿ ತಂಜಾವೂರಿಗೆ ತೆರಿಳಿದಾಗ ಅಲ್ಲಿ ಉಳಿದುಕೊಳ್ಳುತ್ತಿದರು. ದಾಸರು ಬಂದಿರೋದು ಗೊತ್ತಾಗಿ ಊರಿನ ವಿಪ್ರರೆಲ್ಲಾ ಸಂಜೀವರಾಯರ ಮನೆಗೆ ಅವರ ಸಂದರ್ಶನಕ್ಕೆ ಬರುತ್ತಾರೆ. ದಾಸರು ನಿತ್ಯದಲ್ಲಿ ಪಾರಾಯಣದ ಕ್ರಮವಾಗಿ ಅವರ ಮನೆಯಲ್ಲಿ ಸುಮಧ್ವ-ವಿಜಯ ಪಾರಾಯಣ ಪ್ರಾರಂಭಿಸುತ್ತಾರೆ. ಪಾರಾಯಣ ಸಮಯದಲ್ಲಿ ಅಲ್ಲಿ ಇದ್ದ ಜನರಿಗೆ ಹೆದರಿಕೆ ಜೊತೆಯಲ್ಲಿ ಅಚ್ಚರಿ. ಸುಮಧ್ವ-ವಿಜಯ ಪಾರಾಯಣದ ಸಮಯದಲ್ಲಿ ಅಲ್ಲಿ ಸರ್ಪ ಪ್ರತ್ಯಕ್ಷವಾಗಿ ದಾಸರ ಹೇಳೋ ಆ ಸ್ತೋತ್ರಕ್ಕೆ ತಲೆ ತೂಗುತ್ತಿತು ಪಾರಾಯಣ ಮುಗಿದಾಕ್ಷಣ ಆ ಸರ್ಪ ಮಾಯವಾಯಿತು. ಇದನ್ನು ಪ್ರತ್ಯಕ್ಷವಾಗಿ ಕಂಡ ಅಲ್ಲಿಯ ಜನರು ದಾಸರ ಮಹಿಮೆಗಳನ್ನು ನೋಡಿ ಅವರಲ್ಲಿ ಶರಣು ಹೋಗುತ್ತಾರೆ.

ಶ್ರೀ ಅಪ್ಪಾವರು ನನ್ನ ಉಸಿರು

ಒಮ್ಮೆ ಶ್ರೀದಾಸರು ಮದರಾಸಿಗೆ ಹೋಗಿರುತ್ತಾರೆ. ಶ್ರೀದಾಸರು ತಾವು ಎಲ್ಲಾ ಸಂದರ್ಭದಲ್ಲೂ ಶ್ರೀ ಅಪ್ಪಾವರ ಚಿತ್ರ ಪಠ ಅವರಲ್ಲಿ ಇಟ್ಟಕೊಂಡೇ ಮುಂದಿನ ಎಲ್ಲಾ ಕೆಲಸ ಕಾರ್ಯ ಮಾಡುತಿದ್ದರು.  ಅಲ್ಲಿಯೇ ಅವತ್ತಿನ ಶ್ರೀಉತ್ತರಾಧಿಮಠದ ಪೀಠಾಧಿಪತಿಗಳಾದ ಸತ್ಯಧೀರತೀರ್ಥರು ಸಂಚಾರದಲ್ಲಿ ಇರುವರೆಂದು ತಿಳಿದು ಅವರ ಸಂದರ್ಶನ ಮಾಡಲು ಹೊರಡುತ್ತಾರೆ. ದಾಸರನ್ನು ಬರಮಾಡಿಕೊಂಡ ಶ್ರೀಗಳು ಹಲವು ಶಾಸ್ತ್ರದ ವಿಷಯ ವಿನಿಮಯಮಾಡಿಕೊಳ್ಳುತ್ತಾರೆ. 
ವಿಷಯ ವಿನಿಮಯದ ಸಂದರ್ಭದಲ್ಲಿ  ಶ್ರೀಗಳು ದಾಸರಿಗೆ ಅದೇನು ದಾಸರೆ ತಾವು ಚಿತ್ರಪಟ ಇಟ್ಟುಕೊಂಡು ಪೂಜೆ ಮಾಡುತಿರಲ್ಲಾ ? ಇಭರಾಮಪುರ ಅಪ್ಪಾವರು ಅಪರೋಕ್ಷ ಜ್ಞಾನಿಗಳೆಂದು ಹಾಗೆ ಮಾಡುತ್ತಿದ್ದೀರಾ ? ಅಂತ ಶ್ರೀ ದಾಸರಿಗೆ ಪ್ರಶ್ನೆ ಮಾಡುತ್ತಾರೆ.

ಶ್ರೀ ದಾಸರು ಶ್ರೀಗಳ ಪ್ರಶ್ನೆಗೆ ಮಾರ್ಮಿಕವಾಗಿ ಎನುಬೇಕಾದರು ಮಾಡಬಹುದು ಬಿಡಬಹುದು ಶ್ವಾಸೋಚ್ಛಾಸವನ್ನು ಬಿಡಬಹುದೇ ಅಂತ ವಿನಯಪೂರ್ವಕವಾಗಿ ಹೇಳುತ್ತಾರೆ. 

ಪರಮಗುರುಗಳಾದ ಇಭರಾಮಪುರ  ಶ್ರೀಅಪ್ಪಾವರಸ್ಮರಣೆ ಮಾಡುವಾಗ ವಿಶೇಷ ಅನುಭವ :

ಶ್ರೀವಿಜಯರಾಮಚಂದ್ರವಿಠಲರು ನಿತ್ಯದಲ್ಲಿ ತಮ್ಮ ಸ್ವರೂಪೋದ್ದಾರಕ ಗುರುಗಳಾದ ಇಭರಾಮಪುರ ಶ್ರೀ ಅಪ್ಪಾವರ ಮಹಿಮೆಗಳನ್ನು  ಶ್ರೀ ಜಯೇಶವಿಠಲ ದಾಸರಿಗೆ ತಿಳಿಸುತ್ತಿದರು. ಮಹಿಮೆಗಳನ್ನು ತಿಳಿಸುವಾಗ ವಿಶೇಷವಾದ ಅನುಭವ. ಅಪ್ಪಾವರು ಸರ್ಪ ರೂಪದಲ್ಲಿ ಅಲ್ಲಿ ಕಾಣಿಸಿಕೊಂಡು ಆ  ಸ್ಥಳವೆಲ್ಲ  ಸುಗಂಧ ಪರಿಮಳ ಭರಿತವಾಯಿತು.

ಹೆಗ್ಗಡದೇವನಕೋಟೆಯಲ್ಲಿ ತೋರಿದ  ಮಹಿಮೆ

 ಶ್ರೀ ದಾಸರು ಅಧ್ಯಾತ್ಮವಲ್ಲದೆ ಲೌಕಿಕ ವಿದ್ಯೆಯಲ್ಲಿಯು ಶ್ರೇಷ್ಟ ಸಾಧಕರು.  ಶ್ರೀ ವೆಂಕಟ ರಾಯರು(ಶ್ರೀಜಯೇಶವಿಠಲ ದಾಸರು)  ಉನ್ನತ ಹುದ್ದೆಯ ಅಧಿಕಾರಿಯಾಗಿದ್ದರು. ಅವರು  ಹೆಗ್ಗಡದೇವನಕೋಟೆಯಲ್ಲಿ ತಮ್ಮ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಅಲ್ಲಿಯ ಕಾರ್ಯ ವೀಕ್ಷಣೆಗೆ  ವೇಲ್ಸ್ ರಾಜಕುಮಾರ( Prince of Wales ) . ಅಲ್ಲಿ ಕಾಡಾನೆಗಳನು ತರಬೇತಿಯನ್ನು ನೀಡಿ ಕೆಲಸಕ್ಕೆ ಬಳಸುವ ಕೆಲಸ ನಡೆಯುತ್ತಿತ್ತು.

ಹೆಗ್ಗಡದೇವನಕೋಟೆ ತುಂಬಾ ದಟ್ಟ ಅರಣ್ಯ ಪ್ರದೇಶ ಅಲ್ಲಿ ಉಳಿದುಕೊಳ್ಳಲು ಎಲ್ಲರಿಗೂ ಜೀವ ಭಯ  ಕಾರಣ ಅಲ್ಲಿ ವ್ಯಾಘ್ರಗಳ ಭಾದೆ. ಅಲ್ಲಿಗೆ ಬಂದ ರಾಜಕುಮಾರ ಉಳಿದುಕೊಳ್ಳಲು ತಾತ್ಕಾಲಿಕವಾಗಿ ಅರಣ್ಯದಲ್ಲಿ ಗುಡಿಸಲು ನಿರ್ಮಿಸಿದರು.

ರಾತ್ರಿಯ ಸಮಯದಲ್ಲಿ ಭೇಟೆಗೆಂದು ಆ ರಾಜಕುಮಾರ ಹೊರಡುತ್ತಾನೆ. ಅಲ್ಲಿ ವ್ಯಾಘ್ರವೊಂದು ಕಂಡುಬರುತ್ತೆ ಅದನ್ನು ಭೇಟೆಯಾಡಲು ಅಧಿಕಾರಿ ಆ ಹುಲಿಗೆ ಗುರಿಯನ್ನು ಇಟ್ಟು ಹೊಡೆಯಲು ಪ್ರಯತ್ನ ಮಾಡುತ್ತಾನೆ. ಆ ವ್ಯಾಘ್ರವು ತಪ್ಪಿಸಿಕೊಂಡು ಸಿಟ್ಟಿನಿಂದ ಅಲ್ಲಿ ಮೆರೆದ ಜನರಮಧ್ಯೆ ಬರಲುಪ್ರಯತ್ನ ಮಾಡಿತು. ಅಧಿಕಾರಿ ಮತ್ತು ಕೆಲಸದವರು ಜೀವ ಉಳಿಸಿಕೊಳ್ಳಲು ಹರಸಾಹಸ ಮಾಡಿ ಮರಗಿಡಗಳ ಮೇಲೇರಿ ಕುಳಿತರು. ಶ್ರೀದಾಸರು ಮಾತ್ರ ಅಲ್ಲಿಯೇ ಉಳಿದುಕೊಳ್ಳುತ್ತಾರೆ.

ಆ ವ್ಯಾಘ್ರವು ಶ್ರೀದಾಸರು ಕೆಳಗಡೆ ಇರುವುದನ್ನು ಗಮನಿಸಿ ಅವರ ಹತ್ತಿರ ಬರುತ್ತೆ. ಶ್ರೀ ದಾಸರು ಧೃತಿಗೆಡದೆ ಶ್ರೀಹರಿಯ ಮತ್ತು ಗುರುಗಳ ಸ್ಮರಣೆ ಮಾಡುತ್ತಾ ಆ ವ್ಯಾಘ್ರದ ಕಣ್ಣಲ್ಲಿ ನೋಡುತ್ತಾ ಚಪ್ಪಾಳೆ ಹೊಡೆದು ದಾರಿತೋರಿಸಿದರು.ವ್ಯಾಘ್ರವು ದಾಸರಾಯರ ಸುತ್ತು ಪ್ರದಕ್ಷಿಣೆ ಮಾಡಿ ಹೊರಡುತ್ತೆ. 

ವ್ಯಾಘ್ರವು ಹೊರಟುಹೋದಮೇಲೆ ಅಲ್ಲಿಗೆ ಬಂದ ರಾಜಕುಮಾರ ಮತ್ತು ಕೆಲಸದವರು ಶ್ರೀದಾಸರಿಗೆ ಏನು ಆಗದನ್ನು ನೊಡಿ ಆಶ್ಚರ್ಯವಾಯಿತು. ಶ್ರೀದಾಸರು ಎಲ್ಲಾ ನಮ್ಮ ಗುರುಗಳಾದ ಅಪ್ಪಾವರು ಮತ್ತು ವಿಜಯರಾಮಚಂದ್ರ ವಿಠಲ ದಸರಾ ಅನುಗ್ರಹವೆಂದು ಅಲ್ಲಿನವರಿಗೆ ತಿಳಿಸುತ್ತಾರೆ.

ರಾಜದರ್ಬಾರ್ ನಲ್ಲಿ ನಡೆದ ಘಟನೆ

ಶ್ರೀ ಶೇಷಾದ್ರಿ ಐಯ್ಯರ್  ಮೈಸೂರ್ ಸಂಸ್ಥಾನದ  ದಿವನಾಗಿದರು. ಇವರು ಶ್ರೀ ಜಯೇಶವಿಠಲ ದಾಸರ ಪರಮಾಪ್ತರಾಗಿದರು. ಶ್ರೀದಾಸರು ಲೌಕಿಕದಲ್ಲಿ ಸರ್ಕಾರದ ಉತ್ತನ ಹುದ್ದೆಯಲ್ಲಿ ಇದ್ದರು ತಮ್ಮ ನಿತ್ಯಧರ್ಮಾಚರಣೆಯಲ್ಲಿ ಕಿಂಚಿತ್ತೂ ವ್ಯತ್ಯಾಸ ಮಾಡುತ್ತಿರಲಿಲ್ಲ. ಅನೇಕರು ದಾಸರಿಗೆ ಧರ್ಮಾನಿಷ್ಠ ಪರೀಕ್ಷಿಸಲು ಹೋಗಿ ವಿಫಲಯತ್ನ ಮಾಡಿದರು.

ಶ್ರೀ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ತಮ್ಮ ಎಲ್ಲ ಮಂತ್ರಿಗಳು ಅಧಿಕಾರಿಗಳಿಗೆ ದರ್ಬಾರ ಆನಂತರದಲ್ಲಿ ಔತಣ ಕೂಟ ವ್ಯವಸ್ಥೆಯನ್ನು ಮಾಡಿದಿರುತ್ತಾರೆ. ಶ್ರೀ ಶೇಷಾದ್ರಿ ಐಯ್ಯರ್ ಅರಮನೆಯ ದಿವಾನರಾದ ಕಾರಣ ಅವರ ಮುಂದಾಳತ್ವದಲ್ಲಿ ಎಲ್ಲಾ ವ್ಯವಸ್ಥೆಯ ನೋಡಿಕೊಂಡು ಎಲ್ಲಾ ಗಣ್ಯಾತಿಗಣ್ಯರನ್ನು ಅತಿಥಿಗಳ ಬರಮಾಡಿಕೊಳ್ಳಲಾಯಿತು. ದಾಸರಿಗೂ ವಿಶೇಷವಾದ ಆಹ್ವಾನವಿತ್ತು.ಆದರೆ ದಾಸರು ತಮ್ಮ ಅನುಷ್ಟಾನಕೆ ಭಂಗವಾಗುವಂತಹ ಯಾವದೇ ಕಾರ್ಯಕ್ರಮಕೆ ಹೋಗುತ್ತಿರಲಿಲ್ಲ.

ಶ್ರೀದಾಸರು ಯಾವುದೇ ಔತಣಕೆ ಬರುವುದಿಲ್ಲದ ಕಾರಣ ದರ್ಬಾರ್ ಮುಗಿಯುವ ಕ್ಷಣದಲ್ಲಿ ದಿವಾನರು ಜೋರಾಗಿ ರಾಜರಿಗೆ ಕೇಳುವಹಾಗೆ ದಾಸರನ್ನು ನೋಡುತ್ತಾ ಔತಣಕೆ ಬರದೆ ರಾಜರಿಗೆ ಅವಮರ್ಯಾದೆ ಮಾಡುತಿದಿರಿ ಒಡೆಯರಿಂದ ನಿಮಗೆ ಎರಡುಹೊತ್ತು ಅನ್ನ ದೊರೆಯುತ್ತದೆ ಅಂತ ಜೋರಾಗಿ ಹೇಳಿದರು. ದಾಸರು ಅದಕ್ಕೆ "ನನಗೆ ಅನ್ನ  ದೊರೆಯುತ್ತಿರುವುದು ಜಗದೊಡೆಯನಾದ ಪರಾಮಾತ್ಮನಿಂದ" ಅಂತ ದಿವಾನರು ಪ್ರತಿಕ್ರಿಯೆ ನೀಡಿ ಸುಮ್ಮನಾಗುತ್ತಾರೆ.  ಶ್ರೀ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರು ಈ ಸಂಭಾಷಣೆ ಕಿವಿಗೆ ಬಿದ್ದು ಶ್ರೀದಾಸರ ನೀಡಿದ ಪ್ರತಿಕ್ರಿಯೆಗೆ , ಸ್ವನಿಷ್ಠೆಯನ್ನು ಮೆಚ್ಚಿ ಗೌರವ ಸಮರ್ಪಣೆ ಮಾಡಿ ತೆರಳುತ್ತಾರೆ.

*ಶ್ರೀ ಜಯೇಶವಿಠಲ ದಾಸರ ತಿರುಪತಿಯಾತ್ರೆ :

ಒಮ್ಮೆ ಶ್ರೀದಾಸರು ಶ್ರೀ ಶ್ರೀನಿವಾಸನ ದರ್ಶನಕ್ಕೆಂದು   ಭೂವೈಕುಂಠವಾದ ತಿರುಪತಿಗೆ ಯಾತ್ರೆ ಮಾಡುತ್ತಾರೆ. ಅದೇ ದಿನವೇ ಅಂದಿನ ಬ್ರಿಟೀಷ್ ಸರ್ಕಾರದ ರಾಜ್ಯಪಾಲರು ಕೂಡ ದರ್ಶನಕ್ಕಾಗಿ ಬಂದಿರುತ್ತಾರೆ. ಗಣ್ಯರು ಬಂದಿದ್ದಾರೆ ಎಂದು ಅವರು ದರ್ಶನ ಪಡೆಯುವವರೆಗೂ ದೇವಸ್ಥಾನದ ಪ್ರವೇಶ ಮಾಡುವ ಬಾಗಿಲುಗಳನ್ನು ಮುಚ್ಚಿರುತ್ತಾರೆ.

ಆಗ ದೇವಸ್ಥಾನ ಒಳಗಡೆಯ ಪ್ರಾಕಾರದಲ್ಲಿಯೇ ಶ್ರೀದಾಸರು ಕುಳಿತುಕೊಂಡಿರುತ್ತಾರೆ. ದಾಸರಿಗೆ ಸಿಗಬೇಕಿದ್ದ ಶ್ರೀ ಶ್ರೀನಿವಾಸನ ಪ್ರಸಾದ ಗಣ್ಯರಪಾಲಾಗುತ್ತದೆ. ದೇವಸ್ಥಾನದ ಪ್ರಾಂಗಣದಲ್ಲಿ ಇರುವ ವಿಮಾನ ವೆಂಕಟೇಶ್ವರನ ಹತ್ತಿರ ದಾಸರು ಪ್ರದಕ್ಷಿಣೆ ಸೇವೆ ಮಾಡುತ್ತಿರುತ್ತಾರೆ. ಸೇವೆ  ಮಾಡುತ್ತಿರುವಾಗ ವಿಶೇಷವಾದ ಅನುಭವವಾಗುತ್ತದೆ. 

ಒಬ್ಬ ಭಸ್ಮಧಾರಿಯಾದ ಬ್ರಾಹ್ಮಣ ವಿಮಾನ ವೆಂಕಟೇಶ್ವರನ ಸನ್ನಿಧಾನದಲ್ಲಿ ಜೋರಾಗಿ ಪುರಾಣ ಹೇಳುತ್ತಿರುತ್ತಾರೆ. ಅವರು ಹೇಳುತ್ತಿರುವುದು ದಾಸರ ಮನಸೆಳೆದು ಭಕ್ತಿಯಿಂದ ಶ್ರವಣ ಮಾಡುತ್ತಿರುತ್ತಾರೆ. ಪುರಾಣ ಶ್ರವಣದ ಸಮಯದಲ್ಲಿ ದಾಸರಿಗೆ ಯಾರೋ ಒಬ್ಬ ಎತ್ತರದ ಮೂರು ನಾಮವುಳ್ಳ ಬ್ರಾಹ್ಮಣ ವಿಮಾನ ವೆಂಕಟೇಶ್ವರನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳುತ್ತಾನೆ. ಆ ಅಯ್ಯಂಗಾರಿ ಬ್ರಾಹ್ಮಣ ದಾಸರ ಹತ್ತಿರ ಬಂದು ಶ್ರೀ ಶ್ರೀನಿವಾಸನ ಪ್ರಸಾದ ನೀಡಿ ತಮಿಳಿನಲ್ಲಿ "ಇವಲ್ ಗುರುಗಳಕ್ಕು ಶಿಷ್ಯರಿಕು ಪಾಟಾಕ ಇರೊಂಟು ಕಣ್ಣು ಪೋರದೇ' ಅಂದರೆ ದಾಸರು ಮತ್ತು ಅವರ ಗುರುಗಳ (ವಿಜಯರಾಮಚಂದ್ರವಿಠಲ ದಾಸರು) ಸಮಾಗಮ ನೋಡಲು ಎರಡು ಕಣ್ಣು ಸಾಲದು ಎಂದು ಹೇಳಿ ದಾಸರಿಗೆ ಶ್ರೀನಿವಾಸನ ಪ್ರಸಾದ ನೀಡುತ್ತಾರೆ. ಪ್ರಸಾದ ಸ್ವೀಕರಿಸಿ ಎರಡನೆಯ ಪ್ರದಕ್ಷಿಣೆ ಮುಗಿಯುವದರಲ್ಲಿ ಪುರಾಣ ಹೇಳುವ ಬ್ರಾಹ್ಮಣ ಮತ್ತು ಅಯ್ಯಂಗಾರಿ ಬ್ರಾಹ್ಮಣ ಎಲ್ಲಿಯೂ ದಾಸರಿಗೆ ಕಾಣಲಿಲ್ಲ.

ತಿರುಪತಿಯಿಂದ ದಾಸರು ನಂತರದಲ್ಲಿ ಪದ್ಮಾವತಿ ದೇವಿಯ ದರ್ಶನಕ್ಕೆ ಬಂದರು. ಅಲ್ಲಿಯ ಪದ್ಮ ಸರೋವರದಲ್ಲಿ ಮತ್ತೆ ಭಸ್ಮಧಾರಿಯಾದ ಬ್ರಾಹ್ಮಣ ದರ್ಶನವಾಯಿತು. ಕುತೂಹಲದಿಂದ ಶ್ರೀದಾಸರು ಆ ಬ್ರಾಹ್ಮಣರನ್ನು ಭೇಟಿ ಮಾಡಲು ಹೊರಟರು ಆದರೆ  ಅಲ್ಲಿಂದ ಮತ್ತೆ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ದಾಸರು ಅಲ್ಲಿಂದ ಪದ್ಮಾವತಿ ಅಮ್ಮನವರ ದರ್ಶನಕ್ಕೆ ಹೊರಟರು. ಅಮ್ಮನವರ ದರ್ಶನ ಪಡೆದು ಅಲ್ಲಿಂದ ಅಮ್ಮನವರ  ವಿಶೇಷ ಸೇವೆಯನ್ನು ಮಾಡಿ ದೇವಿಯ ಪ್ರಸಾದ ಪಡೆದರು.

ದರ್ಶನಂತರದಲ್ಲಿ ಆ ಮೂರು ನಾಮಧಾರಿ ಅಯ್ಯಂಗಾರಿ ಹೇಳಿದ " ದಾಸರು ಮತ್ತು ಅವರ ಗುರುಗಳ (ವಿಜಯರಾಮಚಂದ್ರವಿಠಲ ದಾಸರು) ಸಮಾಗಮ ನೋಡಲು ಎರಡು ಕಣ್ಣು ಸಾಲದು"  ಎಂಬ ಮಾತುಗಳನ್ನು ಪುನಃ ಪುನಃ ಮನನ ಮಾಡಿಕೊಂಡ ಮೇಲೆ ತಮ್ಮ ಗುರುಗಳಾದ ರುದ್ರಾಂಶ ಸಂಭೂತರಾದ ವಿಜಯರಾಮಚಂದ್ರವಿಠಲರು ದರ್ಶನ ಕೊಟ್ಟು ಅನುಗ್ರಹಸಿದ್ದಾರೆ ಎಂದು ತಿಳಿದು ಯಾತ್ರೆ ತಮ್ಮ ಗುರುಗಳ ಅಂತರ್ಯಾಮಿಯಾದ ಶ್ರೀ ಶ್ರೀನಿವಾಸದೇವರಿಗೆ ಸಮರ್ಪಣೆ ಮಾಡಿದರು. 

ದಾಸರಿಗೆ ಗುರುಗಳಾದ ಶ್ರೀ ವಿಜಯರಾಮಚಂದ್ರ ವಿಠಲರ ಅನುಗ್ರಹದಿಂದ ಶ್ರೀನಿವಾಸನ ಸಾಕ್ಷಾತ್ಕಾರವಾಯಿತು. 

ಗುರುಗಳಾದ ಶ್ರೀವಿಜಯರಾಮಚಂದ್ರವಿಠಲರು ಹಾಕಿಕೊಟ್ಟ ಮಾರ್ಗ  ಶ್ರೀ ಜಯೇಶವಿಠಲರು ತಮ್ಮ ಪರಮಗುರುಗಳಾದ ಇಭರಾಮಪುರ ಅಪ್ಪಾವರ ಮೇಲೆ ವಿಶೇಷವಾದ ಭಕ್ತಿ ಅವರ ವಿಶೇಷ ಸೇವೆಗೈದು ಅವರ ಮೇಲೆ ಸ್ತೋತ್ರಪದಗಳನ್ನು ರಚನೆ ಮಾಡಿದಾರೆ.

ಶ್ರೀದಾಸರು 500ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿ ದಾಸಸಾಹಿತ್ಯಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ.

ಶ್ರೀ ಇಭರಾಮಪುರಾಧೀಶ
ವಿಷ್ಣುತೀರ್ಥಾಚಾರ್ ಇಭರಾಮಪುರ
*************


|| ಶ್ರೀ ಗುರುರಾಜೋ ವಿಜಯತೇ ||
|| ಶ್ರೀ ಇಭರಾಮಪುರಾಧೀಶಾಯ ನಮಃ ||

ಗುರು ಮಹಿಮೆ : ಶ್ರೀ ಜಯೇಶವಿಠಲ ದಾಸರ ತಿರುಪತಿಯಾತ್ರೆ

ಇಂದುಮೌಳಿ ಪದಾಬ್ಜಾಳಿಂ | 
ಮಂದ ಸಜ್ಜನ ತಾರಕಂ | 
ಇಂದ್ರಕಾಮ ಸಮಾಭಾಸಂ | 
ಸುಂದರಾಂಗ ಸಮನ್ವಿತಂ ||
ವಿಜಯೋಪದೋಪೇತಂ |
ಅಜಜಾತ ಸುತಾಖ್ಯಾಜಂ | 
ಶ್ರೀ ಜಯೇಶೇತಿ ದಾಸಾಖ್ಯಂ | 
ಭಜೇ ವೈರಾಗ್ಯಶಾಲಿನಂ ||

ಒಮ್ಮೆ ಶ್ರೀದಾಸರು ಶ್ರೀ ಶ್ರೀನಿವಾಸನ ದರ್ಶನಕ್ಕೆಂದು   ಭೂವೈಕುಂಠವಾದ ತಿರುಪತಿಗೆ ಯಾತ್ರೆ ಮಾಡುತ್ತಾರೆ. ಅದೇ ದಿನವೇ ಅಂದಿನ ಬ್ರಿಟೀಷ್ ಸರ್ಕಾರದ ರಾಜ್ಯಪಾಲರು ಕೂಡ ದರ್ಶನಕ್ಕಾಗಿ ಬಂದಿರುತ್ತಾರೆ. ಗಣ್ಯರು ಬಂದಿದ್ದಾರೆ ಎಂದು ಅವರು ದರ್ಶನ ಪಡೆಯುವವರೆಗೂ ದೇವಸ್ಥಾನದ ಪ್ರವೇಶ ಮಾಡುವ ಬಾಗಿಲುಗಳನ್ನು ಮುಚ್ಚಿರುತ್ತಾರೆ.

ಆಗ ದೇವಸ್ಥಾನ ಒಳಗಡೆಯ ಪ್ರಾಕಾರದಲ್ಲಿಯೇ ಶ್ರೀದಾಸರು ಕುಳಿತುಕೊಂಡಿರುತ್ತಾರೆ. ದಾಸರಿಗೆ ಸಿಗಬೇಕಿದ್ದ ಶ್ರೀ ಶ್ರೀನಿವಾಸನ ಪ್ರಸಾದ ಗಣ್ಯರಪಾಲಾಗುತ್ತದೆ. ದೇವಸ್ಥಾನದ ಪ್ರಾಂಗಣದಲ್ಲಿ ಇರುವ ವಿಮಾನ ವೆಂಕಟೇಶ್ವರನ ಹತ್ತಿರ ದಾಸರು ಪ್ರದಕ್ಷಿಣೆ ಸೇವೆ ಮಾಡುತ್ತಿರುತ್ತಾರೆ. ಸೇವೆ  ಮಾಡುತ್ತಿರುವಾಗ ವಿಶೇಷವಾದ ಅನುಭವವಾಗುತ್ತದೆ. 

ಒಬ್ಬ ಭಸ್ಮಧಾರಿಯಾದ ಬ್ರಾಹ್ಮಣ ವಿಮಾನ ವೆಂಕಟೇಶ್ವರನ ಸನ್ನಿಧಾನದಲ್ಲಿ ಜೋರಾಗಿ ಪುರಾಣ ಹೇಳುತ್ತಿರುತ್ತಾರೆ. ಅವರು ಹೇಳುತ್ತಿರುವುದು ದಾಸರ ಮನಸೆಳೆದು ಭಕ್ತಿಯಿಂದ ಶ್ರವಣ ಮಾಡುತ್ತಿರುತ್ತಾರೆ. ಪುರಾಣ ಶ್ರವಣದ ಸಮಯದಲ್ಲಿ ದಾಸರಿಗೆ ಯಾರೋ ಒಬ್ಬ ಎತ್ತರದ ಮೂರು ನಾಮವುಳ್ಳ ಬ್ರಾಹ್ಮಣ ವಿಮಾನ ವೆಂಕಟೇಶ್ವರನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳುತ್ತಾನೆ. ಆ ಅಯ್ಯಂಗಾರಿ ಬ್ರಾಹ್ಮಣ ದಾಸರ ಹತ್ತಿರ ಬಂದು ಶ್ರೀ ಶ್ರೀನಿವಾಸನ ಪ್ರಸಾದ ನೀಡಿ ತಮಿಳಿನಲ್ಲಿ "ಇವಲ್ ಗುರುಗಳಕ್ಕು ಶಿಷ್ಯರಿಕು ಪಾಟಾಕ ಇರೊಂಟು ಕಣ್ಣು ಪೋರದೇ' ಅಂದರೆ ದಾಸರು ಮತ್ತು ಅವರ ಗುರುಗಳ (ವಿಜಯರಾಮಚಂದ್ರವಿಠಲ ದಾಸರು) ಸಮಾಗಮ ನೋಡಲು ಎರಡು ಕಣ್ಣು ಸಾಲದು ಎಂದು ಹೇಳಿ ದಾಸರಿಗೆ ಶ್ರೀನಿವಾಸನ ಪ್ರಸಾದ ನೀಡುತ್ತಾರೆ. ಪ್ರಸಾದ ಸ್ವೀಕರಿಸಿ ಎರಡನೆಯ ಪ್ರದಕ್ಷಿಣೆ ಮುಗಿಯುವದರಲ್ಲಿ ಪುರಾಣ ಹೇಳುವ ಬ್ರಾಹ್ಮಣ ಮತ್ತು ಅಯ್ಯಂಗಾರಿ ಬ್ರಾಹ್ಮಣ ಎಲ್ಲಿಯೂ ದಾಸರಿಗೆ ಕಾಣಲಿಲ್ಲ.

ತಿರುಪತಿಯಿಂದ ದಾಸರು ನಂತರದಲ್ಲಿ ಪದ್ಮಾವತಿ ದೇವಿಯ ದರ್ಶನಕ್ಕೆ ಬಂದರು. ಅಲ್ಲಿಯ ಪದ್ಮ ಸರೋವರದಲ್ಲಿ ಮತ್ತೆ ಭಸ್ಮಧಾರಿಯಾದ ಬ್ರಾಹ್ಮಣ ದರ್ಶನವಾಯಿತು. ಕುತೂಹಲದಿಂದ ಶ್ರೀದಾಸರು ಆ ಬ್ರಾಹ್ಮಣರನ್ನು ಭೇಟಿ ಮಾಡಲು ಹೊರಟರು ಆದರೆ  ಅಲ್ಲಿಂದ ಮತ್ತೆ ಎಲ್ಲಿಯೂ ಕಾಣಿಸಿಕೊಳ್ಳಲಿಲ್ಲ. ದಾಸರು ಅಲ್ಲಿಂದ ಪದ್ಮಾವತಿ ಅಮ್ಮನವರ ದರ್ಶನಕ್ಕೆ ಹೊರಟರು. ಅಮ್ಮನವರ ದರ್ಶನ ಪಡೆದು ಅಲ್ಲಿಂದ ಅಮ್ಮನವರ  ವಿಶೇಷ ಸೇವೆಯನ್ನು ಮಾಡಿ ದೇವಿಯ ಪ್ರಸಾದ ಪಡೆದರು.

ದರ್ಶನಂತರದಲ್ಲಿ ಆ ಮೂರು ನಾಮಧಾರಿ ಅಯ್ಯಂಗಾರಿ ಹೇಳಿದ " ದಾಸರು ಮತ್ತು ಅವರ ಗುರುಗಳ (ವಿಜಯರಾಮಚಂದ್ರವಿಠಲ ದಾಸರು) ಸಮಾಗಮ ನೋಡಲು ಎರಡು ಕಣ್ಣು ಸಾಲದು"  ಎಂಬ ಮಾತುಗಳನ್ನು ಪುನಃ ಪುನಃ ಮನನ ಮಾಡಿಕೊಂಡ ಮೇಲೆ ತಮ್ಮ ಗುರುಗಳಾದ ರುದ್ರಾಂಶ ಸಂಭೂತರಾದ ವಿಜಯರಾಮಚಂದ್ರವಿಠಲರು ದರ್ಶನ ಕೊಟ್ಟು ಅನುಗ್ರಹಸಿದ್ದಾರೆ ಎಂದು ತಿಳಿದು ಯಾತ್ರೆ ತಮ್ಮ ಗುರುಗಳ ಅಂತರ್ಯಾಮಿಯಾದ ಶ್ರೀ ಶ್ರೀನಿವಾಸದೇವರಿಗೆ ಸಮರ್ಪಣೆ ಮಾಡಿದರು. 

ದಾಸರಿಗೆ ಗುರುಗಳಾದ ಶ್ರೀ ವಿಜಯರಾಮಚಂದ್ರ ವಿಠಲರ ಅನುಗ್ರಹದಿಂದ ಶ್ರೀನಿವಾಸನ ಸಾಕ್ಷಾತ್ಕಾರವಾಯಿತು. 

ವಿಷ್ಣುತೀರ್ಥಾಚಾರ್ ಇಭರಾಮಪುರ

ಶ್ರೀ ಇಭರಾಮಪುರಾಧೀಶ
*************

ಶ್ರೀಂ ಶ್ರೀ ಕಂ ಕಪಿಲಾಯ ನಮಃ 

ಇಂದುಮೌಳಿ ಪದಾಬ್ಜಾಳಿಂ/ ಮಂದ ಸಜ್ಜನ ತಾರಕಂ/
ಇಂದ್ರಕಾಮ ಸಮಾಭಾಸಂ/ ಸುಂದರಾಂಗ ಸಮನ್ವಿತಂ/
ವಿಜಯೋಪದೋಪೇತಮ್/ ಅಜಜಾತ ಸುತಾಖ್ಯಜಮ್/
ಶ್ರೀ ಜಯೇಶೇತಿ ದಾಸಾಖ್ಯಂ ಭಜೇ ವೈರಾಗ್ಯಶಾಲಿನಮ್//

 ಪರಮ ವೈರಾಗ್ಯಶಾಲಿಗಳೂ, ಪ್ರಮೇಯಗರ್ಭಿತ ಕೃತಿ ರಚನಾ ನಿಪುಣರು, ಶ್ರೀ ಅಪ್ಪಾವರ ಅನುಗ್ರಹ ಪಾತ್ರರೂ, ಶ್ರೀ ವಿಜಯರಾಮಚಂದ್ರವಿಠಲದಾಸರ ಶಿಷ್ಯರೂ ಆದ ಶ್ರೀ ಜಯೇಶವಿಠಲದಾಸಾರ್ಯರ ಆರಾಧನಾ ಮಹೋತ್ಸವ... ಮೈಸೂರು,ಕಟ್ಟೆಮನೆಯಲ್ಲಿ ನಡೆಯುತ್ತದೆ ...


ಶ್ರೀ ದಾಸಾರ್ಯರ ಪರಮಾನುಗ್ರಹ ನಮ್ಮ ಸಮೂಹದ ಸಜ್ಜನರೆಲ್ಲರ ಮೇಲೆ ಪಸರಿಸುವಂತಾಗಲೀ ಎಂದು ದಾಸಾರ್ಯಯ ಅಂತರ್ಗತ ಪರಮಾತ್ಮನಲ್ಲಿಪ್ರಾರ್ಥನೆ ಮಾಡುತ್ತಾ.... ದಾಸರ ಪದಗಳು ಹಾಡಿ ಅವರ ಸೇವೆ ಮಾಡೋಣ...
**********

ಶ್ರೀ ಗುರುಗೋಪಾಲದಾಸಾರ್ಯರ ಶಿಷ್ಯರಾದ ಶ್ರೀ  ಜನಾರ್ದನ ವಿಠಲರು,  ತಮ್ಮ ಪ್ರೀತಿಯ ಶಿಷ್ಯರಾದ ಪ್ರೇಮದಾಸರಿಗೆ ಅಭಿನವಜನಾರ್ದನವಿಠಲ ಎನ್ನುವ ಅಂಕಿತವನ್ನು ಪ್ರದಾನ ಮಾಡಿದ ಸುದಿನ..  ಹಾಗೆಯೆ..

ಶ್ರೀ ವಿಜಯರಾಮಚಂದ್ರವಿಠಲರ ಪ್ರೀತಿಯ ಶಿಷ್ಯರು, ತತ್ವ ಭರಿತ ಕೃತಿಗಳು ರಚನೆ ಮಾಡಿ ನೀಡಿದವರು, ಸಾತ್ವಿಕ ಜೀವನವನ್ನು ನಡೆಸಿದವರು, ಅನೇಕ ಜನ ಶಿಷ್ಯರಿಗೆ ಮಾರ್ಗವನ್ನು ತೋರಿ, ದಾಸ ಸಾಹಿತ್ಯದ ಸೇವೆ ಮಾಡಿದ  ಮಹಾನ್ ವೈರಾಗ್ಯ ಚೇತನರಾದ ಶ್ರೀ ಜಯೇಶವಿಠಲರ ಆರಾಧನಾ ಮಹೋತ್ಸವದ ಶುಭಸ್ಮರಣೆಗಳು...

ಶ್ರೀ ದಾಸದ್ವಯರ, ಅಂತರ್ಗತ ಪರಮಾತ್ಮನ ಅನುಗ್ರಹ ಸದಾ ನಮಗಿರಲಿ ಎಂದು ಪ್ರಾರ್ಥನೆ ಮಾಡುತ್ತಾ...

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽

********

28 May 2021 ಶ್ರೀ ಜಯೇಶವಿಠಲರ ಸ್ಮರಣೆ

ಶ್ರೀ ದಾಸಾರ್ಯರ ಆರಾಧನಾ ಸುಸಂದರ್ಭದಲಿ ಅವರ ಮಾಹತ್ಮ್ಯಗಳನ್ನು ಒಂದೆರಡು ಹಂಚಿಕೊಳ್ಳಲೆಂದೇ ಅವರ ಸ್ಮರಣೆಯಂತೆ ಈ ಪುಟ್ಟ ಲೇಖನಾಸುಮಾಂಜಲಿ ದಾಸರಿಗೆ ಪ್ರೀತಿಕರವಾಗಲೀ ಎಂದು ಪ್ರಾರ್ಥನೆ ಮಾಡುತ್ತಾ ......

ಶ್ರೀ ದಾಸರು ಹಾಗೂ ಶ್ರೀ ಮೋಹನದಾಸಾರ್ಯರ ಮರಿಮಕ್ಕಳಾದ ಚಿಕ್ಕ ಮೋಹನರಾಯರ ಹಾಗೂ ದಾಸಾರ್ಯರ ಸಮಾಗಮ ಆಗಾಗ ಆಗ್ತಿರುವುದರಿಂದ ಒಂದೆರಡು ಘಟನೆಗಳ ಪ್ರಸ್ತಾಪನೆ... ಒಮ್ಮೆ ಶ್ರೀ ದಾಸಾರ್ಯರು ಮಡಕಶಿರದ ರಾಘವೇಂದ್ರರಾಯರೂ ಚಿಪ್ಪಗಿರಿ ಗೆ ವಿಜಯದಾಸಾರ್ಯರ ಪುಣ್ಯದಿನಕ್ಕೆ ಹೋಗಬೇಕಾಗಿ ಬೆಂಗಳೂರಿನಲ್ಲಿ ಹೊರಟು ಗುಂತಕಲ್ಲು ಸೇರೋಹೊತ್ತಿಗೆ ವಿಪರೀತ ಮಳೆ ರಸ್ತೆ ಎಲ್ಲಾ ಕೊಚ್ಚು ತುಂಬಿರ್ತದೆ.. ಹೇಗೋಹಾಗೆ ಚಿಪ್ಪಗಿರಿ ಸೇರಿ ದಾಸಾರ್ಯರ ಪುಣ್ಯದಿನದಲ್ಲಿ ಸೇವೆ ಮಾಡಿ ಮತ್ತೆ ಗುಂತಕಲ್ಲಿನಿಂದ ಬೆಂಗಳೂರಿಗೆ ಹೊರಡುವ ಗಾಡಿಯನ್ನು ಹಿಡಿಬೇಕಿತ್ತು.. ಆಗ ಅಲ್ಲಿನ ಒಬ್ಬ ದೊಡ್ಡ ಮನುಷ್ಯ ಒಬ್ಬ  ಮುಸಲಮಾನನು  ತನ್ನ ಪೆಟ್ಟಿಗೆ ಗಾಡಿ ಕೊಟ್ಟು ಕಳುಹಿಸಿದಾ ... ಮತ್ತೆ ಇನ್ನೊಂದು ಸಲ ಚಿಪ್ಪಗಿರಿ ಗೆ ರಾಘವೇಂದ್ರರಾಯರು ಮಾತ್ರನೇ ಬರಬೇಕಾದಾಗ  ಆ ಮುಸಲ್ಮಾನನನ್ನು ಕೇಳಿದಾಗ ನಾನೇನೂ ಗಾಡೀನೇ ಕಳಿಸಿಲ್ಲ ಅಂದದ್ದು ಆಶ್ಚರ್ಯದ ಸಂಗತಿನೇ ಆಗಿರ್ತದೆ.. ಪರಮಾತ್ಮನ ಗುರುಗಳ ಸೇವಾ ಮಾಡುವವರಿಗೆ ಪರಮಾತ್ಮನ ಸಹಾಯ ಎಂದಿಗೂ ಇರ್ತದೆ ಎನ್ನುವುದು ದೃಷ್ಟಾಂತ.. 

ಮತ್ತೊಮ್ಮೆ ಶ್ರೀ ದಾಸಾರ್ಯರು ತಮ್ಮ ಪರಿವಾರದೊಂದಿಗೆ ಚಿಪ್ಪಗಿರಿ ಹೊರಟಿರ್ತಾರೆ.... ಆದು ಗೊತ್ತಿಲ್ಲದ ಶ್ರೀ ಚಿಕ್ಕಮೋಹನರಾಯರು ಬೆಳಗಿನ ಸಂಧ್ಯಾವಂದನಾದಿಗಳನ್ನು ಮುಗಿಸಿ ಹತ್ತಿರದ ಹಳ್ಳಿ ಗೆ ಹೊರಟಿರ್ತಾರೆ. ಆಗ ಒಂದು ಹಕ್ಕಿ ಅಡ್ಡ ಅಡ್ಡ ಬಂದಿರ್ತದೆ. ಅಪಶಕುನ ಎಂದು ನೆನಸಿ ಚಿಕ್ಕ ಮೋಹನದಾಸರು ಮನೆಗೆ ಬಂದು ಮತ್ತೆ ಹೊರಟಾಗಲೂ ಹಕ್ಕಿ ಮತ್ತೆ ಅಡ್ಡಿ ಪಡುಸ್ತದೆ.. ಪ್ರಯಾಣ ಬೇಡವೆಂದು ಮನೆಗೆ ತಿರುಗಿ ಬಂದ ದಾಫಾರ್ಯರ ಮನೆಗೆ ಶ್ರೀ ಜಯೇಶವಿಠಲದಾಸರು  ಪರಿವಾರದೊಂದಿಗೆ ಬಂದದ್ದು ನೋಡಿ .. ಸಜ್ಜನರ ಸಮಾಗಮಕ್ಕಾಗಿಯೇ ಹರಿವಾಯುಗುರುಗಳು ಈ ತರಹದ ಅಡ್ಡಗಳನ್ನು ತೋರಿಸಿದ್ದಾರೆಂದು ಸಂತೋಷಪಟ್ಟಿರ್ತಾರೆ... ಹೀಗಾದ ಸ್ವಲ್ಪ ತಿಂಗಳಿಗಳನಂತರ ನವರಾತ್ರಿ ಸಮಯಕ್ಕೆ ತಿರುಪತಿಯಲ್ಲಿ ವೆಂಕಪ್ಪನ ದರ್ಶನ ಕ್ಕೆ ಹೋಗಲು ಬಯಸಿದ ಚಿಕ್ಕಮೋಹನದಾಸರು ಮೈಸೂರು ಕಟ್ಟೆಮನೆಗೆ ಬಂದಾಗ ಶ್ರೀ ಜಯೇಶವಿಠಲದಾಸಾರ್ಯರಂತಾರೆ... ನವರಾತ್ರಿ ನಮ್ಮ ಕಟ್ಟೆಮನೆಯಲ್ಲೂ ಆಗುತ್ತೆ ಇಲ್ಲೇ ಪರಮಾತ್ಮನ ಸೇವೆ ಮಾಡಬಹುದು ಅಂದಾಗ ಬೇಡ ನಾವು ತಿರುಪತಿ ಹೋಗಲೇಬೇಕು ಅಂದಾಗ ದಾಸಾರ್ಯರು ಸರಿ ಅಂತಾರೆ.. ಆಗ ರಾತ್ರಿ ಚಿಕ್ಕಮೋಹನದಾಸರಿಗೆ ಕನಸು ಆಗಿರ್ತದೆ ... ಆ ಕನಸಿನಲ್ಲಿ ತಾವು ತಿರುಪತಿಗೆ ಹೋದಂತೆ ಆದರೇ ದೇವಸ್ಥಾನದಲ್ಲಿ ದೇವರು ಕಾಣಲಿಲ್ಲವಂತೆ.. ಅಲ್ಲಿದ್ದವರನ್ನು ಕೇಳಿದಾಗ ವೆಂಕಪ್ಪ ನವರಾತ್ರಿ ಉತ್ಸವಕ್ಕೆ ಮೈಸೂರು ಹೋಗಿರುವನೆಂದು ಹೇಳಿರ್ತಾರೆ... ಪರಮಾಶ್ಚರ್ಯಗೊಂಡ ಚಿಕ್ಕ ಮೋಹನದಾಸಾರ್ಯರು ಬೆಳಿಗ್ಗೆ ಬಂದ ಸ್ವಪ್ನವನ್ನು ಶ್ರೀ ಜಯೇಶವಿಠಲರಿಗೆ ತಿಳಿಸಿ ನಿಮ್ಮ ಭಕ್ತಿಯೇ ಇದರ ಕಾರಣ ಅಂತ ಹೊಗಳುತ್ತಾರೆ...

ಈ ತರಹದ ಸಜ್ಜನರ ಜೊತೆ ಪರಮಾತ್ಮ ಸದಾಕಾಲ ಇರುವನೆಂಬುವ ಅದ್ಭುತ ವಿಷಯವನ್ನು ತಿಳಿಸಿ ಹೇಳುವ ಈ ತರಹದ ದೃಷ್ಟಾಂತಗಳು ದಾಸಾರ್ಯರ, ಮಸಾನುಭಾವರ ಜೀವನಗಳಲ್ಲಿ ನಾವು ನೋಡಬಹುದು... 
ಇನ್ನೂ ತಿಳಿಸಲು ಬಹಳಷ್ಟು ಮಹಿಮಗಳಿವೆ... ಸಮಯಾಭಾವದ ಗೊಂದಲ... ಲೇಖನಗಳ ಸೇವೆಗೆ ಸಹಾ ಅಡ್ಡಿ.. ಆದರೂ ಶ್ರೀ ದಾಸಾರ್ಯರ ಪುಣ್ಯದಿನವಾದ ಈ ದಿನದಲ್ಲಿ ಇಷ್ಟಾದರೂ ಸಣ್ಣ ಸೇವೆ ನನ್ನಿಂದ ಮಾಡಿಸಿದ್ದಾರೆಂದರೇ ಅವರ ಅನುಗ್ರಹವೇ ಸರಿ... ಈ ಪುಟ್ಟ ಸೇವಾಕುಸುಮವನ್ನು ಶ್ರೀ ಜಯೇಶವಿಠಲದಾಸರಾಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಲಕ್ಷ್ಮೀ ವೆಂಕಟೇಶನ ಪಾದಪದ್ಮಗಳಲ್ಲಿ ಸಮರ್ಪಣೆ ಮಾಡುತ್ತಾ.....

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
******

year 2021

 ಇಂದಿನ ಆರಾಧ್ಯ ಪುರುಷರಾದ ಶ್ರೀ ಜಯೇಶವಿಠ್ಠಲರ ಒಂದು ಕೃತಿಯ ಒಂದು ಸಾಲನ್ನು ಅವಲೋಕಿಸಲು ಪ್ರಯತ್ನ ಮಾಡುತ್ತಿದ್ದೇನೆ . 🙏

ನೀ ಬುದ್ಧಿ ಕೊಡದಿರಲು ಜೀವ ಪಶುವೋ ॥ ಪ ॥

ಶ್ರೀ ಭೂಮಿ ದುರ್ಗೇಶ ಗೋವಿಂದ ಪರಿಪೂರ್ಣ ॥ ಅ ಪ ॥


ಸೃಷ್ಟಿಗೆ ಬರಲಿನ್ನು ಜೀವಯತ್ನವು ಉಂಟೆ ।

ಸೃಷ್ಟಿ ಸ್ಥಿತಿ ಲಯ ಕರ್ತ ತಿಳಿಯೊ ನೀನು ॥

ಮೊಟ್ಟ ಮೊದಲಿಗೆ ನಿನ್ನ ವಶನಾಗಿ ನಾವಿರಲು ।

ಸೃಷ್ಟಿಯೊಳು ನಮ್ಮೆತ್ನ ಕಲ್ಪಿಸುವುದೆಂತೈಯ್ಯಾ ॥ 1 ॥


ಜಡಜನ್ಮದಿಂದಲೆ ದ್ವಿಜ ಜನ್ಮ ಬಂದಿಹುದು

ಒಡೆಯ , ನಮ್ಮೆತ್ನವೇ ಸತ್ಯ ಕೇಳೊ ॥

ಕಡುನಿದ್ರೆಯಲಿ ಜೀವ ನಿಶ್ಚೇಷ್ಟನಾಗಿರಲು ।

ಬಿಡದೆ ದಿನದಿನದಲ್ಲಿ ಎಚ್ಚರಿಕೆ ಆರಿಂದ ॥ 2 ॥


ಇಂತಿರಲು ನಿಜತತ್ವ , ಎಂಥ ಶಕ್ತಿಯೋ ನಮಗೆ ।

ಸ್ವಾಂತ ಮಂಗಳ ಸುಗುಣನಿಧಿಯೆ ಪೇಳೋ ॥

ಭ್ರಾಂತಿ ಜೀವನ ಬಿಡಿಸಿ ಜಯೇಶವಿಠ್ಠಲ ।

ಶಾಂತಿ ಪಾಲಿಸು ನಮಗೆ ಭಾರವಾಂತೂ ನೀನೆ॥ 3 ॥

***


ಇದರಲ್ಲಿ " ಸೃಷ್ಟಿಗೆ ಬರಲಿನ್ನು ಜೀವಯತ್ನವು ಉಂಟೆ " 

ಎಂಬ ಸಾಲಿನಲ್ಲಿ, ದಾಸರು  ಜೀವರಾಶಿಗಳ ಸೃಷ್ಟಿಯ ಬಗ್ಗೆ ತಿಳಿಸಿದ್ದಾರೆ. 

ಅನಾದಿಕಾಲದಿಂದ ಅನಂತಜೀವರಾಶಿಗಳು ಅಸೃಜ್ಯಾವಸ್ಥೆಯಲ್ಲಿರುವರು‌. 

ಆಯಾ ಕಲ್ಪಕ್ಕೆ ಅನುಗುಣವಾಗಿ ಭಗವಂತ ಅವರನ್ನು ಸೃಷ್ಟಿಗೆ ತರುವನು. 

ಅದು ಹೇಗೆ ?? 

ಅಸೃಜ್ಯಾವಸ್ಥೆಯಲ್ಲಿ ಜೀವರಿಗೆ ಸ್ವರೂಪದೇಹ ಮತ್ತು ಲಿಂಗದೇಹ ಮಾತ್ರವಿರುತ್ತದೆ. ಯಾವ ಕರ್ಮ ಮಾಡಲೂಆಗುವದಿಲ್ಲ. 

ಪರಮಾತ್ಮನೇ ಒಳಗೆ ನಿಂತು  ಶ್ವಾಸೋಚ್ಛಾಸ ನಡೆಸುವನು. 

ಹೀಗೆ, ಕರ್ಮ ಪಕ್ವವಾಗಿರುವ ಜೀವರನ್ನು ಆಯಾ ಕಲ್ಪದಲ್ಲಿ ಸೃಷ್ಟಿಗೆ ತರುವನು.

 (ಶ್ರೀ ವಾದಿರಾಜಸ್ವಾಮಿಗಳು ಸೃಷ್ಟಿಪ್ರಕರಣ ಸುಳಾದಿಯಲ್ಲಿ ಇದನ್ನ ಹೀಗೆ ಹೇಳಿರುವರು: 

"ಲಿಂಗವಿಶಿಷ್ಟರಾದ

ಇನಿತು ಜೀವರ ಹಿಡಿ ತುಂಬಿಕೊಂಡು")

ಲಿಂಗವಿಶಿಷ್ಟರು ಎಂದರೆ ಕರ್ಮ ಪಕ್ವವಾಗಿ ಈ ಕಲ್ಪಕ್ಕೆ ಸೃಷ್ಟಿಗೆ ಬರಲು ಯೋಗ್ಯರಾದವರು. 

ಇದರಲ್ಲಿ ಜೀವರ ಯತ್ನವೇನಿದೆ??...  ಏನು ಇಲ್ಲ..

ಕರ್ಮಮಾಡಲು ಸ್ಥೂಲದೇಹವಿಲ್ಲ.

ಭಗವಂತ, ತಾನೇ ಮಾಡಿಸಿ, ಕರ್ಮಪಕ್ವವಾಗಿರುವ ನೆಪಮಾತ್ರದಿಂದ ನಮ್ಮನು ಸೃಷ್ಟಿಗೆ ತರುವನು.

(ಇಲ್ಲವಾದಲ್ಲಿ ವೈಷಮ್ಯ-ನೈರ್ಘಣ್ಯದೋಷಬಂದೀತು) 

ಇದರಲ್ಲಿ ಒಂದು ಸಂದೇಹ ಬರುವದು. 

ಎಲ್ಲರ ಕರ್ಮವು ಒಂದೇಕಾಲಕ್ಕೆ ಪಕ್ವವಾದರೆ ಹೇಗೆ ?? 

ಇದರ ಉತ್ತರಕ್ಕೆಒಂದು ಲೌಕಿಕ ಉದಾಹರಣೆ ನೀಡಬಹುದು. 


ಮೊಳಕೆ ಒಡೆಯಲು ಕಾಳನ್ನು ಒದ್ದೆಬಟ್ಟೆಯಲ್ಲಿ ಹಿಂದಿನ ದಿನರಾತ್ರಿ ನೆನೆಸಿ ಒಂದೇಕಾಲಕ್ಕೆ ಇಟ್ಟರೂ, ಮರುದಿನ ಕೆಲವು ಮೊಳಕೆ ಬಂದಿರುತ್ತವೆ, ಕೆಲವಕ್ಕೆ ಇಲ್ಲ.. ಇದು ಸ್ವಭಾವಕ್ಕೆ ಸಂಬಂಧಪಟ್ಟದ್ದು.. 

ಹಾಗೆ ಜೀವರ ಕರ್ಮಪಕ್ವವಾಗುವರೀತಿ. 

ಹೀಗೆ ಇಂತಹ ಸೂಕ್ಷ್ಮವಿಚಾರವನ್ನು ಸುಲಭವಾಗಿ ತಿಳಿಸಲು ದಾಸರು "ಸೃಷ್ಟಿಗೆ ಬರಲಿನ್ನು ಜೀವಯತ್ನವು ಉಂಟೆ" ಎಂದು ತಿಳಿಸಿದ್ದಾರೆ. 

ಅಲ್ಪನ ಈ ಪ್ರಯತ್ನವನ್ನು ಹಂಸ-ಕ್ಷೀರನ್ಯಾಯದಂತೆ ಸ್ವೀಕರಿಸಬೇಕು. 

ಶ್ರೀ ಮಧ್ವೇಶಾರ್ಪಣಮಸ್ತು  

by prasadacharya, koppara

*****










1 comment:

  1. ������������
    ಉತ್ತಮ ಮಾಹಿತಿ..ಧನ್ಯವಾದಗಳು ಅಣ್ಣಾ.....
    ������������

    ReplyDelete