Monday 1 July 2019

prasanna venkata dasaru 1752 dasaru bhadrapada shukla ekadashi ಪ್ರಸನ್ನ ವೆಂಕಟ ದಾಸರು





katte at Khakhandaki




click




info from FB madhwanet--->

Prasanna Venkata dAsaru

Period: 1680 – 1752
Punyadina: Bhadrapada shukla yEkAdashi
Birth place: Bagalkote
Ankita: “Prasannavenkata” or “Prasannavenkata Krishna”.
Contemporaries: Vijayadasaru, Gopaladasaru,

Contributions: More than 600 Keerthanegalu, 20 Ugaboga, 9 Suladigalu and 3 kolu haadu

Contemporaries – Vijayadasaru, Gopaladasaru,
Gurugalu – Mudgal Janardhanacharya – 
ಶ್ರೀ ಶಾತ್ಪ್ರಾಪ್ತ ಸುವಿಜ್ಞಾನಮ್ ಶ್ರೀಶೈಕ ನಿರತಂ ಸದಾ |
ಪ್ರಸನ್ನ ವೇಂಕಟಾರ್ಯೋಮೇ ಭೂಯಾತ್ ಸರ್ವಾರ್ಥ ಸಿದ್ಧಯೇ |

श्री शात्प्राप्त सुविज्ञानम् श्रीशैक निरतं सदा ।
प्रसन्न वेंकटार्योमे भूयात् सर्वार्थ सिद्धये ।

After swapna labda upadesha from Srihari, he studied under Mudgal Janardhanacharya under various aspects.  As a mark of respect to his beloved guru, he has composed many devaranamas on his guru. 
Contributions – More than 400 Keerthanegalu, 20 Ugaboga, 9 Suladigalu and 3 kolu haadu
Some of the krutees by him may be summarised as follows :
“Satyabhaama Vilasa” or “Srikrishna Paarijata” –  It has 51 stanjas
Narayana Panjara – It has 40+ stanzas – comprising of stuti on Srihari
Bedha Muktavali – It is a kolu haadu – praising all the devates taratamyanusaara –  Madhwa matha samarthana kruti
Samastanama Manigana Shatcharana Padyamala – It has 70+ Stanzas – another Haristuti – with more samskruta influence
Narada Koravanji – This is a kruti – wherein Naarada will come as a Koravanji to narrate Rukmini’s birth, Rukmini Kalyana, etc
Bhagavatha – Krishna Charite
Bideno ninnanghri Srinivasa –  Even Today, Mettilotsava Function and many Dasa Sahitya functions at various Places in India ends with his Bideno Ninnanghri Shreenivasa Kruti.
know more

Click –  http://www.prasannavenkatadasaru.org/ for more information on the great Dasaru

For Devaranamas & other details : CLICK HERE

For Devaranamas on his gurugalu – Click here

Please click the link for devaranamas on his guru.
Uttaradimutt Guruparampara Kruti – Click the link for MP3 song of the same

************

Shree Prasanna Venkata Dasaru, called by name Kakhandaki Venkappayya was born in 1680 AD at Bagalkot and lived for 72 years. Shree Prasanna Venkata Dasaru lost his parents in early childhood & was under the care of his elder brother. His sister-in-law always ill treated him. One day Venkappayya asked his sister in law for a cup of buttermilk as he felt thirsty after hard work in the fields. His sister in law refused to give him and she choose to pour the butter milk to the vessel of the cow informing that by so doing the Cow may yield more milk, than giving it to a dull-headed cowherd.
Annoyed by the prejudice of his sister-in-law, Venkappayya left the house. He joined a party of Chappara Devaru (Pallakki Containing the Idol of Lord Venkataeshvara) going to Tirumala by foot and his association with religious people, Satsanga, led him to total dedication to Lord Shreenivasa. Venkanna surrendered himself to Lord Venkateshvara with Sarva Samarpana Bhava and was enlightened by lord Shreenivasa who blessed him by writing the Ankita “Prasanna Venkata Krishna” on his tongue.
One day, his Bhaktiya Parakashthe put him on the stage of a bliss & he happened to remain in the inner part of the Tirumala Temple unaware of closure of temple doors and remained there whole night. On next morning, Priests seeing him inside the temple drove him out angrily. It seems Lord Shreenivasa did not approve this action. He ordered the priests to give him with his own Prathimaaroopa with Shreedevi- Bhoodevi and a Tala, Tamboori, Bettha and Gopala Butti which he used throughout his life.
By the grace of Lord Shreenivasa, Shree Prasanna Venkata Dasaru composed a number of keertanas, Sulaadhis, Ugabhogas, Mundige and he translated the Bhagavatha Dashamaskanda into Kannada in the form of songs. It appears Dasaru was blessed with the Darshan of Lord Shreenivasa several times & Perhaps his famous Kruti "Tappu Nodade Bandeya" was a spontaneous outcome when he obtained “Sakshaathkhara " of Lord Shreenivasa first time. Recital of His Composition "Bideno Ninnaghri Shreenivasa" has become an integral part of every Dasa Sahitya Function all over the world and thus Shree Prasanna Venkata Dasaru is a symbol of Bhaktiya Parakashte on international Level.
Shree Prasanna Venkata Dasaru was well aware of the need of Niyata Gurugalu & that Guruvina Gulamanaaguvatanaka Doryedanna Mukuti. With samskara of Scholar’s family, though uneducated in the childhood, he learnt Shastra under Mudgala Janaradhanaachara of Galagali even after Sakshatkaara.
Although Prasanna Venkata Dasaru composed thousands of keertanas, suladi and ugabhogagalu, As per Kannada and Culture publications of samagra Dasasahitya Samputa-8 , it was 449 in 2003. With the support of Varadendra Sahityamandal Lingasur and individual researcher like Laxmikant Patil and other traditional Bhajana Mandali Members & Individual Seva Kartaru we could locate another 180 unpublished krutis and as of now 630 Keertanas are available. In this connection. The search to locate the other compositions is still on, to see if they are available in any of the traditional houses in the interiors of Karnataka. Many of his compositions have been sung by famous Dasa Sahitya singers like Pandit Bhimsen Joshi, Puttur Narasimha Nayak, Sri Anant Kulkarni (from Bagalkot and devotee of Dasaru), Madhava Gudi, Prasanna Korti and many more.
His ugabhoga on Nava vidha Bhakti is simple, lucid and appealing. His works include, Shatcharana Padhya maala, Naradha Koravanji, NarayaNa panjara, Bramara Geetha, Gopi Geetha ,Sathya Bhama Vilaasa, PoorvaaRdha Dashama Skandha Bhagavatha & many songs in simple Kannada. Some of them on Balakrishna meant for tiny tots also.
His song
Chanchalisadhiru Neenu Chathuranaagu |
Innu Vanchisadhe Sakalavannoppisu Harige Manve ||
is very famous for neethi Marga speaking about the conditions of “mind”. He says that one should attain vairagya in Vishaya PadhaaRtha and always concentrate mind on God .
On Ekadashi day Bhadrapada Shukla paksha, Shreenivasa gave him Darshan in the form of Balakrishna and engrossed seeing the Paramathma’s Roopa, spontaneous kruti emerged at the end of his life. "Daro Nee Chinna Daro”. That was the last song he composed . He attained Vaikuntha on the same day in 1752 AD.
His old house At Bagalkot is now submerged under waters of Upper Krishna Project and the same is relocated at C-35 Sector No-3 Nava Nagara Bagalkot.
Shreedevi-Bhoodevi sahita Shreenivasa prathima roopa and Tala, Bettha (stick), the Sangli Tamboori & Gopala Butti which he used throughout his life can be seen in this house now. Lord Krishna danced to his song “Kartha Krishnaiya nee barayya". The idol of Balakrishna who danced to his song "Kartha Krishnaiyya" can also be seen.
The Mysore University Adhyana Samsthe has brought Two Books containing his life History and compositions and second one on his Bhagawata. There is another treatise by Sri Krishna Kolhara Kulkarni on him. The TTD publications have brought a book ‘ Srinivasana HaDugaLu’ containing compositions of Sri Prasanna VenkaTa Dasaru with commentaries on each song, Popular kannada Novelist Smt Rekha Kakhandaki who is also a membar of Dasara family has brought out life history & his contribution to Dasa Sahitya in the form of worth reading Novel "Shree Prasanna Venkata Vijay".
Sri Prasanna Venkata Prakasahana, a subsidiary of Sri Prasannaveankata Cultural & Charitable Trust (R) Bangalore was formed in 2010 with active participation of Dasara Vamshatharu in general & Dr Subhash kakhandaki in particular and it is a dedicated to Samshodahane (Research) of Haridasara krutis and Publication and is bringing out as many works of Shree Prasanna Venkata Dasaru as possible every Year. The Trust is a non profit organisation with a main aim of Jnana Prasar of Dasaru , hence sales proceeds of the book will be used for publication of Dasara Kruti's and bringing out Dasa Vani CD next year. For the last 5 years 12 Books & 4 CDs have been brought out by the Trust.
With unstinting efforts by this organisation and other organisation Like Varadendra Haridasa Sahitya Mandal Kasaba Lingasugur , various Bhajana Mandals and variuos Individuals, it has been possible to bring out 180 unpublished new krutis of Dasaru in the last three to four years.
We appeal you to support in this noble cause by buying the books and CD's. Sri Prasannavenkata Research Foundation Trust ( R) is dedicated to research on Haridas Sahitya especially for non published kruti Samshodahane of Sri Prasannvenkatdasaru and related charitable work. Donation to this noble cause is exempted for Income tax under 80 G.
Bank details are
Shree Prasanna Venkata Dasaru lived in Badami also for several Years & he installed one Mukhya Prana Devaru on the bank of Agasthya Teertha. There is also one Big Chabutara (Katte) that is known by his name as "Prasanna Venkata Dasara Katte"
Some of the krutees by him may be summarised as follows :
- “Satyabhaama Vilasa” or “Srikrishna Paarijata” – It has 51 stanjas
- Narayana Panjara – It has 40+ stanzas – comprising of stuti on Srihari
- Bedha Muktavali – It is a kolu haadu – praising all the devates taratamyanusaara – Madhwa matha samarthana kruti
- Samastanama Manigana Shatcharana Padyamala – It has 70+ Stanzas – another Haristuti – with more samskruta influence
- Narada Koravanji – This is a kruti – wherein Naarada will come as a Koravanji to narrate Rukmini’s birth, Rukmini Kalyana, etc
- Bhagavatha – Krishna Charite
shri prasnna vEnkaTa dAsa guruvantargata bhArati ramaNa mukhyprANAntargata shridEvi bhUdEvi samEta shri srInivAsa dEvara pAdAravindakke gOvinda, gOvinda...
shri krishNArpaNAmastu...
********

info from dvaita.org--->

Sri Prasanna Venkata Dasaru (1680 to 1752)

Like Purandaradasa, Vijayadasa, Kanakadasa, Jagannathadasa and Gopaladasa, Prasanna Venkatadasa was a famous dasa. His name is still very popular and his songs are sung in several houses.
Venkata Dasa was born in 1680 at Bagalkot which is on the bank of the river Ghataprabha. Bagalkot is a town in the Bijapur District. There lived a family; not a big one. The inmates of the house were two brothers and the elder's wife. The elder brother's name was Raghavendracharya and younger one was Venkanna. Kaveramma was the name of the brother's wife.
Raghavendracharya had the benefit of a little education while his father lived. As he had learnt to conduct religious rites and others. It was not difficult for him to meet the family demands. In addition there was income from the fields inherited by the brothers.
Venkanna was still a young boy when his parents passed away. Therefore he was left without proper impetus for education.
Venkanna's sister-in-law was not the common sort of woman. The jobs he used to do at home were not also simple ones and all kinds of jobs he use to do by the order of this brother's wife.
Although Venkanna had lot of patience, lot of calmness and peace of mind in doing all jobs which has been assigned to him, but once he lost his patience and calmness became very angry when he was not fed properly by his sister-in-law and also she ill treated him. At that moment without telling to his brother he left his brother's house.
Venkanna was a boy who had trust in God. He had learnt a few devotional songs just by hearin. At nights he had attended religous lectures and recital of the stories of Sri Hari's devotees although he would be completely run down by domestic drudgery; he had such interest to listen to them. Although Venkanna was backward in learning, he was not lacking in wisdom and understanding.
Divine voice called him to Tirupathi abode of Srinivasa when he left the house. Then he made up his mind to wend his way to Tirupathi, to have meriorious 'darsan' (holy sight) and then to take any course indicated by him.
On his way, one day Venkanna reached the very holy spot of Mantralya, situated on the bank of river Tungabhandra. On account of divine presence of Guru Raghvendra swamu, Mantralaya is verily the abode of 'mantras'. Reaching such hallowed presence. Venkanna rejoic as if he was in the very presence of Srinivasa. He wished to stay for three days and extended to stay for three years there. One night in his dream Venkanna was blessed by the holy presence of Sri Guru Raghavendra Swami who said " Venkanna Lord Srinivasa is waiting for you. Go there my boy".
Venkanna was overjoyed by the dream he had. With company of group of piligrms he left for Tirupathi. While Venkanna started at one of the cliffs, it lookied as though Lord Srinivasa's large image had been carved out of it with round smiling face, bearing a beautiful crown, with four hands and a bold stature. Venkanna lifted both his hands in supplication and cried aloud "Srinivasa Srinivasa"!. He went to Kapilatirtha and Galigopura and had darshan of Kapilesaraswami and Lord Narasimha.
Along with other pilgrims Venkanna entered the temple of Srinivasa. When Venkanna stood face to face before the graceful image, his joy exceeded all limits. He lifted his hands high up in salutation and ejaculated. "Srinivasa!!!". His voice rolled in waves and touched the feet of Lord Venkateshwara. He came to himself only when the temple servants served him with a rolled up deerskin. Venkanna emerged from the inner shrine and went around it on the outside. He saw some of the Haridasas and others engaged in Samkirtan and singing the glories of God. He joined with them. After some the priests brought food offered to God and distributed it among those that had gathered there.
The inspiring darsan of Lord Srinivasa, participation in the Samkirtan congregation, prasadam distributed by the archak every after noon made Venkanna extremely happy and made him stay for four years since coming to Tirupathi.
One night Sri Raghavendra Swami appeared once again in Venkanna's dream and said "Venkanna God will soon give His darsan to you". Venkanna sat up starteled and cried Where where is my Srinivasa!!. He was in the silent dark mantap where he slept.
Next day as usual he joined the crowd to have darsan of Srinivasa. He was in the forefront of the group that entered the inner shine. Outside it had begun to rain. Ever those who were outside clustered in.
Venkanna had darsan at close quarters. Gazing at the blissful image of Srinivasa, tears of joy swelled in Venkanna's eyes. Instead of the image, there appeared a big tambura and a hand twanging its string. By and by he saw the figure of Purandara Dasaru there. There appeared a small image of Srinivasa in the master's heart. There was another big image of the Lord standing behind him. A ray from that image emereged and went straight into Venkanna;s heart. He was thrilled to highest degree and broke down. Srinivasa came to him and scribed onhis tongue, the word "Prasanna Venkata" and disappeared.
Venkanna got up. he stood looking at the image of Srinivasa and began sing his praise in mellow voice. Formerly he used to come for darsan and walk out quietly. Seeing him singing thus on that day, everyone was highly surprised.
Venkanna was not himself, he seemed to have forgotten the world about him. With joyful tears,he went on singing one song after another; with dancing steps be strode, using his hands as cymbals.
The same night, the Mahant of the temple dreamed. Srinivasa showed Venkanna to him and said: "This is Prasanna Venkata Dasa, my great devotee. Treat him with all honour, make arrangements for his comfortable stay". Later Mahant met Prasanna Venkata Dasa on the temple platform prostrated and conveyed the message of his dream and requested Venkanna to come to have darsanof Sri Venkateshwara. Venkanna uttered "Srinivasa your will!". From that day on, Venkanna become Prasanna Venkata Dasa and he got a proper treatment till he stayed in Tirupathi.
After some time his brother came to know all these miracles happened to Venkanna and went to Tirupathi, requested him to come to his house. The people of Bagakote were glat to see their Venkappaiah coming out as Prasanna Venkata Dasaru. He adorned his dhead by tying up a saffron cloth, which also covered his back. Strings of tinkiling bells tied round his ankles. He had tambura hanging by the shoulder in front and a pair of clatter-cymbals in the left hand.
Sri Prasanna Venkata Dasaru went round in the town every morning singing glories of Sri Hari and teaching people the moral path that would lead them on to reach the Happy Abode of Vaikunta.
Sri Prasanna Venkata Dasaru used to spend his whole time in meditating upon God's greatness, in singing His glory and in composing songs and stories of God. "Samastanama manigana satcarana" is one of his longer poems, which is almost like Sri Vishnusahasranama. "Naradaru Korvani Vesha talda caritre" is full of humour, telling how Narada Maharshi put on the role of a soot-sayer (gipsy woman) and assured Rukmani Devi that Sri Krishna only would be her husband. He has rendered into simple, beautiful Kannada stories of Srimad Bhagavatam. The themes dearest to his hear are those about the childhood pastimes of Sri Krishna. His ankita is "Prasanna Venkata".

Many of his songs are familiar to people in North Karnataka. In Bagalkot his punya dina is celeberated. Even today one can see in Bagalkot the single-stringed accomplaniment used by dasa. 

*****

Sri Prasanna Venkata Dasa1680-1752VenkappayaPrasanna VenkataSri Srinivasa (swapna)BhadamiBhadrapada Shudda Dwadashi

****

ಶ್ರೀ ಪ್ರಸನ್ನ ವೆಂಕಟದಾಸರು - by narahari sumadhwa


ಶ್ರೀ ಶಾತ್ಪ್ರಾಪ್ತ ಸುವಿಜ್ಞಾನಂ ಶ್ರೀಶೈಕ ನಿರತಂ ಸದಾ |
ಪ್ರಸನ್ನ ವೇಂಕಟಾರ್ಯೋಮೇ ಭೂಯಾತ್ ಸರ್ವಾರ್ಥ ಸಿದ್ಧಯೇ |
श्री शात्प्राप्त सुविज्ञानम् श्रीशैक निरतं सदा ।
प्रसन्न वेंकटार्योमे भूयात् सर्वार्थ सिद्धये ।
ಹೆಸರು – ಕಾಖಂಡಕಿ ವೆಂಕಪ್ಪ (ವೆಂಕಟೇಶ)
ಕಾಲ –  1680-1752 AD
ಪುಣ್ಯದಿನ – ಭಾದ್ರಪದ ಶುದ್ಧ ದ್ವಾದಶಿ
ತಂದೆ ತಾಯಿ – ಲಕ್ಷ್ಮೀಬಾಯಿ ಮತ್ತು ಕಾಕಂಡಕಿ ನರಸಪ್ಪಯ್ಯ
ಸ್ಥಳ – ಬಾದಾಮಿ, ಬಾಗಲಕೋಟೆ
ಗೋತ್ರ – ಕಾಶ್ಯಪ
ಗುರುಗಳು – ಮುದ್ಗಲ ಜನಾರ್ದನಚಾರ್ಯರು
ಅಂಕಿತ – ಪ್ರಸನ್ನ ವೆಂಕಟ  ಅಥವಾ ಪ್ರಸನ್ನ ವೆಂಕಟಕೃಷ್ಣ.
ಒಮ್ಮೆ ಸ್ವಾಮಿ ಪುಷ್ಕರಿಣಿತೀರ್ಥದಲ್ಲಿ ಸ್ನಾನಗೈದು , ಶ್ರೀ ಹರಿಯನ್ನು ಸ್ತುತಿಸುತ್ತಿದ್ದಾಗ “ಪ್ರಸನ್ನವೆಂಕಟ” ಮುದ್ರಿಕೆಯನ್ನು ಶ್ರೀಹರಿಯೇ ಸ್ವಪ್ನಗೋಚರನಾಗಿ ಅವರ ನಾಲಿಗೆಯಲ್ಲಿ ಬರೆದನಂತೆ.
 

ಬಾಗಲಕೋಟೆಯ ಶ್ರೀಪ್ರಸನ್ನ ವೇಂಕಟದಾಸರು. ಬಾಲ್ಯದಲ್ಲಿಯೇ ತಂದೆ,ತಾಯಿಯ ಪ್ರೇಮದಿಂದ ವಂಚಿತರಾಗಿ,  ಸಹೋದರನ ಆಶ್ರಯದಲ್ಲಿ ತಮ್ಮ ಜೀವನವನ್ನು ಸಾಗಿಸಿದ ವೆಂಕಣ್ಣ, ಅತ್ತಿಗೆಯ ಅನಾದರದಿಂದ, ಮಜ್ಜಿಗೆಯೂ ದೊರೆಯದೆ ಮನನೊಂದು ತಿರುಪತಿ ಶ್ರೀನಿವಾಸನ  ಯಾತ್ರಿಗಳೊಡನೆ ತೆರಳಿದರು. ಅಲ್ಲಿ ಶ್ರೀನಿವಾಸನು   ಪ್ರಸನ್ನನಾಗಿ ಅನುಗ್ರಹಿಸಿದ ಫಲವಾಗಿ ಪ್ರಸನ್ನ ವೇಂಕಟದಾಸರಾದರು.
. ‘. ‘ಶ್ರೀಕೃಷ್ಣನ ಬಾಲಲೀಲೆಗಳನ್ನು ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ.
‘ತಪ್ಪುಗಳೆಲ್ಲವ ಪರಿಹರಿಸುವ ನಮ್ಮಪ್ಪನಲ್ಲವೇ ನೀನು’, ‘
ಹಕ್ಕಿಯ ಹೆಗಲೇರಿ ಬಂದವಗೆ’, ‘
ತಪ್ಪು ನೋಡದೆ ಬಂದೆಯಾ ಎನ್ನಯ ತಂದೆ
 ‘ಬಿಡೆನೋ ನಿನ್ನಂಘ್ರಿ ಶ್ರೀನಿವಾಸ’,
‘ಎಂದು ಕಾಂಬುವೆ ಎನ್ನ ಸಲಹುವ ತಂದೆ ಉಡುಪಿಯ ಜಾಣನ’
“ಏನು ಕಾರಣ ಮರೆತೆ ಎಲೆ ಉಡುಪಿ ನಿಲಯ’ – ನಿಂದಾ ಸ್ತುತಿ

ಅಂಗಾರದ ಆಚಾರ್ಯರು – ಶ್ರೀ ಪ್ರಸನ್ನ ವೆಂಕಟದಾಸರು ಒಮ್ಮೆ ಊರಿಂದೂರಿಗೆ ಪ್ರಯಾಣಿಸುವಾಗ ಎದುರಾದ ಹುಲಿಯ ಮೈ ಚಪ್ಪರಿಸಿ ಅದರ ಮೇಲೆ ದೇವರ ಪೆಟ್ಟಿಗೆಯಿಟ್ಟು ತಮ್ಮ ಜೊತೆಗೇ ಊರು ತಲುಪುವವರೆಗೂ ಕರೆದೊಯ್ಯುತ್ತಿದ್ದರಂತೆ.  ಅಲ್ಲಿ ಅದಕ್ಕೆ ಅಂಗಾರ ಹಚ್ಚಿ ಯಾವ ಗೋವುಗಳನ್ನೂ ಹಿಂಸಿಸಬೇಡವೆಂದು ಹೇಳು ಕಳಿಸುತ್ತಿದ್ದರಂತೆ.  ಆ ಹುಲಿಗಳು ಎಂದೂ ಗೋವುಗಳ ತಂಟೆಗೆ ಬರುತ್ತಿರಲಿಲ್ಲವಂತೆ.  ಆದ್ದರಿಂದ ಅವರನ್ನು ಅಂಗಾರದ ಆಚಾರ್ಯರು ಎಂದೇ ಕರೆಯುತ್ತಿದ್ದರು.
 

Gurugalu – Mudgal Janardhanacharya – After swapna labda upadesha from Srihari, he studied under Mudgal Janardhanacharya under various aspects.  As a mark of respect to his beloved guru, he has composed many devaranamas on his guru.
Please click the link for devaranamas on his guru.
Contemporaries – Vijayadasaru, Gopaladasaru,

Contributions – More than 400 Keerthanegalu, 20 Ugaboga, 9 Suladigalu and 3 kolu haadu
Some of the krutees by him may be summarised as follows :

“Satyabhaama Vilasa” or “Srikrishna Paarijata” –  It has 51 stanjas
Narayana Panjara – It has 40+ stanzas – comprising of stuti on Srihari
Bedha Muktavali – It is a kolu haadu – praising all the devates taratamyanusaara –  Madhwa matha samarthana kruti
Samastanama Manigana Shatcharana Padyamala – It has 70+ Stanzas – another Haristuti – with more samskruta influence
Narada Koravanji – This is a kruti – wherein Naarada will come as a Koravanji to narrate Rukmini’s birth, Rukmini Kalyana, etc
Bhagavatha – Krishna Charite
Uttaradimutt Guruparampara Kruti – Click the link for MP3 song of the same


ಸತತ ಸ್ಮರಿಸಿ ಮಧ್ವ ಸಂತತಿ ಗುರುಗಳ
ಗತಿಯುಂಟು ಸಂತತಿ ಸಂಪತ್ತಿಯುಂಟು || ಪ ||

ಶ್ರೀ ಮಧ್ವ ಪದ್ಮನಾಭ ನರಹರಿ ಮಾಧವ
ಆ ಮೌನಿ ಅಕ್ಷೋಭ್ಯ ಜಯರಾಯ
ವಿದ್ಯಾಧಿರಾಜ ಭೂಮಾ ಕವೀಂದ್ರ ವಾಗೀಶರ || ೧ ||

ಮುನಿರಾಮಚಂದ್ರ ವಿದ್ಯಾನಿಧಿ ರಘುನಾಥ
ಮಾರನ ಗೆಲಿದ ರಘುವರ್ಯ ರಘೋತ್ತಮ
ವೇದವ್ಯಾಸ ಘನ ವಿದ್ಯಾಧೀಶ ವೇದನಿಧಿಗಳ || ೨ ||

ಸತ್ಯವ್ರತ ಸತ್ಯನಿಧಿ ಸತ್ಯನಾಥ ಅನುಪಮ
ಸತ್ಯಾಭಿನವ (ಗುರು) ಕರಪದ್ಮಜ
ನಮ್ಮ ಗುರು ಸತ್ಯಪೂರ್ಣ ಪ್ರಸನ್ವೇಂಕಟಾ ಪ್ರಿಯರ || ೩||

For Devaranamas & other details : CLICK HERE
For Devaranamas on his gurugalu – Click here
Bideno ninnanghri Srinivasa –  Even Today, Mettilotsava Function and many Dasa Sahitya functions at various Places in India ends with his Bideno Ninnanghri Shreenivasa Kruti.
 

ಬಿಡೆನೋ ನಿನ್ನಂಘ್ರಿ ಶ್ರೀನಿವಾಸ ನನ್ನ
ದುಡಿಸಿಕೊಳ್ಳೆಲೋ ಶ್ರೀನಿವಾಸ ನಿ-
ನ್ನುಡಿಯ ಜೀತಲ್ಲೋ ಶ್ರೀನಿವಾಸ ನನ್ನ
ನಡೆ ತಪ್ಪು ಕಾಯೋ ಶ್ರೀನಿವಾಸ   | ಪ |
ಬಡಿಯೋ ಬೆನ್ನಲಿ ಶ್ರೀನಿವಾಸ ನ-
ನ್ನೊಡಲ ಹೊಯ್ಯದಿರೋ ಶ್ರೀನಿವಾಸ ನಾ
ಬಡವ ಕಾಣೆಲೋ ಶ್ರೀನಿವಾಸ ನಿ
ನ್ನೊಡಲ ಹೊಕ್ಕೆನೋ ಶ್ರೀನಿವಾಸ   | ೧ |
ಪಂಜುಹಿಡಿವೆನೊ ಶ್ರೀನಿವಾಸ ನಿ
ನ್ನೆಂಜಲ ಬಳಿದುಂಬೆ ಶ್ರೀನಿವಾಸ ನಾ
ಸಂಜೆ ಉದಯಕೆ ಶ್ರೀನಿವಾಸ ಕಾ
ಳಂಜಿಯ ಪಿಡಿವೆನೋ ಶ್ರೀನಿವಾಸ | ೨ |
ಸತ್ತಿಗೆ ಚಾಮರ ಶ್ರೀನಿವಾಸ ನಾ
ನೆತ್ತಿ ಕುಣಿವೆನೋ ಶ್ರೀನಿವಾಸ ನಿನ್ನ
ತತ್ತುನ ಹಾವಿಗೆ ಶ್ರೀನಿವಾಸ ನಾ
ಹೊತ್ತು ನಲಿವೆನೋ ಶ್ರೀನಿವಾಸ | ೩ |
ಹೆಳಿದಂತಾಲಿಹೆ ಶ್ರೀನಿವಾಸ ನಿ
ನ್ನಾಳಿಗಾಳಾಗಿಹೆ ಶ್ರೀನಿವಾಸ ಅವ
ರೂಳಿಗವ ಮಾಳ್ಪೆ ಶ್ರೀನಿವಾಸ ನನ್ನ
ಪಾಲಿಸೋ ಬಿಡದೆ ಶ್ರೀನಿವಾಸ | ೪ |
ನಿನ್ನ ನಾಮ ಹೋಳಿಗೆ ಶ್ರೀನಿವಾಸ ಕಳ್ಳ
ಕುನ್ನಿ ನಾನಾಗಿಹೆ ಶ್ರೀನಿವಾಸ ಕಟ್ಟಿ
ನಿನ್ನವರೊದ್ದರೆ ಶ್ರೀನಿವಾಸ ನನ
ಗಿನ್ನು ಲಜ್ಜ್ಯಾತಕೆ ಶ್ರೀನಿವಾಸ | ೫ |
ಬೀಸಿ ಕೊಲ್ಲಲವರೆ ಶ್ರೀನಿವಾಸ ಮುದ್ರೆ
ಕಾಸಿ ಚುಚ್ಚಲವರೆ ಶ್ರೀನಿವಾಸ ಮಿಕ್ಕ
ಘಾಸಿ ಗಂಜೆನಯ್ಯ ಶ್ರೀನಿವಾಸ ಎಂಜ
ಲಾಸೆಯ ಬಂಟ ನಾ ಶ್ರೀನಿವಾಸ | ೬ |
ಹೇಸಿ ನಾನಾದರೆ ಶ್ರೀನಿವಾಸ ಹರಿ
ದಾಸರೊಳು ಪೊಕ್ಕೆ ಶ್ರೀನಿವಾಸ ಅವರ
ಭಾಸೆಯ ಕೇಳಿಹೆ ಶ್ರೀನಿವಾಸ ಆ
ವಾಶೆಯ ಸೈರಿಸೊ ಶ್ರೀನಿವಾಸ | ೭ |
ತಿಂಗಳವನಲ್ಲ ಶ್ರೀನಿವಾಸ ವತ್ಸ
ರಂಗಳವನಲ್ಲೋ ಶ್ರೀನಿವಾಸ ರಾ
ಜಂಗಳ ಸವಡಿಪೆ ಶ್ರೀನಿವಾಸ ಭ
ವಂಗಳ ದಾಟುವೆ ಶ್ರೀನಿವಾಸ | ೮ |
ನಿನ್ನವ ನಿನ್ನವ ಶ್ರೀನಿವಾಸ ನಾ
ನನ್ಯವನರಿಯೆನೊ ಶ್ರೀನಿವಾಸ ಅಯ್ಯಾ
ಮನ್ನಿಸೊ ತಾಯ್ತಂದೆ ಶ್ರೀನಿವಾಸ
ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ | ೯ |

ಸಂಗ್ರಹ - ನರಹರಿ ಸುಮಧ್ವ
****

ಪ್ರಸನ್ನನಾದ ವೆಂಕಟೇಶ

ಕಾಖಂಡಕಿ ಗ್ರಾಮದಿಂದ ಬಾಗಲಕೋಟೆಗೆ
ವಲಸೆ ಬಂದ ಒಂದು ಬ್ರಾಹ್ಮಣ ಕುಟುಂಬ. ಅಣ್ಣ ಅತ್ತಿಗೆ, ಮತ್ತೆ ವೆಂಕಣ್ಣನೆಂಬ ತಮ್ಮ.
ಬಾಲ್ಯದಲ್ಲೇ ತಂದೆ, ತಾಯಿಗಳನ್ನು ಕಳೆದುಕೊಂಡಿದ್ದ ವೆಂಕಣ್ಣ. ಅಣ್ಣನ ಔದಾಸೀನ್ಯ, ಅತ್ತಿಗೆಯ ಒರಟುತನ. ವೆಂಕಣ್ಣನ ಬಾಲ್ಯ ಕರುಣಾಜನಕ.  ಶಾಲೆ ಬಿಡಿ, ಅಕ್ಷರ ಅಭ್ಯಾಸವೇ ಇರಲಿಲ್ಲ.
ಗೋ, ಪಾಲನೆಯಿಂದ ಹಿಡಿದು ಮನೆಕೆಲಸದವರೆಗೆ ಮೈಮುರಿ ದುಡಿತ. ಅಷ್ಟಾದರೂ ಹೊಟ್ಟೆ ತುಂಬ ಊಟ ಸಿಗುತ್ತಿರಲಿಲ್ಲ.  ಇದೆಲ್ಲ ಅತ್ತಿಗೆಯ ಔದಾರ್ಯ. ಕೊನೆಗೆ ಬಾಯಾರಿಕಗೆ ಮಜ್ಜಿಗೆಯೂ ಸಿಗಲಿಲ್ಲ. ಮೇಲೆ ಅವಮಾನ ಬೇರೆ.
ಸಂಜೆ ತನಕ ಕಾಯ್ದರೂ ಸಣ್ಣ ಸವಟು ಗಂಜಿ ಸಿಗಲಿಲ್ಲ. - ವಿಜಯದಾಸರ ಮಾತು. ಅದೇ ಸ್ಥಿತಿ ವೆಂಕಣ್ಣನಿಗೆ. ಅಗ್ನಿ ಪರೀಕ್ಷೆ. ಪರಮಾತ್ಮನ ಪರೀಕ್ಷೆ.
ವೆಂಕಣ್ಣ ಬಂಗಾರದ ಅದಿರು. ತಾತ್ಸಾರ,ಬಡತನಗಳೇ ಅಗ್ನಿ. 
ಅಲ್ಲಿ ಬಿದ್ದ ಚಿನ್ನ. ಚೊಕ್ಕ ಚಿನ್ನವಾಗಿ ಬಂದವರೇ ಮಹಾನುಭಾವ ಪ್ರಸನ್ನ ವೇಂಕಟದಾಸರು.
ಬೇಡಿದರೆ ನನ್ನ ಒಡೆಯನನ್ನೇ ಬೇಡುವೆ ಎಂದ ಬಾಲಕ ವೆಂಕಣ್ಣ.  ನೊಂದ ಮನ. ಮನೆ ಬಿಟ್ಟ. ಗೊತ್ತು ಗುರಿ ಇಲ್ಲದ ಪಯಣ.  ಆದರೆ ಇವನ ಗೊತ್ತು ಗುರಿ ತಿರುಪತಿ ವೆಂಕಪ್ಪನಿಗೆ  ಗೊತ್ತು.
ಭಕ್ತ ವತ್ಸಲ. ಭಕ್ತಿಗೆ ಆಯಸ್ಕಾಂತ. ವೆಂಕಣ್ಣನನ್ನು ತಿರುಪತಿಗೆ ಸೆಳೆತಂದ ವೆಂಕಪ್ಪ. ಪಾದಯಾತ್ರೆ. ಉಪವಾಸ, ವನವಾಸ.  ಬಳಲಿ ಬಂದ ವೆಂಕಣ್ಣ ಶೇಷಗಿರಿವಾಸಗೇ ಶರಣು ಎಂದ.
ಕಳೆದುಕೊಂಡ ಮಗು ತಾಯಿಯನ್ನು ಅರಸುತ್ತದೆ.  ಅಡಗಿದ ತಾಯಿ ಓಡಿ ಬರುತ್ತಾಳೆ.  ಮಗುವನ್ನು ಎತ್ತಿ ಮುದ್ದಾಡುತ್ತಾಳೆ. ಈತನಾದರೋ ಜಗದ ತಾಯಿ. ಕರುಣಾಮಯಿ.
ವೆಂಕಣ್ಣ ಮುದ್ದುಮಗು. ಕೇಳಬೇಕೇ! ಈಶ, ದಾಸಗೆ ಹೊಸ ಕಣ್ಣು ಹಚ್ಚಿದ.
ಹೇ, ಶ್ರೀನಿವಾಸ ನಿನ್ನ ಕಂಡು ಧನ್ಯನಾದೆನೋ.
ಶ್ರೀನಿವಾಸನ ದರ್ಶನ, ಸ್ಪರ್ಶನ ಅನುಗ್ರಹ ಲಭ್ಯ. ದಾಸ ದೀಕ್ಷೆ. 
ಗುಡಿ ಒಳಗೆ ಹೋದವ ವೆಂಕಣ್ಣ.  ಹೊರಗೆ ಬಂದದ್ದು ಪ್ರಸನ್ನ ವೆಂಕಟದಾಸರು.
ಒಳಗೆ ಹೋದದ್ದು ಅನಕ್ಷರಸ್ಥ. ಹೊರಗೆ ಬಂದದ್ದು ಕ್ಷರಾಕ್ಷರ ಮಹಿಮೆ ಪಾಡಿ ಕೊಂಡಾಡುವ ಜ್ಞಾನಿವರೇಣ್ಯ.
ಭಕ್ತ ವೆಂಕಣ್ಣನನ್ನು ಕಂಡು ಪ್ರಸನ್ನನಾದ ಸ್ವಾಮಿ   ವೇಂಕಟೇಶ. ಅದಕ್ಕಾಗಿ  ಪ್ರಸನ್ನವೆಂಕಟದಾಸ. ಈಶ ವೇಂಕಟೇಶನನ್ನು ಕಂಡು ಪ್ರಸನ್ನತೆ ದಾಸಗೆ. ಅದಕ್ಕಾಗಿ                ಪ್ರಸನ್ನ ವೇಂಕಟದಾಸರು.                                                                                          ಮುಂದೆ ಎಲ್ಲ ಆಶ್ಚರ್ಯಮಯ. ಓದು ಬಾರದವರು ಭಾರತ, ಭಾಗವತಾದಿ ಶಾಸ್ತ್ರ ಗಳನ್ನೇ ಹಾಡಿದರು ದಾಸರು. ಅವರು ಹಾಡಿದ್ದೆಲ್ಲ ಭಾಗವತವೇ ಆಯಿತು.
ದಾಸರು ನಡೆದಿದ್ದು  ಕ್ಷೇತ್ರವಾಯಿತು. ನೋಡಿದ್ದು ಕಷ್ಟ ದೂರವಾಯಿತು.
ನುಡಿದಿದ್ದು ನಿಜವಾಯಿತು. ಹಿತನುಡಿ ಪರಿಹಾರವಾಯಿತು.
ಕಷ್ಟ ದುಃಖಗಳ ಪರಿಹಾರಕ್ಕಾಗಿ  ಲೋಕ ದಾಸರ ಬೆನ್ನು ಬಿತ್ತು. ಅನುಗ್ರಹ ನೋಟ, ಹಿತ ಮಾತುಗಳಿಂದ ಮೋಡಿ ಮಾಡಿದರು. ದುಃಖ ದುಮ್ಮಾನ ದೂರು ಮಾಡಿದರು. ಜನ ಸೇವೆ ಜನಾರ್ದನನ ಪ್ರೀತಿಗಾಗಿ ಎಂದರು. ಜನರು ದಾಸರ ಸುತ್ತ.  ದಾಸರು ಜನಾರ್ದನನ ಸುತ್ತ.
ಮಾತಿನಲಿ ಸಿದ್ಧಿ. ಲೋಕದಲಿ ಪ್ರಸಿದ್ಧಿ. ಮರೆತ ಅಣ್ಣ ಕರೆದ. ಅತ್ತಿಗೆ ಕರೆದಳು. ದಾಸರು ಮರಳಿ ಊರಿಗೆ.  ಕ್ಷಮೆ ಯಾಚಿಸಿದಳು.  ದಾಸರು ನಮಸ್ಕರಿಸಿದರು.  ನೀ ಎನ್ನ ಉದ್ಧರಿಸಿದೆ ಎಂದರು. ಅನಾದರ ಮಾಯ.  ಎಲ್ಲೆಲ್ಲೂ ಸಾದರ.
ಇದು ನಿನ್ನ ಒಲುಮೆ. ಎನ್ನ ಸಾಧನವಲ್ಲ ಎಂದರು.
'ಅರಿಗಳೇ ಸಖರಕ್ಕು  ಅತಿವಿಷ ಅಮೃತವಕ್ಕು
ಉರಗ ಪೂಮಾಲೆಯಕ್ಕು  ಉರಿ ತಣ್ಣಗಕ್ಕು------- 
ಶ್ರೀ ಪ್ರಸನ್ನ ವೇಂಕಟನ ಭಜಿಪರಿಗೆ|| 
ತಮ್ಮ ಅನುಭವ ಹಂಚಿಕೊಂಡರು. ಅರಿಯಾಗಿದ್ದ ಅಣ್ಣ ಅತ್ತಿಗೆ ಸರಿಯಾದರು. ಅರಿಯಲ್ಲಿ ಮುರಾರಿಯ ಕಾಣಿ. .ವಿಷದಲ್ಲಿ ಕಾಳಿಂಗ ಮರ್ದನನ ಕಾಣಿ.  ಉರಗದಲಿ ಉರಗಶಯನನ ಸ್ಮರಿಸಿ. ಅಗ್ನಿಯಲಿ ಭಾರ್ಗವನ ನೋಡಿ. ಇಂತು ಎಲ್ಲೆಡೆ ವೇಂಕಟೇಶ. ಎಲ್ಲ ಸಂಕಟ ದೂರ. ಭಯ ಮಾಯ. ನಿರ್ಭಯ. ಇದು ಬಾಲ ಪ್ರಲ್ಹಾದನ ಅನುಭವ.
ಹರಿ ಮಹಿಮೆ ಹಾಡಿ ಕೊಂಡಾಡಿದರು.
'ಬಿಡೆನೋ ನಿನ್ನ ಅಂಘ್ರಿ ಶ್ರೀನಿವಾಸಾ.| 
ನನ್ನ ದುಡಿಸಿ ಕೊಳ್ಳೆಲೋ ಶ್ರೀನಿವಾಸಾ|'
ನಿನ್ನ ಅಂಘ್ರಿಗಳ ಬಿಟ್ಟರೆ ನನಗೆ ಆಣೆ.
ನನ್ನ ಸಾಧನಕೆ ಹಚ್ಚದಿದ್ದರೆ ನಿನಗೆ ಆಣೆ. ಈ ಭಾವ.
ದಾಸರ ಅಪಾರ ವಿಶ್ವಾಸ ಶ್ರೀನಿವಾಸನ ಮೇಲೆ. ಸಲಿಗೆಯ ಮಾತು. ನೂರಾರು ಪದ. ಕೊಂಡಾಡಿದರು ದಾಸರ ಮಾತಿನಲ್ಲಿ ಹರಿ,  ಮನಸ್ಸಿನಲ್ಲಿ ಶ್ರೀ ಹರಿ. ಒಳಗೆ ಕೃಷ್ಣ. ಹೊರಗೆ ಶ್ರೀಕೃಷ್ಣ. ಭಾಗವತರ ಎದುರು ಆಡುವವನಲ್ಲವೇ ಬಾಲಕೃಷ್ಣ!                                            ಅದೇ ನಡೆಯಿತು. ದಶಮ ಸ್ಕಂದ. ಕೃಷ್ಣನ ಕಥೆ ಅನುಭವಿಸಿದರು. ಅನುಭವಿಸಿದ್ದೆಲ್ಲ ಕೃಷ್ಣನ ಮಹಾತ್ಮೆ ಎಂದರು. ಆನಂದಿಸಿದರು. ಈ ಅನುಭವ, ಆನಂದ ಹೃದಯದಲಿ ತುಂಬಿ ಹಿಡಿದಿಟ್ಟರು. ಮನಸಿಲಿ ಬಿಚ್ಚಿಟ್ಟರು. ವದನದಿ ನುಡಿ ಕಟ್ಟಿದರು.  ಹಸ್ತದಿ ಪ್ರಕಟಿಸಿದರು. ಅಂತಃಕರಣದಿ ಹಂಚಿದರು. 
ಅದೇ ದಶಮಸ್ಕಂದ ಭಾಗವತ. ವೇಣು ನಾದ. ಏನು ಸವಿಯೋ! ಬಾಲಕೃಷ್ಣ ವನದತ್ತ. ಗೋಪಿಯರು ಅವನ ಸುತ್ತ. ಕಂಡರು ದಾಸರು. ರಚಿಸಿದರು ಗೋಪೀಗೀತ. ವೇಣು ಗೀತ.
ಬಾಲಕೃಷ್ಣ ಲೀಲೆಗಳು ಕಣ್ಣ ಮುಂದೆ. ಮತ್ತೆ ಭಾಮೆ ಜೊತೆ ಕೃಷ್ಣ. ಗರುಡವಾಹನ. ನರಕಾಸುರ ಸಂಹಾರ.ಹದಿನಾರುಸಾವಿರ ಕನ್ಯಾ ವಿಮೋಚನೆ.  ಅವರ ಜೊತೆ ಕೃಷ್ಣನ ವಿವಾಹ. ನೋಡುತ್ತಿದ್ದಂತೆ ಹಾಡಿದರು –
ಯಾರಿಗೆ ಮನಸೋತೆ? ಯಾರಿಗೆ ವಧುವಾದೆ?
ಶ್ರೀರಮಣಿಯ ಉತ್ತರ -
'ಹಕ್ಕಿಯ ಹೆಗಲೇರಿ ಬಂದವಗೆ
ನೋಡಕ್ಕಾ ಮನಸೋತೆ ನಾನವಗೆ'
ರಸ ಭರಿತ ಸುರಸ ಚರಿತ.  ಪದಗಳ ಕೋಲಾಟ.  ಅದ್ಭುತ ರಚನೆಗಳು.ಕೃಷ್ಣ ವಿವಾಹ ಪ್ರಸಂಗ.
ನೋಡುತ್ತಾರೆ ದಾಸರು.
ನಾರದ ಕೊರವಂಜಿಯಾದ. ರುಕ್ಮಿಣಿಯ ಅರಮನೆಗೆ ಬಂದ. ಕೃಷ್ಣನೇ ನಿನ್ನ ಪತಿ ಎಂದ. ಶುಭ ನುಡಿದ.  ಕಣಿಹೇಳಿ ಹೊರಟ. ಸುಂದರ ಪ್ರಸಂಗಗಳ ಮಧುರ ಚಿತ್ರಣ.ನಾರದ ಕೊರವಂಜಿ,
ಶ್ರೀ ಕೃಷ್ಣ ಪಾರಿಜಾತ, ನಾರಾಯಣ ಪಂಜರ, ಸಮಸ್ತ ನಾಮ ಮಣಿಗಣ ಷಟ್ಚರಣ, ಮೊದಲಾದ ಧೀರ್ಘ ಕೃತಿಗಳನ್ನು ರಚಿಸಿದರು.
ಕೀರ್ತನೆಗಳು, ಜಾನಪದಗಳು, ಸುಳಾದಿಗಳು. ಉಗಾಭೋಗಗಳು ಹೀಗೆ ನೂರಾರು ಕೃತಿಗಳು. ದಾಸ ಸಾಹಿತ್ಯದಲ್ಲಿ ಮೈಲುಗಲ್ಲು.
ಇವು ದೊರೆತದ್ದು.  ಕಳೆದು ಕೊಂಡದ್ದು ಇನ್ನೂ ಹೆಚ್ಚಂತೆ. 
ದಾಸರ ಮಹಿಮೆಯೂ ಅಪಾರ. ಅನೇಕ ಪ್ರಸಂಗಗಳು ಸಾಕ್ಷಿ. ಒಮ್ಮೆ ಇಬ್ಬರು ಭಕ್ತರಿಂದ ಏಕ ಕಾಲಕ್ಕೆ ಆಮಂತ್ರಣ. ಎರಡು ರೂಪದಿ ಹೋಗಿ ಆತಿಥ್ಯ ಸ್ವೀಕರಿಸದರಂತೆ.
ಮತ್ತೊಮ್ಮೆ ದಾಸರ ಹೊಲದ ರೈತ ಬಂದ. ಬೆಳೆ ಬೆಳೆದಿಲ್ಲ ಎಂದ.  ಸುಳ್ಳು ಹೇಳಿದ. ಹಾಗೇ ಆಗಲಿ ಎಂದರು ದಾಸರು. ಮುಂದೆ ಮೂರು ವರ್ಷ. ಹಿಡಿ ಕಾಳು ಹುಟ್ಟಲಿಲ್ಲ ಅಲ್ಲಿ.  ಸುತ್ತಲಿನ ಹೊಲಗಳಲ್ಲಿ ತುಂಬಿ ತುಳುಕುವ ಬೆಳೆ. ದೈನ್ಯದಿ ಮರಳಿ ಬಂದ. ಕ್ಷಮೆ ಬೇಡಿದ. ಶರಣಾದ. ದಾಸರು ಅನುಗ್ರಹಿಸಿದರು. ಮರುವರುಷದಿಂದ ಹೊಲದ ತುಂಬೆಲ್ಲ ಧಾನ್ಯ.
ಮತ್ತೆ ದಾಸರು ಊರೂರು ಸಂಚರಿಸುತ್ತಿದ್ದರು. ಅಡವಿ ಮಾರ್ಗ. ಕಂಡ ಹುಲಿಗಳಿಗೆ ಅಂಗಾರ  ಹಚ್ಚುವರು. ದೇವರ ಪೆಟ್ಟಿಗೆ ಇಡುವರು. ಮೃಗಗಳ ಕ್ರೌರ್ಯ ಮಾಯ.  ಸಾಧು ಸ್ವಭಾವ. ಅದಕ್ಕಾಗಿ ಅಂಗಾರದ ದಾಸರೆಂದೇ ಪ್ರಸಿದ್ಧಿ. ದೇವರ ನಾಮಸ್ಮರಣೆ, ಕೀರ್ತನೆ, ನವವಿಧಭಕ್ತಿ ಆಚರಣೆ, ಹಿತೋಪದೇಶ, ಶಿಷ್ಯರ ಉದ್ಧಾರ - ಇದು ದಾಸರ ದಿನಚರಿ.
ಅಂತ್ಯಕಾಲ ಬಾದಾಮಿಯಲ್ಲಿ ಕಳೆದರಂತೆ. ಭಾದ್ರಪದ ಶುದ್ಧ ದ್ವಾದಶಿ ಅವರ ಪುಣ್ಯ ತಿಥಿ.
ಅಗಸ್ತ್ಯ ತೀರ್ಥದ ಪಕ್ಕದ ಕಟ್ಟೆ. ದಾಸರ ಕಟ್ಟಿ ಎಂದೇ ಪ್ರಸಿದ್ಧ.  ತುಂಬ ಭಕ್ತಿಯಿಂದ, ವೈಭವದಿಂದ ನಾಡಿನ ಹಲವೆಡೆ ಅವರ ಆರಾಧನೆ.
ದಾಸರ ಅಂತರ್ಗತ  ಮುಖ್ಯ ಪ್ರಾಣಾಂತರ್ಗತ ಪ್ರಸನ್ನ ವೇಂಕಟೇಶ ದೇವರಿಗೆ ಸಾಸಿರ ನಮನಗಳು.
(ಆರಾಧನೆ ನಿಮಿತ್ತ.)
ಡಾ ವಿಜಯೇಂದ್ರ ದೇಸಾಯಿ
ಶ್ರೀ ಕೃಷ್ಣಾರ್ಪಣಮಸ್ತು
***

info from sumadhwaseva.com--->


ಹೆಸರು – ಕಾಖಂಡಕಿ ವೆಂಕಪ್ಪ (ವೆಂಕಟೇಶ)
ಕಾಲ –  1680-1752 AD
ಪುಣ್ಯದಿನ – ಭಾದ್ರಪದ ಶುದ್ಧ ದ್ವಾದಶಿ
ತಂದೆ ತಾಯಿ – ಲಕ್ಷ್ಮೀಬಾಯಿ ಮತ್ತು ಕಾಕಂಡಕಿ ನರಸಪ್ಪಯ್ಯ
ಸ್ಥಳ – ಬಾದಾಮಿ, ಬಾಗಲಕೋಟೆ
ಗೋತ್ರ – ಕಾಶ್ಯಪ
ಗುರುಗಳು – ಮುದ್ಗಲ ಜನಾರ್ದನಚಾರ್ಯರು
ಅಂಕಿತ – ಪ್ರಸನ್ನ ವೆಂಕಟ  ಅಥವಾ ಪ್ರಸನ್ನ ವೆಂಕಟಕೃಷ್ಣ. 


ಒಮ್ಮೆ ಸ್ವಾಮಿ ಪುಷ್ಕರಿಣಿತೀರ್ಥದಲ್ಲಿ ಸ್ನಾನಗೈದು , ಶ್ರೀ ಹರಿಯನ್ನು ಸ್ತುತಿಸುತ್ತಿದ್ದಾಗ “ಪ್ರಸನ್ನವೆಂಕಟ” ಮುದ್ರಿಕೆಯನ್ನು ಶ್ರೀಹರಿಯೇ ಸ್ವಪ್ನಗೋಚರನಾಗಿ ಅವರ ನಾಲಿಗೆಯಲ್ಲಿ ಬರೆದನಂತೆ.
ಅಂಗಾರದ ಆಚಾರ್ಯರು – ಶ್ರೀ ಪ್ರಸನ್ನ ವೆಂಕಟದಾಸರು ಒಮ್ಮೆ ಊರಿಂದೂರಿಗೆ ಪ್ರಯಾಣಿಸುವಾಗ ಎದುರಾದ ಹುಲಿಯ ಮೈ ಚಪ್ಪರಿಸಿ ಅದರ ಮೇಲೆ ದೇವರ ಪೆಟ್ಟಿಗೆಯಿಟ್ಟು ತಮ್ಮ ಜೊತೆಗೇ ಊರು ತಲುಪುವವರೆಗೂ ಕರೆದೊಯ್ಯುತ್ತಿದ್ದರಂತೆ.  ಅಲ್ಲಿ ಅದಕ್ಕೆ ಅಂಗಾರ ಹಚ್ಚಿ ಯಾವ ಗೋವುಗಳನ್ನೂ ಹಿಂಸಿಸಬೇಡವೆಂದು ಹೇಳು ಕಳಿಸುತ್ತಿದ್ದರಂತೆ.  ಆ ಹುಲಿಗಳು ಎಂದೂ ಗೋವುಗಳ ತಂಟೆಗೆ ಬರುತ್ತಿರಲಿಲ್ಲವಂತೆ.  ಆದ್ದರಿಂದ ಅವರನ್ನು ಅಂಗಾರದ ಆಚಾರ್ಯರು ಎಂದೇ ಕರೆಯುತ್ತಿದ್ದರು.
***********

ಶ್ರೀ ಪ್ರಸನ್ನವೆಂಕಟ ದಾಸರು ಸುಮಾರು 250 ವರ್ಷ ಗಳ ಹಿಂದೆಯೆe ಕರೊನಾ ದಂಥಾ ಮಹಾಮಾರಿ ರೊeಗ ಬರುತ್ತದೆಂದು ಭವಿಷ್ಯ ನುಡಿದಿದ್ದಾರೆ. ಮeಲೆ ಪೊಸ್ಟ ಮಾಡಿದ ಅವರ "ಕಾಲ ಜ್ಞಾನ" ಕೃತಿ ಯ 7 ನೆಯ ನುಡಿಯ 2 ಮತ್ತು ಮೂರನೆ ಸಾಲು ಓದಿ" ತರತರದ ವ್ಯಾಧಿ ರೊeಗ ರುಜಿನಾದಿ ಪರಿಹಾರ ಕಾಣದೆ ತಿರಿಗ್ಯಾರೊ ಜಗದಿ" ಎಂಬ ಮಾತು ಇವತ್ತೀನ ಜಗತ್ತಿನಲ್ಲಿ ಕರೊನಾ ರೊಗಕ್ಕೆ ಯಾವ ಪರಿಹಾರವು ಕಾಣದೆ ಎಂಥ ಬಲಿಷ್ಟ ರಾಷ್ಟ್ರ ಗಳು  ಕೂಡ ಸುಟ್ಟ ಸುಣ್ಣನಂತಾಗಿವೆ. ಶ್ರೀನಿವಾಸ ನಿಂದ ನೆರವಾಗಿ ಅಂಕಿತ ಪಡೆದ ಪ್ರಸನ್ನವೆಂಕಟ ದಾಸರು ತ್ರಿಕಾಲ ಜ್ಞಾನಿಗಳಾಗಿದ್ದರು. ಇವರು ಕಾಲ ಜ್ಞಾನ ದಕ್ರತಿಯಲ್ಲಿ ನುಡಿದ ಹಲವಾರು ಭವಿಷ್ಯ ಗಳು ನಿಜವಾಗಿರುವದನ್ನು ಕಾಣ ಬಹುದು. ಹಾಗೆ ಅವರು ನುಡಿದ ಭವಷ್ಯ ಗ್ಲೋಬಲ್ ವಾರ್ಮಿಂಗ ಹಾಗು ಅಂತರಿಕ್ಷ ಮಲಿನ ಗೊಳ್ಳುವದು ಕೂಡ ನಿಜವಾಗಿವೆ. ಇದನ್ನು ನುಡಿ ೧೦ ಮತ್ತು ೨೧ ರಲ್ಲಿ ಗಮನಿಸಬಹುದು. ಕೊನೆ ಯ ನುಡಿಯಲ್ಲಿ ದಾಸರು ಮುಂದಾಗುವ ಈ ಅನಾಹುತಗಳಿಂದ ಜನರಿಗೆ ಆಗುವ ತಾಪ ಕಡಿಮೆ ಮಾಡೆಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ. ಆದ್ದರಿಂದ ನಾವು ಕೂಡ ಕರೊನಾ ಸಾಂಕ್ರಾಮಿಕ ರೊಗದಿಂದ ಜನರ ಸಂಕಷ್ಟ ದಿಂದ ಪಾರು ಮಾಡು ಎಂದು ಪ್ರಸನ್ನವೆಂಕಟ ದಾಸರ ಬಿಂಬಮೂರುತಿಯಾದ ಶ್ರೀನಿವಾಸ ದೆeವರನ್ನು ಪ್ರಾರ್ಥಿಸೊeಣ. ಈ ಕೀರ್ತನೆ ಹಸ್ತಪ್ರತಿ ಶೊeಧಿಸಿದವರು ಡಾ. ಲಕ್ಷ್ಮಿ ಕಾಂತ ಪಾಟಿಲ್ ಅವರು. 
ಈ ವಿಶೇಷ ಕೀರ್ತನೆ  ಪೂರ್ತಿ ಸಾಹಿತ್ಯ ಕೆಳಗೆ ಪೊಸ್ಟ ಮಾಡಿದ್ದೆನೆ. ಗಮನಿಸಬಹುದು. ಹಾಗೆ ಇದನ್ನು  ಅನಂತ ಕುಲಕರ್ಣಿ ಅವರು ಹಾಡಿದ ಹಾಡನ್ನು ಕೆಳಗೆ ಪೊಸ್ಟ ಮಾಡಿದ್ದೇನೆ. ಆಸಕ್ತರು ಧಾಟಿ ಉಪಯೊಗಿಸಿ ಹಾಡಿ      ಗ್ರೂಪ್ ಗಳಲ್ಲಿ ಪೊಸ್ಟ ಮಾಡಿ ಈ ಅಪೂರ್ವ ವಾದ ದಾಸರ ಕೀರ್ತನೆ ಪ್ರಚಾರಕ್ಕೆ ಕೈ ಜೊಡಿಸ ಬಹುದು.
- ಡಾ. ಸುಭಾಸ ಕಾಖಂಡಕಿ
**********



ಸತತ ಸ್ಮರಿಸಿ ಮಧ್ವ ಸಂತತಿ ಗುರುಗಳ
ಗತಿಯುಂಟು ಸಂತತಿ ಸಂಪತ್ತಿಯುಂಟು || ಪ ||
ಶ್ರೀ ಮಧ್ವ ಪದ್ಮನಾಭ ನರಹರಿ ಮಾಧವ
ಆ ಮೌನಿ ಅಕ್ಷೋಭ್ಯ ಜಯರಾಯ
ವಿದ್ಯಾಧಿರಾಜ ಭೂಮಾ ಕವೀಂದ್ರ ವಾಗೀಶರ || ೧ ||
ಮುನಿರಾಮಚಂದ್ರ ವಿದ್ಯಾನಿಧಿ ರಘುನಾಥ
ಮಾರನ ಗೆಲಿದ ರಘುವರ್ಯ ರಘೋತ್ತಮ
ವೇದವ್ಯಾಸ ಘನ ವಿದ್ಯಾಧೀಶ ವೇದನಿಧಿಗಳ || ೨ ||
ಸತ್ಯವ್ರತ ಸತ್ಯನಿಧಿ ಸತ್ಯನಾಥ ಅನುಪಮ
ಸತ್ಯಾಭಿನವ (ಗುರು) ಕರಪದ್ಮಜ
ನಮ್ಮ ಗುರು ಸತ್ಯಪೂರ್ಣ ಪ್ರಸನ್ವೇಂಕಟಾ ಪ್ರಿಯರ || ೩||
 ----
ಬಿಡೆನೋ ನಿನ್ನಂಘ್ರಿ ಶ್ರೀನಿವಾಸ ನನ್ನ
ದುಡಿಸಿಕೊಳ್ಳೆಲೋ ಶ್ರೀನಿವಾಸ ನಿ-
ನ್ನುಡಿಯ ಜೀತಲ್ಲೋ ಶ್ರೀನಿವಾಸ ನನ್ನ
ನಡೆ ತಪ್ಪು ಕಾಯೋ ಶ್ರೀನಿವಾಸ   | ಪ |
ಬಡಿಯೋ ಬೆನ್ನಲಿ ಶ್ರೀನಿವಾಸ ನ-
ನ್ನೊಡಲ ಹೊಯ್ಯದಿರೋ ಶ್ರೀನಿವಾಸ ನಾ
ಬಡವ ಕಾಣೆಲೋ ಶ್ರೀನಿವಾಸ ನಿ
ನ್ನೊಡಲ ಹೊಕ್ಕೆನೋ ಶ್ರೀನಿವಾಸ   | ೧ |
ಪಂಜುಹಿಡಿವೆನೊ ಶ್ರೀನಿವಾಸ ನಿ
ನ್ನೆಂಜಲ ಬಳಿದುಂಬೆ ಶ್ರೀನಿವಾಸ ನಾ
ಸಂಜೆ ಉದಯಕೆ ಶ್ರೀನಿವಾಸ ಕಾ
ಳಂಜಿಯ ಪಿಡಿವೆನೋ ಶ್ರೀನಿವಾಸ | ೨ |
ಸತ್ತಿಗೆ ಚಾಮರ ಶ್ರೀನಿವಾಸ ನಾ
ನೆತ್ತಿ ಕುಣಿವೆನೋ ಶ್ರೀನಿವಾಸ ನಿನ್ನ
ತತ್ತುನ ಹಾವಿಗೆ ಶ್ರೀನಿವಾಸ ನಾ
ಹೊತ್ತು ನಲಿವೆನೋ ಶ್ರೀನಿವಾಸ | ೩ |
ಹೆಳಿದಂತಾಲಿಹೆ ಶ್ರೀನಿವಾಸ ನಿ
ನ್ನಾಳಿಗಾಳಾಗಿಹೆ ಶ್ರೀನಿವಾಸ ಅವ
ರೂಳಿಗವ ಮಾಳ್ಪೆ ಶ್ರೀನಿವಾಸ ನನ್ನ
ಪಾಲಿಸೋ ಬಿಡದೆ ಶ್ರೀನಿವಾಸ | ೪ |
ನಿನ್ನ ನಾಮ ಹೋಳಿಗೆ ಶ್ರೀನಿವಾಸ ಕಳ್ಳ
ಕುನ್ನಿ ನಾನಾಗಿಹೆ ಶ್ರೀನಿವಾಸ ಕಟ್ಟಿ
ನಿನ್ನವರೊದ್ದರೆ ಶ್ರೀನಿವಾಸ ನನ
ಗಿನ್ನು ಲಜ್ಜ್ಯಾತಕೆ ಶ್ರೀನಿವಾಸ | ೫ |
ಬೀಸಿ ಕೊಲ್ಲಲವರೆ ಶ್ರೀನಿವಾಸ ಮುದ್ರೆ
ಕಾಸಿ ಚುಚ್ಚಲವರೆ ಶ್ರೀನಿವಾಸ ಮಿಕ್ಕ
ಘಾಸಿ ಗಂಜೆನಯ್ಯ ಶ್ರೀನಿವಾಸ ಎಂಜ
ಲಾಸೆಯ ಬಂಟ ನಾ ಶ್ರೀನಿವಾಸ | ೬ |
ಹೇಸಿ ನಾನಾದರೆ ಶ್ರೀನಿವಾಸ ಹರಿ
ದಾಸರೊಳು ಪೊಕ್ಕೆ ಶ್ರೀನಿವಾಸ ಅವರ
ಭಾಸೆಯ ಕೇಳಿಹೆ ಶ್ರೀನಿವಾಸ ಆ
ವಾಶೆಯ ಸೈರಿಸೊ ಶ್ರೀನಿವಾಸ | ೭ |
ತಿಂಗಳವನಲ್ಲ ಶ್ರೀನಿವಾಸ ವತ್ಸ
ರಂಗಳವನಲ್ಲೋ ಶ್ರೀನಿವಾಸ ರಾ
ಜಂಗಳ ಸವಡಿಪೆ ಶ್ರೀನಿವಾಸ ಭ
ವಂಗಳ ದಾಟುವೆ ಶ್ರೀನಿವಾಸ | ೮ |
ನಿನ್ನವ ನಿನ್ನವ ಶ್ರೀನಿವಾಸ ನಾ
ನನ್ಯವನರಿಯೆನೊ ಶ್ರೀನಿವಾಸ ಅಯ್ಯಾ
ಮನ್ನಿಸೊ ತಾಯ್ತಂದೆ ಶ್ರೀನಿವಾಸ
ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ | ೯ |

***********


ಸಿರಿ ವಿರಿಂಚಿ ಭವೇಂದ್ರಾದಿ| 

ಸುರರಿಂದರ್ಚಿತನಾದ ಸಿರಿ

ಪ್ರಸನ್ವೇಂಕಟನ್ನ|

ನಿರುತ ಸ್ಮರಿಪ ಕಾಖಂಡಕಿ  ವೆಂಕಪ್ಪನವರ ಚರಣವನೆ 

ನೆನೆವನೆ ಧನ್ಯ ಮಾನ್ಯ|

ಒಮ್ಮೆ ವಸಂತಕಾಲದಲ್ಲಿ ಒಬ್ಬ ಗೃಹಸ್ಥರು ಶ್ರೀ ಪ್ರಸನ್ನ ವೆಂಕಟದಾಸರ ಶಿಷ್ಯರು ಮತ್ತು ದಾಸರಿಗೆ ಆಪ್ತರು.

ಆ ದಿನ ಅವರ ಮನೆಯಲ್ಲಿ ವಸಂತ ಪೂಜೆಗಾಗಿ ದಾಸರಿಗೆ ಆಮಂತ್ರಣ ವನ್ನು ಕೊಡುತ್ತಾರೆ. ಶ್ರೀ ಪ್ರಸನ್ನ ವೆಂಕಟದಾಸರು ಇವರ ಆಮಂತ್ರಣ ಸ್ವೀಕಾರ ಮಾಡಿ ಅವರ ಮನೆಗೆ ಹೋಗುತ್ತಾರೆ.

ವಸಂತ ಪೂಜೆ ಮುಗಿದಿದೆ.

ದೇವರ ನೈವೇದ್ಯ ಕ್ಕೆ ಪಾನಕ ಮತ್ತು ಮೊಸರು ಅವಲಕ್ಕಿ (ಅವಲಕ್ಕಿ ಗೆ ಮೊಸರು ಕಲಿಸಿದ್ದು)ತಂದು ದಾಸರ ಮುಂದೆ ಇಟ್ಟಿದ್ದಾರೆ.

"ದಾಸರೇ🙏🙏 ನೈವೇದ್ಯ ನೀವೇ ಮಾಡಬೇಕು ಎಂದು ಮನೆಯ ಯಜಮಾನ ಪ್ರಾರ್ಥನೆ ಮಾಡಿದ್ದಾನೆ.

ದಾಸರು ಅವರ ಮಾತಿಗೆ ಮನ್ನಿಸಿ ನೈವೇದ್ಯ ಮಾಡಲು ಕುಳಿತರು.

ಅದರೆ ನೈವೇದ್ಯ ಮಾಡದೇ ಸ್ವಲ್ಪ ಹೊತ್ತು ಕುಳಿತು ಕೆಲ ಕಾಲ ಯೋಚನಾ ಮಗ್ನರಾಗಿ ಮನೆಯ ಯಜಮಾನ ನನ್ನು ಕರೆದು "ಮೊಸರು ಅವಲಕ್ಕಿ ಗೆ ಉಪ್ಪು ಹಾಕಿಲ್ಲ ವೆಂದು ಹೇಳುತ್ತಾರೆ. ಎಲ್ಲಾ ಜನರಿಗು ಆಶ್ಚರ್ಯಕರವಾಗಿ ತೋರುತ್ತದೆ.

ಆದರು ದಾಸರನ್ನು ಪರೀಕ್ಷೆ ಮಾಡಬೇಕೆಂದು ಸ್ವಲ್ಪ ಅವಲಕ್ಕಿ ಭಾಗವನ್ನು ತೆಗೆದು ಉಳಿದ ಭಾಗಕ್ಕೆ ಉಪ್ಪು ಸೇರಿಸಿ ನೈವೇದ್ಯ ಮಾಡಲು ಕೊಡುತ್ತಾರೆ. ಇತ್ತ ನೈವೇದ್ಯ ವಾಯಿತು.ಎಲ್ಲಾ ಜನರು ಶ್ರೀ ಹರಿಯ ಪ್ರಸಾದ ಅದು ದಾಸರು ನೈವೇದ್ಯ ಮಾಡಿದ್ದು ಸ್ವೀಕಾರ ಮಾಡಿ ಧನ್ಯರಾದರು.

ಕೆಲವು ಜನ ದಾಸರ ಪರೀಕ್ಷೆ ಮಾಡಲು ತೆಗೆದಿಟ್ಟ ಅವಲಕ್ಕಿ ಯನ್ನು ತಿಂದು ನೋಡಲಾಗಿ ನಿಜವಾಗಿಯು ಅದರಲ್ಲಿ ಉಪ್ಪು ಹಾಕಿಲ್ಲವೆಂದು ಕಂಡುಬಂತು.

ಅವರು ಯೋಚನೆ ಮಾಡಿದ್ದು.

"ದಾಸರೇನು ನಾವು ಅವಲಕ್ಕಿ ಕಲಿಸುವಾಗ ಎದುರಿಗೆ ಇದ್ದಿಲ್ಲ.ಮತ್ತು ನೋಡಿಲ್ಲ. ಇದು ಹೇಗೆ ಅವರಿಗೆ ತಿಳಿಯಿತು?? ಎಂದು ತಮ್ಮ ಒಳಗೆ ಚರ್ಚೆ ನಡೆಸಿ  

ಭಗವಂತನ ಅನುಗ್ರಹದಿಂದ ದಾಸರಲ್ಲಿದ್ದ ಈ ಅಗಾಧ ಶಕ್ತಿಯನ್ನು ನೋಡಿ ಅವರ ಮೇಲೆ  ಇರುವ ಭಗವಂತನ ಕಾರುಣ್ಯವನ್ನು ನೋಡಿ ದಾಸರನ್ನು ಕೊಂಡಾಡುತ್ತಾರೆ.

ಹೀಗೆ ದಾಸರ ಜೀವನದಲ್ಲಿ ಅನೇಕ ವಿಚಿತ್ರ ಘಟನೆಗಳು ನಡೆದಿದ್ದವೆಂದು ಅವರ ಚರಿತ್ರೆ ಯಲ್ಲಿ ತಿಳಿದು ಬರುತ್ತದೆ.

ಶ್ರೀ ಪ್ರಸನ್ನ ವೆಂಕಟದಾಸರು ರುದ್ರಾಂಶ ಸಂಭೂತರೆಂದು ಬಲ್ಲವರ ವಾಣಿ..

ಸಾಂಶರಾದ ದೇವತೆಗಳು ವ್ಯಾಪ್ತರು ಮತ್ತು ವ್ಯಾಪ್ತೋಪಾಸಕರು.

ಯಾವ ಲೋಕದಲ್ಲಿ, ಯಾವ ಜನ್ಮದಲ್ಲಿ ಇದ್ದರು ಭಗವಂತನ ಕೃಪೆಯಿಂದ ಅವರ ಮಹಿಮೆಯು ಸಹಿತ ವ್ಯಾಪ್ತವಾದುದು.

ದಾಸರ ಕೃತಿಯ ಒಂದು ಸಾಲು.

ನರರ ಪಾಡಲು ಬೇಡ ನಾಯಿ ಮನವೇ|

ಮುರಹರನ ಭಕುತಿಲಿ ನೆಲೆಹೊಂದು ಮನವೇ|

🙏ಶ್ರೀ ಕೃಷ್ಣಾರ್ಪಣಮಸ್ತು🙏

ಹಲವು ಮಾತ್ಯಾಕ ಇವರು

ಸುರರೇ ಸರಿ| ನರರಲ್ಲ

ಇದುಸಿದ್ದವು ಸಿದ್ದ|

ಛಲದಿ ಮನುಜನೆಂಬುವ ಅಧಮ| ಹರಿಯಾಜ್ಞದಿ

ಬಲು ಬಲು ನರಕದೊಳು ಬೀಳುವ ದುರಾತ್ಮ||

🙏ಅ.ವಿಜಯವಿಠ್ಠಲ🙏

*********************************



ಅಚ್ಯುತನ ಮೆಚ್ಚಿಸಿ ಪ್ರಚಿನ್ನ ವರವ ಪಡೆದ|

ಆಚಾರ್ಯ ಸಿರಿ ಪ್ರಸನ್ವೆಂಕಟಾರ್ಯರ ಕಂಡೆ||

ದೋಷ ರಾಶಿಗಳಳಿದು ಶ್ರೀಶನ್ನ ತೋರಿಸುವ|

ವಸುಧೀಶ ಶ್ರೀ ವಿಜಯವಿಠ್ಠಲ ದಾಸ ಮಣಿಯು||

🙏🙏🙏

ಇಂದು ಬಾಗಲಕೋಟೆಯ ಶ್ರೀ ಪ್ರಸನ್ನ ವೆಂಕಟ ದಾಸರ ಆರಾಧನೆಯ ಪುಣ್ಯ ದಿನ.

ಅವರನ್ನು ಕೊಂಡಾಡುವ ಭಾಗ್ಯ.🙏

ಕಾಖಂಡಕಿ ಮನೆತನದ,ಕಾಶ್ಯಪ ಗೋತ್ರದ ಶ್ರೀ ನರಸಪ್ಪಯ್ಯ ನವರು ಹಾಗು ಶ್ರೀ ಮತಿ ಲಕ್ಷ್ಮೀ ಬಾಯಿಯವರ ಎರಡನೆಯ ಮಗನಾಗಿ ನಮ್ಮ ಕಥಾನಾಯಕರ ಜನನ..

ಶ್ರೀನಿವಾಸ ಅವರ ಮನೆತನದ ದೈವ ಹಾಗಾಗಿ ಮಗುವಿಗೆ ವೆಂಕಟೇಶ ಎಂದು ನಾಮಕರಣ ಮಾಡಿದರು.

ವೆಂಕಟೇಶ ಜನಿಸಿದ ಕೆಲ ದಿನಗಳಲ್ಲಿ ತಂದೆ ತಾಯಿ ಇಬ್ಬರು ವೈಕುಂಠ ವಾಸಿಗಳಾಗುತ್ತಾರೆ.

ಮನೆಯ ಜವಾಬ್ದಾರಿ ಅವರ ಅಣ್ಣನವರ ಮೇಲೆ ಬೀಳುತ್ತದೆ. ಹಾಗಾಗಿಇವರ ಕಡೆ ಅವರ ಲಕ್ಷ ಬೀಳುವದಿಲ್ಲ.

ಕೇವಲ ವೆಂಕಟೇಶ ಸ್ತೋತ್ರ ಬಿಟ್ಟರೆ ಬೇರೆ ಮಂತ್ರ ಗೊತ್ತಿಲ್ಲ.

ಸಮಾಜದ ಜನರು ಇವನೊಬ್ಬ ನತದೃಷ್ಟ,ಇವನು ಹುಟ್ಟಿ ತಂದೆ ತಾಯಿಯರನ್ನು ಬೇಗನೆ ಕಳುಹಿಸಿದ ಅನ್ನುವ ನಿಂದನೆ ಚುಚ್ಚು ಮಾತುಗಳು ನಮ್ಮ ವೆಂಕಟೇಶನಿಗೆ.

ಹೀಗಾಗಿ ಯಾರಿಂದಲೂ ಕಳಕಳಿಯ ಮಾತುಗಳು,ಆದರ ಪ್ರೀತಿ, ಸಿಗಲಿಲ್ಲ.

ಅಣ್ಣನ ಕೈ ಹಿಡಿದು ಬಂದ ಅತ್ತಿಗೆ ಸಹ ಅದೇ ಮನೋಭಾವ.

ತಬ್ಬಲಿ ಅನ್ನುವ ಕರುಣಾ ಇಲ್ಲದೆ ದರ್ಪದಿಂದ ಕೆಲಸ ಹೇಳಿ ಮಾಡಿಸುವ ಮನೋಭಾವ.

ಉದಯಕ್ಕೆ ಎದ್ದು ದನ ಕರುಗಳನ್ನು ಹೊಡೆದು ಕೊಂಡು ಹೋಗಿ,ಅಲ್ಲಿ ಘಟಪ್ರಭಾ ನದಿಯಲ್ಲಿ ಸ್ನಾನ,ಸಂಧ್ಯಾವಂದನೆ, ಮತ್ತು ಜೊತೆಯಲ್ಲಿ ಅಣ್ಣ ಹಾಗು ಅತ್ತಿಗೆಯ ಬಟ್ಟೆಗಳನ್ನು ಒಗೆದುಕೊಂಡು ಬರುವ ಕಾರ್ಯ.

ಹೀಗೆ ದಿನಗಳು ಸಾಗಿದವು.

ನಿತ್ಯಭಗವಂತನಿಗೆಗ ಪ್ರಾರ್ಥನೆ ಸ್ವಾಮಿ! ಈ ನನ್ನ ಕಷ್ಟ ಜೀವನವನ್ನು ನೀನು ನೋಡಿಯು ನೋಡಲಾರದವನಂತೆ ಯಾಕೆ ಇದ್ದೀ.ಅನುಗ್ರಹ ಮಾಡು ಅಂತ ಅವನಲ್ಲಿ ಪ್ರಾರ್ಥನೆ ಮಾಡುತ್ತಾ ಇರುತ್ತಾರೆ.

ದಯಾಳು ಪರಮಾತ್ಮ ಇವರನ್ನು ಪರೀಕ್ಷೆ ಮಾಡಲು ಒಂದು ಘಟನೆಯನ್ನು ನಿರ್ಮಾಣ ಮಾಡುತ್ತಾನೆ.

ಒಂದು ದಿನ ವೆಂಕಣ್ಣ ದನಗಳನ್ನು ಮೇಯಿಸಿಕೊಂಡು ಮಧ್ಯಾಹ್ನದ ಸಮಯದಲ್ಲಿ ಮನೆಗೆ ಬಂದ.ಬಿಸಿಲಿನ ತಾಪದಿಂದ ಬಹಳ ಬಾಯಾರಿಕೆ ಆಗಿರುತ್ತದೆ.

ವೈನಿ!!.... ಬಹಳ ಬಾಯಾರಿಕೆ ಆಗ್ಯಾದಾ,ಕುಡಿಲಕ್ಕೆ ಸ್ವಲ್ಪ ಮಜ್ಜಿಗೆ ಕೊಡ್ರಿ ಅಂತ ಕೇಳುತ್ತಾನೆ.

ಅವನ ದುರ್ದೈವ !!

ಮಜ್ಜಿಗೆ ಇಲ್ಲ ಅಂತ ಹೇಳದೆ ಅವನ ವೈನಿ ಬಹಳ ಬಿರುಮಾತುಗಳನ್ನು ಆಡುತ್ತಾಳೆ...

ಏನೋ!!! ವೆಂಕ್ಯಾ ಇವಾಗ ಕುಡಿಲಿಕ್ಕೆ  ತಣ್ಣಂದು ಮಜ್ಜಿಗೆ ಬೇಕು,ಅಂತೀ. ಆಮೇಲೆ ಹೆಂಡತಿ ಬೇಕೇನು ಅಂತ ನಿಷ್ಟೂರವಾದ ಮಾತು ಬರುತ್ತದೆ..

ಯಾಕ !!ವೈನಿ ಹಂಗ ಯಾಕ ಹೇಳುತ್ತಿರಿ. ಮನೆಯಲ್ಲಿ ಆಕಳ ಸಾಕಷ್ಟು ಅವ.ಇಷ್ಟು ಹಾಲು ಕೊಡುತ್ತವೆ. ಒಂಚೂರು ಮಜ್ಜಿಗೆ ಮನೆಯಲ್ಲಿ ಇಲ್ಲವೇನು..?? ಅಂತ ಕೇಳಿದಾಗ

ಅವರ ವೈನಿ ಇನ್ನೂ ಬಹಳ ಬಿರುಸು ಮಾತುಗಳನ್ನು ಆಡಿ

ಮಜ್ಜಿಗೆಯನ್ನು ತಂದು ಅವನ ಮುಂದೆಯೆ ಕಲಗಚ್ಚುಗೆ ಹಾಕುತ್ತಾಳೆ.ಅದನ್ನು ಕಂಡು ಹಾಗೇ ಯಾಕೆ ಮಾಡಿದ್ದರಿ ವೈನಿ? ಕಲಗಚ್ಚುವಿಗೆ ಯಾಕ ಮಜ್ಜಿಗೆ ಹಾಕಿದ್ದು ಅಂತ ಕೇಳಿದಾಗ

 ಅದಕ್ಕೆ ಅವರ ವೈನಿ

ಕಲಗಚ್ಚುಗೆ ಹಾಕಿದರೆ ಕುಡಿದು ಅವು ಹಾಲು ಕೊಡುತಾವಾ..ನಿಂಗ ಕೊಟ್ಟರ ಏನು ಉಪಯೋಗ?? ನಿನ್ನ ಸೇವೆ ಮಾಡಿ ನಂಗ ಸಾಕ್ಯಾಗ್ಯದ,ಹಾಲು ಮಜ್ಜಿಗೆ ಕುಡಿದು ಅರಾಮ ಇರಬೇಕು ಅಂತ ಅಂದುಕೊಂಡಿಯೇನು??.ಹೀಗೆ ಮಾತನಾಡಿ ದಾಗ

ಮನಸ್ಸು ಬೇಸರವಾಗಿ ಅವರು ಹೇಳುತ್ತಾರೆ. ವೈನಿ!ನಾನು ಮನೆ ಬಿಟ್ಟು ತಿರುಪತಿ ಗೆ ಹೋಗ್ತೀನಿ. ಅಣ್ಣ ಊರಿನಲ್ಲಿ ಇಲ್ಲ. ಬಂದ ಮೇಲೆ ಹೇಳ್ರಿ ಅಂತ ಹೇಳುತ್ತಾನೆ.

ಹೋದರೆ ಹೋಗು!! ಅಂಜಿಕೆ ತೋರಿಸಬೇಡ..

ಅದೇನು ನಿಮ್ಮಪ್ಪನ ಮನೆ ಏನು?? ಅಂತ ವೈನಿ ಅಂದರು ಸಹ, ಅವರಿಗೆ ನಮಸ್ಕರಿಸಿ 

ಜಗತ್ತಿನ ತಂದೆ ಅವನು ಅವನ ಮನೆಗೆ ಹೋಗಿ ಅವನಿಗೆ ನನ್ನ ಕಷ್ಟ ಹೇಳಿಕೊಂಡು ದಾರಿ ತೋರಿಸು ಸ್ವಾಮಿ ಅಂತ ಕೇಳುತೀನಿ ಅಂತ ಅಂದುಕೊಂಡು ಮನೆ ಬಿಟ್ಟು ತಿರುಪತಿ ಗೆ ಹೊರಟಿದ್ದ ಯಾತ್ರೆ ಮಾಡುವವರ ಜೊತೆಯಲ್ಲಿ ತಾನು ಹೊರಡುವನು.

ತಿರುಪತಿ ಸೇರಿದ ಮೇಲೆ ಸ್ವಾಮಿ ಪುಷ್ಕರಣಿ ಸ್ನಾನ,ವರಾಹ ದೇವರ ದರುಶನ, ನಂತರ ಜನರ ಗದ್ದಲದ ನಡುವೆ ಶ್ರೀನಿವಾಸನ ದರುಶನ ಮಾಡುತ್ತಾರೆ.

ಅವನ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿ 

ದೇವಾ! ನನ್ನಂಥ ಅನಾಥ ನನ್ನು ಯಾಕೆ ಹುಟ್ಟಿಸಿದಿ!! ನನ್ನ ಉದ್ದಾರ ಮಾಡು ಅಂತ ಕೇಳಿಕೊಂಡಾಗ..

ಶ್ರೀನಿವಾಸದೇವರು ಪ್ರತ್ಯಕ್ಷವಾಗಿ ಅವರ ನಾಲಿಗೆಯ ಮೇಲೆ  ಪ್ರಸನ್ನ ವೆಂಕಟ ಅಂತ ಬೀಜಾಕ್ಷರಗಳನ್ನು ಬರೆದು ಇನ್ನೂ ಮುಂದೆ ಪ್ರಸನ್ನ ವೆಂಕಟ ಎಂಬ ಹೆಸರಿನಿಂದ ಹರಿದಾಸನಾಗು ಎಂದು ಅಜ್ಞಾಪಿಸುವ..

ಸಾಕ್ಷಾತ್ ಭಗವಂತ ನಿಂದ ಅಂಕಿತ ಪಡೆದ ಮಹಾನುಭಾವರು.

ಭಗವಂತನ ದಿವ್ಯ ರೂಪವನ್ನು ಕಂಡು ದಾಸರು 

ದೇವಾ!! ದಯಾನಿಧೆ!! ಪ್ರಭೋ! ನನ್ನ ತಪ್ಪು ಗಳನ್ನು ನೋಡದೇ ಬಂದೆಯಾ ಅಂತ ಹೇಳಿ ಭಕ್ತಿ ಯಿಂದ

ತಪ್ಪು ನೋಡದೇ ಬಂದೆಯಾ |ಎನ್ನಯ ತಂದೆ

ಅಪ್ಪ ತಿರುವೆಂಗಳೇಶ ನಿರ್ದೋಷನೆ|| ಅನ್ನು ವ ಪದವನ್ನು ರಚನೆಯನ್ನು ಮಾಡುತ್ತಾರೆ.

ಸಣ್ಣ ವಯಸ್ಸಿನಲ್ಲಿ ಯಾವುದೇ ಕಠಿಣ ತಪಸ್ಸು ಇಲ್ಲದೇ ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡಿಕೊಂಡ ಮಹಾನುಭಾವರು...

ಭಗವಂತನ ಅನುಗ್ರಹದಿಂದ ಅನೇಕ ಕೃತಿಗಳನ್ನು ರಚನೆಯನ್ನು ಮಾಡಿದ್ದಾರೆ.ತಿರುಗಿ ತಮ್ಮ ಊರಿಗೆ ಬರುವ ಸಮಯದಲ್ಲಿ ಅಲ್ಲಿನ ಅರ್ಚಕರಿಗೆ ಸ್ವಾಮಿ ಸ್ವಪ್ನದಲ್ಲಿ ಬಂದು ಹೇಳುತ್ತಾನೆ.

"ನನ್ನ ಗರ್ಭಗುಡಿಯಲ್ಲಿ ಒಂದು ಗಂಟಿದೆ.ಅದರಲ್ಲಿ ನನ್ನ ಪ್ರತಿಮೆ, ಜೊತೆಯಲ್ಲಿ ಶ್ರೀದೇವಿ, ಭೂದೇವಿ ಸಹಿತವಾಗಿ ಇದ್ದೇನೆ.ಮತ್ತು ಒಂದು  ತಾಳ, ಗೋಪಾಳ ಬುಟ್ಟಿ  ಹಾಗು ತಂಬೂರಿ ಯನ್ನು ಅವನಿಗೆ ಕೊಡತಕ್ಕದ್ದು.ನನ್ನ ದಾಸ ಅವನು. ಪ್ರಸನ್ನ ವೆಂಕಟ ಎನ್ನುವ ಅಂಕಿತವನ್ನು ಕೊಟ್ಟಿದ್ದೇನೆ.ವಿಶೇಷವಾಗಿ ಮರ್ಯಾದೆಯಿಂದ ಅವನನ್ನು ಸತ್ಕಾರ ಮಾಡಿ ಕಳುಹಿಸಿ" ಅಂತ ಅಜ್ಞಾಪಿಸಲು ಅದೇ ರೀತಿ ಯಲ್ಲಿ ಮಾಡುತ್ತಾರೆ.

ನಂತರ ಬಾಗಲಕೋಟೆ ಬಂದಾಗ ಅವರ ವೈನಿಗೆ ನಮಸ್ಕಾರ🙏 ಮಾಡುತ್ತಾರೆ. ನೀವೆ ನನ್ನ ಗುರು.ಅಂದು ನೀವು ಮಜ್ಜಿಗೆ ಕೊಟ್ಟಿದ್ದರೆ ನಾ ಕುಡಿದು ಇಲ್ಲಿ ಇರುತ್ತಿದ್ದೆ. ನಂಗ ಭಗವಂತನ ಅನುಗ್ರಹ ಆಗುತ್ತಾ ಇರಲಿಲ್ಲ. ಮಜ್ಜಿಗೆ ಕೊಡದೇ ಇದ್ದರಿಂದ ಅವನ ಅನುಗ್ರಹ ವಾಯಿತು ಎಂದು ಹೇಳುತ್ತಾರೆ.

 ಅನೇಕ ಕೃತಿಗಳನ್ನು ರಚನೆಯನ್ನು ಮಾಡಿ ಭಗವಂತನ ಅನುಗ್ರಹದಿಂದ ಅನೇಕ ಮಹಿಮೆಯನ್ನು ಅವರು ತೋರಿದ್ದಾರೆ.

ರುದ್ರಾಂಶರು ಅನ್ನುವದು ಅನೇಕ ಜ್ಞಾನಿಗಳ ವಾಣಿ.

ಇವರನ್ನು ನರರೆಂದು ಕರೆದವರು ನರಕಕ್ಕೆ ಬಲು ಹತ್ತಿರ ದವರು ಆಗುತ್ತಾರೆ..

ಅಂದು ಭಾದ್ರಪದ ಶುದ್ಧ ಏಕಾದಶಿ ದಾಸರು ಶ್ರೀ ಹರಿಯ ಧ್ಯಾನ ದಲ್ಲಿ ಮೈಮರೆತು ಕುಳಿತಾಗ.. ಬಾಲಕೃಷ್ಣನ ರೂಪದಲ್ಲಿ ಭಗವಂತ ಬಂದಿದ್ದಾನೆ.ಅವನ ಕಾಲ್ಗೆಜ್ಜೆಯ ನಾದ,ಕೊಳಲ ಧನಿ ಅವನ ಸುಂದರ ರೂಪವನ್ನು ಕಂಡು ದಾಸರು👇

ದಾರೋ ನೀ ಚಿನ್ನ ದಾರೋ

ಕಾರು ರಾತ್ರಿ ಯೊಳೆಮ್ಮಗಾರಕ್ಕೆ ಬಂದವ ದಾರೋ||

ಅಂತ ಈ ಪದ್ಯವನ್ನು ರಚಿಸಿ ತಮ್ಮ ಪ್ರಾಣವನ್ನು ಅವನ ಪಾದಗಳಲ್ಲಿ ಸಮರ್ಪಣೆ ಮಾಡಿದ್ದಾರೆ.

ನವ ವಿಧ ಭಕ್ತಿ ಯಲ್ಲಿ ಆತ್ಮ ನಿವೇದನೆ ಸಹ ಬರುತ್ತದೆ..

*ಈ ಪ್ರಕಾರ ದಾಸರು ದೇಹತ್ಯಾಗ ಮಾಡಿದ ದಿನದಂದು ಅಂದಿನಿಂದ ಇಂದಿನವರೆಗು ದಾಸರ ಮನೆತನ ದವರು ಬಂಧುಗಳು,,ದಾಸರ ಭಕ್ತರು ದಶಮಿ ದಿವಸ ಪೂರ್ವ ಆರಾಧನೆ, ದ್ವಾದಶಿ ಮಧ್ಯ ಹಾಗು ಉತ್ತರ ಆರಾಧನಾ ಮಾಡುತ್ತಾರೆ. ಇಂದಿಗೂ ಬಾಗಲಕೋಟೆ ಯ ಅವರ ಮನೆಯಲ್ಲಿ.

ಇಂದಿಗೂ ಅವರ ಮನೆಯಲ್ಲಿ ದಾಸರ ತಂಬೂರಿ, ತಾಳ ಗೋಪಳ ಬುಟ್ಟಿ ಹಾಗು ಅವರು ಪೂಜೆ ಮಾಡಿದ ಪ್ರತಿಮೆಗಳನ್ನು ಸಹ ನೋಡಬಹುದು...

ಇವರ ಚರಿತ್ರೆ ಇಂದ ನಮಗೆ ತಿಳಿದು ಬರುವದು 

 ಇಷ್ಟೇ..

ಜೀವನದಲ್ಲಿ ಕಷ್ಟ ಗಳು ಬರುವದು ಸ್ವಾಭಾವಿಕ. ಎಂತಹ ಕಠಿಣ ಪರಿಸ್ಥಿತಿ ಬಂದರು ಸಹ ಭಗವಂತ ಹೊರತಾಗಿ ಇನ್ನಿತರರು ಇಲ್ಲ ನೀನೆ ಗತಿ ಕೃಷ್ಣ ಅಂತ ಅವನಲ್ಲಿ ಶರಣಾಗತನಾದರೇ,ಅವಾಗ ಅವನು ನಮ್ಮ ರಕ್ಷಣೆ ಭಾರ ಹೊರುವನು...

ಎಲ್ಲಾ ಹರಿದಾಸರು ಭಗವಂತನಿಗೆ ಶರಣುಹೋದವರು.ಹಾಗಾಗಿ ತನ್ನ ಭಕ್ತರಿಗೆ ತಾನೇ ಒಲಿದು ಬಂದ ಸ್ವಾಮಿ.

ಇಂತಹ ಪುಣ್ಯ ದಿನದಲ್ಲಿ ಶ್ರೀ ಪ್ರಸನ್ನ ವೆಂಕಟ ದಾಸರ ಸ್ಮರಣೆ ಮಾಡುತ್ತಾ ಅವರ ಅಂತರ್ಯಾಮಿ ಯಾದ ನಮ್ಮ ಎಲ್ಲರ ದೈವ ಆ ಶ್ರೀನಿವಾಸ ನಿಗೆ ಅವನ ಪ್ರೇರಣೆಯಿಂದ ಎರಡು ನುಡಿಗಳನ್ನು ಬರೆದು ನನ್ನ ಅಳಿಲು ಸೇವೆ ಯನ್ನು ಸಮರ್ಪಣೆ ಮಾಡುತ್ತೇನೆ.

🙏ಶ್ರೀ ಕೃಷ್ಣಾರ್ಪಣ ಮಸ್ತು🙏

ನಿನ್ನವ ನಿನ್ನವ ಶ್ರೀನಿವಾಸ|

ನಾ ಅನ್ಯವ ಅರಿಯೆನೋ ಶ್ರೀನಿವಾಸ|

ಅಯ್ಯಾ ಮನ್ನಿಸೊ ತಾಯ್ತಂದೆ ಶ್ರೀನಿವಾಸ|

ಪ್ರಸನ್ನ ವೆಂಕಟಾದ್ರಿ ಶ್ರೀನಿವಾಸ||

🙏ಅ.ವಿಜಯವಿಠ್ಠಲ🙏

******************


ಶ್ರೀ ಹರಿದರ್ಶನದ ಹಂಬಲ

ಶ್ರೀ ಪ್ರಸನ್ನ ವೇಂಕಟದಾಸರ ಕೃತಿ

 ಲಘುಟಿಪ್ಪಣಿ

 ಎಂದು ಕಾಂಬೆನು ಎನ್ನ ಸಲಹುವ
ತಂದೆ ಉಡುಪಿಯ ಜಾಣನ
 ಮಂದಹಾಸಪ್ರವೀಣನ
 ಇಂದಿರಾಭೂರಮಣನ ॥  ಪ ॥

 ಜಾಣನ = ಸರ್ವಜ್ಞನಾದ (ಉಡುಪಿ) ಶ್ರೀಕೃಷ್ಣನನ್ನು; ಮಂದಹಾಸಪ್ರವೀಣನ = (ಮಂದಹಾಸ)ಮುಗುಳ್ನಗೆಯಿಂದ ವಿವಿಧಭಾವಗಳನ್ನು ವಿವಿಧ ಜೀವರಿಗೆ ಸೂಚಿಸುವ ನಿಪುಣತೆಯುಳ್ಳವನನ್ನು; (ಶ್ರೀಕೃಷ್ಣನ ಮಂದಹಾಸವು ಸಂದರ್ಭವಿಶೇಷಬಲದಿಂದ ಭೀಮ - ಜರಾಸಂಧಾದಿ ವಿರುದ್ಧಸ್ವಭಾವದವರಿಗೆ ವಿವಿಧಭಾವದ್ಯೋತಕಗಳಾಗಿದ್ದು ವಿರುದ್ಧಫಲಗಳನ್ನೇ ದೊರಕಿಸಿದ, ಶ್ರೀಕೃಷ್ಣನ ಈ ಪ್ರಾವೀಣ್ಯದ ನಿದರ್ಶನಗಳು ಶ್ರೀಮನ್ಮಹಾಭಾರತದಲ್ಲಿ ಹೇರಳವಾಗಿ ದೊರೆಯುತ್ತವೆ); ಇಂದಿರಾಭೂರಮಣನ = ಶ್ರೀ (ಇಂದಿರಾ) ಭೂದೇವಿಯರ ರಮಣನಾದ ಶ್ರೀಕೃಷ್ಣನನ್ನು .

 ಕಡಲದಡದೊಳು ಎಸೆವ ರಂಗನ
ಕಡೆಗೋಲ್ನೇಣನು ಪಿಡಿದನ
 ಮೃಡ-ಪುರಂದರರೊಡೆಯನ ಈ -
ರಡಿಗಳಲಿ ಶಿರವಿಡುವೆ ನಾ ॥ 1 ॥

 ಕಡಲದಡದೊಳು = ಸಮುದ್ರದ ತೀರದಲ್ಲಿ (ಹತ್ತಿರ ಪ್ರದೇಶದಲ್ಲಿ); ಎಸೆವ = ವಿರಾಜಿಸುವ; ರಂಗನ = ಶ್ರೀಕೃಷ್ಣನನ್ನು; ಕಡೆಗೋಲ್ನೇಣನು = ಕಡೆಗೋಲು ಮತ್ತು ಹಗ್ಗವನ್ನು , ಪಿಡಿದನ =  (ಕೈಯಲ್ಲಿ)ಹಿಡಿದಿರುವ; ಮೃಡ - ಪುರಂದರರೊಡೆಯನ = ರುದ್ರೇಂದ್ರ ದೇವತೆಗಳ ಸ್ವಾಮಿಯಾದವನನ್ನು ; ಈರಡಿಗಳಲಿ = ಪಾದದ್ವಂದ್ವದಲ್ಲಿ ( ಎರಡು ಪಾದಗಳಲ್ಲಿ ) ;  ಶಿರವಿಡುವೆ = ತಲೆಯಿಟ್ಟು ನಮಸ್ಕರಿಸುತ್ತೇನೆ.

 ದೇವಕಿಯ ಜಠರದಲಿ ಬಂದನ
ಆವ ಪಳ್ಳಿಲಿ ನಿಂದನ।
 ಮಾವಕಂಸನ ಕೊಂದನ
ಕಾವನಯ್ಯ ಮುಕುಂದನ ॥ 2 ॥

 ದೇವಕಿಯ ಜಠರದಲಿ ಬಂದನ = ದೇವಕಿಯನ್ನು ನಿಮಿತ್ತಮಾಡಿಕೊಂಡು, ಸ್ವೇಚ್ಛೆಯಿಂದ ಪ್ರಕಟನಾದ ( ಆದರೂ, ದೇವಕಿಯಲ್ಲಿ ಲೋಕಸಿದ್ಧಗರ್ಭಿಣಿಯರ ಚಿನ್ಹೆಗಳನ್ನುಂಟುಮಾಡಿ, ಅಜ್ಞಾನಿಗಳಿಗೆ ಸಾಮಾನ್ಯರಂತೆ ಹುಟ್ಟಿದವನೆಂಬ ಮೋಹವನ್ನುಂಟುಮಾಡಿದ ) ಶ್ರೀಕೃಷ್ಣ; ಆವ ಪಳ್ಳಿಲಿ ನಿಂದನ = ( ದೇವಕಿಯಲ್ಲಿ ಜನಿಸಿ ) ಗೋಕುಲದಲ್ಲಿ -  ಗೊಲ್ಲರ ಹಟ್ಟಿಯಲ್ಲಿ ಸೇರಿ , ಅಲ್ಲಿ ಬಾಲ್ಯಾವಸ್ಥೆಯನ್ನು ಕಳೆದನು; ಕಾವನಯ್ಯ = ರಕ್ಷಿಸುವ ತಂದೆ.

 ಪೂರ್ಣಪ್ರಜ್ಞರಿಗೊಲಿದು ದ್ವಾರಕಾ -
ಮಣ್ಣಿನೊಳು ಪ್ರಕಟಿಸಿದನ ಭ -
 ವಾರ್ಣವಕೆ ಪ್ಲವನಾದನ ಪ್ರ -
ಸನ್ನವೇಂಕಟಕೃಷ್ಣನ ॥ 3 ॥

 ಪೂರ್ಣಪ್ರಜ್ಞರಿಗೆ = ಶ್ರೀಮದಾಚಾರ್ಯರಿಗೆ ; ದ್ವಾರಕಾಮಣ್ಣಿನೊಳು = ಗೋಪೀಚಂದನದ ಗಡ್ಡೆಯಲ್ಲಿ (ಬಿರುಗಾಳಿಗೆ ಸಿಕ್ಕಿದ ಅಪಾಯದಿಂದ ವರ್ತಕನ ಹಡಗನ್ನು ಶಾಟಿಯ ವಾಯುವಿನಿಂದ ರಕ್ಷಿಸಿ , ಬದುಕಿ ಬಂದ ವರ್ತಕನು ಸರ್ವಸಮರ್ಪಣೆ ಮಾಡಿದರೂ, ಕೇವಲ ಗೋಪೀಚಂದನಗಡ್ಡೆಗಳನ್ನು ಮಾತ್ರ ಸ್ವೀಕರಿಸಿದ, ಶ್ರೀಮಧ್ವಚಾರ್ಯರ ಲೀಲೆಯು ಜನಜನಿತವಾಗಿದೆ; ಒಂದು ಗಡ್ಡೆಯಲ್ಲಿದ್ದ ಶ್ರೀಕೃಷ್ಣನನ್ನೇ ಉಡುಪಿಯಲ್ಲಿ ಪ್ರತಿಷ್ಠಿಸಿದರು) ; ಭವಾರ್ಣವಕೆ = ಸಂಸಾರಸಾಗರವನ್ನು ದಾಟಲಿಕ್ಕೆ; ಪ್ಲವನಾದ = ನಾವೆಯಂತಿರುವ ( ಶ್ರೀಕೃಷ್ಣನನ್ನು ).

 ಸಂಪಾದಕರು :
ಹರಿದಾಸರತ್ನಂ ಶ್ರೀ ಗೋಪಾಲದಾಸರು
*****

ಸಿರಿ ವಿರಿಂಚಿ ಭವೇಂದ್ರಾದಿ| ಸುರರಿಂದರ್ಚಿತನಾದ ಸಿರಿ

ಪ್ರಸನ್ವೇಂಕಟನ್ನ|

ನಿರುತ ಸ್ಮರಿಪ ಕಾಖಂಡಕಿ  ವೆಂಕಪ್ಪನವರ ಚರಣವನೆ ನೆನೆವನೆ ಧನ್ಯ ಮಾನ್ಯ|

🙏🙏🙏🙏

 ಒಮ್ಮೆ ವಸಂತಕಾಲದಲ್ಲಿ ಒಬ್ಬ ಗೃಹಸ್ಥರು ಶ್ರೀ ಪ್ರಸನ್ನ ವೆಂಕಟದಾಸರ ಶಿಷ್ಯರು ಮತ್ತು ದಾಸರಿಗೆ ಆಪ್ತರು.

ಆ ದಿನ ಅವರ ಮನೆಯಲ್ಲಿ ವಸಂತ ಪೂಜೆಗಾಗಿ ದಾಸರಿಗೆ ಆಮಂತ್ರಣ ವನ್ನು ಕೊಡುತ್ತಾರೆ. ಶ್ರೀ ಪ್ರಸನ್ನ ವೆಂಕಟದಾಸರು ಇವರ ಆಮಂತ್ರಣ ಸ್ವೀಕಾರ ಮಾಡಿ ಅವರ ಮನೆಗೆ ಹೋಗುತ್ತಾರೆ.

ವಸಂತ ಪೂಜೆ ಮುಗಿದಿದೆ.

ದೇವರ ನೈವೇದ್ಯ ಕ್ಕೆ ಪಾನಕ ಮತ್ತು ಮೊಸರು ಅವಲಕ್ಕಿ (ಅವಲಕ್ಕಿ ಗೆ ಮೊಸರು ಕಲಿಸಿದ್ದು)ತಂದು ದಾಸರ ಮುಂದೆ ಇಟ್ಟಿದ್ದಾರೆ.

"ದಾಸರೇ🙏🙏 ನೈವೇದ್ಯ ನೀವೇ ಮಾಡಬೇಕು ಎಂದು ಮನೆಯ ಯಜಮಾನ ಪ್ರಾರ್ಥನೆ ಮಾಡಿದ್ದಾನೆ.

ದಾಸರು ಅವರ ಮಾತಿಗೆ ಮನ್ನಿಸಿ ನೈವೇದ್ಯ ಮಾಡಲು ಕುಳಿತರು.

ಅದರೆ ನೈವೇದ್ಯ ಮಾಡದೇ ಸ್ವಲ್ಪ ಹೊತ್ತು ಕುಳಿತು ಕೆಲ ಕಾಲ ಯೋಚನಾ ಮಗ್ನರಾಗಿ ಮನೆಯ ಯಜಮಾನ ನನ್ನು ಕರೆದು "ಮೊಸರು ಅವಲಕ್ಕಿ ಗೆ ಉಪ್ಪು ಹಾಕಿಲ್ಲ ವೆಂದು ಹೇಳುತ್ತಾರೆ. ಎಲ್ಲಾ ಜನರಿಗು ಆಶ್ಚರ್ಯಕರವಾಗಿ ತೋರುತ್ತದೆ.

ಆದರು ದಾಸರನ್ನು ಪರೀಕ್ಷೆ ಮಾಡಬೇಕೆಂದು ಸ್ವಲ್ಪ ಅವಲಕ್ಕಿ ಭಾಗವನ್ನು ತೆಗೆದು ಉಳಿದ ಭಾಗಕ್ಕೆ ಉಪ್ಪು ಸೇರಿಸಿ ನೈವೇದ್ಯ ಮಾಡಲು ಕೊಡುತ್ತಾರೆ. ಇತ್ತ ನೈವೇದ್ಯ ವಾಯಿತು.ಎಲ್ಲಾ ಜನರು ಶ್ರೀ ಹರಿಯ ಪ್ರಸಾದ ಅದು ದಾಸರು ನೈವೇದ್ಯ ಮಾಡಿದ್ದು ಸ್ವೀಕಾರ ಮಾಡಿ ಧನ್ಯರಾದರು.

ಕೆಲವು ಜನ ದಾಸರ ಪರೀಕ್ಷೆ ಮಾಡಲು ತೆಗೆದಿಟ್ಟ ಅವಲಕ್ಕಿ ಯನ್ನು ತಿಂದು ನೋಡಲಾಗಿ ನಿಜವಾಗಿಯು ಅದರಲ್ಲಿ ಉಪ್ಪು ಹಾಕಿಲ್ಲವೆಂದು ಕಂಡುಬಂತು.

ಅವರು ಯೋಚನೆ ಮಾಡಿದ್ದು.

"ದಾಸರೇನು ನಾವು ಅವಲಕ್ಕಿ ಕಲಿಸುವಾಗ ಎದುರಿಗೆ ಇದ್ದಿಲ್ಲ.ಮತ್ತು ನೋಡಿಲ್ಲ. ಇದು ಹೇಗೆ ಅವರಿಗೆ ತಿಳಿಯಿತು?? ಎಂದು ತಮ್ಮ ಒಳಗೆ ಚರ್ಚೆ ನಡೆಸಿ  

ಭಗವಂತನ ಅನುಗ್ರಹದಿಂದ ದಾಸರಲ್ಲಿದ್ದ ಈ ಅಗಾಧ ಶಕ್ತಿಯನ್ನು ನೋಡಿ ಅವರ ಮೇಲೆ  ಇರುವ ಭಗವಂತನ ಕಾರುಣ್ಯವನ್ನು ನೋಡಿ ದಾಸರನ್ನು ಕೊಂಡಾಡುತ್ತಾರೆ.

ಹೀಗೆ ದಾಸರ ಜೀವನದಲ್ಲಿ ಅನೇಕ ವಿಚಿತ್ರ ಘಟನೆಗಳು ನಡೆದಿದ್ದವೆಂದು ಅವರ ಚರಿತ್ರೆ ಯಲ್ಲಿ ತಿಳಿದು ಬರುತ್ತದೆ.

ಶ್ರೀ ಪ್ರಸನ್ನ ವೆಂಕಟದಾಸರು ರುದ್ರಾಂಶ ಸಂಭೂತರೆಂದು ಬಲ್ಲವರ ವಾಣಿ..

ಸಾಂಶರಾದ ದೇವತೆಗಳು ವ್ಯಾಪ್ತರು ಮತ್ತು ವ್ಯಾಪ್ತೋಪಾಸಕರು.

ಯಾವ ಲೋಕದಲ್ಲಿ, ಯಾವ ಜನ್ಮದಲ್ಲಿ ಇದ್ದರು ಭಗವಂತನ ಕೃಪೆಯಿಂದ ಅವರ ಮಹಿಮೆಯು ಸಹಿತ ವ್ಯಾಪ್ತವಾದುದು.

ದಾಸರ ಕೃತಿಯ ಒಂದು ಸಾಲು.

ನರರ ಪಾಡಲು ಬೇಡ ನಾಯಿ ಮನವೇ|

ಮುರಹರನ ಭಕುತಿಲಿ ನೆಲೆಹೊಂದು ಮನವೇ|

🙏ಶ್ರೀ ಕೃಷ್ಣಾರ್ಪಣಮಸ್ತು🙏

ಹಲವು ಮಾತ್ಯಾಕ ಇವರು

ಸುರರೇ ಸರಿ| ನರರಲ್ಲ

ಇದುಸಿದ್ದವು ಸಿದ್ದ|

ಛಲದಿ ಮನುಜನೆಂಬುವ ಅಧಮ| ಹರಿಯಾಜ್ಞದಿ

ಬಲು ಬಲು ನರಕದೊಳು ಬೀಳುವ ದುರಾತ್ಮ||

🙏ಶ್ರೀ ಕಪಿಲಾಯ ನಮಃ🙏

**********

" ಶ್ರೀ ಪ್ರಸನ್ವೆಂಕಟದಾಸರು "

ದಿನಾಂಕ : 03.09.17 ಭಾನುವಾರ " ಶ್ರೀ ರುದ್ರಾ೦ಶ ಶ್ರೀ ಪ್ರಸನ್ವೇಂಕಟ ದಾಸರ ಆರಾಧನಾ ಮಹೋತ್ಸವ; ಬಾದಾಮಿ .

ಗೌತಮಸ್ಯ ಋಷೇ ಶ್ಯಾಪಾತ್ ಜ್ಞಾನೇತ್ವಜ್ಞಾನತಾಂಗತೇ

ಸಂಕೀರ್ಣ ಬುದ್ಧಯೋ ದೇವಾದ್ರ ಬ್ರಹ್ಮರು ಪುರಸ್ಸರ: ।

ಶರಣ್ಯಂ ಶರಣಂ ಜಗ್ನು: ನಾರಾಯಣಮನಾಮಯಂ

ತೈರ್ವಿಜ್ಞಾಪಿತಾ ಕಾರ್ಯಸ್ತು ಭಾಗವಾನ್ಪರುಷೋತ್ತಮಃ

ಅವತೀರ್ಣೋ ಮಹಾಯೋಗೀ ಸತ್ಯವತ್ಯಾಂ ಪರಾಶರಾತ್ ।।

ಎಂಬ ಸ್ಕಾ೦ದ ಪುರಾಣದ ವಚನದಂತೆ, ಶ್ರೀ ಭಗವಾನ್ ವೇದವ್ಯಾಸರು ವಿಭಾಗಿಸಿ ಕೊಟ್ಟ ವೇದಗಳೂ ಮತ್ತು ಉಪನಿಷತ್ತುಗಳೂ ವೈದಿಕ ವಾನ್ಗ್ಮಯಗಳು. ಇದನ್ನು ಎಲ್ಲರೂ ತಿಳಿದುಕೊಳ್ಳಲು ಅವಶ್ಯವಾದಾಗ ಶ್ರೀ ವೇದವ್ಯಾಸರು ರಾಮಾಯಣ - ಮಹಾಭಾರತಗಳೆಂಬ ಇತಿಹಾಸ ಗ್ರಂಥಗಳು ಹಾಗೂ ಅಷ್ಟಾದಶ ಪುರಾಣಗಳನ್ನು ರಚಿಸಿದರು.

ಈಗಿನ ಜನರು ಇದನ್ನು ತಿಳಿದುಕೊಳ್ಳಲು ಅಸಮರ್ಥವಾದಾಗ ಶ್ರೀ ವಾಯುದೇವರ ಅವತಾರರಾದ ಶ್ರೀಮನ್ಮಧ್ವಾಚಾರ್ಯರ ಸತ್ಪರಂಪರೆಯಲ್ಲಿ ಬಂದ ಶ್ರೀ ನರಹರಿತೀರ್ಥರು ( ಚಂದ್ರಾ೦ಶ ); ಶ್ರೀ ಶ್ರೀಪಾದರಾಜರು ( ಧೃವಾಂಶ ); ಶ್ರೀ ವ್ಯಾಸರಾಜರು ( ಪ್ರಹ್ಲಾದಾಂಶ ); ಶ್ರೀ ವಾದಿರಾಜರು (ಲಾತವ್ಯರು ); ಶ್ರೀ ವಿಜಯೀ೦ದ್ರರು ( ಋಜುಗಳು ); ಶ್ರೀ ಕನಕದಾಸರು ( ಯಮ ); ಶ್ರೀ ಪುರಂದರದಾಸರು ( ನಾರದ ); ಶ್ರೀ ವಿಜಯದಾಸರು ( ಭೃಗು ); ಶ್ರೀ ಪ್ರಸನ್ನ ವೆಂಕಟದಾಸರು ( ರುದ್ರ ); ಶ್ರೀ ಗೋಪಾಲದಾಸರು ( ವಿಘ್ನೇಶ್ವರ ); ಶ್ರೀ ಜಗನ್ನಾಥದಾಸರು ( ಸಹ್ಲಾದ ); ಶ್ರೀ ಪ್ರಾಣೇಶದಾಸರು ( ಮರುದಂಶ ); ಶ್ರೀ ಶ್ರೀದವಿಠಲರು ( ಆಹ್ಲಾದ ) ಮೊದಲಾದ ದಾಸ ಶ್ರೇಷ್ಠರುಗಳು ಕ್ಲಿಷ್ಟಕರವಾದ ಶಾಸ್ತ್ರಗಳ ಸಾರವನ್ನು ದಾಸ ಸಾಹಿತ್ಯದ ಮೂಲಕ ತಿಳಿಗನ್ನಡದಲ್ಲಿ ಉಣಬಡಿಸಿದರು.

ಸೇವಿಸಲಶಕ್ಯವಾದ ರೋಗಿಗೆ ಆಹಾರದ ಸಾರಭೂತವಾದ ರಸವನ್ನು ಕುಡಿಸಿ ಅವನ ದೈಹಿಕ ಬೆಳವಣಿಗೆಗೆ ಅಣಿ ಮಾಡಿಕೊಡುವಂತೆ ಶಾಸ್ತ್ರಗಳ ಸಾರವನ್ನು ನಮಗೆ ತಿಳಿಯಬಡಿಸಿದವರು ಹರಿದಾಸರುಗಳು!!

ಈ ಹರಿದಾಸ ಪಂಕ್ತಿಯಲ್ಲಿ ಬಂದ ಶ್ರೀ ಭೃಗು ಮಹರ್ಷಿಗಳ ಅವತಾರರಾದ ಶ್ರೀ ವಿಜಯರಾಯರ ಸಮಕಾಲೀನರೂ; ಬಾಗಲಕೋಟೆಯಲ್ಲಿ ಕ್ರಿ ಶ 16 -17ನೇ ಶತಮಾನದಲ್ಲಿ ಅವತರಿಸಿ ಹರಿದಾಸ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಸೇವೆ ಸಲ್ಲಿಸಿದ ಪ್ರಾತಃ ಸ್ಮರಣೀಯ ಶ್ರೀ ರುದ್ರದೇವರ ಅವತಾರಿಗಳಾದ ಪ್ರಸನ್ನ ವೆಂಕಟದಾಸರ ಕುರಿತ ವಿಶೇಷ ಮಾಹಿತಿಯನ್ನು ತಿಳಿಸುವ ಚಿಕ್ಕ ಪ್ರಯತ್ನ ಇಲ್ಲಿದೆ.

" ಶ್ರೀ ಪ್ರಸನ್ನ ವೆಂಕಟದಾಸರ ಸಂಕ್ಷಿಪ್ತ ಮಾಹಿತಿ "

ಹೆಸರು : ಶ್ರೀ ವೆಂಕಪ್ಪಯ್ಯ

ತಂದೆ : ಶ್ರೀ ನರಸಯ್ಯ

ತಾಯಿ : ಸಾಧ್ವೀ ಲಕ್ಷ್ಮೀಬಾಯಿ

ಕಾಲ : ಕ್ರಿ ಶ 1680 - 1752

ಸುಮಾರು 17ನೇ ಶತಮಾನದ ಅಂತ್ಯ ಮತ್ತು 18ನೇ ಶತಮಾನದ ಮಧ್ಯ ಭಾಗದಲ್ಲಿ ಬಾಗಲಕೋಟೆಯಲ್ಲಿ ನೆಲೆಸಿ, ವೈದಿಕ ವೃತ್ತಿಯಿಂದ ಜೀವನ ನಡೆಸುತ್ತಿದ್ದ ಕಾಶ್ಯಪ ಗೋತ್ರಜರಾಗಿದ್ದ ಶ್ರೀ ಕಾಖಂಡಕೀ ನರಸಯ್ಯನವರು. ತಾಯಿ ಸಾಧ್ವೀ ಲಕ್ಷ್ಮೀಬಾಯಿ. ಈ ಸಾತ್ವಿಕ ದಂಪತಿಗೆ ಇಬ್ಬರು ಪುತ್ರರು. ಅವರಲ್ಲಿ ಕಿರಿಯರೇ ನಮ್ಮ ಕಥಾನಾಯಕರಾದ ಶ್ರೀ ವೆಂಕಪ್ಪಯ್ಯನವರು. ಇವರೇ ಮುಂದೆ ಶ್ರೀ ಪ್ರಸನ್ನ ವೆಂಕಟದಾಸರಾಗಿ ಪ್ರಸಿದ್ಧಿ ಪಡೆದರು.

ಶ್ರೀ ವೆಂಕಪ್ಪಯ್ಯನವರು ಬಾಲಕೋಟೆಯಲ್ಲಿ ಕ್ರಿ ಶ 1680ರಲ್ಲಿ ಅವತಾರ ಮಾಡಿದರು. ಇವರ ಮನೆತನದ ಮೂಲ ಸ್ಥಳ ಕಾಖಂಡಕೀ ಆದುದರಿಂದ " ಶ್ರೀ ಕಾಖಂಡಕೀ ವೆಂಕಪ್ಪಯ್ಯ " ಎಂದು ಜನರು ಇವರನ್ನು ಕರೆಯುತ್ತಿದ್ದರು.

ಶ್ರೀ ರಮಾಪತಿ ವಿಠಲರು...

ರಾಗ : ರೇಗುಪ್ತಿ ತಾಳ : ಝ೦ಪೆ

ಸಿರಿ ವಿರಿಂಚಿ ಭವೇಂದ್ರಾದಿ ಸುರರಿಂದರ್ಚಿತನಾದ ।

ಸಿರಿ ಪ್ರಸನ್ವೇ೦ಕಟನ್ನ ನಿರುತ ।

ಸ್ಮರಿಪ ಕಾಖಂಡಕೀ ವೆಂಕಪ್ಪನವರ ।

ಚರಣವನೆ ನೆನೆವನೆ ಧನ್ಯಾ - ಮಾನ್ಯ ।। ಪಲ್ಲವಿ ।।

ಮರುತಮತಾಬ್ಧಿ ಮರಕತ ।

ಭೂಸುರ ಜನ್ಮ ಧರನಾಗಿ ಭುವಿಯೊಳುದಿಸಲು ।

ತರಳತ್ವ ಕಳೆದು ತರುಣ ತನ ಬರಲಿನ್ನು ।

ಅರಿವೆ ಕಾಣದೆ ಇರುತಿರಲು ।।

ಹರಿ ನಾಮಾವಳಿಗಳ ಬರೆದು ಓದುವ ಭಾಗ್ಯ ।

ಅರಿವೆನೆಂದರೆ ಬಾರದಿರಲು ।

ತೊರೆದು ಮನೆಯವರ ಗಿರಿಯಾತ್ರೆ । ಮಾ ।

ಳ್ಪನನುಸರಿಸಿ ತೆರಳು ತಿರಲು ।। ಚರಣ ।।

" ಉಪದೇಶ / ಅಂಕಿತ / ವಿದ್ಯಾ ಗುರು - ಸಾಕ್ಷಾತ್ ಜಗನ್ನಾಥನಾದ ತಿರುಮಲೆಯ ಚೆಲುವ ಶ್ರೀ ಶ್ರೀನಿವಾಸ "

ಹೆತ್ತವರನ್ನು ಚಿಕ್ಕಂದಿನಲ್ಲೇ ಕಳೆದುಕೊಂಡ ಶ್ರೀ ವೆಂಕಪ್ಪಯ್ಯ ಅಣ್ಣನ ಆಶ್ರಯದಲ್ಲಿಯೇ ಬೆಳೆಯುವಂತಾಯಿತು. ಅಣ್ಣನಿಗೆ ವಿವಾಹವಾಗಿತ್ತು. ಅಣ್ಣ ಪುರಾಣ ವಾಚನ ಮಾಡುತ್ತಾ ಹಳ್ಳಿಗಳಲ್ಲಿ ಜನಪ್ರಿಯವಾಗಿದ್ದ. ಅತ್ತಿಗೆಗೆ ಈ ಮೈದುನನ ಮೇಲೆ ಅಷ್ಟೇನೂ ಪ್ರೀತ್ಯಾದರಗಳು ಇರಲಿಲ್ಲ.

ಹೆತ್ತವರಿಲ್ಲದೆ ತಮ್ಮ ಆಶ್ರಯದಲ್ಲಿದ್ದ ಶ್ರೀ ವೆಂಕಪ್ಪಯ್ಯರನ್ನು ಅತ್ತಿಗೆ ಜೀತದಾಳಿನಂತೆ ನೋಡುತ್ತಿದ್ದಳು. ಈ ಸ್ಥಿತಿಯಲ್ಲಿ ಅವರಿಗೆ ವಿದ್ಯಾಭ್ಯಾಸಕ್ಕೂ ಅವಕಾಶ ಇರಲಿಲ್ಲ. ಮನೆಗೆಲಸಗಳನ್ನು ಮಾಡುವುದರಲ್ಲಿ - ದನ ಕಾರುಗಳನ್ನು ನೋಡಿಕೊಳ್ಳುವುದರಲ್ಲಿ ಕಾಲ ಉರುಳುತ್ತಿತ್ತು!!

ಆದರೆ, ಸದ್ವಂಶಜರೂ, ಸಾತ್ವಿಕರೂ ಆಗಿದ್ದ ಶ್ರೀ ವೆಂಕಪ್ಪಯ್ಯನವರು ಅವಕಾಶ ಸಿಕ್ಕಾಗಲೆಲ್ಲಾ ಅಣ್ಣ ಓದುತ್ತಿದ್ದ ಪುರಾಣಗಳನ್ನು ಶ್ರದ್ಧೆಯಿಂದ ಕೇಳುತ್ತಿದ್ದರು. ಶ್ರೀ ತಿರಿಮಲೆಯ ಶ್ರೀನಿವಾಸನ ಮಹಾತ್ಮ್ಯೇಯನ್ನು ಮೇಲಿಂದ ಮೇಲೆ ಕೇಳುತ್ತಿದ್ದ ಅವರಿಗೆ ಮನೆ ದೇವರಾದ ಶ್ರೀ ಶ್ರೀನಿವಾಸನಲ್ಲಿ ಭಕ್ತಿ ಅಂಕುರಿಸಿ ಬೆಳೆಯಲಾರಂಭಿಸಿತು.

ಅತ್ತಿಗೆಯ ಅನಾಧರಣ ಹೆಚ್ಚಿದಾಗ ಅವರಿಗೆ ಅದೇ ಊರುಗೋಲಾಗಿ ಮುನ್ನೆಡಿಸಿತು. ವಿಪರೀತ ಪರಿಶ್ರಮ, ತಂಗಳ ಆಹಾರ ಅವರ ನಿತ್ಯ ವಿಧಿಯಾಗಿ ಬಿಡುತ್ತದೆ. ಬವಣೆಯ ಬದುಕಿನಲ್ಲೇ ಸಾಗಿದ್ದ ಶ್ರೀ ವೆಂಕಪ್ಪಯ್ಯನವರಿಗೆ ಬೇಸಿಗೆಯ ಒಂದುದಿನ ಬಾಯಾರಿ ಕುಡಿಯಲು ಮಜ್ಜಿಗೆಯನ್ನು ಕೇಳಿದಾಗ, ಅತ್ತಿಗೆ ಆಡಿದ ಕಠೋರ ನುಡಿಗಳು ಅಪಾರವಾದ ಆಘಾತವನ್ನೇ ಉಂಟು ಮಾಡಿದವು. ಅತ್ತಿಗೆಯ ಕಾಟಕ್ಕೆ ಬೇಸತ್ತು ತಿರುಮಲೆಗೆ ಹೊಡಿ ಹೋದರು. ಮತ್ತೆ ಅವರ ಆಶ್ರಯದಲ್ಲಿ ಮುಂದುವರೆಯುವುದು ಬೇಡವೆನ್ನಿಸಿ ನೇರವಾಗಿ ಜಗದೊಡೆಯ ಭಕ್ತರ ಕಲ್ಪವೃಕ್ಷವಾದ ಶ್ರೀ ಶ್ರೀನಿವಾಸನು ನೆಲೆನಿಂತ ತಿರುಮಲೆಗೆ ಬರುತ್ತಾರೆ!

ತಿರುಮಲೆಯಲ್ಲಿ ತಿಂಡಿ, ಊಟ ಬಿಟ್ಟು ಒದ್ದೆ ಬಟ್ಟೆಯಿಂದಲೇ ಶ್ರೀ ಶ್ರೀನಿವಾಸನನ್ನು ಧ್ಯಾನ ಮಾಡುತ್ತಾ ಧಾರಾಕಾರವಾಗಿ ಕಣೀರು ಸುರಿಸುತ್ತಾ ಶ್ರೀ ಶ್ರೀನಿವಾಸನ ದರ್ಶನ ಪಡೆಯುತ್ತಾರೆ. ಅದೇ ಸಮಯದಲ್ಲಿ ತಿರುಮಲೆಗೆ ಬಂದಿದ್ದ ಹರಿದಾಸರ ತಂಡ ಅವರನ್ನು ಆಕರ್ಷಿಸುತ್ತದೆ.

ಕಾಲಿಗೆ ಗೆಜ್ಜೆ ಕಟ್ಟಿ ಕೊಂಡು ಕೈಯ್ಯಲ್ಲಿ ತಂಬೂರಿ ಚಿಟಿಕೆಗಳನ್ನು ಹಿಡಿದು ಹರಿನಾಮ ಸಂಕೀರ್ತನೆಗಳನ್ನು ಹಾಡುತ್ತಾ ಕುಣಿಯುತ್ತಿದ್ದ ದಾಸರನ್ನು ಕಂಡು ಅವರ ಬದುಕೇ ಸಾರ್ಥಕ ಬದುಕು. ತಾವೂ ಅವರಂತೆಯೇ ಹರಿನಾಮ ಸಂಕೀರ್ತನೆಯಲ್ಲಿಯೇ ಬದುಕು ಸವಿಸಬೇಕು ಎನ್ನಸಿತು.

ಶ್ರೀ ಶ್ರೀನಿವಾಸನ ವಿವಿಧ ಮಹಿಮೆಗಳನ್ನು ಕೇಳಿ ಅವನ ಒಲಿಮೆಯಿಂದ ತಮ್ಮ ಪರಿಸ್ಥಿತಿ ಉತ್ತಮಗೊಳ್ಳುವ ಭರವಸೆಯನ್ನು ತಾಳುತ್ತಾರೆ. ಯಾರು ಏನೇ ಕೊಟ್ಟರೂ ತಗೆದುಕೊಳ್ಳದೇ, ಶ್ರೀ ಶ್ರೀನಿವಾಸನ ಮುಂದೆ ಮಾತ್ರ ಕೈಚಾಚಲು ನಿರ್ಧರಿಸುತ್ತಾರೆ.

ದೇಹ ದಂಡನೆಯಿಂದ ದೇಹ ಶುದ್ಧಿ; ಗುರುವಿನ ಹುಡುಕಾಟದಿಂದ ಮನಸ್ಸು ಶುದ್ಧಿಗೊಳ್ಳುತ್ತದೆ. ಯಾವುದೋ ದಾಸರ ರೂಪ ಕಣ್ಣ ಮುಂದೆ ನಿಂತಂತೆ ಭಾಸವಾಗುತ್ತದೆ. ಹುಟ್ಟು - ಬದುಕು - ಸಾವು - ಪುನರ್ಜನ್ಮಗಳ ಬಗ್ಗೆ ಮನಸ್ಸಿನಲ್ಲಿ ಚಿಂತನೆಗೆ ಈಡು ಮಾಡುತ್ತದೆ. ತಮ್ಮ ಸ್ವರೂಪದ ಉದ್ಧಾರಕ್ಕೆ ಕಾರಣರಾಗದಿರುವ ಗುರುವಿನ ಚಿತ್ರವಿದು ಎಂಬುದು ಅವರ ಗಮನಕ್ಕೆ ಬಾರದೇ ಹೋಗುತ್ತದೆ.

" ಸಾಕ್ಷಾತ್ ಶ್ರೀ ಶ್ರೀನಿವಾಸನಿಂದ ಅಂಕಿತ ಪ್ರದಾನ "

ಶ್ರೀ ರಮಾಪತಿ ವಿಠಲರು..

ಹಸನಾಗಿ ಕಪಿಲ ತೀರ್ಥದಲಿ ಮಜ್ಜನಗೈದು ।

ಶಶಿಧರನ ಅಡಿಗಳಿಗೆ ಎರಗಿ ।

ಎಸೆವ ಪರ್ವತಾರೋಹಣವ ಮಾಡಿ ।

ಸ್ವಾಮಿ ಪುಷ್ಕರಣಿ ತೀರ್ಥದಲಿ ಮುಳುಗಿ ।।

ಬಿಸಜದಳಾಕ್ಷ ವರಾಹಮೂರ್ತಿಯನೆ । ಕಂ ।

ಡಾಲಸವ ಮಾಡದಲೆ ಚೆನ್ನಾಗಿ ।

ಝಷಕೇತು ಜನಕನೆ ಪುಟ್ಟಿಸಿದ ಕಾರಣವೇನು ।

ಉಸಿರೆಂದು ಚರಣಕ್ಕೆ ಬಾಗಿ ।।

ವಂದಿಸಿದಾಕ್ಷಣ ಸ್ವಪ್ನದಿ ಪ್ರಸನ್ವೇ೦ಕಟ ।

ನೆಂದು ಬರೆಯ ನಾಲಿಗೆಯಲಿ ।

ನಂದದಿಂದೆಚ್ಚೆತ್ತು ಜ್ಞಾನ ಉದಿಸೆ । ಮು ।

ಕುಂದನ ಕಂಡು ಎದೆಯಲಿ ।।

ಚಂದ ಚಂದದಿ ಪೊಗಳುತ । ಕಂಗ ।

ಳಿಂದಾನಂದಬಾಷ್ಪ ಸುರಿಸುತಲಿ ।

ಇಂದು ಧನ್ಯನಾದೆನೆಂದು ತೋಷಾಭ್ಧಿಯ ।

ಹೊಂದಿ ಹರಿಯಾಜ್ಞೆಯಲಿ ತೆರಳಿ ।।

ಶ್ರೀ ಶ್ರೀನಿವಾಸನ ಎದುರಿಗೆ ನಿಂತು ಆತನನ್ನೇ ಕಣ್ಣು ಮುಚ್ಚಿ ಧ್ಯಾನಿಸಿದಷ್ಟು ದಾಸ ರೂಪವೇ ಕಾಣುತ್ತಿದೆ. ಕೊನೆಗೆ ಸ್ವಪ್ನದಲ್ಲಿ ಆ ರೂಪ " ವೆಂಕಪ್ಪಾ! ನಿನಗೆ ಪ್ರಸನ್ನನಾಗಿದ್ದೇನೆ. ನಿನ್ನ ಚಿಂತೆ ದೂರವಾಯಿತು " ಎಂಬ ಧ್ವನಿ ಕೇಳಿಸಿತು ಮತ್ತು ಆ ಶ್ರೀ ಶ್ರೀನಿವಾಸದೇವರೇ ಬಂದು ತನ್ನ ನಾಲಿಗೆಯ ಮೇಲೆ " ಪ್ರಸನ್ವೇ೦ಕಟ " ಎಂಬ ಬೀಜಾಕ್ಷರವನ್ನು ಬರೆದನು.

ಇದು ತಮ್ಮ ನೆಚ್ಚಿನ ದೈವದ ಅನುಗ್ರಹವೆಂದು ಭಾವಿಸಿದ ಶ್ರೀ ವೆಂಕಪ್ಪಯ್ಯನವರು ಅಂದಿನಿಂದ ಹರಿದಾಸರಾದರು. ಇದುವರೆಗೂ ಸುಪ್ತವಾಗಿದ್ದ ಅವರ ಭಕ್ತಿ, ಕವಿಚೇತನ ಒಟ್ಟಾಗಿ ಕೀರ್ತನೆಗಳ ಅಭಿವ್ಯಕ್ತವಾದವು. ಹೊರಬಂದು ವಿಮಾನ ವೆಂಕಟೇಶನ ಬಳಿ ನಿಂತಾಗ ಕೀರ್ತನೆಗಳು ತಾವಾಗಿಯೇ ಹೊರ ಬಂದವು!!

ರಾಗ : ಭೂಪಾಳಿ ತಾಳ : ತ್ರಿವಿಡಿ

ಸ್ಮರಿಸಿ ಸುಖಿಸಿರೋ ಶ್ರೀನಿವಾಸನ ।

ಸಿರಿ ಚರಣ ವಾರಿಜಗಳನುದಿನ ।

ದುರಿತ ಕೋಟಿಗಳನೋಡಿಸುವ ನಿಜ ।

ಶರಣ ವತ್ಸಲನ ಸ್ಮರಿಸಿ ಸುಖಿಸೀ ।। ಪಲ್ಲವಿ ।।

ಶಬ್ದ ಬ್ರಹ್ಮನ ಕಡ್ದನೊದ್ದನ ।

ಅಭ್ಡಿಮಥಿಸಮರೇಂದ್ರಗೊಲಿದನ ।

ಅಬ್ಜಭವ ವಾಸದಲಿ ತೋರ್ದು । ದೈ ।

ತ್ಯರ್ಭಕೋದ್ಧರನಾ ಹಬ್ಬಿಲಿಡಿಯ ।।

ನಂಬಿಯಳಳಿದನಾ ।

ಮೊಬ್ಬಿನೇಳಿಗೆ ಯನ್ನ ತರಿದನ ।

ಕುಬ್ಧಿಯಾಳ್ವನ ಸ್ವಸ್ಥ ಮೋಹನ ।

ಕಬ್ಬಿಯ ಕಲಿ ಹರನ ।। ಚರಣ ।।

ವಿಶ್ವ ರೂಪಾನಂತ ಋಷಭನ ।

ಅಶ್ವ ವದನನ ಯಜ್ಞ ಕಪಿಲನ ।

ವಿಶ್ವ ತೈಜಸ ಪ್ರಾಜ್ಞ । ತುರ್ಯಾ ।

ದಿ ಸ್ವರೂಪ ಧರನಾ ।।

ಅಶ್ವಿಯಾತ್ಮನ ಯಜ್ಞ ಶುಕ್ಲ ।

ಭೂತೇಶ್ವರನ ಮೋಹನನ ।

ರಾಜರಾಜೇಶ್ವರನ ಮಹಿದಾಸ ।

ಆಜಿತನ ಹರಿಯಗ ಅತ್ರೇಯನಾ ।। ಚರಣ ।।

ತಾಪಸಣಾ ಉರುಕ್ರಮನ ಭುವನ ।

ವ್ಯಾಪಕಧಾರಕಾ ಸ್ಥವಿಷ್ಠನ ।

ಶ್ರೀಪರಸ್ವೋದ್ಧಾಮ ಹರಿ । ಕೃಷ ।

ದ್ವೈಪಾಯನಪ ।।

ಶ್ರೀಪತ್ನಿಯ ಗರ್ಭನ ಕುಮಾರ । ಕ ।

ಳಾಪ್ರಪತ್ತಿ ಕಿಂಸ್ತುಘ್ನ । ಧನ್ವ೦ ।

ತ್ರಿ ಪ್ರಸನ್ನ ವೆಂಕಟ ಗಿರೀಶನ ।

ಶ್ರೀ ಪರಮಾತ್ಮನ ।। ಚರಣ ।।

ಸಾಕ್ಷಾತ್ ಶ್ರೀ ಶ್ರೀನಿವಾಸನೇ ಅನುಗ್ರಹಿಸಿದ " ಪ್ರಸನ್ನ ವೆಂಕಟ " " ಪ್ರಸನ್ನ ವೆಂಕಟಕೃಷ್ಣ " ಎಂಬ ಅಂಕಿತದಲ್ಲಿ ಅಸಂಖ್ಯಾತ ದೇವರ ನಾಮಗಳನ್ನು ರಚಿಸಿದ್ದಾರೆ ಶ್ರೀ ಪ್ರಸನ್ನ ವೆಂಕಟದಾಸರು.

ಶ್ರೀ ಶ್ರೀನಿವಾಸನ ಹೊತ್ತ ಶ್ರೀ ಪ್ರಸನ್ನ ವೆಂಕಟದಾಸರು ದೇಶ ಸಂಚಾರ ಕೈಗೊಳ್ಳುತ್ತಾರೆ. ಜನರ ಆದರ ಗೌರವಗಳಿಗೆ ಪಾತ್ರರಾಗುತ್ತಾರೆ. ಮತ್ತೆ ಮನೆಗೆ ಮರಳುತ್ತಾರೆ. ಅತ್ತಿಗೆ ತನ್ನ ತಪ್ಪುಗಳನ್ನು ಅರಿತು ಪಶ್ಚಾತ್ತಾಪ ಪಡುತ್ತಾಳೆ. ನಿನ್ನ ಮನಸ್ಸಿನ ತಾಪವೇ ನನಗೆ ಶಾಪವಾಯಿತೆಂದು ರೋಧಿಸುತ್ತಾಳೆ.

ಅಂಶ : ಸಾಕ್ಷಾತ್ ಶ್ರೀ ರುದ್ರದೇವರು

ಕಕ್ಷೆ : 5

ಶ್ರೀ ಗೋಪಾಲದಾಸರು...

ರಾಗ : ದುರ್ಗಾ ತಾಳ : ಅರಝ೦ಪೆ

ಹರಿದಾಸರಾನಂದ ನೋಡಿ ಬಂದೆ ।। ಪಲ್ಲವಿ ।।

ಸಿರಿ ಪ್ರಸನ್ವೇ೦ಕಟನ ಕಿಂಕರರು ಯಿವರೆಂದು ।

ಸಿರಬಾಗಿ ನಮಿಸಿ ನಾ ಧನ್ಯತೆಯ ಕಂಡೆ ।। ಆ. ಪ ।।

ಮನವನರ್ಣಿಸಿ ಹನುಮಯ್ಯನಲ್ಲಿ ದಿನದಿನ ।

ಘನ ಭಕುತಿ ವೈರಾಗ್ಯ ಪಡೆದ ಸಂಪನ್ನ ।

ಸನ್ನತವು ಸುಖತೀರ್ಥ ಮತ ತತ್ತ್ವದಧ್ಯಯನ ।

ಜ್ಞಾನ ಧ್ಯಾನದ ತವರು ಹರಿದಾಸ ರತುನ ।। ಚರಣ ।।

ಸಾಕಲ್ಯ ಸಾರೂಪ್ಯ ಸಾಯುಜ್ಯ ಸುಖವಾ ।

ಸಕಲ ಶ್ರವಣಾದಿ ನವ ಭಕುತಿ । ಸಾಧನವಾ ।

ನೀಕತಾ ಗಳಿಸಿ ನಿಜ ಹರಿ ಭಕುತರೆನಿಸಿ ।

ಲೋಕ ಪಾವನರೆನಿಸಿ ಮೆರೆಯುತಿಹ ತೇಜಸ್ವಿ ।। ಚರಣ ।।

ದಿಟದಿ ಬಾಗಲಕೋಟೆ ಘಟತಟಾಪುರದಿ ।

ಗೂಟ ನಾಮಗಳ್ಹಚ್ಚಿ ತಂಬೂರಿ ಮೀಟುತ್ತ ।

ವಟಪತ್ರಶಾಯಿ ಹರಿ ಗೋಪಾಲವಿಠ್ಠಲನ ।

ದಿಟವಾದ ನಾಮಗಳ ವಟವಟಿಸುವಂಥ ।। ಚರಣ ।।

" ಶ್ರೀ ಪ್ರಸನ್ನ ವೇಂಕಟ ದಾಸರ ಶೈಲಿ "

ಶ್ರೀ ಪ್ರಸನ್ನ ವೇಂಕಟದಾಸರ ರಚನೆಯಲ್ಲಿ ವಾತ್ಸಲ್ಯ ಭಾವದ ನಿರೋಪಣೆ, ಬಾಲ ಭಾಷೆಯ ಬಳಕೆಯಿಂದಾಗಿ ಒಂದು ವಿಶಿಷ್ಟ ಸ್ಥಾನ ಪಡೆದಿದೆ.ಶ್ರೀ ಪ್ರಸನ್ನ ವೆಂಕಟ ಅಂಕಿತದಲ್ಲಿ ದೇವರ ನಾಮಗಳನ್ನು ರಚಿಸಿದ್ದಾರೆ. ಇವರ ಕಾವ್ಯಗಳಲ್ಲಿ - ಭಕ್ತಿಯ ಉತ್ಕಟತೆ, ಭಗವಲ್ಲೀಲಾ ವಿಲಾಸಗಳು, ನಿರೂಪಣೆಯ ನೈಜತೆಯೊಂದಿಗೆ ಬೆರೆತು ರಸ ಪ್ರತೀತಿಗೆ ಗೋಚರವಾಗುತ್ತದೆ.

ಶ್ರೀ ರಮಾಪತಿ ವಿಠ್ಠಲರು...

ಹಿತದಿ ಮಾತಿಗೆ ಬಂದಚ್ಯುತನ ನಾಮಾವಳಿ ।

ಅತಿಶಯ ಭಕುತಿ ಪೂರ್ವಕದಿ ।

ಸತತ ಅನೇಕ ಗ್ರಂಥಗಳು ದಶಮ ಸ್ಕಂದ । ಭಾಗ ।

ವತ ಪೂರ್ವಾರ್ಧ ಕನ್ನಡದಿ ।।

ಮತಿ ಪೂರ್ವಕ ರಚಿಸುತಾನಂದವು । ತುಳು ।

ಕುತಿಹುದು ಕವಿತೆಯಲಿ ।

ನುತಿಸಿ ದುರ್ಮತ ನಿರಾಕರಿಸಿ ಬಾಳಿ ಬಲು । ಕುಲ ।

ತತಿ ಶುದ್ಧ ಮಾಳ್ಪರು ಹರಿಪುರವ ಹೊಂದಿ ।।

೧. ಶ್ರೀಮದ್ಭಾಗವತ ಪೂರ್ವಾರ್ಧ

ಶ್ರೀಮದ್ಭಾಗವತ ದಶಮ ಸ್ಕಂದವನ್ನು ಇಡಿಯಾಗಿ ಕನ್ನಡದ ಕನ್ನಡಿಯಲ್ಲಿ ನಯವಾಗಿ ಮೂಡಿಸಿದ ಮೊದಲ ಶ್ರೇಯಸ್ಸು ಶ್ರೀ ಪ್ರಸನ್ವೆಂಕಟದಾಸರಿಗೆ ಸಲ್ಲುತ್ತದೆ.

ಶ್ರೀ ಶುಕವಾಣಿಯ ಮೂಲ ಭಾಗವತದ ಮಾಧುರ್ಯವನ್ನು ಎಲ್ಲಿಯೂ ಬಸಿದು, ಒಸರಿ ಹೋಗದಂತೆ, ರಸದ ಒಂದು ಹನಿಯೂ ಕೆಳಗೆ ಬೀಳದಂತೆ ಕನ್ನಡದ ಕುಂಭದಲ್ಲಿ ತಂದು ತುಂಬಿದ್ದಾರೆ ತುಂಬು ಜಾಣ್ಮೆಯಿಂದ ಶ್ರೀ ದಾಸಾರ್ಯರು.

೨. ನಾರದ ಕೊರವಂಜಿ ( ೩೪ ಹಾಡುಗಳಿವೆ )

೩. ನಾರಾಯಣ ಪಂಜರ ( ೪೧ ನುಡಿಗಳು )

೪. ಸತ್ಯಭಾಮ ವಿಲಾಸ - ಶ್ರೀ ಕೃಷ್ಣ ಪಾರಿಜಾತ ( ೫೧ ನುಡಿಗಳು )

೫. ಸೃಷ್ಠಿ ಪ್ರಕರಣ ( ೧೦೫ ನುಡಿಗಳು )

೬. ಶ್ರೀ ಕೃಷ್ಣ ಚಾರಿತ್ರ್ಯ ( ೪೮ ನುಡಿಗಳು )

೭. ಉರಟಣಿ ಪದ ( ೭೪ ನುಡಿಗಳು )

೮. ಆಹ್ನೀಕ ವಿಚಾರ ( ೯ ನುಡಿಗಳು )

೯. ವೃತ್ತ ಪ್ರಬಂಧ ( ೧೧ ನುಡಿಗಳು )

೧೦. ಶ್ರೀ ಸೀತಾರಾಮ ಕಲ್ಯಾಣ ( ೨೦ ನುಡಿಗಳು )

೧೧. ದೇವತಾ ತಾರತಮ್ಯ ವಿಚಾರ

೧೨. ಲಯ ಗೀತೆ ( ೫ ನುಡಿಗಳಲ್ಲಿ ಲಯ ಚಿಂತನೆ ವಿವರಣೆಯನ್ನು ಕೊಟ್ಟಿದ್ದಾರೆ )

೧೩. ಶೋಭನ ಸುವ್ವಿ ಪದ ( ೪೯ ನುಡಿಗಳು )

ಮೊದಲಾದ ರಸವತ್ಕಾವ್ಯಗಳನ್ನು ಬರೆದಿದ್ದಾರೆ. ಶ್ರೀ ಪ್ರಸನ್ನ ವೆಂಕಟದಾಸರ ಲಲಿತ ಬಂಧುರವಾದ ಸುಂದರ ಕೃತಿಗಳಲ್ಲಿ ಭಗವದಾಭಿಮುಖ್ಯವು ಮುಖ್ಯವಾಗಿದೆ. ಸರ್ವಾರ್ಪಣ ಸಿದ್ಧಿಯಿಂದ ಶ್ರೀ ದಾಸಾರ್ಯರ ಸಾಹಿತ್ಯವು ಕೃತಕೃತ್ಯವಾಗಿದೆ. ಆದರೂ ಜನ ಜೀವನದೆಡೆಗೆ ಶ್ರೀ ದಾಸರ ಕವಿ ವಾಣಿಯು ಉನ್ಮುಖವಾಗಿ ಚತುರ್ಮುಖ ಚಾತುರ್ಯದಿಂದ ಬದುಕನ್ನು ತಿದ್ದುವಲ್ಲಿಯೂ ಸಾಫಲ್ಯವನ್ನು ಕಂಡಿದೆ.

ವಿಷಯಕ್ಕೆ ಅನುಗುಣವಾದ ಅಭಿವ್ಯಕ್ತಿಯ ರೂಪವನ್ನು ಆಯ್ದುಕೊಂಡು ಸ್ವಯಂ ಪೂರ್ಣವಾದ ರಸೋಲ್ಲಾಸದಿಂದ ಅವರ ದೇವರ ನಾಮಗಳೆಲ್ಲವೂ ದಿವ್ಯ ಭವ್ಯ ಗೀತದ ಸೊಬಗನಾಂತು ಸೊಗಯಿಸುತ್ತದೆ.

ಶ್ರೀ ಪ್ರಸನ್ನ ವೆಂಕಟದಾಸರ ಸಾಹಿತ್ಯದಲ್ಲಿ ಬುದ್ಧಿ ಭಾವಗಳು ವಿದ್ಯುದಾಲಿಂಗನೆಯಾಗಿ ಹೊಸದಾಗ ಒಂದು ರಸ ರಂಗವೇ ಏರ್ಪಡುವುದು.

ರಂಗ ಕೊಳಲನೂದಲಾಗಿ ।

ರಂಗಯ್ಯ ಕೊಳಲನೂದಲು ।

ಮಂಗಳ ಮಾಯವಾಯ್ತು ಧರೆ । ಜ ।

ಗಂಗಳು ಚೈತನ್ಯ ಮರೆದು । ಶ್ರೀ ।

ರಂಗ ಧ್ಯಾನ ಪರರಾದರು ।।

ಎಂದು ಶ್ರೀ ದಾಸಾರ್ಯರು ಹಾಡಿದಾಗ ವೃಂದಾವನದ ಬಾಲ ಮುಕುಂದನು ಗೋಪಾಂಗನೆಯರೊಂದಿಗೆ ರಾಸ ಕ್ರೀಡೆಯನ್ನಾಡುತ್ತಾ ಕಣ್ಣೆದುರೇ ಕೊಳಲ ನೂದಿದ ಅನುಭವವಾಗುತ್ತದೆ.

ಶ್ರೀ ಕೃಷ್ಣ ಸತ್ಯಭಾಮೆಯ ಸಂವಾದದಲ್ಲಿ ವ್ಯಂಗೋಕ್ತಿ, ವಕ್ರೋಕ್ತಿಗಳು ಕವಿಯ ಹಾಸ್ಯ- ಶೃಂಗಾರ ರಸಗಳ ಸಾಮರಸ್ಯದ ನೆಯ್ಗೆಯ ನೈಪುಣ್ಯವನ್ನು ಎತ್ತಿ ತೋರುತ್ತದೆ.

ಶ್ರೀ ಕೃಷ್ಣ : -

ಬಂದೆ ಕೇಳೇ ಗೋವಿಂದ ನಾ ।

ಇಂದು ಮುಖಿ ನಿದ್ರೆ ಬಿಟ್ಟು ।

ಬಂದು ನೀ ಬಾಗಿಲ ತೆರೆಯೇ ।।

ಸತ್ಯಭಾಮೆ :- ಗೋವಿಂದಾ ನೀ ಗೋ ವೃಂದ ಕಾಯಲು ಹೋಗು ।।

ಶ್ರೀ ಕೃಷ್ಣ : -

ಸೋಮಕ ಖಳನ ಕೊಂದು ।

ನೇಮದಿ ವೇದವ ತಂದ ।

ಶ್ರೀಮತ್ಸ್ಯಾವತಾರ ಬಂದೆನೆ ।।

ಸತ್ಯಭಾಮೆ : - ಮತ್ಸ್ಯನಾದರೆ ಆ ಮಹಾಂಬುಧಿಗೆ ಹೋಗು ।।

ಶ್ರೀ ಕೃಷ್ಣ :-

ಸಿಂಧು ಮಥನ ಕಾಲಕ್ಕೆ ।

ವೃಂದಾರಕರಗೊಲಿದ ।

ಸುಂದರ ಕೂರ್ಮ ಬಂದೇನೆ ।।

ಸತ್ಯಭಾಮೆ : - ಸುಂದರ ಕೂರ್ಮನಾಗಿ ಮಂದರ ಹೊರಲು ಹೋಗು ।।

ಹೀಗೆ ಹನ್ನೊಂದು ನುಡಿಗಳ ಈ ಪದದಲ್ಲಿ ಪ್ರಶ್ನೋತ್ತರದ ಚಾತುರ್ಯವು ವಿನೋದ ವೈಖರಿಯಿಂದಲೇ ಪ್ರಮೋದವನ್ನು ಉಂಟು ಮಾಡುತ್ತದೆ.

ಮೇಲ್ಕಂಡ ದೀರ್ಘ ಕೃತಿಗಳೊಂದಿಗೆ ಶ್ರೀ ದಾಸಾರ್ಯರು ಸುಮಾರು ೬೦೦ಕ್ಕೂ ಅಧಿಕ ಪದ - ಪದ್ಯ - ಉಗಾಭೋಗಗಳನ್ನು ರಚಿಸಿ ಹರಿದಾಸ ಸಾಹಿತ್ಯ ಕ್ಷೇತ್ರವನ್ನು ಪ್ರಸಿದ್ಧಿಗೊಳಿಸಿದ್ದಾರೆ.

" ಶ್ರೀ ಮಂತ್ರಾಲಯ ಪ್ರಭುಗಳ ಸನ್ನಿಧಿಯಲ್ಲಿ ಶ್ರೀ ಪ್ರಸನ್ನ ವೆಂಕಟದಾಸರು "

ಶ್ರೀ ಪ್ರಸನ್ನ ವೆಂಕಟದಾಸರು ಸಂಚಾರ ಕ್ರಮದಲ್ಲಿ ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ದಿಗ್ವಿಜಯ ಮಾಡಿಸಿದ್ದಾರೆ. ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ಪರಮ ಪವಿತ್ರವಾದ ಮೂಲ ಬೃಂದಾವನದ ಮುಂದೆ ನಿಂತಿದ್ದಾರೆ. ಕಣ್ಣುಗಳಲ್ಲಿ ಧಾರಾಕಾರವಾಗಿ ಆನಂದ ಬಾಷ್ಪ ಸುರಿಯುತ್ತಿದೆ. ಶ್ರೀ ರಾಯರನ್ನೇ ತದೇಕ ಚಿತ್ತದಿಂದ ನೋಡುತ್ತಿದ್ದಾರೆ. ಹೃದಯ ತುಂಬಿದೆ. ಭಕ್ತಿಯಿಂದ ಶ್ರೀ ರಾಯರ ಮಹಾತ್ಮ್ಯೇಯನ್ನು ಅತಿ ಸುಂದರ ಮತ್ತು ಮನೋಜ್ಞವಾಗಿ ವರ್ಣಿಸಿದ್ದಾರೆ.

ರಾಗ : ಹಂಸಾನಂದೀ ತಾಳ : ಆದಿ

ರಾಘವೇಂದ್ರ ಮುನಿರಾಯರ ಸ್ಮರಣೆ ।

ಜಾಗಿಲ್ಲದೆ ಮಾಡಿ ನೀಗೊ ಬವಣೆ ।। ಪಲ್ಲವಿ ।।

ಹಿಂದಿನ ಮೂರು ಜನ್ಮಗಳಲ್ಲೂ ।

ಇಂದಿರೇಶನನು ವಲಿಸಿ ಮೆರೆದು ಬಲು ।

ಕುಂದಿಲ್ಲದ ಪುಣ್ಯಗಳಿಸಿ ಸುರತರು ।

ಮಂದ ಭಾಗ್ಯರಿಗೆ ಹಂಚುತಲಿಹರು ।। ಚರಣ ।।

ಭೂತ ಪ್ರೇತ ಸಕಲಾದಿ ಶಕುನಭಯ ।

ಘಾತಚಕ್ರ ಜಾತಕದ ಪೀಡೆಗಳು ।

ಗತಿಸುವವೀ ಯತಿ ಕರುಣೆ ತೋರಲು ।

ನಿತ್ಯ ತುತಿಸೆ ನಿಜ ಮುಕುತಿ ನಿಶ್ಚಿತವು ।। ಚರಣ ।।

ಕಲಿಬಲ ಹೆಚ್ಚಿ ನಲುಗಿದ ಜನಕೆ ।

ಸುಲಭದ ಮುಕುತಿ ದಾರಿಲಿ ನಿಲ್ಲಿಸಿ ।

ನಲಿಲನಾಭ ಶ್ರೀ ಪ್ರಸನ್ವೇ೦ಕಟನಾಜ್ಞೆಲಿ ।

ಸುಲಲಿತ ಮಹಿಮೆ ತೋರಿ ನಲಿವ ಗುರು ।। ಚರಣ ।।

" ಉಪ ಸಂಹಾರ "

ಶ್ರೀ ಪ್ರಸನ್ನ ವೆಂಕಟದಾಸರು ಅನೇಕ ಪದ ಪದ್ಯಗಳನ್ನೂ, ಕಾವ್ಯ ಕೀರ್ತನೆಗಳನ್ನೂ ರಚಿಸಿ ಜನರಲ್ಲಿ ಧರ್ಮ ಶ್ರದ್ಧೆಗಳನ್ನು ಕುದುರಿಸಿ; ಸಂಗೀತ - ಸಾಹಿತ್ಯ - ವೇದಾಂತ - ಗಮಕ ಮುಂತಾದ ವಿವಿಧ ಕಲೆಗಳ ಹೃದಯಂಗಮ ಸಂಗಮವನ್ನು ತಮ್ಮ ಕೃತಿಗಳಲ್ಲಿ ಸಾಧಿಸಿ ತೋರಿಸಿದ್ದಾರೆ.

ಹೀಗೆ ಕಾಖಾಂಡಕೀ ವಂಶದ ಶ್ರೀ ಪ್ರಸನ್ನ ವೆಂಕಟದಾಸರು ತಮ್ಮ ವೈವಿಧ್ಯಮಯ ಕೀರ್ತನೆಗಳಿಂದಾಗಿ ಹರಿದಾಸ ಸಾಹಿತ್ಯದ ಶ್ರೀ ವಿಜಯದಾಸ ಯುಗದಲ್ಲಿ ಮಹತ್ವದ ಸ್ಥಾನವನ್ನು ಪಡೆದ, ಶ್ರೀ ಪ್ರಸನ್ನ ವೆಂಕಟದಾಸರು ಕ್ರಿ ಶ 1752ರ ಭಾದ್ರಪದ ಶುದ್ಧ ದ್ವಾದಶೀ ಯಂದು ಬಾದಾಮಿಯಲ್ಲಿ ಹರಿಪದ ಸೇರಿದರು!!

ಶ್ರೀಶಾತ್ಪ್ರಾಪ್ತ ಸುವಿಜ್ಞಾನಂ ಶ್ರೀಶೈಕ ನಿರತಂ ಸದಾ ।

ಪ್ರಸನ್ನವೆಂಕಟಾರ್ಯೋಮೇ ಭೂಯಾತ್ಸರ್ವಾರ್ಥ ಸಿದ್ಧಯೇ ।।

ಮಂತ್ರಾಲಯಾಧೀಶರ ದಾಸ ದಾಸ ದಾಸರ ದಾಸ

by ಆಚಾರ್ಯ ನಾಗರಾಜು ಹಾವೇರಿ

     ಗುರು ವಿಜಯ ಪ್ರತಿಷ್ಠಾನ

***



****


No comments:

Post a Comment