Sunday 23 May 2021

srikrishnavittala dasaru bheearayaru 1963 holenarasipura ಶ್ರೀಕೃಷ್ಣವಿಠ್ಠಲ ದಾಸರು ಶ್ರೀ ಭೀಮರಾಯರು

 ಹೆಸರು : ಶ್ರೀ ಭೀಮರಾಯರು., ಹೊಳೇ ನರಸೀಪುರ

ಕಾಲ :  ಕ್ರಿ ಶ 1902 - 1963

ಉಪದೇಶ ಗುರುಗಳು :  ಶ್ರೀ ಉರಗಾದ್ರಿವಾಸ ವಿಠ್ಠಲರು

ಅಂಕಿತ : ಶ್ರೀ ಕೃಷ್ಣವಿಠ್ಠಲ shreekrishnavittala

ಕೃತಿ :

ಶ್ರೀ ಕೃಷ್ಣ ವಿಠ್ಠಲರು....... 

" ಭಾಷ್ಯಾನುಸಾರಿ ದಶೋಪನಿಷತ್ತುಗಳನ್ನು ಭಾಮಿನೀ ಷಟ್ಪದಿಯಲ್ಲಿ  ಪ್ರಮೇಯಭರಿತವಾದ " ಕೃತಿಗಳನ್ನು-  ಎಲ್ಲರಿಗೂ ಅರ್ಥವಾಗುವ ಶೈಲಿಯಲ್ಲಿ ಸರಳ ಸುಂದರವಾಗಿ ಅಚ್ಛ ಕನ್ನಡದಲ್ಲಿ ರಚಿಸುವುದರ ಜೊತೆಯಲ್ಲಿ ಅನೇಕ ಪದ - ಪದ್ಯಗಳನ್ನು ರಚಿಸಿ ಹರಿದಾಸ ಸಾಹಿತ್ಯಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ!!

ರಾಗ : ಶಂಕರಾಭರಣ  ತಾಳ : ಆದಿ

ಯಾವ ಗುರುಗಳಿಗುಂಟು -

ಈ ವೈಭವವು ।

ಪವನನೊಡೆಯನ ಭಕ್ತ ರಾ-

ಘವೇಂದ್ರರಿಗಲ್ಲದಲೆ ।। ಪಲ್ಲವಿ ।।

ವರ ತುಂಗಾ ತೀರದಲಿ ।

ಮೆರೆವ ಮಂತ್ರಾಲಯದಿ ।

ತರಣಿಯಂದದಿ ಮೆರೆದು । ಭ ।

ಕ್ತರನು ಪೋಷಿಸುವ ।

ಶರಣ ರಕ್ಷಕನೆಂಬ ।

ಬಿರುದಿಂದ ತಾ ಮೆರೆವ ।

ವರ ಮಧ್ವ ಕುಲಚಂದ್ರ ।

ಗುರುರಾಜಗಲ್ಲದೆ ।। ಚರಣ ।।

ಸಂತರೆಲ್ಲರೂ ಬಂದು ।

ಶಾಂತಿಯಿಂದಲಿ ನಿಂದು ।

ಕಂತುಪಿತನ ಭಕ್ತ । 

ಚಿಂತೆಯನ್ನು ಹರಿಸೆಂದು ।

ಸಂತತವು ಬೇಡುತಿಹ ।

ಶಾಂತರಾಗಿಹ ಜನರ ।

ಸಂತೋಷದಲಿ ಕಾಯ್ವ -

ಗುರುರಾಜಗಲ್ಲದೆ ।। ಚರಣ ।।

ಕಾವಿ ವಸ್ತ್ರವನು ಧರಿಸಿ ।

ಕವಿದ ಭ್ರಮೆಯನು ಬಿಡಿಸಿ ।

ಭುವಿಜ ರಮಣನ ಭಜಿಪ ।

ಕವಿ ಕುಲೋತ್ತಮ ನಮ್ಮ ।

ಸೇವಕರ ಸುರಧೇನು ।

ಪಾವನಾತ್ಮನು ಆದ ।

ಕೃಷ್ಣ ವಿಠ್ಠಲನ ಭಕ್ತ -

ಗುರುರಾಜಗಲ್ಲದೆ ।। ಚರಣ ।।

No comments:

Post a Comment