Monday 1 July 2019

purandara dasaru purandaradasa 1564 hampi pushya amavasya ಪುರಂದರ ದಾಸರು







Daasarendare Purandara Daasarayya 1480 - 1564

ಜ್ಞಾನವೈರಾಗ್ಯ ಸಂಪನ್ನಂ ಭಕ್ತಿಮಾರ್ಗ ಪ್ರವರ್ತಕಂ |
ಪುರಂದರಗುರುಂ ವಂದೇ ದಾಸಶ್ರೇಷ್ಟಂ ದಯಾನಿಧಿಂ |
ಮನ್ಮನೋಭೀಷ್ಟ ವರದಂ ಸರ್ವಾಭೀಷ್ಟ ಫಲಪ್ರದಂ|
ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ ||

Purandaropanishat –  He is said to have composed 425000/- devaranamas.  Of which only 1000 are available now.  Sri Vyasarajaru kept the Devaranamas, Suladi, and Ugabobha alongwith Sarvamoola and did the pooja for them and called the devaranamas by Purandaradasaru as “Purandaropanishat”, which is the gist of Bhagavatha and Upanishat.

Character –  
He was a miser – Lobhi or jipuna.  He had a lot of wealth and was populaly called as “Navakoti Narayana” but he hardly gave anything to anybody.  Attaining Vairagya –   At the age of 40 years.   “Lobha” gave place to “Vairagya” .  His “Love of Gold” turned as “Love of God” and became Haridasa.    He left Purandaragada alongwith his entire family and visited Pandarapura and came to Vijayanagar and sought the shishyatva of Sri Vyasarajaru, who gave him ankita as Purandara vittala and asked him to compose Devaranamas in Kannada.

Madhukara Vrutti –  
After getting the shishyatva of Sri Vyasarajaru, he left everything and started Madhukaravrutti –   His dress consist of a turban, tulasimale, chitike, gejje,  and gopalabutti consisting of voluntarily contributed food and other articles.

Contemporaries – 
Sri Vyasarajaru, Sri Vadirajaru, Sri Vaikuntadasaru, Sri Kanakadasaru,Sri Annamacharya, Krishnadevaraya, Sripadarajaru

Purandara Mantapa – Sri Krishnadevaraya, the King of Vijayanagar, invited him to his palace and built a Japashala for Purandaradasaru, near Chakrathirtha, now popularly called as “Purandara Mantapa”.


.
know more here:-

********

info from dvaita.org--->


Introduction
Purandara Dasa is famous among the Haridasas of Karnataka; foremost among the talented Karnatic composers. He earned much money and lived only to earn it, but eventually gave away all his wealth because of a strange incident and became a devotee of Sri Hari. He practised the principle contained in the popular saying "we must swim across suffering win victory over it". He earned the well-deserved praise-'Among the devotees of Hari, Purandara Dasa is the greatest'(from his preceptor Sri Vyaasa Tiirtha). His works have earned the name 'Purandaropanishat'.
After Nayaka Became Saint
After Srinivasa Nayaka became the saint-singer celebrating Sri Hari, he sourght a teacher for guidance and was received as a disciple by Sri Vyaasaraja. Sri Vyaasaraja who had been accepted as a great saint had composed verses both in sanskrit and Kannada. He bestwoed the name of 'Purandara Vittala' on the unattached Srinivasa Nayaka and blessed him heartily. Purandaradasa has expressed his gratitude to Sri Vyaasaraja in one of his verses thus: "My only refuge is the feet of Vyaasaraja. I was able to understand Purandara Vittala by his grace"..
Srinivasa Nayaka who had earned the name of Navakoti Narayana, became a devotee of Narayana, the protector of the mankind and started a new life along with his wife and children. Purandara Dasa's wife and children appear to have composed verses like him.
In course of time Purandaradasa came to Hampi and settled down with his wife and children. He had four sons-Varadappa, Gururaya, Abhinavappa and Gurmadhvapathi. Every morning Purandaradasa went into the town wearing bells on his ankels and tulasi mala around his neck. He carried a tamboori in the hand and sang his Hari-keertanas sounding the tamboori with his fingers. The verses he sang were his own compositions. They were on a variety of themes. Some of them described Sri Krishna's adventures in this world. Some others sang about God's kindness to man. A few more verses were simple compositions expounding the philosophy contained in the Vedas, Upanishads and Bhagavadgita in simple words. In yet other verses Purandaradasa praises Lord Krishna affectionately. In some verses Purandaradasa has even made fun of the Lord. He sang these songs to the accompaniment of tamboori and the bells tied to his ankles and went about the streets of the town. The people admired the listened to his songs. Purandaradasa accepted alms given to him during the wandering and led a life of renunication. He who had been called Navakoti Narayana now had willingly accepted the life of a saint and begged for his food.
In Praise of the Devotees
It is intersting to note how Srinivasa Nayaka, having changed his life influenced by his wife's role and having been accepted by Sri Vyaasaraja as disciple naming 'Purandara Vittala', earned the belssings of Sri Hari. In his verses (keertanas) he praises all the devotees of Sri Hari who had earned the blessings of the Lord and supplicates before Sri Hari. He praises the good fortune of Lakshmi, the consort of Sri Hari, who had the rare fortune of serving the Lord with love at all times. He sings "How fortunate is Lakshmi, how pious is Lakshmi who serves Sri Hari with love at all times!"... Yashoda treated the protector of the world as her child and played with him and enjoyed every moment she spent with the child Krishna. Purandardasa envies her and sings "It is the good fortune of the Gopi that Sripati is in the form of a child". Thinking of Vidura who satisfied his friend and Lord of the World with just one cup of milk, he praises him for his good luck and sings: "it is the good fortune of Vidura that the universe in the for Padmajaanda (Lord Krishna) is fully satisfied with what Vidura has offered".
Anxiety
Even though Purandardasa had taken the vow of Haridasa, his mind had not yet acquired equipoise (peace/restfulness). He feels unhappy over the state of his mind which was still unable to reach a stage of complete restfulness. He bemoans in a verse: "I did not think of you during the day, I failed to do so during the night also because of thirst and hunger. I am the victim of these two desires. O Purandara Vittala."
Again he gives expression to the conflict in his mind about his inability to give up his house, wife and children in a verse: "the love of my house and my wife on the one hand and the longing and anziety for the children on the other hand..". The all-too-human weakness and conflict are beautifully depicted in this verse. The sole object of Purandaradasa was to be victorious over these desires and to win God's blessings. This problem was constantly before him. Sometimes he dreamt that Sri Hari appeared before him because of his constant preoccupation with the Lord. At times he appeared to him (at a mental level) the screen of his mind. The Lord seemed to test the depth of his longing and his sincerity. Purandardasa seems to have been disturbed and upset because of the severe test to which he was subjected. Hence he complains in a bannering verse "who was ever rescued by you, Sri Hari having placed complete trust on you!" The next moment there is complete surrender to the Lord as the verse indicates "No one who trusted you was ever ruined." This is the comfort he derived at the end of the conflict in his mind.
World of Purandaradasa
Purandaradasa went on singing and praying for God's grace and finally he realised God's grace. He felt the ectsasy of God realisation and at such moments he broke into song delcaring "I saw Achyuta with my own eyes". He often became unconscious on account of the joy of God realisation and sang: "I am saved, I have conquered life. The good fortune of serving at the feet of Padmanabha has come to me".
Each stage of Purandaradasa'a growth and development as a pious man moving towards the higher stages of God realisation is significant. The greatness of his divine nature can be compositions (Suladis and Ugabhogas). The conflicts, anxieties, his hopes, fears and despair have been expressed in simple Kannada very eloguently and clearly. Purandaradasa bcame great because of his success in living the life of piety and proving the superiority of the soul over the wordly success. He has created a world of his own with his preoccupation with the life of the spirit and the strength of his devotion. We can read his verses and understand how the boy Dhruva and the sinner Ajamila reached the highest places as devotees by their devotion and piety. Krishna's advetnures as a boy have been beautifully recoreded and sung in his verses. If his playfulness, mischief and cleverness endear themselves to us in a particular way, the picture Purandaradasa gives about the coquetries and the passionate attachment of Gopis for krishna, their lover may please the readers in quite a different way. There are vivid pictures of the Gopis complaining to Yashoda about her son's mischief in these verses.
There is also the picture of the other Gopis taking the boy Krishna in their arms, kissing him with materanl affection and solicitude and propititing the evil powers in various ways so that nothing evil should happen to him. We can enjoy such pictures described beautifully by purandaradasa in his verses.
Purandaradasa has expressed his devotion to Lord Krishna,(Panduranga Vittala) his personal deity, imagining him in so many ways and had relationships with him. His pure love and devotion came out very clearly in all his verses. He admits that he has erred in hundred ways which he ties his tongue making it different for him to ask for forgiveness. He sings again -"you are the God who can kill and save. I have not seen gradeur like yours in any other God". Before a God Purandaradasa surrenders completely and asks for refuge. His love and devotion and the stages by which he travelled before coming to the summit can be understood by us according to each one's ability to understand such spiritual development.
Good Conduct
Purandaradasa set the highest value on good conduct. The strength and greatness of Sri Hari's name have been beautifully enshrined and sung in this world. People who do not know Sanskrit find it hard to understand the vedas and upanishads. But Purandaradasa has explained the whole essense of these scriptures in simple kannada and show the way that one should live. He practised in his life what he preached. It is important to note ths aspect of his life. He gifted away all his wealth and lived the life of renunciation which he preached to others. Although he took to the life of renuciation and asceticism he did not desert his wife and children. He lived with them.
He made it clear to others by his conduct how it ws possible to achieve purity of thought, word and deed regardless of caste, religion or creed. He did not believe that man could understand God by mere external purity unless it was accompanies by purity of mind.
Art
Whatever Purandaradsa says, the way he introduces it and explains it is very pleasant. His similes are very simple and telling. He compares wicked men to the knotted tree of thorns. He warns the non believers that life is being wasted at every stroke of the bell. When he saw a post man he sang "A letter has arrived from Padmanabha. A letter that has been written by Padmanabha himself!".
He preached several moral precepts making use of familiar incidents like the postman delivering letters. It was God's gift that Purandaradasa was able to preach, in simple kannada, what is difficult even for philosophers to put across in a way which the ordinary people can understand.
Incidents of Life
Just as Purandaradasa used incidents to preach the value of devotion he was able to put across difficult principles in the few simple words in Kannada. Here is the verse: "The eyes which cannot see Narahari (Krishna) are no better than the eyes of peacock's feathers". He has criticised the pretense of people who merely shave off their heads without cultivating detachment of mind and pose as saints.
Scholars think that Purandara lived for about 84 years (from AD 1480 to 1564). On the basis of the verse in the name of Madvapathi his son it is held that Purandaradasa must have passed away a year before the fall of Vijaynagar. Taking it as authentic, his death anniversary is celeberated on the New Moon Day, in the second fortnight of Pushya.
It's once own duty to understand Purandaradasa's personality from his compositions and not be content with the stories that have grown around his name. We cannot come across such originality and variety in any other saint of that creed. On the basis of a verse in his name, it is said that he composed 4.75,000 songs. Whatever the number of his songs we can see the greatness from the verses available now.
It's once own duty to understand Purandaradasa's personality from his compositions and not be content with the stories that have grown around his name. We cannot come across such originality and variety in any other saint of that creed. On the basis of a verse in his name, it is said that he composed 4.75,000 songs. Whatever the number of his songs we can see the greatness from the verses available now.
He made music and song an integral part of the common man's life. About a quarter of his songs deal with his spiritual life and how it grew stage by stage. The remaining songs reveal his abundant experience, devotion, wisdom and his detachment.
Vyasaraya, his teacher himself has called his verses "Purandaropanishat". There is no need for some one else's praise. Some great man who saw the greatness of the soul which has pleased and guided the people for four hundred years has praised him in the following line which may be our tributealso to that great soul:
"Salutations to you, Purandaragur, Greatest of the saints and the kindliest"

(Purandara gurum vande Dasa-sreshtham dayanidhim) 


Srinivasa Nayaka becomes a Saint
Our knowledge of Purandaradasa's life stems mainly from the compositions of Vijaya dasa who lived a hundred and fifty years after the passing away of Purandaradasa. This is taken as authentic since Vijaya dAsa is believed to be the incarnation of Bhrigu muni, and an aparOksha gyani (having mystical powers).
Vijayadasa had great faith in and devotion for Purandaradasa. It is believed that Purandaradasa himself appeared in Vijayadasa's dream and bestowed on him the ankitha 'Vijaya Vittala'. This is how the story of Purandaradasa runs:
Worn-out Coin given as Alms
Purandaradasa lived in Purandaragadha, a small town in present-day Maharashtra (India), but belonging to the then Vijayanagar dynasty. His earlier name was Srinivasa Nayaka. He was engaged in the family business - dealing in precious stones. He was very rich and popularly known as navakOti nArAyaNA. He was a miser by nature, and cared for nothing except money.
Lord Vishnu decided that it was time for Srinivasa Nayaka to give up his love of money, and take his rightful role among saints. So, He took the form of a poor brahmin and approached Srinivasa Nayaka for money in order to perform the thread ceremony of his son. Even though days rolled by, Nayaka did not give anything, but the brahmin too did not relent. He visited Srinivasa Nayaka's shop again and again. Six months passed by in this fashion. Finally, Nayaka decided that he had to do something to get rid of the brahmin. He had a collection of worn-out coins that were more or less worthless. He poured this in front of the brahmin and asked him to take one and never come back. The brahmin went away, seemingly crestfallen.
Gift of a Nose-stud
Saraswathi, Nayaka's wife, was a kind hearted soul who in her own way, tried to make amends for her husband's miserliness. The brahmin, who knew this, went directly from Nayaka's shop to his residence. He told her his story and how her husband had sent him away with nothing.
Saraswathi was appalled by her husband's behaviour. She wanted to help the poor brahmin, but felt helpless since she could not give anything without her husband's permission. When she explained her helplessness, the brahmin asked if she had something given by her parents (which, presumably, she could give without asking for her husband's permission). She agreed and gave him the diamond nose-stud that her parents had given her.
The vanishing ornament
The brahmin took the ornament straight to Srinivasa Nayaka's shop. When Nayaka became angry with the brahmin for coming back, despite his instructions to the contrary, the brahmin clarified that he was there not to beg, but to pledge an ornament and take a loan. Nayaka was skeptical and asked the brahmin to show him the ornament. When he saw the ornament, he was perplexed because he immediately recognized it as the one belonging to his wife. When questioned about the ornament's antecedents, the brahmin told him that it was a gift from a benefactor.
Asking the brahmin to come back the next day, Nayaka safely locked away the ornament in a box and went home. When he saw his wife without her ornament he questioned her about it. She tried to stall him with non-committal answers, but he insisted on seeing it immediately. He was angry because he thought she had given away a valuable ornament to a beggarly brahmin.
Saraswathi felt the ground giving way under her feet. She knew that her husband would punish her if she told him the truth. Unable to think of an alternative, she decided to commit suicide. She poured poison into a cup and lifted it to her lips. Just as she was about to drink the poison, she heard a metallic sound. Lo behold, wonder of wonders, the ornament was right there in the cup. She could not believe her eyes. Her heart filled with gratitude, she prostrated before the idol of Krishna and took the ornament to her husband. Nayaka was astounded as it was the very same ornament that he had safely locked away in his shop. He quickly excused himself and ran back to the shop to check. The box in which he had safely locked away the ornament was empty! He was now completely and totally dumbfounded.
The renunciation
He want back to his house, and pressed his wife to tell him the truth. She told him everything that had transpired. This put his mind into a turmoil.
After deep thought, he came to the conclusion that the brahmin was none other than God Himself. He recalled all the incidents that had transpired in the previous six months. He was disgusted with himself, and his miserliness. He felt that his wife had conducted herself far more decently and generously than himself. Since it was his love of money that had made him ill-treat the Lord, he gave away all of his wealth with the Lord's name on his lips.
From that day onwards he became a devotee of Sri Hari. navkOti nArAyANa became a nArAyANa Bhakta; the hands which sported gold and diamond rings now played the tamboora, the neck which used to be resplendent with golden chains now housed the tulasi mAla. The man who had turned away countless people away, now himself went around collecting alms and living the life of a mendicant. The Nayaka who would have lived and died an inconsequential life became PurandaradAsa, loved and revered even centuries after his death. Just as the philosopher's stone turns everything it touches to gold, the Lord took a wretched miser and made him into the doyen of all haridAsas. Such was the magic wrought by the Lord!

Jai Pundalika varada, Hari Vittala 


*******



Sri Purandara Dasa1480-1564Srinivasa NayakaPurandara VittalaSri Vyaasa rajaHampiPushya Bahula Amavasya

*******


info from sumadhwaseva.com--->

  • ಪುರಂದರ ದಾಸರ ಸಂಕ್ಷಿಪ್ತ ಮಾಹಿತಿ

  • ದಾಸರ ಕಾಲ – 1480 – 1564
  • ಗೋತ್ರ         – ವಸಿಷ್ಟ ಗೋತ್ರ
  •  ವೇದ ಶಾಖ   – ಯಜುರ್ವೇದ
  •  ಕುಲದೈವ     – ತಿರುಪತಿ ವೆಂಕಟರಮಣ
  •  ತಂದೆ         – ಶ್ರೀ ವರದಪ್ಪ ನಾಯಕ
  •  ಮೂಲಸ್ಥಳ    – ಪುರಂದರಘಡ
  •  ತಂದೆಯ ವೃತ್ತಿ- ರತ್ನಪುಡಿ ವ್ಯಾಪಾರ
  •  ಜನ್ಮನಾಮ    – ಶ್ರೀನಿವಾಸ
  •  ಧರ್ಮಪತ್ನಿ   – ಸರಸ್ವತಿಬಾಯಿ
  •  ಮಕ್ಕಳು       – ನಾಲ್ಕು (ವರದಪ್ಪ, ಗುರುರಾಯ, ಅಭಿನವಪ್ಪ, ಮಧ್ವಪತಿ)
  •  ಇವರನ್ನು ಜನರು ಕರೆಯುತ್ತಿದುದು – ನವಕೋಟಿ ನಾರಾಯಣ
  •  ಇವರ ಪರಿವರ್ತನೆ – ಶ್ರೀಹರಿಯಿಂದ (ವೃದ್ಧ ಬ್ರಾಹ್ಮಣವೇಶದಿಂದ)
  •  ವೃದ್ಧ ಬ್ರಾಹ್ಮಣ ಯಾಚಿಸಿದ್ದು – ಮಗನ ಉಪನಯನಕ್ಕೆ ಸಹಾಯ
  •  ಬ್ರಾಹ್ಮಣ ಅಲೆದಾಡಿದ ಕಾಲ – ೬ ತಿಂಗಳ
  •  ಶ್ರೀನಿವಾಸ ನಾಯಕ ನೀಡಿದ್ದು – ಒಂದು ಸವಕಲು ನಾಣ್ಯ
  •  ಸರಸ್ವತೀಬಾಯಿಗೆ ಬ್ರಾಹ್ಮಣ ನೀಡಿದ್ದು – ಮೂಗುತಿ
  •  ವಿಷಪಾನ ಮಾಡಲು ಹೋದ ಸರಸ್ವತಿಬಾಯಿಗೆ ಮೂಗುತಿ ಸಿಕ್ಕಿದ್ದು – ವಿಷದ ಬಟ್ಟಲಿನಲ್ಲಿ
  •  ದಾಸವೃತ್ತಿಗೆ ಕಾರಣ – ಭಗವಂತನ ಲೀಲೆ, ವೈರಾಗ್ಯ – ಶ್ರೀಹರಿಯಲ್ಲಿ ಭಕ್ತಿ, ಸಂಸಾರದಲ್ಲಿ ವಿರಕ್ತಿ
  •  ಮುಂದಿನ ವೃತ್ತಿ – ಮಧುಕರವೃತ್ತಿ
  •  ದಾಸದೀಕ್ಷೆ ನೀಡಿದ್ದು – ಶ್ರೀ ವ್ಯಾಸರಾಯರು
  •  ಲಭ್ಯವಾದ ಅಂಕಿತ – ಪುರಂದರವಿಠಲ
  •  ಮಧುಕರವೃತ್ತಿಯ ಮತ್ತೊಂದು ಹೆಸರು – ಗೋಪಾಳ, ಯಾಯಾವಾರ
  •  ಪುರಂದರ ದಾಸರ ಮಕ್ಕಳ ಅಂಕಿತಗಳು – ವರದ ಪುರಂದರ ವಿಠಲ (ವರದಪ್ಪ), ಗುರುಪುರಂದರ (ಗುರುರಾಯ), ಅಭಿನವಪುರಂದರ (ಅಭಿನವಪ್ಪ), ಗುರುಮಧ್ವಪತಿವಿಠಲ (ಮಧ್ವಪತಿ).
  • ಪುರಂದರದಾಸರ ಆರಾಧ್ಯ ದೈವ – ಪಾಂಡುರಂಗ
  • ಅನುಸರಿಸಿದ ಸಿದ್ಧಾಂತ – ಮಧ್ವಸಿದ್ಧಾಂತ
  • ವ್ಯಾಸರಾಜರು ದಾಸರ ಕೃತಿಗಳಿಗೆ ನೀಡಿದ ಗೌರವ – “ಪುರಂದರೋಪನಿಷತ್”
  • ಸಂಗೀತ ಪ್ರಪಂಚದಲ್ಲಿ ಪುರಂದರ ದಾಸರ ಗೌರವ – ಕರ್ನಾಟಕ ಸಂಗೀತ ಪಿತಾಮಹ
  • ದಾಸರೆಂದರೆ ಪುರಂದರದಾಸರಯ್ಯ ಎಂದವರು – ಶ್ರೀ ವ್ಯಾಸರಾಜರು
  • ಸಮಕಾಲೀನರು – ಶ್ರೀ ವ್ಯಾಸರಾಜರು, ಶ್ರೀ ವಿಜಯೀಂದ್ರರು, ಶ್ರೀ ವಾದಿರಾಜರು,   ಶ್ರೀ ಸುರೇಂದ್ರರು, ಶ್ರೀ ರಘುನಾಥರು, ಶ್ರೀ ರಘುವರ್ಯರು, ಶ್ರೀ ಕನಕದಾಸರು,      ಶ್ರೀ ವೈಕುಂಟದಾಸರು, ಶ್ರೀಕೃಷ್ಣದೇವರಾಯ, ಅಣ್ಣಮಾಚಾರ್ಯ ಮುಂತಾದವರು.
  •  ಇಹಲೋಕ ತ್ಯಜಿಸಿದ ದಿನ – ರಕ್ತಾಕ್ಷಿ ಸಂವತ್ಸರ (೧೫೬೪), ಪುಷ್ಯಮಾಸ, ಅಮಾವಾಸ್ಯ, ಭಾನುವಾರ.
  •  ದಾಸರ ಮೂಲ – ನಾರದರು
  •  ದಾಸರು ಕೊನೆಯ ದಿನ ವಾಸಿಸಿದ ಸ್ಥಳ – ಹಂಪಿ
  •  ದಾಸರು ಸ್ವಪ್ನದಲ್ಲಿ ಅಂಕಿತ ನೀಡಿದ್ದು – ವಿಜಯದಾಸರಿಗೆ
  •  ದಾಸರ ಒಟ್ಟು ಕೃತಿಗಳು – ಅಂದಾಜು ೪೨೫೦೦೦
  •  ದಾಸರ ಸಾಹಿತ್ಯ ಪ್ರಕಾರಗಳು – ಸರಳೆವರಸೆ,  ಕೀರ್ತನೆ, ಉಗಾಭೋಗ, ಸುಳಾದಿ, ಗದ್ಯ, ಇತ್ಯಾದಿ
  •  ಉಪಲಬ್ದ ಕೃತಿಗಳು – ಸುಮಾರು ೨೦೦೦


ಮುಂಡಿಗೆ :
ವಹವ್ವಾರೆ ಮೆಣಸಿನಕಾಯಿ
ಒಣರೊಟ್ಟಿಗೆ ತಂದೆನೊ ತಾಯಿ | ಪ |
ಹುಟ್ಟುತಲಿ ಹಸಿರಾಗುತ ಕಂಡೆ
ನಟ್ಟನಡುವೆ ಕೆಂಪಾಗುತ ಕಂಡೆ
ಕಟ್ಟೆರಾಯನ ಬಹುರುಚಿಯೆಂಬೆ | ೧ |
ಒಂದೆರಡೆರದರೆ ಬಹುರುಚಿಯೆಂಬೆ
ಮೇಲೆರಡೆರೆದರೆ ಬಹು ಖಾರೆಂಬೆ ಅದೂ
ಎರಡೆರೆದರೆ ಅತಿ ಖಾರೆಂಬೆ | ೨ |
ಬಡವರಿಗೆಲ್ಲ ನಿನ್ನಾಧಾರ
ಅಡಿಗೆ ಊಟಕೆ ನಿನ್ನಾಸಾರ
ಬಾಯಲಿ ಕಡಿದರೆ ಬೆಂಕಿಯ ಖಾರ
ಪುರಂದರ ವಿಠಲನನೆನೆಯೋದುಭಾರ | ೩ |
ವಹವ್ವಾರೆ ಮೆಣಸಿನಕಾಯಿ 
ಪ್ರತಿಯೊಬ್ಬ ಜೀವಿಗಳು ವಿಚಿತ್ರ ಸ್ವಭಾವವುಳ್ಳವರಾಗಿರುತ್ತಾರೆ.  – ವಹವ್ವಾರೆ.     “ಬಹುಚಿತ್ರ ಜಗದ್ಬಹುದಾಕರಣಾತ್ ಪರಶಕ್ತಿರನಂತ ಗುಣ: ಪರಮ:”.   ಭೇದದಿಂದ ಕೂಡಿರುವ ಈ ಚಿತ್ರ ವಿಚಿತ್ರ ಜಗತ್ತನ್ನು ನೋಡಿಯಾದರೂ ಭಗವಂತನನ್ನು ಅರಿಯಬೇಕು.  ದಪ್ಪ ಮೆಣಸಿನಕಾಯಿ, ಖಾರ ಮೆಣಸಿನಕಾಯಿ, ಚಿಕ್ಕ ಮೆಣಸಿನಕಾಯಿ, ಬೋಂಡ ಮೆಣಸಿನಕಾಯಿ, ಬ್ಯಾಡಗಿ ಮೆಣಸಿನಕಾಯಿ, ಗುಂಟೂರು ಮೆಣಸಿನಕಾಯಿ ವಿಚಿತ್ರ ಆಕಾರ – ರುಚಿ ಹೇಗೆ ಚಿತ್ರ ವಿಚಿತ್ರವಾಗಿರತ್ತೋ ಅದೇ ರೀತಿ ಜೀವಿಗಳೆಲ್ಲ ಸಾತ್ವಿಕ ರಾಜಸ ತಾಮಸವೆಂದು ಭಿನ್ನರಾಗಿರುತ್ತಾರೆ.

ಒಣರೊಟ್ಟಿಗೆ ತಂದೆನೋ ತಾಯಿ : ಒಣರೊಟ್ಟಿ – ಸಾರರಹಿತ ಸಂಸಾರ; ತಾಯಿ – ಪ್ರಕೃತಿ ಮಾತೆ ಲಕ್ಷ್ಮೀದೇವಿ.
ಹುಟ್ಟುತಲೀ ಹಸಿರಾಗುತ ಕಂಡೆ : –  ಮೆಣಸಿನಕಾಯಿ ಹುಟ್ಟಿದಾಗ ಹಸಿರಾಗಿರುತ್ತೆ. ಹುಟ್ಟುವಾಗ (ಬಾಲ್ಯದಲಿ) ಸಂಸಾರದ ಹೊರೆ, ಮುಂದಿನ ಭಯ, ಯಾವುದೂ: ತಿಳಿಯದೆ ಜಗತ್ತು ಹಸಿರಾಗಿಯೇ ಕಂಡಿತು.
ನಟ್ಟನಡುವೆ ಕೆಂಪಾಗುತ ಕಂಡೆ : – ನಟ್ಟನಡುವೆ ಅಂದರೆ ತಾರುಣ್ಯದಲ್ಲಿ – ಬಿಸಿರಕ್ತವಿರುತ್ತದೆ. ಮೆಣಸಿನಕಾಯಿ ಕೆಂಪಾಗಿರುತ್ತೆ.  ಯೌವನ – ಕೋಪತಾಪಗಳ ಸಂಗಮ – ಲೌಕಿಕಾವಸ್ಥೆಯಲ್ಲಿ ಮುಳುಗಿ ಭಗವಂತನನ್ನೇ ಮರೆತಿರುತ್ತೇವೆ.
ಕಟ್ಟೆರಾಯನ ಬಲುರುಚಿಯೆಂಬೆ – ಕಟ್ಟೆರಾಯ ಅಂದರೆ ಭವಂತನಿರುವವರೆಗೂ ಯೌವ್ವನದ ಹಾರಾಟ ನಡೆಯುತ್ತಿರುತ್ತೆ.  ತಟ್ಟೇರಾಯನಂತೆ ತಾನು ಅಸ್ವತಂತ್ರನಾದರೂ ಸ್ವತಂತ್ರನಾದ ಕಟ್ಟೆಯ (ಸಿಂಹಾಸನ) ಮೇಲೆ ಕುಳಿತಿರುವನಂತೆ ತಿಳಿದು ಹಾಳಾಗುವುದು.  ಈ ಸಾಂಸಾರಿಕ ವಿಷಯ ವಸ್ತುಗಳು ವಿಷದಂತಿದ್ದರೂ ಅರ್ಥವಾಗದೆ ಬಲುರುಚಿಯಾಗಿದೆ ಎಂದೇ ಭ್ರಮಿಸುವೆವು.  ಇದನ್ನೇ ಕಟ್ಟೇರಾಯನಿಗೆ ಬಲುರುಚಿಯೆಂಬೆ ಎಂದಿದ್ದಾರೆ.
ಒಂದೆರಡೆರೆದರೆ ಬಹುರುಚಿಯೆಂಬೆ – (ಒಂದು + ಎರಡು = ಮೂರು) ಈ ಸಂಸಾರದಲ್ಲಿ ಯೌವ್ವನ, ಮದದ ಜೊತೆಗೆ ಹಾಳು ಮಾಡಲು ಕಾಮ, ಕ್ರೋಧ, ಲೋಭಗಳು (ಅಂದರೆ ಒಂದರ ಜೊತೆಗೆ ಇನ್ನೊಂದೆರಡು ಮೆಣಸಿನಕಾಯಿ ಸೇರಿಸಿದರೆ) ಬಹುರುಚಿಯೆಂಬಂತೆ ಇರುತ್ತೆ ಈ ಸಂಸಾರ.
ಅದು ಎರಡೆರದರೆ ಅತಿ ಖಾರೆಂಬೆ –  ಈ ಕಾಮ ಕ್ರೋಧಾದಿಗಳ ಜೊತೆ ಇನ್ನೂ ಎರಡು ಮೆಣಸಿನಕಾಯಿ ಸೇರಿದರೆ ( ೩  ೨ = ೬) ಕಾಮಕ್ರೋಧಾದಿ ಆರು ಸೇರಿದರೆ, ಭಗವಂತನ ಸ್ಮರಣೆಯೇ ಇಲ್ಲದೇ ತಾನೇ ಸರ್ವ ಸ್ವತಂತ್ರವೆಂಬ ದುರಹಂಕಾರ ಬಂದು ಮೆರೆವಾಗ, ಇನ್ನೊಬ್ಬ ಬಲಿಷ್ಟನಿಂದ ಅವಮಾನವಾದಾಗ ಬಹುಖಾರೆಂಬ ಅವಮಾನವಾಯಿತು.
ಅದು ಎರಡೆರದರೆ ಅತಿ ಖಾರೆಂಬೆ –  ಈ ಕಾಮಕ್ರೋಧಾದಿಗಳ ಜೊತೆಗೆ ಇನ್ನೂ ಎರಡು ಮೆಣಸಿನಕಾಯಿಗಳು ಸೇರಿದರೆ (೬ + ೨ = ೮) ಅಷ್ಟ ಮದಗಳೂ ಸೇರಿದ್ದರೆ, ಅಂದರೆ ಯೌವ್ವನ, ಧನ, ಅಧಿಕಾರ, ಅವಿವೇಕಾದಿಗಳೂ ಸೇರಿದ್ದರೆ; ಇವುಗಳಲ್ಲಿ ಒಂದೊಂದಿದ್ದರೂ ಅನರ್ಥಕಾರಿ.  ಎಲ್ಲವೂ ಸೇರಿದರೆ ಕೇಳುವುದೇ ಬೇಡ. ಬಡವರಿಗೆಲ್ಲಾ ನಿನ್ನಾಧಾರ – ಭಗವಂತನ ಭಕ್ತರಾದ ಕುಚೇಲ ಮೊದಲಾದವರಿಗೆಲ್ಲ ನಿನ್ನ ನಾಮವೇ ಆಧಾರ.  ಭೋಜನ ಮಾಡುವಾಗಲೂ ಗೋವಿಂದ ಎಂದು ಉಚ್ಚರಿಸುತ್ತಾ ಭುಂಜಿಸಬೇಕು.  ಅಡಿಗೆ ಮಾಡುವಾಗಲೂ ಭಗವಂತನ ನಾಮೋಚ್ಚಾರಣ ಪೂರ್ವಕ ಮಾಡಬೇಕು.
ಬಾಯಲ್ಲಿ ಕಡಿದರೆ ಬೆಂಕಿಯ ಖಾರ –  ಬಾಯಲ್ಲಿ ಮೆಣಸಿನಕಾಯಿ ಕಡಿದರೆ ಹೇಗೆ ಖಾರದಿಂದ ಭಗವಂತನ ಸ್ಮರಣೆ ಕಷ್ಟವೋ, ಹಾಗೆ ಸಂಸಾರಿಕ ವಿಷಗಳಿಂದ ಕಾಮಕ್ರೋಧಾದಿ ಕಿಚ್ಚುಗಳಿಂದ ಪುರಂದರ ವಿಠಲನ ನೆನೆಯೋದು ಅತಿ ಪ್ರಯಾಸಕರವಾದದ್ದು.  ಆದ್ದರಿಂದ ಈ ಮೆಣಸಿನಕಾಯಿಯಂತೆ ಭಗವಂತರನ್ನು ಮರೆಸುವ ಈ ವಿಷಯ ಪದಾರ್ಥಗಳನ್ನು ತೊರೆದು, ಭಗವನ್ನಾಮಾಮೃತವನ್ನು ಪಾನ ಮಾಡಿರಿ ಎಂದಿದ್ದಾರೆ ಪುರಂದರ ದಾಸರು.
(Source for Mundige :  Dr Chaturvedi Vedavyasacharya)
***********


ಶ್ರೀ ಪುರಂದರದಾಸರು (೧೪೮೦ – ೧೫೬೪)[೧] ಕರ್ನಾಟಕ ಸಂಗೀತ ಪದ್ಧತಿಯ ಪಿತಾಮಹ ಎಂದು ಹೆಸರಾದವರು. ದಾಸ ಪದ್ಧತಿಯ ಅನೇಕ ಪ್ರಮುಖರಲ್ಲಿ ಮುಖ್ಯವಾಗಿ ಪುರಂದರದಾಸ, ಶ್ರೀಪಾದರಾಯ, ಕನಕದಾಸ, ಜಗನ್ನಾಥದಾಸ, ವಿಜಯದಾಸ ಮತ್ತು ಕಮಲೇಶ ವಿಠ್ಠಲ ಮೊದಲಾದವರು ಸಂಗೀತದ ಮೂಲಕ ಭಕ್ತಿಮಾರ್ಗವನ್ನು ಬೋಧಿಸಿದವರು. ಪುರಂದರದಾಸರ ಎಲ್ಲ ಕೀರ್ತನೆಗಳು ಪುರಂದರ ವಿಠ್ಠಲನನ್ನು (ವಿಷ್ಣು) ನಮಿಸುತ್ತಾ ಕೊನೆಗೊಳ್ಳುತ್ತವೆ. ಸಾವಿರಾರು ಕೀರ್ತನೆಗಳನ್ನು ರಚಿಸಿದ ಪುರಂದರದಾಸರ ಸುಮಾರು ೧೦೦೦ ಕೀರ್ತನೆಗಳು ಇಂದಿಗೂ ಉಳಿದಿವೆ.

ಪುರಂದರದಾಸರು

ದಾಸರ ಕಾಲ – 1480 – 1564
ಗೋತ್ರ         – ವಸಿಷ್ಟ ಗೋತ್ರ
 ವೇದ ಶಾಖ   – ಯಜುರ್ವೇದ
 ಕುಲದೈವ     – ತಿರುಪತಿ ವೆಂಕಟರಮಣ
 ತಂದೆ         – ಶ್ರೀ ವರದಪ್ಪ ನಾಯಕ
 ಮೂಲಸ್ಥಳ    – ಪುರಂದರಘಡ
 ತಂದೆಯ ವೃತ್ತಿ- ರತ್ನಪುಡಿ ವ್ಯಾಪಾರ
 ಜನ್ಮನಾಮ    – ಶ್ರೀನಿವಾಸ, ಶ್ರೀನಿವಾಸ ನಾಯಕ
 ಧರ್ಮಪತ್ನಿ   – ಸರಸ್ವತಿಬಾಯಿ
 ಮಕ್ಕಳು       – ನಾಲ್ಕು (ವರದಪ್ಪ, ಗುರುರಾಯ, ಅಭಿನವಪ್ಪ, ಮಧ್ವಪತಿ)
 ಇವರನ್ನು ಜನರು ಕರೆಯುತ್ತಿದುದು – ನವಕೋಟಿ ನಾರಾಯಣ
 ಇವರ ಪರಿವರ್ತನೆ – ಶ್ರೀಹರಿಯಿಂದ (ವೃದ್ಧ ಬ್ರಾಹ್ಮಣವೇಶದಿಂದ)
 ವೃದ್ಧ ಬ್ರಾಹ್ಮಣ ಯಾಚಿಸಿದ್ದು – ಮಗನ ಉಪನಯನಕ್ಕೆ ಸಹಾಯ
 ಬ್ರಾಹ್ಮಣ ಅಲೆದಾಡಿದ ಕಾಲ – ೬ ತಿಂಗಳ
 ಶ್ರೀನಿವಾಸ ನಾಯಕ ನೀಡಿದ್ದು – ಒಂದು ಸವಕಲು ನಾಣ್ಯ
 ಸರಸ್ವತೀಬಾಯಿಗೆ ಬ್ರಾಹ್ಮಣ ನೀಡಿದ್ದು – ಮೂಗುತಿ
 ವಿಷಪಾನ ಮಾಡಲು ಹೋದ ಸರಸ್ವತಿಬಾಯಿಗೆ ಮೂಗುತಿ ಸಿಕ್ಕಿದ್ದು – ವಿಷದ ಬಟ್ಟಲಿನಲ್ಲಿ
 ದಾಸವೃತ್ತಿಗೆ ಕಾರಣ – ಭಗವಂತನ ಲೀಲೆ, ವೈರಾಗ್ಯ – ಶ್ರೀಹರಿಯಲ್ಲಿ ಭಕ್ತಿ, ಸಂಸಾರದಲ್ಲಿ ವಿರಕ್ತಿ
 ಮುಂದಿನ ವೃತ್ತಿ – ಮಧುಕರವೃತ್ತಿ
 ಮಧುಕರವೃತ್ತಿಯ ಮತ್ತೊಂದು ಹೆಸರು – ಗೋಪಾಳ, ಯಾಯಾವಾರ
 ದಾಸದೀಕ್ಷೆ ನೀಡಿದ್ದು – ಶ್ರೀ ವ್ಯಾಸರಾಯರು
 ಲಭ್ಯವಾದ ಅಂಕಿತ – ಪುರಂದರವಿಠಲ
ಪುರಂದರದಾಸರ ಆರಾಧ್ಯ ದೈವ – ಪಾಂಡುರಂಗ
ಅನುಸರಿಸಿದ ಸಿದ್ಧಾಂತ – ಮಧ್ವಸಿದ್ಧಾಂತ
ಪ್ರಕಾರ/ಶೈಲಿ
ಕೀರ್ತನೆ, ಉಗಾಭೋಗ, ಪಿಳ್ಳಾರಿ ಗೀತೆಗಳು
ಇಹಲೋಕ ತ್ಯಜಿಸಿದ ದಿನ – ರಕ್ತಾಕ್ಷಿ ಸಂವತ್ಸರ (೧೫೬೪), ಪುಷ್ಯಮಾಸ, ಅಮಾವಾಸ್ಯ, ಭಾನುವಾರ.

 ದಾಸರ ಮೂಲ – ನಾರದರು
 ದಾಸರು ಕೊನೆಯ ದಿನ ವಾಸಿಸಿದ ಸ್ಥಳ – ಹಂಪಿ
 ದಾಸರು ಸ್ವಪ್ನದಲ್ಲಿ ಅಂಕಿತ ನೀಡಿದ್ದು – ವಿಜಯದಾಸರಿಗೆ
 ದಾಸರ ಒಟ್ಟು ಕೃತಿಗಳು – ಅಂದಾಜು ೪೨೫೦೦೦

 ದಾಸರ ಸಾಹಿತ್ಯ ಪ್ರಕಾರಗಳು – ಸರಳೆವರಸೆ,  ಕೀರ್ತನೆ, ಉಗಾಭೋಗ, ಸುಳಾದಿ, ಗದ್ಯ, ಇತ್ಯಾದಿ

ವ್ಯಾಸರಾಜರು ದಾಸರ ಕೃತಿಗಳಿಗೆ ನೀಡಿದ ಗೌರವ – “ಪುರಂದರೋಪನಿಷತ್”
ಸಂಗೀತ ಪ್ರಪಂಚದಲ್ಲಿ ಪುರಂದರ ದಾಸರ ಗೌರವ – ಕರ್ನಾಟಕ ಸಂಗೀತ ಪಿತಾಮಹ
ದಾಸರೆಂದರೆ ಪುರಂದರದಾಸರಯ್ಯ ಎಂದವರು – ಶ್ರೀ ವ್ಯಾಸರಾಜರು

ಪುರಂದರ ದಾಸರ ಮಕ್ಕಳ ಅಂಕಿತಗಳು – ವರದ ಪುರಂದರ ವಿಠಲ (ವರದಪ್ಪ), ಗುರುಪುರಂದರ (ಗುರುರಾಯ), ಅಭಿನವಪುರಂದರ (ಅಭಿನವಪ್ಪ), ಗುರುಮಧ್ವಪತಿವಿಠಲ (ಮಧ್ವಪತಿ).


ಸಮಕಾಲೀನರು – ಶ್ರೀ ವ್ಯಾಸರಾಜರು, ಶ್ರೀ ವಿಜಯೀಂದ್ರರು, ಶ್ರೀ ವಾದಿರಾಜರು,   ಶ್ರೀ ಸುರೇಂದ್ರರು, ಶ್ರೀ ರಘುನಾಥರು, ಶ್ರೀ ರಘುವರ್ಯರು, ಶ್ರೀ ಕನಕದಾಸರು,      ಶ್ರೀ ವೈಕುಂಟದಾಸರು, ಶ್ರೀಕೃಷ್ಣದೇವರಾಯ, ಅಣ್ಣಮಾಚಾರ್ಯ ಮುಂತಾದವರು.



ಪುರಂದರದಾಸರು

ಇವರ ಮೊದಲ ಹೆಸರು ಶ್ರೀನಿವಾಸ ನಾಯಕ, ಜನ್ಮ ಸ್ಥಳ ಪುರಂದರಗಡ, ತಂದೆ ವರದಪ್ಪನಾಯಕ, ತಾಯಿ ಲಕ್ಷ್ಮಿದೇವಿ. ಪುರಂದರದಾಸರ ತಂದೆ ವರದಪ್ಪ ನಾಯಕ ಲೇವಾದೇವಿ ವೃತ್ತಿಯಲ್ಲಿದ್ದವರು. ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ ತಿರುಪತಿ ಶ್ರೀನಿವಾಸನಿಗೆ ಪ್ರಾರ್ಥನೆ ಸಲ್ಲಿಸಿದ ಮೇಲೆ ಮಗುವಾಯಿತು ಎಂಬ ನಂಬಿಕೆಯಿದೆ. ಇದರಿಂದಲೇ ಅವರು ಮಗನಿಗೆ ಶ್ರೀನಿವಾಸ ಎಂದು ಹೆಸರಿಟ್ಟರಂತೆ.

ವೈರಾಗ್ಯ ಸಂಪಾದಿಸಿ
ಶ್ರೀನಿವಾಸ ನಾಯಕ ಬೆಳೆದ ನಂತರ ತಂದೆಯ ವೃತ್ತಿಯನ್ನೇ ಮುಂದುವರಿಸಿದ. ಆದರೆ ಅತ್ಯಂತ ಜಿಪುಣನೆಂದು ಹೆಸರಾದ ಶ್ರೀನಿವಾಸ, ತಂದೆ ಅಸ್ವಸ್ಥರಾದಾಗಲೂ ಹಣ ಖರ್ಚು ಮಾಡಲು ತಡೆದನಂತೆ. ಶ್ರೀನಿವಾಸನ ಪತ್ನಿ ಸರಸ್ವತಿ ದಾನಶೀಲೆಯಾಗಿ, ಪತಿಯ ಕೋಪ ಅವಳ ಮೇಲೆ ಬೀಳುತ್ತಿತ್ತು ಎಂದು ಹೇಳುತ್ತಾರೆ. ಅವರ ಸಂಸಾರ ಮೂಲತಃ ಪಂಡರಾಪುರ/ ಪಂಡರಾಪುರದಲ್ಲಿದ್ದರೂ ಶ್ರೀನಿವಾಸ ನಂತರದ ವರ್ಷಗಳಲ್ಲಿ ಹಂಪೆಯಲ್ಲಿದ್ದನೆಂದು ತೋರುತ್ತದೆ.

ಐತಿಹ್ಯ ಸಂಪಾದಿಸಿ
ವಿಠ್ಠಲ (ವಿಷ್ಣು) ಬಡ ಬ್ರಾಹ್ಮಣನ ವೇಷದಲ್ಲಿ ಒಮ್ಮೆ ಶ್ರೀನಿವಾಸನ ಅಂಗಡಿಗೆ ಬಂದು ಮಗನ ಉಪನಯನಕ್ಕೆ ಹಣ ಬೇಡಿದನಂತೆ. ಜಿಪುಣ ಶ್ರೀನಿವಾಸ ಪ್ರತಿ ದಿನವೂ ಮಾರನೆಯ ದಿನ ಬರಹೇಳುತ್ತ, ಆರು ತಿಂಗಳುಗಳ ಕಾಲ ಮುಂದೆ ಹಾಕಿದನಂತೆ. ಕೊನೆಗೆ ಬ್ರಾಹ್ಮಣನ ಕಾಟ ತಡೆಯಲಾರದೆ ಒಂದು ಸವಕಲು ನಾಣ್ಯವನ್ನು ಕೊಟ್ಟನಂತೆ. ವಿಠ್ಠಲ ಈಗ ಶ್ರೀನಿವಾಸನ ಮನೆಗೆ ತೆರಳಿ ಆರು ತಿಂಗಳುಗಳ ಕಾಲ ಒಬ್ಬ ವರ್ತಕ ತನ್ನನ್ನು ಸತಾಯಿಸಿ ಕೊನೆಗೆ ಸವಕಲು ನಾಣ್ಯ ಕೊಟ್ಟ ಕಥೆ ಹೇಳಿದನಂತೆ. ಮಾರನೇ ದಿನ ಅದೇ ಬ್ರಾಹ್ಮಣ ಮನೆಗೆ ಬಂದು ಸರಸ್ವತಿಯ ಬಳಿ ತನ್ನ ಮಗನ ಉಪನಯನದ ಬಗ್ಗೆ ಹೇಳಿ ಅವಳಿಂದ ಸಹಾಯ ಯಾಚಿಸುತ್ತಾನೆ. ಸರಸ್ವತಿ ಮರುಕದಿಂದ ತನ್ನ ಬಳಿ ಯವುದೇ ಧನ ಆಭರಣಗಳಿಲ್ಲ ಎಲ್ಲವೂ ತನ್ನ ಗಂಡನ ಬಳಿ ಇದೆ. ಅವರ ಅನುಮತಿ ಇಲ್ಲದೇ ಏನನ್ನೂ ಕೊಡುವ ಪರಿಸ್ಥಿತಿಯಲ್ಲಿಲ್ಲ ಎಂದು ಬೇಸರ ಪಡುತ್ತಾಳೆ. ಆಗ ಆ ಬ್ರಾಹ್ಮಣ ನಿನ್ನ ತವರಿನಲ್ಲಿ ನಿನಗೆ ಕೊಟ್ಟ ಮೂಗುತಿಯ ಮೇಲೆ ನಿನ್ನ ಅಧಿಕಾರವಿದೆ. ಅದನ್ನೇ ಕೊಡು ಎಂದಾಗ, ಅವನಿಗೆ ತನ್ನ ಮೂಗುತಿಯನ್ನು ತೆಗೆದು ಕೊಟ್ಟಳಂತೆ. ಬ್ರಾಹ್ಮಣ ತಕ್ಷಣ ಮೂಗುತಿಯನ್ನು ಶ್ರೀನಿವಾಸನ ಅಂಗಡಿಗೆ ಒಯ್ದು ಅದನ್ನು ಅಡವಿಡಲು ಪ್ರಯತ್ನಿಸಿದನಂತೆ. ಶ್ರೀನಿವಾಸ ಆ ಮೂಗುತಿಯನ್ನು ಗುರುತಿಸಿ, ಹಣಕ್ಕೆ ನಾಳೆ ಬರುವಂತೆ ಬ್ರಾಹ್ಮಣನಿಗೆ ಹೇಳಿ, ಅದನ್ನು ಡಬ್ಬಿಯಲ್ಲಿಟ್ಟು ತಕ್ಷಣ ಮನೆಗೆ ಬಂದು ಪತ್ನಿಯ ಬಳಿ ಮೂಗುತಿಯನ್ನು ತೋರಿಸಲು ಹೇಳಿದನಂತೆ. ಹೆದರಿದ ಹೆಂಡತಿ ಸ್ನಾನ ಮಾಡುವಾಗ ತೆಗೆದಿಟ್ಟಿದ್ದೆ, ತರುತ್ತೇನೆಂದು ಒಳಗೆ ಹೋಗಿ, ಸ್ನಾನ ಕೊಠಡಿಯಲ್ಲಿ ವಿಷ ಕುಡಿಯುವ ಪ್ರಯತ್ನ ನಡೆಸಿದಾಗ ಅವಳ ವಿಷದ ಬಟ್ಟಲಿನೊಳಕ್ಕೆ ಮೇಲಿನಿಂದ ಮೂಗುತಿ ಬಿದ್ದಿತಂತೆ. ಅದನ್ನು ತಂದು ಶ್ರೀನಿವಾಸನಿಗೆ ಕೊಡುತ್ತಾಳೆ. ಅಂಗಡಿಗೆ ಹಿಂದಿರುಗಿ ಬಂದ ಶ್ರೀನಿವಾಸ ಡಬ್ಬಿಯನ್ನು ತೆಗೆದು ನೋಡಿದರೆ ಅಲ್ಲಿ ಇಟ್ಟಿದ್ದ ಮೂಗುತಿ ಮಾಯವಾಗಿತ್ತಂತೆ. ಆಗ ಅವನಿಗೆ ಬಂದ ಬ್ರಾಹ್ಮಣ ಬೇರೆ ಯಾರೂ ಅಲ್ಲ, ತನ್ನನ್ನು ಪರೀಕ್ಷಿಸಲು ಸ್ವತಃ ನಾರಾಯಣನೇ ಬ್ರಾಹ್ಮಣ ವೇಷದಲ್ಲಿ ಬಂದಿದ್ದನೆಂದು ಅರಿತು, ತನ್ನ ಬಗ್ಗೆ ತಾನೇ ನಾಚಿಕೆ ಪಟ್ಟುಕೊಂಡ ಶ್ರೀನಿವಾಸ, ತನ್ನ ಶ್ರೀಮಂತಿಕೆಯನ್ನು ತೊರೆದು ಹರಿದಾಸನಾಗುವ ನಿರ್ಧಾರ ತೆಗೆದುಕೊಂಡನಂತೆ. ದೇವರು ದಾರಿ ತೋರಿಸಿದ್ದರ ಬಗ್ಗೆ ಕೃತಜ್ಞತೆಗಾಗಿ ತಮ್ಮ ಹೆಂಡತಿಯ ಜ್ಞಾಪಕಾರ್ಥ ಒಂದು ಕೀರ್ತನೆಯನ್ನೂ ಪುರಂದರದಾಸರು ರಚಿಸಿದ್ದಾರೆ. ನಂತರ ಶ್ರೀನಿವಾಸ ನಾಯಕ 'ಪುರಂದರದಾಸ' ಎಂಬ ಹೆಸರನ್ನು ಪಡೆದರು.

ತಮ್ಮ ಹೆಂಡತಿಯ ಜ್ಞಾಪಕಾರ್ಥ ರಚಿಸಿದ ಕೀರ್ತನೆ ಸಂಪಾದಿಸಿ
ಆದದ್ದೆಲ್ಲ ಒಳಿತೆ ಆಯಿತು
ರಚನೆ: ಶ್ರೀ ಪುರಂದರದಾಸರು
ರಾಗ : ಪಂತುರಾವಳಿ ; ತಾಳ : ಆದಿತಾಳ
ಆದದ್ದೆಲ್ಲ ಒಳಿತೆ ಆಯಿತು ನಮ್ಮ
ಶ್ರೀಧರ ಸೇವೆ ಮಾಡಲು ಸಾಧನ ಸಂಪತ್ತಾಯಿತು;

ದಂಡಿಗೆ ಬೆತ್ತ ಹಿಡಿಯೊದಕ್ಕೆ
ಮಂಡೆ ಮಾಚಿ ನಾಚುತಲಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ ಹಿಡಿಸಿದಳಯ್ಯ

ಗೋಪಾಳ ಬುಟ್ಟಿ ಹಿಡಿಯೊದಕ್ಕೆ
ಭೂಪತಿಯಂತೆ ಗರ್ವಿಸುತಿದ್ದೆ
ಆ ಪತ್ನೀ ಕುಲ ಸಾವಿರವಾಗಲಿ
ಗೋಪಾಳ ಬುಟ್ಟಿ ಹಿಡಿಸಿದಳಯ್ಯ

ತುಳಸಿ ಮಾಲೆ ಹಾಕುವುದಕ್ಕೆ
ಅರಸನಂತೆ ನಾಚುತಲಿದ್ದೆ
ಸರಸಿಜಾಕ್ಷ ಪುರಂದರ ವಿಠ್ಠಲ
ತುಳಸಿ ಮಾಲೆ ಹಾಕಿಸಿದನಯ್ಯ

ಕವಿ ಮತ್ತು ಸಂಗೀತಗಾರ ಸಂಪಾದಿಸಿ

ಪುರಂದರದಾಸರ ಪದಗಳು ಪ್ರಾಸ ಮತ್ತು ಅರ್ಥದಲ್ಲಿ ಶ್ರೀಮಂತವಾಗಿವೆ. ಉದಾಹರಣೆಗೆ:

"ಕುದುರೆ ಅಂದಣ ಆನೆ ಬಯಸೋದು ನರಚಿತ್ತ
ಪಾದಚಾರಿ ಆಗೋದು ಹರಿ ಚಿತ್ತವಯ್ಯ"

ಪುರಂದರದಾಸರ ಪದಗಳು ಮುಂದೆ ಕರ್ನಾಟಕ ಸಂಗೀತ ಪದ್ಧತಿಯ ಬುನಾದಿಯಾದವು. ಶಾಸ್ತ್ರೀಯ ಸಂಗೀತವನ್ನು ಶ್ರೀ ಸಾಮಾನ್ಯನಿಗೆ ಪರಿಚಯ ಮಾಡಿಕೊಡಲು ಯತ್ನಿಸಿದ ಪುರಂದರದಾಸರು ಮಾಯಾಮಾಳವಗೌಳ ರಾಗದಿಂದ ಹಿಡಿದು ಹೊಸಬರಿಗೆ ಶಾಸ್ತ್ರೀಯ ಸಂಗೀತವನ್ನು ಕಲಿಸಿ ಕೊಡುವ ದಾರಿಯ ಬಗೆಗೆ ಯೋಚಿಸಿದರು. ಈಗಲೂ ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತದ ಪಾಠಗಳು ಪುರಂದರದಾಸರ ಸರಳೆ, ಜಂಟಿ ವರಸೆಗಳೊಂದಿಗೇ ಆರಂಭಿಸಲ್ಪಡುತ್ತವೆ.
ಕವಿ ಮತ್ತು ಸಂಗೀತಗಾರ ಸಂಪಾದಿಸಿ

ಪುರಂದರದಾಸರ ಪದಗಳು ಪ್ರಾಸ ಮತ್ತು ಅರ್ಥದಲ್ಲಿ ಶ್ರೀಮಂತವಾಗಿವೆ. ಉದಾಹರಣೆಗೆ:

"ಕುದುರೆ ಅಂದಣ ಆನೆ ಬಯಸೋದು ನರಚಿತ್ತ
ಪಾದಚಾರಿ ಆಗೋದು ಹರಿ ಚಿತ್ತವಯ್ಯ"

ಪುರಂದರದಾಸರ ಪದಗಳು ಮುಂದೆ ಕರ್ನಾಟಕ ಸಂಗೀತ ಪದ್ಧತಿಯ ಬುನಾದಿಯಾದವು. ಶಾಸ್ತ್ರೀಯ ಸಂಗೀತವನ್ನು ಶ್ರೀ ಸಾಮಾನ್ಯನಿಗೆ ಪರಿಚಯ ಮಾಡಿಕೊಡಲು ಯತ್ನಿಸಿದ ಪುರಂದರದಾಸರು ಮಾಯಾಮಾಳವಗೌಳ ರಾಗದಿಂದ ಹಿಡಿದು ಹೊಸಬರಿಗೆ ಶಾಸ್ತ್ರೀಯ ಸಂಗೀತವನ್ನು ಕಲಿಸಿ ಕೊಡುವ ದಾರಿಯ ಬಗೆಗೆ ಯೋಚಿಸಿದರು. ಈಗಲೂ ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತದ ಪಾಠಗಳು ಪುರಂದರದಾಸರ ಸರಳೆ, ಜಂಟಿ ವರಸೆಗಳೊಂದಿಗೇ ಆರಂಭಿಸಲ್ಪಡುತ್ತವೆ. ಪುರಂದರದಾಸರ 'ಪಿಳ್ಳಾರಿ ಗೀತೆಗಳು' (ಉದಾ: ಲಂಬೋದರ ಲಕುಮಿಕರ...., ಕೆರೆಯ ನೀರನು ಕೆರೆಗೆ ಚೆಲ್ಲಿ.....ಇತ್ಯಾದಿ) ಸಂಗೀತದ ಸ್ವರ- ಸಾಹಿತ್ಯ- ತಾಳಗಳ ಸಂಯೋಜನೆಯನ್ನು ಅಭ್ಯಸಿಸಲು ಮೊದಲ ಮೆಟ್ಟಿಲು. ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ ಶ್ರೀ ತ್ಯಾಗರಾಜರು ತಮ್ಮ "ಪ್ರಹ್ಲಾದ ಭಕ್ತಿ ವಿಜಯಮ್" ಎಂಬ ಲೇಖನದಲ್ಲಿ ಶ್ರೀ ಪುರಂದರ ದಾಸರನ್ನು ತಮ್ಮ ಸಂಗೀತ ಗುರುಗಳೆಂದು ಹೇಳಿಕೊಂಡಿದ್ದಾರೆ. ಹರಿನಾಮಸ್ಮರಣೆಯ ರೂಪದಲ್ಲಿ ರಚಿಸಿದ ಅವರ ಕೃತಿಗಳು ದೇವರನಾಮಗಳಾಗಿ ಪ್ರಸಿದ್ಧವಾಗಿವೆ. ಅವರ ಹರಿಭಕ್ತಿ ಹಾಗೂ ಸಂಗೀತದಲ್ಲಿನ ಪಾಂಡಿತ್ಯ ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವಾದ ಸ್ಥಾನವನ್ನು ಪಡೆದು ದಾಸ ಸಾಹಿತ್ಯವನ್ನು ಶ್ರೀಮಂತವಾಗಿಸಿವೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರಾದ ಪುರಂದರದಾಸರ ಸಾಧನೆಯನ್ನು ಕಂಡ ಸರ್ವರೂ 'ದಾಸರೆಂದರೆ ಪುರಂದರದಾಸರಯ್ಯಾ..!' ಎಂದು ಕೊಂಡಾಡಿದ್ದಾರೆ. ಇವರ ಎಲ್ಲ ಕೀರ್ತನೆಗಳೂ ಕನ್ನಡ  ಭಾಷೆಯಲ್ಲಿದ್ದು, ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ. ಕರ್ನಾಟಕ ಸಂಗೀತಗಾರರಲ್ಲಿ ಪುರಂದರದಾಸರ ಕೀರ್ತನೆಗಳ ಪರಿಚಯ ಇಲ್ಲದವರು ಇಲ್ಲವೇ ಇಲ್ಲವೆನ್ನಬಹುದು. ಶ್ರೀ ಪುರಂದರದಾಸರು ೫ ಲಕ್ಷ ಹಾಡುಗಳನ್ನು ರಚನೆ ಮಾಡಬೇಕೆಂಬ ಉದ್ದೇಶವಿಟ್ಟುಕೊಂಡಿದ್ದರು; ಅವರು ೪,೭೫,೦೦೦ ಹಾಡುಗಳನ್ನು ರಚನೆ ಮಾಡಿ ಅವತಾರ ಮುಗಿಸಿದರು; ಅವರ ಮಗ ಮಧ್ವಪತಿದಾಸರು ಉಳಿದ ೨೫,೦೦೦ ಹಾಡುಗಳನ್ನು ರಚನೆ ಮಾಡಿದರು ಎಂದು ಹೇಳಲಾಗುತ್ತಿದೆ.


*****
*
ಪುರಂದರ ನಮನ 🙏🏼🙏🏼


ಭಾರತದ ವೇದ ಸಾಹಿತ್ಯ ಕ್ಕೆ ಸಮಾನವಾದ  ಮತ್ತೊಂದು ಸಾಹಿತ್ಯ ವೆಂದರೆ ಅದು ದಾಸಸಾಹಿತ್ಯ.ವಿಶಾಲವಾದ ಮನೋಜ್ಞವಾದ  ಈ ದಾಸಸಾಹಿತ್ಯಾಕಾಶ ದಲ್ಲಿ ಮಿನುಗುತ್ತಿರುವ ನಕ್ಷತ್ರ ಪುರಂದರ ದಾಸರು

ಹರಿದಾಸ ರಲ್ಲಿ  ಅಗ್ರಗಣ್ಯ  ರಾಗಿರುವ ಪುರಂದರದಾಸರು ಕನ್ನಡ ನಾಡಿನಲ್ಲಿ ಪಂಡಿತರಿಂದ ಪಾಮರರವರೆಗೂ ಜನಪ್ರಿಯ ಹೆಸರು,ಇವರ ಕೀರ್ತನೆಗಳನ್ನು  ಕೇಳದ  ಕನ್ನಡಿಗನು  ಇಲ್ಲವೇ ಇಲ್ಲ ಎಂದು ಹೇಳಬಹುದು.

ಅತ್ಯಂತ ಲೋಭಿಯೂ ಜಿಪುಣಾಗ್ರೇಸರಾಗಿದ್ದ  ಶ್ರೀನಿವಾಸನಾಯಕರು ಧನಾರ್ಜನೆಯೇ ಸರ್ವಸ್ವ  ಎಂದು ತಿಳಿದಿದ್ದರು,ಧರ್ಮ ಸ್ವಭಾವದವಳು ಸ್ಸನ್ನಡೆತೆಯ ಪತ್ನಿ ಮತ್ತು ಭಗವಂತ ನ ಪ್ರೇರಣೆಯಿಂದ  ಎಲ್ಲವನ್ನೂ ತ್ಯಜಿಸಿ  ಯೋಗಿಯಾಗಿ ದಾಸರಾದರು.



ಇವರು ಕರ್ನಾಟಕ ಸಂಗೀತ ಕ್ಷೇತ್ರ ಕ್ಕೆ ಕೊಟ್ಟಿರುವ ಕೊಡುಗೆ ಅಗಾಧ.ಸಂಗೀತ ವಿದ್ಯಾರ್ಥಿ ಗಳಿಗೆ ಪ್ರಾರಂಭಿಕ ಅಭ್ಯಾಸಗಳನ್ನೂ ಪಿಳ್ಳಾರಿ   ಗೀತೆ ಗಳು  ಉಗಾಭೋಗ  ಗಳು ಸುಮಾರು  4 ಲಕ್ಷ 75000 ಕ್ಕೂ ಅಧಿಕ ಕೀರ್ತನೆ ಗಳನ್ನು ರಚಿಸಿ ಕರ್ನಾಟಕ ಸಂಗೀತ ಪಿತಾಮಹ  ಎನಿಸಿದ್ದಾರೆ .

ದಾಸರು ಸಕಲರಿಗೂ  ಅರ್ಥವಾಗುವ ಸರಳ ಭಾಷೆ ಯಲ್ಲಿ ಗೀತೆ ಗಳನ್ನೂ ರಚಿಸಿರುವುದೇ ಅಲ್ಲದೆ ಗೀತೆ ಗಳಲ್ಲಿ ಭಕ್ತಿ ಪರವಶತೆ, ದೈವದ ಮಹತ್ವ ಕೃಷ್ಣನ  ಲೀಲೆಗಳು  ಸ್ಥಳ ಮಹಿಮೆಗಳನ್ನು ಒಳಗೊಂಡಿದೆ .ಅಷ್ಟೇ ಅಲ್ಲ ಅವರ ಗೀತೆ ಗಳಲ್ಲಿ ಸಮಾಜದ  ಅಂಕು ಡೊಂಕು ಗಳನ್ನು ತಿದ್ದುವ, ಡಾಂಭಿಕ  ಆಚರಣೆಗಳನ್ನು  ಧಿಕ್ಕರಿಸುವ  ಸ್ವಾರ್ಥ ಲೋಭ ಗಳನ್ನು ಖಂಡಿಸುವಂತೆ ಸ್ವಾರಸ್ಯಕರವಾಗಿ  ಹೊರಹೊಮ್ಮಿದೆ .

ಅವರ ಆರಾಧ್ಯ ದೈವ ಕೃಷ್ಣಾ  ಶಾಂತ ಹಾಸ್ಯ ಶೃಂಗಾರ  ಸಖ್ಯ ಮಧುರ ವಾತ್ಸಲ್ಯ   ಭಾವ ವನ್ನು ತಾವು ಅನುಭವಿಸಿ  ನಮಗೂ ಉಣಬಡಿಸಿ  ಗಂಧರ್ವ ಲೋಕದಲ್ಲಿ  ವಿಹರಿಸುವಂತೆ ಮಾಡಿದ್ದಾರೆ.

ಕಲಿಯುಗ ದಲ್ಲಿ ಭಕ್ತಿಯ  ಪ್ರಾಧಾನ್ಯತೆಯನ್ನು  ಪ್ರತಿಪಾದಿಸುತ್ತ,ವೇದಾಂತ  ಸಾರವನ್ನು  ತಿಳಿಸುತ್ತಾ,ಪ್ರತಿ ವ್ಯಕ್ತಿಗೂ  ಅನುಭವಕ್ಕೆ  ನಿಲುಕುವ  ವಾಸ್ತವ  ಸಂಗತಿಗಳನ್ನು ತಲುಪಿಸುತ್ತಾ,
ಸಾಹಿತ್ಯದ ಸ್ವಾರಸ್ಯ ಕ್ಕೆ ಸಂಗೀತದ ಸಾಮರಸ್ಯ  ಕೊಟ್ಟು ತಾಳ ಮೇಳ ನಾದಗಳನ್ನು ಒಳಗೊಂಡ ಅವರ  ಹಾಡುಗಳ ಕೊಡುಗೆ ಅನನ್ಯ ಅಪೂರ್ವ ಅವಿಸ್ಮರಣೀಯ.

ದಾಸರ ಗುರುಗಳಾದ  ಶ್ರೀ ವ್ಯಾಸರಾಯರು  ತಮ್ಮ ಶಿಷ್ಯ ನ ಬಗ್ಗೆ  ದಾಸರೆಂದರೆ  ಪುರಂದರ ದಾಸರಯ್ಯ  ಎಂದು ಹಾಡಿ ಹೊಗಳಿದರೆ
ಅವರ ಶಿಷ್ಯ ರಾದ ಶ್ರೀ ವಿಜಯ ದಾಸರು ಗುರು ಪುರಂದರದಾಸರೇ ನಿಮ್ಮ ಚರಣ ಕಮಲ ನಂಬಿದೆ  ಎಂದು ಹಾಡಿ ತಮ್ಮ ಗುರು ವಂದನೆ ಸಲ್ಲಿಸಿದ್ದಾರೆ.

ಪುರಂದರ ವಿಠ್ಠಲಾ ಎಂಬ ಅಂಕಿತ ದಿಂದ ಲೋಕ ಸಂಚರಿಸುತ್ತ  ಅವರ ಬಾಯಲ್ಲಿ ಹೊರಹೊಮ್ಮಿದ ಗೀತೆ ಗಳೆಲ್ಲಾ ಅನರ್ಘ್ಯ  ಮುತ್ತು ರತ್ನ ಗಳಾಗಿವೆ.
ಕರ್ನಾಟಕ ಸಂಗೀತ ಪಿತಾಮಹ  ರೆನಿಸಿದ  ಪುರಂದರ ದಾಸರ ಕೀರ್ತನೆ ಗಳಿಲ್ಲದ ಸಂಗೀತ ಕಛೇರಿಗಳನ್ನು ಊಹಿಸಲು ಅಸಾಧ್ಯ.

 ರಕ್ತಾ ಕ್ಷಿ  ನಾಮ ಸಂವತ್ಸರದ  ಪುಷ್ಯ  ಮಾಸದ  ಬಹುಳ  ಅಮಾವಾಸ್ಯೆ ಯಂದು  ಪರಮಾತ್ಮನಲ್ಲಿ  ಐಕ್ಯವಾದರು.
******
ನಾರದ ಮುನಿ ಹರಿಯಾಜ್ಞೆಯಿಂದಲಿ ಪುರಂದರ ದಾಸರಾಗಿ ಜನಿಸಿದ|
ದಾಸವರ್ಯರಿಗೊಂದಿಪೆ||
ನಾರಾಯಣನ ದಿವ್ಯ ನಾಮದ ಮಹಿಮೆ ಮೂರು ಲೋಕಗಳಲ್ಲಿ ಹರುಹಿದ|
ದಾಸ ವರ್ಯರಿಗೊಂದಿಪೆ|
ದಾಸವರ್ಯರ ಪಾದಕ್ಕೆರಗಿ ಜನ್ಮಾಂತರದ ದೋಷವ ಪರಿಹರಿಸಿಕೊಂಬೆ||
🙏🙏
ದಾಸರೆಂದರೆ ಪುರಂದರ ದಾಸರಯ್ಯ
ಇಂದು ಅವರ ಆರಾಧನಾ ದಿನ..
ಪುರಂದರಗಡದಲ್ಲಿ ವರದಪ್ಪನಾಯಕ ಮತ್ತು ಲಕ್ಷ್ಮಮ್ಮ ಎನ್ನುವ ದಂಪತಿಗಳಿಗೆ
ಕ್ರಿಶ.೧೪೮೪ ರಲ್ಲಿ ನಾರದರು ಒಂದು ರೂಪದಿಂದ ಅವರ ಮಗನಾಗಿ ಅವತರಿಸಿ ಶ್ರೀನಿವಾಸ ಎಂಬ ನಾಮದಿಂದ ಪ್ರಸಿದ್ಧಿ ಯಾದರು.
ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿ ಅರಮನೆಗೆ ವಜ್ರ ವೈಡೂರ್ಯ ಮುಂತಾದ ಆಭರಣಗಳನ್ನು ನೇರವಾಗಿ ಮಾರಾಟ ಇವರ ವೃತ್ತಿ.
ಆಭರಣಗಳ ಮಾರಾಟದಲ್ಲಿ ಮೂಲ ಬೆಲೆಗಿಂತ ಹೆಚ್ಚಾಗಿ ಬೆಲೆಯನ್ನು ನಮೂದಿಸಿ ಮಾರಾಟ ಮಾಡುತ್ತಾ ಇದ್ದರಿಂದ ನವಕೋಟಿ ನಾರಾಯಣ ಎನ್ನುವ ಹೆಸರು ಬಂತು.
ಪಾಪದ್ರವ್ಯದ ಈ ಸಂಬಂಧ  ಇವರಿಂದ ಕಡಿದು ಹಾಕುವುದಕ್ಕೆ ಶ್ರೀ ಹರಿ ವೃದ್ದ ಬ್ರಾಹ್ಮಣ ನಾಗಿ ರೂಪ ಧರಿಸಿ ತನ್ನ ಮಗನ ಮುಂಜಿಗೊಸ್ಕರ ಹಣ ಕೇಳುವ ದಕ್ಕೆ ಯಾಚಕನಂತೆ ಆರು ತಿಂಗಳು ಅವರ ಅಂಗಡಿಗೆ ತಿರುಗುತ್ತಾನೆ.
ಆದರು ಅವರು ಕೊಡಲಿಲ್ಲ. ‌ಭಗವಂತ ಬಿಡಲಿಲ್ಲ.
ಕೊನೆಗೆ  ಶೀನಪ್ಪ ನಾಯಕರಿಗೆ ಬೇಸರವಾಗಿ ಸವಕಳಿ ಹೊಂದಿದ ನಾಣ್ಯಗಳು ಇರುವ ಚೀಲವನ್ನು ಭಗವಂತನ ಮುಂದೆ ಹಾಕಿ ಇದರಲೊಂದು ದುಡ್ಡು ತೆಗೆದುಕೊಂಡು ಹೋಗು ಅಂತ ಹೇಳಿದರು.
ಭಗವಂತನು ಅದರಲ್ಲಿ ಯಾವುದೇ ಹಣ ತೆಗದುಕೊಳ್ಳದೇ ನೇರವಾಗಿ ಅವರ ಪತ್ನಿಯಾದ ಸರಸ್ವತಿ ಬಾಯಿಯ ಬಳಿ ದ್ರವ್ಯ ಸಹಾಯವನ್ನು ಯಾಚಿಸಿದಾಗ ಆ ಹೆಣ್ಣು ಮಗಳು ತನ್ನ ಬಳಿ ಇದ್ದ ಮುತ್ತಿನ ಮೂಗುತಿಯನ್ನು ಭಗವಂತನಿಗೆ ದಾನ ಮಾಡುತ್ತಾಳೆ.
ಮತ್ತೆ  ಆ ಮೂಗುತಿಯನ್ನು ಮಾರಾಟ ಮಾಡಲು ಅವರ ಅಂಗಡಿಗೆ ಭಗವಂತನು ಹೋದಾಗ,ಇದು ತಮ್ಮ ಪತ್ನಿಯ ಮೂಗುತಿ ಅಂತ ಸಂದೇಹ ಬಂದು ಅಲ್ಲಿ ಅಂಗಡಿಯಲ್ಲಿ ಆ ಬ್ರಾಹ್ಮಣ ರೂಪಿ ಪರಮಾತ್ಮನನ್ನು ಕೂಡಿಸಿ ಆ ಮುತ್ತಿನ ಮೂಗುತಿಯನ್ನು ಭದ್ರವಾಗಿ ಪೆಟ್ಟಿಗೆಯಲ್ಲಿ ಇಟ್ಟು ಮನೆಗೆ ಬಂದು ಹೆಂಡತಿಗೆ ಕೇಳಿದಾಗ
ಆ ಹೆಣ್ಣು ಮಗಳು ದಾನ ಕೊಟ್ಟ ವಿಷಯ ತಿಳಿದರೆ ಇನ್ನೂ ದೊಡ್ಡ ಹಗರಣವಾಗಬಹುದು!!
ದಾನ ಮಾಡಿದ್ದು ಗೊತ್ತಾಗಬಾರದು.ಈ ರೀತಿಯಲ್ಲಿ ಅಪಮಾನ ಆಗುವದರ ಬದಲು ಸಾಯುವದೇ ಮೇಲೆಂದು ವಿಷವನ್ನು ಕುಡಿಯಲು ಬಟ್ಟಲು ಎತ್ತಿದಾಗ ಶ್ರೀ ಹರಿ ಅದರಲ್ಲಿ ಮೂಗುತಿ ಹಾಕುತ್ತಾನೆ. ತಕ್ಷಣ ತಮ್ಮ ಪತಿಗೆ ಬಂದು ತೋರಿಸಲು, ಅದನ್ನು ತೆಗೆದುಕೊಂಡು ಅಂಗಡಿಗೆ ಬಂದಾಗ ಅಲ್ಲಿ ಪೆಟ್ಟಿಗೆ ಯಲ್ಲಿ ಮೂಗುತಿ ಇರುವದಿಲ್ಲ.ಮತ್ತುಬ್ರಾಹ್ಮಣ ಸಹ ಮಾಯವಾಗಿದ್ದ.
ಬಹು ಸೋಜಿಗದಿಂದ ಹೆಂಡತಿಗೆ ಕೇಳಿದಾಗ ನಡೆದ ಸಂಗತಿ ತಿಳಿದು ತಮ್ಮ ಸಂಪತ್ತಿನ ಮೇಲೆ ವಿರಕ್ತ ರಾಗಿ ಎಲ್ಲಾ ಸಮಸ್ತ ಆಸ್ತಿಯನ್ನು ದಾನ ಮಾಡಿ ಕುಟುಂಬ ಸಮೇತರಾಗಿ ಪಂಡರಾಪುರಕ್ಕೆ ಬರುತ್ತಾರೆ. ಪಾಂಡುರಂಗ ನ ಬಳಿ ಬಂದಾಗ ಸ್ವಪ್ನದಲ್ಲಿ ವಿಠ್ಠಲ ಬಂದು 
ವಿಜಯನಗರ ದಲ್ಲಿ ಇರುವ  ಶ್ರೀವ್ಯಾಸರಾಯರು ನಿನಗೆ ಗುರುಗಳು. ಅವರ ಬಳಿ  ಅಂಕಿತ ತೆಗೆದುಕೊಂಡು ನನ್ನ ದಾಸನಾಗು ಎಂದು ಸೂಚಿಸಲು
ವಿಜಯನಗರ ಕ್ಕೆ ಬಂದು ಗುರು ವ್ಯಾಸರಾಯರು ಇಂದ *ಪುರಂದರ ವಿಠ್ಠಲ  ಎಂಬಅಂಕಿತ ತೆಗೆದುಕೊಂಡು ಅನೇಕ ಕೃತಿಗಳನ್ನು ರಚಿಸಿದ್ದಾರೆ
ಒಟ್ಟು ೪,೭೫,೦೦೦ಕೃತಿಗಳನ್ನು ದಾಸರು ರಚಿಸಿದ್ದಾರೆ.
೫ಲಕ್ಷ ಕೃತಿಗಳನ್ನು ರಚಿಸಬೇಕೆಂಬ ಸಂಕಲ್ಪ. ಆದರೇನು ಮಾಡುವದು.ಹರಿ ಇಚ್ಚೆ. ಉಳಿದ ೨೫,೦೦೦ಕೃತಿಗಳನ್ನು ತಮ್ಮ ಮಕ್ಕಳಾದ ಗುರು ಮಧ್ವ ಪತಿಗೆ ಮುಂದಿನ ಜನ್ಮ ದಲ್ಲಿ ರಚಿಸಿ ಪರಿಪೂರ್ಣ ಗೊಳಿಸಲು ಹೇಳುತ್ತಾರೆ.
ಅವರೇ ಮುಂದೆ ವಿಜಯದಾಸರಾಗಿ ಅವತರಿಸಿ ಅದನ್ನು ಸಂಪೂರ್ಣಗೊಳಿಸುತ್ತಾರೆ.
ಪುರಂದರ ದಾಸರು ತಮ್ಮ ಕೊನೆಯ ಕಾಲದಲ್ಲಿ ವಿಜಯನಗರ ದಲ್ಲಿ ವಾಸವಾಗಿದ್ದು ಶಾ.ಶಕ ರಕ್ತಾಕ್ಷಿ ಸಂವತ್ಸರ ಪುಷ್ಯ ಬಹುಳ ಅಮವಾಸ್ಯೆ ಭಾನುವಾರ ಶುಭದಿನದಂದು ತಮ್ಮ ಅವತಾರವನ್ನು ಸಮಾಪ್ತಗೊಳಿಸಿದರು.
🙏🙏
ಶ್ರೀ ಪುರಂದರ ದಾಸರ ಅಂತರ್ಯಾಮಿಯಾದ  ಶ್ರೀಪುರಂದರ ವಿಠ್ಠಲ ಪ್ರೀತಿಯಾಗಲಿ.
ಶ್ರೀ ಕೃಷ್ಣಾರ್ಪಣಮಸ್ತು🙏
ರಾಯರ ಭಾಗ್ಯವಿದು ಪುರಂದರ ರಾಯರ ಭಾಗ್ಯವಿದು|
ಶ್ರೀಯರಸನ ಪ್ರಿಯ ಪುರಂದರ ರಾಯರ ಭಾಗ್ಯವಿದು||
ನಾರದ ಮುನಿ ಕರದಲಿ ವೀಣಾ ಧಾರಿಯಾಗಿ ಧರಾತಳದೊಳಗೆ|
ಶ್ರೀ ರಮಣನ ವಿಸ್ತರಾ ಮಹಿಮೆಯನು|
ಬೀರುತ ಭವ ಮಂದಿರ ಪೊಕ್ಕಾ||

ದಾಸೋತ್ತಮರ ವಿಶೇಷ ಮಹಿಮೆಗಳ
ನೇಸು ಜನ್ಮದಿ ಪೇಳಲೊಶವಲ್ಲ|
ವಾಸುದೇವ ಪ್ರಾಣೇಶ ವಿಠ್ಠಲ|
ಪ್ರಕಾಶಿಪ ಮನದಲ್ಲಿ ಇವರ ನಂಬಿದರೆ||

🙏ಅ.ವಿಜಯವಿಠ್ಠಲ
***


ಅಂಬಿಗ ನಾ ನಿನ್ನ ನಂಬಿದೆ

ತುಂಬಿದ ಹರಿಗೋಲಂಬಿಗ |ಅದಕೊಂಬತ್ತು ಛಿದ್ರವು ಅಂಬಿಗ |
ಸಂಭ್ರಮದಿಂದ ನೋಡಂಬಿಗ ಅದರಿಂಬುನೋಡಿ ನಡೆಸಂಬಿಗ ||1||

ಇಲ್ಲಿ ಮಾನವನ ಶರೀರದ ವರ್ಣನೆಯನ್ನು ಮಾಡುತ್ತ ನಿನ್ನ ಅಧೀನವಾದ ಈ ಜೀವನನ್ನು ಸಂಸಾರದಿಂದ ಪಾರುಮಾಡು ಎನ್ನುತ್ತಾರೆ

ಮಾನವನ ಶರೀರವು ಪೃಥ್ವಿ ,ಅಪ್ ತೇಜ ವಾಯು ,ಆಕಾಶ ಎಂಬ ಪಂಚಮಹಾಭೂತಗಳಿಂದ ಉಂಟಾಗಿದೆ ಮತ್ತು ಅಸ್ಥಿ ,ಮಜ್ಜ ,ಮಾಂಸ ,ಮುಂತಾದ ಧಾತುಗಳಿಂದ ತುಂಬಿದೆ .ಮತ್ತು ನವದ್ವಾರಗಳಿಂದ ಕೂಡಿದೆ ಎಂದು ಶ್ವೇತಶ್ವತಾರೋಪನಿಷತ್ ತಿಳಿಸಿದೆ.

ಜೀವನದಲ್ಲಿ ಪ್ರತಿಯೊಬ್ಬರೂ ಸರ್ವದಾ ಸುಖವನ್ನೇ ಬಯಸುತ್ತಾರೆ .


ಸುಖಮೇವ ಸ್ಯಾತ್ ದುಃಖಂ ಅನಗಾಪಿ ಮಾಭೂತ್ ಎಂಬ ಉಕ್ತಿಯಂತೆ ದುಃಖರಹಿತರೂಪವಾದ ಸುಖವನ್ನು ಹೊಂದಬಯುಸುವುದೇ ಒಂದು ಸಂಭ್ರಮವಾಗಿದೆ . ಈಸೊಗಸಿಗೆ ಸೌಕರ್ಯಕ್ಕೆ ಚ್ಯುತಿ ಬಾರದಿರಲಿ ಎಂದು ಸರ್ವರೂ ಪ್ರಯತ್ನಿಸುತ್ತಾರೆ ಇದನ್ನು ನಡೆಸಿಕೋಡಲು ಆಭಗವಂತನೊಬ್ಬನೇ ಸಮರ್ಥ ಎಂಬುದಾಗಿ ಹೇಳುತ್ತಾರೆ .

*****

by- -following article is by ಅನಿರುದ್ಧ ಭಟ್ ಹಟ್ಟಿಕುದ್ರು

ಸುಳ್ಳು ನಮ್ಮಲ್ ಇಲ್ಲವಯ್ಯ, ಸುಳ್ಳೇ ನಮ್ಮನೆ ದೇವರು...
ಬೆಕ್ಕು ಭಕ್ಕರಿ ಮಾಡೋದ ಕಂಡೆ,

ಇಲಿಯು ಒಲೆಯ ಹಚ್ಚೋದ ಕಂಡೆ, 
ಮೆಕ್ಕೆಕಾಯಿ ಕಂಡೆನಪ್ಪ ತೆಕ್ಕೆಗಾತರ...

ಸುಳ್ಳು ನಮ್ಮಲ್ ಇಲ್ಲವಯ್ಯ, ಸುಳ್ಳೇ ನಮ್ಮನೆ ದೇವರು...
ಕಪ್ಪೆ ಪಾತರ ಕುಣಿಯೋದ ಕಂಡೆ,
ಏಡಿ ಮದ್ದಲೆ ಬಾರಿಸೋದ ಕಂಡೆ,
ಮೆಣಸಿನಕಾಯಿ ಕಂಡೆನಪ್ಪ ಒನಕೆ ಗಾತರ...


ಸುಳ್ಳು ನಮ್ಮಲ್ ಇಲ್ಲವಯ್ಯ, ಸುಳ್ಳೇ ನಮ್ಮನೆ ದೇವರು...


ಅರಿಸಿನ ಪುಡಿಯ ಬಿತ್ತೋದ ಕಂಡೆ,

ಗಸಗಸೆಯನು ಎಣಿಸೋದ ಕಂಡೆ, 

ಪುರಂದರವಿಠಲನ ಪಾದವ ಕಂಡೆ ಪರ್ವತ ಗಾತರ...

ಸುಳ್ಳು ನಮ್ಮಲ್ ಇಲ್ಲವಯ್ಯ, ಸುಳ್ಳೇ ನಮ್ಮನೆ ದೇವರು...


ಈ ಕೀರ್ತನೆಯನ್ನು ಕೇಳಿದ ನನಗೆ ಮೊದಲು ಬಂದ ಅನುಮಾನ, ಇದನ್ನು ಬರೆದವರು ಪುರಂದರದಾಸರೇ ಹೌದೋ ಎಂದು. ಈ ಕೀರ್ತನೆಯನ್ನು ಬರಿಗಣ್ಣಿನಿಂದ ಓದಿದರೆ ಒಂದು ಸಾಲು ಸಹ ಸಮಂಜಸವಾಗಿ ಬರೆದಂತೆ ಕಾಣುವುದಿಲ್ಲ. ಇದರ ಅರ್ಥ ತಿಳಿಯಲೇಬೇಕೆಂದು ನೆಟ್ಟನೆ ಕೂತು, ಶಿವನು ಕಾಪಿ ರೈಟ್ಸ್ ಇಟ್ಕೊಂಡಿರೋ ಜ್ಞಾನದ ಮೂರನೇ ಕಣ್ಣನ್ನು ಸ್ವಲ್ಪ ಕಾಲ ಬಾಡಿಗೆಗೆ ಪಡೆದು, ಈ ಕೀರ್ತನೆಯನ್ನು ಮತ್ತೊಮ್ಮೆ ಓದಿದೆ. ಆಗ ನನ್ನ ಒಳಗಣ್ಣಿಗೆ ಹೊಳೆದ ಇದರ ಅರ್ಥವನ್ನು ಲೇಖನ ರೂಪದಲ್ಲಿ ನಿಮಗೆ ಅರ್ಪಿಸುತ್ತಿದ್ದೇನೆ.

ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳೇ ನಮ್ಮನೆ ದೇವರು...

ನಾಗರೀಕತೆಯ ಹುಟ್ಟಿಗೆ ಜೀವವಾದ ಸರಸ್ವತಿ ನದಿಯು ಭೂಮಿಯ ಅಡಿಗಡಿಗೇ ಕುಗ್ಗಿಹೋಗುವುದರ ಜೊತೆಜೊತೆಗೇ ನಾಗರಿಕರ ವೇದ ವಿದ್ಯೆಯೂ ಅವನತಿಯ ಹಾದಿ ಹಿಡಿದಿತ್ತು. ಸತ್ಯಯುಗದಲ್ಲಿ ಬರೀ ಬಾಯಿಂದ ಬಾಯಿಗೆ ಹಬ್ಬುತ್ತಲೇ ಬೆಳೆದುಕೊಂಡುಬಂದಿದ್ದ ವೇದ ವಿಜ್ಞಾನ, ದ್ವಾಪರಯುಗದಲ್ಲಿ ವೇದ ವ್ಯಾಸರ ದೂರದೃಷ್ಟಿಯಿಂದ ೪ ಭಾಗಗಳಾಗಿ ವಿಂಗಡನೆಗೊಂಡು, ಲಿಪಿಯ ರೂಪ ಪಡೆಯಿತು.

ಕಲಿಯು ಇಂದ್ರನೊಡನೆ ಭಾಗೀದಾರನಾಗಿ ಕಾಮನಬಿಲ್ಲಿಗೆ ಬಾಣವನ್ನು ಬಿಗಿದು ಭೂಲೋಕಕ್ಕೆ ಬಿಟ್ಟು ತನ್ನ ಯುಗದ ಆದಿಯಲ್ಲೇ ಪ್ರಭುತ್ವವನ್ನು ಸಾಧಿಸಿಕೊಂಡನು. ವೇದ ಓದುವ ಜನರ ಕಣ್ಣಿಗೆ ಕಾಮದ ಪೊರೆ ಕಟ್ಟಿಕೊಂಡು, ನಿಜಾರ್ಥಗಳು ಮನಸ್ಸಿಗೆ ನಾಟದೆಯೇ ಸೋಸಿಹೋದವು. ಅವೈಜ್ಞಾನಿಕ ನಂಬಿಕೆ ಆಚರಣೆಗಳು ಬೆಳಕಿನ ವೇಗದಲ್ಲಿ ಹರಡಿ ಪ್ರಚಾರಗೊಂಡವು. ಮೌಢ್ಯತೆಯ ಕೊಚ್ಚೆಯಲ್ಲಿ ಕಾಲಿಟ್ಟಿದ್ದ ಜನರು, ಕೊಚ್ಚೆಯಲ್ಲಿ ವಾಸಿಸುವುದಕ್ಕೂ ಸಮರ್ಥನೆಯನ್ನು ಹುಡುಕಿಕೊಂಡರು. ಈ ಕಲಿಯುಗದಲ್ಲಿ ನಾವು ಕಲಿಯಬೇಕು, ತಿಳಿದುಕೊಳ್ಳಬೇಕು. ಮರೆತುಹೋದ ಹಿಂದಿನ ಯುಗಗಳ ಜ್ಞಾನವನ್ನು ಮತ್ತೆ ಈ ಕಲಿಯುಗದಲ್ಲಿ ಕಲಿಯುವ ಅವಕಾಶ ಇದೆ ಅನ್ನುವುದು ಹೆಚ್ಚಿನ ಜನ ಗುಂಪಿನ ಅರಿವಿಗೆ ಎಟುಕದೆ ಹೋಯಿತು. ಈ ಪರಿಸ್ಥಿತಿಯನ್ನು ಕಂಡು ನೊಂದ ದಾಸರಿಗೆ ಸ್ಪಂದಿಸಿದ ಕನ್ನಡ ಪದಗಳ ಮಾಲೆಯೇ ಈ ಕೀರ್ತನೆ. ಸುಳ್ಳು ನಮ್ಮಲ್ಲಿಲ್ಲವಯ್ಯ, ಸುಳ್ಳೇ ನಮ್ಮನೆ ದೇವರು.

ತರ್ಕ ಮಾಡೋದ್ರಲ್ಲಿ ಎತ್ತಿದ ಕೈ ಅನ್ನಿಸಿಕೊಂಡವರು ತಾವು ಸುಳ್ಳು ಹೇಳುವುದೇ ಇಲ್ಲ, ಸುಳ್ಳು ನಮ್ಮಲ್ಲಿ ಇಲ್ಲ ಎಂದು ವಾದಿಸಬಹುದು. ಆದರೆ ದಾಸರಿಗೆ ಅವರು ಮಾಡುತ್ತಿರೋ ವಿಗ್ರಹ ಪೂಜೆಯ ಹಿಂದಿರುವ ಭಾವನೆಗಳ ಕಟ್ಟಿನಲ್ಲಿ ಸುಳ್ಳು ಎದ್ದು ಕಾಣುತ್ತಿದೆ. ಕೃಷ್ಣನಿಗೆ (ಪರಮಾತ್ಮನಿಗೆ) ಹೃದಯದಲ್ಲಿ ಸ್ಥಾನ ಕೊಡುವ ಬದಲು, ಮನೆಯಲ್ಲಿ ಒಂದು ದೇವರ ಕೋಣೆ ಮಾಡಿ, ಅವನ ವಿಗ್ರಹ ಕೂರಿಸಿ, ಅರ್ಥವಾಗದ ಮಂತ್ರ ತಂತ್ರಗಳ ನಾನಾ ವಿಧಿವಿಧಾನದಿಂದ ಪೂಜಿಸುತ್ತಿದ್ದರು. ಈಗ ಕೂಡ ಅದು ಚಾಲ್ತಿಯಲ್ಲಿದೆ. ಈ ರೀತಿಯ ಆಚರಣೆಗಳು ನಾನಾ ಮೌಢ್ಯತೆ(ಸುಳ್ಳು)ಗಳಿಗೆ ನಲುವಾಯ್ತು. ಮಂತ್ರದ ಅರ್ಥಕ್ಕಿಂತ ಅದನ್ನು ರಾಗವಾಗಿ ಪಠಿಸುವುದೇ ಮುಖ್ಯ ಎಂದು ಪ್ರಕಟಿಸಿದರು. ಪ್ರಶ್ನಿಸುವ ಯುವ ಜನಾಂಗದ ಕೌತುಕತೆಯನ್ನು ಉದ್ಧಟತನ ಎಂದು ಕರೆದರು. ವೇದದಲ್ಲಿ ಕಾಯಕದ ಪ್ರಕಾರ ತೋರ್ಪಡಿಸಿದ ವರ್ಣ ಪದ್ಧತಿಯು ಜಾತಿ ಪದ್ಧತಿಯಾಗಿ ಬದಲಾಯ್ತು. ಮೇಲು ಕೀಳು ಭಾವನೆಗಳು ರೂಢಿಗೆಬಂದವು. ಅಸ್ಪರ್ಷ್ಯತೆಯ ವಿಷವನ್ನು ಎಲ್ಲರೂ ಕುಡಿದು, ತಮ್ಮತನವನ್ನು(ಸತ್ಯವನ್ನು) ಕೊಂದುಬಿಟ್ಟರು. ಸುಳ್ಳಿನಾಚರಣೆಯ ಹಬ್ಬ ಮಾಡಿದರು.
ಮನಸ್ಸಿನಲ್ಲಿ ಅಸೂಯೆ, ದ್ವೇಷ, ಮತ್ಸರ ತುಂಬಿದ್ದರೂ, ಒಂದು ಕೊಡ ನೀರು ಮೈಮೇಲೆ ಹುಯ್ದುಕೊಂಡಾಕ್ಷಣ ಮಡಿತನವನ್ನು ಪಡೆಯುವ ಚಮತ್ಕಾರೀ ವಿಧಾನಗಳು ಅಳವಡಿಕೆಗೊಂಡವು. ವೇದದ ಒಂದು ಭಾಗವಾದ ಜ್ಯೋತಿ ಶಾಸ್ತ್ರವನ್ನು ಬಿಟ್ಟು ಗ್ರೀಕರು ತೋರಿದ ಜ್ಯೋತಿಷ್ಯ ಶಾಸ್ತ್ರವನ್ನು ಪಸರಿಸಿದರು. ಒಟ್ಟಿನಲ್ಲಿ ದೇವರ ಮೇಲಿರಬೇಕಾದ ಸ್ನೇಹ, ಭಕ್ತಿ ಹೋಗಿ ಭಯದ ವಾತಾವರಣ ಹುಟ್ಟಿಕೊಂಡಿತು. ಬ್ರಹ್ಮ ಕಟ್ಟಿದ ಸಪ್ತಋಷಿಗಳಿಂದ ಹುಟ್ಟಿದ ಬ್ರಾಹ್ಮಣತ್ವವೂ ಭಯವನ್ನು ಹಣವನಾಗಿಸೋ ವ್ಯಾಪಾರದ ಹಾದಿ ಹಿಡಿಯಿತು. ಮನುಷ್ಯರೊಳಗಿರೋ ದೇವರಿಗೆ (ಸತ್ಯಕ್ಕೆ) ಸ್ಪಂದಿಸೋ ಬದಲು, ಗುಡಿಗೋಪುರಗಳಲ್ಲಿ ಪಾಪ ಕಳಿಯಬೇಕೆಂದು ಹುರುಳಾಡಿದರು. ಇನ್ನೊಬ್ಬ ಮನುಷ್ಯನಿಗೆ, ಅಂದರೆ ದೇವರಿಗೆ, ಅಂದರೆ ಸತ್ಯಕ್ಕೆ ಕೇಡು ಬಯಸಿ, ದೇವರಿಗೆ (ಸುಳ್ಳಿಗೆ) ಪ್ರದಕ್ಷಿಣೆ ಹಾಕುವ ವಿಷಾದಕಾರಿ ಬೆಳವಣಿಗೆಗಳು ದಾಸರಿಗೆ ಕಂಡುಬಂದವು. ಕೃಷ್ಣ ನಮ್ಮಲ್ಲಿಲ್ಲವಯ್ಯ ಕೃಷ್ಣ ನಮ್ಮನೆ ದೇವರು. ಅಂದರೆ, ಕೃಷ್ಣ ನಮ್ಮ ಹೃದಯದಲ್ಲಿ ನೆಲೆಸಿರದಿದ್ದರೂ, ಅವನು ನಮ್ಮ ಮನೆ ದೇವರು ಮಾತ್ರ ಹೌದು.
ಯಾರೋ ಒಬ್ಬ ಆಸಾಮಿ, ನಮ್ಮ ಮನೆ ಒಲೆಯ ಒಳಗೆ ಒಂದು ಇಲಿ ಓಡಾಡ್ತಿತ್ತು ಅಂದ. ಇನ್ನೊಬ್ಬ ಆಸಾಮಿ, ನಾವು ದಿನಾ ದೇವರಿಗೆ ಮಂಗಳಾರತಿ ಮಾಡಿನೇ ಒಲೆ ಹಚ್ಚೋದು ಅಂದ. ಇದನ್ನ ಅರ್ಧಂಬರ್ಧ ಕೇಳಿಸ್ಕೊಂಡ ಮೂರನೆ ಆಸಾಮಿ, ಒಹ್ ಅವ್ರಮನೇಲಿ ದೇವರ ಪೂಜೆ ಮಾಡಿದ್ಮೇಲೆ ಗಣೇಶನ ವಾಹನ ಇಲಿ ಹೋಗಿ ಓಲೆ ಹಚ್ಚುತ್ತಂತೆ ಅಂದ. ಇದನ್ನ ಕೇಳಿದ್ ಜನ್ರು ದೇವರನ್ನ ನಾವು ಪ್ರಶ್ನಿಸೋಕಾಗುತ್ಯೇ ಅಂತ ದೊಡ್ಡ ಮನಸ್ಸಿನಿಂದ ಹಾಗೇ ನಂಬಿದ್ರು.
ಬೆಕ್ಕು ಜೋಳದ ರೊಟ್ಟಿ ಮಾಡೋದು, ಇಲಿ ಒಲೆಯ ಹಚ್ಚೋದು, ದೊಡ್ಡ ಮೆಕ್ಕೆಕಾಯಿ, ಪಾತ್ರದೊಳಗೆ ಕಪ್ಪೆ ಕುಣಿತ, ಏಡಿ ತಾಳ ಮದ್ದಲೆ ಬಾರಿಸೋದು, ಒನಕೆ ಗಾತ್ರದ ಮೆಣಸಿನಕಾಯಿ, ಅರಶಿನಪುಡಿಯನ್ನ ಬಿತ್ತೋದು, ಗಸಗಸೇನ ಲೆಕ್ಕ ಮಾಡೋದು, ಇವೆಲ್ಲಾ ಸಾಧ್ಯಾನೇ ಇಲ್ಲ ಅಂತ ಅನ್ನಿಸಿದ್ರೂ, ದೇವರ (ಸುಳ್ಳಿನ) ಹಿನ್ನೆಲೆಯನ್ನು ಕಟ್ಟಿ, ಕಥೆ ಮಾಡಿ, ಆಚರಣೆಯಲ್ಲಿ ಇರಿಸಿದ್ದಿದ್ರೆ, ನಾವೆಲ್ಲಾ ನಂಬುತ್ತಿದ್ವೋ ಏನೋ!!! ಹೀಗೂ ಉಂಟೆ ಅಂತ ಒಂದು ಉಧ್ಗಾರ ತೆಗೆದ್ರೆ, ಅದೇ ಹೆಚ್ಚು.

ಪುರಂದರವಿಠಲನ ಪಾದವ ಕಂಡೆ ಪರ್ವತ ಗಾತರ... 
ದೇವರು ಹಾಗಿದ್ದಾನೆ, ಹೀಗಿದ್ದಾನೆ, ಅವನ ಪಾದ ಪರ್ವತದಷ್ಟು ದೊಡ್ಡದು, ಅವನಿಗೆ ೮ ಕೈ, ವಸ್ತ್ರ ಹೀಗೇ ಇರುತ್ತೆ ಅನ್ನುವ ಯಾವುದೇ ಗೋಜಲು ಬೇಡ. ನಾವು ಮನುಷ್ಯರಾದ ಕಾರಣ ದೇವರೂ ನಮ್ಮ ಹಾಗೇ ಕಾಣಬೇಕೆಂದಿಲ್ಲ. ದೇವರು ನಮ್ಮನ್ನು ಸೃಷ್ಟಿ ಮಾಡಿದ್ದಾನೆ. ನಾವು ಅವನ ರೂಪವನ್ನೇ ಸೃಷ್ಟಿಸೋ ಗೋಜಲಿಗೆ ಇಳಿಯೋದು ಬೇಡ. ಅವನ ಸುಳ್ಳು ರೂಪವನ್ನು ಬದಿಗೊತ್ತಿ, ಅವನ ಶೂನ್ಯ ಆಕಾರವನ್ನು ಸ್ವೀಕರಿಸೋಣ. ಆತ್ಮಕ್ಕೂ, ಮೆದುಳಿನ ನಿರ್ಧಾರಗಳಿಗೂ ಹೊಂದಾಣಿಕೆಯನ್ನು ಮಾಡಿಸಿ, ಲೋಕದ ಹಿತಕ್ಕಾಗಿ ಕೆಲಸ ಮಾಡುವಂತೆ ಪ್ರೇರೇಪಿಸುವ ಪರಮಾತ್ಮನ ಶೂನ್ಯಾಕಾರವನ್ನು ನಮ್ಮೊಳಗೆ ಪ್ರತಿಷ್ಟಾಪಿಸೋಣ ಎನ್ನುವ ವಿಷಯವನ್ನು ದಾಸರು ಈ ಕೀರ್ತನೆಯ ಮೂಲಕ ನಮಗೆ ತಿಳಿಸ ಬಯಸಿದ್ದಾರೆ. (Paramaatma builds circuit by interconnecting different networks of brain, senses and aatma) ನೇರವಾಗಿ ಬೊಬ್ಬೆ ಹೊಡೆದರೂ ಆ ಕಾಲದಲ್ಲಿ ಅರ್ಥಮಾಡಿಕೊಳ್ಳದ ಜನರಿಗೆ ದಾಸರು ಈ ವ್ಯಂಗ್ಯ ಸಾಲುಗಳನ್ನು ಕಟ್ಟಿ, ಕೀರ್ತನೆಯ ರೂಪದಲ್ಲಿ ಹಾಡುತ್ತಾ, ಭಿಕ್ಷೆ ಬೇಡುತ್ತಾ ಸಾಗಿದರು.

ಈ ಕೀರ್ತನೆಯಲ್ಲಿ ದಾಸರು, ವಿಗ್ರಹ ಪೂಜೆಯ ವಿಷಯದಲ್ಲಿ ಅವರಿಗಿರುವ ವೈಮನಸ್ಸನ್ನು ವ್ಯಕ್ತಪಡಿಸಿದ್ದಾರೆ. ಎಲ್ಲಾ ಮೂಢನಂಬಿಕೆಗಳಿಗೂ ದೇವರಮೇಲಿನ ಭಯವೇ ಕಾರಣ ಎಂದು ಸಾಧಿಸಿ ತೊರಿಸಿದ್ದಾರೆ. ದೇವರನ್ನು ಪ್ರೀತಿಸಬೇಕೆಂದು, ದೇವರ ಗುಡಿಯನ್ನು ನಮ್ಮ ಹೃದಯಲ್ಲಿ ಕಟ್ಟಲು ಪ್ರೇರೇಪಿಸುತ್ತಾರೆ. ಪ್ರತಿಯೊಂದು ಜೀವಿಯೊಳಗೂ, ವಸ್ತುವಿನೊಳಗೂ ಅಡಗಿರುವ ಪರಮಾತ್ಮನ ಸಾಂಕೇತ ಸೂಚಿಯೇ ವಿಗ್ರಹ. ಮನೆಯಲ್ಲಿ ದೇವರ ವಿಗ್ರಹ ಅಥವಾ ಚಿತ್ರಪಟ ಇಡುವುದರಿಂದ, ಆಗಾಗ್ಗೆ ನಮ್ಮ ದೃಷ್ಟಿ ಆ ವಿಗ್ರಹದ ಮೇಲೆ ಹಾಯುತ್ತಿರುತ್ತದೆ. ಹೀಗೆ ಕಂಡಾಗಲೆಲ್ಲ ನಮ್ಮೊಳಗಿರುವ ಆತ್ಮದ ಅವಲೋಕನ ನಡಿಯಲಿ, ನಮ್ಮನ್ನು ನಾವು ದೇಹದಿಂದ, ವರ್ಣದಿಂದ, ಜಾತಿಯಿಂದ ಗುರುತಿಸಿಕೊಳ್ಳದೇ, ಆತ್ಮದ ಮಟ್ಟದಲ್ಲಿ ಗುರುತಿಸಿಕೊಳ್ಳೋಣ. ನನ್ನಲ್ಲಿ ಇರುವ ಆತ್ಮ, ಅವನಲ್ಲೂ ಇದೆ. ಆ ಪ್ರಾಣಿಯಲ್ಲೂ ಇದೆ, ಕೀಟದಲ್ಲೂ ಇದೆ ಎಂದು ಪ್ರತಿಯೊಬ್ಬರನ್ನೂ ಪ್ರತಿಯೊಂದನ್ನೂ ಗುರುತಿಸೋಣ ಎಂದು ದಾಸರು ಈ ಕೀರ್ತನೆಯಲ್ಲಿ ಕರೆ ನೀಡಿದ್ದಾರೆ.
ಸುಳ್ಳು ನಮ್ಮೆಡೆ ಸುಳಿಯದಿರಲಿ, ಸತ್ಯವಾಗಲಿ ನಮ್ಮನೆ ದೇವರು ...-ಅನಿರುದ್ಧ ಭಟ್ ಹಟ್ಟಿಕುದ್ರು.

*********


ಪುರಂದರ ಗುರುಂ ವಂದೇ"

ನಮ್ಮ ಮೇಲೆ ದೇವರ ಉಪಕಾರವು ಅನಂತವಾದದ್ದು.ಎಷ್ಟು ಹೇಳಿದರೂ ತೀರಲಾಗದು.ದೇವರು ನಮಗಾಗಿ ಭಾಗವತ,
ಮಹಾಭಾರತ,ಬ್ರಹ್ಮಸೂತ್ರಗಳನ್ನು ತಾನೇ ಖುದ್ದಾಗಿ ರಚಿಸಿ ಕೊಟ್ಟನು.ಋಷಿ ಮುನಿಗಳೆಲ್ಲಾ ಅದನ್ನು ಸಾರಿದರು.ಮಹಾ ಮಹಾಜ್ಞಾನಿಗಳು ಅವುಗಳನ್ನು ಮೇಲಕ್ಕೆತ್ತಿ ತತ್ವೋಪದೇಶವನ್ನು ಮಾಡಿದರು.ಅಷ್ಟಕ್ಕೂ ಆ ತತ್ವಗಳು ನಮ್ಮ ಮತೀಯ ಅಂಗಳವನ್ನು ಕಾಣಲಿಲ್ಲ.ಮತ್ತೆ ದೇವರು ಆ ಭಾಗವತಾದಿಗಳ ಜೊತೆಗೆ ಅಬುದ್ಧಿಗಳಾದ ನಮ್ಮ ಅನುಕೂಲಕ್ಕಾಗಿ ಸರಳವಾದ(ಶಾಸ್ತ್ರದ ವಿಮರ್ಶೆಗಿಂತಲು ಸರಳವಾದ) ಹಾಗು ಸಾಹಿತ್ಯ ಭರಿತವಾದ ವಾಙ್ಮಯವನ್ನು ಹುಟ್ಟು ಹಾಕಲು ಆಲೋಚಿಸಿದ.ಆ ವಾಙ್ಮಯವನ್ನು ಹುಟ್ಟು ಹಾಕಲು ಹಾಗು ಅದರ ಮೂಲಕ ತತ್ವೋಪದೇಶದ ಕಾರ್ಯಕ್ಕಾಗಿ ಪುರಂದರ ದಾಸರೇ ಮೊದಲಾದ ಮಹಾಮಹಿಮರನ್ನು ಧರೆಗಿಳಿಸಿದನು.ಅವರಿಂದ ಹುಟ್ಟಿದ ಆ ವಾಙ್ಮಯವೇ ಇಂದು ದಾಸ ಸಾಹಿತ್ಯವೆಂಬ ಹೆಸರನ್ನು ಪಡೆದು ದೇಶದುದ್ದಕ್ಕೂ ಪಸರಿಸಿ ಜನರನ್ನು ದೇವರ ಬಳಿಯಲ್ಲಿ ಕೊಂಡೊಯ್ಯಲು ಕಾರಣವಾಗಿದೆ.ಇದು ದೇವರ ಅನಂತ ಉಪಕಾರದಲ್ಲಿ ಒಂದಾದ ಉಪಕಾರವಾಗಿದೆ.

"ನವಕೋಟಿ ನಾರಾಯಣ"

ಪುರಂದರದಾಸರು ತಮ್ಮ ಜೀವನದಲ್ಲಿ ಸಂಪತ್ತನ್ನು ತ್ಯಜಿಸುವದು ಹೇಗೆಂದು ತೋರಿಸಿ ಕೊಟ್ಟವರು.ಇಂದಿನ ಕಾಲಕ್ಕೆ ಕೋಟಿ ರೂಪಾಯಿ ಎಂದು ಹೇಳಿದ ಕೂಡಲೇ ಬಾಯಿತೆಗೆಯುವ ಅವಸ್ಥೆ ಇದೆ.ಆದರೆ ಅಂದೆ ಪುರಂದರ ದಾಸರು ಒಂಬತ್ತು ಕೊಟ್ಟಿಯ ವಾರಸುಗಾರರಾಗಿದ್ದರು.ನಾವಾಗಿದ್ದರೆ ಅದನ್ನು ತ್ಯಜಿಸುವ ಪ್ರಸಕ್ತಿಯೇ ಇಲ್ಲ.ವಿರಕ್ತರಾದ ಪುರಂದರದಾಸರು ಕಿಂಚಿತ್ತೂ ಸಂಪತ್ತನ್ನು ಲೆಕ್ಕಿಸದೆ... ಕೃಷ್ಣಾರ್ಪಣವೆಂದು ಹೇಳಿ ಸಾಧನೆಯ ಮಾರ್ಗಕ್ಕೆ ಕಾಲಿಟ್ಟರು.ಎಲ್ಲಿಯವರೆಗೆ ನಮ್ಮಲ್ಲಿ ಭಕ್ತಿ ಶ್ರದ್ಧೆಗಳಿರುತ್ತವೆಯೋ ಅಲ್ಲಿಯವರೆಗೆ ಧರ್ಮವು ನಮ್ಮನ್ನು ಬದಲಾಯಿಸುತ್ತದೆ... ಯಾವಾಗ ಅವೆರಡೂ ನಮ್ಮಿಂದ ದೂರಾಗುತ್ತವೆಯೋ ಅಂದಿನಿಂದ ನಾವು ಧರ್ಮವನ್ನು ಬದಲಾಯಿಸುತ್ತೇವೆ.ಇದೇ ವಸ್ತುಸ್ಥಿತಿ.ಪುರಂದರದಾಸರಲ್ಲಿ ಭಕ್ತಿ , ಶ್ರದ್ಧೆಗಳು ಅತಿಹೆಚ್ಚಾಗಿ ಇರೋಣದರಿಂದ ಧರ್ಮವು ಅವರನ್ನು ಎಲ್ಲವೂ ತ್ಯಜಿಸಿ ವೈರಾಗ್ಯವನ್ನು ಹೊಂದುವಂತೆ ಮಾಡಿತು.ಆ ವೈರಾಗ್ಯವು ಅವರಿಂದ ಭಗವಂತನ ವೈಭವೋಪೇತವಾದ ಗುಣಗಳ ವರ್ಣಿಸುವ ಹಲವಾರು ಕೃತಿಗಳು ಹೊರಬರಲು ಮುಖ್ಯವಾದ ಭೂಮಿಕೆಯನ್ನು ಹೊಂದಿತು.ಅಪಾರವಾದ ಸಂಪತ್ತಿನ ಅರಸುಗಳಾಗಿದ್ದರಿಂದ ಅವರಿಗೆನವಕೋಟಿ ನಾರಾಯಣಎಂದು ಅಂದು ಕರೆದರೆ... ನಾರಾಯಣನ ಕೋಟ್ಯಾಂತರ ಭಕ್ತರಿಗೆ
ನವೀನವಾದ ಭಕ್ತಿಯ ಮಾರ್ಗವನ್ನು ಹಾಕಿ ಕೊಟ್ಟಿದ್ದರಿಂದ ಇಂದಿಗೂ ಅವರುನವಕೋಟಿ ನಾರಾಯಣರೇ.

"ದಾಸರೆಂದರೆ ಪುರಂದರದಾಸರಯ್ಯ"

ಸಾಧಾರಣವಾಗಿ ಹಿರಿಯರಾದ ಜ್ಞಾನಿಗಳನ್ನು ಕಿರಿಯರು ಸ್ತುತಿಸುವ ಪದ್ದತಿಯು ನಡೆದು ಬಂದಿದೆ.ಆದರೆ ಪುರಂದರದಾಸರ ಮಹಿಮೆಯಲ್ಲಿ ಇದು ವ್ಯತಿರೇಕವಾಗಿದೆ.ಮಧ್ವ ಸಿದ್ಧಾಂತವೆಂಬ ಆಕಾಶದಲ್ಲಿ ಧ್ರುವತಾರೆಯಂತೆ ಇರುವ ವ್ಯಾಸರಾಜರು ಪುರಂದರದಾಸರ ಬಗ್ಗೆ ಹೇಳುವಾಗದಾಸರೆಂದರೆ ಪುರಂದರದಾಸರಯ್ಯ ಎಂದು ಮುಕ್ತ ಕಂಠದಿಂದ ಹೇಳುತ್ತಾರೆ.ಇದರ ಅರ್ಥ ಪುರಂದರದಾಸರು ವ್ಯಾಸರಾಜರಿಗಿಂತಲು ಉತ್ತಮರೆಂದು ಅರ್ಥವಲ್ಲ.ಕಿಂತು... ಅಂತಹ ವ್ಯಾಸರಾಜರಿಗೂ ಪುರಂದರದಾಸರ ಜ್ಞಾನ,ಭಕ್ತಿ , ವೈರಾಗ್ಯಗಳ ಪರಿಯು ಮನಮುಟ್ಟಿತ್ತು.ಅಂತೆಯೇ ವ್ಯಾಸರಾಜರಿಂದ ಆ ಮಾತು ಹೊರಹೊಮ್ಮಿತು.

ಗೆಳೆಯರೆ ಇಂದು ಆ ಮಹಾನುಭಾವರಾದ ಪುರಂದರದಾಸರ ಆರಾಧನೆ.ಹಾಗಾಗಿ ಎಂದೆಂದೂ ನಾವೆಲ್ಲರೂ ಭಕ್ತಿಯಿಂದ ದೇವರ ಗುಣಗಾನ ಮಾಡುವಂತಾಗಲೆಂದು ಕರುಣಿಸಬೇಕೆಂದು ಪರಿಪರಿಯಾಗಿ ಆ ಮಹಾಗುರುಗಳಾದ ಪುರಂದರದಾಸರಲ್ಲಿ ಕೇಳಿಕೊಳ್ಳೋಣ.
***************

ದಾಸ ದಾಸೋಹಂ
----------------------------
ದೇವಾಲಯಕ್ಕೆ ಹೋಗಿ, ದೇವರನ್ನು ಭಕ್ತಿಯಿಂದ ನೋಡಿ, ಅವನಿಗೆ ನಮ್ಮ ಕೋರಿಕೆಗಳನ್ನು ಕೇಳಿ, ಪಡೆದ ಉಪಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸಿ, ಕೃತಾರ್ಥರಾದಂತೆ ಮರಳಿ ಬರುವವರು ಬಹುಪಾಲು ನಾವು. ನಮಗೆ ದೇವರು ಅಲ್ಲೇ ಇರಬೇಕು. ನಮ್ಮೊಡನೆ, ನಮ್ಮೊಡಲಿಗೆ ಬಾ ಎಂದು ಯಾವತ್ತೂ ಕರೆಯುವುದಿಲ್ಲ ನಾವು. ತಿರುಪತಿಯಲ್ಲಿ ಶ್ರೀ ಪುರಂದರದಾಸರಾಯರು ಹೊರಗೆ ಕಂಡ ವೆಂಕಟೇಶನನ್ನು ತಮ್ಮ ಒಳಗೆ ಕರೆಯುವ ಸುಂದರ ದಾಸರ ಪದ ಇದು. 

 ಬಾರಯ್ಯ ವೆಂಕಟರಮಣ ನೀನೆನಗೆ
ಧಾರುಣಿಯೊಳು ನಿನ್ನ ಮೂರುತಿ ತೋರುತ|| 

ಮನದಲ್ಲಿ ಮಂಟಪ ನಿರ್ಮಿಸಿ, ತಮ್ಮ ಸರ್ವಸ್ವವನ್ನು ಅವನಿಗೆ ಅರ್ಪಿಸಿ ಕರೆಯುತ್ತಾರೆ. ಅಹಂ, ತರ್ಕ ಇವುಗಳ ನೆಲೆಯಾದ ಶಿರವನ್ನು ಅವನ ಪಾದಗಳಲ್ಲಿ ಅರ್ಪಿಸುತ್ತಾರೆ.
 ಮನವೆಂಬ ಮಂಟಪ ನಿನಗೆ ಹಾಕಿ ಎನ್ನ
ತನುವನೊಪ್ಪಿಸಿ ಕೈಯ ಮುಗಿವೆನಯ್ಯ
ವನಜಜಭವಸುರ ಮುನಿಗಳು ಭಜಿಸುವ
ಘನಮಹಿಮನೆ ಪಾದಕೆರಗಲೆನ್ನ ಶಿರ 

ಕುಂಡಲಿನಿಯ ಶೇಷ ಸಹಸ್ರಾರದಲ್ಲಿ ಹೆಡೆ ಬಿಚ್ಚಿ ನಿಂತಾಗ ಭಗವಂತನ ಸಾಕ್ಷಾತ್ಕಾರ ಸಾಧ್ಯ. ಅದಕೆಂದೇ ಭುಜಂಗಶಯನನ್ನು ಅವನ ದರ್ಶನದ ಉತ್ಸವವನ್ನು ಒಳಗಣ್ಣಿಗೆ ನೀಡೆಂದು ಪ್ರಾರ್ಥಿಸುತ್ತಾರೆ.
 ಲಿಂಗದೇಹವೆಂಬ ಪವಳಿ ಶೃಂಗರಿಸಿ 
 ಅಂಗವ ನಿನಗೆ ಕಾಣಿಕೆಯ ನೀಡುವೆ || 
 ಮಂಗಳಮೂರುತಿ  ಅಂಗನೆ ಸಹಿತ- ಭು
ಜಂಗಶಯನ ಎನ್ನ ಕಂಗಳುತ್ಸವವೀಯೊ 

ಸಕಲ ದಿವ್ಯಾಲಂಕಾರ ಭೂಷಿತನಾದ (ಸಕಲ ಗುಣಪೂರ್ಣ) ಹರಿಯನ್ನು ತಮ್ಮ ಹೃದಯದಲ್ಲಿ ಸ್ಥಾಪಿಸಲು ಬಯಸುತ್ತಾರೆ.
 ಕಡಗ ಕಿರುಗೆಜ್ಜೆ ಪೆಂಡೆಗಳಿಂದಲೊಪ್ಪುವ 
 ಉಡುಗೆ ಪೀತಾಂಬರತರಳಕೌಸ್ತುಭ|| 
 ಪಿಡಿದ ಶಂಖ ಚಕ್ರ ಕರ್ಣಕುಂಡಲದಿಂದ 
 ಕಡಲಶಯನ ಎನ್ನ ಹೃದಯದೊಳಗೆ ನಿಲ್ಲೊ 

ಗರುಡ ಗಮನನಾಗಿ ಬೇಗ ಬಂದು ನನಗೆ ಸದಾ ಅಹಂಕಾರವಿಲ್ಲದ ದಾಸ ಭಾವ ನೀಡು ಎಂದು ಬೇಡುತ್ತಾರೆ.
 ಒಡೆಯ ನೀನೆನಗೆ ಅನಾದಿ ಕಾಲದಿಂದ 
 ಬಡವನು ನಾನಿನ್ನ ದಾಸನಯ್ಯ ||
 ಕಡುಕರುಣದಿಂದ ದಾಸತ್ವ ನೀಡು ಗ- 
 ರುಡಗಮನನೆ ವೆಂಕಟೇಶ ಎನ್ನ ಮನಕೆ 

ಈ ದೇಹರಥದಲ್ಲಿ ಬರಿ ಪರಮಾತ್ಮನೊಬ್ಬನೇ ಅಲ್ಲ, ಇಡೀ ಅಭಿಮಾನಿ ದೇವತೆಗಳ ಕುಟುಂಬವೇ ಇದೆ, ಅವರಲ್ಲಿನ ಅವನ ವಿಭೂತಿ ರೂಪ ನೆನೆದು ಕರೆಯುತ್ತಾರೆ.
 ಬರಿಮನೆಯಲ್ಲವು ಪರಿವಾರವು ಉಂಟು 
 ಪರಮಪುರುಷ ನಿನ್ನ ರೂಪಗಳುಂಟು || 
 ಸಿರಿದೇವಿ ಸಹಿತದಿಪುರಂದರವಿಠಲನೆ ಕರುಣದಿಂದಲಿ ಮನ್ಮಂದಿರದೊಳಗೆ

ಸದಾ ಕಾಲ ಸರ್ವತ್ರ ಅವನನ್ನು ಕಾಣಲಾಗದಿದ್ದರೂ, ನಮ್ಮ ಹೃದಯಮಂಟಪಕ್ಕೆ ಅವನ ಕರೆದು ಮಾನಸ ಪೂಜೆಯಂತಿರುವ ಧ್ಯಾನದ ಪ್ರಾಮುಖ್ಯತೆ ಸಾರಿದ ದಾಸರಾಯರ ನೆನೆದು ಪಾವನವಾಗೋಣ.

🙏🏼 ಶ್ರೀ ಪುರಂದರವಿಠ್ಠಲ ಪ್ರೀತೋಸ್ತು
****************

ದಾಸರ ಪದಗಳಲ್ಲಿ ಭಕ್ಷ್ಯಭೋಜ್ಯಗಳು !

 ದಾಸರೆಂದರೆ ಪುರಂದರ ದಾಸರಯ್ಯಾ....

ಕೃಷ್ಣನ ಗುಣಗಾನದ ನೆಪದಲ್ಲಿ ದಾಸರು ಬೆಣ್ಣೆ, ಹಾಲು, ತುಪ್ಪ, ಮೊಸರು ಮೊದಲಾದ ಹೈನು ಪದಾರ್ಥಗಳನ್ನು ತಮ್ಮ ಪದಗಳಲ್ಲಿ ಯಥೇಷ್ಟ ಬಳಸಿದ್ದಾರೆ. ಎಷ್ಟೆಂದರೆ ಪರಮಾತ್ಮನು ಒಂದು ವೇಳೆ cholesterol conscious ಅಗಿದ್ದಿದ್ದರೆ ದಾಸರಿಗೆ ಸಾಕು ನಿಲ್ಲಿಸು, ನಾನು ಡಯಟ್‌ನಲ್ಲಿದ್ದೇನೆ ಎಂದು ಕನಸಲ್ಲಾದರೂ ಬಂದು ಎಚ್ಚರಿಸುತ್ತಿದ್ದುದು ಗ್ಯಾರಂಟಿ. ಹಾಗೆ ಮಾಡಲಿಲ್ಲ ನಮ್ಮ ಪುಣ್ಯ. ಪುರಂದರದಾಸರು ಮತ್ತೂ ಮತ್ತೂ ಬೆಣ್ಣೆ ಹಚ್ಚಿದರು, ತುಪ್ಪ ಸುರಿದರು. ರುಚಿರುಚಿ ಯಾದ ಕೀರ್ತನೆಗಳನ್ನು ರಚಿಸಿದರು. ಅವೆಲ್ಲ ಈ ಲೇಖನಕ್ಕೆ ಕಚ್ಚಾ ಸಾಮಗ್ರಿಯಾದುವು.

ಪಾಯಸದೊಂದಿಗೆ ನಾವು ಸಾಂಪ್ರದಾಯಿಕ ಊಟ ಶುರುಮಾಡಿದಂತೆ ಮೊದಲು ಪಾಯಸದ ವಿಷಯ ನೋಡೋಣ. ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕದಲ್ಲಾ... ಹಾಡಿನಲ್ಲಿ ಪುರಂದರದಾಸರು, ‘ಮುಪ್ಪು ಬಂದಿತಲ್ಲಾ ಪಾಯಸ ತಪ್ಪದೆ ಉಣಲಿಲ್ಲ... ತುಪ್ಪದ ಬಿಂದಿಗೆ ತಿಪ್ಪೆ ಮೇಲೆ ಧೊಪ್ಪನೆ ಬಿತ್ತಲ್ಲ...! ’ ಎಂದಿದ್ದಾರೆ. ಅದಕ್ಕಿಂತಲೂ ‘ರಾಮನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ ವಿಠಲನಾಮ ತುಪ್ಪವ ಬೆರೆಸಿ ಬಾಯ ಚಪ್ಪರಿಸಿರೋ...’ ಹಾಡನ್ನೇ ತೆಗೆದುಕೊಳ್ಳಿ. ಅದರ ಚರಣಗಳಲ್ಲಿ ಪಾಯಸ ತಯಾರಿಯ ವರ್ಣನೆ ಎಷ್ಟು ಸೊಗಸಾಗಿದೆ! ಒಮ್ಮನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ... ಸುಮ್ಮನೆ ಸಜ್ಜಿಗೆ ತೆಗೆದು ಕಮ್ಮನೆ ಶಾವಿಗೆ ಹೊಸೆದು... ಹೃದಯವೆಂಬೊ ಮಡಿಕೆಯಲ್ಲಿ ಭಾವ ಎಂಬ ಹೆಸರನ್ನಿಟ್ಟು... ಬುದ್ಧಿಯಿಂದ ಪಾಕ ಮಾಡಿ ಹರಿವಾಣಕೆ ಬಡಿಸಿಕೊಂಡು... ತಿನ್ನಬೇಕಂತೆ ಪಾಯಸವನ್ನು. 

ಮುಖ್ಯವಾದುದು ಅತಿರಸ ಮತ್ತು ಅಪ್ಪ. ‘ತಿರುಪತಿ ವೆಂಕಟರಮಣ ನಿನಗೇತಕೆ ಬಾರದು ಕರುಣ...’ ಕೃತಿಯಲ್ಲಿ ವರ್ಣಿಸಿದಂತೆ ಅಪ್ಪ-ಅತಿರಸಗಳನ್ನು ಮೆದ್ದ ಸ್ವಾಮಿ ಅಸುರರನ್ನು ಕಾಲಲ್ಲೇ ಒದ್ದನಂತೆ! ‘ಓಡಿ ಬಾರೈ ವೈಕುಂಠಪತಿ ನಿನ್ನ ನೋಡುವೆ ಮನದಣಿ ನಾ...’ ಹಾಡಿನಲ್ಲೂ ದಾಸರು ವೈಕುಂಠಪತಿಗೆ ಎಣ್ಣೋರಿಗತಿರಸ ದಧಿ ಘೃತವೋ ರಂಗ ಎನ್ನಯ್ಯ ನಿನಗೆ ಕೊಡುವೆ ಬಾರೊ... ಎನ್ನುತ್ತಾರೆ. ಅತಿರಸ ಎಂದರೆ ಅಕ್ಕಿಹಿಟ್ಟಿಗೆ ಬೆಲ್ಲದಪಾಕ ಸೇರಿಸಿ ಬಾಳೆ ಎಲೆ ಅಥವಾ ಪ್ಲಾಸ್ಟಿಕ್‌ ಮೇಲೆ ಕೈಯಿಂದ ತಟ್ಟಿ ಅದನ್ನು ತುಪ್ಪದಲ್ಲಿ ಕರಿದು ಮಾಡುವ ಒಂದು ಕಜ್ಜಾಯ. ಅಪ್ಪ ಅಂದರೆ ಗೊತ್ತಲ್ಲ , ಏಳು ತೂತು (groove)ಗಳುಳ್ಳ ಕಾವಲಿಯಲ್ಲಿ ದೋಸೆಹಿಟ್ಟಿನದಂಥದನ್ನು ಹಾಕಿ ಮಾಡುವ ರುಚಿರುಚಿ ತಿಂಡಿ.

ಅಪ್ಪ-ಅತಿರಸದಂತೆ ಹೋಳಿಗೆ ಕೂಡ ಗೊತ್ತು ದಾಸರಿಗೆ. ಹೋಳಿಗೆ ಮಾಡುವಾಗಿನ ಕಣಕವನ್ನಲ್ಲವೇ ಅವರು ‘ಕಣಕ ಕುಟ್ಟೋವಲ್ಲಿಗೆ ಹೋಗಿ ಇಣುಕಿ ಇಣುಕಿ ನೋಡಿದಿರಿ....’ (ಡೊಂಕುಬಾಲದ ನಾಯಕರೆ ನೀವೇನಾಟವ ಆಡಿದಿರಿ... ಪದ್ಯದಲ್ಲಿ) ಉಲ್ಲೇಖಿಸಿದ್ದು ? ಆ ಹಾಡು ನಿಜವಾಗಿಯೂ ನಾಯಿಗಳನ್ನುದ್ದೇಶಿಸಿ ಬರೆದದ್ದೋ ಎಂದೇ ಅನುಮಾನ ಬರುತ್ತದೆ. ಅದರಲ್ಲೇ, ಹುಗ್ಗಿ ಮಾಡೊವಲ್ಲಿಗೆ ಹೋಗಿ ಸೌಟಿಂದ ಬಡಿಸಿಕೊಂಡು (ಅಂದ್ರೆ ಬಡಿತ ತಿಂದು) ಬಂದಿರಿ ಎಂದು ನಾಯಿಗಳ ಬಗ್ಗೆ ಮರುಕಪಡುತ್ತಾರೆ ದಾಸರು. ‘ಬಡಿಸಿಕೊಂಡು’ ಎನ್ನುವಲ್ಲಿನ wordplay ಗಮನಿಸಿ.

ಮಾನವ ಕಂಡ ಆಧುನಿಕತೆಯಲ್ಲಿ ಮೊದಲು ಬೆಲ್ಲ ಆಮೇಲೆ ಸಕ್ಕರೆ ತಯಾರಿ/ಬಳಕೆ ಬಂದದ್ದಿರಬಹುದು ಎಂದು ನಾವೆಣಿಸುತ್ತೇವೆ. ಆದರೆ ಪುರಂದರದಾಸರು ಬೆಲ್ಲಕ್ಕಿಂತ ಸಕ್ಕರೆಯನ್ನೇ ಜಾಸ್ತಿ ಉಪಯೋಗಿಸೋದು. ಭಾಗ್ಯದ ಲಕ್ಷ್ಮಿಯ ಶುಕ್ರವಾರದ ಪೂಜೆಯ ವೇಳೆಗೆ ಸಕ್ಕರೆ-ತುಪ್ಪದ ಕಾಲುವೆಯನ್ನೇ ಹರಿಸುತ್ತಾರವರು. ಆ ಕಾಲುವೆ ಹೇಗಿರಬಹುದು? ತುಂಗಭದ್ರಾ ಎಡದಂಡೆ ಕಾಲುವೆ ಅಥವಾ ಮೇಲ್ದಂಡೆ ಕಾಲುವೆಯಂತಿರಬಹುದೇ? just for imagination! ಇನ್ನೊಂದು ಮಾತು. ಕಾಲುವೆಗಳಲ್ಲಿ ತುಪ್ಪವನ್ನು ಹರಿಸಿದ ದಾಸರಿಗೆ ಆವಾಗಲೇ ಗೊತ್ತಿತ್ತೋ ಏನೊ ಮುಂದೆ ಏಡುಕೊಂಡಲವಾಡ ವೆಂಕಟರಮಣನ (ತಿರುಪತಿ) ಲಡ್ಡುಪ್ರಸಾದ ತಯಾರಿಗೆ ನಮ್ಮ ಕರ್ನಾಟಕದಿಂದಲೇ ನಂದಿನಿ ತುಪ್ಪ ಸರಬರಾಜು ಆಗುತ್ತದೆಯೆಂಬುದು. ತುಪ್ಪ-ಸಕ್ಕರೆಗಳಂತೆಯೇ ಕಲ್ಲುಸಕ್ಕರೆಯನ್ನೂ ಧಾರಾಳ ಪ್ರಮೋಟ್‌ ಮಾಡಿದ್ದಾರೆ ದಾಸರು. ‘ಕಲ್ಲುಸಕ್ಕರೆ ಕೊಳ್ಳಿರೊ...’ ಹಾಡಿನಲ್ಲಿ ಪುಲ್ಲಲೋಚನ ಶ್ರೀಕೃಷ್ಣ ನಾಮವೇ ಕಲ್ಲುಸಕ್ಕರೆಯಿದ್ದಂತೆ ಎಂದಿದ್ದಾರೆ.

ಸಿಹಿಯನ್ನಷ್ಟೇ ತಿನಿಸಿದ್ದೇ ಪುರಂದರದಾಸರು? ಖಂಡಿತವಾಗಿಯೂ ಅಲ್ಲ ! ‘ನೈವೇದ್ಯವ ಕೊಳ್ಳೊ ನಾರಾಯಣಸ್ವಾಮಿ ದಿವ್ಯ ಷಡುರಸಾನ್ನವಿಟ್ಟನೊ...’ ಎಂಬ ಹಾಡಿನಲ್ಲಿ ಅವರು ಫುಲ್‌ ಮೆನು ಡಿಸ್ಪ್ಲೇ ಮಾಡಿದ್ದಾರೆ. ಮೇಲಾಗಿ ಈ ರಸಪಾಕವನ್ನು ಸ್ವತಃ ಭೂದೇವಿ-ರಮಾದೇವಿಯರೇ ಸ್ವಹಸ್ತದಿಂದ ಮಾಡಿದ್ದೆಂದೂ ವರ್ಣಿಸಿದ್ದಾರೆ.

ಅರವತ್ತು ಶಾಕ ಲವಣ ಶಾಕ ಮೊದಲಾದ । ಸರಸ ಮೊಸರು ಬುತ್ತಿ ಚಿತ್ರಾನ್ನವೋ
ಪರಮ ಮಂಗಳ ಅಪ್ಪವು ಅತಿರಸ । ಹರುಷದಿಂದಲಿಯಿಟ್ಟ ಹೊಸ ತುಪ್ಪವೋ
ಹಿಡೆಯಂಬೊಡೆ ದಧಿವಡೆಯು ತಿಂಥಿಣಿ । ಒಡೆಯ ಎಡಗೆ ಒಡನೆ ಬಡಿಸಿದ
ದೃಢವಾದ ಪದಾರ್ಥಗಳನೆಲ್ಲ ಇಡಿಸಿದೆ । ಒಡೆಯ ಶ್ರೀ ಪುರಂದರ ವಿಠಲನೆ ಉಣ್ಣೊ

ಅಂದರೆ ಚಿತ್ರಾನ್ನ, ಬುತ್ತಿಯನ್ನ, ಮೊಸರನ್ನ, ಆಂಬೊಡೆ, ದಹಿವಡಾ (ತೈರ್‌ವಡೆ) ಇತ್ಯಾದಿ ಕುಕ್ಕಿಸಿದ್ದಾರೆ ಪುರಂದರದಾಸರು. ಇನ್ನೂ ಒಂದು ಸ್ವಾರಸ್ಯಕರ ಸಂಗತಿಯೆಂದರೆ, ಭಾರತದಲ್ಲಿ ಪ್ರಪ್ರಥಮವಾಗಿ ಅಡಿಗೆಯಲ್ಲಿ ಮೆಣಸಿನ ಉಪಯೋಗ ಉಲ್ಲೇಖವಾಗಿರುವು

ವಹವ್ವಾರೆ ಮೆಣಸಿನಕಾಯಿ 
ಒಣರೊಟ್ಟಿಗೆ ತಂದೆನೊ ತಾಯಿ  ||ಪ||

ಹುಟ್ಟುತಲಿ ಹಸಿರಾಗುತ ಕಂಡೆ
ನಟ್ಟನಡುವೆ ಕೆಂಪಾಗುತ ಕಂಡೆ
ಕಟ್ಟೆರಾಯನ ಬಹುರುಚಿಯೆಂಬೆ ||೧||

ಒಂದೆರಡೆರದರೆ ಬಹುರುಚಿಯೆಂಬೆ
ಮೇಲೆರಡೆರೆದರೆ ಬಹು ಖಾರೆಂಬೆ ಅದೂ
ಎರಡರೆದರೆ ಅತಿ ಖಾರೆಂಬೆ ||೨||

ಬಡವರಿಗೆಲ್ಲ ನಿನ್ನಾಧಾರ
ಅಡಿಗೆ ಊಟಕೆ ನಿನ್ನಾಸಾರ
ಬಾಯಲಿ ಕಡಿದರೆ ಬೆಂಕಿಯ ಖಾರ
ಪುರಂದರ ವಿಠಲನ ನೆನೆಯೋದು ಭಾರ ||೩||

ಭಗವಂತನಿಗೆ ಅರ್ಪಣೆಗೋಸ್ಕರ ಮಾತ್ರವಲ್ಲದೆ ಭಕ್ತಾದಿಗಳ ಬದುಕಿಗೆ ಬೆಳಕಾಗುವಂತೆ ಬರೆದ ಹಿತನುಡಿಯ ಪದಗಳಲ್ಲೂ ದಾಸರು ತಿಂಡಿತಿನಿಸನ್ನು ಉಲ್ಲೇಖಿಸಿದ್ದಾರೆ. ಅಂಥವುಗಳ ಪೈಕಿ ಒಂದೆರಡನ್ನು ಅವಲೋಕಿಸೋಣ.
ಜಿಪುಣಬುದ್ಧಿಯವರನ್ನು ಮೂದಲಿಸುತ್ತ ದಾಸರು ‘ಹುಗ್ಗಿಯ ತುಪ್ಪವು ಮನೆಯಾಳಗಿರಲಿಕ್ಕೆ ಗುಗ್ಗುರಿಯನ್ನವ ತಿಂದ್ಯಲ್ಲ ಪ್ರಾಣಿ... ಹತ್ತು ಸಾವಿರ ಹೊನ್ನು ತಿಪ್ಪೇಲಿ ಹೂಳಿಟ್ಟು ಮತ್ತೆ ಉಪ್ಪಿಲ್ಲದೆ ಉಂಡ್ಯಲ್ಲೊ ಪ್ರಾಣಿ...’ ಎಂದಿದ್ದಾರೆ - ‘ಹರಿ ಕೊಟ್ಟ ಕಾಲಕ್ಕೆ ಉಣಲಿಲ್ಲ ಹರಿ ಕೊಡದ ಕಾಲಕ್ಕೆ ಬಾಯಿ ಬಿಡುವಲ್ಲೊ ಪ್ರಾಣಿ...’ ಎಂಬ ಕೃತಿಯಲ್ಲಿ. ಇಂಥ ಜಿಪುಣರು ನಮ್ಮ-ನಿಮ್ಮ ದೈನಂದಿನ ವ್ಯವಹಾರಗಳಲ್ಲೂ ಬೇಕಾದಷ್ಟು ಮಂದಿ ಸಿಗುತ್ತಾರಲ್ಲವೆ? ಇದ್ದಾಗ ಅದನ್ನು ಅನುಭವಿಸಿ ಆನಂದಿಸದೆ ಅದಿಲ್ಲ ಇದಿಲ್ಲ ಎಂದು ಪರಿತಪಿಸುವ ಅಳುಮುಂಜಿಗಳಿಗೇನು ಕೊರತೆಯಿದೆಯೇ? ಇರುವುದನು ಬಿಟ್ಟು ಇಲ್ಲದುದರ ಕಡೆ ತುಡಿತ.... ಅಡಿಗರು ಅಡಿಗೆ ಮಾಡಿ ನಮಗೆ ಬಡಿಸಿದ್ದೂ ಅದೇ ತತ್ವವನ್ನಲ್ಲವೇ?


ಸರ್ವಜನ ಸುಖಿನೋಭವಂತು ಕೃಷ್ಣಾರ್ಪಣಮಸ್ತು
**************

ಶ್ರೀ ಪುರಂದರ ದಾಸರ ಒಂದು ಅರ್ಥ ಪೂರ್ಣ ಸುಂದರ ಕೃತಿ.

ವಿಜಯನಗರದ ಅರಸರಾದ ಶ್ರೀ ಕೃಷ್ಣದೇವರಾಯ ರಿಗೆ
ಹೇಳಿದ ಉಪದೇಶ.

ಪುರಂದರ ದಾಸರ ಕಾಲದಲ್ಲಿ ಶ್ರೀ ಕೃಷ್ಣ ದೇವರಾಯ ನು
ವಿಜಯನಗರದ ಸಾರ್ವಭೌಮ ನಾಗಿ ಆಸ್ಥಾನದಲ್ಲಿ ಅನೇಕ ವಿದ್ವಾಂಸರ ಆಶ್ರಯ ದಾತನಾಗಿದ್ದು ಸಂಗೀತ, ಸಾಹಿತ್ಯ ಗಳಿಗೆ ಪ್ರೋತ್ಸಾಹ ನೀಡುತ್ತಿದ್ದನು.

ನವಕೋಟಿ ನಾರಾಯಣ ನೆಂದು ಹೆಸರು ಪಡೆದ ಶ್ರೀನಿವಾಸ ನಾಯಕ ರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಪುರಂದರ ದಾಸರು ಎಂಬ ಹೆಸರಿನಲ್ಲಿ
ಹರಿದಾಸ ರಾಗಿದ್ದು ಮಹಾರಾಜನಿಗೆ ತಿಳಿದು ಆಶ್ಚರ್ಯಕರ ವಾಯಿತು.

ಅವರ ಮಹಿಮೆ ಯನ್ನು,,ಅವರ ವೈಭವವನ್ನು ನೋಡಬೇಕೆಂಬ ಆಸೆ ಯಿಂದ ಶ್ರೀ ವ್ಯಾಸರಾಯರ ಮಠಕ್ಕೆ ಬಂದನು

ಅದೇ ಸಮಯದಲ್ಲಿ ವ್ಯಾಸರಾಯರು, ಕನಕದಾಸರು, ಪುರಂದರ ದಾಸರು ಭಜನೆಯಲ್ಲಿ ಮಗ್ನರಾಗಿದ್ದರು.

ಮಹಾರಾಜನು ಅಲ್ಲಿಗೆ ಬಂದಿದ್ದನ್ನು ನೋಡಿ ಜನರು ದೂರ ದೂರ ಕ್ಕೆ ಸರಿಯುವುದನ್ನು ನೋಡಿ ರಾಜನು
ಗದ್ದಲೆ ಮಾಡಬೇಡಿ ಎಂದು ಸಂಜ್ಞೆಯಿಂದ ತಿಳಿಸಿ ಸ್ವಾಮಿ ಗಳಿಗೆ ನಮಸ್ಕರಿಸಿ ಅಲ್ಲಿಯೇ ಕುಳಿತು ಕೊಂಡನು.

ಭಜನೆಯಲ್ಲಿ ಮಗ್ನರಾಗಿದ್ದ ದಾಸರು ಗಳು ಭಾವಸಮಾಧಿ ಯಿಂದ ಹೊರಗೆ ಬಂದು ಮಹಾರಾಜನನ್ನು ಕಂಡು ಇದೇನು ಇತ್ತ ಬಂದಿರುವುದು ಎಂದು ಕೇಳಿದಾಗ ಸುಕೃತ ದಿಂದಲೇ ತಮ್ಮ ದರ್ಶನ ವಾಯಿತು.ಎಂದು ಹೇಳಿದಾಗ ವ್ಯಾಸ ರಾಯರು
"ನೋಡಿದಿರಾ ನಮ್ಮ ದಾಸರನ್ನು"
ಎಂದು ಕೇಳಿದರು.

ಹೀಗೆ ಸಮಯೋಚಿತ ವಾದ ಸಂಭಾಷಣೆ ಗಳನ್ನು ಮಾಡಿ ಶ್ರೀ ಪುರಂದರ ದಾಸರ ನ್ನು ತಮ್ಮ ಅರಮನೆಗೆ ಕರೆದುಕೊಂಡು ಅವರ ಅನುಭವ ಗಳನ್ನು ಕೇಳಿ ಆನಂದಿಸಿದನು.

ಆಗ ದಾಸರು ಮಹಾರಾಜನೊಡನೆ ವಿನೋದದಿಂದ
ಇದು ನಮ್ಮ ಭಾಗ್ಯವೊ ನಿಮ್ಮ ಭಾಗ್ಯವೋ ಎಂದು ಕೇಳಿದರು.

ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ದೊಡ್ಡದೋ//

ಸುಮ್ಮನೆ ಇಬ್ಬರು ಕೂಡಿ ಸಾಟಿ ಮಾಡಿ ನೋಡುವ//

ಸರಕು ತುಪ್ಪ ದವಸ ಧಾನ್ಯ/ ಸವೆದೀತೆಂಬ ಚಿಂತೆ ಯುಂಟು/

ಹರಿ ನಾಮಾಮೃತಕೆ ಇನ್ನು ಯಾವ ಚಿಂತೆ ಯಿಲ್ಲವಯ್ಯಾ/೧//

ವ್ಯಾಪಾರ ಉದ್ಯೋಗ ಗಳಿಗಿನ್ನು/ಅಪಾರ ಅಂಜಿಕೆ ಯುಂಟು/

ಗೋಪಾಳ ಬೇಡುವುದಕ್ಕೆ ಆರ ಅಂಜಿಕೆ ಯಿಲ್ಲವೊ//೨//

/

ಹೆಣ್ಣು ಹೊನ್ನು ಮಣ್ಣು ಗಳಿಗೆ ಕಣ್ಣಿಡುವರಂಜಿಕೆಯುಂಟು/ಪನ್ನಗಶಯನ ನಾಮಕೆ
ಆರ ಅಂಜಿಕೆ ಯಿಲ್ಲವೊ//೩///

ಕಡಗ ಕಂಠ ಮಾಲೆಗಿನ್ನು ತುಡುಗರ ಅಂಜಿಕೆ ಯುಂಟು/

ಅಡವಿ ತುಲಸೀ ಮಾಲೆಗಿನ್ನು ಯಾರ ಅಂಜಿಕೆ ಯಿಲ್ಲವೊ//೪//

ನಿಮ್ಮ ಭಾಗ್ಯ ಲಕ್ಷ್ಮಿದೇವಿ ನಮ್ಮ ಭಾಗ್ಯ ನಾರಾಯಣ
ನಮ್ಮ ನಿಮ್ಮ ಭಾಗ್ಯ ದೊಡೆಯ ಶ್ರೀ ಪುರಂದರ ವಿಠ್ಠಲನ ಒಮ್ಮನದಿ ಸ್ಮರಿಸುವುದಕ್ಕೆ ಆರ ಅಂಜಿಕೆ ಯಿಲ್ಲವೊ//೫//.

ಎಂದು ವೈರಾಗ್ಯದ ಹಾಡನ್ನು ಹಾಡಿದಾಗ ರಾಜನಿಗೆ ಸಂತೋಷ ವಾಗಿ ಅವರನ್ನು ಸತ್ಕರಿಸಿ ಅನೇಕ ವಸ್ತ್ರ, ಆಭರಣಗಳನ್ನು ಕೊಟ್ಟನು

ದಾಸರು ರಾಜನ ಭಕ್ತಿ ಯನ್ನು ಹೊಗಳಿ, ರಾಜನಿಂದ ಬಂದ ವಸ್ತುಗಳನ್ನು ಅಲ್ಲಿನ ಬಡವರಿಗೆ ದಾನ ಮಾಡಿ ದರು.

ಈ ವಿಷಯ ರಾಜನಿಗೆ ತಿಳಿದು ಮತ್ತೊಮ್ಮೆ ಅವರನ್ನು ಭೇಟಿ ಮಾಡಿದಾಗ ತಾವು ಕೊಟ್ಟ ವಸ್ತ್ರ ಆಭರಣ ಗಳು
ಅವರ ಗೌರವಕ್ಕೆ ಸಾಲದಾಯಿತೆಂದು ಶಂಕಿಸಿ ಅವರನ್ನು ವಿಚಾರಿಸಿದಾಗ "ತಾವು ಕೊಟ್ಟ ಬಹುಮಾನ ಶ್ರೀಹರಿಗೆ ಸಮರ್ಪಣೆ ಯಾಗಿದೆ.

ಅವುಗಳನ್ನು ನಾನು ಧರಿಸಿದ್ದರೆ ಶ್ರೀ ಹರಿ ಗೆ ಅಷ್ಟು ಪ್ರೀತಿ ಯಾಗುತ್ತಿರಲಿಲ್ಲ"

ಎಂದು ಹೇಳಿದಾಗ ಶ್ರೀ ಕೃಷ್ಣ ದೇವರಾಯ ನಿಗೆ ಶ್ರೀ ಪುರಂದರ ದಾಸರಲ್ಲಿ ಅಧಿಕ ಗೌರವವುಂಟಾಯಿತು.


//ಶ್ರೀ ಹರಿ ಸಮರ್ಪಣೆ//.
************

ವಿಜಯ ನಗರ ಸಾಮ್ರಾಜ್ಯ ದಕ್ಷಿಣದ ಕಾವೇರಿಯಿಂದ ಉತ್ತರದ ಗೋದಾವರಿ ವರೆಗೆ ವಿಸ್ತಾರ  ಆಗಿತ್ತು.  ವ್ಯಾಸತೀರ್ಥರು ಸಾಮ್ರಾಜ್ಯದ ರತ್ನ ಸಿಂಹಾಸನ  ಏರಿ , ರಾಜನ ಕುಹಯೋಗ ಕಳೆದ ಧೀರರು.  ವ್ಯಾಸ ಸಾಹಿತ್ಯ ಸರಸ್ವತಿಯನ್ನು ಕೂಡ  ವ್ಯಾಸತ್ರಯ ಗಳನ್ನೂ ರಚಿಸಿ ರತ್ನ ಸಿಂಹಾಸನದ ಮೇಲೆ ಕೂಡಿಸಿ ಮೆರೆಸಿದರು.  ಅದೇ ಸಮಯದಲ್ಲಿ, ದಾಸಸಾಹಿತ್ಯ ಸರಸ್ವತಿಯನ್ನು ಶೃತಿ, ಸ್ಮೃತಿ, ಉಪನಿಷತ್, ಪುರಾಣ ಗಳಿಂದ ಕೂಡಿದ ತತ್ವವೆಂಬ ರತ್ನಕಿರೀಟವನ್ನು ತೊಡಿಸಿ  ಅಲಂಕರಿಸಿದರು.  ಅವರೇ ಇಂದಿನ ಕಥಾನಾಯಕರಾದ ದಾಸ ಸಾಹಿತ್ಯ ಪಿತಾಮಹರೆನಿಸಿದ ಶ್ರೀ ಪುರಂದರದಾಸರು ಎಂದು ಬರೆಯಲು ಸಂತಸವಾಗುತ್ತದೆ.

ಪುರಂದರರು ಈಗಿನ ಮಹಾರಾಷ್ಟ್ರದ ಪುರಂದರಗಡ  ಎಂಬ ಊರಿನವರು. ಆಗಿನ ಕಾಲದಲ್ಲಿ ಅದು ಕರ್ನಾಟಕ ಪ್ರಾಂತಕ್ಕೆ ಸೇರಿತ್ತು. ಈಗ ನಮ್ಮ ದುರದೃಷ್ಟ, ಅಲ್ಲಿ ಕನ್ನಡ ಮಾತನಾಡುವ ಜನ ಕೈ ಬೆರಳ ಲೆಕ್ಕದಲ್ಲಿ ಇರುವರೆಂದು ಬರೆಯಲು ವಿಷಾದ ಎನಿಸುವದು.  ಐದುನೂರು ವರ್ಷಗಳ ಮುಂಚೆ ವಾರದಪ್ಪನಾಯಕ ರೆಂಬ ಚಿನಿವಾಲ ವೃತ್ತಿ ಮಾಡಿಕೊಂಡು ಜೀವಿಸುತ್ತ ಇದ್ದರು.  ಅವರ ಸಂತಾನವೇ ಶ್ರೀನಿವಾಸನಾಯಕ, ಭಾವಿ ಪುರಂದರರು.  ಚಿಕ್ಕವರಿದ್ದಾಗಲೇ ಕುಟುಂಬ ವೃತ್ತಿ ಯನ್ನು ಕರಗತ ಮಾಡಿಕೊಂಡಿದ್ದರು. ಇದರ ಸಂಗಡ ದ್ವೈತ ಶಾಸ್ತ್ರ ವನ್ನೂ  ತಿಳಿದಿದ್ದರು. ವೃತ್ತಿಯಲ್ಲಿ  ಜಿಪುಣತನ ಬೆಳೆಯಿತು.  ಕೇವಲ ತಮ್ಮ ಊರು, ಪ್ರಾಂತ ಅಲ್ಲದೆ, ಗೋವಾ, ಗುಜರಾತ ಕರಾವಳಿ ಗಳಲ್ಲಿ ತಮ್ಮ ವ್ಯಾಪಾರ ನಡೆಸಿದ್ದರು.   ಇತಿಹಾಸ ಕಾರರ ಪ್ರಕಾರ ಶ್ರೀನಿವಾಸನಾಯಕರು, ಸಹ್ಯಾದ್ರಿ ಯಲ್ಲಿ ಬೆಳೆಯುವ  ಮಸಾಲೆ ಸಾಮಾನುಗಳನ್ನು ಬಂದರು ಪ್ರದೇಶಗಳಲ್ಲಿ ತಮ್ಮ ಪ್ರತಿನಿಧಿ ಗಳನ್ನೂ ಇಟ್ಟು ವಿದೇಶಿಯರಿಗೆ ಮಾರಾಟ ಮಾಡುತ್ತಿದ್ದರು.  ಕರ್ನಾಟಕದ  ಭಟ್ಕಳ್, ಗುಜರಾತಿನ ಖಾಂಡ್ಲಾ, ಗೋವಾ, ಮಲಬಾರ್ ಗಳಲ್ಲಿ ಸಗಟು ವ್ಯಾಪಾರ ಕೇಂದ್ರಗಳನ್ನು ಮಾಡಿಕೊಂಡು, ಕುದುರೆಯ ಮೇಲೆ ಓಡಾಡುತ್ತಿದ್ದರು.  ಈ ಸಂಗಾತಿಯಿಂದ ನಾವು ನಾಯಕರು ಎಷ್ಟು ಮುಂದುವರೆದ ವ್ಯಕ್ತಿ ವ್ಯಾಪಾರ ಕುಶಲ ರಾಗಿದ್ದರು ಎಂದು  ಊಹಿಸಬಹುದು.  ಅವರ ಜಿಪುಣತನದ ಪರಾಕಾಷ್ಠೆ ಎಷ್ಟಿತ್ತು ಅಂದರೆ, ವಿಜಯನಗರ  ಕ್ಕೆ  ಹೋಗಿ ಕಂದಾಯ ಕಟ್ಟಿ ಬಂದರೆ, ಅಧಿಕಾರಿಯನ್ನು  ಮಾತ್ರ ಭೇಟಿಯಾಗುತ್ತಿದ್ದರು.  ಹೊರತು ರಾಜನನ್ನು ಆಗಲಿ ವ್ಯಾಸತೀರ್ಥರನ್ನಾಗಲಿ  ಕಿಂಚಿತ್ತೂ ಹೊರಳಿನೋಡುತ್ತಿರಲಿಲ್ಲ,. ಏಕೆಂದರೆ ಭೇಟಿ ಆದರೆ  ದಕ್ಷಿಣೆ, ಸಂಭಾವನೆ ಕೊಡಬೇಕಾಗುತ್ತಿತ್ತು. ಹೀಗಿರಲಾಗಿ ಒಂದು ಘಟನೆ  ನಡೆಯಿತು.

ದ್ವಾಪರದಲ್ಲಿ ಶ್ರೀ ಕೃಷ್ಣನನ್ನು ಕಾಣಲು  ಬಂದಾಗ  ಕೃಷ್ಣನ ಆದೇಶದಂತೆ ಕಲಿಯುಗದಲ್ಲ ಕಲಿಯ ಪ್ರಭಾವ ಹೆಚ್ಚಾದಾಗ ಅವತರಿಸಿ ಶ್ರೀ ಹರಿ ಕೀರ್ತನೆ  ಮೂಲಕ ಧರ್ಮ ಪ್ರಚಾರ ಮಾಡು,  ಎಂಬ ಮಾತನ್ನು  ಶಿರಸಾ ವಹಿಸಿ ಶ್ರೀನಿವಾಸನಾಯಕರಾಗಿ  ಅವತರಿಸಿದರು. ಲೌಕಿಕ ಜೀವನದ ಸುಳಿಯಲ್ಲಿ ಸಿಕ್ಕಿ ಭಾಗವಂತನ  ಮಾತನ್ನು ಮರೆತರು.. ದೇವತೆಗಳು ಮಾನವರಾದಾಗ ಮಾನವ ಸಹಜ ಬುದ್ಧಿ ಆವರಿಸುತ್ತದೆ. ಇವರಿಗೆ 39 ವರ್ಷಗಳು ಕಳೆದರೂ ಇನ್ನ್ನೂ ಲೋಭಾಗುಣ ಕಡಿಮೆ ಆಗಲಿಲ್ಲ.  ಆಗ ಶ್ರೀ ಹರಿ ನಾಟಕ ಮಾಡಿದನು.  ಬಡ ಬ್ರಾಹ್ಮಣ ವೇಷದಲ್ಲಿ ಬಂದು ಮಗನ ಮುಂಜಿವೆ ಮಾಡುವದಕ್ಕೆ ಸಾಲ ಬೇಡಿದನು. ದಿನ ನಿತ್ಯ ಬಂದು ನಾಯಕನ ಮನಸ್ಸು ಕೆಡಿಸಿ, ಅವರ ಮನೆಗೆ ಬಂದು ಸರಸ್ವತಿಬಾಯಿಯ ಮನ ಗೆದ್ದು ಮೂಗುತಿಯನ್ನು ತೆಗೆದುಕೊಂಡು ವ್ಯಾಪಾರಿ ವೇಷ ದಿಂದ ಅಂಗಡಿಗೆ ಹೋಗಿ ಹಣ ಕೇಳಿ ತೆಗೆದುಕೊಳ್ಳದೆ ವಿಠ್ಠಲನ  ಗುಡಿಯಲ್ಲಿ ಮಾಯವಾದನು.  ಇತ್ತ ನಾಯಕನಿಗೆ ಮೂಗುತಿ ಕಂಡು ಸಂಶಯ ಬಂದು, ಮನೆಗೆ ಬಂದು ಹೆಂಡತಿಗೆ ಮೂಗುತಿ ವಿಷಯ ಕೇಳಿದನು.  ಸರಸ್ವತಿ ಬಾಯಿ ವಿಷಪ್ರಾಶನಕ್ಕೆ ಕುಳಿತಾಗ ಬಟ್ಟಲಲ್ಲಿ ವಜ್ರದ ಮೂಗುತಿ ಬಿದ್ದು ಪತಿಗೆ ಒಪ್ಪಿಸುತ್ತಾಳೆ. ನಾಯಕನಿಗೆ ಆಶ್ಚರ್ಯ ಮತ್ತು ಮನದಲ್ಲಿ ಏನೋ ಅಸಮಾಧಾನ. ಅಂಗಡಿಯಲ್ಲಿ ಮೂಗುತಿ ಇಲ್ಲ.  ವ್ಯಾಪಾರಿ ಮಂದಿರದಲ್ಲಿ ಮಾಯವಾಗಿದ್ದಾನೆ. ಇದೆಲ್ಲ ವಿಠ್ಠಲನ ಆಟ, ಹೆಡತಿಗೆ ದೇವರ ದರ್ಶನ ಭಾಗ್ಯ,  ಅವಳೇ ಪುಣ್ಯವಂತೆ ಎಂದು ಉಪವಾಸ ಮಾಡುತ್ತಾನೆ.  ಈಗಲೂ ಶ್ರೀಹರಿ ಸರಸ್ವತಿಗೆ ದರ್ಶನ ಕೊಟ್ಟು ಉಪವಾಸ ಬಿಡಲು ಹೇಳಿದನು. ನಾಯಕನು ತನಗೇಕೆ ದೇವರ ದರ್ಶನ ಆಗಲಿಲ್ಲ ಎಂದು ಹತಾಶನಾದನು. ವೈರಾಗ್ಯದಿಂದ ಮನೆಯ ಮೇಲೆ ತುಳಸಿ ದಳ  ಒಗೆದು ಕೃಷ್ಣಾರ್ಪಣ ಎಂದು ಊರ ಹೊರಗಿನ ಮಾರುತಿ ಗುಡಿಗೆ ಬಂದು ಕುಟುಂಬ ಸಹಿತ ಮಲಗಿದನು. ಕನಸಿನಲ್ಲಿ ಶ್ರೀ ಕಾಣಿಸಿಕೊಂಡು ಹಂಪೆಯಲ್ಲಿ ಶ್ರೀ ವ್ಯಾಸತೀರ್ಥರನ್ನು ಕಂಡು ದಾಸ ದೀಕ್ಷೆ ಅಂಕಿತ ತೆಗೆದುಕೊಂಡು ದಾಸನಾಗೆಂದು ಹೇಳಿದಂತಾಯಿತು. ಶ್ರೀನಿವಾಸನಾಯಕ ಹಂಪೆಗೆ ಬಂದು ಗುರುಗಳನ್ನು ಕಂಡನು. ವ್ಯಾಸರಾಯರಿಗೆ ಎಲ್ಲ ತಿಳಿದು ಉಭಯ ಕುಶಲೋಪರಿ ಮಾತನಾಡಿ ಮರುದಿನ ದಂಪತಿ ಸಹಿತ ಬರಹೇಳಿ ಪುರಂದರವಿಠ್ಠಲ  ಅಂಕಿತ ಕೊಟ್ಟರು.  ಆಗ ಹಾಡಿದ ಹಾಡು "ಇಂದಿನ ದಿನವೇ ಶುಭ ದಿನ ಇಂದಿನ ವಾರ ಶುಭ ವಾರ ". ದಿನನಿತ್ಯ ದಾಸರಿಗೆ ಗುರುಗಳಿಂದ ಮೊದಲ ತೀರ್ಥ ಆಗುತ್ತಿತ್ತು.  ಇದನ್ನು ಕಾಣು ಕುಹಕಿಗಳು ಕೈ ಹಿಸುಕಿ ಕೊಂಡರು. ದಿನಾಲು ಭಜನೆ ಜಾಗರಣೆ ನಡೆಯುತ್ತಿತ್ತು.
******

cc
ದಾಸರು ತಮ್ಮ ಶ್ರೀಮಂತ ಜೀವನದಿಂದ ದಾಸ ತ್ತಿಗೆ ಪರಿವರ್ತನೆಗೆ ಮೂಲ ಕಾರಣ ತಮ್ಮ ಹೆಂಡತಿ ಎಂದು ಹೇಳಿದ್ದಾರೆ. ಇದಕ್ಕಾಗಿ ಅವರು ಆದದ್ದೆಲ್ಲಾ ಒಳಿತೇ ಆಯಿತು,  ಎಂಬ ಪದ್ಯ ರಚಿಸಿದ್ದಾರೆ. ಹೀಗೆ ಒಂದು ದ್ವಾದಶಿ ದಿನ  ಮುಂಜಾನೆ ಏಳುವದು ತಡವಾಯಿತು. ರಾತ್ರಿ ಜಾಗರಣೆ ಆಗಿತ್ತು. ಗುರುಗಳು ತೀರ್ಥಕ್ಕಾಗಿ  ಕಾಯುತ್ತಿದ್ದರು. ಮಠದ ಪರಿಚಾರಕರು ಕರೆಯಲು ಬಂದರು. ದಾಸರು ಸ್ನಾನವಿಲ್ಲದೆ ಮಠಕ್ಕೆ ಹೋಗಿ ತೀರ್ಥ ತೆಗೆದುಕೊಂಡು ಊಟ ಮಾಡಿದರು. ಕುಹಕಿಗಳಿಗೆ ಸ್ನಾನವಿಲ್ಲದ ಊಟ  ಅಪಪ್ರಚಾರಕ್ಕೆ ಕಾರಣ ಆಯಿತು. ಗುರುಗಳ ಎದುರು ಪಿತೂರಿ ಮಾಡಿದರು. ಗುರುಗಳು ನಗುತ ದಾಸರು ಏನು ಮಾಡುತ್ತಿರುವರೆಂಬುದನ್ನು ನೋಡಿ ಹೇಳಿರಿ ಎಂದರು. ದಾಸರು ನಡಿಗೆ ಹೋಗಿ ಯೋಗaಆಹ್ನಿಕ ಮುಗಿಸಿ   ಉಂಡ ಆಹಾರ ಹೊರಗೆ ಇಟ್ಟು ಸ್ನಾನ ಮಾಡಿ  ಆಹ್ನಿಕ ಮುಗಿಸಿ ತೆಗೆದಿಟ್ಟ ಆಹಾರಕ್ಕೆ ನೀರು ಪ್ರೋಕ್ಷಣೆ ಮಾಡಿದರು. ತಕ್ಷಣ ಬಿಸಿಬಿಸಿ ಊಟ ತಯಾರಾಗಿತ್ತು. ಊಟ ಮುಗಿಸಿ ನಗುತ್ತಾ ಮನೆ ತಲುಪಿದರು. ಕುಹಕಿಗಳು ಎಲ್ಲವನ್ನು ನೋಡಿ ಗುರುಗಳಿಗೆ ಹೇಳಿದರು. ಗುರುಗಳು ದಾಸರ  ಮಹಿಮೆ ಅಪಾರ ಅವರನ್ನು ಪರೀಕ್ಷಿಸಲು ಹೋಗಬೇಡಿರೆಂದು ತಿಳಿ ಹೇಳಿದರು. 
ಒಮ್ಮೆ ಕೃಷ್ಣದೇವರಾಯ  ತನ್ನ ರಾಜ್ಯದ ಅತಿ  ಶ್ರೀಮಂತ  ವ್ಯಾಪಾರಿ ನಾಯಕನು ವೈರಾಗ್ಯ ತಾಳಿ ದಾಸನಾದನೆಂದು  ಕರೆದು ಧಾನ್ಯ, ಹವಳ ಮುತ್ತು ಕೊಟ್ಟು ಕಳಿಸಿದನು. ಮರುದಿನ ಓಡಾಡುತ್ತ ಬಂದು ದಾಸರಲ್ಲಿ ನಿನ್ನೆ ಕೊಟ್ಟ ಧಾನ್ಯದ ಅಡಿಗೆ ಮಾಡಿದರಾ  ಎಂದು ಕೇಳಿದ್ದಕ್ಕೆ ಅಕ್ಕಿಯಲ್ಲಿ ಕಲ್ಲುಗಳೇ ಬಹಳ ಎಂದು ದಾಸರ ಹೆಂಡತಿ ಹೇಳಿದಳು. ಇದರಿಂದ ದಾಸರ ವೈರಾಗ್ಯ ಎದ್ದು ಕಾಣುವದು. ಮುತ್ತುಮರತ್ನಗಳನ್ನು ಕಲ್ಲು ಎಂದು ಬಿಸಾಡಿದ್ದರು. ಹೀಗೆ ದಾಸರು ಎಷ್ಟೋ ಪವಾಡ ಮಾಡಿರುವರು.

ಒಮ್ಮೆ ದಾಸರು ನಾದಬ್ರಹ್ಮನ ತವರಿಗೆ ಬಂದರು.  ವಿಠ್ಠಲನ ದರ್ಶನ ಆತನಿಗೆ ಭಜನೆ ಸೇವೆ ಮಾಡಿದರು.  ರಾತ್ರಿ ಹೊರಗೆ ಹೋಗಿ ಬಂದು ಆಪ್ತ ಸೇವಕ ಅಪ್ಪಣ್ಣ ಭಾಗವತನಿಗೆ ನೀರು ತರಲು ಹೇಳಿದರು.  ಅಪ್ಪಣ್ಣ ನಿದ್ದೆಯಲ್ಲಿ ಮುಳುಗಿದ್ದನು.  ವಿಠ್ಠಲ ತಾನೇ ಅಪ್ಪಣ್ಣನ ವೇಷಧಾರಿ ಯಾಗಿ ನೀರು ತಂದು ಕೊಟ್ಟನು.  ದಾಸರು ಸಹಜವಾಗಿ ಇಷ್ಟು ತಡವೇಕೆ  ಮಾಡಿದಿ ಎಂದು ತಂಬಿಗೆಯಿಂದ ವೇಷಧಾರಿಯ  ತಲೆಗೆ ಕುಟ್ಟಿದರು.  ವಿಠ್ಠಲನ ಪೂಜೆ ಮಾಡಲು ಭಡವಾ  ಗಳು ನೋಡಿದ್ದು ವಿಠ್ಠಲನ ನೆತ್ತಿಗೆ ಗುಮ್ಮಟೆ ಎದ್ದಿದೆ.  ಕಣ್ಣಲ್ಲಿ ದಳ ದಳನೆ ನೀರು ಬರುತ್ತಿವೆ.  ಕಣ್ಣು ಒರೆಸಿದರೂ  ಅಶ್ರುಧಾರೆ ನಿಲ್ಲಲಿಲ್ಲ.  ಕೊನೆಗೆ ಸುದ್ದಿ ದಾಸರಿಗೆ ತಲುಪಿತು.  ದಾಸರು ಅಪ್ಪಣ್ಣನಿಗೆ ರಾತ್ರಿ ನೀರು ನೀನೇ  ತಂದು ಕೊಟ್ಟೆ ತಾನೇ? ಅಪ್ಪಣ್ಣ ಇಲ್ಲ ವೆಂದನು.  ದಾಸರಿಗೆ ಸಂಶಯ, ಸಂತೋಷ, ದುಃಖ ಗಳಾದವು.  ವಿಠ್ಠಲನ ಮಂದಿರಕ್ಕೆ ಓಡುತ್ತ  ಬಂದು ನಾನು ನಿನ್ನನ್ನು ಕರೆಯಲೇ ಇಲ್ಲ ನೀನೇಕೆ ಬಂದು ಈ ಪರಿ ಮಾಡಿಕೊಂಡಿ?  ಎಂದು ಕೇಳಿ ಕನೀರು ಒರೆಸಿದರು.  ತಲೆ ಮೇಲೆ ಕೈ ಆಡಿಸಿದರು.  ಮೂರ್ತಿ ಮೊದಲಿನಂತಾಯಿತು.  
ಮುಂದೆ ಒಂದು ದಿನ ವಿಠ್ಠಲ ದಾಸರ ವೇಷದಲ್ಲಿ ಪ್ರಸಿದ್ಧ ವೇಶ್ಯಾಳ  ಮನೆಗೆ ಹೋಗಿ ಕೈ ಕಡಗ ಕೊಟ್ಟನು.  ಅವಳು ವಿಠ್ಠಲನ ಭಕ್ತಳು. ಪೂಜಾರರಿಗೆ ಕಡಗ ಮಾಯವಾಗಿದ್ದುಗೋಳು ಆಯಿತು.  ಆಡಳಿತ ವರ್ಗ ಅಲ್ಲಲ್ಲಿ ವಿಚಾರಿಸಿದರು.  ಕಡಗ ಸಿಗಲಿಲ್ಲ.  ಎರಡನೇದಿನ ಇನ್ನೊಂದು ಕಡಗ ಮಾಯ  ಆಯಿತು.  ಪೂಜಾರರಿಗೆ ದಿಕ್ಕು ತೋಚದಾಯಿತು.  ಮುಂದೆ ಒಂದು ದಿನ ವೇಶ್ಯೆ ಕಡಗ ಹಾಕಿಕೊಂಡು ಮಂದಿರಕ್ಕೆ ಬಂದಳು.  ಮಂದಿರದ ಸರಾಫನಿಗೆ  ಕಡಗ ನೋಡಿ ಸಂಶಯ ಬಂದು ವಿಚಾರಿಸಿದನು.  ಅವಳು ದಾಸರು ತನಗೆ ಕೊಟ್ಟು ಹೋದರು ಎಂದು ಹೇಳಿದಳು.  ದಾಸರ ವಿಚಾರಣೆ ನಡೆಯಿತು   ದಾಸರು ಆಶ್ಚರ್ಯ ದಿಂದ ಈ ವಿಷಯ ಗೊತ್ತಿಲ್ಲಾ ಎಂದರು.  ಆಡಳಿತ ವರ್ಗ ದಾಸರಿಗೆ ಚಾಟಿ ಏಟು ಹೊಡೆದರು.  ಆಗ ಒಬ್ಬ ಬಾಲಕನ ಮೇಲೆ ದೇವರ ಆವೇಶ ಬಂದು ವಿಠ್ಠಲ ಹೇಳಿದನು.  ದಾಸರ ತಪ್ಪಿಲ್ಲ, ನಾನೇ ನನ್ನ ಭಕ್ತಳೆಂದು ವೇಶ್ಯೆಗೆ ಕಡಗ ಕೊಟ್ಟಿದ್ದೇನೆ.  ಅವುಗಳನ್ನು ಅವಳಿಗೇ  ಕೊಡಿರೆಂದು ಹೇಳಿದನು.   ದಾಸರು ಆಗ ಭಾವ ಪರವಶರಾಗಿ "ಮುಯ್ಯಿಗೆ ಮುಯ್ಯ ತೀರಿತೋ "ಎಂದು ಹಾಡನು ಹಾಡಿದರು.

ಹೀಗಿರಲಾಗಿ ಸರಸ್ವತಿಬಾಯಿ ದಾಸರಿಗೆ ಯಾರೋ ನಸುಕಿನಲ್ಲಿ  ಬಂದು ಅಂಗಳ ಸಾರಿಸಿ ರಂಗೋಲಿ ಹಾಕಿ ಹೋಗುತ್ತಿರುವರೆಂದು ಹೇಳಿದಳು.  ಇದೆಲ್ಲ ನಿನ್ನ ಪುಣ್ಯ ಎಂದು ದಾಸರು ಹೇಳಿದರು. ಯಾರು ಎಂದು ಮೇಲಿಂದಮೇಲೆ ಕೇಳಿದಳು.  ನಿನ್ನ ಮನೆಯ ರಂಗೋಲಿ ನದಿ ದೇವತೆ ಗಳು ಹಾಕುತ್ತಿದ್ದಾರೆ ಎಂದರು.  ದಾಸರ ಪತ್ನಿಗೆ ಅವರನ್ನು ನೋಡುವ ಕುತೂಹಲ ಉಂಟಾಯಿತು.  ನಾಳೆ ತಯಾರಾಗು ಎಂದು ದಾಸರು ಹೇಳಿದರು.  ಸರಸ್ವತಿಬಾಯಿ ನಸುಕಿನಲ್ಲಿ ಸ್ನಾನ ಮಾಡಿ ಕುಳಿತಳು.  ಇತ್ತ ಗಂಗಾ, ಯಮುನೆ, ಗೋದಾವರಿ, ಕೃಷ್ಣ, ಭೀಮರಥಿ, ತುಂಗಭದ್ರಾ, ಕಾವೇರಿ ಮುಂತಾದವರು ಇಂದು ದಾಸರ ಪತ್ನಿ ಸರಸ್ವತಿಯ ದರ್ಶನ ಎಂದು ಸಡಗರದಿಂದ ಬಂದರು.  ಸರಸ್ವತಿ ಹೊರಗೆ ಬಂದು ಎಲ್ಲರಿಗೂ ನಮಸ್ಕಾರ ಮಾಡಿದಳು.  ಆಗ ನದಿ ದೇವತೆಗಳು ದಾಸಪತ್ನಿಗೆ "ಅಮ್ಮ ಪಾರ್ವತಿ ವಟು ವಾಮನನಿಗೆ ಭಿಕ್ಷೆ ಹಾಕಿದಂತೆ ನೀನು ಕೈಯಾರೆ ಬ್ರಾಹ್ಮಣ ರೂಪಿ ವಿಠ್ಠಲನಿಗೆ ಮೂಗುತಿಯನ್ನೇ ದಾನ ಮಾಡಿದ ಪುಣ್ಯವಂತಿ "ಎಂದು ಹರಿಸಿದರು.  ನಮ್ಮಲ್ಲಿ ಸ್ನಾನ ಮಾಡಿದವರ ಪಾಪ ಕಳೆದಮೇಲೆ ನಮಗೆ ನಿಮ್ಮಂಥವರ ಮನೆ ರಂಗೋಲಿ ಹಾಕುವದೇ ಪುಣ್ಯದ ಕೆಲಸ ಎಂದು ಹರಿಸಿ ಮಾಯವಾದರು.

ದಾಸರು ಪ್ರತ್ತಿನಿತ್ಯ ಯಂತ್ರೋದ್ಧಾರ ಪ್ರಾಣದೇವರ ಪೂಜೆ ಮಾಡುತ್ತದ್ದರು.  ಒಂದು ಸಲ ಕಾರ್ಯ ಬಾಹುಲ್ಯ  ದಿಂದ ಪೂಜೆಯನ್ನು ತಮ್ಮ ಕಿರಿಯ ಮಗನಾದ ಮಧ್ವಪತಿಗೆ ಹೇಳಿದರು.  ಅವನು ಸಂತೋಷದಿಂದ ಒಪಿಕೊಂಡನು.  ದಾಸರಂತೆ ಮನೆಯಲ್ಲಿ ಮಾಡಿದ ಅಡಿಗೆ ತೆಗೆದುಕೊಂಡು ನೈವೇದ್ಯ ಮಾಡಲು ಪ್ರಾರಂಭ ಮಾಡಿದ.  ಮಾರುತಿ ಉಣಲಿಲ್ಲ.  ತಂದೆ ಕೊಟ್ಟದು ಉಣ್ಣುತ್ತಿ.  ನಾನು ಕೊಟ್ಟರೆ ಉಣ್ಣುವದಿಲ್ಲವೇ?  ಎಂದು ಪ್ರಶ್ನಿಸಿ ಊಟ ಮಾಡಬೇಕೆಂದು ಹಠ ಹಿಡಿದ ನು.  ಮಾರುತಿ ಬಾಲಕನ ಮುಗ್ಧ ಭಕ್ತಿಗೆ ಮೆಚ್ಚಿ ಬಾಯಿ ತೆರೆದು ಒಂದೊಂದೇ ತುತ್ತು ಹಾಕಿಸಿಕೊಂಡು ಉಂಡನು.  ದಿನಾಲು ನೀನೇ ಉಣಿಸು ಎಂದು ಹನುಮ ಹೇಳಿದನು.  ದಾಸರು ನಿತ್ಯದಂತೆ ಊಟಕ್ಕೆ ಕುಳಿತಾಗ ಮಾರುತಿಯ ಪ್ರಸಾದ ಬಡಿಸೆಂದು ಪತ್ನಿಗೆ ಕೇಳಿದರು.  ಪ್ರಸಾದ ತಂದಿಲ್ಲ ಮಗನು ತಿಂದು ಮುಗಿಸಿದ ಎಂದು ಹೇಳಿದಳು. ಮಧ್ವಪತಿಯು ನಾನು ತಿಂದಿಲ್ಲ ಮಾರುತಿ ಉಣಿಸೆಂದು ಕೇಳಿದ್ದಾಕೆ ಉಣಿಸಿದೆನು.  ಊಟಕ್ಕೆ ಕುಳಿತ ಜನ ನಕ್ಕರು.  ಮಧ್ವಪತಿ ಅಳತೊಡಗಿದನು.  ದಾಸರು ಅವನನ್ನು ಸಮಾಧಾನ ಮಾಡಿದರು. ನಾಳೆ ನಾನು ಬರುವೆ, ನಾನು ನೋಡುವೆ ಎಂದರು.  ಮರುದಿನ ಮಧ್ವಪತಿ ತಂದೆಯ ಸಂಗಡ ಯಂತ್ರೋದ್ಧಾರ ಪ್ರಾಣದೇವರ ಸನ್ನಿಧಾನಕ್ಕೆ ಬಂದನು.  ಹನುಮ ಉಣಲಿಲ್ಲ, ಬಾಲಕ ನನ್ನ ತಲೆ ಒಡೆದುಕೊಳ್ಳುವೆ ಎಂದು ಹಠ ಹಿಡಿದನು.  ಕೂಡಲೇ ಮಾರುತಿ ಬಾಯಿ ತೆರೆದು ಬಾಲಕನಿಂದ ತುತ್ತು ಹಾಕಿಸಿಕೊಂಡು ಉಂಡನು.  ದಾಸರು ಮಗನ ಮೇಲೆ ಮಾರುತಿಯ  ಕೃಪೆ ಆಯಿತೆಂದು ಸಂತೋಷ ಪಟ್ಟರು.

ಪುರಂದರದಾಸರು ಕೀರ್ತನ ಪದ್ಧತಿ ನವೀಕರಿಸಿ ತಾರತಮ್ಯ ಪದ್ಧತಿ ಪ್ರಾರಂಭಿಸಿದರು.  ಸಮಾಜದಲ್ಲಿ ಪಂಗಡಗಳಲ್ಲಿಯ ದ್ವೇಷ ಭಾವನೆ ದೂರು ಮಾಡಿ ಸಕಲ ಜನರಲ್ಲಿ ಏಕತಾ ಭಾವನೆ ಬಿತ್ತಿದರು.  ಸೋಲಾಪುರಕ್ಕೆ ಹೋದಾಗ ಲಿಂಗಾಯತ, ಬ್ರಾಹ್ಮಣ ಜನಾಂಗ ಗಳನ್ನು  "ಜಂಗಮರು ನಾವು ಜಂಗಮರು ಲಿಂಗಾಂಗಿ ಗಳು "ಎಂದು ಹಾಡಿದರು. ಮುಸಲಮಾನ ಜನರಲ್ಲಿ "ತುರುಕರು ಕರೆದರೆ ಉಣಬಹುದಣ್ಣ "ಎಂದು ಪದ್ಯ ರಚಿಸಿದರು.  ಸಮಾಜದಲ್ಲಿಯ ಅಹಂಕಾರಿ ಜನರಿಗಾಗಿ, ದುರ್ಜನರಿಗಾಗಿ ನೀತಿ ಪದ್ಯಗಳು, ಅಲ್ಲದೆ ಅನೇಕರೀತಿಯಿಂದ ಸುಧಾರಣೆ ಮಾಡಿದರು. ಮುಂಡಿ ಗೆಗಳನ್ನು  ರಚಿಸಿ ಅಧ್ಯಾತ್ಮ  ವಿದ್ಯೆಯನ್ನು ಎಲ್ಲರ ಮನ ನಾಟುವಂತೆ ಹೇಳಿದರು. ಮುಳ್ಳು ಕೊನೆಯಲ್ಲಿ,  ಕುರುಡು ನಾಯಿ ಸಂತೆಗೆ ಬಂತಂತೆ, ಸುಳ್ಳು ನಮ್ಮಲ್ಲಿಲ್ಲ, ಅಂಬಿಗ ನಾ ನಿನ್ನ ನಂಬಿದೆ, ಜಯವದು ಮನೆತನಕೆ, ಹೀಗೆ ಅನೇಕ ಪದ್ಯ ಗಳನ್ನೂ ರಚಿಸಿದ್ದಾರೆ.  ಪುರಾಣ, ಉಪನಿಷತ್ತು, ಶೃತಿ ಸ್ಮೃತಿ ಭಾರತ, ರಾಮಾಯಣ, ನೀತಿ ಕಥೆ ಎಲ್ಲವನೂ ತಮ್ಮ ಪದ್ಯಗಳಲ್ಲಿ ಅಳವಡಿಸಿದ್ದಾರೆ. 

ಕೊನೆಗಾಲದಲ್ಲಿ ಮಧ್ವಪತಿಯ ಕೂಡಿಸಿ ಕೊಂಡು 25000 ಪದ್ಯ ರಚಿಸಿ  ತಮ್ಮ 500000 ಪದ್ಯ ಪೂರ್ಣ ಮಾಡಲು ಹೇಳಿದರು.  ಈಗ ಸಾಧ್ಯವಿಲ್ಲ ಎಂದಾಗ ಮುಂದಿನ ಜನ್ಮದಲ್ಲಿ ಶ್ರೀ ವಿಜಯವಿಠ್ಠಲ ನಿಗೆ ಅರ್ಪಿಸಿ ಮಾಡೆಂದು ಆಶಿರ್ವಾದ್  ಮಾಡಿದರು.  ಪುಷ್ಯ ಮಾಸ ಅಮಾವಾಸ್ಯೆ ದಿನ ಹರಿಪಾದ  ಸೇರಿದರು.  
above article by  ತಮ್ಮ ಮಧುಸೂದನ  ಕಲಿಭಟ್.
******


ಮನ್ಮನೋಭೀಷ್ಟವರದಂ ಸರ್ವಾಭೀಷ್ಟ ಫಲಪ್ರದಮ್/
ಪುರಂದರಗುರುಂ ವಂದೇ ದಾಸಶ್ರೇಷ್ಟಂ ದಯಾನಿಧಿಮ್//

ಇಂದು ಹರಿ-ದಾಸರೆಲ್ಲರಿಗೂ ಸುದಿನ. ನಾರದರೇ ಸ್ವಯಂ ಹುಟ್ಟಿಬಂದು ಹರಿನಾಮದ ಬೀಜವನ್ನು ಬಿತ್ತಿ, ನಮ್ಮ ಎಲ್ಲರಿಗೂ ಆ ಬೀಜದಿಂದ ಬಂದ ಹರಿದಾಸಸಾಹಿತ್ಯವೆನ್ನುವ ಕಲ್ಪವೃಕ್ಷದ ಫಲಗಳನ್ನು ರುಚಿಯಾಗಿ ನೀಡುವಂತೆ ಮಾಡಿಹೋದರು.. ಪ್ರಾಕೃತಭಾಷೆಯಲ್ಲಿ ಸೊಗಸಾದ ಸಂಸ್ಕೃತ, ಶಾಸ್ತ್ರ ಪದ,ಪದ್ಯಗಳ ಸಾರವನ್ನು ಬರೆದು ನೀಡಿದರು, ಕೃತಿ ಸಂಕಲನವನ್ನು ಪುರಂದರೋಪನಿಷತ್ತು ಎನ್ನುವ ಶ್ರೇಷ್ಠ ನಾಮದಿಂದ ಶ್ರೀ ಚಂದ್ರಿಕಾಚಾರ್ಯರಿಂದ  ಸ್ತುತಿಸಲ್ಪಟ್ಟ ಮಹಾನ್ ದಾಸರು. ವಿಠ್ಠಲನ ಅನುಗ್ರಹ ಪಡೆದ, ಸಮಸ್ತ ಹರಿದಾಸರುಗಳಿಂದ ಅಡಿಗಡಿಗೆ ಸ್ತುತಿಸಲ್ಪಟ್ಟ  ಶ್ರೀ ನಾರದಾಂಶಸಂಭೂತರು ಶ್ರೀಮತ್ಪುರಂದರದಾಸಾರ್ಯರ  ಆರಾಧನಾ ಮಹೋತ್ಸವದ ಮೊದಲದಿನ ಇಂದು.. ದಾಸಾರ್ಯರ ಅನುಗ್ರಹ,  ಅವರ ಒಂದೊಂದು  ಕೃತಿಗಳ ಅವಲೋಕನ, ಅಧ್ಯಯನವೇ ನಮ್ಮ ಜನ್ಮ ಅಭಿವೃದ್ಧಿಗೆ ಪರಮಸೋಪಾನ. ಜೀವವಿದ್ದಷ್ಟು ವರೆಗೆ ದಾಸರ ಕೃತಿಗಳ ಅಧ್ಯಯನ ಮಾಡುವಂತೆ, ಅವರ ಪದಗಳು ಹಾಡುವಂತೆ ಅವರೇ ಅನುಗ್ರಹ ಮಾಡಬೇಕೆಂದು ಶ್ರೀಮತ್ಪುರಂದರದಾಸಾರ್ಯರ ಅಡಿದಾವರೆಗಳಲ್ಲಿ ಕ್ಷಣಕ್ಷಣಕ್ಕೆ ಶರಣು ಹೋಗುತ್ತಾ...

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
*******

ಪುರಂದರ ದಾಸರು from narahari sumadhwa

ಮನ್ಮನೋಭೀಷ್ಟ ವರದಂ ಸರ್ವಾಭೀಷ್ಟ ಫಲಪ್ರದಂ|
ಪುರಂದರ ಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಂ ||

 

*ನವಕೋಟಿ ನಾರಾಯಣ ದಾಸ ಶ್ರೇಷ್ಠ

ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರು*

ಆಗರ್ಭ ಶ್ರೀಮಂತನಾಗಿದ್ದ ಶ್ರೀನಿವಾಸ ನಾಯಕ ರತ್ನವಜ್ರ ವ್ಯಾಪಾರಿಯಾಗಿದ್ದು ಯಾರಿಗೂ ಯಾವ ದಾನವನ್ನೂ ಮಾಡದೆ ತನ್ನ ತಿಜೋರಿಯ ತುಂಬಿಸುತ್ತಿದ್ದರು. ಅಂತಹ ಜಿಪುಣ ತನ್ನ ಸಕಲ ಆಸ್ತಿ ಪಾಸ್ತಿಯನ್ನೂ ತೃಣ ಸಮಾನವೆಂದು ಪರಿಗಣಿಸಿ ಸಂಸಾರದಲ್ಲಿ ವಿರಕ್ತಿ ಬಂದು ಮಧುಕರವೃತ್ತಿಯನ್ನು ಅನುಸರಿಸಿ ವ್ಯಾಸರಾಯರ ಬಳಿ ದಾಸ ದೀಕ್ಷೆಯ ಕೋರಿ “ಪುರಂದರ ವಿಠಲ” ಎಂಬ ಅಂಕಿತ ಪಡೆದು ಕರ್ನಾಟಕ ಸಂಗೀತ ಪಿತಾಮಹ ಎನಿಸಿ ಮೆರೆದ ಪುರಂದರದಾಸರು ಇಹಲೋಕವನ್ನು ತ್ಯಜಿಸಿದ ದಿನವೇ ಪುಷ್ಯ ಕೃಷ್ಣ ಅಮಾವಾಸ್ಯೆ.

ಅವರ ಮಾಯಾಮಾಳವಗೌಳ ರಾಗದಲ್ಲಿರುವ ಲಂಬೋದರ ಲಕುಮಿಕರ ಕೃತಿ ಪ್ರತಿಯೊಬ್ಬ ಸಂಗೀತಕಾರನೂ ಸಾಮಾನ್ಯವಾಗಿ ಅಭ್ಯಸಿಸದೇ ಇರುವುದಿಲ್ಲ.

ವ್ಯಾಸರಾಯರು, ವಾದಿರಾಜರು, ಅಣ್ಣಮಾಚಾರ್ಯರು, ಕನಕದಾಸರು ಮುಂತಾದ ಪ್ರಖ್ಯಾತ ವಾಗ್ಗೇಯಕಾರರ ಸಮಕಾಲೀನರೂ ಆಗಿದ್ದ‌ ಅವರು ಮಧ್ವಸಿದ್ಧಾಂತದ ಪ್ರತಿಪಾದಕರಾಗಿದ್ದರು.

ದಾಸರು ಸುಮಾರು 475೦೦೦ ಕೃತಿಗಳನ್ನು ರಚಿಸಿದ್ದಾರೆ ಎನ್ನಲಾಗುತ್ತಿದೆ ಅದರಲ್ಲಿ ಸದ್ಯ ಸುಮಾರು 50೦೦ ಕೃತಿಗಳು ಉಪಲಬ್ಧವಿದೆ.

ದಾಸರ ಕೃತಿಗಳಲ್ಲಿ ಸರಳೆವರಸೆ, ಕೀರ್ತನೆ, ಉಗಾಭೋಗ, ಸುಳಾದಿ, ಮುಂಡಿಗೆ, ಗದ್ಯ ಮುಂತಾದ ಶೈಲಿಯಲ್ಲಿ ದೇವರ ಸ್ತುತಿ, ನಿಂದಾಸ್ತುತಿ, ನೀತಿಕವನ, ಒಗಟಿನ ಕವನ, ಸಂದೇಶಪೂರಿತ ಕೃತಿ, ಕರ್ತವ್ಯ ಸೂಚಕ ಕೃತಿ, ಪ್ರಕೃತಿ ಪರಿಚಯ, ಪರಮಾತ್ಮನ, ರುದ್ರದೇವರ, ಪ್ರಾಣದೇವರ, ಲಕ್ಷ್ಮೀ ಸರಸ್ವತಿ, ಇತರ ದೇವ‌ ದೇವಿಯರ ಸ್ತುತಿ, ಮುಂತಾದವುಗಳನ್ನು ರಚಿಸಿದ್ದಾರೆ. ವ್ಯಾಸರಾಯರು ಇವರ ಕೃತಿಗಳನ್ನು ಸರ್ವಮೂಲದ ಜೊತೆಗಿಟ್ಟು ಪೂಜಿಸಿ “ಪುರಂದರೋಪನಿಷತ್” ಎಂದು ಕರೆದಿದ್ದಾರೆ. ಅವರು ಆಡು ಮುಟ್ಟದ ಗಿಡವಿಲ್ಲವೆಂಬಂತೆ ಅವರ‌ ಕೃತಿಗಳಲ್ಲಿ ಸಿಗದ ವಿಷಯವೇ ಇಲ್ಲ.

ಅವರ ಅನುಗಾಲವೂ ಚಿಂತೆ ಕೃತಿಯಲ್ಲಿ ಮಾನವನ ಚಿಂತನೆ ನಿರಂತರ ಸುಖವಿದ್ದರೂ, ದು:ಖವಿದ್ದರೂ ಚಿಂತೆ ಎಂದು ಹೇಳಿದ್ದಾರೆ.

ಅವರ ಅಂಬಿಗಾ ನಾ ನಿನ್ನ ನಂಬಿದೆ ಕೃತಿಯಲ್ಲಿ ಒಂದು ದೋಣಿ ಮತ್ತು ಅಂಬಿಗಾ ಎಂದು ಮೇಲ್ನೋಟಕ್ಕೆ ಕಂಡರೂ ಅಲ್ಲಿ ಇಡೀ ಜೀವನ ಎಂಬ ನೌಕೆಯ ನಡೆಸುವ ಪರಮಾತ್ಮನೇ ಅಂಬಿಗಾ ಎಂದಿದ್ದಾರೆ.

ನಮ್ಮ ಚಾಡಿ ಹೇಳುವ ನೀಚ ನಾಲಿಗೆಯನ್ನು ತಿದ್ದಲು ಪ್ರಯತ್ನಿಸಿದ್ದಾರೆ.:   “ರಾಗಿ” ತಂದೀರಾ ಕೃತಿಯಲ್ಲಿ ನಾವು ಮಾಡಬೇಕಾದ ಕರ್ತವ್ಯ ತಿಳಿಸಿದ್ದಾರೆ.  ನೈವೇದ್ಯವ ಕೊಳ್ಳಿರೋ ಕೃತಿಯಲ್ಲಿ ನೈವೇದ್ಯ ಸಮರ್ಪಣೆ ಕ್ರಮ ತಿಳಿಸಿದ್ದಾರೆ. “ಮಾಡಿ ಮಡಿ ಎಂದು ಅಡಿಗ್ಹಡಿಗಾರುವಿ” ಕೃತಿಯಲ್ಲಿ ಬೂಟಾಟಿಕೆ ಮಡಿಯ ಮಾಡಬೇಡಿರೆಂದಿದ್ದಾರೆ.

 ಉಪಲಬ್ದ ಕೃತಿಗಳು – ಸುಮಾರು ೨೦೦೦

randaropanishat –  He is said to have composed 425000/- devaranamas.  Of which only 5000 are available now.  Sri Vyasarajaru kept the Devaranamas, Suladi, and Ugabobha alongwith Sarvamoola and did the pooja for them and called the devaranamas by Purandaradasaru as “Purandaropanishat”, which is the gist of Bhagavatha and Upanishat.

“ಶ್ರೀ” – ಶ್ರೀಮಂತ; “ಪು” – ಪುಣ್ಯಾತ್ಮ;

“ರಂ”- ರಂಜಿಪ; “ದ” – ದಯವಂತ;
“ರ” – ರಕ್ಷಕ ; “ಗು” – ಗುಣವಂತ;
“ರ” – ರಜದೂರ ; “ವೇ” – ವೇದವಿಧ;
“ನ” – ನಯವಂತ ; “ಮ:- ಮಹಾಜ್ಞಾನಿ
ಹೀಗೆ “ಶ್ರೀ ಪುರಂದರಗುರವೇ ನಮಃ:” ಎಂದು ಸ್ತುತಿಸಲು ಪುರಂದರದಾಸರು ಅನುಗ್ರಹಿಸುವರು ಎಂದಿದ್ದಾರೆ ಲಕ್ಷ್ಮೀಕಾಂತ ದಾಸರು
 - ನರಹರಿ ಸುಮಧ್ವ
****

ಪುರಂದರ ದಾಸರು
ಪುರಂದರ ಘಡದಲ್ಲಿ ಅವತರಿಸಿದ ನಾರದಾಂಶರೇ ಶ್ರೀನಿವಾಸ ನಾಯಕರು  ಶ್ರೀ ಪುರಂದರದಾಸರು. 
ಪರಮಾತ್ಮನೇ ತನ್ನ ಭಕ್ತನನ್ನು ಉದ್ಧರಿಸಲು ಆರು ತಿಂಗಳ ಕಾಲ ಅಲೆದಾಡಿ, ಪತ್ನಿಯು ಹೇಗೆ ನಮಗೆ ಪರಮ ಪದದ ಮಾರ್ಗದರ್ಶನ ಎಂಬುದನ್ನು ತೋರಿಸಿದನು.
ಸರ್ವ ಸಂಗ ಪರಿತ್ಯಾಗ ದೊಂದಿಗೆ ವ್ಯಾಸರಾಜರಿಂದ ಪುರಂದರ ವಿಠಲಾಂಕಿತ ಸ್ವೀಕಾರ ಶ್ರೀನಿವಾಸ ನಾಯಕರನ್ನು ಪುರಂದರ ದಾಸರಾಗಿ ಪರಿವರ್ತಿಸಿತು.
ವಿಜಯನಗರದ ಅರಸನ ಬಳಿಗೆ ರತ್ನ ಪರೀಕ್ಷಕರಾಗಿ ಬರುತ್ತಿದ್ದ ನವ ಕೋಟಿ ನಾರಾಯಣ ಶ್ರೀನಿವಾಸ ನಾಯಕರು ಇಂದು ತಂಬೂರಿ ಹಿಡಿದಿದ್ದಾರೆ ಎಂದು ಕೇಳಿದ ರಾಜ. 
ಪುರಂದರ ದಾಸರ ಕಾಲದಲ್ಲಿ ಶ್ರೀ ಕೃಷ್ಣ ದೇವರಾಯನು
ವಿಜಯನಗರದ ಸಾರ್ವಭೌಮ ನಾಗಿ ಆಸ್ಥಾನದಲ್ಲಿ ಅನೇಕ ವಿದ್ವಾಂಸರ ಆಶ್ರಯ ದಾತನಾಗಿದ್ದು ಸಂಗೀತ, ಸಾಹಿತ್ಯಗಳಿಗೆ ಪ್ರೋತ್ಸಾಹ ನೀಡುತ್ತಿದ್ದನು.
ನವಕೋಟಿ ನಾರಾಯಣ ನೆಂದು ಹೆಸರು ಪಡೆದ ಶ್ರೀನಿವಾಸ ನಾಯಕರು ತಮ್ಮ ಸರ್ವಸ್ವವನ್ನೂ ತ್ಯಾಗ ಮಾಡಿ ಪುರಂದರ ದಾಸರು ಎಂಬ ಹೆಸರಿನಲ್ಲಿ
ಹರಿದಾಸರಾಗಿದ್ದು ಮಹಾರಾಜನಿಗೆ ತಿಳಿದು ಆಶ್ಚರ್ಯಕರವಾಯಿತು.ನಂಬಲಸಾಧ್ಯವೆನಿಸಿತು.
ಅವರ ಮಹಿಮೆಯನ್ನು,,ಅವರ ವೈಭವವನ್ನು ನೋಡಬೇಕೆಂಬ ಆಸೆಯಿಂದ ಶ್ರೀ ವ್ಯಾಸರಾಯರ ಮಠಕ್ಕೆ ಬಂದನು. 
ಅದೇ ಸಮಯದಲ್ಲಿ ವ್ಯಾಸರಾಯರು, ಕನಕದಾಸರು, ಪುರಂದರದಾಸರು ಭಜನೆಯಲ್ಲಿ ಮಗ್ನರಾಗಿದ್ದರು.
ಮಹಾರಾಜನು ಅಲ್ಲಿಗೆ ಬಂದಿದ್ದನ್ನು ನೋಡಿ ಜನರು ದೂರ ದೂರಕ್ಕೆ ಸರಿಯುವುದನ್ನು ನೋಡಿ ರಾಜನು 
ಗದ್ದಲ ಮಾಡಬೇಡಿ ಎಂದು ಸಂಜ್ಞೆಯಿಂದ ತಿಳಿಸಿದರು. ರಾಜನಾದರೂ ಸ್ವಾಮಿಗಳಿಗೆ ನಮಸ್ಕರಿಸಿ ಅಲ್ಲಿಯೇ ಕುಳಿತುಕೊಂಡನು.
ಭಜನೆಯಲ್ಲಿ ಮಗ್ನರಾಗಿದ್ದ ದಾಸರುಗಳು ಭಾವಸಮಾಧಿ ಯಿಂದ ಹೊರಗೆ ಬಂದು ಮಹಾರಾಜನನ್ನು ಕಂಡು ಇದೇನು ಇತ್ತ ಬಂದಿರುವುದು, ಎಂದು ಕೇಳಿದಾಗ ಸುಕೃತ ದಿಂದಲೇ ತಮ್ಮ ದರ್ಶನ ವಾಯಿತು.ಎಂದು ಹೇಳಿದನು. ವ್ಯಾಸರಾಯರು
"ನೋಡಿದಿರಾ ನಮ್ಮ ದಾಸರನ್ನು"
ಎಂದು ಕೇಳಿದರು.
ಹೀಗೆ ಸಮಯೋಚಿತವಾದ ಸಂಭಾಷಣೆಗಳನ್ನು ಮಾಡಿ ಶ್ರೀ ಪುರಂದರದಾಸರನ್ನು ತಮ್ಮ ಅರಮನೆಗೆ ಕರೆದುಕೊಂಡು ಅವರ ಅನುಭವಗಳನ್ನು ಕೇಳಿ ಆನಂದಿಸಿದನು ರಾಜ. 
ಆಗ ದಾಸರು ಮಹಾರಾಜನೊಡನೆ ವಿನೋದದಿಂದ 
ಇದು ನಮ್ಮ ಭಾಗ್ಯವೋ ನಿಮ್ಮ ಭಾಗ್ಯವೋ ಎಂದು ಕೇಳಿದರು.
ನಿಮ್ಮ ಭಾಗ್ಯ ದೊಡ್ಡದೋ ನಮ್ಮ ಭಾಗ್ಯ ದೊಡ್ಡದೋ//
ಸುಮ್ಮನೆ ಇಬ್ಬರು ಕೂಡಿ ಸಾಟಿ ಮಾಡಿ ನೋಡುವ//
ಸರಕು ತುಪ್ಪ ದವಸ ಧಾನ್ಯ/ ಸವೆದೀತೆಂಬ ಚಿಂತೆಯುಂಟು/
ಹರಿ ನಾಮಾಮೃತಕೆ ಇನ್ನು ಯಾವ ಚಿಂತೆಯಿಲ್ಲವಯ್ಯಾ/೧//
ವ್ಯಾಪಾರ ಉದ್ಯೋಗ ಗಳಿಗಿನ್ನು/ಅಪಾರ ಅಂಜಿಕೆ ಯುಂಟು/
ಗೋಪಾಳ ಬೇಡುವುದಕ್ಕೆ ಆರ ಅಂಜಿಕೆಯಿಲ್ಲವೊ//೨//
ಹೆಣ್ಣು ಹೊನ್ನು ಮಣ್ಣುಗಳಿಗೆ  ಕಣ್ಣಿಡುವರಂಜಿಕೆಯುಂಟು/ಪನ್ನಗಶಯನ ನಾಮಕೆ
ಆರ ಅಂಜಿಕೆಯಿಲ್ಲವೊ//೩///
ಕಡಗ ಕಂಠ ಮಾಲೆಗಿನ್ನು ತುಡುಗರ ಅಂಜಿಕೆಯುಂಟು/
ಅಡವಿ ತುಲಸೀ ಮಾಲೆಗಿನ್ನು ಯಾರ ಅಂಜಿಕೆಯಿಲ್ಲವೊ//೪//
ನಿಮ್ಮ ಭಾಗ್ಯ ಲಕ್ಷ್ಮಿದೇವಿ ನಮ್ಮ ಭಾಗ್ಯ ನಾರಾಯಣ
ನಮ್ಮ ನಿಮ್ಮ ಭಾಗ್ಯದೊಡೆಯ ಶ್ರೀ ಪುರಂದರ ವಿಠ್ಠಲನ ಒಮ್ಮನದಿ ಸ್ಮರಿಸುವುದಕ್ಕೆ ಆರ ಅಂಜಿಕೆಯಿಲ್ಲವೊ//೫//.
ಎಂದು ವೈರಾಗ್ಯದ ಹಾಡನ್ನು ಹಾಡಿದಾಗ ರಾಜನಿಗೆ ಸಂತೋಷವಾಗಿ ಅವರನ್ನು ಸತ್ಕರಿಸಿ  ಅನೇಕ ವಸ್ತ್ರ, ಆಭರಣಗಳನ್ನು ಕೊಟ್ಟನು. 
ದಾಸರು ರಾಜನ ಭಕ್ತಿಯನ್ನು ಹೊಗಳಿ, ರಾಜನಿಂದ ಬಂದ ವಸ್ತುಗಳನ್ನು  ಅಲ್ಲಿನ ಬಡವರಿಗೆ ದಾನ ಮಾಡಿದರು ದಾಸರು. 
ಈ ವಿಷಯ ರಾಜನಿಗೆ ತಿಳಿದು ಮತ್ತೊಮ್ಮೆ ಅವರನ್ನು ಭೇಟಿ ಮಾಡಿದಾಗ ತಾವು ಕೊಟ್ಟ ವಸ್ತ್ರ ಆಭರಣಗಳು
ಅವರ ಗೌರವಕ್ಕೆ ಸಾಲದಾಯಿತೆಂದು ಶಂಕಿಸಿ  ಅವರನ್ನು ವಿಚಾರಿಸಿದಾಗ "ತಾವು ಕೊಟ್ಟ ಬಹುಮಾನ ಶ್ರೀಹರಿಗೆ ಸಮರ್ಪಣೆಯಾಗಿದೆ.
ಅವುಗಳನ್ನು ನಾನು ಧರಿಸಿದ್ದರೆ ಶ್ರೀ ಹರಿಗೆ ಅಷ್ಟು ಪ್ರೀತಿ ಯಾಗುತ್ತಿರಲಿಲ್ಲ"
ಎಂದು ಹೇಳಿದಾಗ ಶ್ರೀ ಕೃಷ್ಣ ದೇವರಾಯನಿಗೆ  ಶ್ರೀ ಪುರಂದರ ದಾಸರಲ್ಲಿ ಅಧಿಕ ಗೌರವವುಂಟಾಯಿತು.
ಶ್ರೀಮಧ್ವೇಶಾರ್ಪಣಮಸ್ತು
****





2021
ಶ್ರೀಂ ಶ್ರೀ ಕಂ ಕಪಿಲಾಯ ನಮಃ

ಮನ್ಮನೋSಭೀಷ್ಟವರದಂ ಸರ್ವಾಭೀಷ್ಟ ಫಲಪ್ರದಂ/
ಪುರಂದರಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಮ್//

ಪೂತಾತ್ಮ ಪುರಂದರದಾಸರಿವರಯ್ಯ ಎಂದೇ ತಮ್ಮ ಗುರುಗಳಾದ, ಶ್ರೀಮಚ್ಚಂದ್ರಿಕಾಚಾರ್ಯರಿಂದ ಹೊಗಳಿಸಿಕೊಂಡಂತಹಾ ಮಹಾನ್ ತೇಜೋವಿರಾಜರು, ಧರೆಗಿಳಿದುಬಂದ ನಾರದಮುನಿಗಳು, ಕರ್ನಾಟಕ ಸಂಗೀತ ಪಿತಾಮಹರು, ತಾವು ನಿತ್ಯ ಸ್ಮರಣೆ ಮಾಡುವ ನಾರಾಯಣ ನಾಮವನ್ನು ಸುಜನರಿಗೆ ವರವಾಗಿ ನೀಡಿ  ಸಾಧನದ ಪಥವನ್ನು ತೋರಿಸಿದವರು ನಮ್ಮ ಶ್ರೀಮತ್ಪುರಂದರದಾಸಾರ್ಯರು.  ಐಹಿಕ ಸುಖಗಳು ಪರಮಾತ್ಮನೇ ನೀಡಿದರೂ ಅವುಗಳನ್ನು ತ್ಯಜಿಸಿ ಪದ್ಮಪತ್ರಮಿವಾಂಭಸಾ ಎಂಬಂತೆ ಜೀವನವನ್ನು ನಡೆಸಬೇಕೆಂದೇ ತೋರಿಸಿದವರು ನಮ್ಮ ನಾರದಾಂಶಜರು... 

ತಂದೆಪುರಂದರದಾಸರ ಸ್ಮರಿಸುವೆ ಎನ್ನ
ಮಂದಮತಿಗಳೆದು ಹರಿಭಟನೆನಿಸುವ ಎಂದು ಶ್ರೀ ಬಾಗಲಕೋಟೆ ಪ್ರಸನ್ನವೇಂಕಟ ದಾಸರಿಂದ, 

ಈಸು ಪದಗಳೊಮ್ಮೆ ನೆನೆಸಿದ ಮನುಜನ್ನ/
ದಾಸರ ಪೊರೆದಂತೆ ಪೊರೆವಾ ವಿಜಯವಿಠ್ಠಲ//

ದಾಸರೆ ಮನೆದೈವ ದಾಸರೆ ಮನದೈವ/
ದಾಸರಲ್ಲದೆ ಇಲ್ಲ ವಿಜಯವಿಟ್ಠಲ ಬಲ್ಲ//

ಎಂದು ನಮ್ಮ ವಿಜಯಪ್ರಭುಗಳಿಂದ ಘಂಟಾ ಪಥವಾಗಿ ನಿರ್ಧಾರವನ್ನು ತಿಳಿಸುವಂತೆ ಸ್ತುತಿಸಲ್ಪಟ್ಟವರಾದ... 

ದಾಸರಾಯ ಪ್ರತಿವಾಸರದಲಿ ಶ್ರೀನಿವಾಸನ್ನ ತೋರೋ ದಯಾಸಾಂದ್ರ ಪುರಂದರ ದಾಸರಾಯಾ ಎಂದು ಮಾನವಿ ಪ್ರಭುಗಳಿಂದ ಸ್ತುತ್ಯರಾದ,

ಪುರಂದರದಾಸರ ಪಾದ ಪದುಮವ ಕಂಡೆ
ಹರಿದು ಹೋಯಿತು ಎನ್ನನಂತ ಜನುಮದ ಅಘ ಎಂದು ಶ್ರೀ ರಘುಪತಿವಿಠಲರೇ ಮೊದಲು ನಮ್ಮ  ಎಲ್ಲಾ  ಹರಿದಾಸ ಪರಂಪರೆಯಲ್ಲಿ ಬಂದಂತಹಾ ಶ್ರೇಷ್ಠ ದಾಸಾರ್ಯರಿಂದ ಗೇಗೀಯಮಾನರಾದ, ಪೂಜಿಸಲ್ಪಟ್ಟವರಾದ, ಆರಾಧಿಸಲ್ಪಟ್ಟವರಾದ ನಾದಬ್ರಹ್ಮನ ಕಾರುಣ್ಯಪಾತ್ರರಾದ ಶ್ರೀಮತ್ಪುರಂದರದಾಸಾರ್ಯರ ಆರಾಧನೆ ಅಂದರೆ ನೇ ನಮ್ಮ ಎಲ್ಲಾ ಹರಿದಾಸ ಸಾಹಿತ್ಯದ ಉಪಾಸಕರಿಗೆ ದೊಡ್ಡ ಹಬ್ಬವೇ ಸರಿ.. ಅಡಿಗಳಿಗೊಂದಿಪೆ ಪುರಂದರ ಗುರುವೆ ಎನ್ನುವ ದಾಸಾರ್ಯರ ಉಕ್ತಿಯನ್ನು ಜೀವದ ಭಕ್ತಿಯಿಂದ ಶಿರಸ್ಸಿನಲ್ಲಿ ಧರಿಸುತ್ತಾ ಕ್ಷಣಕ್ಷಣಕ್ಕೂ ಬಿಡದೇ ದಾಸರ ಸ್ಮರಣೆ, ಅವರ ಕೃತಿಗಳ ಅವಲೋಕನೆ, ಅಧ್ಯಯನ ಮಾಡುವುದೇ ಲಕ್ಷ್ಯವಾಗಿ ಇಟ್ಟುಕೊಂಡು ಸಾಧನೆಯ ಮಾರ್ಗದ ಒಂದೊಂದು ಮೆಟ್ಟಿಲುಗಳನ್ನು ಅಧಿರೋಹಿಸಲು ಪ್ರಯತ್ನ ಮಾಡೋಣ... 

ಗುರುಪ್ರಸಾದೋ ಬಲವಾನ್ ನ ತಸ್ಮಾದ್ಬಲವತ್ತರಮ್ ಎನ್ನುವ ಮಾತಿನಂತೆ ಗುರುಪುರಂದರರ ಅನುಗ್ರಹವಾದರೆ ಮಾತ್ರ ಪರಮಾತ್ಮನ ಅನುಗ್ರಹವಾಗೋದು ಎನ್ನುವ ಮಾತನ್ನು ಮರೆಯದೆ ಸ್ಮರಣೆ ಮಾಡುತ್ತಾ...

ಶ್ರೀಮತ್ಪುರಂದರದಾಸಾರ್ಯರ ಮಧ್ಯಾರಾಧನೆಯ ಶುಭಸ್ಮರಣೆಗಳು

ಹಾಗೆ 18ನೇ ಶತಮಾನದ ಹರಿದಾಸಿ, ವೆಂಕಪ್ಪನ ಪರಮ ಭಕ್ತೆ, ರಾಯಚೂರು ಜಿಲ್ಲೆಯ, ತುರುಡಗಿ ಗ್ರಾಮದಲ್ಲಿ ಜನಿಸಿದಂತಹಾ, ಹೊನೂರೇಶ ಪ್ರಾಣದೇವರ ಸೇವೆಯಲ್ಲೇ ಜೀವನವನ್ನು ಕಳೆದಂತಹಾ, ಆ ಮುಖ್ಯ ಪ್ರಾಣದೇವರ ಹೆಸರಿನಿಂದಲೇ ಕೃತಿ ರಚನೆ ಮಾಡಿದ, ಪವಾಡಗಳನ್ನು ತೋರಿಸಿದ ಇಂದಿಗೂ ತೋರಿಸುತ್ತಿರುವ ಹೊನೂರೇಶ ಅಂಕಿತಸ್ಥರಾದ ಹರಿದಾಸಿ ತುರುಡಗಿ ತಿಮ್ಮಮ್ಮ ನವರ ಆರಾಧನಾ ಮಹೋತ್ಸವ ಇಂದಿನಿಂದ ಮೂರುದಿನ..
ತಾಯಿಯೇ ಹೇಳಿದಂತೆ ಹೊನೂರೇಶನ ದೇವಸ್ಥಾನದ ಚೂರು ದೂರದಲ್ಲಿ ಆಕೆಯನ್ನು ದಹನಮಾಡಿದ ಸ್ಥಳದಲ್ಲಿ ಅಶ್ವತ್ಥ ವೃಕ್ಷ ಬೆಳೆದು, ತಾಯಿಯ ಸನ್ನಿಧಾನ ಅದರಲ್ಲೇ ಇದ್ದು ಇಂದಿಗೂ ಆ ವೃಕ್ಷದ ಸುತ್ತಲೂ ಪ್ರದಕ್ಷಿಣೆ ಮಾಡುವುದರಿಂದ ಜನರ , ಹಸುಗಳ ರೋಗಗಳು ನಾಶವಾಗುತ್ತವೆ.. ಪ್ರತೀ ವರ್ಷ ಆರಾಧನೆಯ ದಿನ ಎಲ್ಲಾ ಕಡೆಯಿಂದ ಎಲ್ಲಾ ಜಾತಿಯ ಜನರೂ ತಿಮ್ಮಮ್ಮನವರ ಕಟ್ಟೆಯ ದರ್ಶನ ಮಾಡಿಕೊಂಡು ಹೋಗುತ್ತಾರೆ.. ಉತ್ಸವ ಜಾತರೆ ನಡೆದಂತೆ ಅದ್ಭುತವಾಗಿ ನಡಯುತ್ತದೆ.
ಇಂಥಾ ಪರಮ ಶ್ರೇಷ್ಠ  ಹರಿದಾಸಿಯ ದರುಶನ ಭಾಗ್ಯ ನಮಗೂ ಸಿಗಲೀ ಎಂದು ಬೇಡಿಕೊಳ್ಳುತ್ತೇನೆ....

ಶ್ರೀಮತ್ಪುರಂದರದಾಸಾರ್ಯರ ಪರಮಾನುಗ್ರಹದ ಜೊತೆಗೆ
ತಾಯಿ ತಿಮ್ಮಮ್ಮನವರ ಆಶೀರ್ವಾದವೂ ಸದಾ ನಮಗಿರಲಿ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ...

ಹರಿ ಸ್ಮರಣೆ ಮಾಡೋ ನಿರಂತರ 

-Smt. Padma Sirish

ನಾದನೀರಾಜನದಿಂ ದಾಸಸುರಭಿ 🙏🏽
****

ಕರ್ನಾಟಕ ಸಂಗೀತ ಪಿತಾಮಹ - ಪುರಂದರದಾಸವರ್ಯರು

ಪೂರ್ವ ಪೀಠಿಕೆ:
ಸಮಗ್ರ ವೇದರಾಶಿಗಳೂ ಶ್ರೀಹರಿಯ ಗುಣಗಳನ್ನು ತಿಳಿಸುತ್ತವೆ. ವೇದಾಭಿಮಾನಿನಿಯಾದ ಲಕ್ಷ್ಮೀ ದೇವಿಯರು ಪ್ರತಿನಿತ್ಯವೂ ವೇದರಾಶಿಗಳಿಂದ ಹರಿಯನ್ನು ಸ್ತುತಿಸುತ್ತಿದ್ದಾಳೆ. ಮುಖ್ಯಪ್ರಾಣದೇವರು ಪ್ರಲಯಕಾಲದಲ್ಲಿಯೂ ಸಹ, ವಿಸ್ಮೃತಿಗೊಳ್ಳದೆ ಸಮಗ್ರ ವೇದಗಳಿಂದ ಶ್ರೀಹರಿಯ ಕೀರ್ತನೆ ಮಾಡುವರು ಎಂಬುದು ಶಾಸ್ತ್ರವಿದಿತವಾಗಿದೆ. ದೇವತೆಗಳಿಂದಾರಂಭಿಸಿ ನರೋತ್ತಮರ ಪರ್ಯಂತ ಎಲ್ಲ ಸಾತ್ವಿಕ ಸಜ್ಜನರೂ; ಲಕ್ಷ್ಮೀದೇವಿಯರೂ, ಮುಖ್ಯಪ್ರಾಣದೇವರು ಹಾಕಿಕೊಟ್ಟ ಸಂಪ್ರದಾಯದಂತೆ, ಪ್ರತಿನಿತ್ಯವೂ ವೇದ ಪುರಾಣೋಕ್ತ ಹರಿಯ ಸಂಕೀರ್ತನೆ ಮಾಡುತ್ತಾ, ಮೋಕ್ಷಭಾಗಿಗಳಾಗಿ, ಮೋಕ್ಷಾನಂತರವೂ ಹರಿಕೀರ್ತನೆಯನ್ನು ಮಾಡುತ್ತಿರುತ್ತಾರೆ ಎಂಬುದು ವೇದ ಸಾರವಾಗಿದೆ ಎಂಬುದು, ಕೇವಲ ಮಧ್ವರಾಯರ ಗ್ರಂಥಗಳಲ್ಲಿ ಉಲ್ಲಿಖಿತವಾದ ವಿಚಾರವಾಗಿದೆ.

ಶ್ರೀಮನ್ಮಧ್ವಾಚಾರ್ಯರು ಹರಿನಾಮ ಸಂಕೀರ್ತನೆಗೆ ಬಹಳ ಮಹತ್ವ ಕೊಟ್ಟು, ಶ್ರೀಮದ್ಭಾಗವತದಲ್ಲಿ ಪ್ರಹ್ಲಾದರಾಜರು ವರ್ಣಿಸಿರುವ ನವವಿಧಾತ್ಮಕ ಭಕ್ತಿಯಲ್ಲಿ ಕೀರ್ತನೆಯೂ ಒಂದು ಮಹತ್ವದ ಘಟ್ಟವೆಂದು ತಿಳಿಸಿ, ಶ್ರೀಹರಿಯ ಸ್ಮರಣ, ಕೀರ್ತನೆಗಳನ್ನು ಸುತರಾಂ ತ್ಯಜಿಸಬಾರದು ಎಂಬ ಹಾರ್ದ ವ್ಯಕ್ತಪಡಿಸಿದ್ದಾರೆ.

ಗೀರ್ವಾಣ ಭಾಷಾ ಪ್ರಬಂಧಗಳಾದ ವೇದ ಪುರಾಣಾದಿಗಳ ಅಧ್ಯನಾಧಿಕಾರ‌ ರಹಿತರಿಗೆ ಮತ್ತು ಕೇವಲ ವೇದ ಪುರಾಣ ಜನಿತ  ಜ್ಞಾನಪೂರ್ವಕ  ಹರಿನಾಮ ಸ್ಮರಣೆಯನ್ನು ಮಾಡಲಾಗದ ಪಾಮರ ಜನರಿಗೆ, ಪ್ರಾಕೃತ ಭಾಷೆಯಲ್ಲಿ ಹರಿನಾಮ ಕೀರ್ತನಾ ಸತ್ಸಾಂಪ್ರದಾಯ ಪ್ರಾರಂಭಿಸಿ, ಕರ್ನಾಟಭಾಷೆಯಲ್ಲಿ ಹರಿ ನಾಮ ಕೀರ್ತನೆಯನ್ನು ರಚಿಸಿ, ಶ್ರೀಪಾದರಾಜರು, ಶ್ರೀಮದ್ವ್ಯಾಸರಾಜರೂ, ಶ್ರೀಮದ್ವಾದಿರಾಜರೂ, ಪುರಂದರದಾಸರಾದಿಯಾದ ದಾಸಪಂಥವನ್ನೇ ಪ್ರಾರಂಭಿಸಿದ ಕೀರ್ತಿ ಶ್ರೀಮನ್ನೃಹರಿತೀರ್ಥ ಶ್ರೀಪಾದಂಗಳವರಿಗೆ ಸಲ್ಲುತ್ತದೆ.

ಹರಿನಾಮ ಸ್ಮರಣೆಗೆಂದು ಹರಿದಾಸವರ್ಯರು ಕೀರ್ತನೆ, ಸುಳಾದಿ, ಗುಂಡಕ್ರಿಯೆ, ದಂಡಕ, ಷಟ್ಪದಿ, ಮುಂಡಿಗೆ, ಉಗಾಭೋಗಗಳು ಹೀಗೆ ಹಲವು ಪ್ರಕಾರಗಳನ್ನು ಜಗತ್ತಿಗೆ ನೀಡಿದರು.

ಶ್ರೀಹರಿಯ ಗುಣನಾಮಗಳನ್ನು ಸ್ತುತಿಸುತ್ತಾ, ಸಮಾಧಿ ಭಾಷೆಯಲ್ಲಿ ಅರ್ಥಾತ್ ನೇರ ನುಡಿಗಟ್ಟುಗಳಲ್ಲಿ ಶಾಸ್ತ್ರಪ್ರಮೇಯಗಳನ್ನು ಸುಲಭವಾಗಿ ಅರಿಯುವ, ಮನದಟ್ಟು ಮಾಡಿಸುವ ಮಾರ್ಗ ಕೀರ್ತನೆಗಳಾಗಿದ್ದು, ಪಂಡಿತ ಪಾಮರರಿಗೂ ಪ್ರತಿಪದಗಳೂ ಅನೇಕಾರ್ಥ ಗರ್ಭಿತವೆನಿಸಿ, ಬುದ್ಧಿ ಎಂಬ ಮಂದರ ಪರ್ವತದಂತಹಾ ಕಡಗೋಲಿನಿಂದ, ಹರಿಯ ಗುಣಗಳೆಂಬ ಸಾಗರವನ್ನು ಕಡೆಯುತ್ತಾ, ಹರಿಯ ಸಾಕ್ಷಾತ್ಕಾರವೆಂಬ ಸುಧೆಯನ್ನು ಕುಡಿಯುವ ಅತ್ಯಂತ ಸುಲಭದ ದಾರಿಯನ್ನು ಮಾಡಿಕೊಟ್ಟಿದ್ದಾರೆ ಕರ್ನಾಟಕದ ಹರಿದಾಸವರ್ಯರು.

ಇದಕ್ಕೆ ಪೂರಕವಾಗಿ, "ಶ್ರೀಮನ್ನ್ಯಾಯಸುಧಾ ಓದಿ ಪದ ಹಾಡು" ಎಂಬ ನಾಣ್ಣುಡಿಯು, ಸಮಗ್ರ ಶಾಸ್ತ್ರಾಧ್ಯಯನ ಮಾಡಿದರೆ ಮಾತ್ರ, ಹರಿದಾಸ ಸಾಹಿತ್ಯಕ್ಕೆ ಪ್ರವೇಶಮಾಡ ಬಹುದಾದ ಅರ್ಹತೆ ದೊರೆಯುತ್ತದೆ ಎಂಬ ಹಿರಿಯರ ಹಾರ್ದವನ್ನು ಸುಸ್ಥಿರಗೊಳಿಸಿದ್ದು, ಹರಿದಾಸ ಸಾಹಿತ್ಯದ ಘನತೆಯನ್ನು ತೋರುವುದಲ್ಲದೆ, ಶಾಸ್ತ್ರಾಧ್ಯಯನ ಪರಿಣಿತರಿಗೂ ಸವಾಲೆಸೆಯಬಲ್ಲ, ವೇದಾರ್ಥ ನಿರ್ಣಾಯಕ ಸಂಗತಿಬೋಧವವೆಂಬುದು ಸ್ಪಷ್ಟವಾಗುತ್ತದೆ.

ಹರಿದಾಸ ಕೀರ್ತನೆಗಳನ್ನು ರಾಗ ತಾಳಬದ್ಧವಾಗಿ ಮೇಳೈಸಿ, ಭಕ್ತಿಯುಕ್ತ ಗೀತಗಾಯನದಿಂದ ಸಾಮಾನ್ಯ ಜನರ ಮನಸ್ಸಿಗೂ ತತ್ವಶಾಸ್ತ್ರವು ಎಟುಕುವಂತೆ ಮಾಡಿರುವುದು, ದಾಸರಾಯರ ಔದಾರ್ಯಕ್ಕೆ ಸಾಟಿಯುಂಟೇ?

ವಿಷಯ:
ಪ್ರಸ್ತುತ, ಕೆಲವು ದಿನಗಳ ಹಿಂದೆ, ಸಂಗೀತ ಶಾಸ್ತ್ರಾನಭಿಜ್ಞ ಸಮಾಜಘಾತುಕತುಕರು ಕೆಲವರು ಕರ್ನಾಟಕ ಸಂಗೀತ ಪಿತಾಮಹರಾದ ಪುರಂದರದಾಸಾರ್ಯರ ಬಗ್ಗೆ ಎತ್ತಿದ್ದ ಅಪಶಬ್ದಗಳನ್ನು ಖಂಡಿಸುವುದು, ದಾಸರಾಯರ ಸೇವಾರೂಪವಾಗಿ ಅನಿವಾರ್ಯವೆನಿಸಿದೆ.

ಸಾಮಾನ್ಯವಾಗಿ ಸಂಗೀತ‌ಶಾಸ್ತ್ರಜ್ಞನಿಗೆ, ಶೃತಿ, ಸ್ವರಸ್ಥಾನ, ರಾಗ, ತಾಳಗಳ ಜ್ಞಾನ ಅನಿವಾರ್ಯ. ಕೇವಲ ರಾಗ ಜ್ಞಾನವಾಗಲೀ, ಶೃತಿ ಜ್ಞಾನವಾಗಲೀ, ಸ್ವರ ಜ್ಞಾನವಾಗಲೀ, ತಾಳ ಜ್ಞಾನವಿಲ್ಲದೆ ಸಂಗೀತವೆನಿಸದು. ಪುರಂದರದಾಸರ ಸುಳಾದಿ ಸಪ್ತತಾಳ ಸಂಪ್ರದಾಯದ ದಾಕ್ಷಿಣಾತ್ಯ ಕರ್ನಾಟಕ ಶಾಸ್ತ್ರೀಯ ಸಂಗೀತದ ಹೊಸ ಪದ್ಧತಿಯನ್ನೇ ಸೃಷ್ಟಿಸಿದೆ. ಈ ವಿಚಾರವು ಸರ್ವವಿದಿತವಾಗಿದ್ದು ಅಪಲಾಪ ಯೋಗ್ಯವಲ್ಲ. ಸಂಗೀತದಲ್ಲಿ ಸಪ್ತ ಸ್ವರಗಳು ಹೇಗೆ ಮುಖ್ಯವೋ, ಹಾಗೆಯೇ ಈ ಸಪ್ತತಾಳಗಳೆನಿಸಿವೆ.

ತಾಳಗಳ ಬಗ್ಗೆ ಹೇಳಿರುವ ಪ್ರಾಚೀನ ಗ್ರಂಥಗಳಲ್ಲಿನ ಕೆಲವು ಪ್ರಮಾಣಗಳನ್ನು ನೋಡೋಣ.

ವೀಣಾವಾದನ ತತ್ವಜ್ಞಃ ಶೃತಿಜಾತಿ ವಿಶಾರದಃ |
ತಾಳಜ್ಞಶ್ಚಾಪ್ರಯಾಸೇನ ಮೋಕ್ಷಮಾರ್ಗಂ ಸ ಗಚ್ಛತಿ||- ಯಾಜ್ಞವಲ್ಕ್ಯ ಸ್ಮೃತಿ"

ಗಾನಂ ತಾಳೇನ ಧಾರ್ಯತೇ |- ಭರತ

ತಾಲಸ್ತಲ ಪ್ರತಿಷ್ಠಾಯಾಂ ಇತಿ ಧಾತೋರ್ಘ ಇನ್ ಸ್ಮೃತಃ |
ಗೀತಂ ವಾದ್ಯಂ ತಥಾ ನೃತ್ಯಂ ಯತಸ್ತಾಲೇ ಪ್ರತಿಷ್ಠಿತಮ್|| - ಶಾರ್ಜ್ಞದೇವ"

ತಾಳಬೇಕು ತಕ್ಕ ಮೇಳ ಬೇಕು
ಶಾಂತ ವೇಳೆ ಬೇಕು ಗಾನ ಕೇಳ ಬೇಕೆಂಬುವರಿಗೆ ಯತಿಪ್ರಾಸವಿರ ಬೇಕು ಗತಿಗೆ ನಿಲ್ಲಿಸ ಬೇಕು - ಪುರಂದರದಾಸರು

ಪ್ರಾಚೀನ ನಾಟ್ಯ ಶಾಸ್ತ್ರ, ಸಂಗೀತ ಸಮಯಸಾರ, ಸಂಗೀತ ಮಕರಂದ ಮೊದಲಾದ ಗ್ರಂಥಗಳಲ್ಲಿ, ಅಷ್ಟೋತ್ತರಶತ ತಾಳಗಳ ಉಲ್ಲೇಖವಿದೆ. ಸಂಗೀತ ರತ್ನಾಕರ ದಲ್ಲಿ ನೂರಾ ಇಪ್ಪತ್ತೈದು ತಾಳಗಳನ್ನು ವಿವರಿಸಿದ್ದು ಕಂಡಿದೆ ಹಾಗೂ ಯಕ್ಷಗಾನದಲ್ಲಿ ಕುರುಝಂಪೆ, ಅರೆಝಂಪೆ, ಯರುಕುಲಝಂಪೆ, ವಿನಾಯಕ, ನವತಾಳ, ಸುಳಾದಿ ಸಪ್ತತಾಳ, ಆದಿತಾಳ, ಪಂಚತಾಳಗಳನ್ನು ಕಾಣಬಹುದು. ಮಾರ್ಗ, ದೇಶೀ, ತಾಳಗಳು; ಶುದ್ಧ, ಸಾಲಗ, ಸಂಕೀರ್ಣ ಎಂದು ಮೂರು ವಿಧವೆನಿಸಿವೆ.

ತಾಳಲಕ್ಷಣ, ತಾಳವಿಧಾನ, ತಾಳವಿಷಯ, ತಾಳಸಮುದ್ರ, ತಾಳದೀಪಿಕಾ, ತಾಳಮಹೋದಧಿ, ತಾಳಲಕ್ಷಣ ಪ್ರಕಾಶ, ರಾಗತಾಳ ಪ್ರಸ್ತಾರ, ರಾಗತಾಳ ಚಿಂತಾಮಣಿ ಮುಂತಾದ ಗ್ರಂಥಗಳು ತಾಳದ ಪ್ರಾಮುಖ್ಯತೆಯನ್ನು ಎತ್ತಿಹಿಡಿದಿವೆ.

ಪುರಂದರದಾಸರ ಕಾಲದಲ್ಲಿ, ಸುಳಾದಿ ಸಪ್ತ ದೇಶೀ ತಾಳಗಳು, ಹರಿದಾಸರ ಕೀರ್ತನೆ, ಸುಳಾದಿಗಳ ಮಾಧ್ಯಮದ ಸಹಾಯದಿಂದ ಪ್ರಸಿದ್ಧಿ ಗೊಳಿಸಿದ್ದು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಮಹತ್ತರವೆನಿಸಿದೆ.

ಧೃವೋ ಮಠ್ಯೋ ರೂಪಕಶ್ಚ ಝಂಪಾ ತ್ರಿಪುಟ ಏವಚ|
ಅಟ್ಟತಾಳೈಕತಾಳೌಚ ಸಪ್ತತಾಳಾಃ ಪ್ರಕೀರ್ತಿತಾಃ ||

ಸೂಳ ಇತಿ ಗೀತವಿಷೇಶಸಮೂಹವಾಚೀ - ಭರತ

ಸೂಳ್ - ಹಾದಿ : ಸುಲಭವಾದ ಮಾರ್ಗ ಎಂಬ ಅರ್ಥದಲ್ಲಿ ಸುಳಾದಿ ಶಬ್ದಾರ್ಥ ಹೊಮ್ಮಿರಬಹುದು ಎಂಬುದು ಶಾಸ್ತ್ರಾಭಿಜ್ಞರ ಅಭಿಪ್ರಾಯವಾಗಿದ್ದು, ಈ ಏಳೂ ತಾಳಗಳನ್ನು ಏಕತ್ರ ಉಪಯೋಗ ಮಾಡಬಹುದಾದ ರೀತಿಯಲ್ಲಿ ಸುಳಾದಿಗಳೆಂಬ ಪ್ರಬಂಧಗಳನ್ನು ರಚಿಸಿ, ಸಂಗೀತ ಪಿಪಾಸುಗಳಿಗೆ ರಸದೌತನವೊದಗಿಸಿದ್ದು ಮಾಧ್ವೀಯ ಹರಿದಾಸರೇ ಮತ್ತು ಸುಳಾದಿಗಳ ಪ್ರಾಕಾರವನ್ನು ಶ್ರೀಪಾದರಾಜರು ಪ್ರಾರಂಭಿಸಿದರೆ, ಅವರದೇ ಮೇಲ್ಪಂಕ್ತಿಯಲ್ಲಿ ಕ್ರಮಿಸಿ ಪುರಂದರದಾಸರಾಯರು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಮೇರುವೆನಿಸಿ ಇಂದಿಗೂ ಸ್ತುತ್ಯಾರ್ಹರಾಗಿದ್ದಾರೆ.

ಅಷ್ಟೋತ್ತರ ಶತ ತಾಳಗಳಿದ್ದರೂ ಅದನ್ನು ಅಭ್ಯಾಸಿಸಲು ಸುಲಭವಾದ ಮಾರ್ಗಸೂತ್ರಗಳಿಲ್ಲದ ಕಾಲದಲ್ಲಿ, ಪುರಂದರದಾಸಾರ್ಯರು ಸುಳಾದಿ ಸಪ್ತತಾಳಗಳನ್ನು ತಮ್ಮ ಪಠ್ಯಕ್ರಮದಲ್ಲಿ ಅಳವಡಿಸಿ, ಅದೇ ಕ್ರಮವೇ ಇಂದಿಗೂ ಪ್ರಚಲಿತಿಯಲ್ಲಿರುವುದು ಗಮನೀಯ ಅಂಶವಾಗಿದ್ದು, ಸಪ್ತ ತಾಳಗಳು ತ್ರಿಶ್ರ, ಚತುರಶ್ರ, ಖಂಡ, ಮಿಶ್ರ, ಸಂಕೀರ್ಣ ಎಂಬ ಭೇದದಿಂದ ಒಟ್ಟು ಮೂವತ್ತೈದು ತಾಳಗಳಾಗಿ ವಿಸ್ತರಿಸಿ, ಸಂಗೀತಸಾಮ್ರಾಜ್ಯದಲ್ಲಿ ಇಂದಿಗೂ ಮೇಳೈಸಿವೆ.

ಪ್ರಾಚೀನರು ಇದೇ ತಾಳಗಳನ್ನೇ ಉಪಯೋಗಿಸಿದ್ದು ಕಂಡುಬಂದರೂ, ದಾಸರಾಯರ ಸೂತ್ರಗಳಂತೆ ಸುಲಭದ್ದಾಗಿರಲಿಲ್ಲವೆಂಬುದು ಗಮನೀಯ ಸಂಗತಿಯಾದರೂ, ಕಾಲ, ಮಾರ್ಗ, ಕ್ರಿಯಾ, ಅಂಗಾದಿಸಂಯುಕ್ತ ತಾಳಸ್ವರೂಪವನ್ನು ದಾಸರಾಯರು ಉದ್ಧರಿಸಿದ್ದಾರೆ.

ಶ್ರೀಮನ್ಮಧ್ವರಾಯರ ಸಾಕ್ಷಾತ್ ಶಿಷ್ಯರಾದ ನರಹರಿ ತೀರ್ಥರಿಂದ ಪ್ರಾರಂಭವಾದ, ಜನ ಸಾಮಾನ್ಯರಿಗೂ ಅರ್ಥವಾಗುವಂತೆ ತತ್ವಶಾಸ್ತ್ರ ಪ್ರಚಾರಕ್ಕಾಗಿಯೇ ಪ್ರಾರಂಭವಾದ ಶಾಸ್ತ್ರೀಯ ಸಂಗೀತ ಪ್ರಧಾನವಾದ ಹರಿದಾಸ ಸಾಹಿತ್ಯವನ್ನು ಶ್ರೀಪಾದರಾಜರು, ಶ್ರೀಮದ್ವ್ಯಾಸರಾಜರು, ಶ್ರೀಮದ್ವಾದಿರಾಜರು, ಉಚ್ಛ್ರಾಯಸ್ಥಿತಿಗೆ ತಲುಪಿಸಿದ್ದು ಇತಿಹಾಸ.

ಪುರಂದರದಾಸರ ಕಾಲವಂತೂ, ಕರ್ನಾಟಕ ಸಂಗೀತ, ಹರಿದಾಸಸಾಹಿತ್ಯಕ್ಕೆ ಸುವರ್ಣ ಯುಗವೆಂದೇ ಪ್ರಸಿದ್ಧವಾಯಿತು. ದಾಕ್ಷಿಣಾತ್ಯ ಕರ್ನಾಟಕ ಶಾಸ್ತ್ರೀಯ ಸಂಗೀತ ಪದ್ಧತಿಯನ್ನು ಸಂಪೂರ್ಣವಾಗಿ ಪ್ರತಿಷ್ಠಾಪಿಸಿದ ಕೀರ್ತಿಪುರುಷರು ಪುರಂದರದಾಸರು; ಸುಳಾದಿಗಳು ಮಾತ್ರವಲ್ಲದೆ, ಕೀರ್ತನ ಸಂಗೀತ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು ದಾಸಾರ್ಯರದೆಂದರೆ ತಪ್ಪಿಲ್ಲದ ಕಾರಣವೇ, ಶ್ರೀಮದ್ವ್ಯಾಸರಾಜರೇ ಪುರಂದರದಾಸರ 475000 ಕೃತಿಯುಕ್ತ ಸಾಹಿತ್ಯವನ್ನು “ಪುರಂದರೋಪನಿಷತ್” ಎಂದೇ ಪ್ರಸಿದ್ಧಿಗೊಳಿಸಿ, "ದಾಸರೆಂದರೆ ಪುರಂದರದಾಸರೈಯ್ಯ" ಎಂದು ಹಾಡಿಹೊಗಳಿದರೆಂದರೆ; ದಾಸರಾಯರ ರಚನೆಯ ಗಹನವಾದ ಚಮತ್ಕಾರಯುಕ್ತ ಆಂತರ್ಯಾರ್ಥ ಗಾಂಭೀರ್ಯವು ಮೇರುತೂಲ್ಯವೆಂದು ಒಪ್ಪಿದಂತಾಗಲಿಲ್ಲವೇ?

ಇನ್ನು ರಾಗಗಳ ವಿಚಾರವಾಗಿ ಮಾತನಾಡುವುದಾದರೆ, ಪುರಂದರದಾಸರ ಕಾಲದಲ್ಲಿ ಪ್ರಚಲಿತವಾಗಿದ್ದ, ಕರ್ನಾಟಕ ಸಂಗೀತದಲ್ಲಿ, 22ನೇ ಮೇಳಕರ್ತರಾಗವಾದ ಖರಹರಪ್ರಿಯ ರಾಗದಿಂದ ಪ್ರಾರಂಭವಾಗುತ್ತಿದ್ದ ಸಂಗೀತಾಭ್ಯಾಸಕ್ಕೆ ಅಂತ್ಯವನ್ನು ಹಾಡಿ, 15ನೇ ಮೇಳಕರ್ತರಾಗವಾದ ಮಾಯಾಮಾಳವಗೌಳ ರಾಗದಲ್ಲಿ ಸಂಗೀತಾಭ್ಯಾಸ ಪದ್ಧತಿಯನ್ನು ಸೃಷ್ಟಿಸಿ, ಸಂಗೀತ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟುಮಾಡಿರುವ ಪುರಂದರದಾಸರ ಈ ಸಂಪ್ರದಾಯವು ಸಂಗೀತಾಭ್ಯಾಸ ಪದ್ಧತಿಯಲ್ಲಿ ಇಂದಿಗೂ ಪ್ರಚಲಿತವಾಗಿರುವ, ಸರಳೆವರಸೆ, ಜಂಟಿವರಸೆ, ಅಲಂಕಾರ, ಗೀತೆ, ಪಿಳ್ಳಾರಿ ಗೀತೆಗಳನ್ನು ರಚಿಸಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಭದ್ರಬುನಾದಿ ಹಾಕಿಕೊಟ್ಟಿದೆ.

ಅವ್ಯವಸ್ಥಿತ ಕ್ಲಿಷ್ಟವಾಗಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಭ್ಯಾಸ ಕ್ರಮಕ್ಕೆ ಹೊಸ ಹಾದಿಯನ್ನು ಹಾಕಿ, ಶೃತಿ ಜ್ಞಾನ, ರಾಗ ಜ್ಞಾನ, ಸ್ವರ ಜ್ಞಾನ, ತಾಳ ಜ್ಞಾನ ಪೂರ್ವಕ ವ್ಯವಸ್ಥಿತ ಸಂಗೀತ ಪದ್ಧತಿಯನ್ನು ಜಾರಿಗೆ ತಂದ ಕೀರ್ತಿ ಪುರಂದರದಾಸರದ್ದು.

ಪುರಂದರದಾಸರ ತರುವಾಯ ಬಂದ ಎಲ್ಲ ಸಂಗೀತ ದಿಗ್ಗಜರೂ, ವಾಗ್ಗೇಯಕಾರರೂ, ಕೇವಲ ಸಂಗೀತ ಶಾಸ್ತ್ರವನ್ನು ಮಾತ್ರವಲ್ಲದೆ, ಸಾಹಿತ್ಯ ಭಾಗದಲ್ಲೂ ಪುರಂದರದಾಸರನ್ನೇ ಅನುಸರಿಸಿರುವುದು ಗಮನಿಸಬೇಕಾದ ಸಂಗತಿ. ತಂಜಾವೂರಿನ ನಾಯಕ ತುಳಜನು *"ಸಂಗೀತ ಸಾರಾಮೃತ" ಎಂಬ ಗ್ರಂಥದಲ್ಲಿ, "ಪುರಂದರದಾಸರನ್ನು ಸಂಪ್ರದಾಯ ಪ್ರವರ್ತಕರೆಂದು ಗೌರವಿಸಿದ್ದಾನೆ ಮತ್ತು ದಾಸರಾಯರ ಕೃತಿಗಳನ್ನು ತನ್ನ ಲಕ್ಷಣ ಗ್ರಂಥದ ಲಕ್ಷ್ಯಸಾಹಿತ್ಯವಾಗಿ ಬಳಸಿಕೊಂಡಿದ್ದಾನೆ.

ಅಸಂಖ್ಯಾತ ಕೀರ್ತನೆಗಳು, ದೇವರನಾಮ, ಸುಳಾದಿ, ಉಗಾಭೋಗಗಳ ಮೂಲಕ ಪುರಂದರದಾಸರು, ಕರ್ನಾಟಕ ಶಾಸ್ತ್ರೀಯ ಸಂಗೀತದ ವಾಗ್ಗೇಯಕಾರರಾದ, ಕ್ಷೇತ್ರಜ್ಞರು, ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶಾಮಾಶಾಸ್ತ್ರಿಗಳೇ ಮೊದಲಾದವರಿಗೆ ಮಾರ್ಗದರ್ಶಕರೆನಿಸಿದ್ದಾರೆ. ದುರದೃಷ್ಟವಶಾತ್ ಹಲವು ದಾಸರಾಯರ ಕೀರ್ತನೆಗಳು ನಷ್ಟವಾಗಿದ್ದರೂ ಪಠ್ಯಕ್ರಮ ಮಾತ್ರ ಒಂದಂಶವೂ ಬದಲಾಗದೆ ಇಂದಿಗೂ ಪುರಂದರದಾಸರ ಪಠ್ಯವೇ ಉಳಿದಿರುವುದಕ್ಕೂ ಸಹ "ಕರ್ನಾಟಕ ಸಂಗೀತ ಪಿತಾಮಹ" ಎಂಬ ಬಿರುದು ಪುರಂದರದಾಸರಾಯರಿಗೆ ಮಾತ್ರ ಅನ್ವರ್ಥವಿನಿಸುತ್ತದೆ.

ಕರ್ನಾಟಕದ ಮೂಲೆ ಮೂಲೆಗಳಲ್ಲಿನ ಮನೆ ಮನೆಗೆ ಮೋಕ್ಷಶಾಸ್ತ್ರವಾದ ವೇದ ಭಾಗವತ ಭಾರತ ಪುರಾಣರಹಸ್ಯವನ್ನು ಸಂಗೀತ ಮಾಧ್ಯಮದಲ್ಲಿ ತಿಳಿಸಿದ ಕೀರ್ತಿ ಪುರಂದರದಾಸರದ್ದು.

ಪುರಂದರದಾಸರ ಕೀರ್ತನೆಗಳನ್ನು ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲೂ ಉಪಯೋಗಿಸಿರುವುದು ಗಮನೀಯ ಸಂಗತಿ.

ದೇವರನಾಮಗಳನ್ನು ಗಾಯನ, ವಾದನ, ನರ್ತನ ಪ್ರಕಾರಗಳಿಗೂ ಅಳವಡಿಸಿ ಜಗಜ್ಜಾಹಿರು ಮಾಡಿರುವುದು ಪುರಂದರದಾಸರ ಕೊಡುಗೆಯೆಂಬುದು ಅರಿಯಬೇಕು.

ಕರ್ನಾಟಕ ಶಾಸ್ತ್ರೀಯ ಸಂಗೀತದ ಇಂದಿನ ಶಿಶುಗಳೆಲ್ಲರೂ (ವಿದ್ವಾಂಸರಾದಿಯಾಗಿ ಸಂಗೀತಜ್ಞರೆಲ್ಲರೂ) ಪುರಂದರದಾಸರ ಉಚ್ಛಿಷ್ಠ ಭೋಜನವನ್ನೇ ಮಾಡುತ್ತಿರುವುದಾದರೂ, ಪುರಂದರದಾಸರ ಬಗ್ಗೆ ಮೂದಲಿಸುವ ರೀತಿಯ ಅಪಪ್ರಚಾರ, ಅಪಶಬ್ದಗಳನ್ನು ಕೇಳಿ, ನೋಡಿಕೊಂಡು ಕುಳಿತಿರುವುದು ಶೋಚನೀಯ, ಖಂಡನೀಯ ಸಂಗತಿಯಾಗಿದೆ.

ತತ್ವಶಾಸ್ತ್ರವಿಚಾರಗಳನ್ನು ಹೊರೆತುಪಡಿಸಿ, ಕೇವಲ ಕರ್ನಾಟಕ ಶಾಸ್ತ್ರೀಯ ಸಂಗೀತದ ಕ್ಷೇತ್ರಕ್ಕೆ ಮಾತ್ರ ಪುರಂದರದಾಸರನ್ನು ಮೀಸಲಿಟ್ಟ ಪಕ್ಷದಲ್ಲಿಯೂ  ದಾಸರಾಯರು ಸಹಸ್ರ ರವಿಪ್ರಭರಾಗಿ ವಿರಾಜಿಸಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆಗೆ ಯಾವ ಪ್ರಶಸ್ತಿಯನ್ನು ಕೊಡಬಲ್ಲರು? ಇಂಥ ಮಹನೀಯರು ಶ್ರೀಪಾದರಾಜರೇ ಮೊದಲಾದವರ ಮೇಲ್ಪಂಕ್ತಿಯನ್ನು ಅನುಸರಿಸಿ, ವಿಜಯದಾಸರು, ಗೋಪಾಲದಾಸರು, ಜಗನ್ನಥದಾಸರೇ ಮೊದಲಾದ ಶಿಷ್ಯಪ್ರಶಿಷ್ಯರನ್ನು ಸಂಗೀತ, ತತ್ವಶಾಸ್ತ್ರಬೋಧನೆಗಾಗಿ ಜಗತ್ತಿಗೆ ಕೊಟ್ಟು ಸಮಾಜದ ಎಲ್ಲ ಸ್ಥರದ ಜನರಿಗೂ ನವದಳಾತ್ಮಕ ಭಕ್ತಿಯಿಂದ ಹರಿಯನ್ನು ಹೊಂದುವಂತೆ ಅನುಗ್ರಹಿಸಿ ಉದ್ಧಾರ ಮಾಡಿದ್ದಾರೆ.

ಎರಡು ಜಿಲ್ಲೆಗಳನ್ನು ಬಿಟ್ಟು ಬರದ ಮತ ಎಂದು ಬೊಬ್ಬಿಡುವವರ ಪ್ರತಿ ಮನೆಯಲ್ಲಿಯೂ ನಿತ್ಯವೂ ಒಂದಾದರೂ ದಾಸರ ಪದ ಬಾರದಿದೆಯೇ? 

ಕರ್ನಾಟಕದ ಉದ್ದಗಲಕ್ಕೂ ಅಷ್ಟೇ ಅಲ್ಲದೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರದಲ್ಲಿಯ ಮನೆ ಮನೆಗಳಲ್ಲೂ ವ್ಯಾಪಿಸಿರುವ ಪುರಂದರದಾಸರ ದೇವರನಾಮಗಳ ಕೀರ್ತಿ ಶಿಖರಗಳು, ಮಾಧ್ವೀಯ ತತ್ವಶಾಸ್ತ್ರಬೋಧಕವೆಂಬ ಸತ್ಯವನ್ನು ಅರಗಿಸಿಕೊಳ್ಳಲಾರದೆ, ಗಂಗಾನದಿಯ ರಭಸಕ್ಕಂಜಿ ಸ್ಮಶಾಣದಲ್ಲಿ ಮಲಮೂತ್ರವಿಸರ್ಜಿಸಿಕೊಂಡು ಬೊಬ್ಬೆಯೂಳಿಡುವ ಒಣಕಲು ಜವಪೀಡಿತ ಶುನಕಗಳಂತೆ ಊಳಿಟ್ಟೊಡನೆ, ಗಂಗಾನೈರ್ಮಲ್ಯ ಹಾನಿಯುಂಟಾಗುತ್ತದೆಯೇ?

ಓದುಗರೆ, ನಾವೆಲ್ಲ ಪುರಂದರದಾಸರ ಪದಗಳನ್ನು ಹಾಡುತ್ತೇವೆ, ಹರಿವಾಯುಗುರುಗಳ ಅನುಗ್ರಹ ಪಡೆಯುತ್ತಿದ್ದೇವೆ. ದಾಸರಾಯರಿಂದ ಆತ್ಯಂತಿಕ ಉಪಕಾರವಾದ ಮೋಕ್ಷ ಶಾಸ್ತ್ರ ಜ್ಞಾನ ಪಡೆದಿದ್ದೇವೆ. ಕನಿಷ್ಠಪಕ್ಷ ದಾಸರಾಯರ ಬಗ್ಗೆ ಬರುವ ಅಪಶಬ್ದಗಳನ್ನು ಖಂಡಿಸಿ ದಾಸರಾಯರ ಕೃಪೆಗೆ ಪಾತ್ರರಾಗೋಣ.

ಹರಿದಾಸರ ನಿಂದೆಯನ್ನು ತಾಳಲಾರದೆ, ಕೇವಲ ವಾಕ್ಶುದ್ಧಿ, ಬುದ್ಧಿಶುದ್ಧಿಗಾಗಿ ಬರೆದಿರುವ ಈ ಲೇಖನದಿಂದ, ನಮ್ಮ ಗುರುಗಳ ಅಂತರ್ಯಾಮಿಗಳಾದ *"ಕರ್ನಾಟಕ ಸಂಗೀತ ಪಿತಾಮಹರಾದ" ಪುರಂದರದಾಸರಾಯರ ಅಂತರ್ಯಾಮಿಗಳಾದ ಶ್ರೀಮದ್ ಹನುಮ ಭೀಮ ಮಧ್ವಾಂತರ್ಗತ ವೇದವ್ಯಾಸಾತ್ಮಕ, ಲಕ್ಷ್ಮೀಹಯಗ್ರೀವಾತ್ಮಕ, ಲಕ್ಷ್ಮೀವೆಂಕಟೇಶ ದೇವರು ಈ ಲೇಖನಪುಷ್ಪದಿಂದ ಪ್ರೀತರಾಗಲಿ ಎಂದು ಪ್ರಾರ್ಥಿಸಿ ವಿರಮಿಸುತ್ತೇನೆ.*
ಶ್ರೀ ಕೃಷ್ಣಾರ್ಪಣಮಸ್ತು || ಹರಯೇ ನಮಃ||
- ಅರವಿಂದಾಚಾರ್ಯ ಹಾರನಹಳ್ಳಿ
***

 ಪುರಂದರೋಪನಿಷತ್

ಚಿಂತನ....✍.......by ಶ್ರೀಸುಗುಣವಿಠಲ.

ಮಾಲಿಕೆ: 1

🌷🌳🌷🌳🌷🌷🌳🌷🌳🌷


ಮನ್ಮನೋಭೀಷ್ಟ ವರದಂ ಸರ್ವಾಭೀಷ್ಟ ಫಲಪ್ರದಮ್|

ಪುರಂದರಗುರಂ ವಂದೇ ದಾಸಶ್ರೇಷ್ಠಂ ದಯಾನಿಧಿಮ್||


ಹರಿದಾಸ ಸಾಹಿತ್ಯ ಪ್ರಪಂಚದಲ್ಲಿ ಭಕ್ತಿ ಸಾಹಿತ್ಯಕ್ಕೆ ವಿಶಿಷ್ಟ ಸ್ಥಾನವಿದೆ. ಶ್ರೀಲಕುಮಿದೇವಿ ಆದಿಯಾಗಿ ...ಸಮಸ್ತ ಜೀವರು  ಶ್ರೀಹರಿಯ ಅನುಗ್ರಹ ಪ್ರಾಪ್ತಿಗಾಗಿ...ದಾಸತ್ವದ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸುವ ನಿಟ್ಟಿನಲ್ಲಿ...ಸಂಸ್ಕೃತಿ-ಸಂಗೀತ-ಸಾಹಿತ್ಯ -ಸತ್ಪಂಥದ ಸುಪಥದಲ್ಲಿ ಸಾಗುತ್ತಾ.. ಮುಮುಕ್ಷುಗಳು ಸಾಧನೆಯ  ಮಾರ್ಗವನ್ನು ಕ್ರಮಿಸುವುದು ಒಂದು ಉತ್ತಮ ಸಾಧನವಾಗಿದೆ.

ಈ ದಿಸೆಯಲ್ಲಿ...

ಶ್ರೀಮದಾನಂದ ತೀರ್ಥರಿಂದ ಸ್ಪೂರ್ತಿ ಹೊಂದಿ ಅವರ ನಂತರ ಬಂದ ಜ್ಞಾನಿವರೇಣ್ಯರು , ಯತಿವರೇಣ್ಯರು.. ದಾಸಶ್ರೇಷ್ಟರು...ಮುಂತಾದ ಮಹನೀಯರುಗಳು ತೋರಿದ ಮಾರ್ಗ ಮಾಡಿದ ಕೃಷಿ, ಸಾಹಿತ್ಯಸರಸ್ವತಿಗೆ ಉಪಮೆ, ರೂಪಕ, ಯಮಕ, ಮುಂತಾದ ಕಾವ್ಯ ಕೃತಿಗಳು, ದೈವದತ್ತವಾದ ಸಹಜ ಪ್ರತಿಭೆಯುಳ್ಳ ಕವಿತಾಶಕ್ತಿ ಮೈಗೂಡಿಸಿಕೊಂಡು ಭಗವಂತನ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿ ಸಕಲ ಸಜ್ಜನರನ್ನು ಆ ನಿಟ್ಟಿನಲ್ಲಿ ಕರೆದೊಯ್ಯಲು ..ಭುವಿಗೆ ಬಂದ ಮಹನೀಯರುಗಳೇ ಹರಿದಾಸವರೇಣ್ಯರುಗಳಲ್ಲಿ   ಪ್ರಮುಖರಾದಾವರು 

ಶ್ರೀಪುರಂದರ ದಾಸವರೇಣ್ಯರು.

ದಾಸಸಾಹಿತ್ಯದ ಕೇಂದ್ರಬಿಂದುವಾಗಿ ಧೃವತಾರೆಯಂತೆ ಮಿನುಗುತ್ತಿರುವ ಭೂತಾರೆ.."ಶ್ರೀಪುರಂದರದಾಸರು".

ಮಾನವರಲ್ಲಿ ಕೋಟಿಕೋಟಿಗಳಲ್ಲಿ ಒಬ್ಬರಾಗಿ, ಅಂದಿನಿಂದ ಇಂದಿನವರೆಗೂ ಜನಮನದ ಅಂತರಾಳದಲ್ಲಿ ನೆಲೆಸಿ, ಹರಿದಾಸಸಾಹಿತ್ಯದ ಉಸಿರಾಗಿ, ಪರಂಪರೆಯ ಪ್ರವರ್ತಕರಾಗಿ, ಸಂಗೀತ ಸಾಮ್ರಾಜ್ಯದ ಅಧಿಪತಿಗಳಾಗಿ, ಸಂಸ್ಕೃತಿ, ಸಾಹಿತ್ಯ ಉಳಿಸಿ, ಬೆಳೆಸಿ, ಶ್ರೀಹರಿಯ ಶ್ರೇಷ್ಠ ದಾಸರೆನಿಸಿ, ಭಕ್ತಿಪಂಥದ ಪಥಿಕರಾಗಿ, ಈ ಸತ್ಪಂಥದ ಮಾರ್ಗದರ್ಶಕರಾದ ವಿಭೂತಿ ಪುರುಷರೇ...

ಶ್ರೀಪುರಂದರ ದಾಸರು".

ಪ್ರಹ್ಲಾದಾವತಾರಿಗಳಾದ ಶ್ರೀವ್ಯಾಸರಾಜ ಗುರುಸಾರ್ವಭೌಮರಿಂದಲೇ....

ದಾಸರೆಂದರೇ ಪುರಂದರದಾಸರಯ್ಯ....ಎಂದೆನಿಸಿಕೊಂಡ ,ಗುರುಗಳಿಂದಲೇ ಪ್ರಶಂಸಿಸಲ್ಪಟ್ಟ ಅವರ ಪೂರ್ಣಾನುಗ್ರಹಕ್ಕೆ ಪಾತ್ರರಾದ ಶ್ರೀಪುರಂದದಾಸರ  ಜೀವನ ಅವರ ಆದರ್ಶಗಳು ಅನುಕರಿಣೀಯವಾಗಿವೆ.

ಸಂಸ್ಕೃತ ಭಾಷಾ ಜ್ಞಾನವಿಲ್ಲದ ಲಕ್ಷಾವಧಿ ಜನರಿಗೆ ವೇದ, ಉಪನಿಷತ್, ಪುರಾಣಗಳ,  ಇತಿಹಾಸದ, ಅರ್ಥವನ್ನು ಸಲಭವಾದ ಸರಳಕನ್ನಡ ಪದದಲ್ಲಿ ರಚಿಸಿ ,ಮಾನವಧರ್ಮ&ಮಧ್ವಮತಪ್ರಚಾರವೇ ತಮ್ಮ ಕರ್ತವ್ಯವನ್ನಾಗಿಸಿ, ಲಕ್ಷಗಟ್ಟಲೆ ಕೃತಿಗಳನ್ನು ರಚಿಸಿ ನೀಡುವುದರ ಮೂಲಕ ಸಕಲಸಜ್ಜನರ ಆಧ್ಯಾತ್ಮಿಕ ಸಾಧನೆಗೆ ಹಾದಿ ತೋರಿದ ಲೋಕೋಪಕಾರವನ್ನು ಮಾಡಿದ ..ಶ್ರೀಪುರಂದರ ದಾಸರ ಕೃತಿಗಳನ್ನು ಗುರುಗಳಾದ ಶ್ರೀವ್ಯಾಸರಾಜರು 

"ಪುರಂದರೋಪನಿಷತ್" ಎಂದು ಘೋಷಿಸಿ ಮಾನ್ಯಮಾಡಿದ್ದಾರೆ.

ಅಬಾಲವೃದ್ಧರಿಗೂ ಅರ್ಥವಾಗುವಂತೆ ಸದಾಚಾರ ಸಂಪತ್ತನ್ನು ಆಚಾರ್ಯ ಮಧ್ವರ ಸಿದ್ಧಾಂತವನ್ನು ಪ್ರಮೇಯಗಳನ್ನು, ವೇದಾಂತ ವಿಚಾರಗಳನ್ನೂ ತಮ್ಮ ಕೃತಿಯಲ್ಲಿ ಸೆರೆಹಿಡಿದು ಸುಂದರವಾಗಿ ವರ್ಣಿಸಿ ಲೋಕೋಪಕಾರ ಮಾಡಿದ್ದಾರೆ.

ಮನ್ಮನೋಭೀಷ್ಟವರದಂ".....

ಇದರ ಯಥಾಮತಿ ಚಿಂತನ ನೋಡುವುದಾದರೇ..

ಅರ್ಥೇ ನಾರಾಯಣೋ ದೇವಃ ಸರ್ವಮನ್ಯತ್ ತದರ್ಥಕಂ"...ಎಂಬ  ಆಚಾರ್ಯರ ಉಕ್ತಿಯಂತೆ ಜ್ಞಾನಿಗಳು ಯಾವುದೇ ಐಹಿಕ ವರಗಳನ್ನು ಯಾಚಿಸದೇ ಕೇವಲ ಶ್ರೀಹರಿಯನ್ನೆ ಬೇಡುತ್ತಾರೆ.ಅಂತಹ ಜ್ಞಾನಿಗಳ ಅಪೇಕ್ಷಿತವಾದ ವರ ನಾಮಕ ಪರಮಾತ್ಮನ ದರ್ಶನ ಭಾಗ್ಯವನ್ನು ಕರುಣಿಸುತ್ತಾರಾದ್ದರಿಂದ 

ಮನೋಭೀಷ್ಟವರದರು....ಇದನ್ನೆ ಶ್ರೀವಿಜಯದಾಸರು...

ಗುರುಪುರಂದರ ದಾಸರ ನೆರೆನಂಬಲು, ನಿರುತಕಲತು ವಿಜಯವಿಠಲ ಒಲಿವ"..ಎಂದಿದ್ದಾರೇ.

ಸಮ್ಯಕ್ ಜ್ಞಾನವದಾಚಾರ್ಯಾತ್ ಮುಚ್ಯತೇ ಪುರುಷೋಭವಾತ್(ವಾಮನ ಪುರಾಣ).

ದ ಮಾತಿನಂತೆ ಸಮೀಚಿನ ಜ್ಞಾನವುಳ್ಳ ಆಚಾರ್ಯರಾದ ಗುರುಗಳ  ಉಪದೇಶ, ಅನುಗ್ರಹವು ಮುಮುಕ್ಷುವಿಗೆ ಸಾಧಕನಿಗೆ ಮುಕ್ತಿ ಹೊಂದಲು ಅವಶ್ಯ ....ಈ ದಿಸೆಯಲ್ಲಿ ..

ಸ್ವೋತ್ತಮಾ ಗುರುವಃ ಪ್ರೋಕ್ತಾಃ..ನಮಗಿಂತ ಉತ್ತಮರೆಲ್ಲಾ ನಮಗೆ ಗುರುಗಳೇ ಆಗಿರುವರು... ಎಂಬ ಸಧ್ಭಾವನೆಯೊಂದಿಗೆ ..ನಮ್ಮ ವೃತ್ತಿ-ಪ್ರವೃತ್ತಿಗಳನ್ನು ಬೆಳಿಸಿಕೊಂಡು ...ಯಾವುದೇ ಸಜ್ಜನರಿಗೆ ..ಕಾಯಾವಾಚಾ ಮನಸಾ ...ನೋವುನೀಡದಂತೇ ..ನಿತ್ಯ ನಿರಂತರವಾಗಿ ಹರಿವಾಯುಗುರು ದಾಸವರೇಣ್ಯರ ಸೇವೆ ಮಾಡುವಂತ ಸೌಭಾಗ್ಯವನ್ನು ಪುರಂದರದಾಸವರೇಣ್ಯರು ಅನುಗ್ರಹಿಸಲಿ ಎಂಬ ಯಥಾಮತಿ ಚಿಂತನ ದೊಂದಿಗೆ ಪತ್ಯಂತರ್ಗತ ಪುರಂದರದಾಸಾರ್ಯರಂತರ್ಗತ ಗುರುಗಳಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಸುಗುಣವಿಠಲಾರ್ಪಣಮಸ್ತು.

***


ಚಿಂತನ....✍........


ಶ್ರೀಸುಗುಣವಿಠಲ.

ಸಂಚಿಕೆ: 2

🙏🌹🙏🌹🙏🌹🙏🌹🙏🌹


ಸರ್ವಾಭೀಷ್ಟಫಲಪ್ರದಂ....

ಅನಂತಕೋಟಿ ಬ್ರಹ್ಮಾಂಡನಾಯಕನಾದ ಭಗವಂತನು ಅಷ್ಟಕತೃತ್ವವನ್ನು ಹೊಂದಿದ ಸರ್ವಸ್ವತಂತ್ರ ಸಾರ್ವಭೌಮನಾಗಿದ್ದೂ..ನಮ್ಮಗಳ ಇರುವಿಕೆಗೆ ,ಸಕಲ ಕಾರ್ಯಗಳಿಗೂ ಅವನೇ ಕಾರ್ಯಕಾರಣನಾಗಿದ್ದಾನೆ.ಈ ಸಂಸಾರವೆಂಬ ಭವಸಾಗರದಲ್ಲಿ  ಮುಳುಗಿಸಬಲ್ಲಾ/ತೇಲಿಸಬಲ್ಲಾ ಏಕೋತ್ತಮ ದೈವನಾಗಿದ್ದಾನೆ..ಹಾಗಾಗಿ ಅವನ ಕಾರುಣ್ಯ ಅನುಗ್ರಹ ಸಂಪಾದನೆಯೇ..ಪ್ರಣಿಯೊಬ್ಬ ಸಾಧಕನ ಪರಮೋಚ್ಛ ಗುರಿ.

ಆಪ್ತಕಾಮಸ್ಯಕಾಸ್ಪೃಹಾ..ಎಂಬಂತೆ ಅವನಿಗೆ ಯಾರಿಂದಲೂ   ಲವಲೇಶವೂ ಏನೂ ಆಗಬೇಕಾದ್ದಿಲ್ಲಾ.ಸಜ್ಜನರನ್ನುದ್ಧರಿಸಲೆಂದೇ ಅವತಾರವೆತ್ತಿದ ಶ್ರೀಹರಿಯ ಕಾರುಣ್ಯ ಅಪಾರ .ಶ್ರೀಮದಾಚಾರ್ಯರು "ಕರುಣಾಪೂರ್ಣ ವರಪ್ರದಚರಿತಂ ಜ್ಞಾಪಯಮೇತೇ"..ಎಂದಂತೆ ಅವನೇ ಕರುಣಾಸಿಂಧು.ವರದರಾಜನಾಗಿದ್ದಾನೆ...ಈ ದಿಸೆಯಲ್ಲಿ .ನಮ್ಮ ಕಥಾನಾಯಕರಾದ ಶ್ರೀಪುರಂದರದಾಸರು..ಇಂಥ ಭಗವಂತನನ್ನು ಪಡೆಯುವಲ್ಲಿ  ಸಾಧಕರಿಗೆ ಸಧ್ಭುದ್ಧಿಯನ್ನು ಕಲ್ಪಿಸಿ, ಸತ್ಕಾರ್ಯಗಳನ್ನು ಮಾಡಿಸಿ, ಸನ್ಮಾರ್ಗವನ್ನು ತೋರಿಸಿ, ಸತ್ಚಿಂತನೆಗಳನ್ನು ನೀಡಿ...ಲೋಕದ ರೀತಿ ನೀತಿಗಳನ್ನು ತಿಳಿಹೇಳುವುದರ ಮೂಲಕ ...ನಮಗೆಲ್ಲಾ ಸರ್ವಾಭೀಷ್ಟಪ್ರದರಾಗಿದ್ದಾರೆ.

೨ ‌.."ಹಣ್ಣುಬಂದಿದೆ ಕೊಳ್ಳಿರೋ..."ಎಂದು ಸಜ್ಜನರ ಮನೆಮನಗಳಿಗೆ  ಭಾಗವತದ  ಶುಕ ಮುನಿಗಳು ಕಚ್ಚಿದ  ಭಕ್ತಿಯ ನವರಸಭರಿತ ಹಣ್ಣನ್ನು..ತಲುಪಿಸುವರಾದ್ದರಿಂದ...ಇವರು ಸರ್ವಾಭೀಷ್ಟಫಲಪ್ರದರು

.ತಾರತಮ್ಯೋಪೇತ ಉಪಾಸನೆಯನ್ನು...ಜಗತ್ಸತ್ಯತ್ವವನ್ನು ..ಪಂಚಭೇಧತ್ವವನ್ನು ಶ್ರೀಹರಿಯ ಸರ್ವೋತ್ತಮತ್ವವನ್ನು ಸತ್ಯಜಗತಿದು ಪಂಚಭೇಧವು ನಿತ್ಯ ಶ್ರೀಗೋವಿಂದನ ಕೃತ್ಯವರಿತು ತಾರತಮ್ಯದಿ ಕೃಷ್ಣನಧಿಕೆಂದು ಸಾರಿರೈ... ಎಂದು  ಸಾರುವುದರ ಮೂಲಕ ..ಈಶ-ದಾಸತ್ವದ ಭಾವವನ್ನು..

ದಾಸನ್ನ ಮಾಡಿಕೋ ಎನ್ನಾ....ಸ್ವಾಮಿ ಸಾಸಿರ ನಾಮದ ವೇಂಕಟರಮಣ.... ಎಂಬುದರ ಮೂಲಕ  ಜಗತ್ತಿಗೇಭಕತರು ಭಗವಂತನನ್ನು ಬೇಡುವ ಕ್ರಮವನ್ನು ಅರುಹಿ ಸಾಧನಾ ಸುಫಥಕ್ಕೆ.ಹಚ್ಚಿ...ಸಾಧನೆಗೈಯಿಸುವುದರ ಮೂಲಕ ..ಸಂಸಾರದ  ಜನ್ಮಾಂತರದ ಭವಬಂಧನಗಳನ್ನು ದಾಟಿಸುವ ತಮ್ಮ ಉಪದೇಶಗಂತಿರುವ ಕೃತಿಗಳಿಂದ ಪುಣ್ಯಫಲವನ್ನು ತಂದುಕೊಡವವರಾದ್ದರಿಂದ 

ಸರ್ವಾಭೀಷ್ಟಫಲಪ್ರದರಾಗಿದ್ದಾರೆ.


೨..ಪುರಂದರ ಗುರುಂ ವಂದೇ....

ಸಾಧಕನಿಗೆ ಗುರುಪ್ರಸಾದವು ಅತ್ಯಂತ ಮುಖ್ಯ. ಪರಮಾತ್ಮನ ಸಾಕ್ಷಾತ್ಕಾರಕ್ಕೆ ,ಬಿಂಬಾಪರೋಕ್ಷಕ್ಕೇ  ಗುರುವಿನ ಅನುಗ್ರಹ ಬೇಕೇಬೇಕು.ಮುಕ್ತಿಗೆ ಗುರುಪ್ರಸಾದಕ್ಕಿಂತ ಬಲವಾದ ಮತ್ತೊಂದು ಸಾಧನವಿಲ್ಲಾ

ಗುರುಪ್ರಸಾದೋ ಬಲವಾನ್ ನ ತಸ್ಮಾತ್ ಬಲವತ್ತರ ಸಾಧನಂ..

ಅದಕ್ಕಾಗಿ ....ಪುರಂದರದಾಸರು ...

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ.....ಎಂಬ ಅಧ್ಭುತ ಕೃತಿಯ ಮೂಲಕ ...ಪುರಂದರ ವಿಠಲನ ಸಾರ ಸಾರುವ ಮಹಿಮೆಗಳ ತೋರಬಲ್ಲಾ..ಸಧ್ಗುರುವಿನ ..ಮಹಿಮೆಯನ್ನು ಸಾರುವ ....ಸಕಲ ಸಜ್ಜನ ಸಧ್ಭಕ್ತರಿಗೆ...."ಪುರಂದರ ಗುರುಂ ..ವಂದೇ"..ಎನಿಸಿದ್ದಾರೆ.

* ಗುರುಪುರಂದರದಾಸರೆನೆಗೆ ದಾಸತ್ವ ನೀಡೋ ಕ್ರಮ ಕರುಣದಿಂದಲಿ ವ್ಯಾಸಕಾಶಿಯಲ್ಲಿ ಹರುಷದಿ ಮನಮುಟ್ಟಿ ಪೇಳಿದ್ದೆ ಪೇಳುವೆನು....ಎಂಬ ಕೃತಿಯಲ್ಲಿ ಶ್ರೀವಿಜಯದಾಸರು ..

ಘನವಾದ ತೈತ್ತರೀಯದಲ್ಲಿ ಪೇಳಿದ ಶಾಂತಿ ಮನದಿ ಪೇಳಿಸುತ್ತಾ ತತ್ವಗಳ  ಅನುವಾಗಿ ತಿಳಿಸುತ್ತಾ ಶ್ರೀನಿವಾಸನ ಪಾದನರುಹ ತೋರಬಹುದು ನಂಬಿದವರಿಗೆ...ಪಾದಪೂರೈಸುತ ಮೋದಸಂಸ್ಕೃತವೆಂದು ಸಾರದಲಿ ಪಠಿಸಿ, ಭೂಧರ ವಿಜಯವಿಠಲನ್ನಾ ಪಾದವನೆ ಕಾಂಬುವುದು ಸತ್ಯ ಸತ್ಯ....ಎಂಬುದಾಗಿ ತಿಳಿಸಿದಂತೆ ಸ್ವಪ್ನದ್ವಾರಾ ಶ್ರೀವಿಜಯದಾಸರಿಗೆ ತೈತ್ತರೀಯ ಶಾಂತಿಮಂತ್ರ ಸಮೇತವಾಗಿ ಆಚಾರ್ಯರ  ಸರ್ವಮೂಲಸಾರವನ್ನು ಉಪದೇಶಿಸಿ, ವಿಜಯವಿಠಲ ಅಂಕಿತ ಪ್ರದಾನ ಮಾಡಿ ತಾವು ರಚಿಸಿ ಉಳಿದ ೨೫೦೦೦ ಕೃತಗಳನ್ನು ರಚಿಸಲು ಆಜ್ಞಾಪಿಸಿ ಜಗತ್ತಿಗೇ ವಿಜಯದಾಸರನ್ನು ಕರುಣಿಸಿದ...*ಮಹಾಗುರುಗಳು 

ಶ್ರೀಪುರಂದರದಾಸರು......!! ಇಂಥ ಗುರುಗಳ ತೋರಿದ ಸತ್ಪಥದ ಚಿಂತನೆಯನ್ನು ನಿತ್ಯ ನಿರಂತವಾಗಿ . ಬೆಳೆಸಿ ಉಳಿಸಿ ಕೊಂಡು ಹೋಗುವ ಸೌಭಾಗ್ಯವನ್ನು ನಮಗೆಲ್ಲಾ ಕರುಣಿಸಲಿ ..ಎಂಬ ಯಥಾಮತಿ ಚಿಂತನದೊಂದಿಗೆ ಪತ್ಯಂತರ್ಗತ ಶ್ರೀಪುರಂಜರದಾಸಾಂತರ್ಗತ ಗುರುವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಸುಗುಣವಿಠಲಾರ್ಪಣಮಸ್ತು

**


ಶ್ರೀಸುಗುಣವಿಠಲ.

,ಮಾಲಿಕೆ: 3

🌺🌲🌺🌲🌺🌲🌺🌲🌺🌲


ದಾಸಶ್ರೇಷ್ಠಂ  ದಯಾನಿಧಿಂ.......

ದಾಸಸಾಹಿತ್ಯಕ್ಕೆ ಸೊಗಡು ತುಂಬಿದ ಯತಿಶ್ರೇಷ್ಠರಾಗಲೀ.ದಾಸಶ್ರೇಷ್ಠರಾಗಲೀ ಕಣ್ಣಿಗೆ ಕಾಣಿಸದಿದ್ದರೂ  ಅವರ ಸಂದೇಶಗಳು ಕೃತಿಗಳೂ ನಮ್ಮ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿವೆ.ಹಾಗೂ ನಮ್ಮ ಉದ್ಧಾರಕ್ಕೆ ಪೂರಕವೂ ಆಗಿವೆ.

ದಾಸಸಾಹಿತ್ಯ  ಯಾರೂ ಹುಟ್ಟು ಹಾಕಿದುದಲ್ಲಾ..ಭಗವಂತನ  ಹರಿಸರ್ವೋತ್ತಮತ್ವದೊಂದಿಗೇ..ಹುಟ್ಟಿ ಬಂದಿದ್ದಾಗಿದೆ.ತಾರತಮ್ಯವಿಲ್ಲದಿದ್ದರೇ ಶ್ರೇಷ್ಠತ್ವ&ಸರ್ವೋತ್ತಮತ್ವ ಪ್ರಕಾಶಕ್ಕೆ ಬರುವಂತೆಯೇ ಇಲ್ಲಾ. ಶ್ರೀಲಕ್ಷ್ಮೀದೇವಿ ಆದಿಯಾಗಿ ಶ್ರೀಮದಾಚಾರ್ಯರ ಮೂರು ಅವತಾರಗಳೂ ದಾಸತ್ವದ ಶ್ರೇಷ್ಠತೆಯ ಪ್ರತಿಪಾದಕವೇ ಆಗಿವೆ. ಅದರಲ್ಲೂ ಯತಿಗಳಾಗಿ ವ್ಯಾಸರ ಸೇವೆ ಮಾಡಿ ದಾಸತ್ವದ ಅರ್ಥವನ್ನು ತಿಳಿಸಲೋಸುಗವೋ ಎಂಬಂತೇ.....ಆಚಾರ್ಯ ಮಧ್ವರ ಅವತಾರವೂ ಪೂರಕವಾಗಿದೆ...

ಶ್ರೀಮಧ್ವಃ ಕಲ್ಪವೃಕ್ಷಸ್ತು ಜಯಾರ್ಯಃ ಕಾಮಧುಕ್ ಸ್ಮೃತಃ|

ಚಿಂತಾಮಣಿಸ್ತು ವ್ಯಾಸಾರ್ಯಃ ಮುನಿತ್ರಯ ಮುದಾಹೃತಮ್||

(ಶ್ರೀಮುಷ್ಣಮಹಾತ್ಮೆ)

ಎಂಬುದನ್ನು ಗಮನಿಸಿದಾಗ.ದಾಸಸಾಹಿತ್ಯದ ಮೂಲ ತಿಳಿಯುತ್ತದೆ.

"ದಾಸಸಾಹಿತ್ಯ" ಈ ಪಂಚಾಕ್ಷರಿಯ ಮೊದಲೆರಡು ವರ್ಣಗಳಿಂದ 

ದಾಸ ಶಬ್ದವು ಅಂಕೆಗಳಲ್ಲಿ..

೩೭..ನ್ನು ಸೂಚಿಸುವ ಪದವಾಗಿದೆ.

ತ,ಥ,ದ...(೩)

ಯ,ರ,ಲ,ವ,ಶ ಷ,ಸ,(೭)

ಇದನ್ನು ಸೂಚಿಸುವುದರ ಮೂಲಕ ಶ್ರೀಮದಾಚಾರ್ಯರ ಸರ್ವಮೂಲಮೂವತ್ತೇಳು ಗ್ರಂಥಗಳ ಅಮೃತಸಾರವೇ ಎಂಬುದು ಗಮನಾರ್ಹ!!.

ಇವುಗಳನ್ನು ಲೋಕ ಜನತೆಗೆ ಸಾರಲು ಹೊರಟ ಮಹನೀಯರೇ...

ಪೂತಾತ್ಮಶ್ರೀಪುರಂದರದಾಸರು...ನಮ್ಮ ಕಥಾನಾಯಕರು.!.

ಪ್ರತಿನಿತ್ಯವೂ ದಾಸರದು ಯಾಯವಾರದ  ಜೀವನ ..*ಮಧುಕರ ವೃತ್ತಿ ಎನ್ನದೂ.......ಎಂಬಂತೆ...ಕಡು ಭಕ್ತಿವೈರಾಗ್ಯದ  ಗಣಿಯಾಗಿದ್ದರಿಂದಲೇ ..ಅವರ ಗುರುಗಳಿಂದಲೇ...ಪ್ರಶಂಸಿಸಿಕೊಂಡ ಮಹಾದಾಸಶ್ರೇಷ್ಠರು!!

ನೀತಿಯೆಲ್ಲವನರಿತು ನಿಗಮ ವೇದ್ಯನ ನಿತ್ಯ ವಾತಸುತನಲ್ಲಿಹನ ವರ್ಣಿಸುತಲೀ...

ಗೀತನರ್ತನದಿಂದ ಕೃಷ್ಣನ್ನ ಪೂಜಿಸುವ "ಪೂತಾತ್ಮ"ಪುರಂದರದಾಸರಿವರಯ್ಯಾ.... ಎಂಬ ಶ್ರೀವ್ಯಾಸರಾಜರಿಂದ ಮಾತು ಇವರ ದಾಸಶ್ರೇಷ್ಠತ್ವವನ್ನು ಅರಿಯಬಹುದು.

ದಯಾನಿಧಿಂ.......

ಶ್ರೀಪುರಂದರದಾಸರ ರ ಶಿಷ್ಯಾಗ್ರೇಸರರಾದ ಶ್ರೀವಿಜಯದಾಸರು ಒಂದು ಉದಯರಾಗದಲ್ಲಿ ಇವರ ಸಂಪೂರ್ಣಚರಿತ್ರೆಯನ್ನು ಒಂಬತ್ತು ನುಡಿಗಳಲ್ಲಿ.ಸೆರೆಹಿಡಿದಿದ್ದಾರೆ...

ಬಂದದುರಿತವಿನಾಶನಾ....... ಇದರ ಪ್ರಕಾರ ಶ್ರೀರಮಣನ ಸಭೆಯಲ್ಲಿ ಭಗವಂತ  ಇವರ ಗಾಯನಕ್ಕೆ ಮೆಚ್ಚಿ ವರವಧಿಕ ಬೇಡೆನಲು..‌ಕಲಿ ಹೆಚ್ಚಿದ ಯುಗದಲ್ಲಿ ಸೊಲ್ಲಿಸುವೆ ಕೀರ್ತಿಗಳ ಬಿಚ್ಚಿ ತೋರಿಸುವೆನೆಂದ .. ಇಂಥ ದಯಾಳುಗಳು ಶ್ರೀಪುರಂದರದಾಸರು.ಕಲಿಯುಗದ ದೋಷಕ್ಕೊಳಗಾದ ಸುಜನ ರಕ್ಷಿಸಿ..ಅವರ ಉದ್ಧಾರಕ್ಕಾಗಿ  ಭಗವದಾಜ್ಞೆಯಿಂದ ಅವತರಿಸಿದ 

ನಾರದಮಹಾಮುನಿಗಳು ತಾವು ರಚಿಸಿದ ಭಕ್ತಿಸೂತ್ರಗಳನ್ನು (ನಾರದಭಕ್ತಿಸೂತ್ರ) ಆಚರಣೆಗೆ ತರಲು ಪುರಂದರದಾಸರಾಗಿ  ಜನ್ಮತಳೆದವರು...ಶ್ರೀಪುರಂದರದಾಸರು.!!..

ತಾವು ಒಬ್ಬರೇ ಸಾಧನ ಪಂಥವನ್ನು ಹಿಡಿಯದೇ..ಹೆಂಡತಿ ,ಮಕ್ಕಳು, ತಮ್ಮಂದಿರು,, ತನುಸಂಬಂಧಿಗಳು, ಮನಸಂಬಂಧಿಗಳು, ನೆರೆಹೊರೆಯವರು,,ಅಷ್ಟೇ ಅಲ್ಲದೇ....ಇಡೀ ಮಾನವ ಜನಾಂಗವನ್ನೆ ತಮ್ಮ ಸತ್ಸಾಧನೆಯ ಪಂಥಕ್ಕೇ ಕರೆದೊಯ್ಯವ &ಕೇವಲ ಸ್ಮರಣೆಮಾತ್ರದಿಂದಲೇ ಸಂಸಾರ ಭಯವನ್ನೂ ಸರ್ವಾಭಿಷ್ಠಗಳನ್ನು ದಯಪಾಲಿಸಿ...ತಮ್ಮ ಮಂತ್ರತುಲ್ಯವಾದ ಅಧ್ಭುತ ಕೃತಿಗಳ ಮೂಲಕ  ಮಾರ್ಗದರ್ಶನವನ್ನು ಮಾಡುವುದರ ಮೂಲಕ 

ಶ್ರೀಪುರಂದರಗುರುಂ ವಂದೇ ದಾಸಶ್ರೇಷ್ಠ ದಯಾನಿಧಿಂ....ಎಂಬ ಅನ್ವರ್ಥಕ್ಕೇ ಆದರ್ಶಪ್ರಾಯರಾಗಿ ಅಂದು-ಇಂದು-ಎಂದೆಂದೂ ....ಜನಮನದಲ್ಲಿ ಜ್ಞಾನಭಕ್ತಿ ವೈರಾಗ್ಯ ಮೂರ್ತಿಯಾಗಿ ನಿತ್ಯ ನಿರಂತರವಾಗಿ ಕಂಗೊಳಿಸುತ್ತಿದ್ದಾರೇ..

ಇಂಥವರ ಸ್ಮರಣೆಯೇ ಪಾಪಪರಿಹಾರಿಕವಾಗಿದೆ.

ಹೀಗೇ ಪ್ರಸಿದ್ಧವಾದ ಶ್ರೀಪುರಂದರದಾಸರ ಚರಮಶ್ಲೋಕದ ಅರ್ಥಾನುಸಂಧಾನ&ಚಿಂತನವನ್ನು ಮನಸ್ಸಿಗೆ ತಂದು ಕೊಂಡು ಯಥಾಮತಿ ಅವರ ಕೃತಿಗಳ ವೈಶಿಷ್ಟ್ಯವನ್ನು ತಿಳಿಯುವ ಪ್ರಯತ್ನವನ್ನು ಮಾಡೋಣ....ಎಂಬುದರೊಂದಿಗೆ...ಪತ್ಯಂತರ್ಗತ ಪುರಂದರದಾಸರ್ಯಾಂತರ್ಗತ ಗುರುವಂತರ್ಗತ ಭಾರತೀರಮಣಮುಖ್ಯಪ್ರಾಣಾಂತರ್ಗತಶ್ರೀಸುಗುಣವಿಠಲಾರ್ಪಣಮಸ್ತು.

***

ಪುರಂದರೋಪನಿಷತ್ - 

ಚಿಂತನ....✍........

ಶ್ರೀಸುಗುಣವಿಠಲ

 ಮಾಲಿಕೆ:  4

🌷🌳🌷🌳🌷🌳🌷🌳🌷🌳


ಆಚಾರ್ಯವಾನ್ ಪುರುಷೋವೇದ

ಗುರುಪ್ರಸಾದೋ ಬಲವಾನ್ ನ ತಸ್ಮಾದ್ ಬಲವತ್ತರಂ||{ಭಾಷ್ಯ}

ಸುಪ್ರಸನ್ನರಾಗಿ ಆಚಾರ್ಯರು ದಯಪಾಲಿಸಿದ ವಿದ್ಯೆಯೇ ಫಲದಾಯಕವಾದುದು.ಸಾಧಕನಿಗೆ ಗುರುಪ್ರಸಾದವು ಅತ್ಯಂತ ಮುಖ್ಯವಾಗಿದ್ದೂ ಪರಮಾತ್ಮನ ಸಾಕ್ಷಾತ್ಕಾರಕ್ಕೆ ಬಿಂಬಪರೋಕ್ಷಕ್ಕೆ ಗುರುವಿನ ಅನುಗ್ರಹ ಬೇಕೇಬೇಕು.ಮುಕ್ತಿಗೆ ಗುರುಪ್ರಸಾದಕ್ಕಿಂತ ಬಲವಾದ ಮತ್ತೊಂದು ಸಾಧನವಿಲ್ಲ....

ಈ ದಿಸೆಯಲ್ಲಿ...ಹರಿದಾಸಸಾಹಿತ್ಯದಲ್ಲಿ ಶ್ರೀಪುರಂದರು ಒಂದು ಸಲಗವಿದ್ದಂತೆ!.ಅವರು ಕನ್ನಡ ನಾಡು ವಿಶ್ವಕ್ಕೆ ಕೊಟ್ಟ ಕೊಡುಗೆಯ ಪಾತ್ರ ಅಪಾರವಾಗಿಯು ಅಧ್ಭುತವಾದ ವಿಚಾರಧಾರೆಯ ಸಂಗಮವೇ ಆಗಿದೆ.. ಗುರುವಿನ ವಿಚಾರವನ್ನು ಅವರ ದೃಷ್ಠಿಯಲ್ಲಿ ವಿವೇಚಿಸುವುದಾದರೇ... ಕೇವಲ ವರ್ಣಮಾತ್ರ ಕಲಿಸಿದಾತ ಗುರುವಾಗಿರದೇ.....

ಸಂಸಾರ ಭವಸಾಗರದ ಭವಬಂಧನದಿಂದ ..ಶಾಶ್ವತವಾಗಿ ಉದ್ಧಾರದ ಮುಕುತಿಯ ಸುಪಥಕ್ಕೆ ಹಚ್ಚುವವರೇ ನಿಜವಾದ ಗುರು! ...ಎಂಬ ನೈತಿಕ ಎಚ್ಚರವನ್ನು ಮನೆಮನೆಗೆ ಮುಟ್ಟಿಸುವ  ಅಂದಿನ ಕರ್ನಾಟಕದ ಜನಪದಕ್ಕೆ ..ಇಂದಿನ &ಮುಂದಿನ ಜನಾಂಗಕ್ಕೇ ಜನತಾಶಿಕ್ಷಣ ನೀಡುವ ಗೆಜ್ಜೆಕಟ್ಟಿ ದಿಟ್ಟ ಹೆಜ್ಜೆಯನಿಟ್ಟ ದಾಸಾರ್ಯರು ಶ್ರೀಪುರಂದರರು.! ಈ ದಿಸೆಯಲ್ಲಿ ಒಂದು ಹಂತದಲ್ಲಿ ..ತಮ್ಮ ಗುರುಗಳಾದ ಶ್ರೀವ್ಯಾಸರಾಜರ ಮಡಿವಂತ ಪಂಡಿತ ಶಿಷ್ಯರನ್ನೂ ಎದುರುಹಾಕಿಕೊಳ್ಳಲು ಅಂಜಲಿಲ್ಲಾ.!

*ಪಿಂಡಾಂಡದೊಳಗಿನ ಗಂಡನ ಕಾಣದೇ |ಮುಂಡೆಯರಾದರು ಪಂಡಿತರೆಲ್ಲಾ||..ಎಂದು ಡಾಣಾ ಡಂಗೂರವಾಗಿ ಅವರು ಹೇಳಿದರು.

ಅವರ ಅಧ್ಭುತವಾದ ಸರ್ವಕಾಲಿಕ ಸತ್ಯವಾದ ಸರ್ವ ಜನಜನಿತವಾದ ಗುರುವಿನ ಮಹತ್ವವನ್ನು ಸಾರುವ ಒಂದು ಕೃತಿಯ ಯಥಾಮತಿ ಚಿಂತನದ ಪ್ರಯತ್ನವನ್ನು ಮಾಡೋಣ.

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ||ಪ||

ಶ್ರೀಮಧ್ವಸಂಪ್ರದಾಯದಲ್ಲಿ ಶ್ರೀಹಂಸನಾಮಕ ಭಗವಂತನಾದಶ್ರೀನಾರಾಯಣನೇ ಮೂಲಗುರು!

ನಾರಾಯಣಂ ಸುರಗುರಂ ಜಗದೇಕನಾಥಂ ಭಕ್ತಪ್ರಿಯಂ ಸಕಲ ಲೋಕ ನಮಸ್ಕೃತಂಚ...

ಶ್ರೀಹರಿ ಬ್ರಹ್ಮದೇವರಿಗೆ ತತ್ವೋಪದೇಶಮಾಡಿ ಮೊದಲ ಗುರುವಾದ.ರುದ್ರದೇವರಿಗೆ ಪರಮಗುರುವಾದರು, ಇತರ ದೇವಾದಿದೇವತೆಗಳಿಗೆ ಆದಿಗುರುವಾದರೇ ..ಮಾನುಷೋತ್ತಮರಿಗೆ ಮೂಲಗುರುವಾದನು.ಸಕಲ ಜೀವರಾಶಿಗಳ ಅಂತರ್ಯಾಮಿಯಾಗಿ ಮೂಲೇಶಾತ್ಮಕ ಬಿಂಬ ರೂಪಿ ಪರಮಾತ್ಮನೇ ಸ್ವರೂಪೋದ್ಧಾರಕನಾಗಿರುವ 

ಮೂಲಗುರು!.

ಪರಿಪರಿಶಾಸ್ತ್ರವನೋದಿದರೇನು ವ್ಯರ್ಥವಾಯಿತು ಭಕುತಿ||ಅ.ಪ||

ಆರುಶಾಸ್ತ್ರವನೋದಿದರಿಲ್ಲ ಮುರಾರು ಪುರಾಣವ ಮುಗಿಸಿದರಿಲ್ಲಾ|*

ಸಾರಿಸಜ್ಜನ ಸಂಗವ ಮಾಡದೇ ಧೀರನಾಗಿ ತಾ ಮೆರೆದರೆ ಇಲ್ಲಾ||೧||


ಅನುಪಲ್ಲವಿಯಲ್ಲಿನ ವಿಚಾರವನ್ನು ವಿಸ್ತರಿಸುತ್ತಾ...ಜೊತೆಗೆ ಗುರುವಿನ ಕಿಂಚಿತ್ ಸುಳಿವನ್ನು ಸಂಗಸಹವಾಸದ ಮಹತ್ವದ ಪಾತ್ರವನ್ನು ಅದರೊಂದಿಗೆ ಅಧ್ಯಯನ ಮಾಡಿ ತಿಳಿಯಬೇಕಾದ ಪುಟ್ಟ ಗ್ರಂಥಾಲಯದಂತೆ ಅವುಗಳ ಪಟ್ಟಿಯನ್ನೇ ಆರು&ಮೂರಾರು ಎಂಬ ಪುಟ್ಟ ಪದಗಳಲ್ಲಿ ಸೆರೆಹಿಡಿದು  ಲೋಕಕ್ಕೆ  ಗುರುವಿನ ಮಹತ್ತನ್ನು ತಿಳಿಸುತ್ತಿರುವ ದಾಸಾರ್ಯರ ಕೃತಿ ಕೌಶಲವು ಅಮೋಘ ಅದ್ವಿತೀಯವಾದದ್ದು.

ಆರುಶಾಸ್ತ್ರಗಳು:

ಅಂದರೆ ಷಡ್ಡರ್ಶನಗಳು, ಸಾಂಖ್ಯ, ಯೋಗ, ವೈಶೇಷಿಕ, ಮೀಮಾಂಸೆ,&ವೇದಾಂತ.ಇವುಗಳ ಜೊತೆಗೆ 

ಮೂರಾರು(೩×೬=೧೮) ಪುರಾಣಗಳು

ಬ್ರಾಹ್ಮ, ಪಾದ್ಮ, ವೈಷ್ಣವ, ಶೈವ, ಲಿಂಗ, ಗರುಡ, ನಾರದೀಯ,ಭಾಗವತ,ಆಗ್ನೇಯ, ಸ್ಕಾಂದ, ಭವಿಷ್ಯ, ಬ್ರಹ್ಮವೈವರ್ತ, ಮಾರ್ಕಂಡೇಯ, ವಾಮನ, ವರಾಹ, ಮತ್ಸ್ಯ, ಕೂರ್ಮ, &ಬ್ರಹ್ಮಾಂಡ.

 ಇವಿಷ್ಟನ್ನೂ  ನಾವು 

*ಸಾರಿ ಸಜ್ಜನ ಸಂಗಮಾಡಿ ...ಮೂಲಗುರುವನ್ನರಿತೂ...

ದಾಸಾನೆನಿಸೋ ಎನ್ನಾ....ಶ್ರೀನಿವಾಸಾ  ಕ್ಷಮಿಸೋ...ಎನ್ನಾ.... ಎಂಬ ದಾಸವಾಣಿಯಂತೇ...

ಸಂಗವಾಗಲೀ  ಸಾಧು ಸಂಗವಾಗಲೀ ಸಂಗದಿಂದ ಲಿಂಗದೇಹ ಭಂಗವಾಗಲೀ.... ಎಂಬ  ಭಗವತ್ ತತ್ವವನ್ನರಿತು ಮಹಾತ್ಮ್ಯಾ ಜ್ಞಾನಪೂರ್ವಕವಾಗಿ ಯಥಾಮತಿಯಾಗಿ  

ಈಶ-ದಾಸ ಎಂಬ ಸಧ್ಭಾವನೆಯಿಂದ ಭಗವಂತನ ದಾಸನಾದಾಗ ಮಾತ್ರ  ಈ ಮೇಲಿನ ಎಲ್ಲಾ ಕಾರ್ಯಗಳಿಗೂ ಭಗವಂತ ಪೂರ್ಣಫಲ ನೀಡುತ್ತಾನೆ.ಗುರುವಾಗಿ ಸದಾ ಅನುಗ್ರಹಿಸುತ್ತಾನೆ ..ಎಂಬ ಧನಾತ್ಮಕವಾದ ಚಿಂತನೆಯನ್ನು ಮೈಗೂಡಿಕೊಂಡು ಸಾಧನಾಪರರಾಗಲು  ಅತೀ ಸೂಕ್ಷ್ಮವಾಗಭಗವಂತನ ರಹಸ್ಯ ಅಮೋಘ ತತ್ವವನ್ನು ಈ ಕೃತಿಯ ಒಳನೋಟದಲ್ಲಿ ಶ್ರೀಪುರಂದರದಾಸಾರ್ಯರು ಹುದುಗಿಸಿಟ್ಟಿದ್ದಾರೆ!. ಭಕ್ತಿ ಸೂತ್ರಗಳನ್ನು ಹಾಕಿಕೊಟ್ಟ ನಾರಾದಾಂಶರಲ್ಲವೇ ...!? ಅವನ್ನೇ ತಮ್ಮ ಕೃತಿಗಳಲ್ಲಿ ಹಾಸುಹೊಕ್ಕಾಗಿಸಿ...ನಮಗೆಲ್ಲಾ ಭಗವಂತನಲ್ಲಿ ಮಾಡಬೇಕಾದ ಭಕ್ತಿಯ ಪರಿಯನ್ನು ಪರಿಚಯಿಸಿ...ಪ್ರಕ್ರಿಯೆಗೊಳಿಸಲೋಸುಗ ಭುವಿಯಲ್ಲಿ ಅವತರಿಸಿದ ಪೂತಾತ್ಮಗುರುವರ್ಯರು 

ಶ್ರೀಪುರಂದರದಾಸರು....ಎಂಬ ಯಥಾಮತಿ ಚಿಂತನದೊಂದಿಗೆ..

ಪತ್ಯಂತರ್ಗತ ಶ್ರೀಪುರಂದರದಾಸಾಂತರ್ಗತ ಗುರುಗಳಂತಂರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಸುಗುಣವಿಠಲಾರ್ಪಣಮಸ್ತು.

***


ಪುರಂದರೋಪನಿಷತ್🙏🌹

ಚಿಂತನ....✍..............

ಶ್ರೀಸುಗುಣವಿಠಲ.

ಮಾಲಿಕೆ: 5

🦚🦜🦚🦜🦚🦜🦚🦜🦚🦜🦚🦜🦚🦜


ನಾರಿಯ ಭೋಗ ಅಳಿಸಿದರಿಲ್ಲ| ಶರೀರಕೆ ಸುಖವ ಬಿಡಿಸಿದರಿಲ್ಲ|

ನಾರದ ವರದ ಪುರಂದರವಿಠಲನ

ಮರೆಯದೆ ಮನದೊಳು ಬೆರೆಯುವ ತನಕ||೩||

....................................

 ಸಕಲ ಜೀವರ ಸಾಧನೆಗೆ ಅವರ ದೇಶ ,ಕಾಲ, ಯೋಗ್ಯತೆಯನ್ನನ್ನುಸರಿಸಿ ಜ್ಞಾನವನ್ನು ಭೋಧಿಸುವ ಅಧಿಕಾರ ವರ್ಗವೆಂದರೆ ಅದು "ಶ್ರೀಮನ್ಮಧ್ವಾಚಾರ್ಯರು&ಅವರ ಪರಂಪರೆಯಲ್ಲಿ ಬಂದವರು ಎಂಬುದು ದಾಸಾರ್ಯರ ಶ್ರದ್ಧೆ.ಅವರೇ ತಮ್ಮ ಮತ್ತೊಂದು ಕೃತಿಯಲ್ಲಿ "ಪುರಂದರವಿಠಲನ ಪೂರ್ಣಭಕ್ತರೆಂಬ ಈ ರಘುನಾಥತೀರ್ಥರು ಎಷ್ಟು ಪುಣ್ಯವಂತರು" ...ಎಂದು ಶ್ರೀಮಧ್ವಾಚಾರ್ಯರ ನೇರ ಪರಂಪರೆಯಲ್ಲಿ ಬಂದ ಬಂದ ಶ್ರೀರಘುನಾಥತೀರ್ಥರನ್ನು  ಪುರಂದರವಿಠಲನ ಪೂರ್ಣ ಭಕ್ತರು ಎನ್ನುತ್ತಾರೆ..ಹೀಗೇ ಅವರ ಚಿಂತನಾ ಲಹರಿಯಲ್ಲಿ ವಿಹರಿಸುತ್ತಿದ್ದರೇ..ಅಧ್ಭುತವಾದ ಭಗವತ್ ತತ್ವಗಳು ಗೋಚರಿಸುತ್ತವೆ.

ನ ಹಿ ಪಾಪಾನಿ ಕರ್ಮಾಣಿ ಶುದ್ಧ್ಯಂತ್ಯನಶನಾದಿಭಿಃ|

ಸೀದಂತ್ಯನಶನಾದೇವ ಮಾಂಸಶೋಣಿತ ಲೇಪನಃ||

(ಭಾರತ)

ಕೇವಲ ಭೋಜನವನ್ನು ತ್ಯಜಿಸುವುದರಿಂದಲೇ ಪಾಪಕರ್ಮಗಳು ತೊಲಗಿ ಶುದ್ಧನಾಗುವುದಿಲ್ಲ.ಆಹಾರ ವನ್ನು ತ್ಯಜಿಸುವುದರಿಂದ ರಕ್ತಮಾಂಸಗಳಿಂದ ಕೂಡಿದ ದೇಹ ಕ್ಷೀಣಿಸುವುದಷ್ಟೇ..

ಆದರೇ ಇಲ್ಲಿ ಪ್ರಾಧಾನ್ಯತೆ ಕೊಡಬೇಕಾಗಿರುವುದು ಜ್ಞಾನ ಭಕ್ತಿ ವೈರಾಗ್ಯಯುಕ್ತವಾದ ಭಗವಂತನ ಉಪಾಸನೆಯೆಂಬ ಉಪವಾಸವೇ ಫ್ರಾಧಾನ್ಯ! 

ಜ್ಞಾನೇನೈವ ಪರಂ ಪದಮ್...

ಜ್ಞಾನದಿಂದಲೇ ಮೋಕ್ಷವೆಂಬದನ್ನರಿತು ಆ ದಿಸೆಯಲ್ಲಿ ಮಹಾಭಾರತದ 

ಅಜ್ಞಾತಂ ಕರ್ಮಾಣಿ ಕೃತ್ವಾ......ಎಂಬ ಶ್ಲೋಕದ ಭಾವದಂತೆ ಹೇಳುವುದಾದರೇ ಜ್ಞಾನವಿಲ್ಲದೇ ಮಾಡಿದ ಕರ್ಮದಿಂದ ಆಯಾಸವೇ ಹೊರತು ಮತ್ತೇನೂ ಪ್ರಯೋಜನವಿಲ್ಲಾ.ಭಗವಧ್ಭಕ್ತಿ ಇಲ್ಲದವನ ಅಗ್ನಿಹೋತ್ರಾದಿ ಕರ್ಮಗಳೂ ಪಾಪವನ್ನು ನಾಶಮಾಡುವುದಿಲ್ಲ.

ನಾರದರ ಭಕ್ತಿಗೆ ಸರಿಸಾಟಿಯಿಲ್ಲ.ಅವರ ಭಕ್ತಿ ಸೂತ್ರಗಳ ಹಾದಿಯಂತೆ ನಮ್ಮೆಲ್ಲರ ಮೂಲಗುರು ನಮ್ಮೊಳಗೇ ಇರುವ ಮೂಲೇಶಾತ್ಮಕ ಭಗವಂತನನ್ನು  ಕಾಣುವ ಮಾರ್ಗವನ್ನು ನಾವೆಲ್ಲರೂ ಹನುಮನ ಮನೆಯವರು(ಪ್ರಸನ್ನತೀರ್ಥರ ಕೃತಿಯಂತೆ)..ಆಗಿ ಮಧ್ವಸಿದ್ಧಾಂತದನ್ವಯವಾಗಿ ...ತಾರತಮ್ಯೋಪೇತವಾಗಿ  ಜ್ಞಾನ ಭಕ್ತಿವೈರಾಗ್ಯಾದಿಗಳ ಮೂಲಕ ಭಗವಂತನ ಕಾಣುವ ಪ್ರಯತ್ನ ಮಾಡಬೇಕೂ ..ಇದನ್ನು ಬಿಟ್ಟು ನಾರಿಯ ಭೋಗ, ಶರೀರಕೆ ಸುಖ, ತೊರೆದ ಮಾತ್ರದಿಂದ ಯಾವುದೇ ಪ್ರಯೋಜನ ವಿಲ್ಲಾ..

ಇಲ್ಲಿ ನಾವು ಇನ್ನೊಂದೂ ಅನುಸಂಧಾನವನ್ನು ...ಮಾಡುವುದಾದರೇ ..ಭಗವಂತ ನಮಗೆ ಈ ಇಹ ಲೋಕದಲ್ಲಿ ತಾನಾಗಿಯೇ ನೀಡಿದ ಸಕಲ ಸೌಭಾಗ್ಯ ಸುಖಭೋಗಾದಿಗಳನ್ನು ..ಅವನ ಕಾರುಣ್ಯವನ್ನು ಸ್ಮರಿಸುತ್ತಾ...ಅವನೀಗೇ ಭಗವದರ್ಪಣ ಬುದ್ಧಿಯಿಂದ ಅರ್ಪಿಸಿದಲ್ಲಿ...

ಕೆರೆಯ ನೀರನು ಕೆರೆಗೆ ಚೆಲ್ಲಿ..... ಎಂಬಂತೆ ನಮ್ಮ ಜನ್ಮಸಾರ್ಥಕ್ಯವನ್ನು ಹೊಂದಲು ಸಾಧ್ಯ! 

ನಂದೇನದೋ ಸ್ವಾಮಿ ನಿಂದೇ ಇದೆಲ್ಲವೂ... ಎಂಬ ನಿತ್ಯ ನಿರಂತರ ಅನುಸಂಧಾನ ನಮ್ಮಲ್ಲಿ ಜಾಗ್ರತವಾಗಿರಿಸಿಕೊಂಡೂ..ಭಾಗವತಧರ್ಮಾ(೩೦) ನುಷ್ಟಪರರಾಗಿ  ಭಗವಂತನನ್ನ ಕಾಣುವ ತವಕವು ಒಬ್ಬ ಪ್ರಿಯಕರ ಪ್ರಿಯತಮೆಯನ್ನು ಕಾಣುವತವಕಕಿಂತ ಅತಿ ಹೆಚ್ಚು ಅರ್ಥಾತ್ ತನ್ನನ್ನು ತಾನುಪ್ರೀತಿಸುವುದಕ್ಕಿಂತ ಹೆಚ್ಚಾಗಿಭಗವಂತನನ್ನು ಪ್ರೀತಿಸುವ ಮನೋಭಾವ ನಮ್ಮಲ್ಲಿ ಬೆಳೆಸಿಕೊಳ್ಳಬೇಕೂ..ಇದು ಬರಲು ಹೇಗೇ ಸಾಧ್ಯ! ? ಎಂದಾಗ...ನಮ್ಮ ವಾಸ್ತವ ಸತ್ಯತ್ವವನ್ನು ಅರಿಯಬೇಕು.ಯಾವುದು ಶಾಶ್ವತ ?ಯಾವುದು ಅಶಾಶ್ವತ?

ತಾನಲ್ಲಾ...ತನ್ನದಲ್ಲಾ ಆಸೆ ತರವಲ್ಲಾ..ಮುಂದೆ ಬಾಹೋದಲ್ಲಾ.....ದಾಸನಾಗೋ ವಿಶೇಷನಾಗೋ......ಎಂಬ ದಾಸಾರ್ಯರ ಎಚ್ಚರಿಕೆ ಗಂಟೆಗೆ  ಕಿಗೊಡಬೇಕೂ..ಈ ಸಾಧನ ಶರೀರಕೊಟ್ಟ ಭಗವಂತನ ಅಪಾರ ಕಾರುಣ್ಯ ಸ್ಮರಣೆಗೆ ತಂದುಕೊಳ್ಳಬೇಕೂ..ನಮ್ಮ ಅಸ್ವಾಂತ್ರ್ಯ ಅಸಹಾಯಕತೆ...ಪರಾಧೀನತೆ ಅರಿತೂ ಭಗವಂತನ ಸರ್ವೋತ್ತಮತ್ವ ಕ್ಷಣಕನಂತ ಅಪರಾಧ ಮಾಡುವ ನಮ್ಮಲ್ಲಿ 

ಭಿನ್ನಹಕೆ ಬಾಯಿಲ್ಲವಯ್ಯಾ...ಅನಂತ ಅಫರಾಧ ಎನ್ನಲ್ಲಿ ಇರಲಾಗಿ.....ಎಂಬ ಮನೋಭಾವ ಹೊಂದಿ ..ಜೀವಿಯ ಜೀವನದ ವಾಸ್ತವತೆಯನ್ನ

ಅಲ್ಲಿದೇ ನಮ್ಮನೇ ಇಲ್ಲಿ ಬಂದೆ ಸುಮ್ಮನೆ....

 ಎಂಬಂತೇ..ಅರಿತೂ ಅರಿಷಡ್ವರ್ಗಗಳ ಧಾಳಿಗೆ ಬಲಿಯಾಗದೇ ಶಾಶ್ವತ ಸುಖ ಮೋಕ್ಷದೆಡೆಗೆ ತನುಮನವನ್ನು ಸಿದ್ಧಗೊಳಿಸಿಕೊಂಡು 

ಪ್ರಾಣಪತಿ ಹೃದಯಾಬ್ಜ ಮಂಟಪ ಧ್ಯಾನಗೋಚರನಾಗಿ ಕಣ್ಣಿಗೇ ಕಾಣಿಸುವೇ ಶ್ರೀರಂಗವಿಠಲ...ಎಂಬ ಶ್ರಿಪಾದರಾಜರ ವಾಣಿಯಂತೆ ...ಹರಿವಾಯುಗುರುಗಳ ಪ್ರೇರಣಾನುಸಾರವಾಗಿ ಸತ್ಪಥದಲ್ಲಿ ಸಾಗಿ ....

*ದಾಸ ದಾಸರ ದಾಸಾನುದಾಸರಾಗಿ ...ಭಗವಂತನೆಂಬ ಮೂಲಗುರುವಿಗೆ  ಗುಲಾಮರಾಗುವ ಮೂಲಕ ಆ ಭಗವಂತನ ಪರಂಧಾಮವನ್ನು ಹೊಂದುವ ಸೌಭಾಗ್ಯವನ್ನು ಹೊಂದುವಂತಾಗಲಿ ಎಂಬ   ಯಥಾಮತಿ ಅರ್ಥಾನುಸಂಧಾನ&ಚಿಂತನವನ್ನು ಪುರಂದರದಾಸಾರ್ಯಂತರ್ಗತ ಗುರುಗಳಂತರ್ಗತ  ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಸುಗುಣವಿಠಲಾರ್ಪಣಮಸ್ತು.

***


ಪುರಂದರೋಪನಿಷತ್🙏🌹

ಚಿಂತನ.....✍...........

ಶ್ರೀಸುಗುಣವಿಠಲ

ಮಾಲಿಕೆ:6

🦜🦜🦜🦜🦜🦜🦜


ಆಗಮಗಳ  ಸಾರ ದಾಸರ ಕೃತಿಗಳಲ್ಲಿ....

 ಸಕಲ ಚೇತನಾ ಚೇತನ ಪ್ರಪಂಚವನ್ನು ಮುಖ್ಯವಾಗಿ ವಿಭಾಗಿಸುವುದಾದರೇ ಸರ್ವ ಸ್ವತಂತ್ರ್ಯನಾದ ಭಗವಂತನಾದ  ಶ್ರೀವಿಷ್ಣು &ಅವನ ಆಧಿನದಲ್ಲಿರುವ ಸಕಲ ಚೇತನಾಚೇತನ ಜಗತ್ತು .ತದ್ವಿಷ್ಣೋಃ ಪರಮಂ.......(ಋಗ್ವೇದ ೧-೨೨-೨೦)..

ವಿಭುತ್ವಾತ್..ವಿಷ್ಣುರುಚ್ಯತೇ...(ಕೂರ್ಮಪುರಾಣ..೪೮-೧೧)


ವಿಷ್ಣು-- ವಿ=ವಿಷಷ್ಟ, ಪೂರ್ಣ *ಷ=ಚೇಷ್ಟಕ,

ಣ=ಸುಖ, 

ಉ= ಸ್ವಾಭಾವಿಕ ಸಹಜವಾಗಿಯೇ ಸರ್ವವ್ಯಾಪ್ತ ಸರ್ವಪ್ರೇರಕ, ಸುಖಾದಿ ಸಕಲಗುಣಪರಿಪೂರ್ಣ.ಅರ್ಥಾತ್...

ಜಗತ್ತಿನೆಲ್ಲೆಡೆ ಪ್ರವೇಶಿಸಿ, ಅಣುರೇಣುತೃಣಕಾಷ್ಟ ಪರಿಪೂರ್ಣನಾಗಿ ಸರ್ವತ್ರವ್ಯಾಪ್ತನಾದವನು 

ವಿಷ್ಣು

ಸನಾತನಾದ ಪರಮಾತ್ಮನುಸರ್ವವೇದಗಳಿಂದ ಸ್ತುತಿಸಲ್ಪಟ್ಟಿದ್ದಾನೆ.ಸರ್ವೋತ್ತಮನಾದ ವಿಷ್ಣು ಸರ್ವರಿಗೂ ಪರಮ ಆಶ್ರಯನಾಗಿದ್ದಾನೆ .ಎಂಬುದುಶಾಸ್ತ್ರಗಳ &ಸರ್ವಜ್ಞಾನಿಗಳ ಮಾತು!.

ಇದೇ ಸಾರವನ್ನು ಜಗತ್ತಿಗೇ ತಮ್ಮ ಹಲವಾರು ಕೃತಿಗಳ ಮೂಲಕ ಸಾಮಾನ್ಯರ ಜನಮನಕ್ಕೂ ತಲುಪುವ ರೀತಿಯಲ್ಲಿ ಮನೆಮನೆಯಲ್ಲೂ ಮನಮನದಲ್ಲೂ ಉತ್ತಿ ಬಿತ್ತಿ ಬೆಳೆಸಿದವರು ಪುರಂದರದಾಸರು.!.ಅಂದು-ಇಂದು-ಎಂದೆಂದಿಗೂ ಸರ್ವಕಾಲಿಗ ಜಗತ್ ಸತ್ಯವನ್ನು ವೇದೋಪನಿಷತ್ಗಳ ಸಾರವನ್ನು  ತಮ್ಮ ಕೃತಿಗಳಲ್ಲಿ ಸೆರೆಹಿಡಿದು  ಸಮಸ್ತ ಮಾನವ ಸಮಾಜಕ್ಕೆ ಹಂಚಿದ 

ಪೂತಾತ್ಮರು ನಮ್ಮ ಪುರಂದರದಾಸರು!!.

ಅವುಗಳ ವೈಶಿಷ್ಟ್ಯದ ಸವಿಯನ್ನು ಸವಿಯುವ ಪ್ರಯತ್ನವನ್ನು ಯಥಾಮತಿಯಾಗಿ  ನಾವು ಮಾಡುವುದಾದರೇ....

ವಿದಿತ ದೈವಗಳೆಲ್ಲಾ ವಿಷ್ಣುವಿನ ಹಿಂದೆ....

ಎಂಬ ಕೃತಿಯಲ್ಲಿ ..ವಿಷ್ಣುವಿನ ಸರ್ವೋತ್ತಮತ್ವವನ್ನು, ಶ್ರೇಷ್ಠವಾಗಿ ದಿಟ್ಟತನದಿಂದ ಗಟ್ಟಿಯಾಗಿ...ಪ್ರತಿಜ್ಞಾರೂಪದಲ್ಲಿ ಪ್ರತಿಪಾದನೆ ಮಾಡಿದ್ದಾರೆ.

*ಹಾವಿನಹೆಡೆಯನ್ನಾದರೂ ಹಿಡಿದು ಹೇಳಬಯಸುವಲ್ಲಿ ದಾಸರ ಹರಿಸರ್ವೋತ್ತಮತ್ವದ ಜ್ಞಾನದಲ್ಲಿನ ಧೃಢತೆ  ಕಣ್ಣೆದುರು ಸ್ಪುಟವಾಗಿ ನಿಲ್ಲುತ್ತದೆ.


ಇದಕೆ ತಪ್ಪಿದರೇ ನಾ ಫಣಿಫಣವ ಪಿಡಿವೆ....ಎಂಬಮಾತು.. ಅದೇ ಕಾಲದ ಶ್ರೀವಾದಿರಾಜ ಗುರುಸಾರ್ವಭೌಮರಂತ ಜ್ಞಾನಿವರೇಣ್ಯರ *ಯುಕ್ತಿಮಲ್ಲಿಕಾ, ಶೃತಿತತ್ವಪ್ರಕಾಶಾದಿ ಶಾಸ್ತ್ರ ಗ್ರಂಥಾದಿಗಳಲ್ಲಿ ಇದೇ ವಿಚಾರವಾಗಿ ಪೂರಕ ವಿಮರ್ಶೆ ಮಾಡಿ ಪ್ರತಿಪಾದಿಸಿರುವುದನ್ನು ಕಾಣುತ್ತೇವೆ.

ಸರ್ವದೇವತೆಗಳಲ್ಲಿ ವಿಷ್ಣು, ತೀರ್ಥಗಳಲ್ಲಿ ಸಾಲಿಗ್ರಾಮ, ವೃಕ್ಷಾದಿಗಳಲ್ಲಿ ತುಳಸಿ, ದ್ರವ್ಯಗಳಲ್ಲಿ ವಿದ್ಯೆ, ಮತಗಳಲ್ಲಿ ಮಧ್ವಮತ , ಶ್ರೇಷ್ಠವೆಂದು ಘಂಟಾಘೋಷವಾಗಿ ಸಾರಿದ್ದಾರೆ ದಾಸಾರ್ಯರು.!.

ದೇವ ಬಂದಾ ನಮ್ಮ ಸ್ವಾಮಿ ಬಂದಾನೋ ದೇವರ ದೇವ ಶಿಖಾಮಣಿ ಬಂದಾನೋ.....ಎಂಬುದಾಗಿ,

ಅಂದೇ ನಿರ್ಣಯಿಸಿದರು ಕಾಣೋ..ಇಂದಿರಾಪತಿ ಪರದೈವವೆಂದು....*ಎಂಬ  ದೇವರನಾಮದಲ್ಲಿ ಭಾಗವತದ ಎರಡನೇ ಸ್ಕಂದದ ೫ನೇ ಅಧ್ಯಾಯದಲ್ಲಿ  ಬ್ರಹ್ಮದೇವರು ನಾರದರಿಗೆ  ಹರಿಸರ್ವೋತ್ತಮತೆಯನ್ನು ಉಪದೇಶಿಸಿದ ಬಗ್ಗೆ ಉಲ್ಲೇಖಿಸಿದ್ದಾರೆ..ಇಲ್ಲಿ ನಾರದರು ಬ್ರಹ್ಮದೇವರನ್ನೇ ಸಕಲ ಸೃಷ್ಠಿಕರ್ತರೆಂದು ಭಾಸವಾಗು ವಂತೆ ಪ್ರಶ್ನಿಸಿದಾಗ..ಅವರ ಮುಗ್ಧ ಪ್ರಶ್ನೆಗೆ ..ಉತ್ತರವನ್ನು ಕೊಡುತ್ತಾ..ಸಮಸ್ತ ಸೃಷ್ಠಿ ಸ್ಥಿತಿ ಲಯಾದಿಗಳೆಲ್ಲವೂ  ಶ್ರೀಹರಿಯಿಂದಲೇ  ನಡೆಯುತ್ತಿದ್ದೂ ಅವನೇ ಸರ್ವೋತ್ತಮನೆಂದು ನಿರೂಪಿಸಿರುವುದನ್ನೇ  ಈ ಕೃತಿಯಲ್ಲಿ ನಿರೂಪಿಸಿದ್ದಾರೆ..ದಾಸಾರ್ಯರು.!.

ಬ್ರಹ್ಮದೇವರ ಮಾತನ್ನು ನೋಡುವುದಾದರೇ...

ನಮಸ್ತಸ್ಮೈ..ಭಗವತೇವಾಸುದೇವಾಯ.....೫-೧೨.

ವಾಸುದೇವಾತ್ ಪರೋ ಬ್ರಹ್ಮನ್ ......೧೧-೧೪-೧೫

ಹೀಗೇ ದಾಸರ ಹಾರ್ದ ಅರ್ಥವಾಗಬೇಕಾದರೇ ಭಾಗವತಾದಿ ವೇದೋಪನಿಷತ್ಗಳ ಮೂಲಗ್ರಂಥಗಳ  ಪರಿಜ್ಞಾನ ಅವಶ್ಯ. ಕೇವಲ ಕನ್ನಡ ಭಾಷಾ ಜ್ಞಾನ ಸಾಲದು‌‌!.

ಕೂಸಿನ ಕಂಡೀರಾ ಜ್ಞಾನಿಗಳೆಲ್ಲಾ..ಕೂಸಿನ ಕಂಡೀರಾ... ಎಂಬ ಕೃತಿಯಲ್ಲಿ..ಭಗವಂತನ ಸಾನ್ನಿಧ್ಯ, ತೇಜಸ್ತ್ವ, ಸರ್ವಜ್ಞತ್ವ, ವ್ಯಾಪಕತ್ವ, ಸಮಸ್ತವಿಚಾರಗಳನ್ನು ಅರುಹುವ ಅಧ್ಭುತವಾದ ಕೃತಿಯಾಗಿದೆ.

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲೆಲ್ಲಿ ನೋಡಿದರಲ್ಲೇ ಶ್ರೀರಾಮ.... .ಎಂಬ ಕೃತಿಯಲ್ಲಿ.. ಖರದೂಷಣಾದಿಗಳನ್ನು ಸಂಹರಿಸಲು ಶ್ರೀರಾಮದೇವರು ಅವರಿಗೆ ಒಬ್ಬೊಬ್ಬರಿಗೂ ಒಬ್ಬೊಬ್ಬ ರಾಮನಾಗಿ ತೋರಿದ ಮಹಿಮೆ ...ನಿರೂಪಿಸುವುದರ ಮೂಲಕ....

ಸ ಏವ ಸರ್ವತ್ರ ಚ ದೃಶ್ಯಮಾನೋ ವಿದಿಕ್ಷು ದಿಕ್ಷು ಪ್ರಜಹಾರ ಸರ್ವಶಃ(೮--೧೮೩)..ಹೀಗೆ ದಾಸರು ಮೂಲಗ್ರಂಥಗಳನ್ನು ಯಥಾವತ್ತಾಗಿ ಅನುವಾದ ಮಾಡಿ ಅದರ ಸವಿಯನ್ನು ನಮಗೆಲ್ಲಾ ಉಣಬಡಿಸಿದ್ದಾರೆ.!.

ನರಸಿಂಹ ಮಂತ್ರವೊಂದಿರಲು ಸಾಕೂ ದುರಿತಕೋಟಿಯ ತರಿದು ಭಾಗ್ಯವನೆ ಕೊಡುವ......

ಎಂಬ ಕೃತಿಯ ಮೂಲಕ 

ನೃಸಿಂಹಾದಿಕಮನ್ಯಚ್ಚ ದುರಿತಾದಿ  ನಿವೃತ್ತಯೇ.....ಎಂಬ 

ಬ್ರಹ್ಮಸೂತ್ರದ ಭಾವವನ್ನು   ಅರುಹಿದ್ದಾರೆ.

ಇಂಥ ಅನೇಕ ಪ್ರಮೇಯ ಮೂಲಗ್ರಂಥಗಳ ಭಾವವನ್ನು ಸಾರವನ್ನು ಸರಳ ಸವಿಗನ್ನಡದ ಕೃತಿಗಳಲ್ಲಿ ಸಾಮಾನ್ಯರಿಗೂ ಅರಿಯುವಂತೆ  ಲಕ್ಷಾದಿ ಕೃತಿಗಳ ಮೂಲಕ ಎಂದೆಂದಿಗು ಜನಮನದಲ್ಲಿ ಶಾಶ್ವತನೆಲೆಯಾಗಿ ನಿಂತ ಪುರಂದರದಾಸರ ಅನುಗ್ರಹನ್ನು ಸದಾ ಪ್ರಾರ್ಥಿಸುವುದರ ಮೂಲಕ   ಭಗವತ್ ತತ್ವವನ್ನು ತಿಳಿಯುವ ಪ್ರಯತ್ನದ ನಾವೆಲ್ಲಾ ಸಾಗುವಂತಾಗಲೀ ಎಂಬ ಯಥಾಮತಿ ಚಿಂತನ ದೊಂದಿಗೆ ಶ್ರೀ ಪುರಂದರದಾಸಾಂತರ್ಗತ ಗುರುವಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀಸುಗುಣವಿಠಲಾರ್ಪಣಮಸ್ತು.

***


No comments:

Post a Comment