Monday 1 July 2019

harapanahalli bheemavva 1903 pushya shukla trayodashi ಹರಪನಹಳ್ಳಿ ಭೀಮವ್ವ


Harapanahalli Bheemavva

Ankita: bhImEsha krishNa
niryANa: 1902

Bhimavva was born in the village Narayanadevrakere of Hospet taluk in Bellary district in the year 1822 A.D. She lived in early part of 19th century. A childhood prodigy, her description of the Divine is graphic. Her voluminous work is published by Mysore University. After Helevanakatte Giriamma, she is the next well known haridasini. Mere chanting of bhImEsha krishNa gives inspiration.

from- https://satyavijayi.com/ Harapanahalli

Bheemavva, a staunch devotee of Sri Krishna, belonging to the Yajurveda branch of the Madhava sect. She was an important figure of the Haridasa movement of the Kannada country in the 19th century. Her devotional songs, couched in simple words, in the praise of Krishna carry a certain import of mystic devotion. No man with spiritual ambitions in life can fail to appreciate the force and appeal of these litanies. Bheemavva came from a very small town at Harapanahalli, which now belongs to Bellary District, Karnataka, India. She was born in the year 1823 to Brahmin parents Sri. Raghunath Acharya and Rangamma who belonged to the Sri. Raghavendra Swamy Matha Sampradaya.
From her childhood, she was very religious; songs or group singing (Bhajans) were very common during that time, therefore it is likely that early exposure to group singing would have encouraged her to compose devotional literature later in her life. Many legends relate to her childhood, like a serpent visiting her cradle, a scorpion hiding in her head ornament, which she herself pointed out to her shocked guardians, and her kidnapping by a soldier. The latter became blind suddenly and restored the child back to her parents after which he regained his sight
She was married at a very young age of 11 to Sri. Muniyappa and later was renamed as “Krishna Bai” post her marriage. She was just 36 when her husband died. After the demise of her husband her creativity came to fore where she composed numerous devotional songs (about 150). It is said that with the blessings of Deva Rishi Sri Narada, she started composing bhakti songs. These songs are sung even today with religious fervor by people across Karnataka.
Bheemavva produced a great range of songs including arati songs, welfare songs, chore-songs, marriage songs, and songs pretty much suited to all occasions. Her songs occasion vignettes of social life of the period under question. Songs pertaining to नैवेद्य /Ritual offeringmention good number of prevalent sweets and savories. While describing bridal attire of deities, her litanies enlist contemporary ornaments worn from head to toe, which brings to mind a well-dressed female of Mysore school tradition of Painting.
She chose “Bheemesha Krishna” as logo for all songs testifying her devotion to both the deities, Shiva and Krishna. The employment of the popular theme of robe stealing by boy Krishna (gopikavastrapaharana) in her songs gives her occasion to do justice to the colorful saris of her times. More than 70 different types of saris with equally multifarious designs have been spoken of. Bheemavva also mentions places like Uppadi, Silari, Ladlapur, Konrad which were famous sari weaving centers. Almost all others have disappeared today with exception of those of Banaras, Chanderi and Paithani.
She has shown ingenuity in recreating characters like Draupadi, Satyabhama etc., written in simple spoken North-Karnataka Kannada, she had adopted meters, which could help her songs, small and big, render musically and with ease.
Some of the songs include:
  • Rathi Kalyana,
  • Subhadra Kalyana
  • Muyyada Song,
  • Sudhama Charithre
  • Nala Charithre,
  • Stuthimane Malike, etc.
She has composed songs on Sri Krishna, Sri Venkateshwara, Ganesh, Eshwar, Laxmi Devi, Anjaneya, Vadiraja, Raghavendraswami, etc.
Bhemavva breathed her last in the year 1902.
A book entitled “Harapanhalli Bheemavva Haduglu” in Kannada was published by the University of Mysore in the year 1984. The manuscripts were handed over to University of Mysore in 1971 by Sri Kadakol Vijaya Rao and Smt. Kadakol Radha Bai  who were the parents of Dr. Giridhar Kadakol. 

**********


Harpanahalli Bhimavva1822-1903BhimavvaBhimesha Krishna (swapnalabda)Sri Naradaru (swapna)HarapanahalliPushya Shudda Triyodashi
ಬಾಲ್ಯದಲ್ಲಿ ಓದು ಬರಹ ತಿಳಿಯದ ಹೆಣ್ಣು ಮಗು ವೊಂದು ಭಗವಂತನ ಅನುಗ್ರಹದಿಂದ ಅನೇಕ ಪದಗಳನ್ನು ರಚನೆಯನ್ನು ಮಾಡಿ ಸ್ವಪ್ನದಲ್ಲಿ ನಾರದರಿಂದ ಭೀಮೇಶಕೃಷ್ಣ ಎಂದು ಅಂಕಿತ ತೆಗೆದುಕೊಂಡು ಅನೇಕ ಕೃತಿಗಳನ್ನು ರಚನೆಯನ್ನು ಮಾಡಿದ ನಮ್ಮ ಎಲ್ಲಾರ ಅವ್ವನವರಾದ ಹರಪನಹಳ್ಳಿ ಭೀಮವ್ವನವರ ಆರಾಧನಾ ಇಂದು18 Jan 2019.
ಭೀಮೇಶಕೃಷ್ಣ’ ಅಂಕಿತದಲ್ಲಿ ಅನೇಕ ಹರಿದಾಸಕೃತಿಗಳನ್ನು ರಚಿಸಿ ಕನ್ನಡನಾಡಿನ ಹೆಸರಾಂತ ಹರಿದಾಸಿಯರ ಸಾಲಿಗೆ ಸೇರಿದ ಹರಪನಹಳ್ಳಿ ಭೀಮವ್ವನವರ ಹೆಸರನ್ನು ಕೇಳದ ಕೀರ್ತನೆಕಾರರಾಗಲಿ, ಹರಿಭಕ್ತರಾಗಲಿ ಇಲ್ಲ. ಅವರಂತೆಯೇ ಹರಿ-ಗುರುಗಳಲ್ಲಿ ಅಪಾರ ಭಕುತಿಯನ್ನು ಹೊಂದಿದ್ದ ಅವರ ವಂಶದವರೇ ಆದ ಮತ್ತೊಬ್ಬ ಹರಿದಾಸಶಿರೋಮಣಿ ಶ್ರೀಮತಿ ರುಕ್ಮಿಣೀಬಾಯಿ.
ಆಪ್ತವಲಯದಲ್ಲಿ ರೊಟ್ಟಿರುಕ್ಮಿಣಿಬಾಯಿಯೆಂದೇ ಪ್ರಥಿತರಾಗಿದ್ದ ರಕುಮಾಬಾಯಿಯವರು ಜನಿಸಿದ್ದು ಕ್ರಿ.ಶ. 1938ರಲ್ಲಿ. ಹೊಸಪೇಟೆ ತಾಲ್ಲೂಕಿನ ಮತ್ತಿಹಳ್ಳಿ ರಾಘವೇಂದ್ರರಾಯರ ಕುವರಿಯಾಗಿ ಜನಿಸಿದ ಈಕೆ 1976ರಿಂದಲೇ ಹರಿ-ಗುರು ಪರವಾದ ಕೀರ್ತನೆಗಳನ್ನು ರಚಿಸಲಾರಂಭಿಸಿದ್ದರು. ಆದರೆ ಹರಿ-ಗುರುಪ್ರೇರಣೆಗಾಗಿ ಕಾಯುತ್ತಿದ್ದ ಈಕೆಗೆ ಒಂದು ಶುಭದಿವಸದಂದು ಸ್ವಪ್ನದಲ್ಲಿ ಶ್ರೀಗುರುಗೋವಿಂದವಿಟ್ಠಲದಾಸರು ಕಾಣಿಸಿಕೊಂಡು ‘ರುಕ್ಮಿಣೀಕೃಷ್ಣ’ ಎಂಬ ಅಂಕಿತವನ್ನಿತ್ತು ದಯಪಾಲಿಸಿ ಹರಸಿದ ತರುವಾಯ 250ಕ್ಕೂ ಮಿಗಿಲಾದ ಕಥನಗೀತೆ, ಕೀರ್ತನೆ, ಲಾಲಿಹಾಡುಗಳನ್ನು ರಚಿಸಿದ್ದಾರೆ. ಅನೇಕ ದೇವತೆಗಳನ್ನು, ಯತಿವರ್ಯರನ್ನು, ವಿವಿಧ ಕ್ಷೇತ್ರಮೂರ್ತಿಗಳನ್ನು ತಮ್ಮ ಕೃತಿಗಳಲ್ಲಿ ಸ್ತುತಿಸಿದ್ದಾರೆ. ಇವುಗಳಲ್ಲದೆ 46 ನುಡಿಗಳಲ್ಲಿ ಸಮಗ್ರ ಅಣುಮಧ್ವವಿಜಯವನ್ನು ಹೆಣೆದಿದ್ದಾರೆ. ತಮ್ಮ ಸಮಗ್ರ ಕೃತಿಗಳ ಶೀರ್ಷಿಕೆಗಳನ್ನೊಳಗೊಂಡಂತೆ ಒಂದೇ ಕೃತಿಯನ್ನು ರಚಿಸಿದ ರುಕ್ಮಿಣಿಬಾಯಿ ದಾಸಸಾಹಿತ್ಯದಲ್ಲಿ ಹೊಸ ಪ್ರಯೋಗವನ್ನು ಸಾದರಪಡಿಸಿದ್ದಾರೆ.
‘ರುಕ್ಮಿಣೀಕೃಷ್ಣಾಂ’ಕಿತರು ತಮ್ಮ ಹಾಡುಗಳಲ್ಲಿ ವಿಷ್ಣುತೀರ್ಥರ ಭಾಗವತಸಾರೋದ್ಧಾರ, ಭಾಗವತದ ಗಜೇಂದ್ರಮೋಕ್ಷ, ಪ್ರಹ್ಲಾದಚರಿತ್ರೆ, ವೇಂಕಟೇಶ ಕಲ್ಯಾಣಾದಿಗಳನ್ನು ಬಿತ್ತರಿಸುವುದರೊಂದಿಗೆ ಶುಕ್ರವಾರದ ಹಾಡು, ಶನಿವಾರದ ಹಾಡುಗಳನ್ನೂ ಸರಳ ಭಾಷೆಯಲ್ಲಿ ರಚಿಸಿದ್ದು ಓದುಗರಿಗೆ ಮೋದದಾಯಕವೂ, ಸುಲಭವೂ ಆಗಿದೆ. ರಕುಮಾಬಾಯಿಯವರು ಕೃಷ್ಣಮೂರ್ತಿಯವರನ್ನು ವರಿಸಿ ಬ್ಯಾಂಕಿನ ಉದ್ಯೋಗದಲ್ಲಿದ್ದು ಲೋಕಜ್ಞಾನದೊಂದಿಗೆ ದಾಸಸಾಹಿತ್ಯದಲ್ಲೂ ಅಪಾರ ಪ್ರೌಢಿಮೆಯನ್ನು ಗಳಿಸಿದ್ದರು. ಇವರು ತಮ್ಮ ಹೆಮ್ಮೆಯ ಮನೆತನದವರೂ ಪೂರ್ವಜೆಯೂ ಆಗಿದ್ದ ಹರಪನಹಳ್ಳಿ ಭೀಮವ್ವನವರ ಕುರಿತಾದ ಸುದೀರ್ಘ ಕೀರ್ತನೆಯೊಂದನ್ನು ರಚಿಸಿದ್ದಾರೆ. ಇವರು ಸಂಗೀತದಲ್ಲಿ ಅಪಾರ ವೈದಗ್ಧ್ಯನ್ನು ಹೊಂದಿರದಿದ್ದರೂ ದೈವೀಪ್ರೇರಣೆಯಿಂದ ಅನೇಕ ತೀರ್ಥಕ್ಷೇತ್ರಗಳನ್ನು, ಆರಾಧನಾ-ಮಹೋತ್ಸವಗಳನ್ನು, ವಿವಿಧ ರಾಗಗಳಲ್ಲಿ ಸೆರೆಹಿಡಿದು ಅಕ್ಷರಗಳಲ್ಲಿ ಒಡಮೂಡಿಸಿದ್ದಾರೆಂಬುದು ಇವರ ವಿಶೇಷತೆಗಳಲ್ಲೊಂದು. ರುಕ್ಮಿಣೀಬಾಯಿಯವರ ಕೃತಿಗಳಲ್ಲಿ ಗರುಡಪುರಾಣ, ಅಧಿಕಮಾಸ ಮಾಹಾತ್ಮ್ಯೆ, ಭಕ್ತ ಕುಚೇಲಚರಿತ್ರೆ, ಧ್ರುವಚರಿತ್ರೆ, ಸಮುದ್ರಮಥನಪ್ರಸಂಗಾದಿ ವಿಶೇಷ ವಿಚಾರಗಳು ಸುಂದರವಾಗಿಯೂ, ಹೃದ್ಯವಾಗಿಯೂ ಚಿತ್ರಿತವಾಗಿವೆ.
ಶ್ರೀಮದ್ರಾಘವೇಂದ್ರತೀರ್ಥರ ವಿಶೇಷಕಾರುಣ್ಯಕ್ಕೆ ಪಾತ್ರರಾಗಿದ್ದ ಇವರು ಗುರುರಾಯರ ಮೂರೂ ಅವತಾರಗಳ ಕುರಿತಾದ ಪುಟ್ಟ ಕೀರ್ತನೆಯೊಂದನ್ನು ವಿರಚಿಸಿದ್ದಾರೆ. ‘‘ಇಂಥಾ ಗುರುಗಳ ಕಾಣೆನೋ ಈ ಜಗದೊಳು…’’ ಎಂದು ಪ್ರಾರಂಭವಾಗುವ ಮೂರು ನುಡಿಗಳ ಈ ಕೃತಿಯು ವಿಜಯದಾಸರು ಭಗವಂತನನ್ನು ಕುರಿತು ರಚಿಸಿರುವ ‘‘ಇಂಥಾ ಪ್ರಭುವ ಕಾಣೆನೋ…’’ ಎಂಬ ಕೃತಿಯನ್ನು ಹೋಲುವಂತಿದೆ. ಶಾಂತರೂಪದಿಂದ ಬೃಂದಾವನದೊಳಗೂ ಭಕ್ತರ ಅಂತರಂಗದೊಳಗೂ ನೆಲೆಸಿರುವ ರಾಯರು ಬೇಡಿದ ಭಕ್ತರ ಸಕಲೇಷ್ಟವನ್ನೂ ಪೂರೈಸುತ್ತಾ ಎಲ್ಲರ ಹೃದಯಸಿಂಹಾಸನದ ಗುರುವಾಗಿದ್ದಾರೆಂದು ಸ್ತುತಿಸುವರು ರಕುಮಾಬಾಯಿ. ರಾಯರ ಪ್ರಥಮಾವತಾರವಾದ ಪ್ರಹ್ಲಾದನು ಭಗವಂತನಲ್ಲಿರಿಸಬೇಕಾದ ವಿಶ್ವಾಸಾತಿಶಯದ ಪ್ರತೀಕನಾಗಿದ್ದಾನೆ. ಹರಿದ್ವೇಷಿ ಹಿರಣ್ಯಕಶಿಪುವಿನ ಮಗನಾದರೂ ಹರಿಭಕ್ತಿಯನ್ನು ಬಿಡಲಿಲ್ಲ. ಅಸುರರ ಕಿರುಕುಳಕ್ಕೆ ಒಳಗಾದರೂ ಆಸುರೀಸ್ವಭಾವಕ್ಕೆ ಬಲಿಯಾಗಲಿಲ್ಲ. ಅಸುರಾಧ್ಯಾಪಕರ ಪಾಠವನ್ನು ಆಲಿಸಿದರೂ ಅದಾವುದನ್ನೂ ಪಾಲಿಸಲಿಲ್ಲ. ಅಸುರಬಾಲಕರನ್ನೂ ತನ್ನ ಸುರವಾಣಿಯಿಂದ ವ್ಯಾಮೋಹಗೊಳಿಸಿದ ಧೀರಬಾಲಕ ಪ್ರಹ್ಲಾದ. ಮುಂದೆ ಈತನೇ ಬ್ರಹ್ಮಣ್ಯತೀರ್ಥರೆಂಬ ಬ್ರಾಹ್ಮೀತೇಜಸ್ಸಿನ ಗುರುಗಳಿಂದ ಸನ್ಯಾಸವಂ ಪಡೆದು ಶ್ರೀಪಾದರಾಜರೆಂಬ ವಾದಿಮತ್ತೇಭಕೇಸರಿಯಲ್ಲಿ ಶಾಸ್ತ್ರಾಧ್ಯಯನವನ್ನು ನಡೆಸಿ ಪೂಜಾಕಾಲದಲ್ಲಿ ತಮ್ಮ ಭಕ್ತಿಪರಾಕಾಷ್ಠೆಯಿಂದ ಕೃಷ್ಣನನ್ನೇ ಕುಣಿಸಿದ ಮಹಾನ್ ಪರಮಹಂಸ ಶ್ರೀವ್ಯಾಸರಾಜರಾಗಿ ಮೆರೆದವ. ತೌಳವ ರಾಜನಾದ ಶ್ರೀಕೃಷ್ಣದೇವರಾಯನಿಗೆ ರಾಜಗುರುವಾಗಿ ಆತನಿಗೆ ಬಂದಿದ್ದ ಕುಹಯೋಗವನ್ನು ಕಳೆದುದಷ್ಟೇ ಅಲ್ಲದೆ, ತಿರುಪತಿಯಲ್ಲಿ ನಿಂತುಹೋಗಿದ್ದ ಶ್ರೀಶ್ರೀನಿವಾಸನ ಪೂಜೆಯನ್ನು ಮತ್ತೆ ಆರಂಭಿಸಿದ ಸನಾತನಸಂಸ್ಕೃತಿಯ ಪುನಃಪ್ರತಿಷ್ಠಾಪಕ ಈ ಅಗ್ರಮಾನ್ಯ ಗುರು.


ಭಕ್ತರ ಮೇಲಣ ತಾನು ತೋರಿದ ವಾತ್ಸಲ್ಯ ಸಾಲದೆಂಬಂತೆಯೋ ಏನೋ ಮತ್ತೆ ಧರೆಗಿಳಿದುಬಂದ ಈ ಕರ್ಮಜದೇವತೆಯು ಸ್ವಯಂ ಗುರುಗಳಾಗಿದ್ದ ಶ್ರೀಸುಧೀಂದ್ರತೀರ್ಥರಿಂದಲೇ ‘ಮಹಾಭಾಷ್ಯಾಚಾರ್ಯ’ ಎಂಬ ಪ್ರಶಂಸೆಗೆ ಒಳಗಾಗಿದ್ದ ಕಲಿಯುಗಕಲ್ಪತರು ‘ಶ್ರೀರಾಘವೇಂದ್ರ’ರಾಗಿ ಇದೀಗ ನಮ್ಮೆಲ್ಲರ ಮುಂದೆ ಬೃಂದಾವನಗಳಲ್ಲಿ ವಿರಾಜಿಸುತ್ತಿದ್ದಾರೆ. ಇಂತು ಭಕ್ತರ ಚಿಂತಾಮಣಿಯಾದ ಗುರುರಾಯರನ್ನು ಸ್ತುತಿಸಿರುವ ‘ಶ್ರೀರುಕ್ಮಿಣೀಕೃಷ್ಣ’ ದಾಸಿಯು 55 ವರ್ಷಗಳ ಅಲ್ಪಜೀವಿತಾವಧಿಯಲ್ಲೇ ಮಹತ್ತರವಾದ ಸಾಧನೆಗೈದು ಹರಿಪದವನ್ನೈದರು.
***
ಹರಪನಹಳ್ಳಿ ಭೀಮವ್ವ
      ಪುಷ್ಯ ಶುದ್ಧ ತ್ರಯೋದಶಿ ಇವರ ಪುಣ್ಯ ದಿನ
ತಂದೆ...ರಘುಪತ್ಯಾಚಾಯ೯ರು
ತಾಯಿ...ರಾಘಮ್ಮ
      🍁🌲🍁
ಜನನ..1823--1903.ನಾರಾಯಣದೇವರಕೆರೆ(ಬಳ್ಳಾರಿ ಜಿಲ್ಲೆ)ಈ ಹಳ್ಳಿಹೊಸಪೇಟೆಯ ತುಂಗಭದ್ರಾ ಆಣೆಕಟ್ಟಿನ ನೀರಿನಲ್ಲಿ ಮುಳುಗಡೆಯಾಗಿದೆ
       ಇವರನಿಜನಾಮ ಕಮಲಾಕ್ಷಿ ಭೀಮನಂತೆ.ಗಟ್ಟಿಯಾಗಿರಲಿ ಎಂದೂ ಕೃಷ್ಣನಲ್ಲಿ ಭಕ್ತಿ ಬೆಳೆಯಲಿ ಎಂದು ಭೀಮವ್ವ ಎಂದು ಕರೆದರು.ಇವರು ಹುಟ್ಟಿದ ಕೆಲವು ದಿನಗಳವರೆಗೂ ಇವರ(ಭೀಮವ್ವ)ಮೈಮೇಲೆ ಚಕ್ರಗಳೂ ,ಎರಡು ಕಾಲುಗಳಲ್ಲಿ ಪದ್ಮಗಳೂ ಕಾಣುತ್ತಿದ್ದವಂತೆ
     ಪಿತಾಮಹ ನರಹರಿದಾಸರೇ(ತಂದೆಯ ತಂದೆ)ಇವರ ಗುರು.ನಿತ್ಯವೂ ಭಕ್ತಿಯಿಂದ ಪುರಾಣ ಕಥೆಗಳನ್ನು ಕೇಳುತ್ತಾ ಹರಿನಾಮಸ್ಮರಣೆಯ ಚಿಂತನೆಯಲ್ಲಿ ಮುಳುಗಿ ಬಾಲ್ಯದಲ್ಲಿ ಉತ್ತಮ ಸಂಸ್ಕಾರ ಪಡೆದರು.
      ಸಣ್ಣ ವಯಸ್ಸಿನಲ್ಲಿಯೇ ಮುನಿಯಪ್ಪನ ಜೊತೆ ಮದುವೆ ಯಾಯಿತು ಅತ್ತೆಮನೆಯಲ್ಲಿ ಕೃಷ್ಣ ಎಂದು ಹೆಸರಿಟ್ಟರು
ಕಷ್ಟಗಳೇ ವೈರಾಗ್ಯದ ಮೊದಲ ಪಾಠ.ವೈರಾಗ್ಯ ಬಂದ ನಂತರವೇ ವಿಶೇಷ ಜ್ಞಾನ ಪಡೆದು ಸಾಧನೆ ಹೆಚ್ಚಲು ಸಾಧ್ಯ.
      35 ನೇ ವಷ೯ಕ್ಕೆ ಪತಿ ವಿಯೋಗ ವಾಯಿತು. ಅತ್ತೆಮನೆಯಲ್ಲಿ ತಿರಸ್ಕಾರ.ಆಗಲೇ ನಿಜವಾದ ವೈರಾಗ್ಯವಾಗಿ ಭಕ್ತಿ ಬೆಳಿಯಿತು ಕೃಷ್ಣನ ಚಿಂತನೆಯಲ್ಲಿ ತಲ್ಲೀನಳಾದಳು
     ಸ್ವಪ್ನದಲ್ಲಿ  ಭೀಮೇಶಕೃಷ್ಣ ಎಂಬ ಅಂಕಿತ ದೊರೆಯಿತು.ಅಂದಿನಿಂದ ಇವರ ಬದುಕೇ ಬದಲಾಯಿತು.ಆಡಿದ ಮಾತು ಸತ್ಯವಾಯಿತು.ನುಡಿದ ನುಡಿ ಪದ್ಯವಾಯಿತು
   ಲಘುಕೃತಿ,ಧೀಘ೯ಕೃತಿ,ಕೀತ೯ನೆ ,ಸುಳಾದಿಗಳು,ಶ್ರಾವಣಮಾಸದ ಶುಕ್ರವಾರದ ಹಾಡು,ಶ್ರಾವಣ ಶನಿವಾರದ ಹಾಡು ರಚನೆಗೊಂಡವು.
ಇವರ ಪ್ರಸಿದ್ದ ಕೃತಿಗಳು ನಳಚರಿತ್ರೆ,ಸುಧಾಮ ಚರಿತ್ರೆ,ರತಿ ಕಲ್ಯಾಣ,ಸುಭದ್ರಾ ಕಲ್ಯಾಣ, ಇತ್ಯಾದಿ.
 ಯಾರ ಸಹಾಯವಿಲ್ಲದೆ ಉತ್ತರ--ದಕ್ಷಿಣ ಭಾರತದ ಯಾತ್ರೆ ಮಾಡಿದರು.ಉಡುಪಿ,ಮಳಖೇಡ,ಮಂತ್ರಾಲಯಕ್ಕೆ ಹೋಗಿ ಸೇವೆ ಸಲ್ಲಿಸಿದರು.
ಕೊನೆವರೆಗೂ ಕೃಷ್ಣನನ್ನು ಭಜಿಸಿ
ಶುಭಕೃತ್ ಸಂವತ್ಸರದ ಪುಷ್ಯಶುದ್ದ ತ್ರಯೋದಶಿಯಂದು
ಭೌತಿಕ ದೇಹವನ್ನು ತ್ಯಜಿಸಿದರು
***

ಹರಪನಹಳ್ಳಿ ಭೀಮವ್ವ( ಕ್ರಿ.ಶ. 1822-1903)
೧. ಆಗಿನ ಸಾಮಾಜಿಕ  ಕಟ್ಟುಪಾಡುಗಳು .
ಹರಿದಾಸಿನಿಯರಲ್ಲಿ ಹರಪನಹಳ್ಳಿ  ಭೀಮವ್ವಳನದು ಮೂರನೇ ಸ್ಥಾನದಲ್ಲಿ ಬರುವ ಹರಿದಾಸಿನಿ. ಒಂದನೇಯವಳು ಗಲಗಲಿ ಅವ್ವನವರು, ಎರಡನೆಯವಳು ಹೆಳವನಕಟ್ಟೆ ಗಿರಿಯಮ್ಮ, ಮೂರನೆಯ ಸ್ಥಾನದಲ್ಲಿ ಇರುವ ಹರಿದಾಸಿನಿ ನಮ್ಮ ಕಥಾನಾಯಕಿ “ಹರಪನಹಳ್ಳಿ ಭೀಮವ್ವ” ನವರು. ಇವಳ ಕಾಲ ಸುಮಾರು 1822 ರಿಂದ 1903 ಆಸುಪಾಸು ಇರಬಹುದು. ಹರಿದಾಸರಂತೆ ಕಾಲಿಗೆ ಗೆಜ್ಜೆ ಕಟ್ಟಿ  ಗೋಪಾಳಬುಟ್ಟಿ ಹಿಡಿಯದೇ ಮನೆಯಲ್ಲಿಯೇ ದಾಸಸಾಹಿತ್ಯದ ಕೃಷಿ ಮಾಡಿದವರು .ಈ ಮಹಿಳೆಯರು ಹರಿದಾಸಿನಿ ಎಂದು ಪ್ರಸಿದ್ಧಿಯನ್ನು ಪಡೆದು ದಾಸಸಾಹಿತ್ಯದಲ್ಲಿ ತಮ್ಮ ತಮ್ಮ “ಛಾಪು” ಮೂಡಿಸಿದವರು. ಆಗಿನ ಕಾಲದಲ್ಲಿ ಮಹಿಳೆಯರಿಗೆ ಅನೇಕ ಕಟ್ಟುಪಾಡುಗಳಿದ್ದವು. ವಿಧವೆಯರಿಗೆ  ದಿನಗಳು ಕಠಿಣವಾಗಿದ್ದವು. ಮನೆಯಿಂದ ಆಚೆ ಹೋಗಲು ಸ್ವಾತಂತ್ರ್ಯವಿರುತ್ತಿರಲಿಲ್ಲ. ಇರಲಿ ಈಗ ನಮ್ಮ ಕಥಾನಾಯಕಿ “ಹರಪನಹಳ್ಳಿ ಭೀಮವ್ವ” ನ ಚರಿತ್ರೆಯನ್ನು ತಿಳಿಯೋಣ.
೨. ಪೂರ್ವ ಪೀಠಿಕೆ. 
ಈಕೆ ಜನಿಸಿದ್ದು “ನಾರಾಯಣಕೆರೆ” ಎಂಬ ಪುಟ್ಟಹಳ್ಳಿಯಲ್ಲಿ. ಇದು ಹೊಸಪೇಟ ತಾಲೂಕಿನ ಹಳ್ಳಿ. ಅಲ್ಲಿಯ ಪ್ರಸಿದ್ಧ ದಾಸಕೂಟದ  ಮುಖಂಡರಾದ ನರಹರಿ ಆಚಾರ್ಯರ ಮನೆತನದ ರಾಘಮ್ಮ ರಘುನಾಥಾಚಾರ್ಯ  ಎಂಬ ದಂಪತಿಗಳಲ್ಲಿ 1822ರಲ್ಲಿ ಜನಿಸಿದಳು. ಹುಟ್ಟಿದಾಗಲೇ “ದೈವಿಕ “ ಸಂಪತ್ತು ಪಡೆದಿದ್ದ ಈ ಕೂಸಿಗೆ “ಕಮಲಾಕ್ಷಿ” ಎಂದು ನಾಮಕರಣ. ಒಂದು ವರ್ಷದ ಮಗುವಿದ್ದಾಗಲೇ ಇವಳ ನೆನಪಿನ ಶಕ್ತಿ ಆಗಾಧವಾಗಿತ್ತು. ಪ್ರೀತಿಯಿಂದ ಇವಳನ್ನು “ಭೀಮವ್ವ” ಎಂದೇ ಕರೆಯುತ್ತಿದ್ದರು. ಇವಳಿಗೆ ತಾನು ಹುಟ್ಟಿದಾಗಿನಿಂದ ಮುಪ್ಪಿನವರೆಗೂ ಜರುಗಿದ ಎಲ್ಲ ಘಟನೆಗಳು ನೆನಪಿಗೆ ಬರುತ್ತಿದ್ದವು. ಇದು ಅವಳಿಗೆ ದೇವರೇ ಕರುಣಿಸಿದ ಜ್ಞಾನಸಂಪತ್ತು, ಏಕಪಾಠಿಯಾಗಿದ್ದಳು. ಓದು ಬರಹ ಇಲ್ಲದ ಇವಳ ಮೇಲೆ ತಾತನಾದ ಜೋಯಿಸ ವೆಂಕಪ್ಪಾಚಾರ್ಯರ ಪ್ರಭಾವ ಬಹಳವಾಗಿತ್ತು. ಸದಾ ಹರಿಧ್ಯಾನ  ಹರಿಸ್ಮರಣೆಯಲ್ಲಿ ಇರುತ್ತಿದ್ದ ಇವಳಿಗೆ ಹರಿಭಕ್ತಿಪಂಥದಲ್ಲಿ ಸಾಗಲು ಪ್ರೇರಣೆಯಾಯಿತು. 
೩. ಪ್ರಸ್ತುತ.
ಆರು ವರ್ಷದವಳಿದ್ದಾಗಲೇ  ಮನೆಯ ಭಕ್ತಿಯ ಪರಿಸರ ಪುರಾಣ ಪ್ರವಚನ ಭಜನೆ ಶ್ರವಣ , ಭಜನೆಗಳಿಂದ ಈಕೆಯ ಹರಿಭಕ್ತಿಯು ತುಂಬಾ ಬೆಳೆಯಿತು. ಒಂದು ಸಾರಿ ಹಾಡು ಹೇಳಿದರೇ  ಅವುಗಳನ್ನು ಏನೂ ತಪ್ಪದೇ ಪುನರುಚ್ಚರಿಸುತ್ತಿದ್ದಳು. ಸ್ವಪ್ನಗಳಲ್ಲಿ ದೇವರ ದರ್ಶನದ ಲಾಭವೂ ಈಕೆಗಿತ್ತು. ಈಕೆಗೆ ಹನ್ನೊಂದನೆಯ ವಯಸ್ಸಿಗೆ ರಾಮದುರ್ಗದ ಹಳೇಸಮುದ್ರದ ಕುಲಕರ್ಣಿಯವರ ಮನೆತನದ ನಾಲ್ವತ್ತೈದು ವಯಸ್ಸಿನ ಮುನಿಯಪ್ಪನ ಜತೆ ಮದುವೆಯಾಯಿತು.  ಆತನ ಮೂರನೆಯ ಹೆಂಡತಿಯಾಗಿ ಮನೆ ತುಂಬಿದಳು. ಲಗ್ನವಾದ ಹದಿನಾಲ್ಕು ವರ್ಷಗಳ ನಂತರ ಒಬ್ಬ ಮಗ,  ಒಬ್ಬ ಮಗಳು ಹುಟ್ಟಿದರು. ನಂತರ ಈಕೆಗೆ ಅನೇಕ ಸಂಕಷ್ಟಗಳು ಪ್ರಾಪ್ತವಾದವು. ಕಳ್ಳತನವಾಗಿ ಎಲ್ಲ ಸಂಪತ್ತನ್ನು ಕಳೆದುಕೊಂಡರು. ಬಡತನವು ಬಂದು ಬಹಳೇ ಕಷ್ಟಪಡುವಂತಾಯಿತು. ತನ್ನ ಮೂವತ್ತೇಳನೇ ವಯಸ್ಸಿಗೆ ವಿಧವೆಯಾದಳು. ಮಡಿಹೆಂಗಸಾಗಿ ಮನೆಯಲ್ಲಿಯೇ ಶ್ರೀಹರಿಯನ್ನು ಸ್ತುತಿಸುತ್ತಾ ಅದ್ಭುತವಾದ  ಕಾವ್ಯಗಳನ್ನು ರಚನೆ ಮಾಡಿ ದಾಸಸಾಹಿತ್ಯದಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡಳು. ವೈಧವ್ಯ ಆಕೆಯ ಭಕ್ತಿಯ ಸಾಧನೆಗೆ ಮತ್ತಷ್ಟು ಪುಟ ಕೊಟ್ಟಿತು. ಹೊಸ ತಿರುವೇ ಆಯಿತು. ಸ್ವಪ್ನದಲ್ಲಿ ನಾರದರಿಂದ “ಭೀಮೇಶಕೃಷ್ಣ” ಎಂಬ ಮುದ್ರಿಕೆ ಪಡೆದಳು. ಓದು ಬರಹ ಬರದೇ ಇರದ ಈಕೆ ಎಲ್ಲ ಹಾಡುಗಳು ನಾಲಿಗೆಯಲ್ಲಿ ನಲಿದಾಡುತ್ತಿದ್ದವು. ಬಂಧುಗಳು ಬರೆದಿಟ್ಟುಕೊಂಡು ಹಾಡುತ್ತಿದ್ದರು. 
೪. ತಿರುವುಗಳು.
ಈಕೆಯ ನಡೆನುಡಿ ಹರಿಕೀರ್ತನೆ ಮಾಡುವ ಅತ್ತೆಮಾವಂದಿರಿಗೆ ಬೇಡವಾಗಿತ್ತು. ಇದಕ್ಕೆ ಅವರು ಅಡ್ಡಿಪಡಿಸಿದಾಗ ಅವರಿಬ್ಬರಿಗೂ ಆರೋಗ್ಯ ಕೆಟ್ಟಿತು. ಸ್ವಪ್ನದಲ್ಲಿ ನೀವು ಆಕೆಗೆ ಅಡ್ಡಿಪಡಿಸಿದ್ದರಿಂದ ಈ ಬಾಧೆಗಳು ನಿಮಗೆ ಉಂಟಾಗಿವೆ ಎಂದು ಹೇಳಿದಂತಾಯಿತು. ಅವಳಿಗೆ ಉತ್ತೇಜನ ನೀಡಿದರೇ ನಿಮ್ಮ ವ್ಯಾಧಿಗಳು ಗುಣವಾಗುವವು ಎಂದಾಗ ಅವಳಿಗೆ ಯಾವುದೇ ಅಡ್ಡಿಆತಂಕಗಳು ಅತ್ತೆಮಾವಂದಿರಿಂದ ಬರಲಿಲ್ಲ. ಅವರಿಬ್ಬರ ವ್ಯಾಧಿಗಳು ಮಾಯವಾಗಿ ಆರೋಗ್ಯವಂತರಾದರು. ಭೀಮವ್ವಳ ಪದರಚನೆ ಹಾಡುಗಳು ಪುನ: ಪ್ರಾರಂಭವಾಗಿ ಅನೇಕ ಪದಗಳನ್ನು ರಚನೆ ಮಾಡಿದಳು. ಹರಿವಂಶದಲ್ಲಿ ಬರುವ ಕೃಷ್ಣದಾನವೃತದ ಕಥೆಯನ್ನು ಸ್ವಾರಸ್ಯವಾಗಿ ರಚಿಸಿದ್ದಾಳೆ. ಹಾಗೆಯೇ “ಸುಭದ್ರಾ ಕಲ್ಯಾಣ”, “ರತಿಕಲ್ಯಾಣ”, “ಮುಯ್ಯದಹಾಡು”, “ನಳಚರಿತ್ರೆ”, “ಜಲಕ್ರೀಡೆ”, “ಸುದಾಮಚರಿತ್ರೆ”, “ಸ್ತುತಿಮಾಲಿಕೆ”, “ದ್ರೌಪದಿವಸ್ತ್ರಾಪಹರಣ” ಮುಂತಾದ ಖಂಡಕಾವ್ಯಗಳನ್ನು, ಉಗಾಭೋಗಗಳನ್ನು “ಶುಕ್ರವಾರ ಶನಿವಾರ” ಹಾಡುಗಳನ್ನು ರಚಿಸಿದ್ದಾಳೆ. 
ಇವಳ ಕೃತಿಗಳು ಭಗವದ್ಭಕ್ತಿಗೆ ಪೂರಕವಾಗಿದ್ದವು. ಬೇರಾವುದೇ ಉದ್ದೇಶವಿರಲಿಲ್ಲ, ಎಲ್ಲ ಭಗವದ್ಭಕ್ತಿಯ ಕೃತಿಗಳೇ ಆಗಿದ್ದವು.
೫. ರಚಿಸಿದ ಕೃತಿಗಳ ಅಲ್ಪವಿವರಣೆ ಮತ್ತು ಅಂತ್ಯಕಾಲ. 
1. ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮೇಲಿನ ಹಾಡು ರಚಿಸಿದ್ದಾರೆ.
2. ಸೋದೆವಾದಿರಾಜರ ಮೇಲೂ ಹಾಡು ರಚಿಸಿದ್ದಾರೆ.
3. ಕಾಶೀವಿಶ್ವನಾಥನ ಕುರಿತು 
ಕಾಶೀ ವಿಶ್ವೇಶ ಗಂಗಾ ………
…………ಕಾಂತಾಶಿವಲಿಂಗ. 
            4.ದ್ಯಾವನ್ನ ಒಳಗಿಟ್ಟೆ ದ್ಯಾವನ್ನ
ಹೊರಗಿಟ್ಟೆ ದ್ಯಾವನ್ನ ನೋಡಿ ನಗುತ್ತಿದ್ದೆ 
ಎನ್ನುವ ಹಾಡು ಬಹು ಪ್ರಸಿದ್ಧವಾಗಿದೆ . ಭೀಮವ್ವನ ಜ್ಞಾನಸ್ಪೂರ್ತಿಯು ಅವಳ ಕೊನೆಗಾಲದವರೆಗೂ ಅವ್ಯಾಹತವಾಗಿತ್ತು. ಅವಳು ಸಾಯುವ ಐದು ದಿನಗಳ ಮುಂಚೆ “ಚಿನ್ನದ ಚ್ಯಾವಡಿಯ ಮ್ಯಾಲೆ ಪನ್ನಂಗಶಯನ” ಎಂಬ ಕೃತಿಯನ್ನು ರಚಿಸಿದ್ದಾಳೆ. ಇದು ಬಹಳ ಪ್ರಸಿದ್ಧವಾದ ಕೃತಿ. ಮರಣಶಯ್ಯೆಯಲ್ಲಿದ್ದಾಗಲೂ “ನಾರಾಯಣ” ಸ್ಮರಣೆ ಮಾಡುತ್ತಿದ್ದಳು. ಇವಳ ಮರಣ ಪ್ರಾಪ್ತವಾಗುವ ವೇಳೆಗೆ ಅಪಾರ ಬಂಧುಗಳು ನೆರೆಹೊರೆಯವರು ಬಂದು ಅವಳ ದರ್ಶನ ಪಡೆದರು. ದಿನಾಂಕ 11-01-1903ರಂದು ಶುಭಕೃತಸಂವತ್ಸರ ಪುಷ್ಯಶುದ್ಧ ತ್ರಯೋದಶಿ (ಭಾನುವಾರ) ಮಧ್ಯಾನ್ಹ ಹರಿಪಾದ ಸೇರಿದಳು. ಇವಳನ್ನು ದೇವಾಂಶಸಂಭೂತಳೆಂದೇ ಜನ ತಿಳಿದಿದ್ದರು. ಅದು  ನಿಜವೇ ಆಗಿತ್ತು. 
ದಾಸಸಾಹಿತ್ಯಕ್ಕೆ ನೀರೆರೆದು ಪೋಷಿಸಿ ಅದು ಬೆಳೆಯಲೆಂದು ಹರಸಿ ಬೆಳೆಸಿದ “ಶ್ರೇಷ್ಠ ಹರಿದಾಸಿನಿ” ಎಂದು ಪ್ರಸಿದ್ಧಿ ಪಡೆದಳು.  ಆಗಿನ ಮನೆತನಗಳ ಕಟ್ಟುಪಾಡುಗಳನ್ನು ಸಹಿಸಿ ಮನೆಯಲ್ಲಿದ್ದೇ ನಿರಕ್ಷರಿಯಾಗಿದ್ದ “ಹರಪನಹಳ್ಳಿ ಭೀಮವ್ವ” ಎಂದು ಹೆಸರಿಸಿ ದಾಸಸಾಹಿತ್ಯದಲ್ಲಿ ತನ್ನ ಅನುಪಮ ಕೊಡುಗೆಯನ್ನು ನೀಡಿದ್ದಾಳೆ.
- ಕೃಷ್ಣ ನಾರಾಯಣ ಬೀಡಕರ
******.

ಹರಪನಹಳ್ಳಿ  ಭೀಮವ್ವನವರ stutih

ಗುರುವು ನಾರದರಿಂದ ಅನುಗ್ರಹ ಪಡೆದಿಹ 

ಹರದಿ ಭೀಮವ್ವನ ನೆನೆಯೋಣ

ಪರಮ ಪಾವನಳು ಪರಮಾತ್ಮನ ಗುಣ 

ಪರಿ ಪರಿಯಲಿ ಹೊಗಳಿದ||ಪಲ್ಲ||


ಸ್ತುತಿ ಮಣಿ ಮಾಲಿಕೆ, 

ಮುಯ್ಯದ ಹಾಡು ರತಿಕಲ್ಯಾಣ ಸುಭದ್ರ ಕಲ್ಯಾಣ

ಶಕುಂತಳನ  ಹಾಡು ದಾನವ್ರತದ ಹಾಡು ನಳ ಚರಿತ್ರೆ 

108 ನಾರಾಯಣ

ಸಂಕ್ಷೇಪ ರಾಮಾಯಣ ಜಲಕ್ರೀಡಿ ಪಾರಿಜಾತ ಉಧ್ಧವಗೀತ

ಸಮುದ್ರ ಮಥನದ ಹಾಡು ಸೀರೆ   ಸೆಳೆದಹಾಡು ಶ್ರಿನಿವಾಸ 

ಕಲ್ಯಾಣ ಮೊದಲಾದ||೧||


ತೀರ್ಥಯಾತ್ರೆಗೆ ಪೋಗಿ ಗಂಗಾಸ್ನಾನವ ಮಾಡಿ, 

ಸರಸ್ವತಿ ನದಿಯನ್ನ ಧ್ಯಾನಿಸಲು

ಸರಸ್ವತಿ ನದಿಯು ಗುಪ್ತಗಾಮಿನಿ ಕೆಂಪು ಸೀರೆಯು ಹಾಸಿದಂತೆ

ತರಂಗಗಳು ಬರಲು, ನಾವೆಗಳು ಹೋಗುತ್ತಿರಲು ಮತ್ತೆ

ಸ್ನೇಹಿತಳಾದ ಬೃಂದಾವನಿಗೆ ಕೂಡ  ದರುಶನ ಕೋರಲು||೨||


ಪಾತ್ರರ ಸಂಗಡ ಯಾತ್ರೆ ಮಾಡಬೇಕೆನ್ನುತ ಜಗನ್ನಾಥದಾಸರು 

ತಿಳಿಸಿ ದಂತೆ

ಭೀಮವ್ವನ ಜೊತೆ ಯಾತ್ರೆ ಮಾಡಿ ಬೃಂದಾವನಿಗೆ ಕೂಡ 

ದರುಶನವಾಯಿತೆಂದು

ಶ್ರಧ್ಧೆಯಿಂದಲಿ ಬಂದು ಶುಧ್ಧಮನದಿ ಶುಧ್ಧಾತ:ಕ್ಕರಣದಿ ಬೇಡಲು

ಮಧ್ವೇಶಕೃಷ್ಣನು ಒಲಿಯುವನು ನಮ್ಮನ ಉಧ್ಧಾರ ಮಾಡುವನು||೩||

********


" ಶ್ರೀ ಭೀಮೇಶಕೃಷ್ಣ  - 1 "

" ದಿನಾಂಕ : 25.01.2021 ಸೋಮವಾರ - ಶ್ರೀ ರಾಯರ ಅಂತರಂಗ ಭಕ್ತರಾದ ಮಾತೋಶ್ರೀ ಹರಪನಹಳ್ಳಿ ಭೀಮವ್ನವರ ಆರಾಧನಾ ಮಹೋತ್ಸವ "

" ಪ್ರಸ್ತಾವನೆ "

ರಾಗ : ಮೋಹನ  ತಾಳ : ಆದಿ 

ಯೆಷ್ಟು ಪೇಳಲಿ ವೆಂಕಟಗಿರಿಯ ।

ದೃಷ್ಟಿಗೆ ಬಹು ಸಿರಿಯ ।

ಬೆಟ್ಟವನೆ ಮನಸಿಟ್ಟೇರಲು ಬೇಡಿದ ।

ಇಷ್ಟಾರ್ಥಗಳ ಈಡಾಡುವ 

ದೊರೆಯ ।। ಪಲ್ಲವಿ ।।

ಚಿತ್ರ ವಿಚಿತ್ರದ 

ಮಹಾದ್ವಾರ ।

ಚಿನ್ನದ ಗೋಪುರ 

ಸ್ವಚ್ಛವಾದ ಸ್ವಾಮಿ 

ಪುಷ್ಕರಣಿಯ ತೀರ ।

ಸುತ್ತಲು ಪ್ರಾಕಾರ ।

ಹೆಚ್ಚಿನತೀ ವ್ರತವೆ 

ಮನೋಹರ ।

ಮಾರುವ ವಿಸ್ತಾರಸ ।

ಚಿತ್ತಜನಯ್ಯನ 

ಶೈಲವೆ ದೂರದಿಂದ  ।

ಹತ್ತಿ ಬರುವುದೀತನ 

ಪರಿವಾರ ।। ಚರಣ ।।

ರತ್ನ ಮಾಣಿಕ್ಯದ 

ಕೇಯೂರ ।

ಕಟ್ಟಿದ ಉಡಿದಾರ ।

ಉಟ್ಟಿದ್ದ ನಿರಿಜರ 

ಪೀತಾಂಬರ ।

ಕೌಸ್ತುಭ ಮಣಿಹಾರ ।   

ಗಟ್ಟಿ ಕರ ಕಂಕಣ 

ಕುಂಡಲಧರ ।

ಚತುರ್ಭುಜದಲಂಕಾರ ।

ವಕ್ಷ ಸ್ಥಳದಲ್ಲಿ 

ಹೊಂದಿದ ಶ್ರೀ ಮಹಾ - ।

ಲಕ್ಷ್ಮೀದೇವಿಯರಿಂದೊಲಿವ 

ಶೃಂಗಾರ ।। ಚರಣ ।।

ಆಕಾಶರಾಜನ ಕಿರೀಟ । 

ಚಿತ್ರವು ಬಹು ಮಾಟ ।

ಹಾಕಿದ್ದ ಹರಿ 

ಕಡೆಗಣ್ಣಿನ ನೋಟ ।

ಭಕ್ತರ ಕುಣಿದಾಟ ।

ಬೇಕಾದ ಭಜಕರ 

ಭವ ಪಡಿಪಾಟ ।

ಬಿಡಿಸುವ ಯಮ ಕಾಟ ।

ಕೋಟಿ ಜನರ 

ಓಡ್ಯಾಟವೆ  । ನ ।

ಮ್ಮ ಕಿರೀಟಿಯ 

ಸಖ ಕೇಶವನ 

ಮಂದಿರದೊಳ್ ।। ಚರಣ ।।

ತಪ್ಪುಗಾಣಿಕೆ ಬೇಡುವ ।

ಸರ್ಪ ಶೈಲದ ತಿಮ್ಮಪ್ಪ ।

ಕಪ್ಪವ ಕಾಸು 

ಕವಡೆ ಮುಡುಪು ।

ಹಾಕದೆ ತಾನೊಪ್ಪ 

ಜಪ್ಪಿಸಿ ನೋಡುವ 

ಜನರ ತಪ್ಪ ।

ಹುಡುಕ್ಯಾಡುತಲಿಪ್ಪ 

ಅಪ್ಪ ಮಹಿಮಾನಂತ 

ಮೂರುತಿ । ತಾ ।

ನೊಪ್ಪಿದರೊಲಿದು 

ಕೊಡುವ ಸಾರೂಪ್ಯ ।। ಚರಣ ।।

ದೇಶದೇಶದೊಳು 

ಈತನ ವಾರುತೆಯು ।

ತುಂಬಿದ ಕೀರುತಿಯು ।

ಆಸೆಯ ದೈವ ಈ 

ಮೂರುತಿಯು ।

ಫಲ್ಗುಣ ಸಾರಥಿಯು ।

ಲೇಸಾಗಿ ಜನರ 

ನೋಡುವ ರೀತಿಯು ।

ಕರ್ಪೂರದಾರತಿಯು ।

ವಾಸವಾಗಿರುವ ಈ 

ಶೇಷಾದ್ರಿಯಲಿ । ಭೀ ।

ಮೇಶ ಕೃಷ್ಣ ಶ್ರೀನಿವಾಸ 

ಕೃಪಾಳು ।। ಚರಣ ।।

ಹರಪನಹಳ್ಳಿ ಭೀಮವ್ವ ಆಧುನಿಕ ಹರಿದಾಸ ಸಾಹಿತ್ಯದ ಅಪರೂಪದ ಸಹಜ ಕವಯಿತ್ರಿ. 

ಅವರ ಕೃತಿಗಳು ಮತೀಯ ಜಡತ್ವವನ್ನು ನೀಗಿಕೊಂಡ ಸಹಜ ಕಾವ್ಯವೆನಿಸಿವೆ. 

ಭೀಮವ್ವನವರ ಸಾಹಿತ್ಯವು ವರ್ಣನಾ ಪ್ರಧಾನವಾದ ಶೈಲಿ. 

ಆಯ್ದ ಪ್ರತಿ ವಸ್ತುವಿನ ವಿವರವನ್ನೂ ಅತಿ ಉತ್ಸಾಹದಿಂದ ಬಣ್ಣಿಸುತ್ತಾರೆ. 

ಇದು ದಾಸ ಸಾಹಿತ್ಯದ ಒಂದು ಮುಖ್ಯ ಲಕ್ಷಣ. 

ಸಗುಣೋಪಾಸನೆಯಿಂದಾಗಿ ದಾಸ ಸಾಹಿತ್ಯಕ್ಕೆ ಈ ಬಗೆಯ ವೈವಿಧ್ಯ ಒದಗಿತು. 

ಶ್ರೀಮದ್ಭಾಗವತದ ಶ್ರೀ ಕೃಷ್ಣ ಹರಿದಾಸರ ಆರಾಧ್ಯ ದೈವ. 

ಅವನ ಬಾಲ ಲೀಲೆಗಳನ್ನು ವರ್ಣಿಸುವುದರಲ್ಲಿ ಹರಿದಾಸರ ಮನಸ್ಸು ತಲ್ಲೀನವಾಗಿತ್ತು. 

ಭೀಮವ್ವನವರ ಪದಗಳು ಇದರಿಂದ ಹೊರತಲ್ಲ. 

ಈ ದೃಷ್ಟಿಯಿಂದ ಹರಪನಹಳ್ಳಿ ಭೀಮವ್ವ ಆಧುನಿಕ ಹರಿದಾಸರಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿರುತ್ತಾರೆ. 

ಅವರ ಕೃತಿಗಳಿಗೆ ಹಿನ್ನೆಲೆಯಾಗಿ ಅವರು ಬಾಳಿ ಬದುಕಿದ ಪರಿಸರ ಅವರ ಜೀವನದ ವಿವರಗಳು ಹೆಚ್ಚಿನ ಮಹತ್ವ ಪಡೆಯುತ್ತವೆ. 

ಭೀಮವ್ವನವರ ಸಾಹಿತ್ಯ ಜೀವನೋನ್ಮುಖವಾದುದು. 

ಜೀವನ ಪ್ರೇಮ ಅವರ ಪದಗಳಲ್ಲಿ ಉಕ್ಕಿ ಹರಿದಿವೆ. 

ಎಲ್ಲಿಯೂ ಭೀಮವ್ವನವರು ಬದುಕನ್ನು ಧಿಕ್ಕರಿಸಿಲ್ಲ. 

ಭೇಮವ್ವನವರ ಶ್ರೀ ಕೃಷ್ಣ ಭಕ್ತಿ ಬದುಕಿಗೆ ನಮ್ಮನ್ನು ತಂದು ಕಟ್ಟುವ ಶಕ್ತಿಯಾಗಿದೆ.

***

" ಶ್ರೀ ಭೀಮೇಶಕೃಷ್ಣ  - 2 "

" ಹರಪನಹಳ್ಳಿ ಭೀಮವ್ವನವರ ಸಂಕ್ಷಿಪ್ತ ಮಾಹಿತಿ "

ರಾಗ : ಹಂಸಾನಂದೀ   ತಾಳ : ಆದಿ

ಕಂಡು ಧನ್ಯನಾದೆ

ನಂದ ತನಯನ ಕಣ್ಣಾರೆ ।

ಕಂಡು ಧನ್ಯನಾದೆ

ನಂದ ತನಯನ ।

ಕಂಡು ಧನ್ಯನಾದೆ ದಣಿ-

ಯವೆನ್ನವೆರಡು ಕಂಗಳೀಗ ।

ತಿರುಗಿ ಪೊಗಲಾರೆ

ತಿಮ್ಮಲಾಪುರೀಶ

ದೊರೆಯ ಬಿಟ್ಟು ।। ಚರಣ ।।

ಸಾಲು ದೀವಿಗೆ ಸಣ್ಣ ನಾಮ

ಸರದ ಮಧ್ಯೆ ವೈಜಯಂತೀ ।

ಸೂರ್ಯನಂತೆ ಪೊಳೆವ ಮುದ್ದು

ಮುಖವು ಮಹಾದ್ವಾರದಲ್ಲೇ ।। ಚರಣ ।।

ಶಂಖ ಚಕ್ರ ಶ್ಯಾಮ ವರ್ಣ

ಅಂಕಿತವುಳ್ಳ ನಾಮಗಳಿಂದ ।

ಪಂಕಜಾಕ್ಷ ಪರಮಪುರುಷ

ವೆಂಕಟನೆಂಬೊ

ನಾಮಾಂಕಿತನಾದವನ ।। ಚರಣ ।।

ಆ ಮಹಾ ವೈಕುಂಠದಲ್ಲಾ-

ವಾಸವಾದ ನಮ್ಮ । ಕುಲ ।

ಸ್ವಾಮಿ ಯೆನಿಸಿಕೊಂಡ

ಭೀಮೇಶಕೃಷ್ಣನ

ದಯದಿಂದೀಗ ।। ಚರಣ ।।

ಹೆಸರು : ಕಮಲಾಕ್ಷಿ

ತಂದೆ : ಶ್ರೀ ರಘುನಾಥಾಚಾರ್ಯ

ತಾಯಿ : ರಾಘಮ್ಮ

ಹುಟ್ಟಿದ ಸ್ಥಳ : ನಾರಾಯಣದೇವರ ಕೆರೆ

ಕಾಲ : ಕ್ರಿ. ಶ. 1823 - 1903

" ವೈವಾಹಿಕ ಜೀವನ "

ಭೀಮವ್ವನವರ ವೈವಾಹಿಕ ಜೀವನ ಬಹಳ ಸಂಕ್ಷಿಪ್ತವಾದುದು.

11 ವರ್ಷಗಳ ಭೀಮವ್ವ, 45 ವರ್ಷಗಳ ಮುನಿಯಪ್ಪನಿಗೆ 3ನೆಯ ಹೆಂಡತಿಯಾದರು.

ಇಬ್ಬರು [ ಮಗಳ ಹೆಸರು : ಸುಬ್ಬಾಬಾಯಿ ಮತ್ತು ಮಗನ ಹೆಸರು : ಸೋಮರಾಯ ] ಮಕ್ಕಳನ್ನು ಪಡೆದರು.

36 ವರ್ಷದಲ್ಲಿ ಪತಿಯ ವಿಯೋಗ.

ಆನಂತರದ ಅವರ ಬದುಕು ಬ್ರಾಹ್ಮಣ ಸಮಾಜದ ತೀರಾ ಕಟ್ಟು ನಿಟ್ಟಾದ ಆಚರಣೆಗಳ ಚೌಕಟ್ಟಿನಲ್ಲಿ ಸಾಗಿತು.

ಆದರೆ ಅದು ಕೇವಲ ಹೂಬತ್ತಿ ಹೊಸೆಯುವ ಕಾರ್ಯದಲ್ಲಿ ಮುಗಿದು ಹೋಗಲಿಲ್ಲ.

ಹರಪನಹಳ್ಳಿ ಭೀಮ್ಮವ್ವನವರ ಅಂತರಂಗದಲ್ಲಿ ಅಡಗಿದ್ದ ದೈವಭಕ್ತಿ ಜಾಗೃತವಾಯ್ತು.

" ಶ್ರೀ ನಾರದ ಮಹರ್ಷಿಗಳ ಕಾರುಣ್ಯ "

ಶ್ರೀ ನಾರದ ಮಹರ್ಷಿಗಳ ಆದೇಶದಂತೆ ಕೃಷ್ಣ ಸರ್ಪವೊಂದು ತನ್ನ ನಾಲಿಗೆಯಿಂದ ಆಕೆಯ ನಾಲಿಗೆಯ ಮೇಲೆ ಮೂರು ಅಕ್ಷರಗಳನ್ನು ಬರೆದಂತೆ ಅವರು ಸ್ವಪ್ನದಲ್ಲಿ ಕಂಡರು.

ಭೀಮವ್ವನಲ್ಲಿ ಅಡಕವಾಗಿದ್ದ ಸಾಹಿತ್ಯದ ಪ್ರತಿಭೆಗೆ ಈ ಸ್ವಪ್ನ ಮೀಟುಗೋಲಾಯಿತು.

ಪದಗಳ ರಚನೆ ಪ್ರಾರಂಭವಾಯಿತು.

ಭೀಮವ್ವನಲ್ಲಿ ಸಹಜ ಕವಿತ್ವದ ಶಕ್ತಿ ಅದಮ್ಯವಾಗಿತ್ತು.

" ಸಮಕಾಲೀನ ಅಪರೋಕ್ಷಜ್ಞಾನಿಗಳು "

ಶ್ರೀ ಶೇಷದಾಸರು, ಶ್ರೀ ಇಭ್ರಾಮಪುರ ಕೃಷ್ಣಾಚಾರ್ಯರು, ಶ್ರೀ ಸುರಪುರದ ಆನಂದದಾಸರು, ಶ್ರೀ ಕೃಷ್ಣಾವಧೂತರು, ಶ್ರೀ ಗುರು ಜಗನ್ನಾಥದಾಸರು ಮತ್ತು ಶ್ರೀ ವರದೇಶದಾಸರು.

" ಅಂಕಿತ ಪ್ರಾಪ್ತಿ "

ಒಂದು ದಿನ ಸ್ವಪ್ನದಲ್ಲಿ ಒಬ್ಬ ಬ್ರಾಹ್ಮಣ ರೂಪದಲ್ಲಿ ಶ್ರೀ ಪುರಂದರದಾಸರು ಭೀಮವ್ವನವರಿಗೆ " ಭೀಮೇಶಕೃಷ್ಣ " ಎಂಬ ಸ್ವಪ್ನಾಂಕಿತವನ್ನು ಕೊಟ್ಟರು.

ಅಂಕಿತ ದೊರೆತ ತಕ್ಷಣ ಭೀಮವ್ವನವರಲ್ಲಿ ಹುದುಗಿದ್ದ ಕಾವ್ಯ ಸತ್ತ್ವ ನಿರರ್ಗಳವಾಗಿ ಹರಿಯತೂಡಗಿತು.

ಅಂದಿನಿಂದ ಭೀಮೇಶಕೃಷ್ಣಾ೦ಕಿತದಲ್ಲಿ ಪದಗಳನ್ನು ರಚಿಸಲು ಆರಂಭಿಸಿದರು.

ಪದಗಳಗಿಂತ ಕಥನ ಪರವಾದ ದೀರ್ಘ ಕೃತಿಗಳ ರಚನೆಯಿಂದ ಭೀಮವ್ವನವರ ಮನಸ್ಸು ಒಲಿಯಿತು.

ಜನ ಹೇಳುವಂತೆ " ಭೀಮವ್ವನವರು ಸ್ವಪ್ನದಲ್ಲಿ ಕಂಡ ದೃಶ್ಯಗಳನ್ನು " ಹಾಡುತ್ತಿದ್ದರಂತೆ.

ಅಕ್ಷರ ಜ್ಞಾನವಿಲ್ಲದ ಭೀಮವ್ವನವರಿಗೆ ಪುರಾಣ ಪ್ರವಚನ, ಹರಿಕಥೆ ಮತ್ತು ಭಜನೆಗಳಂಥ ಸಮೂಹ ಶ್ರವಣ ಮಾಧ್ಯಮವೇ ಜ್ಞಾನದ ಮೂಲಗಳೆನಿಸಿದವು.

ಭೀಮವ್ವನವರು ಭಗವಂತನ ಕಥೆಗಳನ್ನು ಭಕ್ತಿ ಶ್ರದ್ಧೆಗಳಿಂದ ಕೇಳುತ್ತಿದ್ದರು.

ಅವರಲ್ಲಿ ಭಕ್ತಿ ಮಾತ್ರ ಸ್ಥಾನ.

***

" ಶ್ರೀ ಭೀಮೇಶಕೃಷ್ಣ  - 3 "

" ಭೀಮವ್ವನವರ ಸಾಹಿತ್ಯ "

ಮಧ್ವಮತದ ತತ್ತ್ವಗಳ ನಿರೂಪಣೆಯನ್ನು ಮಾಡಿದ ಅನೇಕ ಕೀರ್ತನೆಗಳನ್ನು ರಚಿಸಿದ್ದಾರೆ.

ಅವರ ಕೃತಿಗಳಲ್ಲಿ ಆ ಕಾಲದ ಬ್ರಾಹ್ಮಣ ವರ್ಗದ ಒಂದು ಸಾಂಸಾರಿಕ ಪರಿಸರದ ಶಾಸ್ತ್ರ ಸಂಪ್ರದಾಯಗಳ ರಿವಾಜುಗಳ ಸಾಮರ್ಥ್ಯ  ಅಭಿವ್ಯಕ್ತಿಯಿದೆ.

ಓದು ಬರಹ ಬಾರದ ಕೇವಲ ಶ್ರವಣ ಮಾತ್ರದ ಜ್ಞಾನದಿಂದ ವಿಫುಲ ಸಾಹಿತ್ಯ ರಚನೆ ಮಾಡಿರುವ ಅವರ ಅಸಾಮಾನ್ಯ ಪ್ರತಿಭೆ, ಸ್ಮರಣ ಶಕ್ತಿ ಮೆಚ್ಚುಗಿಗೆ ಪಾತ್ರವಾಗಿದೆ.

ಭೀಮವ್ವನವರು ಧೀರ್ಘ ಕೃತಿಗಳನ್ನೂ ರಚಿಸಿದ್ದಾರೆ.

ಸುಭದ್ರಾ ಕಲ್ಯಾಣ ಪದ

ರತಿ ಕಲ್ಯಾಣ ಪದ

ಶಕುಂತಲ ದುಷ್ಯಂತ ಮಹಾರಾಜನ ಪದ

ನಳ ಚರಿತ್ರೆ ಪದ

ಪತಿ ದಾನ ಕೊಟ್ಟ ಪದ

ಶುಕ್ರವಾರ ಮತ್ತು ಶನಿವಾರದ ಪದ

ಶ್ರೀ ಶ್ರೀನಿವಾಸ ಕಲ್ಯಾಣ ಪದ

ಸುಧಾಮನ ಪದ

ಸ್ತುತಿ ಮಣಿ ಮಾಲಿಕೆ ಪದ

ಮುಯ್ಯದ ಪದ

ಹಸೆಗೆ ಕರೆಯುವ ಪದ

ಆರತಿಯ ಪದ

ಉಡಿ ತುಂಬುವ ಪದ

ಆಶೀರ್ವಾದ ಮಾಡುವ ಪದ

ಬಾಗಿಲು ಕಟ್ಟುವ ಪದ

ಉರುಟಣಿ ಮಾಡುವ ಪದ

ಶುಕ್ರವಾರ ಮತ್ತು ಶನಿವಾರದ ಪದ

ಮಂಗಳಗೌರೀ ಪದ

ಬುಧ - ಬೃಹಸ್ಪತಿ ಪದ

ಮಹಾಲಕ್ಷ್ಮೀ ಮತ್ತು ಶ್ರೀ ಕೃಷ್ಣ ದಾನ ವ್ರತದ ಪದ

ಶ್ರೀ ಹನುಮಂತದೇವರ ಚರಿತ್ರೆ ಪದ

" ಸಂಕ್ಷೇಪ ರಾಮಾಯಣ "

ರಾಗ : ನಾದನಾಮಕ್ರಿಯ  ತಾಳ : ಆದಿ

ಕಂದನೆಂದೆನಿಸಿದ ಕೌಸಲ್ಯಾದೇವಿಗೆ ।

ರಾಮ ಯೆನಬಾರದೆ ।

ಇಂದಿರಾಪತಿ ರಾಮಚಂದ್ರಗೆ ।

ಶ್ರೀ ರಘುರಾಮ ಯೆನಬಾರದೆ ।। 1 ।।

ಶಿಶುವಾಗಿ ಅವತಾರ ಮಾಡಿದ ।

ದಶರಥನಲ್ಲಿ ರಾಮ ಯೆನಬಾರದೆ ।

ಋಷಿ ಯಜ್ಞ ಸಲಹಿ ರಕ್ಕಸರನೆ ।

ಕೊಂದ ಶ್ರೀ ರಾಮ ಯೆನಬಾರದೆ ।। 2 ।।

ನೀಟಾಗಿ ನೆನೆ ಭಾನುಕೋಟಿ ತೇಜ ।

ಶ್ರೀ ರಾಮ ಯೆನಬಾರದೆ ।

ಸಾತ್ವಿಕ ದೈವವೆ ತಾಟಕಾಂತಕ ।

ಶ್ರೀ ರಾಮ ಯೆನಬಾರದೆ ।। 3 ।।

ಪಾದ ನಖವು ಸೋಕಿ ।

ಪಾದ ನಾಶನವಾಗೆ ।

ಶ್ರೀಪತಿ ಕರುಣದಿ ಶಿಲೆಯು ।

ಸ್ತ್ರೀಯಾಗಲು ಶ್ರೀ ರಾಮ ಯೆನಬಾರದೆ ।। 4 ।।

ಸಕಲ ಸದ್ಗುಣ ಪೋಗಿ ಮಿಥಿಲಾ ।

ಪಟ್ಟಣದಲ್ಲಿ ಶ್ರೀ ರಾಮ ಯೆನಬಾರದೆ ।

ತ್ರಿಪುರ ಸಂಹಾರ ತ್ರಿನೇತ್ರನ ಧನುವೆತ್ತಿ ।

ಶ್ರೀ ರಾಮ ಯೆನಬಾರದೆ ।। 5 ।।

ಚೆಲ್ವ ಜಾನಕಿ ಮಲ್ಲಿಗೆಯ ।

ವನಮಾಲೆಯು ಶ್ರೀ ರಾಮ ಯೆನಬಾರದೆ ।

ವಲ್ಲಭಗ್ಹಾಕಲು ಫುಲ್ಲಲೋಚನೆ ।

ಶ್ರೀ ಸೀತಾರಾಮ ಯೆನಬಾರದೆ ।।। 6 ।।

ಮಂಗಳ ಮಹಿಮೆ ಸೀತಾಂಗನೆ ಕೊರಳಿಗೆ ।

ಶ್ರೀ ರಾಮ ಯೆನಬಾರದೆ ।

ಮಾಂಗಲ್ಯ ಬಂಧನ ಮಾಡಿದ ।

ಮಹಾತ್ಮನು ಶ್ರೀ ರಾಮ ಯೆನಬಾರದೆ ।। 7 ।।

ಜಗದೇಕ ಸುಂದರಿ ಜಾನಕಿಯ ಗೆದ್ದ ।

ಶ್ರೀ ರಾಮ ಯೆನಬಾರದೆ ।

ಜಗದೀಶ ಜನಕಗೆ ಜಾಮತನೆನಿಸಿದ ।

ಶ್ರೀ ರಾಮ ಯೆನಬಾರದೆ ।। 8 ।।

ಮುದ್ದು ಜಾನಕಿಯ ಕೂಡಿ ಅಯೋಧ್ಯಕೆ ।

ಬರುತಿರೆ ಶ್ರೀ ರಾಮ ಯೆನಬಾರದೆ ।

ಮಧ್ಯ ಮಾರ್ಗದಿ ಬನಿದ್ದನು ಭಾರ್ಗವ ।

ಶ್ರೀ ರಾಮ ಯೆನಬಾರದೆ ।। 9 ।।

ತನ್ನ ತಾನೇ ಗೆದ್ದು ಧನ್ಯನೆಂದೆನಿಸಿದಿ ।

ಶ್ರೀ ರಾಮ ಯೆನಬಾರದೆ ।

ಬ್ರಹ್ಮ ಶಂಕರರಿಂದಿನ್ನು ಉತ್ತಮನಾದ ।

ಶ್ರೀ ರಾಮ ಯೆನಬಾರದೆ ।। 10 ।।

ಪಟ್ಟಗಟ್ಟಲು ಪರಮೋತ್ಸವ ಕಾಲಕ್ಕೆ ।

ಶ್ರೀ ರಾಮ ಯೆನಬಾರದೆ ।

ದುಷ್ಟ ಕೈಕೆಯ ದುಷ್ಟೂರ ವಚನವ ।

ಕೇಳಿದ ಶ್ರೀ ರಾಮ ಯೆನಬಾರದೆ ।। 11 ।।

ಆ ಲಕ್ಷುಮಿಯ ಮಾತಲಕ್ಷ್ಯವ ಮಾಡದೆ ।

ಶ್ರೀ ರಾಮ ಯೆನಬಾರದೆ ।

ಲಕ್ಷ್ಮಣ ಲಕ್ಷ್ಮಿ ಕೂಡ್ವನವಾಸ ತಿರಿಗಿದ

ಶ್ರೀ ರಾಮ ಯೆನಬಾರದೆ ।। 12 ।।

ಸೋಸಿಲಿಂದಲಿ ಸತಿ ಆದೇನೆಂದಸುರೆಯ ।

ಶ್ರೀ ರಾಮ ಯೆನಬಾರದೆ ।

ನಾಶ ರಹಿತ ಕಿವಿ ನಾಸಿಕನಳಿಸಿದ ।ಶ್

ರೀ ರಾಮ ಯೆನಬಾರದೆ ।। 13 ।।

ದಂಡಕಾರಣ್ಯದಿ ಕಂಡು ಮಾರೀಚನ್ನ ।

ಶ್ರೀ ರಾಮ ಯೆನಬಾರದೆ ।

ಹಿಂದ್ಹೋಗೆ ರಾಘವ ಬಂದ ರಾವಣನಲ್ಲೆ ।

ಶ್ರೀ ರಾಮ ಯೆನಬಾರದೆ ।। 14 ।।

ಘಾತಕ ರಾವಣ ಜಗನ್ಮಾತೆಯನೊಯ್ಯಲು ।

ಶ್ರೀ ರಾಮ ಯೆನಬಾರದೆ ।

ಸೋತು ಜಟಾಯು ಯುದ್ಧವ ಮಾಡಿ । ತಾ ।

ಬೀಳಲು ಶ್ರೀ ರಾಮ ಯೆನಬಾರದೆ ।। 15 ।।

ಒಲಿದು ಸುಗ್ರೀವಗೆ ವಾಲೀ ವಧೆಯ ಮಾಡಿ ।

ಶ್ರೀ ರಾಮ ಯೆನಬಾರದೆ ।

ವಾನರಗಳ ಕೂಡಿ ವಾರಿಧಿ ಕಟ್ಟಿದ ।

ಶ್ರೀ ರಾಮ ಯೆನಬಾರದೆ ।। 16 ।।

ಲೋಕ ಮಾತೆಯ ಲಂಕಾನಾಥ । ತಾ ।

ಒಯ್ದಾಗ ಶ್ರೀ ರಾಮ ಯೆನಬಾರದೆ ।

ಸೀತಾಕೃತಿಯ ನಿಟ್ಟು ಅಶೋಕ ವನದೊಳು ।

ಶ್ರೀ ರಾಮ ಯೆನಬಾರದೆ ।। 17 ।।

ಮಂಡೋದರಿಯ ಗಂಡನ್ನ ದಶಶಿರಗಳು ।

ಶ್ರೀ ರಾಮ ಯೆನಬಾರದೆ ।

ಚೆಂಡನಾಡಿದ ಕೋದಂಡಪಾಣಿಯ ।

ಶ್ರೀ ರಾಮ ಯೆನಬಾರದೆ ।। 18 ।।

ಪ್ರೀತಿಂದ್ವಿಭೀಷಣಗೆ ಪಟ್ಟಗಟ್ಟಿದ ।

ಶ್ರೀ ರಾಮ ಯೆನಬಾರದೆ ।

ಸೀತಾ ಸಮೇತನಾಗಿ ಸಿಂಧು ದಾಟಿದ ।

ಶ್ರೀ ರಾಮ ಯೆನಬಾರದೆ ।। 19 ।।

ಆದಿ ಲಕ್ಷುಮಿ ಕೂಡಿ ಹೋದನಯೋಧ್ಯಕೆ ।

ಶ್ರೀ ರಾಮ ಯೆನಬಾರದೆ ।

ಶ್ರೀದೇವಿಯ ಸಹಿತ ಪಟ್ಟಣ ಹೊಕ್ಕ ।

ಪಟ್ಟಾಭಿರಾಮ ಯೆನಬಾರದೆ ।। 20 ।।

ಭರತ ಸುಮಿತ್ರ ಕೌಸಲ್ಯಗೆ ಸುಖವಿಟ್ಟ ।

ಶ್ರೀ ರಾಮ ಯೆನಬಾರದೆ ।

ಮುಕ್ತಿದಾಯಕ ಮುಂದೆ ಬಿಡದೆ ।

ಕಾಪಾಡುವ ಶ್ರೀ ರಾಮ ಯೆನಬಾರದೆ ।। 21 ।।

ಪತ್ನಿ ವಾರ್ತೆಯ ತಂದ । ಪವನ ।

ಸುತಗೆ ಒಲಿದ ಶ್ರೀ ರಾಮ ಯೆನಬಾರದೆ ।

ಸತ್ಯ ಲೋಕದ ಆಧಿಪತ್ಯವ ಕೊಟ್ಟ ।

ಶ್ರೀ ರಾಮ ಯೆನಬಾರದೆ ।। 22 ।।

ರಾಮ ರಾಮ ಯೆಂದು ಕರೆಯೆ ಭಕ್ತಿಯ ।

ನೋಡಿ ಶ್ರೀ ರಾಮ ಯೆನಬಾರದೆ ।

ಪ್ರೇಮದಿ ತನ್ನ ನಿಜ ಧಾಮವನು ।

ಕೊಡುವೋನು ಶ್ರೀ ರಾಮ ಯೆನಬಾರದೆ ।। 23 ।।

ಅರಸನಾಗಯೋಧ್ಯವನಾಳಿ ಯದು ಕುಲದಲಿ ।

ಶ್ರೀ ರಾಮ ಯೆನಬಾರದೆ ।

ಹರುಷದಿ ಭೀಮೇಶಕೃಷ್ಣನಾಗ್ಯೂದಿಸಿದ ।

ಶ್ರೀ ರಾಮ ಯೆನಬಾರದೆ ।। 24 ।।

ಮುಂತಾದವು. ವ್ರತಾಚರಣೆಯಲ್ಲಿ ಎತ್ತಿದ ಕೈ. ಸುಳಾದಿ ಮತ್ತು ಉಗಾಭೋಗಗಳನ್ನೂ ಭೀಮವ್ವನವರು ರಚಿಸಿದ್ದಾರೆ.

***

" ಶ್ರೀ ಭೀಮೇಶಕೃಷ್ಣ  - 4 "

ಭೀಮವ್ವನವರು ಹೆಚ್ಚಾಗಿ ಸಾಂಪ್ರದಾಯಿಕ ಹಾಡುಗಳನ್ನು ರಚಿಸಿದ್ದಾರೆ.

ಭೀಮವ್ವನವರ ಸಾಹಿತ್ಯ ಗೇಯ ಪ್ರಧಾನವಾದುದು. 

ಅವರ ಪದಗಳು ನಾದಮಯವಾಗಿವೆ. 

ಆದಿ ಮತ್ತು ಅಂತ್ಯ ಪ್ರಾಸಗಳು ಸಹಜವಾಗಿಯೇ ಬರುತ್ತವೆ. 

ನಿರರ್ಗಳವಾದ ಓಟದಲ್ಲಿ ಪದಗಳು ಮೂಡಿ ಬರುತ್ತವೆ. 

ಅದಕ್ಕೆ ತಕ್ಕಂತೆ ಭೀಮವ್ವನವರು ವಿವಿಧ ಬಂಧಗಳನ್ನು ಒಳಸಿಕೊಂಡಿದ್ದಾರೆ. 

ದ್ವಿಪದಿ, ತ್ರಿಪದಿ, ಕಂದ ಪದ್ಯಗಳು, ಬಳಕೆಯಾಗಿವೆ. 

ಸುವ್ವಾಲಿಯ ರೂಪದಲ್ಲಿಯೂ ಕೃತಿಗಳನ್ನು ರಚಿಸಿದ್ದಾರೆ. 

ಹರಪನಹಳ್ಳಿ ಭೀಮವ್ವನವರ ವದನಾರವಿಂದದಲ್ಲಿ ಪದ್ಯ ರೂಪದಲ್ಲಿ ಹೊರ ಹೊಮ್ಮಿದ ಸರಳ ಸುಂದರವಾದ......... 

" ಶ್ರೀ ಶ್ರೀನಿವಾಸ ಕಲ್ಯಾಣ ". 

ಅಪ್ಪ ವೆಂಕೋಬನ ನೇತ್ರದಲಿ । ನೋ ।

ಡಿ ಪವಿತ್ರಳಾದೆನೋ ಯಿಂದಿಗೆ ।

ತಪ್ಪುಗಳೆಲ್ಲ ನಿನಗರ್ಪಿಸುವೆ ನೀನೆನ್ನ ।

ಒಪ್ಪಿಕೊಳ್ಳಬೇಕೋ ತಿಮ್ಮಪ್ಪಾ 

ಕರುಣಾನಿಧಿಯೇ ।। ಪಲ್ಲವಿ ।।

ಹೆದರದೆ ಭೃಗು ಋಷಿಯು ।

ಒದೆಯ ಪಾದಗಳಿಂದ ।

ಎದೆಯ ಮೇಲಿರುವ ಲಕ್ಷ್ಮೀ ।

ಕದನ ಮಾಡುತವೆ 

ಕೊಲ್ಲಾಪುರಕೆ ನಡೆತರಲು ।।

ಒದಗಿ ವೈಕುಂಠ ಬಿಟ್ಟು ।

ಯದುನಾಥ ಯಾರಿಲ್ಲದಂತೆ 

ಗುಡ್ಡವ ಸೇರಿ ।

ಇದು ನಿನಗೆ ಸದನಾಯಿತೋ 

ದೇವಾ ।। ಚರಣ ।।

ಹುತ್ತದೊಳಗಡಗಿ ನೀ 

ಗುಪ್ತದಿಂದಿರುತಿರಲು ।

ಉತ್ತಮ ಗೋವು ಬಂದು ।

ನಿತ್ಯದಲಿ ಕ್ಷೀರವನು 

ಕರೆಯೆ ಗೋವಳನಿಂದೆ ।।

ನೆತ್ತಿಯ ನೊಡೆದುಕೊಂಡು ।

ಸಿಟ್ಟಿನಿನ್ದಲಿ ಚೋಳ-

ರಾಯಗೆ ಶಾಪವನು ।

ಕೊಟ್ಟ ಕಿರೀಟವನು ಇಟ್ಟು 

ಮೆರೆಯುವೆ ದೇವಾ ।। ಚರಣ ।।

ಮಾರಮಣನೆ ನಿನ್ನ 

ಗಾಯದೌಷಧಕ್ಕೋಗಿ ।

ಭೂರಮಣನ್ವರಾಹನಿಂದ ।

ನೂರು ಪಾದ ಭೂಮಿ 

ಕೊಟ್ಟರೆ । ಸಾಕೆಂದು ।।

ಪಾಯದಿಂದದ್ವ್ಯಾಪಿಸಿ ।

ತಾಯಿ ಬಕುಳಾದೇವಿಯಿಂದ । ಪೂ ।

ಜೆಯಗೊಮ್ಬೋ ಶ್ರೀಯರಸು 

ನಿನಗೆ ಸರಿಯೇ ದೇವಾ ।। ಚರಣ ।।

ನಾಟಕಧಾರಿ ಕಿರಾತ 

ರೂಪವ ಧರಿಸಿ ।

ಬೇಟೆಗೆನುತಲಿ ಪೋಗಲು ।

ತೋಟದಲಿ ಚೆಲ್ವ 

ಪದ್ಮಾವತಿಯ ಕಡೆಗಣ್ಣ ।।

ನೋಟದಿ ಮನಸೋಲಿಸಿ ।

ಬೂಟಕತನದಿ 

ಜಗಳಾಟವನ್ನೇ ಮಾಡಿ ।

ಪಾಟುಬಟ್ಟು ಕಲ್ಲಲೇಟು 

ತಿಂದೆಯೋ ದೇವಾ ।। ಚರಣ ।।

ಗದಗದನೆ ನಡುಗುತಲಿ 

ಕುದರೆಯನು ಕಳಕೊಂಡು ।

ಪದ್ಮಾವತಿ ವಾರ್ತೆಯನ್ನು । ಬಳಿಯ ।

ಲಿದ್ದ ಬಕುಳ ಮಾಲಿಕೆಗೆ 

ಬೋಧಿಸಿ । ಕಲಿ ।।

ಸಿದಾಕಾಶನಲ್ಲಿ ಚದುರ ।

ಮಾತಿನ ಚಪಲ 

ಕೊರವಂಜಿ ನೀನಾಗಿ ।

 ಹೇಳಲು ಎಲ್ಲಿ ಕಲಿತೆಯೋ 

ಮಹಾದೇವಾ ।। ಚರಣ ।।

ಬಂಧು ಬಳಗವ ಕೋಡಿ 

ಭಾರೀ ಸಾಲವ ।

ಮಾಡಿಕೊಂಡು ಕರವೀರದಿಂದೆ ।

ಅಂಡಲೆದು ಕರೆಸಿ 

ಕಾಣುತಲಿ । ಲಕ್ಷ್ಮೀಯನಪ್ಪಿ ।।

ಕೊಂಡು ಪರಮ್ಹರುಷದಿಂದ ।

ಮಂದಗಮನೆಯೆ ನಿನ್ನ 

ಮಾತು ಲಾಲಿಸಿ ।

ಮಾಡಿಕೊಂಡೆ ಪದ್ಮಾವತಿಯ 

ಅಂದೆಯಾ ಎಲೆ ದೇವಾ ।। ಚರಣ ।।

ಆಕಾಶರಾಜ ಅನೇಕ 

ಹರುಷದಿ ಮಾಡಿ ।

ತಾ ಕನ್ಯಾದಾನವನ್ನು ।

ಹಾಕಿದ ರತ್ನ ಮಾಣಿಕ್ಯ 

ಕಿರೀಟವನು ।।

ಬೇಕಾದಭರಣ ಭಾಗ್ಯ ।

ಸಾಕಾಗದೇನೋ ಬಡವರ 

ಕಾಡಿ ಬೇಡುವುದು ।

ಶ್ರೀಕಾಂತ ನಿನಗೆ 

ಸರಿಯೇ ದೇವಾ ।। ಚರಣ ।।

ಹೇಮ ಗೋಪರದಿ 

ವಿಮಾನ ಶ್ರೀನಿವಾಸ ।

ದೇವರನು ನೋಡಿ ನಮಿಸಿ ।

ಕಾಮಿಸಿ ಕಂಡೆ 

ಹೊನ್ನೊಸ್ತಿಲು ಗರುಡ ।।

ಗಂಬದ ಸುತ್ತ ಪ್ರಾಕಾರವೋ ।

ಸ್ವಾಮಿ ಪುಷ್ಕರಣಿಯಲ್ಲಿ 

ಸ್ನಾನ ಪಾನವ ಮಾಡಿ ।

ನೋಡಿದೆನೋ ನಿನ್ನ 

ಭಕುತರ ದೇವಾ ।। ಚರಣ ।।

ಪನ್ನಗಾದ್ರಿ ವೆಂಕಟನ್ನ 

ರಥ ಶೃಂಗಾರ ।

ವರ್ಣಿಸಲಳವೆ ನಮಗೆ ।

ಕಣ್ಣಾರೆ ಕಂಡೆ 

ಗರುಡೋತ್ಸವದಲಂಕಾರ ।।

ಇನ್ನೆಲ್ಲೂ ಕಾಣೆ ಜಗದಿ ।

ಅನ್ನಪೂರ್ಣೆಯಾ ನೋಡೆ 

ಅಧಿಕ ಗಂಟೆಯ ನಾದ ।

ಎನ್ನ ಕಿವಿಗಾನಂದವೋ 

ದೇವಾ ।। ಚರಣ ।।

ಪಾದದಲ್ಲೊಪ್ಪೋ 

ಪಾಗಡಾರಳಿ ಕಿರಿಗೆಜ್ಜೆ ।

ಮೇಲಲವೋ ಪೀತಾಂಬರ ।

ನೀಲ ಮಾಣಿಕದ 

ಉಡಿದಾರವೋ ವೈಜಯಂತೀ ।।

ಮಾಲೆ ಶ್ರೀವತ್ಸದಾ ಹಾರ ।

ಮೇಲಾದ ಸಾರಿಗೆ ಸರ 

ಪದಕವೋ । ಕಮಲ ।

ದಳಾಯತಾಕ್ಷನ

ನೋಡಿದೆ ದೇವಾ ।। ಚರಣ ।।

ಕರಗಳಲ್ಲಿಟ್ಟು ಕಂಕಣ 

ಕಡಗ ಭುಜಕೀರ್ತಿ ।

ವರ ಶಂಖ ಚಕ್ರಧಾರಿ ।

ಗಿರಿಯೇ ಭೂವೈಕುಂಠವೆಂದು 

ತೋರುತ ನಿಂತ ।।

ಶಿರದಿ ಕಿರೀಟ ಧರಿಸಿ ।

ಬಿಳಿಯ ತ್ರಿನಾಮ 

ಭೀಮೇಶಕೃಷ್ಣನ ಮುಖದಿ ।

ಹೊಳೆವ ಮೂರ್ತಿಯ 

ನೋಡಿ ಹೇ ದೇವಾ ।। ಚರಣ ।।

" ವಾಯುದೇವರ ಅವತಾರತ್ರಯ ಸ್ತೋತ್ರ ಪದ "

ಕೊಡು ಕೊಡು ವರವ 

ಕಿಂಕರ ನಾನಲ್ಲೆ ।

ಪಿಡಿ ಕೈ ಹೂವಿನ್ಹಡಗಲಿ 

ಹನುಮಂತರಾಯಾ ।। ಪಲ್ಲವಿ ।।

ನೂರುಗಾವುದ ಶರಧಿಯ 

ದಾಟಿ ಲಂಕೆ ।

ಊರು ಸುಟ್ಟು ಬಂದ 

ಧೀರ ನೀನಲ್ಲೆ ।। ಚರಣ ।।

ಕ್ರೂರ ಕೌರವರ ಮಡುಹಿ 

ಕುರುಪತಿ ರಾಜ್ಯ ।

ರಾಯ ಧರ್ಮಗೆ ಪಟ್ಟ 

ಕಟ್ಟಿದೆಯೆಲ್ಲ ।। ಚರಣ ।।

ಮಾಯಾವಾದಿಗಳ ಮರ್ಧಿಸಿ 

ಮಧ್ವಮುನಿಯೇ ।

ಭೀಮೇಶಕೃಷ್ಣನಧಿಕೆಂಬೋ 

ಬಿರುದೆತ್ತಿದ್ಯಲ್ಲ ।। ಚರಣ ।।

" ಭೀಮವ್ವನವರ ಕಣ್ಣಲ್ಲಿ ಶ್ರೀ ಮಂತ್ರಾಲಯ ಪ್ರಭುಗಳು "

ನೋಡಿರಿ ರಾಘವೇಂದ್ರರ ।

ಮಾಡಿರಿ ನಮಸ್ಕಾರ ।

ಬೇಡಿದ ಇಷ್ಟಾವರ ।

ನೀಡುವ ನಮ್ಮ ಯತಿವರ ।। ಪಲ್ಲವಿ ।।

ಮಂತ್ರಾಲಯದಿ ನಿಂತಿಹ ।

ಚಿಂತೆಗಳ ಪರಿಹರಿಸುವ ।

ಕಂತುಪಿತನನಂತ ಗುಣ । ತ ।

ನ್ನಂತರಂಗದಿ ಸ್ತುತಿಸುವ ।।

ಇಂಥಾ ಯತಿಗಳ ಕಾಣೆ । ಹರಿಯೇ ।

ಕಾಂತ ಭಕ್ತರೆನಿಸಿಕೊಂಬುವ ।

ಮಂತ್ರಾಕ್ಷತೆ ಫಲ ನೀಡಿ ।

ಸಂತಾನ ಸಂಪತ್ತು 

ಕೊಡುವರ ।। ಚರಣ ।।

ಭೂತ ಪ್ರೇತ ಭಯಗಳ ।

ವಾತ ಪಿತ್ತ ವ್ಯಾಧಿಗಳ ।

ಸೇತು ಕುಷ್ಟ ರೋಗಗಳ ।

ಪಾತಕಿಯರ ಪಾಪಗಳ ।।

ಪ್ರೀತಿಲಿಂದ ಕಳೆವರೋ ।

ಪ್ರಖ್ಯಾತರಾಗಿ ಬೆಳೆವರೋ ।

ಭೂತಳದಿ ಸನ್ನಿಹಿತರಾದ ।

ಸೀತಾಪತಿ ನಿಜಮಾತ-

ರೆನಿಸೋರೋ ।। ಚರಣ ।।

ಭಜಿಸೆ ಭಕ್ತರ ನೋಡುವ ।

ಸದನಕೆ ಬಂದು ಕೂಡುವ ।

ಒದಗಿದಾಪತ್ತು ದೂಡುವ ।

ಮುದದಿ ತಾ ದಯ ಮಾಡುವಾ ।।

ಅಜನನಯ್ಯನ ಕೊಂಡಾಡುತ ।

ತುಂಗಾ ನದಿಯ ತೀರ ವಾಸವಾಗಿ ।

ಹೃದಯದೊಳು ಭೀಮೇಶಕೃಷ್ಣನ ।

ಪದವ ಭಜಿಸಿ ಪಡೆವರಾನಂದವ ।। ಚರಣ ।।

" ನಿರ್ಯಾಣ "

ಕ್ರಿ ಶ 1903 ರ ಪುಷ್ಯ ಶುದ್ಧ ದ್ವಾದಶೀ ದಿನ ವೈಕುಂಠಕ್ಕೆ ಪ್ರಯಾಣ ಬೆಳೆಸಿದರು.

" ಉಪಸಂಹಾರ "

ಭೀಮವ್ವನವರ ಕೃತಿಗಳಿಗೆ ಪುರಾಣ ಪ್ರಪಂಚವೇ ಆಧಾರಭೂತವಾಗಿದೆ. 

ಆದರೆ ಭೀಮವ್ವನವರು ಪುರಾಣದ ಜಗತ್ತನ್ನು ಲೌಕಿಕದ ನೆಲೆಗೆ ಇಳಿಸುತ್ತಾರೆ. 

ಕಥೆಗಳನ್ನೂ, ಕಥೆಗಳಲ್ಲಿ ಬರುವ ಪಾತ್ರಗಳನ್ನು ಮಾನವೀಯವಾಗಿಸುತ್ತಾರೆ. 

ಭೀಮವ್ವನವರ ಉಪಲಬ್ಧ ಸಾಹಿತ್ಯದಲ್ಲಿ ತಾತ್ವಿಕ ರಚನೆಗಳು ಬಹಳ ಕಡಿಮೆ. 

ದ್ವೈತ ಸಿದ್ಧಾಂತದ ತತ್ತ್ವಗಳನ್ನು ಸುವ್ವಾಲಿಯ ಬಂಧದಲ್ಲಿ ನಿರೂಪಿಸಿದ್ದಾರೆ. 

ಸಾಂಸಾರಿಕ ವಲಯದಲ್ಲಿದ್ದು, ನಿರಕ್ಷರಸ್ಥರಾದ ಭೀಮವ್ವನವರು ಅತ್ಯಮೂಲ್ಯವಾದ ಸಾಹಿತ್ಯವನ್ನು ಸೃಷ್ಟಿಸಿದ್ದಾರೆ. 

ಭೀಮವ್ವನವರ ಸಾಹಿತ್ಯಗಳು ಜನಪ್ರಿಯವಾಗಿವೆ. 

ಭೀಮವ್ವನವರ ಸಾಹಿತ್ಯ ಆಧ್ಯಾತ್ಮಿಕ ದೃಷ್ಟಿಯಿಂದ ಜನ ಮಾನಸದಲ್ಲಿ ಸ್ಥಿರವಾದ ಸ್ಥಾನವನ್ನು ಪಡೆದಿದೆ.

by ಆಚಾರ್ಯ ನಾಗರಾಜು ಹಾವೇರಿ 

     ಗುರು ವಿಜಯ ಪ್ರತಿಷ್ಠಾನ

****


aradhane on
18 Jan 2019






No comments:

Post a Comment