veera rama devaru
Sri Vidyasagara Madhava Theertha is the 24th saint after Sri Madhava Theertha in the guru parampare of Tambihalli mutt.
vidyasagara madhava demised in April 2025 madhava teertha mutt 8/4/2025 news
ಶ್ರೀಮಾಧವತೀರ್ಥ ಸಂಸ್ಥಾನದ ಪೀಠಾಧಿಪತಿಗಳಾದ
ಶ್ರೀವಿದ್ಯಾಸಾಗರಮಾಧವತೀರ್ಥ ಶ್ರೀಪಾದರು ಹರಿಪದವನ್ನು ಸೇರಿದ್ದಾರೆ ಎಂದು ಕೇಳಿ ತುಂಬಾ ವಿಷದವಾಯಿತು.
ಶ್ರೀಗಳವರು ಪೂರ್ವಾಶ್ರಮದಲ್ಲಿ ಕಂಬಾಲೂರು ವಂಶಸ್ಥರಾಗಿದ್ದು ಕೆಲವು ಕಾಲ ಪರಮಪೂಜ್ಯ
ಶ್ರೀವಿದ್ಯಾಪಯ್ಯೋನಿಧಿತೀರ್ಥ
ಶ್ರೀಪಾದರ ಅಪೇಕ್ಷೆಯಂತೆ
ಶ್ರೀಮಠದ ಸರ್ವಾಧಿಕಾರಿಗಳಾಗಿ ವಿಶೇಷ ಸೇವೆಯನ್ನು ಸಲ್ಲಿಸಿದವರು. ಪೂರ್ವಾಶ್ರಮದಲ್ಲಿ ಅವರು ಕರ್ನೂಲು ಮತ್ತು ನೆಲ್ಲೂರು ಎರಡು ಕಡೆಗಳಲ್ಲಿ
ಶ್ರೀವ್ಯಾಸರಾಜ ಮಠದ ಶಾಖೆಯನ್ನು ನಿರ್ಮಿಸುವುದರಲ್ಲಿ ಪ್ರಧಾನಪಾತ್ರ ವಹಿಸಿದ್ದವರು. ತೆಲುಗು ,ಸಂಸ್ಕೃತ, ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪ್ರಭುತ್ವವನ್ನು ಪಡೆದಿದ್ದು ಮಹಾಭಾರತಕ್ಕೆ ಸಂಬಂಧಪಟ್ಟಂತೆ ಪ್ರಬಂಧವನ್ನು ರಚಿಸಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದರು. ಉತ್ತಮ ಕವಿತಾ ಶಕ್ತಿಯನ್ನು ಪಡೆದಿದ್ದ ಅವರು ಆಧ್ಯಾತ್ಮಿಕ ವಿಷಯಗಳನ್ನು ಒಳಗೊಂಡ ಅನೇಕ ಸುಂದರ ಕವಿತೆಗಳನ್ನು ರಚಿಸಿದ್ದರು.
ಶ್ರೀಮಾಧವತೀರ್ಥ ಸಂಸ್ಥಾನದ ಅಭಿವೃದ್ಧಿಗಾಗಿ ವಿಶೇಷವಾಗಿ ಅನೇಕ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಿದವರು. ಶ್ರೀಪಾದರು 93 ವರ್ಷಗಳ ಕಾಲ ಸಾರ್ಥಕ ಜೀವನವನ್ನು ನಡೆಸಿ ಇಂದು ಶ್ರೀಹರಿ ಪಾದವನ್ನು ಸೇರಿದರೆಂದು ಕೇಳಿ ತುಂಬಾ ವಿಷಾದವಾಗಿದೆ. ಅವರಿಗೆ ನಮ್ಮ ಆರಾಧ್ಯಮೂರ್ತಿಯಾದ ಈ ಮೂಲಗೋಪಾಲಕೃಷ್ಣನ
ಪೂರ್ಣ ಅನುಗ್ರಹವನ್ನು ಪ್ರಾರ್ಥಿಸುತ್ತೇವೆ.
--- ಶ್ರೀ ಶ್ರೀ ವಿದ್ಯಾಶ್ರೀಶತೀರ್ಥರು
ಸೋಸಲೆ ಶ್ರೀ ವ್ಯಾಸರಾಜ ಮಠ
**
https://drive.google.com/file/d/1_mj0TYdUVotau1M4nSZPiD5wHLCbW2gL/view?usp=drivesdk
ಶ್ರೀಮಾಧವತೀರ್ಥ ಸಂಸ್ಥಾನದ ಹಿರಿಯ ಪೀಠಾಧಿಪತಿಗಳಾದ
ಶ್ರೀವಿದ್ಯಾಸಾಗರಮಾಧವತೀರ್ಥರು ಹರಿಪಾದವನ್ನು ಸೇರಿದರು ಎಂಬ ವಿಷಯ ಕೇಳಿ ತುಂಬಾ ಖೇಧವಾಯಿತು.
ಅವರು ಪೂರ್ವಾಶ್ರಮದಲ್ಲಿ ಕರ್ನೂಲಿನಲ್ಲಿ ಇರುವಾಗ ನಮ್ಮ ಕರ್ನೂಲ್ ಶಾಖೆಯಲ್ಲಿ ಮಹಾಭಾರತ ಮುಂತಾದ ಆಧ್ಯಾತ್ಮಿಕ ಗ್ರಂಥಗಳ ಪ್ರವಚನವನ್ನು ಆಗಿನ ಶ್ರೀಮಠದ ಪೀಠಾಧಿಪತಿಗಳಾಗಿದ್ದ ಶ್ರೀಸುಜಯೀಂದ್ರತೀರ್ಥರ ಆದೇಶದಂತೆ ನಡೆಸಿದ್ದರು.
ಕೆಲಕಾಲ ಶ್ರೀಗುರು ಸಾರ್ವಭೌಮ ಸಂಸ್ಕೃತ ವಿದ್ಯಾಪೀಠದ ಪ್ರಾಚಾರ್ಯರಾಗಿ ಶ್ರೀರಾಯರ ಸೇವೆಯನ್ನು ಮಾಡಿದವರು . ಇಲ್ಲಿ ಇರುವಾಗಲೇ ಮಾಧವ ತೀರ್ಥರ ಮಠದಿಂದ ಸನ್ಯಾಸ ಸ್ವೀಕಾರಕ್ಕೆ ಪತ್ರ ಬಂದು ಇಲ್ಲಿಂದಲೇ ತುರ್ಯಾಶ್ರಮಕ್ಕೆ ಹೊರಟರು.
ಶ್ರೀಮಾಧವತೀರ್ಥ ಮಠದ ವಿಶೇಷ ಜೀರ್ಣೋದ್ಧಾರವನ್ನು ಕೈಕೊಂಡು , ಶ್ರೀಮಾಧವತೀರ್ಥರ ಮೃತ್ತಿಕಾಬೃಂದಾವನವನ್ನು ಸ್ಥಾಪನೆ ಮಾಡಿದರು . ಅವರು ತಮ್ಮ ಉತ್ತರಾಧಿಕಾರಿಗಳನ್ನಾಗಿ ನಮ್ಮ ಶ್ರೀಮಠದ ಶಿಷ್ಯರನ್ನು ಸ್ವೀಕರಿಸಿದ್ದು ನಮ್ಮ ಶ್ರೀಮಠದ ನಿಕಟ ಬಾಂಧವ್ಯವನ್ನು ಸೂಚಿಸುತ್ತದೆ. ಇತ್ತೀಚೆಗೆ ನಡೆದ ಸುಧಾಮಂಗಳ ಕಾರ್ಯಕ್ರಮಕ್ಕಾಗಿ ಶಿಷ್ಯ ಸಮೇತರಾಗಿ ಮಂತ್ರಾಲಯಕ್ಕೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಗುರುರಾಜರ ದರ್ಶನವನ್ನು ಪಡೆದದ್ದನ್ನು ಸ್ಮರಿಸುತ್ತೇವೆ . ಉತ್ತಮ ಕವಿಗಳು ಬಹುಭಾಷಾಭಿಜ್ಞರು ಆದ ಶ್ರೀಗಳವರು ತಮ್ಮ 93 ವರ್ಷಗಳ ಸಾರ್ಥಕ ಜೀವನವನ್ನು ನಡೆಸಿ ಇಂದು ಶ್ರೀಹರಿ ಪಾದವನ್ನು ಸೇರಿದರೆಂದು ಕೇಳಿ ತುಂಬಾ ಆಘಾತವಾಗಿದೆ.ಅವರಿಗೆ ನಮ್ಮ ಆರಾಧ್ಯಮೂರ್ತಿಯಾದ ಮೂಲರಾಮಚಂದ್ರದೇವರು
ಪೂರ್ಣ ಅನುಗ್ರಹವನ್ನು ದಯಪಾಲಿಸಲೆಂದು ಪ್ರಾರ್ಥಿಸುತ್ತೇವೆ.
-mantralaya mutt
***




No comments:
Post a Comment