Monday 1 July 2019

anantacharya balacharya katageri ಅನಂತಾಚಾರ್ಯ ಬಾಳಾಚಾರ್ಯ ಕಟಗೇರಿ ದಾಸರು





Song on uttaradi matha parampara




ಶ್ರೀ ಕಟಗೇರಿ ದಾಸರ ಸಿರಿ ಕಂಠದಿಂದ ಹೊರಹೊಮ್ಮಿದ ಹಾಡುಗಳು ಕೇಳಲು ಕರ್ಣಾನಂದವಾಗುತ್ತದೆ
Gurugale parama hitakaru nodu...smarisu gurugala. Katageri Dasarige namo namah. listen herebelow



FB 28 oct 2018 ಹರಿದಾಸ ಕೀರ್ತನಾ ಶಿರೋಮಣಿ.. ಸಂಗೀತ ಆಚಾರ್ಯ ಮಾನ್ಯ ಶ್ರೀ ಅನಂತಾಚಾರ್ಯ ಬಾಳಾಚಾರ್ಯ ಕಟಗೇರಿ ದಾಸರು..
ದಾಸ ಸಾಹಿತ್ಯ ಹಾಗೂ ಗಮಕ ಹಗಲು ರಾತ್ರಿ ಎನ್ನದೇ ಹಾಡುವಷ್ಟು ಸಾಮರ್ಥ್ಯ! ದಾಸರ ಪದ ಹಾಡುವುದು ಮಾತ್ರವಲ್ಲ ಅದರ ಅರ್ಥ, ಸಂದರ್ಭ, ಔಚಿತ್ಯ ಮತ್ತು ಪೌರಾಣಿಕ, ಪಾರಮಾರ್ಥಿಕ ಹಿನ್ನೆಲೆ, ಕತೆ-ಉಪಕತೆ ಸಹ ವಿವರಿಸಬಲ್ಲ ಆಳ ಜ್ಞಾನ..
ಸೈಕಲ್ ಏರಿ, ಮನೆ ಮನೆಗೆ ಹೋಗಿ ದಾಸರ ಪದ ಮಕ್ಕಳಿಗೆ ಕಲಿಸುತ್ತ, ನೀಡಿದಷ್ಟು ಪಡೆಯುತ್ತ ಬಂದ ಮಹಾನುಭಾವರು ಕಟಗೇರಿ ದಾಸರು..
೮೯ ವರ್ಷದ ಜ್ಞಾನವೃದ್ಧ ಮತ್ತು ವಯೋವೃದ್ಧ ದಾಸರು ಸುಮಾರು ೧೯ ಪ್ರಕಾರಗಳ ದಾಸ ಸಾಹಿತ್ಯದ, ೪ ಸಾವಿರಕ್ಕೂ ಮಿಕ್ಕಿದ ದಾಸರ ಪದಗಳ 💕 ಈಭಂಡಾರ!
ವಯೋ ಸಹಜ ಮರೆವು ಅವರಿಗಾಗಿದ್ದರೆ, ನಮ್ಮ ಸಮಾಜ ಮರೆವಿನಲ್ಲೇ ಅಮೃತತ್ವವಿದೆ ಎಂದು ನಂಬಿರುವಂಥದ್ದು! ಹಾಗಾಗಿ, ದಾಸರು ಆಳುವ ಸರ್ಕಾರಗಳಿಗೆ ಸಾಂಸ್ಕೃತಿಕ ರಾಯಭಾರಿ, ನಮ್ಮ ನಾಡನ್ನು ಶ್ರೀಮಂತಗೊಳಿಸಿದ ಮಹಾನುಭಾವ ಎನಿಸಿಲ್ಲ.
ಸಾವಿರಾರು ಜನ ಸಂಗೀತಾಸಕ್ತರಿಗೆ ತಮ್ಮ ಜ್ಞಾನ ಪರಂಪರೆಯನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಧಾರೆ ಎರೆದವರು. ತೊಲಗಾಚೆ ಕೀರ್ತಿ ಶನಿ ಎಂಬಂತೆ ನಿರ್ಲಿಪ್ತ ಜೀವನ.. ತುಂಬು ಬಡತನದಲ್ಲೇ ದಾಸರು ಇಂದಿಗೂ ಧಾರವಾಡದ ಮಾಳಮಡ್ಡಿಯ ಕಟಗೇರಿ ಕಂಪೌಂಡ್ ನಲ್ಲಿ ತಮ್ಮ ಧರ್ಮ ಪತ್ನಿಯೊಂದಿಗೆ ಕಳೆಯುತ್ತಿದ್ದಾರೆ. ವೃದ್ಧಾಪ್ಯದ ಪಿಂಚಣಿಯೊಂದೇ ಮಾನ್ಯರಿಗೆ ಜೀವನಾಧಾರ!
ಇನಿತೂ ಜೀವನ ಪ್ರೀತಿ ಕುಂದಿಲ್ಲ. ಕಂಠ ಇಂದಿಗೂ ಕಂಚಿನ ಕಂಠ. ಸ್ವರಗಳ ಮೇಲಿನ ಹಿಡಿತ ಅತ್ಯಂತ ಕರಾರುವಾಕ್! ಸದಾ ನಗುಮೊಗ. ಮನೆ ತುಂಬ ಸನ್ಮಾನ, ಬಿನ್ನವತ್ತಳೆ, ಪುರಸ್ಕಾರಗಳು..
ಕಟಗೇರಿ ದಾಸರ ಜ್ಞಾನಪರಂಪರೆ ದಾಖಲಿಸುವ, ಸಾಹಿತ್ಯದ ಸಮಗ್ರ ಸಂಪುಟ ಸಂಪಾದಿಸುವ, ಅವರ ವ್ಯಕ್ತಿತ್ವ- ಕೃತಿತ್ವ ದಾಖಲಿಸುವ ಜವಾಬ್ದಾರಿ ಯಾರದ್ದು?
ಮತ್ತೆ ಕನ್ನಡ ರಾಜ್ಯೋತ್ಸವದ ಹೊಸ್ತಿಲ್ಲಿದ್ದೇವೆ. ಮಾನ್ಯೆ ಜಯಮಾಲಾ ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದಾರೆ. ದಾಸರ ಪರವಾಗಿ ಅವರ ಅಭಿಮಾನಿಗಳು ಅರ್ಜಿಯೂ ಸಲ್ಲಿಸಿದ್ದಾರೆ..
ಯೋಗ್ಯತೆಗೆ, ಅರ್ಹತೆಗೆ ಮಣೆ ಹಾಕಬಹುದು ನಮ್ಮ ರಾಜ್ಯ ಸರ್ಕಾರ ಎಂಬ ವಿವೇಕದಿಂದ ಇಲ್ಲಿ ದಾಸರ ಬಗ್ಗೆ ದಾಖಲಿಸುತ್ತಿದ್ದೇನೆ. ಕನಿಷ್ಟ ಈ ಬಾರಿ ಪುರಸ್ಕಾರ ಧಾರವಾಡದ ಈ ಮಹಾನುಭಾವರಿಗೆ ಸಲ್ಲಬಹುದು ಎಂಬ ಅಪೇಕ್ಷೆಯಿಂದ, ಸಾವಿರಾರು ಜನ ಶಿಷ್ಯರ ಪರವಾಗಿ ಇಲ್ಲಿ ಕೋರಿಕೆ ಮಂಡಿಸಿದೆ.
ಅಧಿಕಾರಸ್ಥ ಮಹನೀಯರು ಪರಾಂಬರಿಸಲಿ.. ಪ್ರಜಾಪ್ರಭುತ್ವ!
ದಾಸರ ಸಂಪರ್ಕ: 90361 71582
- ಹರ್ಷವರ್ಧನ ಶೀಲವಂತರ ಫೇಸ್ಬುಕ್ ಬರಹ
********

No comments:

Post a Comment