Tuesday 2 July 2019

kanaka dasaru kanakadasa kaginele 1606 ಕನಕ ದಾಸರು





Sri Kanaka Dasaru

kArtIka bahuLa tritIya is the jayanti of shri Kanaka dAsaru.

Period: 1509-1609

gurugaLu: shri vyAsarAja tIrtharu

niryANA: kAginele

Amsha of shri yamadharma rAjaru

ಯಮಾಂಶ ಪರಾಭಕ್ತೋ ಸುಪ್ರಸನ್ನೋ ಹರಿಃ ಸ್ವಯಮ್ |
ಯಸ್ಯಾಚಾರ್ಯಃ ವ್ಯಾಸರಾಯಃ ತಮ್ ವಂದೇ ಕನಕಾಭಿದಮ್ ||

To Kanaka who is an incarnation of Yama, great devotee who realised Sri Hari & whose Guru is Sri Vyasaraya, I bow to him in reverence.

info from sumadhwaseva.com--->

Janma naama – Timmappa Nayaka –
popularly called as Kanakappa Nayaka
Ankitha – Baadadadi keshava / kaginele adikeshava
Birth Day – Kartheeka Krishna Triteeya
Period – 1508 – 1606
Ashraya Gurugalu – Sri Vyasarajaru
Sri Kanakadasaru has written more than 200 devaranamaas.
Birth Place      –  Baada
Niryana place – Kaginele in Haveri District
Birth Caste     –  Kuruba (shepherd)

यमांशस्य पराभक्त्या सुप्रसन्नो हरि: स्वयं।
यस्याचार्यो व्यासराय: तं वंदे कनकाभिधं।


ಯಮಾಂಶಸ್ಯ ಪರಾಭಕ್ತ್ಯಾ ಸುಪ್ರಸನ್ನೋ ಹರಿ: ಸ್ವಯಂ|
ಯಸ್ಯಾಚಾರ್ಯೋ ವ್ಯಾಸರಾಯ: ತಂ ವಂದೇ ಕನಕಾಭಿಧಂ|


Sri Kanakadasaru – even though was born as a Kuruba, has been considered not a “daasa” but as a “Haridaasaru”, and is one of the contemporaries of Sri Vyasarajaru, Sri Vadirajaru, Sri Vaikuntadasaru, Sri Purandaradasaru, Sri Krishnadevaraya.
During his period he had close association with Sri Vyasarajaru, Purandaradasaru, etc.  Vyasarajaru was fond of Kanakadasaru, even though he belonged to a lower caste.
Thimmappa Nayaka lost his father early and he was brought up by his mother Bachamma. He learnt wrestling, hunting, sword fighting, later he became paaLayagaara.  He was collecting tax from the people and was remitting to the Vijayanagar Kings.  During war, he used to fight for Vijayanagar kingdom.  Once when he was digging the land, he got huge wealth.  Out of this he constructed a beautiful temple at Kaginele and got installed Adikeshava murthy there.  He was doing the daana of all his wealth found amongst the poor and the people used to call him as “Kanakappa Nayaka”.

Kanaka got vairaagya –   Even though he got the temple built for Adi Keshava, he could not visit the temples frequently as he was busy with his employment with the King and family responsibility  Once in a way, he used to visit the Kaginelle temple.    He continued his daana dharma.Once Adikeshava came in his dream and told him to became his “daasa”, which he ignored.   He was worshipping his mother as god.    After some time, both his mother and wife were dead.    Even this didn’t made him as a daasa.   Srihari again came in his dream and told him to become a daasa, which he again refused.    But Srihari’s sankalpa is different.

Once when Vijayanagar Kingdom was fighting with the enemy team.  Kanaka Daasa also joined Vijayanagar fighters and was fighting fiercely.  During the course of the fight, the enemy troup attacked Kanaka and he was severely hit and blood was also coming out of his body, he lost his sword also.  Then he shouted “Aadi Keshava” and fell.  He lost his consciousness.   The enemy troup on seeing him thought that he is dead and they left.  Then Adikeshava came in the disguise of a man and treated him.  Kanaka Nayaka, gaining his consciousness, on seeing the man enquired about him and he told that he is Adikeshava, and he again advised him to become his daasa.   Now, Kanaka could not refuse Adikeshava’s word and he agreed to become daasa.  He gave all his wealth as daana to the deserving.  He reached Adikeshava temple.  Again Adikeshava came in his dream and advised him to go to Vyasarajaru for accepting Shishyatva. During that time Sri Vyasarajaru was constructing Vyasasamudra in Madanapalli.  Kanaka requested for mantropadesha, which Sri Vyasarajaru gave him after some time.  Thus he got vairagya and came to “daasatva” deekshe.
Some incidents – 
The other shishyas could not tolerate the same and they used to trouble Kanaka in one way or the other.    Sri Vyasarajaru wanted to make the other shishyas to understand about the shreshtatva of Kanakadasaru.    One day Vyasarajaru asked all his shishyas as to “Who amongst you will go to moksha”?   Every body were silent.  Vyasarajaru looked at Kanakadasaru for the answer, who said ” ನಾನು ಹೋದರೆ ಹೋದೇನು?”.  (naanu hOdare hOdEnu) – This made the other shishyas angry.   Then Vyasarajaru asked to explain as to what he said.  Kanaka said ” one who loses ahankaara may go go Moksha.  i.e., if the selfish words like I, myself, me words which are part of ahankara are not there, then one may go to Moksha.”  Vyasarajaru who was known of his intentions, made the other shishyas understand about Kanaka and his words.

Once when Sri Vyasarajaru asked all his shishyaas to what is there in his handful (mushti).  No one could say.  Then Kanakadasaru told “it is vaasudeva saligrama”.  When Vyasarajaru unfolded his hands, there was vasudeva saligrama.  This incident has been explained by Sri Purandaradasaru in his devaranama :kanakadaasana mEle dayamaaDalu vyaasa muni…..”

Udupi Krishna gave darshana to Kanakadasaru –   Once Kanakadasaru went to Udupi to have the darshana of Krishna paramathma.  But as he was from a lower caste, he was not allowed inside for the darshana.    Having denied the darshana, Kanakadasaru never repented,  he had the great respect for the sampradaya.   Even though he could not see the direct darshana, he had the darshana of Krishna paramathma through his inner eyes.  He was singing on the Western side of the temple.   Throughout the night also he was doing the bhajana.  At that time, an earthquake happened and a small crack appeared on the wall of the temple.   Through this crack, Kanakadasaru was able to have the darshana of Krishna paramathma.  Vadirajaru having noticed this,  having known of the yogyate of Kanakadasaru, and with due respect to the great daasa, he made that crack enlarged on the wall as a window instead of having it plastered.   Thus that window got the name “Kanakana kindi”.
However, some people have tried to say that the lord Krishna himself turned from East to west.  This is not acceptable.  Krishna never turned.    Acharya Madhwa had installed the icon of Krishna facing west only.  All the shrines of ashta mutts are also facing west at Udupi.  The architectural plan of the temple and all the temples at Udupi also say that the idol also facing West only.  Sri Surottama Tirtharu, the poorvashrama brother of Sri Vadirajaru also has written in his Teeka on Sanyasa paddati that Acharya Madhwa had installed the idol facing west.    In view of the above, the idol turning from east to west is an extra fitting.    Even Kanakadasaru himself would not agree to go against the wishes of Acharya Madhwa.  Sri Krishna paramathma, the sarvottama, knows the intentions of Vayudevaru, who had installed him.    This would be against Acharya Madhwa’s intentions, if one says to have Krishna idol turned.
Added to this – there is no reference from Haridasa saahitya or Vyasa saahitya that the idol of Krishna turned.    None of the daasa Chatustaya, have recorded the turning of the idol.  Even Kanakadasaru, has not recorded it in any of his keerthanaas.
As such, Krishna does not have turned.  He must have given the darshana to Kanaka when the wall had crack at that time.

Literal works –
  1. Nala Charite – It is a love story of Nala Damayanti with 481 stanzaas.
  2. Hari Bhaki Saara – It is a bhamini Shadpadi poem with 110 stanzaas
  3. Nrusimhavatara – It is a grantha on Narasimhavatara
  4. Ramadhanya Charite –  Battle between ragi and rice, which both claimed their superiority who sought justice with Rama, which he proves the superiority of ragi over rice.  It is interpreted as poverty and humility being upheld by Dasaru above material wealth. Even today ragi is food of the poor compared to rice. 
  5. Mohana Tarangini – It is a novel
  6. Mundigegalu
  7. Devaranamagalu
  8. Tatvapadagalu

Kanakadasaru was a Harisarvottamatva pratipaadaka – 

See the Quiz type Hari Sarvottamatva pratipadane by Sri Kanakadasaru in his Haribhakti saara (shloka 25)


Collection by Narahari Sumadhwa
source : Sri Kanakadaasavirachita “Haribhaktisaara” by Dr Vyasanakere Prabhanjanacharya.

know more:-


Part 1 – Devaranamagalu – click


Part 2 – Devaranamagalu – click


Part 3 – Mundigegalu – click


Part 4 – Kanakadasaru & Harisarvottamatva – Click



Part 5 – Harisarvottamatva stapane songs by Kanakadasaru – Click


**********

1. On the holy occasion of 509th birth anniversary of Sri Kanakadasa, offering humble obeisances to him through this thread.
2. Timmappa (would-be Kanaka) was born in c.1508 to Beerappa & Bachchamma. Beerappa was a palegar of Bada village & was serving Vijayanagara
3. Bada village was a strategic & vantage point for Vijayanagara empire as the road leading to port city of Goa was passing through it.
4. Timmappa who lost his father at young age took over the reins as palegar. Luck got him a huge treasure of gold (kanaka) & precious stones
5. Since then people started calling Timmappa as Kanaka Nayaka. Kanaka was trained in warfare & was in-charge of a regiment at Bankapura.
6. He had a deep love for his wife. But she died at young age. Kanaka got devastated with this incident. But he continued his career.
7. At his time, quite often, Vijayanagara & Bijapur were at war to wrest control over Goa. Kanaka seems to have fought in one such battle!
8. He was severely wounded & was almost dying on the field. A old man brought water for him&said "become my dAsa. Will heal your wounds."
9.Kanaka recalled a recurring dream in which his family God Chennakeshava, like this old man, was repeatedly asking him to become His dAsa.
10. The battle, the wounded body & the changed mindset made Kanaka Nayaka to become Kanaka Dasa. 'Adikeshava' became his 'ankitanAma.'
11. Since then, Kanakadasa traveled all over Vijayanagara Empire & living to his warrior trait, conquered it as a mendicant saint-singer.
12.At Hampi, he met with his mentor Sri Vyasaraya &Karnata Sangeeta Pitamaha Sri Purandaradasa & got enriched by their patronage/friendship
13. 13. The trio of Vyasaraya, Purandara & Kanakadasa forever turned the Vijayanagara Empire into the capital of Bhakti & haridAsa movements
14. Together, they transformed the just rule of Krishnaraya into a golden epoch of not Vijayanagara alone but of S. Indian history itself.
15. Kanaka's love for his departed wife has taken the form of 'mOhanatarangiNI' a kAvya written by him probably when he was 35-36 yrs old.
16. Literary experts opine that the description of Dwaraka in Kanaka's mOhanatarangiNi is nothing but the description of Hampi city itself!
17. The literature of post-mOhanatarangiNi by Kanaka is focused on the darker side of the samsAda & its bondage that bring pain & agony.
18. His songs are full of deep mysticism. His words/phrases are like unfathomable codes of universe's greatest secrets. Tough nuts to crack!
19. He himself said in one of his kritis that his enigmatic writings are "ಕನಕನಾಡಿದ ಗುಟ್ಟು" whose meanings known only to God Adikeshava.
20. There are different versions as to where did he pass away. One version says he entered Tirumala temple & vanished [into God Shrinivasa]
21. Another version says that he died at Kaginele village where he constructed a temple for his tutelary god, Adikeshava.
22. Wherever he might have left the mortal body, his immortal literature is reverberating throughout the land for last 500 yrs.
23. ಯಮಾಂಶ ಪರಾಭಕ್ತೋ ಸುಪ್ರಸನ್ನೋ ಹರಿಃ ಸ್ವಯಮ್ |
ಯಸ್ಯಾಚಾರ್ಯಃ ವ್ಯಾಸರಾಯಃ ತಮ್ ವಂದೇ ಕನಕಾಭಿದಮ್ ||


24. To Kanaka who is an incarnation of Yama, great devotee who realised Sri Hari & whose Guru is Sri Vyasaraya, I bow to him in reverence.

*****

Info from madhwasaints.wordpress.com--->


Sri Kanaka daasa has composed numerous hymns like Sri Purandara daasa. Before becoming a daasa he was the chief of the kuruban tribe. It was considered a low community in the society those days. But still he was leading a royal life being the chief of that sect.
Thimanna was the name know by all instead of Kanaka in his place Kanigela in Karnataka. He was very strong at warfare and would defeat everyone at the battlefield. On the otherside he was very devoted to god and he has also built a temple to Lord Adhikesava.
Though he was victorious over everyone, he once was defeated with great defeat and severe wounds in his body. He started praying his Lord Adhikesava for his situation. Suddenly he heard a divine voice,
‘Kanaka, if you want to get rid of all your pains and sufferings,  you should give up all your wealth and become a Daasa.’
Kanaka Nayak asked first to relieve him out of pain.
‘First assure me that you’ll become a Daasa and immediately your wounds will be healed’ .
Kanaka Nayak felt hard to believe but wanted to test and told “Yes”. That very moment all his wounds started vanishing. Thus the almighty tells him that he should become a daasa and orders him to go to Sri Vyasaraaja for initiation.
*********

info from dvaita.org--->

Sri Kanaka Dasaru (1508-1606)
One of the most remarkable saints of the period of Purandara was Kanaka Dasa of Kaginele. He was a great disciple of Vyasarja, though a shephard by birth and great critic of caste hierarchy. Kanaka was born to Biregowda and Beechamma, at Bada and hew as a saiva in the beginning, and later on became a close follower of Vaishnavism, and a devoted Bhakta of Tirupati Venkateshwara whom he visited often, in spite of the hazardous nature of the journey up the hills. By reason of his devotion to Venkatesha and contacts with the archakas of the temple, there is a belief that Kanaka was a Vaishnavaite of the Ramanuja School, and never accepted a Vaishnavite of the Ramanuja school, and never accepted a Taratamya aspect of Madhva philosophy, as is borne out in the opening of his work "Mohana Tarangini': "Sattvikollasa Sri Ramanuja Muni Saranu!!!".
But Kanaka Dasa spent youth and his later years most in the company with Sri Vyasaraja, who spoke in admiration of him as he did of Purandara. Kanaka was of the warrior community, perhaps his defeat in the field of battle, directed him to the path of devotion. He was already an author of Narasimha stora, Ramadhyana Mantra, Mohanatarangini before he became a follower of Sri Vyasaraja and followed most of the tenets of Madhva religion.
He never became a Madhva though he accepted the Taratamya Tattva in the hierarchy of God like Brahma, Vayu, Girisha and others. Perhaps, he was already very much influenced by Sri Vyasaraja and his tenets before he gave to the world Nala Charitre and Haribhati Sara. H was essentially, a Madhva mystic seeing the manifestation of Keshava in the meanest creation as well as in the highest, coloured by all the attributes of God and partaking of divine powers. There is a popular story that Kanaka being rejected entrace at the temple at Udipi, went round the Prakaram and burst in tears of song, appealing to the Lord to give darshan when the idol turned round, made a slit in the wall where Kanaka sat and give darshan to him. He composed hymns in moments of exaltation and when he sang them, he felt himself enveloped with melody and ecstatic lyric poetry.
Most of the compositions of Kanaka have the Mudrika Kagineleyadi Keshava There is a class of compositions called Kanaka Mundige full of abstract imagery, subtlety of metaphysics and inscrtable implications, challenging the finest in the Bhakta.
Kanaka in many of his Padas, reveals the unity and universality of spiritual experience, and flouts the iniquity of caste distinction and prejudices, born out of race, creed and class divisions. He is perhaps, the only great non-brahmimical saint who by his Aparoksha Jnana and glimpses of the Absolute, neutralised the dissidences of Caste and groups and attempted at the solidarity of all castes by abrogating references to Jati, Kula and other distinctions. Vaidika and Avaidika distinctions are invalid and only Bhakti is valid against the Absolute. Moksha Sadhana Samagram Bhaktireva Gariyasi!. There is no separate regions in the empire of Bhakti, no distinctions of caste, class, creed, sex and servitude; Dharma tapas and Acara, are not correlates of the absolute. Bhakti is the only means by which emancipation from Samsara can be realised. Every one born in this world has the fundamental right to attain the Absolute by Bhakti. The Bhakta transcends the limitations of Varna and Asrama Dharma. Sri Vyasaraja who had this intuition, treated Kanaka though the lower order, on the same footing of equality with the rest. Very often the Guru had to suffer embarrassment and veiled criticsm of his followers for the preferences he showed to Kanaka and Purandara, whi delighted the bhaktas by their heavenly compositions.
Kanaka was totally absorbed in Hari Keshava! and he saw the vision of the Lord in the mountains, in moonlight, in sun-set, in living plants, in the flowing stream, in the lovely face of the child and the wrinkles of the old. He was possessed of Hari's invisible transcendental Beauty. Kanaka disdained servility and service at others feet or wandering for the satisfaction of the belly like a street dog without any sense of self-respect. Like Purandara, Kanaka suffered poverty, privation, degradation, distress, acute misery without a wife or any soul to comfort him. He was humbled and motified in the flesh by the visitations of misfortune. But undaunted, he struggled hard in this Dark night to find a sheet anchor at the feet of the Guru and through his ministrations to gain the glimpse of the divine. He pleads for protection against sensuous temptations, sins of the spirit and aberrations of intellect and will. Vyasaraja nursed this intuitive presentiments in Kanaka and enabled him to blossom out into mystical ectasies in the same manner he had done for Purandara.
Kanaka made supreme effort in reforming the lower castes, weaning them away from ignorance, superstition and barbaric practices, in order to favour the growth of Bhakthi and devotion in them. His love of his own people compelled him to disregard his own life and to shed the blood of martyr for the sake of their transformation into a life of Ahimsa. God does not ask for blood, what he wants of you is only Bhakthi.
The body is sacred; the sense of the sacred is an ultimate category of the human soul. It is of infinite worth and therefore imposes an absolute obligation. Kanaka says "This body is Yours; life within it is yours, the power in the ear, the vision in the eye, the pleasure of fellowship, and participating in the fragrance and ebullition of life and the enjoyment of the senses are all Yours. As the body is to be in tune with the holy spirit, Kanaka prepares himself for the journey to meet his Lord. O! Hari, never do I desire the company of the wicked who are unrighteous quarrelsome, arimonious, enamoured of the plesure of Samsara and of women and wine and who do not know the importance of the Vedas. Oh! Kaginele Adikeshava, remove these affilctions, arising from the association of the wicked'.
Kanaka is conscious that the senses are inexpungable elements of life and their eradication involves considerable penance and self-denial. It was no easy task to keep away from temptation and exempted from their irrestible charm. "What can I do? Just like the mouth fascinated by the luminosity of the flame jumps into it, so too, my eyes dart at beautiful and elegantly ornamented women. I fall down to the ground like the bee that has sucked the fragrance of the Champaka, at the fragrance of the flowers worn by women whose steps resemble the 'mandagamana' of an elephant. I die like the fish that has swallowed the worm at the tip of the angler's stick. When I think of the nectar on the lips of young women, Oh! Adikeshava, Thou art my guide, help me to fix my mind on Your Lotus feet".
Kanaka is deeply conscious of the painful aspects of Samsara and worldly life. The body is like a bubble on the surface of water and all the actions of the body are an illusion,which has no power, no beloning or possessions. It is the intoxication of pride that persuades him to imagine himself to be what he is not in reality, to believe that he is the crown of creation, quite oblivious of the transmigration of his soul through several births, conceived in sin, born in sin, living in sin and ending his life in sin. Man is so engrossed in earning food for his belly, that he steals the property of others, tells falsehoods, seeks ostentation and display, and does a hundred things which bely his fundamental nature.
In the context of allurements of the Senses, he talks of caste, of several distinctions which are man made and not God made. The world talks of caste but what is the caste of righteous? Is not a lotus which grows in the bottom of the pool in mud brought and used in worshipping God? God's bodies are pasted with the musk, obtained from the musk cat. To what caste does Narayana, Lord of the World and Iswara Lord of Parvati belong? What is the caste of the Soul, of Siva and of the principal organs of knowledge? When Adikeshavaraya, the indweller is pleased where does the question of caste remain?
When Kanaka was questioned by the Mahant of the Tirupati temple he replied What is the caste to me who is intoxicated with the love of Adikeshava? In another place, Kanaka condemns hypocracy in the name of sanctity and such other deceits, sins and wickedness practised by the people. What is the use of practising meditation and penance without realising the true meaning of the Vedas and the nature of the Primeval Being?
Kanaka pins his faith in the Lord, in all His unity and Absoluteness with the result he repudiates Taratamya and worship of Yellamma, Mari Durga, Chowdi and other goddesses. 'Oh! Parama Hamsa! Thou art the ocean of mercy. I am a microscopic creature imbued with hunger and thirst and other miseries envelope me and make me helpless, while Thou art a Being, Omniscient and Omnipresent in all the known and unknown worlds'.
Kanaka appeals to the mind to struggle and to forbear for he knows that God will protect without delay. "Who waters the trees that grow on the mountain tops? Who has painted the peacock with variegated colours? Who has painted the parrot green? Who has created food for the frog and for the all sentiment creation? When God has created you and has undertaken that responsibility, he will assuredly protect you, why should there be any doubt about this? Oh! Adikeshava Thou art the bestower of my life, You will protect me, and it is not possible for me to forsake Thy feet". Kanaka was a great mystic and like Purandara, was convinced that every thing moved and had their being at the initiation of Sri Hari; all the animate and inanimate objects of the Universe moved according to His law and fulfilled themselves according to His purpose. God is omnipresent and all-mighty and omniscient. Kanaka asks the question 'Oh God art Thou in maya or is it within thee? IS the eye within the mind or mind within the eye, or both within Thee. Is the flower within the fragrance or the fragrance within the flower or are both these in the nose?
Kanaka was an Aparoksha Jnani with the direct cognition of Sri Adikeshava who was his supreme Preceptor and he was convinced that Adikeshava saved him from the field of battle and picked him up like a pearl dissociated from water to show the way to join His feet. Kanaka was unrivalled for depth and originality of feeling and for piety and sense of the purest attachment of Sri Hari. For rhythmic flow of verse and gracefulness of style he was as great as Purandara. "Adikeshava is my refuge and there is no need for any other ceremonial or meditation". Like a parrot nourished within the cage and taught sweet speech, You teach me true wisdom, and make me recite your name incessantly. So long You are not meditated upon, the mind wanters forth in search of the necket which is over its own neck. There are the oil, the lamp, the wick and the fire, but not till the lam is lighted is there light, nor is darkness destroyed!
Kanaka in many of his keertanas, sings the nature of Paravastu the distinction between Paramayogin and Aviveki and Agnani, and like Purandara recognised the supreme manifestation of Hari and repudicated all distinctions of Kula, caste and creed as the inevitable corollary of worship of the divine. He lived in Belur for a long time and sang the praises of the Lord Keshava in the temples along with Vaikuntadasa, Haribhakti sara in Bhamini Shatpadi was written in Belur and Kanaka who travelled widely all over Karnataka alone unattended and without conveyances, spread the light of Vaishnavism and love of Sri Hari and Paramabhakti for Adikeshava among the millions who came in contact with him on his pregrinations.
Kanaka was strongly denunciatory of caste and class distinctions and all his compositions, his message was one of hope and love towards fellow human beings, and sentiment creation. Aesthetic art, compassion, senstiveness to the beautiful in nature and in the actions of men, marked his outlook on life, as one of the corollaries of a life of divine blessedness.
Overview of his Literature
Sri Kanaka Dasas compositions reveal a perfect mastery of Sanskrit and Kannada literature and show that he was well-versed in contemporary literature. He styles himself "Kanakadasottama" in his Mohana-Tarangini. Kanaka Dasa revels his compositions in a strong, fighting style that delivers the message directly. Unlike Purandara Dasa he was a "free-thinker" or "liberal thinker". Caste and creed in his opinion were no barriers to moksha. Bhakthi alone counted. He was prosecuted for his extreme views by the orthodox followers of Vyasaraja. This fact is alluded to in one of the songs of Purandaradasa which says that the disciples of Sri Vyasaraja found fault with him for the favour shown to Kanakadasa. But Vyasaraja is said 'to' have stood firm his disciple and revealed the true worth and greatness of Kanaka to his other followers.

Besides many devotional songs including "Mundiges"(allgories) he wrote the Mohanatarangini, Haribhakthasara, Ramadhyana Carite and Nalacarite. His portrayal of feelings is vivid and penetrating. He can be most homely and sublime as occasions demand and rises to inimitable perfection of art.

****

info from kannadasiri.in
ದಾಸರ ಹೆಸರು : ಕನಕದಾಸ
ಜನ್ಮ ಸ್ಥಳ : ಬಾಡ, ಹಾವೇರಿ ಜಿಲ್ಲೆ
ತಂದೆ ಹೆಸರು : ಬೀರಪ್ಪ
ತಾಯಿ ಹೆಸರು : ಬಚ್ಚಮ್ಮ
ಕಾಲ             : 1495 - 1502
ಅಂಕಿತನಾಮ : ಆದಿಕೇಶವ
ಲಭ್ಯ ಕೀರ್ತನೆಗಳ ಸಂಖ್ಯೆ: 316
ಗುರುವಿನ ಹೆಸರು : ಪ್ರಾರಂಭದಲ್ಲಿ ಶ್ರೀ ವೈಷ್ಣವ ಗುರು ತಾತಾಚಾರ್ಯ, ತುವಾಯ ಮಧ್ವಗುರು ಸವ್ಯಾಸರಾಯ ವ್ಯಾಸರಾಜರು
ಆಶ್ರಯ        : ವಿಜಯನಗರದ ಕೃಷ್ಣದೇವರಾಯನ ಆಳ್ವಿಕೆಯ ಆಶ್ರಯ
ರೂಪ       : ಸ್ಪುರದ್ರೂಪಿ ಎದ್ದಾಳು (ಎತ್ತರದ ಆಳು)
ಪೂರ್ವಾಶ್ರಮದ ಹೆಸರು: ಕನಕ, ಕನಕಪ್ಪ (ಆದರೆ ತಮ್ಮಪ್ಪ ಎಂಬುದು ಗ್ರಾಹ್ಯವಲ್ಲ. ಆತನ ಕೀರ್ತನೆಗಳಲ್ಲಿ ಕನಕ, ಕನಕಪ್ಪ ಎಂಬ ಹೆಸರುಗಳೇ ಬಳಕೆಯಲ್ಲಿವೆ)
ಮಕ್ಕಳು: ಅವರ ಹೆಸರು: ಒಂದು ಗಂಡುಮಗುವಾಗಿ ಅನತಿಕಾಲದಲ್ಲಿಯೇ ತೀರಿಕೊಂಡಿತು ಎಂದು ಪ್ರತೀತಿ
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು  : 1. ಮೋಹನ ತರಂಗಿಣಿ (ಸಾಂಗತ್ಯ ಕೃತಿ) 2. ರಾಮಧಾನ್ಯ ಚರಿತ್ರೆ (ಷಟ್ಪದಿ ಕವ್ಯ) 3. ಹರಿಭಕ್ತಿಸಾರ (ಷಟ್ಪದಿ ಕಾವ್ಯ 4. ನೃಸಿಂಹಸ್ತವ (ಅನುಪಲ್ಲಭ)
ಪತಿ: ಪತ್ನಿಯ ಹೆಸರು: ಲಕ್ಷ್ಮೀದೇವಿ
ವೃತ್ತಿ : ದಂಡನಾಯಕ, ಸಾಮಂತರಾಜ
ಕಾಲವಾದ ಸ್ಥಳ ಮತ್ತು ದಿನ : ಕಾಗಿನೆಲೆ, ರಾಣಾಪ್ರತಾಪಸಿಂಗ್ ಕನಕಪ ಸ್ಮರಪಾರ್ಥ ಜಯಪುರದ ಅರಮನೆಯ ಮುಂದೆ ಕನಕಬೃಂದಾವನ ಸ್ಥಾಪಿಸಿರುವದು ಇಂದಿಗೂ ನೋಡಬಹುದಾಗಿದೆ.
ವೃಂದಾವನ ಇರುವ ಸ್ಥಳ : ದಾಸ ಸಾಹಿತ್ಯದಲ್ಲಿ ಕನಕನದು ಸಿಂಹಪಾಲು, ಉಳಿದವರದು ಕಾಣೆಎಂಜಲು ಎಂಬುದು ಗುರು ವ್ಯಾಸರಾಯಗ ಇವಗೆ ನಾಡೆಲ್ಲಿ ಹುಡುಕಿದರೂ
ಕೃತಿಯ ವೈಶಿಷ್ಟ್ಯ : ದಾಸಸಾಹಿತ್ಯದಲ್ಲಿ ಕನಕನದು ಸಿಂಹಪಾಲು, ಉಳಿದವರದು ರಾಣಿ ಎಂಜಲು ಎಂಬುದು ಗುರು ವ್ಯಾಸರಾಯಗ ಇವಗೆ ನಾಡೆಲ್ಲ ಹುಡುಕಿದರೂ ಈಡಾರ ಕಾಣೆ ಎಂಬ ಮುಕ್ತ ಪ್ರಶಂಸೆಯ ಮಾತೂ ತೆಲುಗರ ಕನಕ ಮೀರು ಬಂಗಾಳ ತುನಕ, ಕನ್ನಡಕವುಲೆಲ್ಲ ನಾವೆನಕ ಎಂಬ ಪ್ರಶಂಸೆಯ ಮಾತೂ ಇತನ ಸ್ಥಾನವನ್ನು ನಿರ್ದೇಶಿಸುತ್ತವೆ. ದಾಸ ಸಾಹಿತ್ಯದ ನೀರಸ ಮರಳು ಗಾಡಿನಲ್ಲಿ ಇವರ ಕೃತಿಗಳು ರಸದ ಕಾರಂಜಿಯಂತಿವೆ ಎಂದು ಹೇಳಿದರೆ ಸಾಕು.
ಇತರೆ : ದಾಸ ಸಾಹಿತ್ಯದಲ್ಲಿ ಕನಕನದು ಸಿಂಹಪಾಲು, ಉಳಿದವರು ಕಾಗೆ ಎಂಜಲು ಎಂಬುದು ಗುರು ವ್ಯಾಸರಾಯರ 'ಇವಗೆ ನಾಡೆಲ್ಲ ಹುಡುಕಿದರೂ ಈಡಾರ ಕಾಣೆ" ಎಂಬ ಮುಕ್ತಪ್ರಶಂಸೆಯ ಮಾತೂ, ತೆಲುಗರ 'ಕನಕ ಮೀರು ಬಂಗಾರ ತುನಕ, ಕನ್ನಡ ಕವುಲೆಲ್ಲ ನೂವೆನಕ" ಎಂಬ ಪ್ರಶಂಸೆಯ ಮಾತೂ ಇವರ ಸ್ಥಾನವನ್ನು ನಿರ್ದೇಶಿಸುತ್ತವೆ.
end
***


ಕನಕದಾಸರ ಜೀವನದ ಒಂದು ಲೋಕಪ್ರಸಿದ್ಧ ಪ್ರಸಂಗ. ಗುರು ವ್ಯಾಸತೀರ್ಥರು ಪಂಡಿತರೇ ತುಂಬಿದ್ದ ಸಭೆಯೊಂದರಲ್ಲಿ ‘ಮೋಕ್ಷಕ್ಕೆ ಹೋಗುವವರು ಯಾರಿದ್ದೀರಿ. ನಮ್ಮಲ್ಲಿ ಯಾರಿಗೆ ಆ ಅರ್ಹತೆ ಇದೆ..’ ಎಂಬ ಸವಾಲೊಂದನ್ನು ಮುಂದಿಟ್ಟರು. ಸಭೆಯಲ್ಲಿದ್ದ ಪ್ರತಿಯೊಬ್ಬರೂ ಅಹಂಕಾರದಿಂದ ನಾನು, ನಾನು, ನಾನು… ಎಂದು ಕೊಚ್ಚಿಕೊಂಡರು. ಕೊನೆಯಲ್ಲಿ ಕನಕದಾಸರನ್ನು ಕೇಳಿದಾಗ ‘ನಾನು ಹೋದರೆ ಹೋಗಬಹುದು’ ಎಂದು ಉತ್ತರಿಸಿದ್ದರು. ಕನಕರ ಮಾತಿನ ಅರ್ಥ ಹೆಚ್ಚಿನವರಿಗೆ ಆಗಲಿಲ್ಲ. ಆದರೆ, ವ್ಯಾಸರಾಜರಿಗೆ ಆಗಿತ್ತು. ನಾನು ಎಂದರೆ, ಅಹಂಕಾರ, ನಾನು ಎಂದರೆ ಮಮಕಾರ. ಈ ಸ್ವಾರ್ಥವನ್ನು ಬಿಟ್ಟವರಿಗೆ ಮೋಕ್ಷ ಪ್ರಾಪ್ತಿ ಆಗಬಹುದು ಎನ್ನುವುದು ಕನಕರ ಮಾತಿನ ತಾತ್ಪರ್ಯವಾಗಿತ್ತು.
ಕಾಲಿಗೆ ಚಕ್ರ ಕಟ್ಟಿಕೊಂಡು ಓಡುವ ಕಾಲಪುರುಷ ಮತ್ತೊಂದು ಪ್ರದಕ್ಷಿಣೆಯನ್ನು ಮುಗಿಸಿಯಾಯಿತು. ಹದಿನೆಂಟರ ನಂಟು ಕಳಚಿಕೊಂಡು ಹತ್ತೊಂಬತ್ತರ ಹೊಸ್ತಿಲು ದಾಟಿದ್ದಾಯಿತು. ನಡೆದುಬಂದ ದಾರಿಯ ನೆನಪು, ಸೊಗಸು, ನೋವು, ಹತಾಶೆಗಳ ಮೆಲುಕನ್ನು ಮನೋಭಿತ್ತಿಯಿಂದ ಆಚೆ ನೂಕಿ ಹೊಸತೇನು ಎಂದು ಮುಂದೆ ನೋಡುವ ಕಾಲ ಇದು. ಕೆಡುಕೇನೂ ಬರದಿರಲಿ, ಎಲ್ಲವೂ ಒಳಿತೇ ಇರಲಿ ಎಂದು ಬೆಲ್ಲವನ್ನಷ್ಟೇ ಬಯಸುವ ಮನೋಸ್ಥಿತಿ ನಮ್ಮೆಲ್ಲರದು. ಆದರೆ, ಬದುಕಿನ ದಾರಿಯಲ್ಲಿ ಸಿಹಿಯಷ್ಟೇ ಸಿಗಬೇಕಾದರೆ, ನಮ್ಮ ಮನಸ್ಸಿನಲ್ಲಿರುವ, ಬದುಕಿನಲ್ಲಿರುವ, ವ್ಯಕ್ತಿತ್ವದಲ್ಲಿರುವ, ಸಮಾಜದಲ್ಲಿರುವ ಅನೇಕ ಕಹಿಗಳನ್ನು, ಬೇವಿನ ಗುಣವನ್ನು ತ್ಯಜಿಸುವುದು ಅನಿವಾರ್ಯ. ಮಾನಸಿಕವಾಗಿ, ವಾಸ್ತವಿಕವಾಗಿ ನಾವು ಅದಕ್ಕೆ ಸಜ್ಜಾಗಬೇಕಿದೆ.
ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಮಾಷೆಯ ರೂಪದ ಲೋಕನೀತಿಯೊಂದು ವೈರಲ್ ಆಗುತ್ತಿದೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಎಂಬ ಅರಿಷಡ್ವರ್ಗಗಳ ಜೊತೆಗೆ ಫೇಸ್​ಬುಕ್, ವಾಟ್ಸ್​ಆಪ್​ಗಳನ್ನೂ ಸೇರಿಸಿಕೊಂಡು ಎಂಟು ವೈರಿಗಳನ್ನು ದೂರ ಇಡಬೇಕಿದೆ ಎಂಬ ನೀತಿ ಅದು. ನಿಜ, ನಾವು ಬದಲಾಗಬೇಕಿದೆ. ನಮ್ಮ ಯೋಚನೆ, ಆಲೋಚನೆ, ಚಿಂತನೆ, ದೃಷ್ಟಿಕೋನ, ಹವ್ಯಾಸಗಳು, ದೌರ್ಬಲ್ಯಗಳು… ನಮ್ಮ ಬದುಕೆಂಬ ಮೆಮೊರಿ ಕಾರ್ಡ್ ಇಂಥ ಅನಗತ್ಯ ಸಂಗತಿಗಳಿಂದಲೇ ತುಂಬಿಹೋಗಿರುತ್ತದೆ. ಅದನ್ನು ಖಾಲಿ ಮಾಡಿದಾಗ ಮಾತ್ರ ಹೊಸ ಸಂಗತಿಗಳಿಗೆ, ವಿಚಾರಗಳಿಗೆ ಅವಕಾಶ.
ಹಾಗೆ ನೋಡಿದರೆ, ಸಂಖ್ಯಾಶಾಸ್ತ್ರಜ್ಞರ ಪ್ರಕಾರ 19 ಬಹಳ ಒಳ್ಳೆಯ ಸಂಖ್ಯೆ. ಮೂಲ ಅಂಕಿಗಳ ಸಾಲಿನಲ್ಲಿ 1 ಮೊದಲನೆಯದಾದರೆ, 9 ಕೊನೆಯದು. ಎರಡು ಅಂಕಿಗಳೂ ಪ್ರಭಾವಿ. ಬಹಳ ಸತ್ವಶಾಲಿ. ಇವೆರಡರ ಸಮಾಗಮ ಒಳಿತಿಗೆ ದಾರಿ ಎಂಬ ಅಭಿಪ್ರಾಯವೂ ಇದೆ. ನಂ.1 ಎನ್ನುವುದು ವಿಭಿನ್ನತೆ, ಸ್ವತಂತ್ರಪ್ರವೃತ್ತಿ, ಛಲ, ಕಾರ್ಯದಕ್ಷತೆ, ಮಹತ್ವಾಕಾಂಕ್ಷೆ, ಪ್ರಗತಿಯನ್ನು ಸಂಕೇತಿಸುತ್ತದೆ. ಅದೇ ರೀತಿ 9 ಸಂಖ್ಯೆ ಆಧ್ಯಾತ್ಮಿಕ ಅರಿವು, ಸ್ಪೂರ್ತಿ, ಪರೋಪಕಾರ ಗುಣಗಳನ್ನು ಪ್ರತಿನಿಧಿಸುತ್ತದೆ. ಹಿಡಿದ ಕೆಲಸವನ್ನು ಪೂರ್ಣಗೊಳಿಸುವ ಛಾತಿ, ಧಾವಂತವನ್ನು 9 ಪ್ರತಿಫಲಿಸುತ್ತದೆ. ಆ ಅರ್ಥದಲ್ಲಿ ಹೊಸ ಕೆಲಸಗಳನ್ನು ಆರಂಭಿಸುವುದಕ್ಕೆ, ಅದನ್ನು ಪೂರ್ಣಗೊಳಿಸುವುದಕ್ಕೆ ಈ ವರ್ಷ ಅನುಕೂಲಕರ. ಅರೆಬರೆಯಾಗಿ ನಿಂತಿರುವ, ಅತ್ತಲೂ ಅಲ್ಲದೆ, ಇತ್ತಲೂ ಅಲ್ಲದ ಸಂದಿಗ್ಧ ತಂದಿಟ್ಟಿರುವ ಅನೇಕ ಸಂಗತಿಗಳಿಗೆ 19 ರ್ತಾಕ ಅಂತ್ಯ ಕೊಡಿಸಬಹುದು. ಒಂದಂತೂ ನಿಜ, ಒಂದು ಬಾಗಿಲು ಮುಚ್ಚಿದರೆ, ನೂರಾರು ಬಾಗಿಲುಗಳು ತೆರೆದುಕೊಳ್ಳುತ್ತವೆ. ಹೊಸ ವರ್ಷದಲ್ಲಿ ಕನಿಷ್ಠ ಹತ್ತೊಂಬತ್ತಾದರೂ ಒಳಿತಿನ ಬಾಗಿಲುಗಳು ತೆರೆದುಕೊಳ್ಳಲಿ ಎಂದು ಆಶಿಸುವುದರಲ್ಲಿ ತಪ್ಪೇನಿದೆ? ಜೀವನದಲ್ಲಿ ನಮ್ಮೆಲ್ಲರದು ಮುಗಿಯದ ಹುಡುಕಾಟ. ನಿರಂತರ ಓಡಾಟ, ಅನಗತ್ಯ ಗುದ್ದಾಟ, ಕೊನೆಯವರೆಗೂ ಹೋರಾಟ. ಜಗತ್ತಿನಲ್ಲಿ ಯಶಸ್ವಿಯಾಗುವುದಕ್ಕೆ ನಾವು ಬೇರೆ ಯಾರನ್ನೋ ಸೋಲಿಸುವ ಅಗತ್ಯವಿಲ್ಲ. ಬದಲಿಗೆ ನಮ್ಮನ್ನು ನಾವು ಗೆಲ್ಲಬೇಕಿದೆ. ಸಹನೆ-ಅಸಹನೆ, ತೃಪ್ತಿ-ಅತೃಪ್ತಿ, ವಿವೇಕ-ಆವೇಶ, ಆತುರ-ಸಮಾಧಾನ, ಸ್ವಾರ್ಥ-ತ್ಯಾಗ, ದುರಾಸೆ-ಸಂತೃಪ್ತಿ ಹೀಗೆ ಒಂದೇ ಎರಡೇ. ಬದುಕಿನ ಇಂಥ ಸಾವಿರ ದ್ವಂದ್ವ ಸಂದರ್ಭಗಳಲ್ಲಿ ನಾವು ಯಾವ ಬದಿ ನಿಂತಿರುತ್ತೇವೆ ಎನ್ನುವುದು ನಮ್ಮ ವ್ಯಕ್ತಿತ್ವವನ್ನು ನಿರೂಪಿಸುತ್ತದೆ.
ನಮ್ಮ ಬದುಕು ನಮ್ಮದು. ಯಾವ ರೀತಿ ಇರಬೇಕು, ಇರಬಾರದು ಎನ್ನುವುದನ್ನು ನಿರ್ಧರಿಸಬೇಕಾದವರು ನಾವು. ಆದರೂ, ಲೋಕರೂಢಿಯೆಂದರೆ, ಎಲ್ಲವೂ ಗೊತ್ತಿದ್ದರೂ, ಮಾರ್ಗದರ್ಶನವಿಲ್ಲದೆ ಈ ಜಗತ್ತು ಮುಂದೆಸಾಗುವುದಿಲ್ಲ. ಸ್ವಯಂಚಾಲಿತ ಎನ್ನುವುದು ಯಂತ್ರಗಳಿಗೆ ಮಾತ್ರ. ಆದರೆ, ಅಂಥ ಯಂತ್ರಗಳ ಅನ್ವೇಷಣೆ, ನಿರ್ವಹಣೆಯಲ್ಲೂ ಹಿಂದಣ ಮಾನವ ಶಕ್ತಿ, ಯುಕ್ತಿ ಇರಲೇಬೇಕು. ಪ್ರಪಂಚ ಕೂಡ ಅಷ್ಟೇ. ಎಲ್ಲವೂ ನಮ್ಮ ಅರಿವಿನ ಪರಿಧಿಯೊಳಗೇ ಇದ್ದಾಗಲೂ, ಒಳಿತು-ಕೆಡುಕುಗಳ ಬಗ್ಗೆ ಬಿಡಿಸಿಹೇಳುವವರ ಅವಲಂಬನೆ ಬೆಳೆದುಬಿಟ್ಟಿರುತ್ತದೆ. ವ್ಯಕ್ತಿತ್ವವಿಕಸನ, ಸಲಹೆಗಾರರಿಗೆ ಅಷ್ಟೊಂದು ಬೇಡಿಕೆ ಇರುವುದು ಅದೇ ಕಾರಣಕ್ಕೆ. ಇವತ್ತಿನ ಪರಿಸರದಲ್ಲಿ ವ್ಯಕ್ತಿತ್ವವಿಕಸನ ಎನ್ನುವುದೊಂದು ಉದ್ಯಮ. ಆದರೆ, ನಮ್ಮ ಪರಂಪರೆಯಲ್ಲಿ, ಪುರಾಣಗಳಲ್ಲಿ, ಇತಿಹಾಸದಲ್ಲಿ, ಸಾಹಿತ್ಯದಲ್ಲಿ, ದಾಸ, ವಚನ ಸಾಹಿತ್ಯದಲ್ಲಿ ವ್ಯಕ್ತಿ ಹೇಗಿರಬೇಕು, ಹೇಗಿರಬಾರದು ಎಂಬ ಬೆಳಕಿನ ಲಕ್ಷದೀಪಗಳನ್ನೇ ಹಚ್ಚಿಬಿಟ್ಟಿದ್ದಾರೆ. ಅಂಥ ಒಂದು ಎಂದೂ ಆರದ ಹಣತೆ ಕನಕದಾಸರ ಹರಿಭಕ್ತಿಸಾರ. ಹೊಸವರ್ಷದ ಹೊಸ್ತಿಲಲ್ಲಿ ಕನಕದಾಸರ ಓದು, ಹರಿಭಕ್ತಿಸಾರದ ಓದು ವರ್ಷದ ಪಯಣಕ್ಕೆ ದಾರಿದೀಪ.
ದೀನ ನಾನು ಸಮಸ್ತಲೋಕಕೆ/ ದಾನಿ ನೀನು ವಿಚಾರಿಸಲು ಮತಿ-ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು/ ಏನ ಬಲ್ಲೆನು ನಾನು ನೆರೆ ಸು-ಜ್ಞಾನಮೂರುತಿ ನೀನು ನಿನ್ನ ಸ-ಮಾನರುಂಟೇ ದೇವ ರಕ್ಷಿಸು ನಮ್ಮನನವರತ
ಹರಿಭಕ್ತಿಸಾರವೆಂದೊಡನೆ ಮೊಟ್ಟಮೊದಲಿಗೆ ನೆನಪಿಗೆ ಬರುವುದೇ ಈ ಪದ್ಯ. ಶಾಲೆಗಳಲ್ಲಿ ನಮಗೆ ಇದನ್ನೆಲ್ಲ ಕಲಿಸಿದ್ದರು. ದೇವರನ್ನು ಆರ್ತರಕ್ಷಕ ಎನ್ನುತ್ತಾರೆ. ಆರ್ತ ಎಂದರೆ ನೊಂದವನು. ದೀನ ಎಂದರೂ ಆರ್ತ ಎಂದರ್ಥ. ದೇವರು ಮಹಾ ದಾನಿ, ಬೇಡುವ ಭಕ್ತ ದೀನ. ಅಂದರೆ, ಅಹಂಕಾರವನ್ನು ತ್ಯಜಿಸದ, ಸಮರ್ಪಣಾಭಾವ ಇಲ್ಲದ ವ್ಯಕ್ತಿ ಹಾಗೂ ಆತನ ಭಕ್ತಿ ಆರ್ತಭಕ್ತಿ ಆಗುವುದಿಲ್ಲ. ದೇವರ ಪ್ರಾರ್ಥನೆ ಇರಲಿ, ಮಾಡುವ ಯಾವುದೇ ಕೆಲಸ ಇರಲಿ, ಸ್ವಾರ್ಥ, ಅಹಂಕಾರ ಬಿಟ್ಟು ಪೂರ್ಣಪ್ರಮಾಣದಲ್ಲಿ ಸಮರ್ಪಿಸಿಕೊಂಡರೆ ಮಾತ್ರ ಸಿದ್ಧಿ. ನಮಗೆಲ್ಲರಿಗೂ ನಾನು, ನಮ್ಮದು ಎಂಬ ಅಹಂಭಾವ ಜಾಸ್ತಿ. ಸಣ್ಣಪುಟ್ಟ ಕೆಲಸಗಳನ್ನೂ ನಾನು ಮಾಡಿದ್ದು ಎಂದು ಬೀಗುತ್ತಿರುತ್ತೇವೆ. ಆದರೆ, ಸೃಷ್ಟಿ ಎನ್ನುವುದೇ ಒಂದು ವಿಚಿತ್ರ ಒಗಟು. ಪ್ರಪಂಚ ಹಿಂದೆಯೂ ಇತ್ತು, ಮುಂದೆಯೂ ಇರುತ್ತದೆ. ಮೂರು ದಿನಗಳ ಬದುಕು ನಮ್ಮದು ಮಾತ್ರ. ಇರುವ ಮೂರು ದಿನದಲ್ಲಿ ಒಳಿತು ಮಾಡು ಮನುಜ ಎಂದು ಹಿರಿಯರು ಹೇಳುವುದು ಅದೇ ಕಾರಣಕ್ಕೆ. ಕನಕದಾಸರು ಸಹ ಇದನ್ನೇ ಬೇರೆ ರೀತಿ ಹೇಳುತ್ತಾರೆ…
ಬೀಜ ವೃಕ್ಷದೋಳಾಯ್ತು ವೃಕ್ಷಕೆ/ ಬೀಜವಾರಿಂದಾಯ್ತು ಲೋಕದಿ/ ಬೀಜವೃಕ್ಷನ್ಯಾಯವಿದ ಭೇದಿಸುವರಾರಿನ್ನು… ಬೀಜವು ವೃಕ್ಷದಿಂದ ಹುಟ್ಟುವುದು, ವೃಕ್ಷಕ್ಕೆ ಆ ಬೀಜವು ಕಾರಣವಾಗುವುದು. ಹಾಗಾದರೆ, ವೃಕ್ಷದಿಂದ ಬೀಜವೋ, ಬೀಜದಿಂದ ವೃಕ್ಷವೋ… ಜಗತ್ತೇ ಇಂಥ ಒಂದು ಒಗಟು. ಅಂದರೆ ಬದುಕು ಸ್ವತಂತ್ರವಲ್ಲ, ಹಾಗೆಂದು ಪರತಂತ್ರವೂ ಅಲ್ಲ. ಪರಸ್ಪರ ಒಂದಕ್ಕೊಂದು ಬೆಸೆದುಕೊಂಡ ಚಕ್ರ. ಒಬ್ಬರಿಗೊಬ್ಬರು, ಒಬ್ಬರಿಂದ ಇನ್ನೊಬ್ಬರು ಅನ್ಯೋನ್ಯಾಶ್ರಯದ ಸಂಗತಿ ಇದು. ಇಲ್ಲಿ ಪ್ರಾರಂಭ, ಅಂತ್ಯದ ಬಿಂದು ಗುರುತಿಸುವುದು ಅಸಾಧ್ಯ. ಇದು ಸೃಷ್ಟಿಯ ರಹಸ್ಯ, ಸೊಬಗು. ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ… ನೀ ದೇಹದೊಳಗೋ, ನಿನ್ನೊಳು ದೇಹವೋ ಎಂಬ ದಾಸರ ಇನ್ನೊಂದು ಕೀರ್ತನೆಯಲ್ಲೂ ನಮ್ಮ ಅಂತರ್ಮನದ ಕತ್ತಲೆಗೆ ಬೆಳಕಿನ ದೀಪ ಹಿಡಿಯುವ ಇಂಥ ಚಿಂತನೆಯೇ ಇದೆ.
ಕೋಪವೆಂಬುದು ತನುವಿನಲಿ ನೆರೆ/ ಪಾಪ ಪಾತಕದಿಂದ ನರಕದ/ ಕೂಪದಲಿ ಮುಳುಗುವುದು ತಪ್ಪದು ಶಾಸ್ತ್ರಸಿದ್ಧವಲೆ ಕೋಪ ಎನ್ನುವುದು ದೇಹಕ್ಕೆ ಅಂಟಿಕೊಳ್ಳುವ ದೊಡ್ಡ ಪಾಪ ಎಂದು ಕನಕರು ಹೇಳುತ್ತಾರೆ. ಇದು ಮನಸ್ಸನ್ನು ಹಾಳುಮಾಡುತ್ತದೆ. ಅದರಲ್ಲೂ ಸಾತ್ವಿಕರ ಮೇಲೆ ಹುಟ್ಟುವ ಕೋಪ ಅನರ್ಥಕ್ಕೆ ಕಾರಣವಾಗುತ್ತದೆ. ಹಾಗೆಂದು ಸಿಟ್ಟುಬರಲೇಬಾರದು ಎಂದಲ್ಲ. ಅನ್ಯಾಯ, ಅಕ್ರಮಗಳ ವಿರುದ್ಧ ಕೋಪ ಬರಲೇಬೇಕು. ಆದರೆ, ಆ ಕೋಪ ಸಾತ್ವಿಕವಾಗಿರಬೇಕು.
ನಿನ್ನ ಸೂತ್ರದೊಳಾಡುವವು ಚೈ-ತನ್ಯ ಸಚರಾಚರಗಳೆಲ್ಲವು/ನಿನ್ನ ಸೂತ್ರವು ತಪ್ಪಿದರೆ ಮೊಗ್ಗುವುವು ಹೂಹೆಗಳು..
ಸಕಲ ಗ್ರಹಬಲ ನೀನೆ ಸರಸಿಜಾಕ್ಷ ಎಂಬ ದಾಸ ನುಡಿಯಂತೆ ಈ ಜಗತ್ತಿನ ಪ್ರತಿಯೊಂದು ಸಂಗತಿಯೂ ಸೃಷ್ಟಿಯ ಸೂತ್ರದಿಂದ ಜೋಡಿಸಲ್ಪಟ್ಟಿದೆ ಎಂಬುದನ್ನಂತೂ ನಾವು ನಂಬುತ್ತೇವೆ. ಆಡಿಸುವ ಸೂತ್ರಧಾರನಿರುವಾಗ ಮಾತ್ರ ಬೊಂಬೆಗಳಿಗೆ ಜೀವ. ಸುಮ್ಮನಿದ್ದರೆ ನಿರ್ಜೀವ. ಇದನ್ನೇ ವಿಜಯದಾಸರು ಕೂಡ ‘ಚೇತನನು ನಾ ನೀನು ಚೇಷ್ಟೆಯನು ಮಾಡಿದರೆ, ಅಚೇತನನು ನಾ ನೀನು ಸುಮ್ಮನಿರಲು’ ಎಂದಿದ್ದಾರೆ. ಹಾಗಿರುವಾಗ ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳುವುದು ಹೇಗೆ? ಇದಕ್ಕೂ ಕನಕದಾಸರ ಬಳಿ ಉತ್ತರವಿದೆ ನೋಡಿ…
ವರುಷ ನೂರಾಯುಷ್ಯವದರೊಳ-ಗಿರುಳು ಕಳೆದೈವತ್ತನೈವ- ತ್ತರಲಿ ವಾರ್ಧಿಕ ಬಾಲ್ಯ ಕೌಮಾರ್ಯದಲಿ ಮೂವತ್ತು/ ಇರದೆ ಸಂದದು ಬಳಿಕ ಇಪ್ಪ-ತ್ತೊರುಷವದರೊಳಗಾದದಂತಃ- ಕರಣ ನಿನ್ನೊಳು ತೋರಿ ರಕ್ಷಿಸು ನಮ್ಮನನವರತ
ಮನುಷ್ಯನ ಆಯಸ್ಸು ಸರಾಸರಿ ನೂರು ವರ್ಷ ಎಂದು ಭಾವಿಸುವುದಾದರೆ, ಅದರಲ್ಲಿ ಅರ್ಧದಷ್ಟು ಅಂದರೆ, 50 ವರ್ಷ ನಿದ್ರೆಯಲ್ಲೇ ಕಳೆದುಹೋಯಿತು. ಉಳಿದ ಐವತ್ತರಲ್ಲಿ ಬಾಲ್ಯ, ತಾರುಣ್ಯ, ಮುಪ್ಪು ಎಂದು ಮೂವತ್ತು ವರ್ಷ ಸವೆಯಿತು. ಅಂದರೆ ನಮಗೆಂದು ಉಳಿದಿದ್ದು ಇಪ್ಪತ್ತು ವರ್ಷ ಮಾತ್ರ. ಇಷ್ಟು ಕಡಿಮೆ ಅವಧಿಯಲ್ಲಿ ನಾವೇನು ಮಾಡುತ್ತಿದ್ದೇವೆ. ಏನನ್ನು ಸಾಧಿಸಿದ್ದೇವೆ… ಬದುಕು ಎಷ್ಟೇ ಸುದೀರ್ಘ, ದೊಡ್ಡದೆಂದುಕೊಂಡರೂ ಸಾಧಿಸುವುದಕ್ಕೆ ನಮಗಿರುವ ಕಾಲಾವಧಿ ಅತ್ಯಲ್ಪ. ಅದನ್ನೂ ವ್ಯರ್ಥ ಪಡಿಸಿಕೊಂಡರೆ ನಮಗುಳಿಯುವುದು ಶೂನ್ಯ. ಹಾಗಾಗಿ ಇರುವ ಸಣ್ಣ ಅವಧಿಯಲ್ಲಿ ಸಾರ್ಥಕವೆನಿಸುವಂಥ ಬದುಕು ನಮ್ಮದಾದರೆ ಬೇರೇನು ತಾನೆ ಬೇಕು.
ತರಳತನದಲಿ ಕೆಲವುದಿನ ದುರು-ಭರದ ಗರ್ವದಿ ಕೆಲವುದಿನ ಮೈ-ಮರೆದು ನಿಮ್ಮಡಿಗೆರಗದಾದೆನು ವಿಷಯಕೇಳಿಯಲಿ/ ನರಕಭಾಜನನಾಗಿ ಕಾಮಾ-ತುರದಿ ಪರಧನ ಪರಸತಿಗೆ ಮನ/ ಹರಿದ ಪಾಪವ ಕಳೆದು ರಕ್ಷಿಸುನಮ್ಮನನವರತ..
ಬಾಲ್ಯದಲ್ಲಿ ತಿಳಿವಳಿಕೆ ಇರುವುದಿಲ್ಲ. ತಿಳಿವಳಿಕೆ ಬಂದ ಮೇಲೆ ರೂಪ, ವಿದ್ಯೆ, ಐಶ್ವರ್ಯ, ಸ್ಥಾನಮಾನದಿಂದ ಆವರಿಸುವ ಮದ, ಮೋಹ, ಲೋಭ, ವಿಷಯ ಆಸಕ್ತಿಯಲ್ಲಿ ಜೀವನ ಕಳೆದುಹೋಗುತ್ತದೆ. ನಮ್ಮದಲ್ಲದ ವಸ್ತುವಿನ ಮೇಲೆ ಮೋಹ ತಪ್ಪು ಎನ್ನುವುದನ್ನು ಜಗತ್ತೇ ಒಪ್ಪುತ್ತದೆ. ಆದರೆ, ಪಾಲಿಸುವವರು ಕಡಿಮೆ. ನಮ್ಮದಲ್ಲದ ಹಣ, ಹೆಣ್ಣು, ಮಣ್ಣು ಇವುಗಳ ಮೇಲಿನ ಆಸೆಯೇ ಜಗತ್ತನ್ನು ಹಾಳುಮಾಡುತ್ತದೆ. ಸಮಾಜದ ಎಲ್ಲ ಅನರ್ಥಗಳಿಗೆ, ಅಪರಾಧಗಳಿಗೆ, ಕ್ರೌರ್ಯ, ಅನ್ಯಾಯಗಳಿಗೆ ಈ ಲಾಲಸೆಯೇ ಮೂಲಕಾರಣ. ಪರಸ್ತ್ರೀಯರಿಗಾಗಿ ಆಸೆ ಪಟ್ಟು ಹಾಳಾದವರ ಬಗ್ಗೆ ಕನಕ ದಾಸರು ಒಂದು ಶ್ರೇಷ್ಠ ಪದ್ಯವನ್ನೇ ಬರೆದಿದ್ದಾರೆ. ನೋಡಿ ಮರುಳಾಗದಿರು ಪರಸತಿಯರ/ ನಾಡೊಳಗೆ ಕೆಟ್ಟವರ ಪರಿಯ ನೀನರಿತು/ ಎಂದು ಅವರು ಎಚ್ಚರಿಸುತ್ತಾರೆ. ನೂರು ಯಾಗವನ್ನು ಮಾಡಿ ಸಶರೀರನಾಗಿ ಸ್ವರ್ಗಕ್ಕೆ ತೆರಳಿದ ನಹುಷ ಮಹಾರಾಜ, ಇಂದ್ರಪತ್ನಿ ಶಚಿಯನ್ನು ಮೋಹಿಸಿ ಕಾಕೋಟಕ ಸರ್ಪವಾದ. ಕಪಟ ವೇಷದಲ್ಲಿ ಬಂದು ಋಷಿ ಗೌತಮನ ಪತ್ನಿ ಅಹಲ್ಯೆಯ ಮನಗೆಡಿಸಿದ ಇಂದ್ರ ಮುನಿಶಾಪದಿಂದ ಸಹಸ್ರಾಕ್ಷನಾದ. ಜಗತ್ತನ್ನೇ ಗೆದ್ದ ಪರಾಕ್ರಮಿಯಾದರೂ ಕೀಚಕ ದ್ರೌಪದಿಗಾಗಿ ಆಸೆಪಟ್ಟು ಭೀಮನ ಆಕ್ರೋಶದಿಂದ ಮಾಂಸದ ಮುದ್ದೆಯಾದ. ಈಶ್ವರನ ಪರಮಭಕ್ತನೆನಿಸಿಕೊಂಡ ದಶಕಂಠ ರಾವಣ ಸೀತೆಗೆ ಆಸೆಪಟ್ಟು ನಾಶವಾದ.. ಜೀವನದಲ್ಲಿ ಆಸೆ ಇರಲಿ, ದುರಾಸೆ ಬೇಡ ಎಂಬ ಎಚ್ಚರಿಕೆ ಅದು. ಒಳ್ಳೆಯ ಆಲೋಚನೆಗಳಿಗೆ ದೇಶ-ಕಾಲ-ಮುಹೂರ್ತವೆಂದಿಲ್ಲ. ಇರುವಲ್ಲಿಯೇ, ಇದ್ದಂತೆಯೇ ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳುವುದರಿಂದ ನಷ್ಟವೇನೂ ಆಗುವುದಿಲ್ಲ. ಒಳ್ಳೆಯ ವಿಚಾರಗಳ ಮಂಥನಕ್ಕೆ ಕ್ಯಾಲೆಂಡರ್ ಹೊಸ ವರ್ಷದ ಪ್ರಾರಂಭದ ದಿನಗಳು ಒಂದು ನಿಮಿತ್ತ. ಎಲ್ಲರಿಗೂ ಮತ್ತೊಮ್ಮೆ ಹೊಸ ವರ್ಷದ ಶುಭಾಶಯಗಳು.
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)
*******

info from sumadhwaseva.com--->


ಸಿರಿಯು ಕುಲಸತಿ ಸುತನು ಕಮಲಜ
ಹಿರಿಯ ಸೊಸೆ ಶಾರದೆ ಸಹೋದರಿ
ಗಿರಿಜೆ ಮೈದುನ ಶಂಕರನು ಸುರರೆಲ್ಲ ಕಿಂಕರರು
ನಿರುತ ಮಾಯೆಯು ದಾಸಿ ನಿಜಮಂ-
ದಿರವಜಾಂಡವು ಜಂಗಮಸ್ಥಾ-
ವರ ಕುಟುಂಬಿಗ ನೀನು ರಕ್ಷಿಸು ನಮ್ಮನನವರತ |
Answer –
ಸಿರಿಯು – ಲಕ್ಷ್ಮೀದೇವಿ  ಕುಲಸತಿ – ಧರ್ಮಪತ್ನಿ; 
ಕಮಲಜ – ಕಮಲಸಂಭವನಾದ ಬ್ರಹ್ಮನು ಪುತ್ರನು; 
ಹಿರಿಯ ಸೊಸೆ – ದೊಡ್ಡ ಸೊಸೆ ಸರಸ್ವತಿಯು; 
ಸಹೋದರಿ ಗಿರಿಜೆ – ಕೃಷ್ಣನ ತಂಗಿಯಾಗಿ ಅವತರಿಸಿದ ದುರ್ಗೆ ಮಹಾಲಕ್ಷ್ಮಿಯಅದರೂ, ಅವಳ ವಿಶೇಷ ಸನ್ನಿಧಾನ ಪಾರ್ವತಿ ದುರ್ಗೆಯಲ್ಲಿದೆ.  ಆದ್ದರಿಂದ ಗಿರಿಜೆ ಸಹೋದರಿ.  ಅಲ್ಲದೆ ಕೃಷ್ನನ ತಂಗಿ ಸುಭದ್ರೆಯಲ್ಲೂ ಗಿರಿಜೆಯ ಆವೇಶ.  ಆದ್ದರಿಂದ ಗಿರಿಜೆ ಸಹೋದರಿ.
ಮೈದುನ ಶಂಕರ – ದುರ್ಗೆಯ ಪತಿ ಶಂಕರನಾದ್ದರಿಂದ ಮೈದುನ.  ಅಲ್ಲದೆ ಅರ್ಜುನ ಸುಭದ್ರೆಯ ಗಂಡ.  ಅರ್ಜುನ ಇಂದ್ರನ ಅವತಾರ.  ಬ್ರಹ್ಮಾಂಡ ಪುರಾಣದಂತೆ ಗರುಡ, ಶೇಷ, ರುದ್ರ ಮತ್ತು ಇಂದ್ರರು ವಾಯು-ಭಾರತೀದೇವಿಯರ ಪುತ್ರರು.  ಆದ್ದರಿಂದ ಶಿವನು ಇಂದ್ರನ ಸಹೋದರ.  ಆದ್ದರಿಂದ ಶಿವನೂ ಮೈದುನ.  
ಸುರರು – ಇತರ ದೇವತೆಗಳು ಕಿಂಕರರು.
ಮಾಯೆಯು ನಿರುತ ದಾಸಿ – ಮಾಯಾಶಕ್ತಿಯು ನಿನ್ನ ದಾಸಿ.
ಮಂದಿರವಜಾಂಡವು – ಬ್ರಹ್ಮಾಂಡವೇ ನಿನ್ನ ಗೃಹ
ಜಂಗಮಸ್ಥಾವರ – ಜಡ ಚೇತನಗಳನ್ನು ಕೂಡಿದ
ಕುಟುಂಬಿ ನೀನು – ಕುಟುಂಬವರ್ಗವನ್ನು ಹೊಂದಿರುವ ಶ್ರೀಹರಿ.

ಮುಖ್ಯಪ್ರಾಣ ಸ್ತುತಿ ಕನಕದಾಸರಿಂದ –
ಪರಮಪದವಿಯನೀವ ಗುರುಮುಖ್ಯಪ್ರಾಣನ
ಧರೆಯೊಳಗುಳ್ಳ ಮಾನವರೆಲ್ಲ ಭಜಿಸಿರೊ | ಪ |
ಅಂದು ತ್ರೇತೆಯಲಿ ಹನುಮನಾಗಿ ಅವತರಿಸಿ
ಬಂದು ದಾಶರಥಿಯ ಪಾದಕೆರಗಿ
ಸಿಂಧುವನು ದಾಟಿ ಮುದ್ರಿಕೆಯಿತ್ತು ದಾನವರ
ವೃಂದಪುರ ದಹಿಸಿ ಚೂಡಾಮಣಿಯ ತಂದವನ | ೧ |
ದ್ವಾಪರಯುಗದಲಿ ಭೀಮಸೇನನೆನಿಸಿ
ಶ್ರೀಪತಿಯ ಪಾದ ಕಡು ಭಜಕನಾಗಿ
ಕೋಪಾವೇಶದಲಿ ದುಶ್ಯಾಸನನನು ಸೀಳಿ
ಭೂಪರ ಬಲದೊಳಗೆ ಜರೆ ಜರೆದು ಕರೆದವನ | ೨ |
ಕಲಿಯುಗದಲಿ ತುರೀಯಾಶ್ರಮವನೆ ಧರಿಸಿ
ಕಲುಷದ ಮಾಯಿಗಳನು ಸೋಲಿಸಿ
ಖಿಲವಾದ ಮಧ್ವಮತವನು ಬಲಿದೆನಿಸಿ ಕಾಗಿ
ನೆಲೆಯಾದಿ ಕೇಶವ ಪರದೈವನೆಂದೆನಿಸುವನ | ೩ |

ಪರಮಾತ್ಮನ ಪಾದವನ್ನು ಬಿಟ್ಟು ಜೀವಿಸುವುದು ಸರ್ವಥಾ ಸಾಧ್ಯವಿಲ್ಲವೆಂಬುದನ್ನು ವಿವರಿಸುವ ಕನಕದಾಸರ ಕೀರ್ತನೆ –
ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ
ಮರೆಯ ಮಾತೇಕಿನ್ನು ಅರಿತು ಪೇಳುವೆನಯ್ಯ | ಪ |
ತಾಯಿ ತಂದೆಯ ಬಿಟ್ಟು ತಪವ ಮಾಡಲುಬಹುದು
ದಾಯಾದಿ ಬಂಧುಗಳ ಬಿಡಲೂಬಹುದು 
ರಾಯ ತಾ ಮುನಿದರೆ ರಾಜ್ಯವನು ಬಿಡಬಹುದು
ಕಾಯಜನ ಪಿತ ನಿನ್ನ ಅಡಿಯ ಬಿಡಲಾಗದು | ೧ |
ಒಡಲು ಹಸಿಯಲು ಅನ್ನವಿಲ್ಲದಲೆ ಇರಬಹುದು
ಪಡೆದ ಕ್ಷೇತ್ರವ ಬಿಟ್ಟು ಪೋಗಬಹುದು
ಮಡದಿ ಮಕ್ಕಳ ಕಡೆಗೆ ತೊಲಗಿಸಿಯೆ ಬಿಡಬಹುದು 
ಕಡಲೊಡೆಯ ನಿನ್ನಡಿಯ ಗಳಿಗೆ ಬಿಡಲಾಗದು | ೨ |
ಪ್ರಾಣವನು ಪರರು ಬೇಡಿದರೆತ್ತಿ ಕೊಡಬಹುದು
ಮಾನದಲಿ ಮನವ ತಗ್ಗಿಸಲುಬಹುದು
ಪ್ರಾಣನಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣ ನಿನ್ನಡಿಯ ಬಿಡಲಾಗದೊ | ೩ |

ಕನಕದಾಸರ ಹರಿಭಕ್ತಿಸಾರದಲ್ಲಿನ ಕೆಲವು ಅಪರೂಪ ಪದಪ್ರಯೋಗಗಳು –
“ಗಾಂಗೇಯನುತ – ಗಾಂಗೇಯ ಎಂದರೆ ಗಂಗಾಪುತ್ರ ಭೀಷ್ಮರಿಂದ ಸ್ತುತಿಸಲ್ಪಟ್ಟವನು.
“ಚತುರೋಪಾಯ” – ಧರ್ಮ, ಅರ್ಥ, ಕಾಮ ಮೋಕ್ಷ ಎಂಬ ನಾಲ್ಕೂ ಪುರುಷಾರ್ಥಗಳು
“ಜಗದ್ಭರಿತ” – ಜಗತ್ತನ್ನೆಲ್ಲ ವ್ಯಾಪಿಸಿರುವವನು- ಈಶಾವಾಸ್ಯಮಿದಂ ಸರ್ವಂ ಎಂಬಂತೆ ಸಕಲ ಜಗತ್ತಲ್ಲೂ ವ್ಯಾಪ್ತನಾದವನು
“ಭಾವಜಾರಿಪ್ರಿಯ” – ಭಾವಜ ಎಂದರೆ ಮನಸ್ಸಿನಿಂದ ಜನಿಸಿದ ಮನ್ಮಥ, ಅರಿ – ಭಾವಜನ ಅರಿ ಅಂದರೆ ಮನ್ಮಥನನ್ನು ತನ್ನ ಮೂರನೇ ಕಣ್ಣಿನಿಂದ ದಹಿಸಿದ ಶಿವ, ಅವನಿಗೆ ಪ್ರಿಯ
“ಖಗಪತಿಗಮನ” – ಖಗ ಎಂದರೆ ಪಕ್ಷಿ, ಖಗಪತಿ ಎಂದರೆ ಪಕ್ಷಿಗಳ ನಾಯಕ ಗರುಡ, ಅರ್ಥಾತ್ ಖಗಪತಿಗಮನ ಎಂದರೆ ಗರುಡಗಮನ.
ಕಂಜಜನಯ್ಯ – ಕ – ನೀರು; ಕಂಜ – ಜಲಜ; ಅರ್ಥಾತ್ ಕಮಲದಲ್ಲಿ ; ಕಂಜಜ ಕಮಲದಲ್ಲಿ ಜನಿಸಿದ ಬ್ರಹ್ಮದೇವರು; ಅಯ್ಯ – ಅಂದರೆ ತಂದೆ – ಬ್ರಹ್ಮಜನಕ ಎಂದರ್ಥ.
“ಚಕ್ರಾಧಾರ” – ಎಂದರೆ ಚಕ್ರಪಾಣಿ – ಕೈಯಲ್ಲಿ ಚಕ್ರವನ್ನು ಧರಿಸಿದವನು ಎಂದರ್ಥ. ಇಲ್ಲಿ ಕನಕದಾಸರು ಚಕ್ರಕ್ಕೆ ಕೃಷ್ಣನೇ ಆಧಾರ ಎಂಬುದನ್ನು ಸೂಚಿಸಲು ಚಕ್ರಾಧಾರ ಪದ ಪ್ರಯೋಗಿಸಿದ್ದಾರೆ.
“ತಾಮರಸದಳನಯನ” : ತಾಮರಸ – ಎಂದರೆ ಕಮಲ; ದಳ ನಯನ – ಕಣ್ಣುಳ್ಳವನು
(ಕಮಲದ ದಳಾಗಳಂತೆ ವಿಶಾಲವಾದ ನೇತ್ರವುಳ್ಳವನೇ) – ಎಂದರೆ ಪುಂಡರೀಕಾಕ್ಷ ಎಂದರ್ಥ.
“ಹಲಧರ ರಾಮ” – ನೇಗಿಲನ್ನು ಆಯುಧವನ್ನಾಗಿ ಉಳ್ಳ
ಭಾರ್ಗವ ರಾಮ – ಭೃಗುವಂಶದ ಜಮದಗ್ನಿಯ ಪುತ್ರತ್ವೇನ ಅವತಾರ ಮಾಡಿದ್ದರಿಂದ ಭಾರ್ಗವ ರಾಮ.
“ನಾದಬಿಂದುಕಳಾತಿಶಯ” – ನಾದ, ಬಿಂದ್ಗಳನ್ನು ಕಲೆಗಳನ್ನಾಗುಳ್ಳ “ಓಂ”ಕಾರದಿಂದ ಸರ್ವೋತ್ತಮನು ಎಂದು ಪ್ರತಿಪಾದಿತನಾದವನು.
“ಅಕ್ಷಯಾಶ್ರಿತ” : – ಅಕ್ಷಯರು – ಕ್ಷಯವಿಲ್ಲದವರು – ಅಂದರೆ ಜನನವಿಲ್ಲದವರು – ಅಂದರೆ – ಮುಕ್ತರು – ಮುಕ್ತರಿಂದ ಆಶ್ರಯಿಸಲ್ಪಟ್ಟವನು – ಮುಕ್ತರಿಗೂ ಪರಮಾತ್ಮ ಆಶ್ರಯನಾದವನು – ಮುಕ್ತಾನಾಂ ಪರಮಾಗತಿ:.
“ಧಾತ್ರಿಜಾಂತಕ” – ಧಾತ್ರಿ ಎಂದರೆ ಭೂಮಿ; ಧಾತ್ರಿಜ ಎಂದರೆ ಭೂಮಿಪುತ್ರನಾದ ನರಕಾಸುರ ; ಅವನನ್ನು ಸಂಹರಿಸಿದವ – ನರಕಾಸುರಸಂಹಾರೀ.
“ದುರಿತ ತಿಮಿರ ಪತಂಗ” : ದುರಿತ ಎಂದರೆ ಅನಿಷ್ಟ; ತಿಮಿರ ಎಂದರೆ ಕತ್ತಲೆ; ಪತಂಗ – ಸೂರ್ಯ. ಹೇಗೆ ಕತ್ತಲೆಯು ಸೂರ್ಯನಿಂದ ದೂರವಾಗುವುದೋ ಅದೇ ರೀತಿ ಸಕಲ ದುರಿತಗಳೂ ಶ್ರೀಹರಿಯ ಅನುಗ್ರಹದಿಂದ ದೂರವಾಗುವುದು
“ಕುಂದಕುಡ್ಮಲರದನ” : ಕುಂದ – ಜಾಜಿ; ಕುಡ್ಮಲ – ಮೊಗ್ಗು; ರದನ – ದಂತ. ಅಂದರೆ ಜಾಜಿ ಮೊಗ್ಗುಗಳಂತಹ ಸುಂದರವಾದ ಬಿಳಿದಂತಪಂಕ್ತಿಯುಳ್ಳವನು ಶ್ರೀಹರಿ”ದುರಿತ ತಿಮಿರ ಪತಂಗ : ದುರಿತ ಎಂದರೆ ಅನಿಷ್ಟ; ತಿಮಿರ ಎಂದರೆ ಕತ್ತಲೆ; ಪತಂಗ – ಸೂರ್ಯ. ಹೇಗೆ ಕತ್ತಲೆಯು ಸೂರ್ಯನಿಂದ ದೂರವಾಗುವುದೋ ಅದೇ ರೀತಿ ಸಕಲ ದುರಿತಗಳೂ ಶ್ರೀಹರಿಯ ಅನುಗ್ರಹದಿಂದ ದೂರವಾಗುವುದು.
“ಬಾಣಬಾಹುಚ್ಚೇದ” – ಸಾವಿರ ಕೈಗಳನ್ನು ಹೊಂದಿದ್ದ ಬಲಿಚಕ್ರವರ್ತಿಯ ಮಗ ಬಾಣಾಸುರ ಅಸುರಾವೇಶದಿಂದ ಶ್ರೀಕೃಷ್ಣನಿಗೆ ವಿರೋಧ ಮಾಡಿದಾಗ ಅವನ ಎರಡು ಕೈಗಳನ್ನು ಬಿಟ್ಟು ಉಳಿದವನ್ನು ಕತ್ತರಿಸಿದ ಶ್ರೀಹರಿ. ಈ ಮುಂಚೆ ಶಿವಭಕ್ತನಾಗಿದ್ದ ಬಾಣಾಸುರ ನಂತರ ಶ್ರೀ ಹರಿಭಕ್ತನಾದ.
“ಕ್ಷೋಣಿಪತಿ” : ಕ್ಷೋಣಿ – ಭೂಮಿ; ಕ್ಷೋಣಿಪತಿ – ವರಾಹರೂಪಿ ಶ್ರೀಹರಿ.
“ನಾಗನಗರಿಧರಿತ್ರಿಕೋಶವಿಭಾಗ” : ನಾಗನಗರಿ – ನಾಗಲೋಕ; ಧರಿತ್ರಿ – ಭೂಮಿ; ಕೋಶ – ಸಂಪತ್ತಿನ ನೆಲೆ ; ಅಂತಹ ಕೋಶಗಳ ಅನೇಕ ನೆಲೆಗಳು.
“ಕಾಪುರುಷರೈದಾರುಮಂದಿ” : – ಐದಾರು ಮಂದಿ ಅಂದರೆ 5 + 6 = 11 ಮಂದಿ, ಅಂದರೆ ಐದು ಕರ್ಮೇಂದ್ರಿಯಗಳು, ಕಾಮಾದಿ ಆರು ಅರಿಷಡ್ವರ್ಗಗಳು, ಕಾಪುರುಷರು – ಎಂದರೆ ಕೆಟ್ಟ ಜನರು – ಅಂದರೆ ಈ ಎಲ್ಲ ಅಭಿಮಾನಿ ದೈತ್ಯರು ಎಂದು ಅರ್ಥ ಮಾಡಿಕೊಳ್ಳಬೇಕು.
kanakadaasara ugaabogagalu :
ಅಳಿವಾ ದೇಹವಾ ಸಿಂಗರಿಸುವೆಯೇಕೆ
ಬೆಳೆಸು ಹರಿಭಕ್ತಿ ಮನದೊಳು ನಿರತ
ಕಳೆವ ತನುವಿದು ಶಾಶ್ವತವಲ್ಲ ತಿಳಿ
ಒಳಗಿನ ಆತ್ಮ ನಿರಂತರವಾಗಿರಲು
ಘಳಿಗೆಗೊಮ್ಮೆ ಅವನ ಧ್ಯಾನವ ಮಾಡು
ಸುಳಿಯಲಿ ಸಿಕ್ಕಿರಲು ನೀನುಳಿವ ದಾರಿ
ತಿಳಿ, ನೀ ಕರೆ ಸೇರೆ ನಿನ್ನನಾ
ನಳಿನಾಕ್ಷ ಶ್ರೀ ಆದಿಕೇಶವರಾಯ ಪೊರೆವ
ಮಣ್ಣಲಿ ಮಾಡಿಹ ಮಡಕೆ ಮಸಿಯಾಗೆ
ಮಣ್ಣಿಂದಲೆ ತಿಕ್ಕಿ ಮಸೆ ಹೋಗುವುದು
ಕಣ್ಣು ಕಿವಿಗಳ ನಡೆಪ ಮನ ಮಲಿನವಾಗೆ
ಕಣ್ಣು ಕಿವಿಗಳಿಂದಲಿ ಮನ ತಿದ್ದಲಾಗುವುದೇ?
ಹಣ್ಣಾಗುವುದು ಮನ ಶ್ರೀ ಹರಿಧ್ಯಾನ ಮಾಡೆ
ಹುಣಾಗಿ ಕಾಡಿಪುದು ಅವನ, ಅದ ಮರೆಯ
ಕಣ್ಣಲಿ ಕಣ್ಣಾಗಿ ಕತ್ತಲಲಿ ಬೆಳಕಾಗಿ
ಫಣಿಶಾಯಿ ಆದಿಕೇಶವರಾಯ ಪೊರೆವ |
Collection by Narahari Sumadhwa
source : Sri Kanakadaasavirachita “Haribhaktisaara” by Dr Vyasanakere Prabhanjanacharya.
********
ಕನಕದಾಸರ ಪದ ಪದ್ಯಗಳನ್ನು ಗಮನಿಸಿದಾಗ ಒಂದು ಸಿದ್ಧವಾಗುತ್ತದೆ "ರಕ್ಷಕನಾದ ದೇವರು ಇದ್ದಾನೆ, ರಕ್ಷಣೆಗೆ ಒಳಪಡುವವ ಜೀವನೂ ಇದ್ದಾನೆ" ಎಂದು. ದೇವನು ದೊಡ್ಡವ ಜೀವನು ಅತ್ಯಲ್ಪ ಎಂದು ಪ್ರತೀ ಹಾಡು ಪದ ಪದ್ಯ ಉಗಾಭೋಗ ಹರಿಭಕ್ತಿಸಾರ ಮೊದಲಾದವುಗಳಲ್ಲಿ ಸ್ಥಾಪಿಸುತ್ತಾ ಹೋಗುತ್ತಾರೆ. 

ಇಂದು ಕನಕದಾಸರ ಕೃತಿಗಳಿಗಿಂತಲೂ ಕನಕದಾಸರ ಹೆಸರನ್ನು ಬಳಿಸಿಕೊಳ್ಳುವದು ತುಂಬ ಆಗಿದೆ. ಜಗತ್ತು ಹೆಸರನ್ನು ಬಳಿಸಿಕೊಂಡರೆ,  ಸಾಹಿತ್ಯವನ್ನು ಬಳಿಸಿಕೊಂಡವರು ಕೆಲವರೇ.  "ಕನಕದಾಸರ ಹೆಸರನ್ನು ಬಳಿಸಿಕೊಂಡವರು ಹಣ ಮಾಡಿಕೊಂಡರೆ, ಕೃತಿಗಳನ್ನು ಬಳಿಸಿಕೊಂಡವರು ಹಣವಂತನಾದ ದೇವರನ್ನೇ ಒಲಿಸಿಕೊಂಡರು. 

ಹಣ ಬೇಕೋ ?? ಹಣವಂತ ಬೇಕೋ..??

ಹಣ ಬೇಕಾದರೆ ಕನಕ ಬೇಕು. ಹೆಸರಿನಲ್ಲಿಯೇ ಹಣವಿದೆ. ಹಣವಂತನಾದ ದೇವನು ಬೇಕಾದರೆ ಕನಕದಾಸ ಬೇಕು. ಹೆಸರಿನಲ್ಲಿಯೇ ದಾಸ ಸಾಹಿತ್ಯವಿದೆ. ನಾನು ದಾಸ ನೀನು ಸ್ವಾಮಿ ಎಂಬ ಸ್ವಾಮಿ ಭೃತ್ಯಭಾವ ಸಂಬಂಧವಿದೆ. ಹಣವಂತನಾದ ದೇವರನ್ನೇ ಬೇಡಿ, ಆ ದೇವನೇ ಎಮ್ಮ ಸ್ವಾಮಿಯಾದಾಗಿ ಬಂದಾಗ ಬೇಡುವ ಸ್ಥಿತಿಯೇ ನಿರ್ಮಾಣವಾಗಲಾರದು. ಹಣ ಬೇಕಾದಾರೆ " ದೇವರಿಂದಾರಂಭಿಸಿ ಇಂದಿನ ಸರ್ಕಾರದವರೆಗೂ ಬೇಡುವ, ಕೈ ಚಾಚುವ ಪ್ರಂಗ ಬಂದೀತು. ಹಾಗಾಗಿ "ಹಣ ಬೇಕೋ ?? ಹಣವಂತನು ಬೇಕೋ..??" ನಮ್ಮ ವಿವೇಚನೆಗೆ ಬಿಟ್ಟಿದ್ದು. ಕನಕದಾಸರು ಎಂದಿಗೂ ಹಣವನ್ನಾಗಲಿ ಸವಲತ್ತುಗಳನ್ನಾಗಲಿ ಬೇಡಿ ಪಡೆದವರು ಅಲ್ಲ. 

ಕನಕದಾಸರು ಬೇಡಿಯೇ ಇಲ್ಲವೆ..??

ಬೇಡದೇ ಇರಲು ದೇವರು ಅವರಲ್ಲ. ಅವರೂ ಒಬ್ಬರು ದಾಸರೇ. ಆದ್ದರಿಂದ ಬೇಡಲೇಬೇಕು. ಬೇಡಿದ್ದಾರೆ.‌ ಏನನ್ನು.. ?? ಒಂದು ಸುಂದರ ಕಥೆ...

ಒಂದು ಬಾರಿ ವ್ಯಾಸರಾಜರು, ವಾದಿರಾಜರು, ವಿಜಯೀಂದ್ರರು ಈ ಮೂರುಜನ ಒಂದೆಡೆ ಕುಳಿತು ಶಾಸ್ತ್ರಾರ್ಥ ಚರ್ಚೆಯಲಿ ತೊಡಗಿರುತ್ತಾರೆ. ಆಗ ದೂರದಲ್ಲಿ "ಕನಕ"  ನಿಂತು ಕೇಲ್ತಾ ಇರುತ್ತಾನೆ.. (ಇನ್ಮೂ ದಾಸನು ಆಗಿರುವದಿಲ್ಲ.)

ಕನಕನನ್ನು ಕೂಗಿ ಕರೆಯುತ್ತಾರೆ, ಪುರಂದರ ದಾಸರು ಇಲ್ಲಿ ಇಲ್ಲ. ಅವರನ್ನು ಕರೆದು ಬಾ .. ಎಂದು ಹೇಳುತ್ತಾರೆ. ಕನಕ ಹಿಗ್ಗಿನಿಂದ ಓಡಿ ಹೋಗಿ ಪರಂದರದಾಸರಿಗೆ ತಿಳಿಸುತ್ತಾನೆ ಸ್ವಾಮ್ಯಾರು ಕರಿತಿದಾರೆ ಎಂದು. 

ಪುರಂದರ ದಾಸರು ಸಿದ್ಧಾರಾಗಿ ಹೊರಡುತ್ತಾರೆ. ಕನಕನೂ ಬೆನ್ನು ಹತ್ತಿ ಹೊರಡುತ್ತಾನೆ. ಆ ಚರ್ಚೆ ದೂರದಿಂದಲೇ ನೋಡಲು ಒಂದು ಖುಶಿ. ಹಾಗಾಗಿ ಹೊರಟ. 

ಪು) ಹೇ ಕನಕ !! ಆ ಸ್ವಾಮಿಗಳ ಆಜ್ಙಾ ಪಾಲನೆ ಮಾಡಿದಿ.. ಅವರಿಂದ ಏನರೆ ಇನಾಮು ಭಕ್ಷೀಸು ಪಡೀಬೇಕೋ ಇಲ್ಲೋ.. ?? ಇಸ್ಗೋ ಹೋಗು. ಎಂದು ಹೇಳುತ್ತಾರೆ. "ಆ ದೊಡ್ಡ ಸ್ವಾಮ್ಯಾರ ಬಳಿ ನಾ ಏನರೀ ಕೇಳಲಿ... ಏನು ಕೇಲಬೇಕು ಗೊತ್ತಾಗವಲ್ತು. ನಾ ಬೇಡುವವನಲ್ಲ. ನೀವೇ ಏನರೆ ಹೇಳ್ರಿ ಬೇಡ್ತೀನಿ" ಎಂದು ಕನಕ ಹೇಳಿದ. 

ಪು..) ಅವರೇನು ಮಾಡ್ತಾ ಇದ್ರು ಹೇಳು ..?? ಎಂದು ಕನಕನಿಗೆ ಕೇಳಿದರು. "ನಗತಿದ್ರು.. ಅಳತಿದ್ರು.. ಕಣ್ಣು ಮುಚ್ಚಿಕೂಡತಿದ್ರು.. ಏನೇನೋ ಮಾಡತಿದ್ರು..." ಎಂದು ಉಸರಿಸಿದ. 

ಪು..) ಅವರಿಗೇ ಕೇಳು ನಿಮ್ಮ ನಗುವಿನ ಸ್ವಲ್ಪ... ಅಳುವದರಲ್ಲಿಯ ಸ್ವಲ್ಪ... ಕಣ್ಣುಮುಚ್ಚಿ ಕೂಡ್ತೀರಲಾ ಅದೂ ಸ್ವಲ್ಪ‌ ನನಗೆ ಕೊಡ್ರಿ ಹೀಗೆ ಬೇಡು ಎಂದು ತಿಳಿಸಿ ಕಳುಹಿಸಿದರು. 

ಆ ಮಹಾ ಗುರುಗಳಿಂದ ನಗು - ಅಳು - ಕಣ್ಣುಮುಚ್ಚಿ ಕೂಡುವಿಕೆ ಇವುಗಳನ್ನು ಬೇಡಿ ಪಡೆದ ಕನಕ ದೇವರ ಲೀಲೆ ಮಹಿಮೆ ಇವುಗಳನ್ನು ನೆನೆದು ನಕ್ಕ. ದೇವರ ಉಪಕಾರವನ್ನು ನೆನೆದು ಕಣ್ಣೀರಿಟ್ಟ. ದೇವರ ಧ್ಯಾನ ಮಾಡುಲು ಕಣ್ಣುಮುಚ್ಚಿ ಕುಳಿತ. ಅದನ್ನು ಗಮನಿಸಿ ವ್ಯಾಸರಾಯರು ಕನಕನಿಗೆ ಅಂಕಿತ ಕೊಟ್ಟರು ಆದಿಕೇಶವ ಎಂದು. ಅಂದಿನಿಂದ ದೇವರ ದಾಸನಾದ ಕನಕದಾಸರು. 

ಹರಿಭಕ್ತಿಸಾರ - ಕೇಶವನಾಮ - ಅನೇಕ ಕೃತಿಗಳು - ಉಗಾಭೋಗ ಮೊದಲಾದ ಪ್ರತೀ ಕೃತಿಗಳಲ್ಲಿಯೂ ರಕ್ಷಿಸು ಪರಿಪರಿಯಾಗಿ ದೇವರನ್ನು ಪ್ರಾರ್ಥಿಸುವವರು ಕನಕದಾಸರು. 

ಕನಕದಾಸರ ಒಂದು ಸಂದೇಶ

ಹೇ ಈಶ !! ನಿನ್ನ ಚರಣ ಭಜನೆಆಸೆಯಿಂದ ಮಾಡುವೆನು...  ಕರೆದು ಮುಕ್ತಿಕೊಡುವ ನೆಲೆಯಾದಿ ಕೇಶವ ನಿನ್ನ ಪಾದಾರವಿಂದಗಳನ್ನು ಆಸೆಯಿಂದ ಪ್ರೀತಿಯಿಂದ ಸೇವಿಸುವೆ ನಾನು,  ಕರೆದು ಮುಕ್ತಿ ಕುಡುವ ಆದಿಕೇಶವನು ನೀನು. ಎಂದು ಹಣವಂತನನ್ನೇ ಆಸೆಯಿಂದ ಪೂಜಿಸು ಪ್ರಾರ್ಥಿಸು ಎಂಬ ಸಂದೇಶವನ್ನೂ ಕೊಡುತ್ತಾರೆ..

✍🏽ನ್ಯಾಸ...
ಗೋಪಾಲ ದಾಸ.

ವಿಜಯಾಶ್ರಮ, ಸಿರವಾರ.
*************

[9:28 PM, 12/4/2020] Prasad Karpara Group: ಪರಮ ಪುರುಷ ನೀ ನೆಲ್ಲಿಕಾಯಿ
ಸರಸಿಯೊಳಗೆ ಕರಿ ಕೂಗಿರೆಕಾಯಿ
ಹಿರಿದು ಮಾಡಿದ ಪಾಪ ನುಗ್ಗೆಕಾಯಿಹರಿ ನಿನ್ನ ಜ್ಞಾನ ಬಾಳೆಕಾಯಿ ||
ಅರ್ಥ : ಪರಮ ಪುರುಷ ನೀನು ಸರ್ವತ್ರ ಕಾಯಬೇಕು.ಸರಸಿಯೊಳಗೆ ಮೊಸಳೆಯು ತನ್ನನ್ನು ಎಳೆಯುತ್ತಿರುವಾಗ, " ನಾರಾಯಣ ಅಖಿಲ ಗುರೋ ಭಗವನ್ನಮಸ್ತೇ " ಎಂದಾಕ್ಷಣ ಬಂದು ನಕ್ರನನ್ನು ಸೀಳಿ ಗಜೇಂದ್ರನನ್ನು ರಕ್ಷಿಸಿದಂತೆ ನನ್ನನ್ನು ರಕ್ಷಿಸು. ಹಿಂದೆ ಮಾಡಿದ ಪಾಪ ಕರ್ಮದ ಫಲವು ಈ ಜನ್ಮದಲ್ಲಿ ರೋಗಾದಿ ರೂಪಗಳಿಂದ ನುಗ್ಗಿ ಬರುತ್ತಿರಲು ನೀನೇ ಕಾಯಿ  ನಿನ್ನ ಜ್ಞಾನ ನಿರಂತರವಾಗಿ ನನ್ನಲಿ ಬಾಳುವಂತೆ ಕಾಯಿ.
ಊರಗಾಧಿಪತಿ ಎಂಬ ಹೆಸರಿನ ಕಾಯಿ
ಬಾಡದಾದಿ ಕೇಶವ ನಿನ್ನ ಮೆತ್ತಿದ ಕಾಯಿ.
ಅರ್ಥ : ಉರಗಾಧಿ ಪತಿಯಾದ ಕಾಳಿಯನ ಅಹಂಕಾರವನು ಹೋಗಲಾಡಿಸಿ, ನಿನ್ನ ಉರಸ್ಸಿನಲ್ಲಿ ವಾಸಿಸುವದರಿಂದ ಉರಗಾ ಎಂದೆನಿಸಿದ ಲಕ್ಷ್ಮೀದೇವಿಗೆ ಅಧಿಪತಿಯಾದ ನೀನು ನನ್ನನ್ನು ರಕ್ಷಿಸು.
ಕೃತಿ - ಕನಕದಾಸರು.
*******

by [9:28 PM, 12/4/2020] Prasad Karpara Group: ಭಕ್ತ ಶ್ರೇಷ್ಠ ಕನಕದಾಸರು

ಕನ್ನಡ ಭಕ್ತಿ ಶ್ರೋತಕ್ಕೆ ಅಪೂರ್ವ ಹರವು ಒದಗಿಸಿದವರು ಕನಕದಾಸರು. ಈಶನ ಚರಣ ಭಜನೆ ಆಸೆಯಿಂದ ಮಾಡಿ ದೂರದ ವೈಕುಂಠವನ್ನು ದೃಷ್ಟಿಯಿಂದ ಕಂಡವರು.

ಭಕ್ತಿಯ ಸೂರು ಹೊಡೆದು ಅವಿನಾಶಿ ಶಾಸ್ತ್ರ ಸಮುದ್ರದ ಆಳಕ್ಕಿಳಿದು ತತ್ವ ರತ್ನಗಳನ್ನು ಸಂಪಾದಿಸಿದರು. 

ದೇಸೀ ಸಾಹಿತ್ಯದ ಮಾರ್ಗ ಹಿಡಿದು ಸತ್ಯ-ಶುದ್ಧ ತತ್ವಗಳನ್ನು ಸರಳ ಹಾಡುಗಳಲ್ಲಿ  ಜನಮಾನಸದಲ್ಲಿ ಹರಡಿದರು.

ವ್ಯಾಸರಾಯರ ಮಾತೃ ವಾತ್ಸಲ್ಯ ಪುರಂದರದಾಸರ ಸಹೋದರತ್ವ ಹರಿ ಕರುಣೆಯ ಸಿರಿಹೊಂದಿದ ಕನಕದಾಸರು ಭಕ್ತಶ್ರೇಷ್ಠರು.

ವೈರಾಗ್ಯದ ಶಿಖರ
ದಂಡನಾಯಕರಾಗಿದ್ದ ನಾಯಕರು ದಂಡಿಗೆ ಬೆತ್ತ ಹಿಡಿದು ಲೊಕನಾಯಕನ ದಾಸರಾದವರು.

ಎಂಟು ಗೇಣಿನ ಕೀಲ್ಗಳರವೆಂಟುಸಾವಿರದ ದೇಹ ಸ್ಥಿರವಲ್ಲ ಎಂದಿಗಾದರೂ ಒಂದು ದಿನ ಸಾವು ತಪ್ಪದು. ಇರುವುದರೊಳಗೆ ಮರಳಿ ಹುಟ್ಟುವ ಸುರುಳಿ ಬಿಡಿಸಿಕೊಳ್ಳುವ ಪರಿಯ ಹೇಳಿದರು.

ನಾರಾಯಣನ ನಾಮ ನೆರೆ ಬಾಹುದಲ್ಲದೇ ಯಾರೂ ಸಂಗಡ ಬಾಹುರಿಲ್ಲ ಎಂಬುದನ್ನು ಕಂಡುಕೊಂಡರು ಅದನ್ನೇ ಸಾರಿದರು. 

ಎಲ್ಲರನ್ನು ಸಲಹುವನು ಇದೇಕೆ ಸಂಶಯವಿಲ್ಲ

ಕುಲ ಕುಲ ವೆಂದು ಹೊಡೆದಾಡುವರೇಕೆ ಎಲ್ಲರನ್ನು ಕೇಶವ ಸಲಹುವನು ಎಂದು ಸಮಾಜದಲ್ಲಿ ಸಮರಸ ಮೂಡಿಸಿದರು. ಕರಿಯ ಕರೆಗೆ ಬಂದಂತೆ, ಅಜಮಿಳನ ಪೊರೆದಂತೆ, ತಮಗೆ ಸಿಕ್ಕಂತೆ, ತಮ್ಮತ್ತ ತಿರುಗಿದಂತೆ ಎಲ್ಲರನ್ನೂ  ಸಲಹುವ ಲಕುಮಿ ನಲ್ಲನಿಗೆ ಶರಣಾಗಿ ಎಂದು ಹೇಳಿದ್ದಾರೆ.

ಮೂಢನಂಬಿಕೆಗಳ ವಿರುದ್ಧ
ಬಲಿ, ವಾಮಾಚಾರ ಇವುಗಳನ್ನು ಖಂಡಿಸಿದರು. ಕಣ್ಕಟ್ಟು, ಜಾದೂ ಇವುಗಳನ್ನು ಮಾಡುವವರಿಗೆ ಮರುಳಾಗದಿರಿ. ಶುದ್ಧ ಭಕ್ತಿಯೊಂದೆ ಸಿದ್ಧ ಸೂತ್ರ ಎಂಬ ಅರಿವು ಮೂಡಿಸಿದರು.

ಕನ್ನಡ ಸಾಹಿತ್ಯಕ್ಕೆ
ಕೀರ್ತನೆ, ದೇವರನಾಮ, ಸುಳಾದಿ, ಡೊಳ್ಳಿನ ಪದ, ದೀರ್ಘ ಕಾವ್ಯಗಳು, ಮುಂಡಿಗೆ ಗಳೆಂಬ ಗೂಢಾರ್ಥ ಹೊಂದಿದ ಸವಿರಚನೆಗಳು ಮುಂತಾದ ಹಲವು ಆಯಾಮದ ಕೊಡುಗೆ ಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ.

ಕೊನೆಯದಾಗಿ ಅವರ ಅಪೂರ್ವ ಹಾಡಿನ ತುಣುಕು

ಹಿಂದೆ ಎನ್ನ ಬೈದವರೆಲ್ಲ ಚಂದಾಗಿರಲಿ
ಮುಂದೆ ಎನ್ನ ಬಯ್ಯುವ ರೆಲ್ಲ ಅಂದಣ ಏರಲಿ

ಏನು ವಲ್ಲೆ ಹರಿಯೇ ನಿನ್ನ ಸ್ತುತಿಸಿ ಕೇಳುವುದು 

ಜ್ಞಾನ ಭಕ್ತಿ ಕೊಡು ನನಗೆ ಅದುವೇ ದೊಡ್ಡದು.

-ಜನಮೇಜಯ
********

ಜ್ಞಾನಿಗಳ ವಿಚಾರ ಮತ್ತೊಬ್ಬ  ಜ್ಞಾನಿಗಳಿಗೆ ಮಾತ್ರ ಅರ್ಥವಾಗುವುದು . ಅವರಾಗಿ ತಿಳಿಸಿಕೊಟ್ಟರೆ ಅವರ ಅನುಗ್ರಹದಿಂದ  ನಮ್ಮಂಥಹ ಪಾಮರರಿಗೂ ಯೋಗ್ಯತಾನುಸಾರವಾಗಿ ಅರ್ಥವಾಗುತ್ತದೆ. ಅದು ಅವರು ಬರೆದ ಗ್ರಂಥಗಳ ವ್ಯಾಖ್ಯಾನ, ಟೀಕಾ ಟಿಪ್ಪಣಿಗಳೇ ಇರಬಹುದು, ಅವುಗಳಿಗೆ ಸರಿಸಮಾನವಾದ ಪ್ರಾಕೃತ ಭಾಷೆಯ ಕೃತಿಗಳೇ ಇರಬಹುದು ಮತ್ತು ಜ್ಞಾನಿಗಳು ತೋರುವ ಮಹಿಮೆಗಳೇ ಇರಬಹುದು.  
ಜ್ಞಾನಿಗಳಾದವರು ಹೇಗಿರುತ್ತಾರೆ ಎನ್ನುವುದರ ಬಗ್ಗೆ ಜ್ಞಾನಿಗಳಾದ ಶ್ರೀವಿಜಯದಾಸರು ತಮ್ಮ ಒಂದು ಕೃತಿಯಲ್ಲಿ ಬೂದಿ ಮುಚ್ಚಿದ ಕೆಂಡದಂತಿಪ್ಪರು ಈ ಧರೆಯ ಮೇಲೆ ಶ್ರೀಹರಿ ಭಕ್ತರು.. ಅಂತ ತಿಳಿಸುತ್ತಾರೆ‌. ಸಾಮಾನ್ಯರಿಗೆ ನೋಡಿದರೆ ಏನೂ ಅರ್ಥವಾಗುವುದಿಲ್ಲ.  ಅವರಾಗಿ ಅನುಗ್ರಹಿಸಿ ಅವರ ಮಹಿಮೆ ಬಿಟ್ಟುಕೊಟ್ಟರುಂಟು,  ಇಲ್ಲದಿದ್ದರೆ ಇಲ್ಲ, ಯಾಕೆಂದರೆ ಅವರು ರೂಢಿಯೊಳಗೆಂದೆಂದು ಗೂಢವಾಗಿಹರು ಅಂತ ತಿಳಿಸ್ತಾರೆ ಶ್ರೀವಿಜಯಪ್ರಭುಗಳು. 
ನಾನು ಇಂತಹ ಜ್ಞಾನಿ ಅಂತ ಅವರು ಹೆಸರೂ ಬರೆದುಕೊಂಡಿರುವುದಿಲ್ಲ ಮತ್ತೂ ಹೇಳಿಕೊಂಡೂ ಓಡಾಡುವುದೂ ಇಲ್ಲ, ಬದಲಿಗೆ ಮಂಗಳಾಂಗನ ಅಂತರಂಗದಲ್ಲಿ ಭಜಿಸುತ್ತ ಹಿಂಗದೆ ಸಂತಜನ ಸಂಗದೊಳಗಿಹರಯ್ಯ ಅಂತ ಶ್ರೀವಿಜಯ ಪ್ರಭುಗಳು ತಿಳಿಸಿದಂತೆ ಸಜ್ಜನರ ಸಂಗದೊಳಗಿರುತ್ತಾರೆ,ಯಾರೂ  ಸಿಗದಿದ್ದರೆ ಏಕಾಂತವಾಗಿದ್ದು ತಮ್ಮ‌ ಸಾಧನೆಯನ್ನು ಮಾಡಿಕೊಳ್ಳುತ್ತಾರೆ. ಹೀಗೆ ಸಾಧನೆ ಮಾಡಿಕೊಂಡ ಅನೇಕ ಜ್ಞಾನಿಗಳಲ್ಲಿ ಶ್ರೇಷ್ಠರಾದ ನಮ್ಮ ಶ್ರೀ ಕನಕದಾಸರೂ ಒಬ್ಬರು. ಶ್ರೀಪುರಂದರ ದಾಸರಿಗೆ ಸರಿಸಮಾನರಾಗಿ ಹರಿದಾಸರ ಸಾಲಿನಲ್ಲಿ ನಿಲ್ಲುತ್ತಾರೆ. ಮತ್ತು  ಶ್ರೀಪುರಂದರ ದಾಸರಂತೆಯೇ ಯಾರ ಆಶ್ರಯದಲ್ಲಿಯೂ ವಾಸಿಸದೇ ಸದಾ ತೀರ್ಥಯಾತ್ರೆಯಲ್ಲಿದ್ದವರು. ಶ್ರೀವ್ಯಾಸರಾಜರಿಂದ ಅನುಗ್ರಹಿತರಾಗಿ ಅವರಲ್ಲಿದ್ದು ಸೇವಾದಿಗಳನ್ನು ಮಾಡಿ, ನಂತರ ಕೆಲಕಾಲ ಉಡುಪಿಯಲ್ಲಿದ್ದು ಭಾವಿ ಮರುತರಾದ  ಶ್ರೀವಾದಿರಾಜರ ಜೊತೆ ಕೆಲವು ಕಾಲ ಇದ್ದಿದ್ದು ಬಿಟ್ಟರೆ ಪೂರ್ತಿ ಜೀವನ ಸಂಚಾರವೇ..

ಭಗವಂತನ ಏಕಾಂತ ಭಕ್ತರಾದ ಕನಕಪ್ಪ, ಧೋತರ, ಹೆಗಲ ಮೇಲೆ ಕಂಬಳಿ, ಕೈಯಲ್ಲಿ ಏಕನಾಡಿ,ಒಂದು ಬೆತ್ತ ಮತ್ತು ಹೆಗಲಲ್ಲಿ ಒಂದು ಜೋಳಿಗೆ ಬುಟ್ಟಿ,  ಹಣೆಯ ಮೇಲೆ ಏಕನಾಮ(ಬ್ರಾಹ್ಮಣರಿಗೆ ದ್ವಾದಶ, ಕ್ಷತ್ರಿಯರಿಗೆ ಒಂಭತ್ತು, ವೈಶ್ಯರಿಗೆ ಆರು ಮತ್ತು ಶೂದ್ರರಿಗೆ ಒಂದು ನಾಮ ಅನ್ನುವುದು ವಿಧಿ).  ಸದಾ ಬಿಂಬಮೂರುತಿಯಾದ ಕೇಶವನ ನಾಮ ಹೀಗೆ ಅವರ ಸಂಚಾರ ಕ್ರಮ..
 ಒಮ್ಮೆ ತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಿದ್ದಾಗ, ಆ ಸಮಯಕ್ಕಾಗಲೇ ಅವರು  ಪ್ರಸಿದ್ಧರಾದ್ದರಿಂದ ಅವರನ್ನು ಸತ್ಕರಿಸಲು ದೇವಸ್ಥಾನದಿಂದ ಸಿಬ್ಬಂಧಿಗಳು ಮೆಟ್ಟಿಲುಗಳ ಬಳಿ ಕಾಯುತ್ತಾ ನಿಂತಿದ್ದರು. ಕನಕದಾಸರನ್ನು ಅವರ್ಯಾರೂ ನೋಡಿದ್ದಿಲ್ಲ, ನೋಡಲಿಕ್ಕೆ ಒಳ್ಳೆಯ ವಸ್ತ್ರ ಧರಿಸಿದವರನ್ನೆಲ್ಲಾ  ನೀವು ಕನಕದಾಸರೇ, ಅಂತ ಕೇಳುತ್ತಿದ್ದರು. ಅವರಿಗೇನು ಗೊತ್ತು ಜ್ಞಾನಿಗಳು ಡಂಭಕತನದಿಂದ ಗೊಂಬೆ ನೆರಹಿಕೊಂಡು ಡೊಂಬ ಕುಣಿತದಂತೆ ಕುಣಿದಾಡರು, ಹಂಬಲಗಳ ಬಿಟ್ಟು ಹರುಷವುಳ್ಳವರಾಗಿ ಬಿಂಬಮೂರುತಿಯನು ಕೊಂಡಾಡುತಿಹರು ಅಂತ. ಕೊನೆಗೆ ಯಾರೋ ಒಬ್ಬ ಏಕನಾಡಿ ಹಿಡಿದು ಬರುತ್ತಿರುವುದನ್ನು ನೋಡಿ, ಈತನಿಗೆ ಗೊತ್ತಿರಬಹುದೆಂದು ಕನಕದಾಸರು ಎಲ್ಲಿ ಅಂತ ಕೇಳಿದರು. 
ಮೊದಲೇ ಕನಕಪ್ಪ, ಕೇಳಬೇಕೆ, ಹಿಂದೆ ಬರುವವರ ಮುಂದೆ, ಮುಂದೆ ಹೋಗುವವರ ಹಿಂದೆ ಇದಾರೆ ಅಂತ ಒಗಟಾಗಿ ತಿಳಿಸಿ ಹೊರಟೇ ಬಿಟ್ಟರು. ಇವರಿಗೆ ಅರ್ಥವಾಗಲೇ ಇಲ್ಲ, ಯಾವನೋ ಮೂರ್ಖ ಏನೇನೋ ಆಡ್ತಾನೆ ಅಂತ  ತಿಳಿದು, ಬೇರೆಯವರನ್ನು‌ ವಿಚಾರಿಸುತ್ತಿದ್ದರು. ಕೊನೆಗೂ ಸಿಗದೇ, ಇಂದು ಬಂದಿಲ್ಲ, ನಾಳೆ ಬರಬಹುದೆಂದು ಯೋಚಿಸಿ ದೇವಸ್ಥಾನದ ಬಳಿ ಬಂದಾಗ, ಗರ್ಭಗುಡಿಯ ಬಾಗಿಲು ಮುಚ್ಚಿದೆ, ಕೇಳಿದರೆ ಕನಕದಾಸರು ಬಂದಿದ್ದಾರೆ, ಸ್ವಾಮಿಯ ಆಜ್ಞೆಯಂತೆಯೇ ಏಕಾಂತ ಸೇವೆ ಮಾಡುತ್ತಿದ್ದಾರೆ ಅಂತ ಅಧಿಕಾರಿಗಳು ತಿಳಿಸಿದರು. ಹೊರ ಬಂದನಂತರ ನೋಡ್ತಾರೆ ಇದೇ ಕಂಬಳಿ ಹೊದ್ದ ಏಕ ನಾಡಿ ಹಿಡಿದ ಅದೇ ವ್ಯಕ್ತಿ.. ಆಶ್ಚರ್ಯ..

ಹಿಂದೆ ಬರುವವರ ಮುಂದೆ, ಮುಂದೆ ಹೋಗುವವರ ಹಿಂದೆ ಅಂದರೆ ತಾನೇ ಕನಕದಾಸ ಅಂತ ಅವರಿಗೆ ಅರ್ಥವಾಗಲೇ ಇಲ್ಲ. ಹೀಗೇ ಇರುತ್ತದಲ್ಲವೇ ಜ್ಞಾನಿಗಳ ಮಾತು. (ಮತ್ತೊಂದು ಸಂದರ್ಭದಲ್ಲಿ  ಅವರೇ ತಿಳಿಸಿದಂತೆ ನಾನು ಹೋದರೆ ಹೋದೇನು ಎನ್ನುವ ಮಾತಿನಂತೆ). 
ಹಿಂದಿರುವವರ ಮುಂದೆ, ಮುಂದೆ ಇರುವವರ ಹಿಂದೆ ಅನ್ನುವ ಒಳ ಅರ್ಥ ನೋಡುವುದಾದರೆ
ಒಂದು, ಯಾರು ಭಗವಂತನ ಸಾಧನೆಯಲ್ಲಿ ಹಿಂದಿದ್ದಾರೋ ಅವರಿಗೆ  ತಾವು ಮುಂದೆ,ಯಾರು ಸಾಧನೆಯ ಹಾದಿಯಲ್ಲಿ ಮುಂದಿದ್ದಾರೋ  ಅವರ ಹಿಂದೆ ಅನ್ನುವ ಅರ್ಥ. 
ಯಾರು ಸಾಧನೆಯನ್ನು  ಮಾಡಿಕೊಳ್ಳಲು  ಸಾಧ್ಯವಿಲ್ಲ ಅಂತ ತಿಳಿದು ಹಿಂಜರಿಯುತ್ತಾರೋ ಅವರಿಗೆ, ಶೂದ್ರ ಜನ್ಮ ಬಂದರೂ ತಾವು ಸಾಧನೆ ಮಾಡಿಕೊಳ್ಳಬಹುದು, ಜಾತಿಯು ಎಂದು ಭಗವಂತನ ಸಾಧನೆಗೆ ಬಾಧಕವಲ್ಲ  ಎಂದು ತೋರಿಸಲು ಅವರ ಮುಂದೆ ಎಂದು  ಮತ್ತೂ ಯಾರು  ಸಾಧನೆ ಮಾಡಿಕೊಳ್ಳುತ್ತಿದ್ದಾರೋ ಅವರ ಹಿಂದೆ ಅನ್ನುವ ಸರಳತನ ಸ್ವಭಾವ, ಅಹಂಕಾರದ ಖಂಡನೆ. 
ಮತ್ತೊಂದು ಅರ್ಥ, ಸಾಧನೆಯಲ್ಲಿ ಮುಂದಿರುವವರಿಗೆ ಅವರನ್ನು ಅನುಸರಿಸಿ ತಾವು ಹಿಂದೆ ಎಂದೂ, ಸಾಧನೆಯ ಮಾರ್ಗದಲ್ಲಿ ತಮ್ಮನ್ನು ಅನುಸರಿಸುತ್ತಿರುವವರಿಗೆ ತಾವು ಮುಂದೆ ಎಂದೂ ಮಾತಿನ ಅರ್ಥ.

ಸಾಧನೆಯ ಪಥದಲ್ಲಿ ಯಾರು ಮುಂದಿದ್ದಾರೋ ಅವರನ್ನು ತಾವು  ಅನುಸರಿಸುವುದು(ತಾರತಮ್ಯದಲ್ಲಿ ತಮಗಿಂತ  ದೊಡ್ಡ ದೇವತೆಗಳ ಮತ್ತು ಚಿಕ್ಕವರಾದರೂ   ಭಗವಂತನ ಮತ್ತು ವಾಯು ದೇವರ ನಿತ್ಯಾವೇಶಯುಳ್ಳ ದೇವತೆಗಳು)  ಅಂದರೆ ಅವರ ದಾಸರಾಗಿ ಅವರ ಸೇವಾದಿಗಳನ್ನು ಮಾಡುತ್ತಾ ಸಾಧನೆ ಮಾಡಿಕೊಳ್ಳುವುದು.  ಇದೇ ಅರ್ಥದಲ್ಲಿ ದಾಸದಾಸರ ದಾಸರ ದಾಸ್ಯವ ಕೊಡೋ, ದೋಷರಾಶಿಗಳಳೆದು ಅಂತ ಒಬ್ಬ ಹರಿದಾಸರು  ಪ್ರಾರ್ಥಿಸಿದರೆ, ಕನಕದಾಸರು ದಾಸ ದಾಸರ ಮನೆಯ ದಾಸಾನುದಾಸ ಅಂತ ಹೇಳಿಕೊಂಡಿದ್ದೂ ಇಲ್ಲಿಗೆ ಅನ್ವಯವಾಗುತ್ತದೆ.
ಮತ್ತು ತಮಗಿಂತ ತಾರತಮ್ಯದಲ್ಲಿ ಚಿಕ್ಕವರಾದವರ ಸಾಧನೆಯ ಹಾದಿಯಲ್ಲಿ ಮುಂದೆ ಇದ್ದಾರೆ ಅನ್ನುವ ಅರ್ಥ. 
ಇಂತಹ ಶ್ರೇಷ್ಠ ಹರಿದಾಸರಾದ ಯಮಾಂಶಸಂಭೂತರಾದ ಶ್ರೀಕನಕದಾಸರು ನಮ್ಮನ್ನೆಲ್ಲಾ ತಮ್ಮ ಕೃತಿಗಳ ಮೂಲಕ ಶಾಸ್ತ್ರಾರ್ಥಗಳನ್ನು ತಿಳಿಸಿ, ಅನುಗ್ರಹಿಸಿಲಿ ಎಂದು ಶ್ರೀಕನಕದಾಸರ  ಮತ್ತು ಅವರ ಅಂತರ್ಯಾಮಿಯಾದ ಶ್ರೀವ್ಯಾಸರಾಜ ಗುರುಸಾರ್ವ ಭೌಮರ ಅಂತರ್ಯಾಮಿ, ಹನುಮಭೀಮ ಮಧ್ವಾಂತರ್ಗತ ಆದಿಕೇಶವಾಭಿನ್ನ ಶ್ರೀಗೋಪಾಲ ಕೃಷ್ಣದೇವರಲ್ಲಿ ಭಕ್ತಿಯಿಂದ ಪ್ರಾರ್ಥಿಸೋಣ.
******

ಶ್ರೀ ಕನಕ - 1 "
" ದಿನಾಂಕ : 03.12.2020 ಗುರುವಾರ ಕವಿಸಾರ್ವಭೌಮ ಶ್ರೀ ಕನಕದಾಸರ ಜಯಂತೀ "
" ಪ್ರಾಸ್ತಾವಿಕ "
ಶ್ರೀ ಕನಕದಾಸರ ಹೆಸರಿನ ಪರಿಚಯವಿಲ್ಲದ ಕನ್ನಡಿಗನೇ ವಿರಳ. 
ಕನ್ನಡ ಹರಿದಾಸರಲ್ಲಿ ಶ್ರೀ ಪುರಂದರದಾಸರ ತರುವಾಯ ತಟ್ಟನೆ ಬಾಯಿಗೆ ಬರುವ ಹೆಸರೆಂದರೆ ಶ್ರೀ ಕನಕದಾಸರು. 
ಸಮಕಾಲೀನ ಈ ದಾಸವರೇಣ್ಯರಿಬ್ಬರೂ ಹರಿ ದಾಸ ಪ್ರಪಂಚದಲ್ಲಿ ಹೆಗಲೆಣೆಯಾಗಿ ನಿಂತು ಸೇವೆ ಸಲ್ಲಿಸಿರುತ್ತಾರೆ. 
ಶ್ರೀ ವ್ಯಾಸರಾಜ ಗುರುಸಾರ್ವಭೌಮರ ನೇತೃತ್ವದಲ್ಲಿ ಇವರಿಬ್ಬರು ಮಾಡಿದ ಕಾರ್ಯವು ಎಂದೆಂದಿಗೂ ವಿರಾಜಮಾನವಾಗಿದೆ. 
ಶ್ರೀ ಪುರಂದರದಾಸರು ಕನ್ನಡ ಕೀರ್ತನ ಪ್ರಪಂಚದ ಧೃವತಾರೆಯಂತಿದ್ದರೆ - ಶ್ರೀ ಕನಕದಾಸರು ತಮ್ಮ ಇತರ ಕಾವ್ಯ ಕೃತಿಗಳಿಂದ " ಕನ್ನಡ ಕಾವ್ಯ ಲೋಕದಲ್ಲಿಯೂ ಒಂದು ವಿಶಿಷ್ಟವಾದ ಸ್ಥಾನ " ವನ್ನು ಹೊಂದಿದ್ದಾರೆ. 
ಹರಿದಾಸ ಸಾಹಿತ್ಯದ ವ್ಯಾಪ್ತಿ - ಕೀರ್ತನೆ - ಸುಳಾದಿ - ಉಗಾಭೋಗ - ವೃತ್ತನಾಮ - ಜಾವಳಿ - ಲಾವಣಿ - ಬಯಲಾಟಗಳಿಗೆ ಸೀಮಿತವಾಗದಂತೆ - ಅದರ ಕೈ ಕಾವ್ಯ ಪ್ರಪಂಚಕ್ಕೂ ಚಾಚುವಂತೆ ಮಾಡಿದ ಶ್ರೇಯಸ್ಸು ಶ್ರೀ ಕನಕದಾಸರಿಗೆ ಸಲ್ಲುತ್ತದೆ. 
ಶ್ರೀ ಕನಕದಾಸರ ಈ ಕಾರ್ಯದಿಂದಲೇ ಪ್ರೇರಿತರಾಗಿ ಇತರ ಹರಿದಾಸರು ಕೀರ್ತನೆಗಳ ಜೊತೆಗೆ - ನಿಡಿದಾದ ಕೃತಿಗಳನ್ನೂ ರಚಿಸಿರಬಹುದೆಂದು ಹೇಳಬಹುದು. 
ಅಂಥಾ ಕೆಲವು ರಚನೆಗಳಲ್ಲಿ.... 
ಶ್ರೀ ಪ್ರಸನ್ನ ವೆಂಕಟದಾಸರ " ಶ್ರೀಮದ್ಭಾಗವತ ದಶಮ ಸ್ಕಂದ "ಶ್ರೀ ಜಗನ್ನಾಥದಾಸರ " ಹರಿಕಥಾಮೃತಸಾರ " ಮೊದಲಾದವು ಬಹು ಮುಖ್ಯವಾದುವು. 
ಶ್ರೀ ಕನಕದಾಸರ.... 
1. ಮೋಹನ ತರಂಗಿಣೀ 
2. ನಳ ಚರಿತ್ರೆ 
3. ರಾಮ ಧಾನ್ಯ ಚರಿತೆ 
4. ಹರಿ ಭಕ್ತಿ ಸಾರ 
5. ನರಸಿಂಹ ಸ್ತವ 
ಮೊದಲಾದುವುಗಳೊಂದಿಗೆ ಹೋಲಿಸಿ ನೋಡಿದರೆ - ಕಾವ್ಯ ದೃಷ್ಟಿಯಿಂದ ಶ್ರೀ ಕನಕದಾಸರ ರಚನೆಗಳು ಹೆಚ್ಚು ಹೃದಯಂಗಮವಾಗಿವೆಯೆಂದು ಹೇಳಲು ಅಡ್ಡಿಯಿಲ್ಲ. 
ಅಷ್ಟೇ ಅಲ್ಲ - ಕಥಾ ವಸ್ತುವಿನ ದೃಷ್ಟಿಯಿಂದಲೂ ಶ್ರೀ ಕನಕದಾಸರ ಕೃತಿಗಳು ವಿಶಿಷ್ಟವಾದುವು ಯೆನ್ನಬಹುದು . 
ಈ ಅತ್ಯಮೂಲ್ಯವಾದ ಕೃತಿಗಳನ್ನು ಮುಂದುವರೆದ  ಈ ಲೇಖನದಲ್ಲಿ ಬಹು ಸಂಕ್ಷಿಪ್ತವಾಗಿ ಅವಲೋಕಿಸಲಾಗಿದೆ.
***
" ಶ್ರೀ ಕನಕ - 2 "
" ಶ್ರೀ ಕನಕದಾಸರ ಸಂಕ್ಷಿಪ್ತ ಮಾಹಿತಿ "
ಹೆಸರು : ಶ್ರೀ ತಿಮ್ಮಪ್ಪ 
ತಂದೆ   : ಶ್ರೀ ಬೀರಪ್ಪ 
ತಾಯಿ : ಸಾಧ್ವೀ ಬಚ್ಚಮ್ಮ 
ಜನ್ಮ ಸ್ಥಳ : ಬಾಡ ( ಧಾರವಾಡ ಜಿಲ್ಲೆ )
ಕಾಲ : ಕ್ರಿ ಶ  1508 - 1608
" ಸ್ವರೂಪೋದ್ಧಾರಕ ಗುರುಗಳು "
ಶ್ರೀ ವ್ಯಾಸರಾಜ ಗುರುಸಾರ್ವಭೌಮರು 
" ಸಮಕಾಲೀನ ಯತಿಗಳು "
 ಶ್ರೀ ವಾದಿರಾಜರು, ಶ್ರೀ ವಿಜಯೀಂದ್ರರು 
" ಸಮಕಾಲೀನ ಹರಿದಾಸರು "
ಶ್ರೀ ಪುರಂದರದಾಸರು, ಶ್ರೀ ವೈಕುಂಠದಾಸರು 
" ಅಂಶ  " 
ಶ್ರೀ ಯಮಧರ್ಮರಾಜರು 
ಕಕ್ಷೆ    : 12
" ಅಂಕಿತ " 
ಹರಿಪ್ರಸಾದಾಂಕಿತ " ಆದಿಕೇಶವ "
ಪ್ರಮಾಣ :
ಶ್ರೀ ಕನಕದಾಸರು ಶ್ರೀ ಯಮಧರ್ಮರಾಜರ ಅವತಾರ. 
ಇವರು 12ನೇ ಕಕ್ಷದ ದೇವತೆಗಳು. 
ಶ್ರೀ ಯಮಧರ್ಮರಾಜರು ಶ್ರೀ ಮಾಂಡವ್ಯ ಋಷಿಗಳ ಶಾಪದಿಂದ ಈ ಭುವಿಯಲ್ಲಿ ಎರಡು ಜನ್ಮ ಶೂದ್ರ ಯೋನಿಯಲ್ಲಿ ಅವತರಿದ್ದು, ಶ್ರೀ ಕನಕದಾಸರೇ ತಮ್ಮ ಒಂದು ಉಗಾಭೋಗದಲ್ಲಿ ತಮ್ಮ ಮೂಲರೂಪ ಮತ್ತು ಅವತಾರ ಹಾಗೂ ಶ್ರೀ ವ್ಯಾಸರಾಜರ - ಶ್ರೀ ಪುರಂದರದಾಸರ - ಶ್ರೀ ರಾಘವೇಂದ್ರ ತೀರ್ಥರ -  ಶ್ರೀ ವರದ - ಶ್ರೀ ಗುರು - ಶ್ರೀ ಅಭಿನವ ಪುರಂದರ ದಾಸರು ಮತ್ತು ಶ್ರೀ ಮಧ್ವಪತಿ, ಶ್ರೀ ವಿಜಯದಾಸರ ಅವತಾರ ವಿಶೇಷವನ್ನು ಸ್ಪಷ್ಟ ಪಡಿಸಿದ್ದಾರೆ!!
ವ್ಯಾಸರಾಯರಿಗೆ ಮೂರು ಜನ್ಮ । ದಾಸರಿಗೆ ಎರಡು ಜನ್ಮ । ಶ್ರೀ । ವ್ಯಾಸರಾಯರೇ ಶ್ರೀ ರಾಘವೇಂದ್ರರಾಯರು । ರಾಮಚಂದ್ರನ । ಆಶ್ರಿತ ಜನ ಕೋಟಿಯೊಳಗೆ ಉತ್ಕ್ರುಷ್ಟ ರಾದವರು । ನಾರದರ । ಅಂಶವೇ ಪುರಂದರದಾಸರು । ತಮ್ಮ । ಕೂಸಾದ ಭೃಗು ಮುನಿಯಲ್ಲಿ ತಾವು । ಒಂದಂಶದಿ ನಿಂದು । ವಿಜಯದಾಸರೆಂದು । ಪೆಸರು ಪಡೆವ । ನಾ ಯಮನು ಮುಂದೆ, ಮಾಂಡವ್ಯ ಶಾಪದಿಂದ ಎರಡು ಜನ್ಮ ಶೂದ್ರ ಯೋನಿಯಲ್ಲಿ ಪೋಕ್ಕೆನಲು । ಒಂದು ಜನುಮ ವಿದುರನಾಗಿ ಕುರುಬರ ಕುಲದಲ್ಲೀಗ ಪುಟ್ಟಿದೆ । ಎನಗೆ ಈ ಜನ್ಮದಲ್ಲಿ ಮುಕುತಿ ಎಂತೆಂಬೆ । ವರದಪ್ಪ ಸೋಮ ಗುರುರಾಯ ದಿವಾಕರನು । ಅಭಿನವ ಬೃಹಸ್ಪತಿ ಮಧ್ವಪತಿ ಭೃಗು ಅಂಶದಿ ಮೆರೆವ । ಮಹಾ ಮಹಿಮೆ ಪೊಗಳುವೆನು । ಭಾಗವತರೊಳಗೆ ಯೋಗೀಂದ್ರ ಕೃಷ್ಣನ್ನ । ಬಾಗಿ ನಮಿಸುವ ದಾಸ ಜನರ ಪೋಷಕ. ಕಾಗಿನೆಲೆಯಾದಿಕೇಶವರಾಯ । ದಾಸೋತ್ತಮರ ಗುಣವ ಕನಕದಾಸ ಪೇಳಿದನು ।।
***
" ಶ್ರೀ ಕನಕ - 3 "
" ಶ್ರೀ ಕನಕ - ಶ್ರೀ ವ್ಯಾಸರಾಜರ ಮತ್ತು ವಿಜಯನಗರದ ಸಂಬಂಧ "
ಸೋಮನಾಥ ಕವಿಯು ಸಂಸ್ಕೃತದಲ್ಲಿ " ವ್ಯಾಸಯೋಗಿ ಚರಿತಮ್ " ಯೆಂಬ ಛಂಪೂ ಕಾವ್ಯ ಬರೆದಿರುವನು. 
ವ್ಯಾಸ ಯೋಗಿ ಚರಿತೆಯನ್ನು ಬರೆದು ಕಥಾನಾಯಕರಾದ ಶ್ರೀ ವ್ಯಾಸರಾಜ ಗುರುಸಾರ್ವಭೌಮರಿಗೆ ತೋರಿಸಿದನು. 
ಆದ್ದರಿಂದ ಸೋಮನಾಥನು - ಶ್ರೀ ಕೃಷ್ಣದೇವರಾಯ - ಶ್ರೀ ವ್ಯಾಸರಾಜರ ಸಂಬಂಧವಾಗಿ ಕಣ್ಣಾರೆ ಕಂಡ ವಿಷಯ. 
ಸೋಮನಾಥ ವ್ಯಾಸಯೋಗಿ ಚರಿತಂ ದೊರೆಯದಿದ್ದರೆ - ಶ್ರೀ ವ್ಯಾಸರಾಜರ - ಶ್ರೀ ಕೃಷ್ಣದೇವರಾಯನ ನಡುವಿನ ಸಂಬಂಧವು ಕಣ್ಮರೆಯಾಗಿ ಹೋಗಬಹುದಾಗಿತ್ತು. 
" ವ್ಯಾಸ ಯೋಗಿ ಚರಿತಂ " ಉಪಲಬ್ಧವಿರುವುದರಿಂದ ಆ ವಿಷಯದಲ್ಲಿ ಅನೇಕ ಸಂಗತಿಗಳು ಬೆಳಕಿಗೆ ಬಂದು ಶ್ರೀ ಕೃಷ್ಣದೇವರಾಯನ ಚರಿತ್ರೆಗೆ ಹೆಚ್ಚಿನ ಹೊಳಪು ಉಂಟಾಗಿರುವುದು. 
ವಿಜಯನಗರದ ರತ್ನ ಸಿಂಹಾಸನವನ್ನಲಂಕರಿಸಿದ ಅರಸರಲ್ಲಿ ಶ್ರೀ ಕೃಷ್ಣದೇವರಾಯನೇ ತೀರಾ ವೈಭವಶಾಲಿಯೂ. 
ಅವನ ಆಳ್ವಿಕೆಯಲ್ಲಿ ವಿಜಯನಗರ ಸಾಮ್ರಾಜ್ಯವು ಸುಖ ಸಂಪದಗಳ ನೆಲೆವೀಡಾಗಿತ್ತು. 
ಶ್ರೀ ಕೃಷ್ಣದೇವರಾಯನು ಕಳಿಂಗ - ಗಜಪತಿ ಅರಸರನ್ನು ಗೆದ್ದು ಸಾಮ್ರಾಜ್ಯವನ್ನು ವಿಸ್ತರಿಸಿದನು. 
ಆದಿಲಶಾಹಿಯ ಆಡಳಿತಕ್ಕೆ ಒಳಪಟ್ಟ ರಾಯಚೂರು ಕೋಟೆಯನ್ನು ಕೈವಶ ಮಾಡಿಕೊಂಡು ಅಪಾರ ಸಂಪತ್ತನ್ನೂ - ಯಶಸ್ಸನ್ನೂ ಸಂಪಾದಿಸಿದನು. 
ಬಹುಮನಿ ಸಾಮ್ರಾಜ್ಯದೊಳನುಗ್ಗಿ ಕಲಬುರ್ಗಿಯ ವರೆಗೆ ವಿಜಯನಗರ ಸಾಮ್ರಾಜ್ಯವನ್ನು ವಿಸ್ತರಿಸಿದನು. 
ಕೃಷ್ಣೆಯಿಂದ ರಾಮೇಶ್ವರದ ವರೆಗಿರುವ ದಕ್ಷಿಣ ಹಿಂದೂಸ್ಥಾನವನ್ನು ಏಕಛತ್ರಾಧಿಪನಾಗಿ ಆಳಿದನು. 
ಶ್ರೀ ಕೃಷ್ಣದೇವರಾಯನ ವರ್ಚಸ್ಸು ನರ್ಮದೆಯ ವರೆಗೂ ಹಬ್ಬಿದ್ದಿತೆಂದು ಅವನ ಬಿರುದಾವಳಿಯಿಂದ ತಿಳಿಯುವುದು. 
" ಶ್ರೀ ಸಮಸ್ತ ಭುವನಾಶ್ರಯ ಪೃಥ್ವೀ ವಲ್ಲಭ ಶ್ರೀಮನ್ಮಹಾರಾಧಿರಾಜ ರಾಜ ಪರಮೇಶ್ವರ ಭಟ್ಟಾರಕ ಸತ್ಯಾಶ್ರಯ ಪದವಾಕ್ಯ ಪ್ರಮಾಣ ಪಾರಾವಾರಪರೀಣ ಶ್ರೀಮನ್ಮಹಾಮಂಡಲೇಶ್ವರ ಪ್ರತ್ಯರ್ಥಿರಾಜವಿಭಾಡ ಶ್ರೀ ವಿರೂಪಾಕ್ಷ ಪಾದ ಪದ್ಮಾರಾಧಕ ಶ್ರೀ ವೀರ ಪ್ರತಾಪ ದಕ್ಶಿಣ ಸಮುದ್ರಾದಿ ನರ್ಮದಾನದ್ಯಂತ ಭೂಮಂಡಲೈಕ ಛತ್ರಾಧಿಪ ಸಕಲ ವರ್ಣಾಶ್ರಮಾಚಾರ ಧರ್ಮ ಪರಿಪಾಲಕ ಶ್ರೀ ವಿದ್ಯಾನಗರ ರಾಜಧಾನೀ ರತ್ನ ಸಿಂಹಾಸನಾಧೀಶ್ವರ ಸಕಲ ಕಲಾ ಭೋಜ ಕೃಷ್ಣದೇವ ಮಹಾರಾಯ " 
1. ಅಕ್ಬರ ಬಾದಶಹನಿಂದ ಮೊಗಲ ಸಾಮ್ರಾಜ್ಯವು ಘನತೆಗೇರಿತು. 
ಅದಕ್ಕೂ ಮುಂಚಿತವಾಗಿಯೇ ಪರನಾಡುಗಳಲ್ಲಿ " ವಿಜಯನಗರ " ವೇ ಹೆಸರುವಾಸಿಯಾಗಿದ್ದಿತು. 
2. ವಿಜಯನಗರದವರು ಪೋರ್ತುಗೀಜರಿಂದಲೇ ಮದ್ದು - ಶಸ್ತ್ರಾಸ್ತ್ರ - ಕುದುರೆ ಮುಂತಾದ ಯುದ್ಧ ಸಾಮಾಗ್ರಿಗಳನ್ನು ಕೊಂಡು ಕೊಳ್ಳುತ್ತಿದ್ದರು. 
ಹೀಗಾಗಿ ಪೋರ್ತುಗೀಸ್ ವಿಜಯನಗರದ ವ್ಯಾಪಾರದಿಂದ ವೈಭವಶಾಲಿಯಾಯಿತು. 
3. ರಕ್ಕಸತಂಗಡಿಯ ಅನಾಹುತದ ಮೂಲಕ ವಿಜಯನಗರವು ವಿಸ್ಖಲಿತವಾದಂದಿನಿಂದ ಪೋರ್ತುಗೀಸ್ ನ ಇಳಿಗಾಲವು ಪ್ರಾರಂಭವಾಯಿತು. 
4. ಶ್ರೀ ಕೃಷ್ಣದೇವರಾಯನು ವಿದ್ಯಾ ಪಕ್ಷಪಾತಿಯೂ - ಕವಿಯೂ . 
ಅವನಿಗೆ " ಭೋಜ " ನೆಂದೂ ಕರೆದುದೂ ಉಂಟು. 
ಕವಿಗಳಿಗೂ - ಪಂಡಿತರಿಗೂ ಅವನು ಆಶ್ರಯದಾತನು. 
ಅವನ ಆಳ್ವಿಕೆಯಲ್ಲಿ ಕನ್ನಡ - ತೆಲುಗು - ತಮಿಳು ಮುಂತಾದ ದೇಶ ಭಾಷೆಗಳು ಅಭಿವೃದ್ಧಿ ಹೊಂದಿದವು. 
ಸಂಸ್ಕೃತ ಗ್ರಂಥಗಳು ಅನೇಕವಾಗಿ ಅಸ್ತಿತ್ವದಲ್ಲಿ ಬಂದವು. 
ಶ್ರೀ ಕೃಷ್ಣದೇವರಾಯನು ಧರ್ಮವತ್ಸಲನೂ - ಧರ್ಮಾಚರಣೆಯಲ್ಲಿಯೂ - ಧರ್ಮ ಗುರುಗಳಲ್ಲಿಯೂ ತುಂಬಾ ಗೌರವ ಮತ್ತು ಆಸಕ್ತಿಯುಳ್ಳವನಾಗಿದ್ದನು. 
" ವಿಜಯನಗರದ ಅರಸರ ಆಡಳಿತ ಕಾಲಗಳು "
1. ಶ್ರೀ ಕೃಷ್ಣದೇವರಾಯ - ಕ್ರಿ ಶ 1509 - 1530
2. ಅಚ್ಯುತರಾಯ - ಕ್ರಿ ಶ 1530 - 1542
3. ಸದಾಶಿವರಾಯ - ಕ್ರಿ ಶ 1542 - 1567
4. ತಿರುಮಲರಾಯ - ಕ್ರಿ ಶ 1567 - 1572
5. ಶ್ರೀರಂಗರಾಯ - ಕ್ರಿ ಶ 1572 - 1585
6. ವೆಂಕಟಪತಿರಾಯ - ಕ್ರಿ ಶ 1585 - 1615
***
" ಶ್ರೀ ಕನಕ - 4 "
" ಕೃತಿಗಳ ಕಿರು ಪರಿಚಯ"
" ಹರಿಭಕ್ತಸಾರ - ಒಂದು ಚಿಂತನೆ "
ಹರಿಭಕ್ತಿಸಾರವು ಭಾಮಿನೀ ಷಟ್ಪದಿಯಲ್ಲಿದ್ದು; ಇದರಲ್ಲಿ 110 ಪದ್ಯಗಳಿವೆ. ಶ್ರೀಕನಕದಾಸರು ಹರಿಭಕ್ತಿಸಾರದಲ್ಲಿ ಭಕ್ತಿ - ನೀತಿ - ವೈರಾಗ್ಯಗಳ ತುಟ್ಟ ತುದಿಯನ್ನು ತಲುಪಿರುವರೆಂದು ಅನಬಹುದು. 
" ಹರಿಭಕ್ತಿಸಾರ " ದ ರಚನೆಯ ಮುಖ್ಯೋದ್ಧೇಶವನ್ನು ಪ್ರಸ್ತಾಪಿಸುತ್ತಾ...... 
ಭಕ್ತಿಸಾರದ ಚರಿತೆಯನು ಹರಿ ।
ಭಕ್ತರಾಲಿಸುವಂತೆ ರಚಿಸುವೆ ।
ಯುಕ್ತಿಯಲಿ ಬರೆದೋದಿ-
ದವರಿಷ್ಟಾರ್ಥ ಸಿದ್ಧಿಪುದು ।।
ಮುಕ್ತಿಗಿದು ನೆಲೆದೋರುವುದು ಹರಿ ।
ಭಕ್ತರನು ಲಾಲಿಪುದು ನಿಜಮತಿ ।
ಭಕ್ತಗೊಲಿವಂದದಲಿ 
ರಕ್ಷಿಸು ನಮ್ಮನನವರತ ।।
ಎಂದು ಸ್ಪಷ್ಟ ಪಡಿಸುವರು. 
" ಮುಕ್ತಿರ್ನೈಜಸುಖಾನುಭೂತಿ-
ರಮಲಾ ಭಕ್ತಿಶ್ಚತತ್ಸಾಧನಂ " 
ಎಂಬ ಹೇಳಿಕೆಯಂತೆ, " ಭಕ್ತಿ ಸಾರ " ದ ಗುರಿ ಮುಕ್ತಿ.  
ಪ್ರತಿಯೊಂದು ಉಕ್ತಿಯೂ ಆ ಮುಕ್ತಿ ಸಾಧನೆಗೆ ದಾರಿ ತೋರುವ ಯುಕ್ತಿಯೇ ಸರಿ. 
ಇಂಥಾ ಪ್ರಶಸ್ತವಾದ ಕಾರ್ಯವನ್ನು ಕೈಕೊಂಡಿರುವ ಶ್ರೀ ಕನಕದಾಸರ ವಿನಯ - ಸೌಜನ್ಯಗಳು ಅಸದಳವಾದುವು. ಭಗವಂತನ ಎದುರಿನಲ್ಲಿ ಹರಿ ಭಕ್ತನು ಕಿರಿಯರಲ್ಲಿ ಕಿರಿಯ. 
ಕಿಂಕರರಲ್ಲಿ ಕಿಂಕರ.  
ದೈನ್ಯ ಸ್ವಭಾವವನ್ನು ಶ್ರೀ ಕನಕದಾಸರು ಬಹಳ ರಮಣೀಯವಾಗಿ ವಿಜ್ಞಾಪಿಸಿ ಕೊಂಡಿರುತ್ತಾರೆ. 
ದೀನ ನಾನು ಸಮಸ್ತ ಲೋಕಕೆ ।
ದಾನಿ ನೀನು ವಿಚಾರಿಸಲು ಮತಿ ।
ಹೀನ ನಾನು ಮಹಾ 
ಮಹಿಮಾ ಕೈವಲ್ಯಪತಿ ನೀನು ।।
ಏನಬಲ್ಲೆನು ನಾನು ನೆರೆ । ಸು ।
ಜ್ಞಾನ ಮೂರುತಿ ನೀನು ನಿನ್ನ । ಸ ।
ಮಾನರುಂಟೇ ದೇವ 
ರಕ್ಷಿಸು ನಮ್ಮನನವರತ ।।
ಹೀಗೆ ಪರಮಾತ್ಮನಲ್ಲಿ ಮೊರೆಯಿಟ್ಟು ತಮ್ಮ ಅಹಂಕಾರದ ದಿವಸಗಳನ್ನು  ಪಶ್ಚಾತ್ತಾಪ ಪಟ್ಟು ಮರೆ ಹೋಗುವರು. 
ಮರೆದವನಭ್ಯುದಯದಲಿ ನಿಮ್ಮನು ।
ಮರೆಯನಾಪತ್ತಿನಲಿ ಪೊರೆಯಿರಿ ।
ದೊರಳುವೇನು ಮನವೇಕ-
ಭಾವದೊಳಿಲ್ಲ ನಿಮ್ಮಡಿಯ ।।
ಮರೆದು ಬಾಹಿರನಾದವನ । ನೀ । 
ಮರೆವರೆ ಹಸು ತನ್ನ ಕಂದನ ।
ಮರೆವುದೇ ಮಮತೆಯಲಿ 
ರಕ್ಷಿಸು ನಮ್ಮನನವರತ ।।
ಹರಿದಾಸ ಕೈಂಕರ್ಯವನ್ನು ಕೈಕೊಂಡ ಶ್ರೀ ಕನಕದಾಸರಿಗೆ ಶ್ರೀ ರಾಮ - ಶ್ರೀ ಕೃಷ್ಣಾವತಾರಗಳಲ್ಲಿ ಸರಿಸಮನಾದ ಭಕ್ತಿ ಅಂಕುರಿಸಿ ಪಲ್ಲವಿಸಿರುತ್ತದೆ. 
" ಹರಿಭಕ್ತಿಸಾರ " ದ ಮೊದಲಿನ ಪದ್ಯಗಳಲ್ಲಿಯೇ ಈ ಅಂಶವನ್ನು ಮನಗಾಣಬಹುದು. 
ದೇವ ದೇವ ಜಗದ್ಭರಿತ । ವಸು ।
ದೇವ ಸುತ ಜಗದೇಕನಾಥ । ರ ।
ಮಾ ವಿನೋದಿತ ಸಕಲ 
ಸಜ್ಜನ ವಿನುತ ಗುಣಭರಿತ ।।
ಭಾವಜಾರಿಪ್ರಿಯ ನಿರಾಮಯ ।
ರಾವಣಾಂತಕ ರಘುಕುಲಾನ್ವಯ ।
ದೇವ ಅಸುರ ವಿರೋಧಿ 
ರಕ್ಷಿಸು ನಮ್ಮನನವರತ ।।
ಇದೇ ರೀತಿ ಒಟ್ಟೊಟ್ಟಿಗೆ ಹಾಗೂ ಬಿಡಿ ಬಿಡಿಯಾಗಿ ಈ ಎರಡು ಅವತಾರಗಳನ್ನು ಮುಕ್ತಕಂಠದಿಂದ ಕೊಂಡಾಡಿರುವರು. 
ಪರವಸ್ತು ಸ್ವರೂಪನಾದ ಶ್ರೀ ಮಹಾ ವಿಷ್ಣುವಿನ ಮಾಹಾತ್ಮ್ಯವನ್ನು ನಾನಾ ತೆರನಾಗಿ ಹೊಗಳಿ ಹಿಗ್ಗುವರು. 
ಆತನ ನಾಮಾವಳಿಯನ್ನು ಹೊಗಳಲು ತಾವು ಎಷ್ಟು ಮಾತ್ರದವರೆಂದು ನಿವೇದಿಸಿಕೊಂಡು.. 
ಗಿಳಿಯ ಮರಿಯನು 
ತಂದು । ಪಂಜರ ।
ದೊಳಗೆ ಪೋಷಿಸಿ 
ಕಲಿಸಿ ಮೃದು । ನುಡಿ ।
ಗಳನು ಲಾಲಿಸಿ ಕೇಳ್ವ 
ಪರಿಣತರಂತೆ ನೀ ನನಗೆ ।।
ತಿಳುಹಿ ಮತಿಯನು  ಜಿಹ್ವೆಗೆ ।
ಮೊಳಗುವಂದದಿ ನಿನ್ನ । ನಾಮಾ ।
ವಳಿಯ ಪೊಗಳಿಕೆಯಿತ್ತು 
ರಕ್ಷಿಸು ನಮ್ಮನನವರತ ।।
ಎಂದು ಶರಣಾಗುವರು. ಹರಿ - ಹರ - ಬ್ರಹ್ಮಾದಿಗಳ ತಾರತಮ್ಯವನ್ನಂತೂ ಬಹು ಗಂಭೀರವಾಗಿಯೂ; ಗಹನವಾಗಿಯೂ ಪ್ರತಿಪಾದಿಸುವರು. 
ಹಗೆಯರಿಗೆ ವರವೀವರಿಬ್ಬರು ।
ತೆಗೆಲರಿಯರು ಕೊಟ್ಟ ವರಗಳ ।
ತೆಗೆದು ಕೊಡುವ 
ಸಮರ್ಥರಾರೀ ಜಗಕೆ ನಿನ್ನಂತೆ ।।
ಸುಗುಣರಿನ್ನಾರುಂಟೆ ಕದನವ ।
ಬಗೆದು ನಿನ್ನೊಳು ಜೈಸುವವರೀ ।
ಜಗದೊಳುಂಟೆ ದೇವ 
ರಕ್ಷಿಸು ನಮ್ಮನನವರತ ।।
ಹರ ಮತ್ತು ವಿರಿಂಚಿಗಳಿಬ್ಬರೂ ವರ ನೀಡಲು ಶಕ್ತರೇ ವಿನಾ, ಕೊಟ್ಟ ವರವು ಕಂಟಕವಾದಲ್ಲಿ ಅದನ್ನು ನಿವಾರಿಸಲರಿಯರು. 
ಆ ಶಕ್ತಿ ವಿಷ್ಣುವಿಗೆ ಮಾತ್ರ ಉಂಟಂತೆ. 
ಅಷ್ಟೇ ಏಕೆ? 
ಆ ಒಂದು ಪರವಸ್ತುವೇ ಹೇಗೆ ತ್ರಿಮೂರ್ತಿಗಳಾಗಿ ವರ್ತಿಸುವುದೆನ್ನುವುದನ್ನು ಎಷ್ಟು ಮನಃ ಪ್ರಿಯವಾಗುವಂತೆ ಚಿತ್ರಿಸಿರುವುದೆನ್ನುವುದನ್ನು ಇಲ್ಲಿ ನೋಡಬಹುದು. 
ಮೂರುಗುಣ ಮೊಳೆದೋರಿತದರೊಳು ।
ಮೂರು ಮೂರ್ತಿಗಳಾಗಿ ರಂಜಿಸಿ ।
ತೋರು ಸೃಷ್ಟಿ ಸ್ಥಿತಿ 
ಲಯಂಗಳ ರಚಿಸಿ ವಿಲಯದಲಿ ।।
ಮೂರು ರೂಪೊಂದಾಗಿ ಪ್ರಳಯದ ।
ವಾರಿಯಲಿ ವಟಪತ್ರ ಶಯನದಿ ।
ಸೇರಿದವ ನೀನೀಗ 
ರಕ್ಷಿಸು ನಮ್ಮನನವರತ ।।
ತಿಳಿಗನ್ನಡದ ಈ ಆಧ್ಯಾತ್ಮಿಕ ವಿಚಾರ ಧಾರೆ ಪ್ರಶಂಸಾರ್ಹವಾದುದು. 
ಭಗವಂತನ ಲೀಲಾ ವಿನೋದಗಳನ್ನು ವರ್ಣಿಸಿದ ಬಳಿಕ ಶ್ರೀ ಕನಕದಾಸರು ದೃಷ್ಟಿ ಮಾನವನ ಬದುಕಿನ ಕಡೆಗೆ ಹರಿಯುತ್ತದೆ. 
ಮಾನವನ ಶರೀರದ ಕ್ಷಣಿಕತೆ, ಜನ್ಮ ಜನ್ಮಾಂತರಗಳ ವ್ಯಥೆ, ಜೀವಾತ್ಮ - ಪರಮಾತ್ಮ ಗಳ ಬಾಂಧವ್ಯವನ್ನು ಕುರಿತು ಮೇಲಿಂದ ಮೇಲೆ ನಿರೂಪಿಸುತ್ತಾರೆ. 
ಎಂಟು  ದೇಹ । ರೋಮಗ ।
ಳೆಂಟು ಕೋಟಿಯು ಕೀಲ್ಗಳರುವ ।
ತ್ತೆಂಟು ಮಾಂಸಗಳಿಂದ 
ಮಾಡಿದ ಮನೆಯ ಮನವೊಲಿದು ।।
ನೆಂಟ ನೀನರ್ದಗಲಿದೊಡೆ ಒಣ ।
ಹೆಂಟೆಯಲಿ ಮುಚ್ಚುವರು ದೇಹದ ।
ಲುಂಟೆ  ಪುರುಷಾರ್ಥ 
ರಕ್ಷಿಸು ನಮ್ಮನನವರತ ।।
ದೇಹಾಭಿಮಾನವನ್ನು ತೊರೆಯಬೇಕೆಂದು ಪರಿಪರಿಯಾಗಿ ಬೋಧಿಸಿ, ಹಲವಾರು ಜನ್ಮಗಳ ಬಂಧನದಿಂದ ಬಿಡುಗಡೆ ಪಡೆಯುವಂತೆ, ಪರಮಾತ್ಮನ ಧ್ಯಾನಕ್ಕೆ ಮನವನ್ನು ಸಂಯೋಜಿಸುವಂತೆ ಸಂದೇಶವೀಯುವರು. 
ಅಳಿವ ಒಡಲನು ನೆಚ್ಚಿ । ವಿಷಯ೦ ।
ಗಳಿಗೆ ಕಾತುರನಾಗಿ ಮಿಗೆ । ಕಳ ।
ವಳಿಸಿ ಕಾಲನ ಬಳಿಗೆ 
ಹಂಗಿಗನಾಗಿ ಬಾಳುವರೆ ।।
ತಿಳಿದು ಮನದೊಳು ನಿನ್ನ । ನಾಮಾ ।
ವಳಿಯ ಜಿಹ್ವೆಗೆ ತಂದು ಪಾಪವ ।
ಕಳೆದು ಬಿಡುವುದು ಲೇಸು 
ರಕ್ಷಿಸು ನಮ್ಮನನವರತ ।।
ಮರ್ತ್ಯ ಜನ್ಮದಿಂದ ಅಮರ್ತ್ಯ ಜನ್ಮಕ್ಕೇರಲು ಪರಮಾತ್ಮನ ಅನುಗ್ರಹ - 
ಅನುಸಂಧಾನವಿಲ್ಲದೇ ಬೇರೇ ದಾರಿಯಿಲ್ಲ. 
ಆದ್ದರಿಂದ ಕ್ಷಣಿಕವಾದರೂ ಪ್ರಾಪ್ತವಾದ ಜನ್ಮ ವ್ಯರ್ಥವಾಗದಂತೆ,, 
ಮಣ್ಣಿನಲ್ಲಿ ಬಂಧಿಸಿದ ದೇಹವ ।
ಮಣ್ಣು ಕೂಡಿಸ ಬೇಡ । ಜ್ಞಾನದ ।
ಕಣ್ಣು ದೃಷ್ಟಿಯನ್ನಿತ್ತು ರಕ್ಷಿಸು ।।
ಎಂದು ಕೋರುವರು. ಜನನ ಮರಣಗಳ ಭೇದಿಸಲಸಾಧ್ಯ. ಆದ್ದರಿಂದ... 
ಮೊದಲು ಜನನವನರಿಯೆ ಮರಣದ ।
ಹದನ ಕಡೆಯಲಿ ತಿಳಿಯೆ ನಾ । ಮ ।
ಧ್ಯದಲಿ ನೆರೆ ನಾ ನಿಪುಣ-
ನೆಂಬುದು ಬಳಿಕ ನಗೆಗೇಡು ।।
ಮೊದಲು ಕಡೆ ಮಧ್ಯಗಳ ಬಲ್ಲವ ।
ಮದನ ಜನಕನು ನೀನು ನಿನ್ನಯ ।
ಪದಯುಗವ ಬಯಸುವೆನು 
ರಕ್ಷಿಸು ನಮ್ಮನನವರತ ।।
ಎಂದು ಮಾನವನ ಹಮ್ಮು ಬಿಮ್ಮುಗಳ ಪೊಳ್ಳುತನವನ್ನು ವಿವರಿಸಿ ಹೇಳಿರುವುದಲ್ಲದೇ,
" ಅನ್ಯಥಾ ಶರಣಂ ನಾಸ್ತಿ " 
ಎಂಬಂತೆ ಭಗವಂತನ ಪಾದಾರವಿಂದವೊಂದೇ ಗತಿಯೆಂದು ಸೂಚಿಸಿರುವರು. 
ಎಂಜಲೆಂಜಲು ಎಂಬರಾ ನುಡಿ ।
ಎಂಜಲಲ್ಲವೆ ವಾರಿ । ಜಲಚರ ।
ದೆಂಜಲಲ್ಲವೆ ಹಾಲು ಕರುವಿನ ।
ಎಂಜಲೆನ್ನಿಸದೆ ಎಂಜಲೆಲ್ಲಿಹುದು ।।
ಹಾಗೆಯೇ.. 
ಜಾಲದೊಳಗೆ ಮುಳಿದಿದರೆ ತೊಲಗದು ।
ಹೊಲೆಗೆಲಸವೇ ದೇಹ ದೊಳು 
ನೀ ನೆಲೆಸಿರಲು ಹೊಲೆಯುಂಟೆ ।।
ಎಂಬುದಾಗಿ ಆಚಾರ ವಿಚಾರಗಳಿಗಿರುವ ಅಂತರವನ್ನೂ; ಬಹಿರಾಡಂಬರ, ಬೂಟಾಟಿಕೆಗಳನ್ನು ಕಟುವಾಗಿ ಟೀಕಿಸಿರುವರು . 
ಕೇಳುವುದು ಹರಿಕಥೆಯ ಕೇಳಲು ।
ಹೇಳುವುದು ಹರಿ ಭಕ್ತಿ ಮನದಲಿ ।
ತಾಳುವುದು ಹಿರಿದಾಗಿ 
ನಿನ್ನಯ ಚರಣ ಸೇವೆಯಲಿ ।।
ಊಳಗವ ಮಾಡುವದು ವಿಷಯವ ।
ಹೋಳುವುದು ನಿಜ ಮುಕ್ತಿಕಾಂತೆಯ ।
ನಾಳುವುದು ಕೃಪೆ ಮಾಡಿ 
ರಕ್ಷಿಸು ನಮ್ಮನನವರತ ।।
 ಈ ನುಡಿಯಲ್ಲಿ ಅಡಕವಾಗಿರುವ " ತತ್ತ್ವ " ತುಂಬು ಹಿರಿದಾದುದು. 
ಹರಿಕಥಾ ಶ್ರವಣ, ಹರಿ ಭಕ್ತಿ ಧಾರಣ, ಹರಿ ಚರಣ ಸೇವೆಗಳು " ಮೋಕ್ಷಪ್ರದ " ವೆಂದು ಸಾರಿ ಸಾರಿ ಹೇಳುತ್ತಾರೆ. 
ಒಂದು ಸಣ್ಣ " ಖಂಡಕಾವ್ಯ " ದಂತಿರುವ " ಹರಿಭಕ್ತಿಸಾರ " ದಲ್ಲಿ ಶ್ರೀ ಕನಕದಾಸರ ಆದರ್ಶ, ಆಕಾಂಕ್ಷೆಗಳ ಚಿತ್ರಣವಿದೆ. 
ಶ್ರೀ ಹರಿಯ ಮಹಿಮಾದಿಗಳ ನಿರೂಪಣೆಯಿದೆ. 
ತೃಣವಾದರೂ ಶ್ರೀ ಪರಮಾತ್ಮನ ಕರಾವಲಂಬನದಿಂದ ಅಮರವಾಗಬಹುದಾದ ಮನುಷ್ಯನ ಬಾಳಿನ ಸಿದ್ಧಾಂತವಿದೆ. 
ತಿಳಿ ನುಡಿಯಲ್ಲಿ, ಇಂಥಾ ತಿಳಿವನ್ನು ನೀಡಬಲ್ಲ ಈ ಪುಟ್ಟ ಕೃತಿ ಸರ್ವರಿಗೂ ಒಪ್ಪತಕ್ಕುದ್ದಾಗಿದೆ. ( ಕೆಲವು ಮಾತ್ರ ಇಲ್ಲಿ ಉದಾಹರಿಸಲಾಗಿದೆ ).
***
[11:23 AM, 5/20/2021] Suresh Hulikunti Rao: ಶ್ರೀ ಕನಕ - 5 "
" ಶ್ರೀ ಕನಕದಾಸರ ಕಾವ್ಯ ಸಮನ್ವಯ "
" ಕಾಳಿದಾಸ - ಕನಕದಾಸರು "
ಕಾವ್ಯವನ್ನು ಬರೆಯಲು ಟೊಂಕ ಕಟ್ಟಿನಿಂತ ಕನಕದಾಸರು - ಕಬ್ಬಿಗರರಸನಾದ ಕಾಳಿದಾಸನ ಕೃತಿಗಳಿಗೆ ಸಾಮ್ಯವಿದೆ. 
ಮೋಹನ ತರಂಗಿಣೀಯಲ್ಲಿ ಬರುವ ಭಾಗವತ, ಹರಿವಂಶ, ಸ್ಕಂದ ಪುರಾಣದಲ್ಲಿ ಬರುವ ವಿಷಯಗಳು - ಕಾಳಿದಾಸನು ಬರೆದ ಕುಮಾರ ಸಂಭವವೆಂಬ ಕಾವ್ಯದಲ್ಲಿಯೂ ಆ ಕಥೆಗಳು ಸಂಪೂರ್ಣವಾಗಿ ಅಡಕವಾಗಿವೆ. 
ಮೋಹನ ತರಂಗಿಣೀಯಲ್ಲಿ ಕನಕದಾಸರ ಮೇಲೆ ಕಾಳಿದಾಸನ ಕುಮಾರಸಂಭವದ ಸಂಸ್ಕಾರವಾದುದು ಕಂಡು ಬರುವುದುಂಟು. 
" ಕುಮಾರವ್ಯಾಸ - ಕನಕದಾಸರು "
ಶ್ರೀ ಕನಕದಾಸರು ಕುಮಾರವ್ಯಾಸರ ಕಾವ್ಯಕ್ಕೂ ಮನಸೋತಿದ್ದಾರೆಂದು ತೋರುತ್ತದೆ. 
" ಉರಗಾಲಯವೆ " 
ಎಂಬ ಪದ್ಯವನ್ನು ಅನ್ನುವಾಗ್ಗೆ - ಪ್ರಮುಖವಾಗಿ ಕುಮಾರವ್ಯಾಸರ ಹೆಸರೇ ಶ್ರೀ ಕನಕದಾಸರ ಕಣ್ಣ ಮುಂದೆ ನೆಲಿಸಿದ್ದಿತೆಂದು ಹೇಳಬಹುದು. 
ಭಾಮಿನೀ ಷಟ್ಪದಿಯಾ ಪದ್ಯಗಳಲ್ಲಿ ಆ ಕುಮಾರವ್ಯಾಸರು ಅನುಸರಿಸಿದ ಪದ್ಧತಿಯನ್ನೇ ಅನುಸರಿಸಿದರೆಂದು ಅನಿಸುತ್ತದೆ. 
" ಶ್ರೀ ಕನಕದಾಸರ ಜೀವನ ಚರಿತ್ರೆಯಲ್ಲಿ ಬರುವ ಕೆಲವು ಸ್ವಾರಸ್ಯಕರ ಸಂಗತಿಗಳು "
ಕ್ರಿ ಶ 1565 ಶ್ರೀ ಪುರಂದರದಾಸರು ದೇಹ ತ್ಯಾಗ ಮಾಡಿದರು.  
ತಂಬೂರಿಯನ್ನು ಶ್ರೀಕನಕದಾಸರು ತಿರುಪತಿ ತಿಮ್ಮಪ್ಪನಿಗೆ ಸಮರ್ಪಿಸಿ ಬಂದರೆಂದು ಐತಿಹ್ಯವಿದೆ. 
ಕನಕರ ವಾಗ್ಣುಡಿ :
ಕನಕನ ಕವಡು 
ಕನಕಪ್ಪನ ಮುಂಡಿಗೆ 
ಕನಕನ ಕೆಣಕ ಬೇಡಿ - ಕೆಣಕಿ ತಿಣಕ ಬೇಡಿ ।।
" ಕಾಗಿನೆಲೆಯಾದಿಕೇಶವರಾಯ " 
ಎಂಬ ಮುದ್ರಿಕೆಯ ಪದಗಳು ಶ್ರೀ ಕನಕದಾಸ ಕೃತವು. 
ಆದರೆ, ಶ್ರೀ ದಾಸರು ತಾವು ಹೋದಲ್ಲೆಲ್ಲಾ ತನ್ನ ಮೆಚ್ಚಿನ ದೇವರ ನಾಮಗಳುಳ್ಳ ಮುದ್ರಿಕೆಯಿಂದ ಪದಗಳನ್ನು ರಚಿಸಿರುವುದು ಬೆಳಕಿಗೆ ಬಂದಿದೆ. 
ಶ್ರೀ ಕನಕದಾಸರ ಸುಮಾರು 50 ಮುದ್ರಿಕೆಗಳನ್ನು ಬಳಿಕೆಯುಂಟು. 
ಈ ವೈಶಿಷ್ಟ್ಯವು ಜಗತ್ತಿನಲ್ಲಿಯ ಯಾವ ಕಾವ್ಯ ಕರ್ತರಲ್ಲಿಯೂ ಕಂಡು ಬಂದಿಲ್ಲ ( ಶ್ರೀ ಕರಿಯಪ್ಪ ಹುಚ್ಚಣ್ಣನವರ್ ). 
ಕಾಗಿನೆಲೆಗೆ ಕೊಂಚ ದೂರದಲ್ಲಿರುವ " ಕಮ್ಮಾರು " ಎಂಬ ಗ್ರಾಮದಲ್ಲಿ ಅವರ ವಂಶಸ್ಥರು ಈಗಲೂ ಇದ್ದಾರೆ. 
ಅಲ್ಲಿ ಕನಕನಾಯಕ ಕಟ್ಟಿಸಿದ ಕಾಲುವೆಗಳು, ಕುದರೆ ಲಾಯಗಳು, ದಾಸರ ಕೂಟ ಎಂದು ಕರೆಯಲಾಗುತ್ತಿದ್ದ " ತುಳಸೀ ತೋಟ " ಇಂದಿಗೂ ಇವೆ ( ಶ್ರೀ ಹೆಚ್ ಕೆ ಲಕ್ಕಪ್ಪಗೌಡರ್ )
" ಶ್ರೀ ಕನಕದಾಸರ ಅವತಾರ ಸಮಾಪ್ತಿ "
ಶ್ರೀ ದಾಸರು ತಿರುಪತಿ ದೇವಾಲಯದಲ್ಲಿ ದೇವರ ಸಂದರ್ಶನ ಮಾಡುತ್ತಿದ್ದಂತೆಯೇ ಪರಮಾತ್ಮನ ಪಾದಾರವಿಂದಗಳಲ್ಲಿ ತಮ್ಮ ಜೀವನವನ್ನು ಸಮಾಪ್ತಿಗೊಳಿಸಿದರೆಂದು ಒಂದು ಪ್ರತೀತಿ. 
ಇನ್ನೂ ಕೆಲವರು ತಮ್ಮ ಊರಾದ ಕಾಗಿನೆಲೆಗೆ ಹಿಂತಿರುಗಿ ಅಲ್ಲಿಯೇ ವಿಧಿವಶರಾದರೆಂದು ಹೇಳುವರು. ಇದಕ್ಕೆ ಕುರುಹಾಗಿ ಅಲ್ಲಿ ಶ್ರೀ ಕನಕದಾಸರ ಸಮಾಧಿ ಇರುವುದನ್ನು ತೋರಿಸುವರು. 
ಮತ್ತೆ ಕೆಲವರು ಶ್ರೀ ಕನಕದಾಸರು ಕದರಮಂಡಲಗಿಯಲ್ಲಿರುವ ಹನುಮಂತನ ಬಳಿಯಲ್ಲಿ ಧ್ಯಾನ ಮಾಡುತ್ತಾ ಅಲ್ಲೇ ಸ್ವರ್ಗಸ್ಥರಾದರೆಂದು ಭಾವಿಸುತ್ತಾರೆ. 
ಶ್ರೀ ಗೋಪಾಲದಾಸರ ಮಾತಿನಲ್ಲಿ..
ಯಮಾಂಶಸ್ಯ ಪರಾಭಾಕ್ತ್ಯಾ 
ಸುಪ್ರಸನ್ನೋ ಹರಿಃ ಸ್ವಯಂ ।
ಯಸ್ಯಾಚಾರ್ಯೋ ವ್ಯಾಸರಾಯಃ 
ತಂ ವಂದೇ ಕನಕಾಭಿದಂ ।।
ತಮ್ಮ ಕೈಮುಷ್ಟಿಯನು 
ಪಿಡಿದು ಕೇಳಲು ಯತಿಯು ।
ತಮ ತಮಗೆ ತೋರಿದ್ದು 
ಪೇಳೆ ಬ್ರಾಹ್ಮಣರು ।
ಗಮ್ಮನೆ ಕನಕ ಸಿರಿ 
ವಾಸುದೇವನೇ । ಪರ ।
ಬೊಮ್ಮ ಪುರಂದರ-
ವಿಠ್ಠಲನೆನುತ ಸಾರಿದನು ।।
ಆಚಾರ್ಯ ನಾಗರಾಜು ಹಾವೇರಿ
ಗುರು ವಿಜಯ ಪ್ರತಿಷ್ಠಾನ
***
" ಶ್ರೀ ಕನಕ - 6 "
" ಶ್ರೀ ಅವತಾರ ತ್ರಯ ಶ್ರೀ ವಾಯುದೇವರ ಸ್ತುತಿ "
ರಚನೆ : ಶ್ರೀ ಕನಕದಾಸರು 
ಅಂಕಿತ : 
ಶ್ರೀ ಹರಿ ಪ್ರಸಾದಾಂಕಿತ " ನೆಲೆಯಾದಿ ಕೇಶವ / ಬಾಡದಾದಿ ಕೇಶವ / ಆದಿಕೇಶವ " 
ಅಂಶ : 
12ನೇ ಕಕ್ಷಾಸಂಪನ್ನರಾದ ಶ್ರೀ ಯಮಧರ್ಮರಾಜರು 
ರಾಗ : ಮೋಹನ  ತಾಳ : ಛಾಪು 
ಅಂಧಂ ತಮಸ್ಸು ಇನ್ಯಾರಿಗೆ । ಗೋ ।
ವಿಂದನ ನಿಂದಿಸುವರಿಗೆ ।। ಪಲ್ಲವಿ ।।
ಸಂದೇಹವಿಲ್ಲಾ ಯೆಂದೆಂದಿಗೆ । ವಾಯು ।
ನಂದನನ ನಿಂದಿಸುವರಿಗೆ ।। ಅ ಪ ।।
ಮಾತಿ ಮಾತಿಗೆ ಹರಿಯ ನಿಂದಿಸಿ । ಸ ।
ರ್ವೋತ್ತಮ ಶಿವನೆಂದು ವಂದಿಸಿ ।
ಧಾತು ಗ್ರಂಥಗಳೆಲ್ಲ ವೋಡಿಸಿ । ವೇ ।
ದಾಂತ ಪ್ರಮಾಣಾಳ್ಹಾರಿಸಿ ।।
ಸೋತು ಸಂಕಟ ಪಟ್ಟು ।
ಘಾತ ಕೊರಳೋಳಿಟ್ಟು ।
ನೀತಿ ಹೇಳುವ ಜನಗಳಿಗಲ್ಲದೆ ।। ಚರಣ ।।
ಮೂಲಾವತಾರಕ್ಕೆ ಭೇದವ -
ಮುಖ್ಯ ಪಂಡಿತ ।
ರೊಳಗೆ ವಿವಾದವ ।
ಲೀಲಾವಾದೃಶ್ಯವ 
ತೋರುವ ಮ್ಯಾಲೆ ।।
ಲೀಲ ಭಂಗರಿಗೆದೆ ಹಾರುವ ।
ಮೂಲ ಮೂರುತಿ ಕುಂತಿ 
ಬಾಲನ್ನ ನೆನೆಯಾದ ।
ದುಃಶೀಲರಿಗಲ್ಲದೆ ।। ಚರಣ ।।
ವ್ಯಾಸರ ಮಾತುಗಳಾಡುತ್ತ । ವಿ ।
ಶ್ವಾಸ ಘಾತಕತನ ಮಾಡುತ್ತ ।
ದೋಷವೆಂದರೆ ನೋಡಿ-
ಕೊಳ್ಳದೆ । ಸಂ ।
ತೋಷವೆಂದು ತಾ ಬಾಳದೆ ।
ಶೇಷಶಯನ ಆದಿಕೇಶವರಾಯನ ।
ದಾಸರಾಗದೆ ಮಧ್ವ-
ದ್ವೇಷಿಗಳಿಗಲ್ಲದೆ ।। ಚರಣ ।।
**
ರಾಗ : ಮುಖಾರಿ ತಾಳ : ಆದಿ 
ಪರಮ ಪದವೀವ 
ನಮ್ಮ ಮುಖ್ಯಪ್ರಾಣ ।
ಧರೆಯೊಳಗುಳ್ಳ ದಾಸರು 
ಭಜಿಸಿರಣ್ಣಾ ।। ಪಲ್ಲವಿ ।।
ಅಂದು ತ್ರೇತಾಯುಗದಿ 
ಹನುಮಂತನಾಗವತರಿಸಿ ।
ಬಂದು ದಾಶರಥಿಯ ಪಾದಕೆರಗಿ ।
ಸಿಂಧುವನು ದಾಟಿ 
ಮುದ್ರಿಕೆಯಿತ್ತು ದಾನವ ।
ವೃಂದಪುರ ದಹಿಸಿ ಚೂಡಾಮಣಿಯ 
ತಂದವನು ।। ಚರಣ ।।
ದ್ವಾಪರ ಯುಗದಲಿ
ಭೀಮಸೇನನಾಗಿ ।ಶ್
ರೀಪತಿಯಲಿ ಕಡು 
ಭಕುತಿಯಿಂದಾ ।
ಕೋಪಾವೇಶವತಾಳಿ 
ದುಃಶಾಸನನು ಸೀಳಿ ।
ಭೂಪರ ರಣದೊಳಗ 
ಕರಕರದು ಜರಿವವನು ।। ಚರಣ ।।
ಕಲಿಯುಗದೊಳು 
ತುರ್ಯಾಶ್ರಮವನೆ ಧರಿಸಿ ।
ಕಲುಷ ಮಾಯವಾದ 
ಮಾಯಿಗಳ ಸೋಲಿಸಿ ।
ಶೀಲವಾದ ಮಧ್ವ ಮತವಾ ನೀ -
ಗಣನೆಗೆ ತಂದುಕೊಂಡು ಸೀಯೆ । ಕಾಗಿ ।
ನೆಲೆಯಾದಿ ಕೇಶವನ 
ಪರದೈವವೆನಿಸುವನು ।। ಚರಣ ।।
***
ಈದಿನ ಶ್ರೀ ಕನಕದಾಸರ ಜಯಂತೀ "
ಶ್ರೀ ಕನಕದಾಸರ ಕೃತಿಗಳೆಲ್ಲವೂ ಸರ್ವೋತ್ತಮನಾದ ಶ್ರೀ ಹರಿಯ ಪರವಾಗಿವೆ. 
1. ಮೋಹನ ತರಂಗಿಣೀ 
ಕಾವ್ಯ ಪ್ರಪಂಚದಲ್ಲಿ " ಮೋಹನ ತರಂಗಿಣೀ " ಯು ಮಾಹಾ ಕಾವ್ಯದ ವರ್ಗಕ್ಕೆ ಸೇರಿದ್ದು. 
ಈ ಮಹಾ ಕಾವ್ಯದಲ್ಲಿ ಮಹಾಭಾರತ - ಶ್ರೀಮದ್ಭಾಗವತ ಮಹಾ ಪುರಾಣ - ಹರಿವಂಶ - ವಿಷ್ಣು ಪುರಾಣಗಳಲ್ಲಿಯ ಶ್ರೀ ಕೃಷ್ಣ ಪರಮಾತ್ಮನ ಚರಿತ್ರೆ ಅಡಕವಾಗಿದೆ. 
ಮೋಹನ ತರಂಗಿಣಿಯು -  ೪೨ ಸಂಧಿಗಳಿದ್ದು ೨೬೫೯ ಪದ್ಯಗಳಿಂದ ಕೂಡಿದೆ. 
2. ರಾಮ ಧಾನ್ಯ ಚರಿತೆ 
ಇದು ಭಾಮಿನೀ ಷಟ್ಪದಿಯಲ್ಲಿರುವ ೧೫೬ ಪದ್ಯಗಳನ್ನೊಳಗೊಂಡಿದೆ. 
ಇಲ್ಲಿ ಕವಿಸಾರ್ವಭೌಮ ಶ್ರೀ ಕನಕದಾಸರು... 
" ರಾಮ ಧಾನ್ಯ " ದ ಯೆಂದರೆ " ರಾಗಿಯ ಉತ್ಕೃಷ್ಟತೆಯನ್ನು ಬಹಳ ಚಮತ್ಕಾರವಾಗಿ ನಿರೂಪಿಸಿದ್ದಾರೆ. 
ಈ ಧಾನ್ಯಕ್ಕೆ " ನೆರೆದಲೆಗ " ಯೆಂಬ ಹೆಸರೆಂದೂ - ಇದಕ್ಕೆ ಶ್ರೀ ರಾಮದೇವರು " ರಾಘವ " ಯೆಂಬ ತಮ್ಮ ಹೆಸರನ್ನು ಇಟ್ಟಿದ್ದರಿಂದ " ರಾಗಿ " ಯೆಂಬ ಹೆಸರು ಪ್ರಸಿದ್ಧಿಗೆ ಬಂದಿತೆಂದು ಈ ಕೃತಿಯಿಂದ ತಿಳಿಯುತ್ತದೆ. 
3. ನಳ ಚರಿತ್ರೆ 
ಇದು ಭಾಮಿನೀ ಷಟ್ಪದಿಯಲ್ಲಿರುವ ಶ್ರೀ ಕನಕದಾಸರ ಮತ್ತೊಂದು ಕಾವ್ಯ. 
ಈ ಕಾವ್ಯದಲ್ಲಿ ಶ್ರೀಮನ್ಮಹಾಭಾರತದ ವನಪರ್ವದೊಳಗಿರುವ ನಳೋಪಾಖ್ಯಾನದ ಕಥೆಯು ಅಡಕವಾಗಿದೆ. 
ಶ್ರೀ ಕನಕದಾಸರು ಆ ಕಬ್ಬನ್ನು ಹತ್ತಿಕ್ಕಿ - ಹೀರಿ - ರಸ ತೆಗೆದು - ಮಸಾಲೆಗಳೊಂದಿಗೆ ಹದಗೊಳಿಸಿ ತಮ್ಮೀ ಅಪೂರ್ವವಾದ ಕಾವ್ಯವನ್ನು ರಚಿಸಿದರು. 
ಇದರಲ್ಲಿ ೯ ಸಂಧಿಗಳಿದ್ದು ೪೮೧ ಪದ್ಯಗಳಿವೆ. 
4 ಹರಿಭಕ್ತಿ ಸಾರ 
ಇದು ಭಾಮಿನೀ ಷಟ್ಪದಿಯಲ್ಲಿರುವ ಕಾವ್ಯ - ಇದರಲ್ಲಿ ೧೧೦ ಪದ್ಯಗಳಿವೆ. 
" ರುಕ್ಮಿಣೀಶ ವಿಜಯ ಮತ್ತು ಮೋಹನ ತರಂಗಿಣೀ - ಒಂದು ತುಲನಾತ್ಮಕ ಅಧ್ಯಯನ "
ಶ್ರೀ ಭಾವಿ ಸಮೀರ ವಾದಿರಾಜ ಗುರುಸಾರ್ವಭೌಮರು ಶ್ರೀ ಯಮಧರ್ಮರಾಜರ ಅಂಶ ಸಂಭೂತರಾದ ಶ್ರೀ ಕನಕದಾಸರ ಗುರುಗಳು. 
ಶ್ರೀ ವಾದಿರಾಜರು " ರುಕ್ಮಿಣೀಶ ವಿಜಯ " ಯೆಂಬ ಸಂಸ್ಕೃತ ಕಾವ್ಯವನ್ನು ರಚಿಸಿದ್ದಾರೆ - ಅಂತೆಯೇ ಶ್ರೀ ಕನಕದಾಸರು " ಮೋಹನ ತರಂಗಿಣೀ " ಯೆಂಬ ಕಾವ್ಯವನ್ನು ರಚಿಸಿದ್ದಾರೆ. 
ರುಕ್ಮಿಣೀಶ ವಿಜಯಕ್ಕೂ - ಮೋಹನ ತರಂಗಿಣಿಗೂ ಏನಾದರೂ ಸಂಬಂಧವಿದೆಯೋ? ಇಲ್ಲವೋ?? ಯೆಂಬ ಕುತೂಹಲ ಉಂಟಾಗುವುದು ಸಹಜ. 
" ರುಕ್ಮಿಣೀಶ ವಿಜಯ "
1. ಈ ಕಾವ್ಯದಲ್ಲಿ ಶ್ರೀ ಕೃಷ್ಣ ಪರಮಾತ್ಮನ ಅವತಾರದಿಂದ ರುಕ್ಮಿಣಿಯೊಂದಿಗೆ ವಿವಾಹವಾಗುವ ವರೆಗಿನ ಕಥೆಯು ನಿರೂಪಿತವಾಗಿದ್ದರಿಂದ " ರುಕ್ಮಿಣೀಶ ವಿಜಯ " ಯೆಂಬ ಹೆಸರು. 
2. ಈ ಕಾವ್ಯದಲ್ಲಿ ಕಾವ್ಯಾಲಂಕಾರ ಮತ್ತು ಅರ್ಥಾಲಂಕಾರಗಳು ತುಂಬಿವೆ. 
3. ಇದು ನವರಸಗಳೊಂದಿಗೆ ಭಕ್ತಿ ಪ್ರಧಾನವಾದ ಕಾವ್ಯ. 
ರುಕ್ಮಿಣೀಶ ವಿಜಯಕ್ಕೂ - ಮೋಹನ ತರಂಗಿಣಿಗೂ ಬೇರೊಂದು ವಿಧದಲ್ಲಿ ಸಂಬಂಧವಿದೆಯೆಂದು ಕಾಣುತ್ತದೆ. 
1. ಮೋಹನ ತರಂಗಿಣಿಯೊಳಗಿನ ಶ್ರೀ ಕೃಷ್ಣ ಚರಿತ್ರೆಯು - ಶ್ರೀ ಕೃಷ್ಣಾ ರುಕ್ಮಿಣಿಯ ವಿವಾಹೋತ್ತರದ ಒಗೆತನದಿಂದ ಪ್ರಾರಂಭವಾಗಿ ಉಷಾನಿರುದ್ಧರ ಮದುವೆಯಿಂದ ಕೊನೆಗೊಳ್ಳುತ್ತದೆ. 
2. ಮೋಹನ ತರಂಗಿಣಿಯು ಪಂಡಿತ - ಪಾಮರರಿಗೂ ಅರ್ಥವಾಗುವ ಕನ್ನಡದ ಕಾವ್ಯ - ಇದರಲ್ಲಿನ ನುಡಿಗಳು ಆ ಕಾಲದ ಜನಪರ ಭಾಷೆ. 
3. ಶ್ರೀ ಕವಿಸಾರ್ವಭೌಮ ಕನಕದಾಸರು ಗೃಹಸ್ಥರಾದ್ದರಿಂದ ಶೃಂಗಾರಾದಿ ನವರಸಗಳನ್ನು ವಿಸ್ತರಿಸುವ ಅಧಿಕಾರ ಉಳ್ಳವರು. ಆದುದರಿಂದ ಮೋಹನ ತರಂಗಿಣಿಯಲ್ಲಿ ಶೃಂಗಾರ ರಸವು ತುಂಬಿದೆ. 
ಈ ಮೂರು ವ್ಯತ್ಯಾಸಗಳನ್ನು ಮನಗಂಡರೆ - ರುಕ್ಮಿಣೀಶ ವಿಜಯ ಮತ್ತು ಮೋಹನ ತರಂಗಿಣಿಗಳು ಒಂದಕ್ಕೊಂದು ಪರಿಪೋಷಕವಾಗಿರುವುದು ಕಂಡು ಬರುತ್ತದೆ. 
ಶ್ರೀ ಕನಕದಾಸರು ಸುಮಾರು 316 ಪದ - ಉಗಾಭೋಗ - ಸುಳಾದಿ - ಮುಂಡಿಗೆಗಳ ಮೂಲಕ ದಾಸ ಸಾಹಿತ್ಯ ಸಂಪತ್ತನ್ನು ಬೆಳಸಿ - " ಮುಂಡಿಗೆಗಳ ಬ್ರಹ್ಮ " ಯೆಂದು  ಖ್ಯಾತರಾಗುವುದರೊಂದಿಗೆ - ಹರಿದಾಸ ಸಾಹಿತ್ಯದ ಬೆಳವಣಿಗೆಗೆ ಅಪರೂಪದ ಕಾಣಿಕೆಯನ್ನು ನೀಡಿದ್ದಾರೆ. 
ಈ ಸತ್ಪರಂಪರೆಯಲ್ಲಿ ಅನೇಕ ಹರಿದಾಸರುಗಳು ಬಾಳಿ ಬದುಕಿದರು. 
ಅಂತೆಯೇ ಹರಿದಾಸ ಸಾಹಿತ್ಯ ಕ್ಷೇತ್ರಕ್ಕೆ ಅತ್ಯಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. 
ಕಾವ್ಯ ಪ್ರಪಂಚದಲ್ಲಿಯೂ ಶ್ರೀ ಕನಕದಾಸರು ತಮ್ಮ ಹೆಗ್ಗುರುಹು ಬಿಟ್ಟು ಹೋದುದು ವಿಶೇಷ ಸಂಗತಿ. 
ನರಸಿಂಹಸ್ತವ ಮತ್ತು ಮೋಹನ ತರಂಗಿಣಿಗಳು ಸಾಂಗತ್ಯದಲ್ಲಿದೆ. 
ರಾಮಧಾನ್ಯ ಚರಿತ್ರೆ - ನಳ ಚರಿತ್ರೆ ಹಾಗೂ ಹರಿಭಕ್ತಿಸಾರ ಭಾಮಿನೀ ಷಟ್ಪದಿಯಲ್ಲಿವೆ.  
" ನಾಡಿನ ಸಕಲ ಸಾಧು ಸಜ್ಜನ ವೃಂದಕ್ಕೂ - ಶ್ರೀ ಕನಕದಾಸರು ಆಯುರಾರೋಗ್ಯ - ಶಾಂತಿ - ಕೀರ್ತಿ - ಯಶಸ್ಸು ದಯಪಾಲಿಸಲೆಂದು ಪ್ರಾರ್ಥಿಸುತ್ತಾ... 
ಆಚಾರ್ಯ ನಾಗರಾಜು ಹಾವೇರಿ 
ಗುರು ವಿಜಯ ಪ್ರತಿಷ್ಠಾನ 3 Dec 2020
****

[11:17 AM, 5/20/2021] Suresh Hulikunti Rao: " ಸ್ವಾರಸ್ಯಕರ- 1 "
" ಈದಿನ ಶ್ರೀ ಕನಕದಾಸರ ಜಯಂತೀ "
ಶ್ರೀ ಕನಕದಾಸರ ಜೀವನ ಚರಿತ್ರೆಯಲ್ಲಿ ಬರುವ ಕೆಲವು ಸ್ವಾರಸ್ಯಕರ ಸಂಗತಿಗಳು. 
1. ಕ್ರಿ ಶ 1564 ರಲ್ಲಿ ಶ್ರೀ ಪುರಂದರದಾಸರು ದೇಹ ತ್ಯಾಗ ಮಾಡಿದರು. 
ಅನಂತರ ಅವರ ತಂಬೂರಿಯನ್ನು ಶ್ರೀ ಕನಕದಾಸರು ತಿರುಪತಿ ತಿಮ್ಮಪ್ಪನಿಗೆ ಸಮರ್ಪಿಸಿ ಬಂದರೆಂದು ಐತಿಹ್ಯವಿದೆ. 
2. ಶ್ರೀ ಹೆಚ್ ಕೆ ಲಕ್ಕಪ್ಪಗೌಡರು ಅವರು... 
ಕಾಗಿನೆಲೆಗೆ ಕೊಂಚ ದೂರದಲ್ಲಿರುವ " ಕಮ್ಮಾರು " ಯೆಂಬ ಗ್ರಾಮದಲ್ಲಿ ಅವರ ವಂಶಸ್ಥರು ಈಗಲೂ ಇದ್ದಾರೆ. 
ಅಲ್ಲಿ ಕನಕನಾಯಕ ಕಟ್ಟಿಸಿದ ಕಾಲುವೆಗಳೂ - ಕುದುರೆ ಲಾಯಗಳೂ - ದಾಸರ ಕೂಟ ಎಂದು ಕರೆಯಲಾಗುತ್ತಿರುವ ತುಳಸೀ ತೋಟ ಇಂದಿಗೂ ಇವೆ. 
3. ಡಾ ।। ಆರ್ ಸತ್ಯನಾರಾಯಣ ಅವರು.... 
ಶ್ರೀ ಕನಕದಾಸರು ಮೊದಲು ಶ್ರೀ ವ್ಯಾಸರಾಜರಿಂದ ದೀಕ್ಷೆ ಪಡೆದು ಕೆಲವು ಕಾಲದ ನಂತರ ಆನೆಗೊಂದಿಯ ತಾತಾಚಾರ್ಯರಿಂದ ಶ್ರೀ ವೈಷ್ಣವ ದೀಕ್ಷೆಯನ್ನೂ ತೆಗೆದುಕೊಂಡರು. 
ಅವರ ವಂಶಸ್ಥರೂ - ಕುಲಸ್ಥರೂ ಇಂದಿಗೂ " ಕದರಮಂಡಲಗಿ " ಯ ಸಮೀರ ರಾಯರ ಮಠದಲ್ಲಿ ಮುದ್ರಾಧಾರಣೆ ಮಾಡಿಸಿಕೊಂಡು ವೈಷ್ಣವ ದೀಕ್ಷೆಯನ್ನು ತೆಗೆದು ಕೊಳ್ಳುತ್ತಾರೆ. 
ಆನೆಗೊಂದಿಯ ತಾತಾಚಾರ್ಯ ಮಠದ ಯತಿಗಳಿಗೆ ಮೆರವಣಿಗೆ ಮಾಡಿಸಿ ಕಪ್ಪಾ ಕಾಣಿಕೆಗಳನ್ನು ಕೊಡುತ್ತಾರೆ. 
ನಾಮಧಾರಿಗಳಾದ ದಾಸರೂ ಆಗಿದ್ದಾರೆ. 
4. ವಾಗ್ನುಡಿ 
" ಕನಕನ ಕವಡು  "" ಕನಕಪ್ಪನ ಮುಂಡಿಗೆ "" ಕನಕನ ಕೆಣಕ ಬೇಡಿ - ಕೆಣಕಿ ತಿಣಕ ಬೇಡಿ "
5. ಶ್ರೀ ಕರಿಯಪ್ಪ ಹುಚ್ಚಣ್ಣನವರ್.... 
" ಕಾಗಿನೆಲೆಯಾದಿ ಕೇಶವರಾಯ " ಯೆಂಬ ಮುದ್ರಿಕೆಯ ಪದಗಳನ್ನು " ಶ್ರೀ ಕನಕದಾಸ ಕೃತವೆಂಬ ಭಾವನೆ " ಅನೇಕರದ್ದು. 
ಆದರೆ, ಶ್ರೀ ಕನಕದಾಸರು ತಾವು ಹೋದಲ್ಲೆಲ್ಲಾ ತನ್ನ ಮೆಚ್ಚಿನ ದೇವರ ನಾಮಗಳುಳ್ಳ ಮುದ್ರಿಕೆಯಿಂದ ಪದಗಳನ್ನು ರಚಿಸಿರುವುದು ಬೆಳಕಿಗೆ ಬಂದಿದೆ. 
ಶ್ರೀ ಕನಕದಾಸರು ಸುಮಾರು ೫೦ ಮುದ್ರಿಕೆಗಳ ಬಳಕೆಯುಂಟು. 
ಈ ವೈಶಿಷ್ಟ್ಯವು ಜಗತ್ತಿನಲ್ಲಿಯೇ ಯಾವ ಕಾವ್ಯ ಕರ್ತರಲ್ಲಿಯೂ ಕಂಡು ಬಂದಿಲ್ಲ. 
6. ಮೋಹನ ತರಂಗಿಣಿಯ ಪ್ರಾಚೀನ ಹಸ್ತಪ್ರತಿ ಕದರಮಂಡಲಗಿ ದೇವಾಲಯದಲ್ಲಿ ಸಂರಕ್ಷಿಸಲ್ಪಟ್ಟಿವೆ. 
7. ಕನಕದಾಸ ಅಧ್ಯಯನ ಸಂಶೋಧನಾ ಪೀಠ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ ಉಡುಪಿ - ಈ ಕೇಂದ್ರ ಶ್ರೀ ಕನಕದಾಸರ ಕೃತಿಗಳ ಶಾಸ್ತ್ರೀಯ ಸಂಪಾದನೆ - ಪ್ರಕಾಶನ. 
ಇದರ ಆಧಾರದಿಂದ ನಾಟಕ - ಯಕ್ಷಗಾನಗಳ ತಯಾರಿ ಮತ್ತು ಪ್ರದರ್ಶನ ಸಹಿತ ದಾಸ ಸಾಹಿತ್ಯ ಸಂಸ್ಕೃತಿ ಕೋಶ ನಿರ್ಮಾಣ ನಿತ್ಯಾದಿ ಯೋಜನೆಗಳನ್ನು ಹಮ್ಮಿಕೊಂಡಿದೆ. 
8. ಶ್ರೀ ಕನಕದಾಸರ ಬಗ್ಗೆ ವಿದ್ವಾನ್ ಡಾ ।। ಬನ್ನಂಜೆ ಗೋವಿಂದಾಚಾರ್ಯರು ಬರೆದ ಈ ಪದ್ಯ ಅರ್ಥ ಗರ್ಭಿತ ಮತ್ತು ಮನಮೋಹಕ. 
" ಕನಕದಾಸರ ಮನೆಗೆ ।
ಕನ್ನ ಹಾಕಿದ ಕಳ್ಳ ।
ಕನಕ ಸಿಗಲಿಲ್ಲ ।। "
9. ಕನಕದಾಸರ ಮಹತ್ವನರಿತ ಜನತೆ ಅವರ ಹೆಸರಲ್ಲೇ " ಕನಕ ಗುರುಪೀಠ " ವನ್ನು ಕಾಗಿನೆಲೆಯಲ್ಲಿ ಸ್ಥಾಪಿಸಿ ಜನಾಂಗದ - ನಾಡಿನ ಒಳತಿಗಾಗಿ ಶ್ರಮಿಸುತ್ತಿದೆ.

Comment for the above one:

...ಉಲ್ಟಾ ಹೇಳಿದ್ದೀರಿ, ಮೊದಲು ಶ್ರೀ ವೈಷ್ಣವ ಅರ್ಥಾತ್ ರಾಮನುಜ ಮತವನ್ನು ಅನುಸರಿಸುತ್ತಿದ್ದರು , ಒಮ್ಮೆ ಶ್ರೀ ವ್ಯಾಸರಾಜರ ಸಂಪರ್ಕದಿಂದ ನಂತರದಲ್ಲಿ ಮಧ್ವಮತವನ್ನು ತಮ್ಮ ಆಜೀವ ಪರ್ಯಂತವಾಗಿ ಅನುಸರಿಸಿದರು.
****
 ಕಾರ್ತೀಕ ಕೃಷ್ಣ ತೃತೀಯಾ

ಯಮಾಂಶ ಪರಾಭಕ್ತೋ ಸುಪ್ರಸನ್ನೋ ಹರಿಃ ಸ್ವಯಮ್/
ಯಸ್ಯಾಚಾರ್ಯಃ ವ್ಯಾಸರಾಯಃ ತಮ್ ವಂದೇ ಕನಕಾಭಿದಮ್ //

ಪರಮಾತ್ಮನ ಸೇವೆಗೆ ಕುಲ,ಜಾತಿ ಇವುಗಳ ಪರಿವಿಲ್ಲ, ನಿಷ್ಕಲ್ಮಷವಾದ ಭಕ್ತಿ ಇದ್ದಲ್ಲಿ ಪರಮಾತ್ಮನು ಒಲಿಯುವನು ಎಂದು ತಿಳಿಸಿ ಹೇಳುವುದಕ್ಕೇ ಅವತಾರ ಮಾಡಿ ಬಂದಂತಹಾ, ಮುಂಡಿಗೆ ದಾಸರೆಂದೆ ಪ್ರಖ್ಯಾತರಾದ, ಶ್ರೀಮಚ್ಚಂದ್ರಿಕಾಚಾರ್ಯರ ಶ್ರೇಷ್ಠ ಶಿಷ್ಯರಲ್ಲಿ ಮುಖ್ಯರಾದ, ಶ್ರೀಮದ್ವಾದಿಜ ಗುರುಸಾರ್ವಭೌಮರು,  ಶ್ರೀಮದ್ವಿಜಯೀಂದ್ರತೀರ್ಥ ಗುರುಸಾರ್ವಭೌಮರಂತಹಾ ವಿಭೂತಿಪುರುಷರ, ಶ್ರೀಮತ್ ಪುರಂದರದಾಸಾರ್ಯರಂತಹ  ಪರಮ ಶ್ರೇಷ್ಠ  ದಾಸರ ಸಹವಾಸದಲ್ಲಿ, ಪರಿಸರದಲ್ಲಿ ಜೀವಿಸಿದ, ಶ್ರೀ ವೈಕುಂಠ ದಾಸರಂತಹಾ ಇಂದ್ರಾಂಶರ ಒಡನಾಡಿದವರಾದ, ಕನಕವನ್ನ ಬಿಟ್ಟು, ವೈರಾಗ್ಯ ತಾಳಿ ಪರಮಾತ್ಮನ ಪರಮ ಶ್ರೇಷ್ಠ ದಾಸರಾಗಿ, ಪದ ಪದ್ಯ ಸುಳಾದಿಗಳಿಂದ ಜನರ ಮನದಲ್ಲಿನ ಕಷ್ಮಲಗಳನ್ನು ನಾಶಮಾಡಿದ, ಮಾಡುತ್ತಿರುವ, ಮೋಹನ ತರಂಗಿಣಿ, ರಾಮಧಾನ್ಯ ಚರಿತ್ರೆ ಮುಂತಾದ ಮೇರು ಕೃತಿಗಳಲ್ಲದೇ, ಹರಿಭಕ್ತಿಸಾರ ಎಂಬಂತಹಾ ಪರಮೋತ್ಕೃಷ್ಠ ಕೃತಿಯನ್ನು ದಯಪಾಲಿಸಿದ, ಕೇಶವನಾಮಗಳ ದಿವ್ಯ ಸರಮಾಲೆಯನ್ನು ನಿತ್ಯ ಪಠನ, ಪಾರಾಯಣಕ್ಕೆ ಅನುಕೂಲ ಮಾಡಿಕೊಟ್ಟ, ಪರಿಚಯವೇ ಬೇಕಿಲ್ಲದ, ನನಗೆ ಅತ್ಯಂತ ಪ್ರಾಣಪ್ರದರಾದ ಶ್ರೀ ಕನಕದಾಸಾರ್ಯರ ಜಯಂತೋತ್ಸವ ಇಂದು...

ಶ್ರೀ ದಾಸಾರ್ಯರ ಕೃತಿಗಳು ಅವಲೋಕನ ಮಾಡುವುದು, ಹಾಡುವುದು ಪರಮಾದ್ಭುತ ಆನಂದನೀಡುವಂತದ್ದು. ಅವರ ಕೃತಿಗಳ ಒಳಾರ್ಥವನು ತಿಳಿಯಲು ಪ್ರಯತ್ನ ಅಂತೂ ಜೀವನದ ಸಾರ್ಥಕ್ಯವೇ ಸರಿ.. ಇಂತಹಾ ಮಹಾನುಭಾವರಾದ, ಉಡುಪಿ ಕೃಷ್ಣನ ಒಲಿಸಿಕೊಂಡಂತಹ, ತಿಮ್ಮಪ್ಪನನ್ನು ಕಂಡಂತಹಾ ಶ್ರೀ ಕನಕದಾಸಾರ್ಯರಿಗೆ ನಾವು ನೀಡುವ ಪ್ರತೀ ಸೇವಾಪುಷ್ಪವೂ ಅವರ ಪಾದತಲಕ್ಕೆ ಸೇರುವಂತಾಗಲೀ ಅವರ, ಅವರ ಅಂತರ್ಗತ ಪರಮಾತ್ಮನು ಒಲಿಯುವಂತೆ..

ಮೈಸೂರಿನ ಶ್ರೀರಂಗಪಟ್ಟಣದ ಮಾದೇವಪುರ ಅಥವಾ ಮಹದೇವಪುರ ಎನ್ನುವ ಒಂದು ಪುಟ್ಟ ಹಳ್ಳಿಯಲ್ಲಿ , ಒಮ್ಮೆ ಕನಕದಾಸಾರ್ಯರ ಸಂಚಾರ ಮಾಡುತ್ತಿರ್ತಾರೆ. ಆಗ ಅಲ್ಲಿ ಒಮ್ಮೆ ನದಿ ದಾಟುವ ಸಂದರ್ಭ  ಬಂದಾಗ ಅಲ್ಲಿನ ನಾವೆ ನಡೆಸುವ ಅಂಬಿಗ ನೀನು ಕೀಳುಜಾತಿಯವನು ಅಂತ ಶ್ರೀ ದಾಸಾರ್ಯರಿಗೆ ಅವಮಾನ ಮಾಡ್ತಾರೆ.. 
ಆಗ ಶ್ರೀ ಕನಕದಾಸಾರ್ಯರು ಕೋಪಗೊಂಡು,  ಓಹೋ ಈ ಕೆಲಸದಿಂದ ದುಡಿದು ಬಂದ ಹಣದ ಅಹಂಕಾರವಾ ನಿಮಗೆ ಅಂತ ಹೇಳಿ, 
 ಸಾವಿರ ಗಳಿಸಿದರೂ ಸಂಜೆಗೆ ಲಯವಾಗಲೀ ನಳ್ಳಿಗುಳ್ಳೆಯಂತೆ ಮಕ್ಕಳಾಗಲೀ  ಅಂತ ಶಾಪ ಕೊಟ್ರಂತ ಅಲ್ಲಿನ ಜನ ಹೇಳ್ತಾರೆ.. ಹಾಗೇ ಮುಂದೆ ಒಬ್ಬ ಬಾಳೆಹಣ್ಣು ತೋಟದ ಯಜಮಾನಿ ಹತ್ರ ಹೋಗಿ  ಬಾಳೆ ಎಲೆ ಕೇಳ್ತಾರೆ ದಾಸಾರ್ಯರು.  ಅವನು ಕನಕದಾಸಾರ್ಯರ ವೇಷ ಭೂಷ ನೋಡಿ ಹೋಗು ನಿನಗೇಕೆ ಕೊಡಲಿ ಅಂತಾನೆ.

ದಾಸರಿಗೆ ಕೊಡದಿರುವುದಕ್ಕೆ ಅವನಿಗೂ ಶಾಪ ಕೊಟ್ಟು  ಒಂದು ಬಾಳೆ ಎಲೆ ಮೇಲೆ ಕುಳಿತುಕೊಂಡು ಕಾವೇರೀ ನದಿಯನ್ನು ದಾಟಿ ಬಂದರು ಶ್ರೀ ಕನಕದಾಸಾರ್ಯರು ಅಂತ ಹೇಳ್ತಾರೆ... 
ಆದರೇ ಪರಮಾತ್ಮನ ಪರಮಭಕ್ತರೂ, ವೈರಾಗ್ಯಶಾಲಿಗಳಾದ ದಾಸಾರ್ಯರು ಶಾಪವನ್ನು ಕೊಡುವರೇ ಎನ್ನುವುದು ಪರಶ್ನಾರ್ಥಕ....

ಆದರೇ ಈ ಸಂಘಟನೆಯ ಮಹದೇವಪುರದಲ್ಲಿ ಇವತ್ತಿಗೂ  ಕುರುಹುಗಳು ನಾವು ನೋಡಬಹುದು .....

ಅಲ್ಲಿ ನಾವೆಯನ್ನು ನಡಿಸುವ (ಗಂಗಜಾತಿಯವರು) ಅಂಬಿಗರು ಕಟ್ಟಿದ ಕನಕಪ್ಪನ ದೇವಸ್ಥಾನ, ದಾಸಾರ್ಯರು ಕುಳಿತ, ಸ್ನಾನ ಮಾಡಿದ ಕಲ್ಲು, ( ಕನಕನ ಬಂಡೆ ) ಅದರ ಮೇಲೆ ಮೂಡಿದ ಬಾಳೆ ಎಲೆಯ ಗುರುತು ಅಲ್ಲಿಗೆ ಹೋದರೇ ನೋಡಬಹುದು...
ಆ ಕಲ್ಲಿಗೆ ಪೂಜೆ ಮಾಡಿದರೇ ಎಂಥಾ ಚರ್ಮ ರೋಗಗಳನ್ನಾದರೂ ವಾಸಿಮಾಡಿಕೊಳ್ಳಬಹುದು ಅಂತಲೂ ಅಲ್ಲಿನ ಜನರ ನಂಬಿಕೆ ... ಅಲ್ಲಿನ ಅಂಬಿಗರಿಂದ ಶ್ರೀ ಕನಕದಾಸಾರ್ಯರ ಜಯಂತೋತ್ಸವ ದೊಡ್ಡ ಉತ್ಸವ ರೀತಿಯಲ್ಲಿ ಆಚರಿಸುವದೂ ಇವತ್ತಿಗೂ ಮಾದೇವಪುರಕ್ಕೆ ಹೋದರೆ ನೋಡಬಹುದು...  ಈ ಮೈಸೂರು,  ತಿ.ನರಸೀಪುರ, ಸೋಸಲೆ, ವ್ಯಾಸರಾಜಪುರ,(ಇಲ್ಲಿ ಕನಕಮಂದಿರವಿದೆ) ಶ್ರೀರಂಗಪಟ್ಟಣ, ಚೆನ್ನಪಟ್ಟಣ ಎಲ್ಲಾ ಜಾಗಗಳಲ್ಲಿ ಶ್ರೀಮಚ್ಚಂದ್ರಿಕಾಚಾರ್ಯರು,  ಶ್ರೀ ರಾಜರು , ಶ್ರೀಮತ್ಪುರಂದರದಾಸಾರ್ಯರು,  ಕನಕಪ್ಪರೂ ಓಡಾಡಿದ ಎಷ್ಟೋ ಕುರುಹುಗಳಿವೆ... ನಾವು ಸಾವಕಾಶವಾಗಿ ದರ್ಶನ,  ಸಂಶೋಧನೆ ಮಾಡಬೇಕಷ್ಟೇ..

ಪ್ರಾತಃಸ್ಮರಣೀಯರಾದ, ಯಮಾಂಶ ಸಂಭೂತರಾದ ಶ್ರೀ ಕನಕದಾಸಾರ್ಯರ ಸ್ಮರಣೆ ಮಾಡುವುದು ನಮಗತ್ಯಂತ ಪುಣ್ಯದ ಕೆಲಸ . ಜೀವದ ಕೆಲಸವೂ ಹೌದು..  

ಕನಕಜಯಂತಿಯ ಶುಭಸ್ಮರಣೆ -

 ‌(received in WhatsApp)

****

# *ಶ್ರೀಕನಕದಾಸರ ಪುಣ್ಯಸ್ಮರಣೆಯಲ್ಲಿ *

*ದಾಸರಾಗಿ, ವಿಶೇಷರಾದವರು' ಶ್ರೀಕನಕದಾಸರು. 'ದಾಸ ದಾಸರ ಮನೆಯ ದಾಸಾನುದಾಸ' ಎಂದು ತಮ್ಮ ವಿನಯವನ್ನು ತೋರುತ್ತಾ, 'ಇವಗೆ ನಾಡೆಲ್ಲ ಹುಡುಕಿದರೂ ಈಡಾರ ಕಾಣೆ' ಎಂದು ಶ್ರೀವ್ಯಾಸರಾಜರು, ಶ್ರೀವಾದಿರಾಜರು, ಶ್ರೀಪುರಂದರದಾಸರೇ ಮೊದಲಾದ ಮಹನೀಯರಿಂದ ಶ್ಲಾಘಿತರಾದವರು . ತಮ್ಮ ಪದ, ಪದ್ಯ, ಸುಳಾದಿ, ಉಗಾಭೋಗಗಳೊಂದಿಗೆ 'ಹರಿಭಕ್ತಿಸಾರ', 'ಮೋಹನತರಂಗಿಣಿ', 'ನಳಚರಿತ್ರೆ', 'ಶ್ರೀರಾಮಧಾನ್ಯಚರಿತ್ರೆ', ಮೊದಲಾದ ಕಾವ್ಯಕೃತಿಗಳನ್ನು ರಚಿಸಿ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಸ್ಥಾಯಿಯಾದಂತಹ ಸ್ಥಾನವನ್ನು ಪಡೆದವರು. ಗೂಢಾರ್ಥಗರ್ಭಿತ ವಾದಂತಹ ಮುಂಡಿಗೆಗಳನ್ನು ವಿಶೇಷವಾಗಿ ರಚಿಸಿ, ತಮ್ಮ ಅಧ್ಯಾತ್ಮದ ಔನ್ನತ್ಯವನ್ನು ಸಾರಿದ ಕನಕದಾಸರು, ಕನ್ನಡ ಕಾವ್ಯ ಪರಂಪರೆಯಲ್ಲಿ ಪ್ರಚಲಿತವಾಗಿದ್ದ ದ್ವಿತೀಯಾಕ್ಷರ ಪ್ರಾಸದೊಂದಿಗೆ ಅಂತ್ಯಪ್ರಾಸವನ್ನೂ ಬಳಸಿ ತಮ್ಮ ಪ್ರಯೋಗ ಶೀಲತೆಯನ್ನು ಮೆರೆದರು. ಇನ್ನೊಂದು ವಿಶೇಷವೆಂದರೆ ಹದಿನಾಲ್ಕುಸಾಲಿನ ಸುನೀತವನ್ನೂ ತಮ್ಮ 'ಯಾದವಗಿರಿ ವಾಸನಹುದೋ ಶ್ರೀನರಸಿಂಹ' ಎಂಬ ಕೃತಿಯಲ್ಲಿ ಬಳಸಿದ್ದಾರೆ ಎಂದು ಹಿರಿಯ ವಿದ್ವಾಂಸರಾದ ಶ್ರೀಬನ್ನಂಜೆಗೋವಿಂದಾಚಾರ್ಯರು ತಮ್ಮ 'ಕನಕೋಪನಿಷತ್ತು' ಕೃತಿಯಲ್ಲಿ ಗುರುತಿಸಿದ್ದಾರೆ. ಅಚ್ಚದೇಸೀ ಶಬ್ದಗಳ ಬಳಕೆ (ಉದಾ: ಟವಳಿಗಾರ, ಬೊಕ್ಕಣ, ಬುಗುಡಿ, ಗಳೆ ಮೊದಲಾದ ಶಬ್ದಗಳನ್ನು 'ಎಂಥ ಟವಳಿಗಾರನಮ್ಮ ಕೃತಿಯಲ್ಲಿ ಕನಕದಾಸರು ಬಳಸಿದ್ದಾರೆ). ಜನಪದ ಶೈಲಿಯ ಕೃತಿಗಳ ರಚನೆ (ದೇವಿ ನಮ್ಮ ದ್ಯಾವರು ಬಂದರು ಬನ್ನಿರೆ ನೋಡ ಬನ್ನಿರೆ), ಕೆಲವೊಮ್ಮೆ ಸಂಸ್ಕೃತ ಭೂಯಿಷ್ಠ ವಾದಂತಹ ಪದಗಳ ಬಳಕೆ ( ಮಂದಾಕಿನೀಜನಕ ಮೋಹನಾಕಾರ ಇಂದುಧರಸತಿವಿನುತ ವಿಶ್ವಸಂಚಾರ) ಸಂಸ್ಕೃತ-ಕನ್ನಡಶಬ್ದಗಳ ಹದವರಿತ ಬಳಕೆ (ಹುಟ್ಟಿದಾಗಲೆ ಜಾತಕರ್ಮ ಷೋಡಶವೆಂಬ ಕಟ್ಟಳೆಯ ದಿವಸದಲಿ ನೆಂಟರಿಷ್ಟರು ಕೂಡಿ ಮುಂಜಿಯ ಹರುಷದಲಿ ಮದುವೆಯ ಮಾಡಿ), ಸರಳವಾದ ಶೈಲಿ, ಭಾಷೆಯ ಮೂಲಕ ಅತ್ಯಂತ ತತ್ತ್ವಗರ್ಭಿತ ವಾದಂತಹ ಕೃತಿಗಳು ( ಉದಾ: ನಾನು ನೀನು ಎನ್ನದಿರೋ ಹೀನ ಮಾನವ), ಶಬ್ದಾರ್ಥಾಲಂಕಾರಗಳ ಸೊಬಗನ್ನೂ ಮೀರಿದ ಆಳವಾದ, ನಿಗೂಢವಾದ ಚಿಂತನೆಯನ್ನು ಬಿಂಬಿಸುವ 'ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ' ಮೊದಲಾದ ಕೃತಿಗಳು ಶ್ರೀಕನಕದಾಸರು ಏರಿದ ಸರಿಮಿಗಿಲಿಲ್ಲದ ಹಿರಿತನಕ್ಕೆ ಸಾಕ್ಷಿಯಾಗಿವೆ. ಶ್ರೀಕನಕದಾಸರ ರಚನೆಗಳಲ್ಲಿ ಅತ್ಯಂತ ವಿಶಿಷ್ಟವಾದಂತಹ ರಚನೆಗಳೆಂದರೆ  ಅವರ 'ಮುಂಡಿಗೆ' ಗಳು. ಒಗಟಿನ, ಬೆಡಗಿನರೂಪದಲ್ಲಿ ರಚಿತವಾಗಿರುವ ಮುಂಡಿಗೆಗಳು ತಮ್ಮ ಚೆಲುವಿನಿಂದ, ಉಕ್ತಿ ಮತ್ತು ಯುಕ್ತಿ ಚಮತ್ಕಾರಗಳಿಂದ ಮನಮೋಹಕವಾದಂತಹ ರಚನೆಗಳು. 'ಪರಮಪುರುಷ ನೀನೆಲ್ಲಿ ಕಾಯಿ' ಎಂಬ ರಚನೆಯಲ್ಲಿ ಬಗೆ ಬಗೆಯ ತರಕಾರಿಗಳ ಹೆಸರನ್ನು ಬಳಸಿ ಶ್ರೀಹರಿಯನ್ನು 'ಕಾಯಿ' ತಮ್ಮನ್ನು ರಕ್ಷಿಸು ಎಂದು ಮೊರೆಯನ್ನಿಟ್ಟಿದ್ದಾರೆ. 'ನಾಮ ಮುಂದೋ ಸ್ವಾಮಿ ವಿಭೂತಿ ಮುಂದೋ" ಎಂಬ ರಚನೆ ಮೇಲ್ನೋಟಕ್ಕೆ ವೈಷ್ಣವ ಲಾಂಛನವಾದ 'ನಾಮ' ಹಾಗೂ ಶೈವರ ಲಾಂಛನವಾದ 'ವಿಭೂತಿ' ಗಳಲ್ಲಿ ಯಾವುದು ಉತ್ತಮ ಎಂಬುದನ್ನು ವಿಶ್ಲೇಷಿಸಲು ಹೊರಟ, ಅಥವಾ ವಿವಾದವನ್ನು ಕುರಿತ ರಚನೆ ಎನ್ನಿಸುತ್ತದೆ, ಆದರೆ ಶ್ರೀಕನಕದಾಸಾರ್ಯರ ಉದ್ದೇಶ ಭಗವಂತನ 'ನಾಮ' (ಹೆಸರು) ಹಾಗೂ ಆತನ ವಿಭೂತಿ ರೂಪಗಳಲ್ಲಿ ಯಾವುದು ಮುಂದೆ, ಭಗವಂತನ ವಿಭೂತಿರೂಪಗಳು ಹಾಗೂ ಆತನ ಹೆಸರು ಎರಡೂ ಅನಾದಿ ಎಂದು ಹೇಳುವುದು ಎಂಬುದನ್ನು ತಿಳಿದಾಗ ಅಪರಿಮಿತ ಆನಂದ ಮನಸ್ಸಿನಲ್ಲಿ ಮೂಡುತ್ತದೆ. ಶ್ರೀಕನಕದಾಸಾರ್ಯರ 'ಕುಲ' ದ ಬಗೆಗಿನ ಚಿಂತನೆಗಳು ಅವರ ಸಾಮಾಜಿಕ ದೃಷ್ಟಿಕೋನವನ್ನು ಬಿಂಬಿಸುತ್ತದೆ ಮಾತ್ರವಲ್ಲದೆ 'ಕುಲ'ಕ್ಕೆ ಹೊಸ ವ್ಯಾಖ್ಯೆಯನ್ನೇ ನೀಡುತ್ತವೆ. ಶ್ರೀಪುರಂದರದಾಸರಂತೆಯೆ ಭಾರತೀಯ ಸಾಹಿತ್ಯ, ಸಂಗೀತಕ್ಕೆ ವಿಶಿಷ್ಟ ವಾದಂತಹ ಭಾಷಾ ಪ್ರಯೋಗದ ಮೂಲಕ, ವಿವಿಧ ಕಾವ್ಯಪ್ರಕಾರಗಳ ಬಳಕೆಯ ಮೂಲಕ ಹೊಸತನವನ್ನು ತಂದುಕೊಟ್ಟವರು ಶ್ರೀಕನಕದಾಸರು.*

# * ಶ್ರೀಕನಕದಾಸರ ಶ್ರೀಮಧ್ವ ಭಕ್ತಿ ಹಾಗೂ ತತ್ತ್ವವಾದ ನಿಷ್ಠೆ.*

*ಶ್ರೀಕನಕದಾಸರಿಗೆ ತಮ್ಮ 'ದ್ವಾದಶಸ್ತೋತ್ರ' ಗಳ ಮೂಲಕ ಕರ್ನಾಟಕದ ಹರಿದಾಸ ಪರಂಪರೆಗೆ ಬೀಜಾವಾಪನೆಮಾಡಿದ, ತಮ್ಮ ಸಾಕ್ಷಾತ್ ಶಿಷ್ಯರಾದ ಶ್ರೀನರಹರಿತೀರ್ಥರ ಮೂಲಕ ಪರಂಪರೆ ಪ್ರವರ್ಧಿಸಲು ಪ್ರೇರಕಶಕ್ತಿಯಾದ ಶ್ರೀಪೂರ್ಣಪ್ರಜ್ಞರ ಸಿದ್ಧಾಂತದ ಬಗ್ಗೆ ಅತೀವವಾದ ಅಭಿಮಾನ. ತಮ್ಮಜೀವಿತಾವಧಿಯ ಪ್ರಾರಂಭಿಕ ಹಂತದಲ್ಲಿ ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಕರು ಹಾಗೂ ವೈಷ್ಣವ ಸಿದ್ಧಾಂತಕ್ಕೆ ಭಾರತದಲ್ಲಿ ಮಹತ್ತ್ವದ ಭೂಮಿಕೆಯನ್ನು ರೂಪಿಸಿದ ಶ್ರೀರಾಮಾನುಜಾಚಾರ್ಯರ ಶ್ರೀವೈಷ್ಣವ ಸಿದ್ಧಾಂತದ ಪರಂಪರೆಯನ್ನು ಕೆಲಕಾಲ ಅನುಸರಿಸಿದ ಶ್ರೀಕನಕದಾಸರು, ಶ್ರೀವ್ಯಾಸತೀರ್ಥರ ಶಿಷ್ಯತ್ವ ಹಾಗೂ ಶ್ರೀವಾದಿರಾಜ, ಶ್ರೀಪುರಂದರದಾಸರ ಒಡನಾಟ ದೊರೆತ ಮೇಲೆ ಶ್ರೀಮಧ್ವಪ್ರಣೀತ 'ತತ್ತ್ವವಾದ' ವನ್ನು ಮನ:ಪೂರ್ವಕವಾಗಿ ಸ್ವೀಕರಿಸಿದರು ಮಾತ್ರವಲ್ಲ ತಮ್ಮ ಕೃತಿಗಳಲ್ಲಿ ಶ್ರೀಆನಂದತೀರ್ಥರ ಸಿದ್ಧಾಂತವನ್ನು ಅತಿಶಯವಾಗಿ ಪ್ರತಿಪಾದಿಸಿದರು.*

"ಎಷ್ಟುಪೊಗಳಲಿ ಎನ್ನೊಡೆಯ ನಿಮ್ಮವಿಶಿಷ್ಟ ಮಹಿಮೆಗಳನು ಸುಜನರಿಗೆ ಬಂದ ಕಷ್ಟವಳಿಯಲ್ಕೆ ನೀ ಸುರ ಕಾಮಧೇನು" ಎಂದು ಹನುಮ-ಭೀಮ-ಮಧ್ವರನ್ನು ಸ್ತುತಿಸುವ ಕನಕದಾಸರು "ಪರಮಪದವಿಯನೀವ ಗುರು ಮುಖ್ಯಪ್ರಾಣನ ಧರೆಯೊಳಗುಳ್ಳ ಸುಜನರೆಲ್ಲ ಭಜಿಸಿರೋ" ಎಂದು ಸುಜನರಿಗೆ ಸಲಹೆ ನೀಡುತ್ತಾರೆ.*

"ಅಖಿಲವಾದ ಮಧ್ವಮತವ ಬಲಿದೆನಿಸಿ ಕಾಗಿನೆಲೆಯಾದಿ ಕೇಶವನೇ ಪರದೈವವೆಂದ" ಮಧ್ವರಾಯರನ್ನು" ಶರಣು ಶರಣು ವೈಷ್ಣವಮತ ವಿಲಾಸಗೆ, ಶರಣು ಮುಖ್ಯಪ್ರಾಣಗೆ', "ಧಾರುಣಿಯೊಳು ದುರ್ವಾದಿ ದೈತ್ಯರ ಗಂಟಲಗಾಳವಾದಗೆ, ಮೂರೇಳೂ ಮತವನೆಲ್ಲ ಮುರಿದ ಧೀರ ಮಧ್ವರಾಯಗೆ, ಸಾರತತ್ತ್ವಗಳನೆಲ್ಲ ಶೋಧಿಸಿ ಸೂರೆ ಮಾಡಿದಾತಗೆ, ಊರ್ವಿಯೊಳು ವರದೇವತಾದಿ ಕೇಶವದೊರೆದಾಸಗೆ", "ಮಧ್ಯಗೇಹದಾತನಾ ಸತಿಯಲಿ ಉದಿಸಿದಗೆ .... ಮಧ್ವಶಾಸ್ತ್ರವನೆಲ್ಲ ಸಜ್ಜನರಿಗೊರೆದಗೆ ಮುದ್ದು ಶ್ರೀ ಆದಿಕೇಶವನ ಭಜಕಗೆ" ಹೀಗೆ ಕನಕದಾಸರಿಗೆ ಮಧ್ವರಾಯರನ್ನು ಎಷ್ಟು ಸ್ತುತಿಸಿದರೂ ದಣಿವಿಲ್ಲ, ಇಂತಹ ಗುರುವನ್ನು ಹೊಂದಿ ತಮ್ಮ ಜೀವನವನ್ನು ಉದ್ಧರಿಸಿಕೊಳ್ಳುವುದನ್ನು ಬಿಟ್ಟು ಅನ್ಯರನ್ನು ಆಶ್ರಯಿಸುವಂತಹ ಜನರನ್ನು ಕಂಡರೆ ಶ್ರೀಕನಕದಾಸರಿಗೆ ಎಲ್ಲಿಲ್ಲದ ಕೋಪ. "ಅಂಧತಮಸ್ಸು ಇನ್ನ್ಯಾರಿಗೆ ಗೋವಿಂದನ ನಿಂದಿಸುವವರಿಗೆ ಸಂದೇಹವಿಲ್ಲದೆ ಸಾರಿಸಾರಿಗೆ ವಾಯುನಂದನನ ವಂದಿಸದವಗೆ" ಎಂದು ಹೇಳುತ್ತಾ, "ಆದಿಕೇಶವರಾಯನ ದಾಸರೊಡೆಯ ಮಧ್ವದ್ವೇಷಿಗಳಿಗಲ್ಲದೆ ಮತ್ತ್ಯಾರಿಗೆ" ಎಂದು ಕಟುವಾಗಿಯೇ ಪ್ರಶ್ನಿಸುತ್ತಾರೆ. ಶ್ರೀಕನಕದಾಸರ ಕೃತಿಗಳ ಮೇಲೆ ಮಾಧ್ವ ತತ್ತ್ವಜ್ಞಾನದ ಪ್ರಭಾವವನ್ನು ಗುರುತಿಸುವ ಸಂದರ್ಭದಲ್ಲಿ ಶ್ರೀವ್ಯಾಸತೀರ್ಥರ ಪ್ರಭಾವ ನಿಚ್ಚಳವಾಗಿ ಗೋಚರಿಸುತ್ತದೆ. ಶ್ರೀಕನಕದಾಸರ ತಮ್ಮ ಕೃತಿಗಳಲ್ಲಿ ಶ್ರೀವಿಷ್ಣುವಿನ ದಶಾವತಾರಗಳನ್ನು ಸ್ತುತಿಸುವಂತಹ ಸಂದರ್ಭದಲ್ಲಿ, ಮಾಧ್ವ ನಂಬಿಕೆಯ ರೀತ್ಯ ಬುದ್ಧನನ್ನು ದಶಾವತಾರಗಳಲ್ಲಿ ಸ್ತುತಿಸುತ್ತಾರೆ.  ಶ್ರೀರುದ್ರದೇವರ ಸ್ತುತಿಯನ್ನು ಹರಿದಾಸರೆಲ್ಲರೂ ವಿಶೇಷವಾಗಿ ಮಾಡಿರುವಂತೆ ಶ್ರೀಕನಕದಾಸರೂ ಸಹ ವಿಶಿಷ್ಟವಾದ ರೀತಿಯಲ್ಲಿ ಶ್ರೀರುದ್ರದೇವರ ಸ್ತುತಿಯನ್ನು ಮಾಡಿರುವುದು ಗಮನಾರ್ಹ. ದಾಸರ ಕೃತಿಗಳ ಆಂತರಿಕ ಪ್ರಮಾಣಗಳನ್ನು ಗಮನಿಸಿದ ಸಂದರ್ಭದಲ್ಲಿಯೂ ಶ್ರೀಮಧ್ವ ಭಗವತ್ಪಾದರ ತತ್ತ್ವವಾದದ ಪ್ರಭಾವ ನಿಚ್ಛಳವಾಗಿ ಗೋಚರಿಸುತ್ತದೆ. "ಗೋವಿಂದ ಸಲಹೆಮ್ಮನು" ಕೃತಿಯಲ್ಲಿ 'ನಿನ್ನರಸಿಯು ಅರಿಯದಂತಿಹೆ ಗೋವಿಂದ' ಎಂದು ದಾಸರು ನುಡಿದಿರುವ ಮಾತು ಜಗನ್ಮಾತೆಯಾದ ಲಕ್ಷ್ಮೀದೇವಿಗೆ ಸಕಲವಿಷಯಗಳ ಜ್ಞಾನವು ಇದ್ದರೂ, ಶ್ರೀಹರಿಯ ಬಗ್ಗೆ ಸಾಕಲ್ಯೇನ ಜ್ಞಾನವಿಲ್ಲ ಎಂಬ ಮಧ್ವ ಸಿದ್ಧಾಂತದ ಪ್ರಮೇಯವನ್ನು ಸೂಚಿಸುತ್ತದೆ." ಬಲ್ಲವರೇ ಬಲ್ಲವರು" ಎಂಬ ಕೃತಿಯಲ್ಲಿ, "ಅಜ ಜ್ಞಾನಾಧಿಕ ಬಲ್ಲ, ಅನಲಸ್ನೇಹಿತ ಬಲ್ಲ, ಗಜಚರ್ಮಾಂಬರ ಬಲ್ಲ, ಗರುಡಬಲ್ಲ, ಭುಜಗೇಶ್ವರ ಬಲ್ಲ, ಭೂರಿಲೋಚನ ಬಲ್ಲ" ಎಂದು ಅತ್ಯಂತ ಸ್ಪಷ್ಟವಾಗಿ ಬ್ರಹ್ಮ- ವಾಯುಗಳನಂತರ ಗರುಡ, ಶೇಷ, ರುದ್ರರು ಸಮರು ಅವರ ನಂತರ ಇಂದ್ರ ಹೀಗೆ ತಾರತಮ್ಯವನ್ನು ಅತ್ಯಂತ ಸ್ಪಷ್ಟವಾಗಿ ಹೇಳುತ್ತಾರೆ. ಇದು ಶ್ರೀಕನಕದಾಸರು ಮನ:ಪೂರ್ವಕವಾಗಿ ಸ್ವೀಕರಿಸಿದ್ದ ಶ್ರೀಮಧ್ವರ ತತ್ತ್ವವಾದ.
-venugopal
***



Sri Kanaka Dasa1508-1606Thimmappa NayakaNeleyadi KeshavaSri Vyaasa rajaKagineleNot Known

****


No comments:

Post a Comment