Tuesday 5 October 2021

santekelluru venkatarayaru ashivna shukla shashti ಸಂತಿಕೆಲ್ಲೂರು ವೆಂಕಟರಾಯ

gruhastaru / dasaru

santekelluru venkatarayaru  ಸಂತಿಕೆಲ್ಲೂರು ವೆಂಕಟರಾಯ ashivna shukla shashti


 ವೇಂಕಟೇಶ ಕೃಪಾಪಾತ್ರಂ ಮೌನ ಧ್ಯಾನ ರತಂ ಸದಾ/

ವೇಂಕಟದಾಸಾರ್ಯಂ ವಂದೇ ಕೆಲವೂರೇಶ ಸೇವಕಂ//


ಶ್ರೀಮದ್ ರಾಘವೇಂದ್ರ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಪರಮಾನುಗ್ರಹ ಪಾತ್ರರೂ, ಸದಾ ಶ್ರೀಮದ್ಹರಿಕಥಾಮೃತಸಾರದ ಪಾರಾಯಣದಲ್ಲಿ ಸದಾ ನಿರತರು, ಶ್ರೀ ವರದೇಶದಾಸಾರ್ಯರ ವಂಶೋದ್ಭವರೂ, ಈ ಕಾಲದಲ್ಲಿ ಸಹ ಆಧ್ಯಾತ್ಮಿಕ ಚಿಂತನೆಯಲ್ಲಿಯೇ ಜೀವನವನ್ನು ಕಳೆದಂತಹಾ, ವಿರಕ್ತ ಶಿಖಾಮಣಿಗಳೂ ಆದ ಶ್ರೀ ಸಂತಿಕೆಲ್ಲೂರು ವೆಂಕಟರಾಯರ ಆರಾಧನೆಯ ಶುಭಸ್ಮರಣೆಗಳು..


ಶ್ರೀ ವೇಂಕಟದಾಸರ, ಶ್ರೀ ಪ್ರಾಣೇಶದಾಸಾರ್ಯರ ಅಂತರ್ಗತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಲಕ್ಷ್ಮೀನಾರಸಿಂಹಾಭಿನ್ನ ವೆಂಕಪ್ಪನ ಅನುಗ್ರಹ ಸದಾ ನಮಗಿರಲಿ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ...


ಜೈ ವಿಜಯರಾಯ 

-smt. padma sirisha

ನಾದನೀರಾಜನದಿಂ ದಾಸಸುರಭಿ  🙏🏽

***

ಶ್ರೀವರದೇಶದಾಸರನ್ನ ಹತ್ತಿರದಿಂದ ಕಂಡವರ  ಮಾತು.


ಒಂದು ಜನುಮದಾಗ ಮುಗಿತೈತೇನ್ ದೊಡ್ಡವರ ಸುದ್ದಿ,ಒಂದು ಹೇಳುತಿನಿ ಕೇಳ್ ಯಂಕಣ್ಣ,,,

ಗುರುಗಳ ಸನ್ನಿಧಾನದಾಗ ಸ್ವಾಮಿರಾಯರು ವೈಕುಂಠ ಯಾತ್ರೆ ಮಾಡಿಬಿಟ್ರು, ಮುತ್ಯಾನಾ  ಅವರಿಗೆ ಮುಂದಿನ ಕಾರ್ಯ ಮಾಡಿದ್ದು, ಮೂರನೆ ದಿವ್ಸ ಅಸ್ಥಿ ಸಂಗ್ರಹಕ ಹೋದಾಗ್ಯೆ, ಸ್ವಾಮಿರಾಯರ ಅಸ್ಥಿಗಳ ಅವಲಾ, ಅವು  ರಾಮ ರಾಮ ಅಂತ ರಾಮಸ್ಮರಣೆ ಮಾಡಕತ್ತಿದ್ದವಂತ.

ಆ ರಾಮ ಸ್ಮರಣೆನಾ, ಮುತ್ಯಾ, ಅವರ ಜೊತಿಗೆ ಹನುಮಂತರಾವ ಕರಣಂ ಇನ ಇಬ್ಬರು ಇದ್ರಂತ. ಬಹಳ ದಿವಸ ಆದ ಮೇಲೆ ಕೌತಲ ದಿಂದ ಬಂದ ಪತ್ರದಾಗ ತಿಳಿತು ನಮಗ.


ಆಮೇಲೆ ಇದ ವಿಷ್ಯನಾ ವೇ||, ಮೂ|| , ಶ್ರೀರಾಘವೇಂದ್ರಚಾರ ಮೂರು ವರುಷ ಆದ ಮೇಲೆ‌ ಲಿಂಗಸ್ಗೂರಗೆ ಬಂದಾಗ, ಮತ್ತ ಇದ ಸ್ಮರಿಸಿದ್ರು.


ನೋಡ, ನಮಗರಿವಿಲ್ಲದಂಗ ಹೆಂಗ ಉಸಿರಾಟ ನಡದೈತಿ, ಹಂಗ ಸ್ವಾಮಿರಾಯರು ಉಸಿರಾಟದಂಗ, ಮನಸಿನ್ಯಾಗ  ರಾಮಸ್ಮರಣೆ ಮಾಡುತಿದ್ರು,


( ಹಳ್ಳೆರಾವ ವೆಂಕಟರಾವ(ಶ್ರೀ ವರದೇಂದ್ರ ವಿಠ್ಠಲ ದಾಸರು) ತಿಳಿಸಿದ್ದು- 

✍️ಕೆಲೂರ ವೆಂಕಟರಾವ)

🙏🙏🙏

ಕೃಪೆ. ಶ್ರೀ ಕೆಲ್ಲೂರ ವೆಂಕಟರಾಯರ ಮೊಮ್ಮಗನಾದ ಶ್ರೀ ಶೇಷಗಿರಿ ಅವರು.

***



No comments:

Post a Comment