Monday 1 April 2019

vishwesha teertharu matha pejavara mutt yati 34 margashira shukla triteeya ವಿಶ್ವೇಶ ತೀರ್ಥರು

December 17, 2020


vidyamanyaru and vishwesha teertharu













under constr.December 5, 2020








 




Sri Viswesha Theertha, Pejavara Mutt Yati 34

ತಪಸ್ವಾಧ್ಯಾಯಶುಶ್ರೂಷಾ - ಕೃಷ್ಣ ಪೂಜಾರತಮ್  ಮುನಿಮ್ /

ವಿಶ್ವೇಶಮ್ ಇಷ್ಟದಂ ವಂದೇ ಪರಿವ್ರಾಟ್ ಚಕ್ರವರ್ತಿನಮ್//

Sri Viswamanya Theertha is the 33rd saint after Sri Adhokshaja Theertha in the guru parampare of Pejawar mutt.
Poorvashrama Name : Sri Venkataramana
Ashrama Guru : Sri Viswamanya Theertha

Ashrama Shishya : Sri Viswaprasanna Theertha
Added on 29 December 2019
Vrundavana : Bangalore - Vidyapeetha BSK III Stage

Aradhana : Margashira shukla triteeya


ಪರಿಚಯ

extract from Wikipedia: Sri Vishvesha Tirtharu (officially known as Śrī Śrī 1008 Śrī Viśveśa-tīrtha  Śrīpādaṅgaḷavaru;  Kannadaಶ್ರೀ ಶ್ರೀ ೧೦೦೮ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು) is the current presiding pontiff (or seer Swamiji) of the Sri Pejavara Adokshaja Matha, one of the Ashta Mathasbelonging to the Dvaita school of philosophy, founded by Sri Madhvacharya. Sri Vishvesha Tirtharu is the 32nd in the lineage of the Pejavara matha, starting from Sri Adhokshaja Tirtharu, who was one of the direct disciples of Sri Madhvacharya. He is also the honorary president of Vishva Tulu Sammelana.He has also established Poornaprajna Vidyapeetha in Bangalore,which has completed over 63 years. Many scholars are trained here on vedanta.

H. H. Sri Sri Vishvesha Tirtha Swamiji
HH Sri Vishvesha Tirtha Swamiji of Pejawar Mutt calls on PM on 22 July 2014, 15:33
Personal
Born
Venkatrama

27 April 1931
Uppinangadi. (ramakunja)
ReligionHinduism
OrderVedanta (Pejawara Matha)
Founder ofPoornaprajna Vidyapeetha
PhilosophyDvaita Vedanta
Religious career
GuruShri Vishvamanya Teertha Swamiji
WebsiteOfficial website
HonorsYathikula Chakravarthy
Shri Vishvesha Tirtharu was born in 1931 at Ramakunja to a Shivalli Madhwa Brahmin family and his pre-sannyasa name was Venkatrama. He was ordained into Sanyasa at the young age of 8 years in 1938. His vidya guru is Shri Vidyamanya Tirtharu of Shri Bhandarkeri Math, and Shri Palimaru Math also. He has appointed Shri Vishwaprasanna Tirtha, as his successor sanyasi pontiff of Shri Pejawar Math.


******
Last Chaturmasa in Mysuru by pejavarashree
15 Sep 2019

***********
participating in TALAMADDALE in Edeneru Village in 1995



ತಪಸ್ವಾಧ್ಯಾಯಶುಶ್ರೂಷಾ - ಕೃಷ್ಣ ಪೂಜಾರತಮ್  ಮುನಿಮ್ /

ವಿಶ್ವೇಶಮ್ ಇಷ್ಟದಂ ವಂದೇ ಪರಿವ್ರಾಟ್ ಚಕ್ರವರ್ತಿನಮ್//


ನಾವು ಕಂಡ ಚೇತನರು, ಮಹಾನ್ ಭಕ್ತರು, ಸಮಾಜೋದ್ಧಾರಕ್ಕಾಗಿಯೇ ಜೀವನವನ್ನು ಅರ್ಪಿಸಿದವರು, ನಿರಂತರ ಶ್ರೀಕೃಷ್ಣ ಪಾದಾರಾಧಕರು, ಹಸನ್ಮುಖರು, ಜ್ಞಾನಿಕುಲತಿಲಕರು, ಪದ್ಮವಿಭೂಷಣರು, ಅಯೋಧ್ಯೆಯಲ್ಲಿ ರಾಮ ಮಂದಿರ ಬರಲು ತಮ್ಮ ಪರವಾದ ಕರ್ತವ್ಯವವನ್ನು ನಿರ್ವಹಿಸಿದವರು, ಐದು ಪರ್ಯಾಯಗಳ ಪರ್ಯಂತ ಉಡುಪಿಯ ಕಂದನ ಪೂಜೆ ಮಾಡಿದವರು, ಪರಮತಸಹನಮಾಡಿದವರು, ಆದ್ಯರು, ಯತಿಕುಲಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಗುರುಗಳ ಮೊದಲ ಆರಾಧನಾ ಮಹೋತ್ಸವ ಇಂದು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ. ಯಾರೆಲ್ಲಾ ದರ್ಶನ ಮಾಡಿ ಬರ್ತಾರೆಯೋ ನಮ್ಮದೂ ಒಂದು ನಮಸ್ಕಾರ ಹಾಕಿ ದಯವಿಟ್ಟು.. 

ಶ್ರೀ ಮಹಾನ್ ಯತಿಗಳಾದ ಶ್ರೀ ಕಂಬಾಲೂರು ರಾಮಚಂದ್ರ ತೀರ್ಥರ ಅನುಗ್ರಹದ ಜೊತೆಗೆ ಶ್ರೀ ವಿಶ್ವೇಶತೀರ್ಥ ಗುರುಗಳ ,ಅಂತರ್ಗತ ಪರಮಾತ್ಮನ ಅನುಗ್ರಹ ಸದಾ ಇರಲಿ ಎಂದು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ ....

-Smt. Padma Sirish

ನಾದನೀರಾಜನದಿಂ ದಾಸಸುರಭಿ 

***


16 December 2020  · 

" ಶ್ರೀ ವಿಶ್ವೇಶ - 1 "

" ಪ್ರಾತಃ ಸ್ಮರಣೀಯ ಪರಮಪೂಜ್ಯ ಪದ್ಮವಿಭೂಷಣ - ಡಾ ।। ಶ್ರೀ ವಿಶ್ವೇಶ ತೀರ್ಥರ ಸ್ಮರಣೆ  "

ಆಚಾರ್ಯ ನಾಗರಾಜು ಹಾವೇರಿ " ವೆಂಕಟನಾಥ " ಮುದ್ರಿಕೆಯಲ್ಲಿ... 

ವಿಶ್ವ ಮಾನ್ಯರೂ - ಶ್ರೀ ವಿಶ್ವೇಶ ತೀರ್ಥರು ।

ವಿಶ್ವ ವಂದ್ಯರೂ - ಶ್ರೀ ವಿಶ್ವೇಶ ತೀರ್ಥರು ।

ವಿಶ್ವ ಗುರು ಮಧ್ವರ ಸಾಮ್ರಾಜ್ಯದಿ ಶೋಭಿಪ ।

ವಿಶ್ವ ನಾಮಕ ವೆಂಕಟನಾಥಗೆ ಅತಿ ಪ್ರಿಯರು ।।

" ಪರಮಪೂಜ್ಯ ಶ್ರೀ ವಿಶ್ವೇಶ ತೀರ್ಥರ ಸಂಕ್ಷಿಪ್ತ ಮಾಹಿತಿ "

" ಹೆಸರು "

ಶ್ರೀ ವೆಂಕಟರಮಣಾ ಚಾರ್ಯ 

" ತಂದೆ "

ಶ್ರೀ ನಾರಾಯಣಾಚಾರ್ಯ 

" ತಾಯಿ "

ಸಾಧ್ವೀ ಕಮಲಮ್ಮ 

ಜನನ : 27.04.1931

" ಸಂನ್ಯಾಸ "

 ಕ್ರಿ ಶ 1938ರಲ್ಲಿ - ಶ್ರೀ ವ್ಯಾಸರಾಜ ಗುರುಸಾರ್ವಭೌಮರಿಂದ ಪ್ರತಿಷ್ಠಿತವಾದ - ಜೀವೋತ್ತಮರಾದ ಶ್ರೀ ಯಂತ್ರೋದ್ಧಾರಕ ಮುಖ್ಯಪ್ರಾಣದೇವರ ಪರಮ ಪವಿತ್ರವಾದ ಸನ್ನಿಧಾನದಲ್ಲಿ ಶ್ರೀ ವಿಶ್ವಮಾನ್ಯ ತೀರ್ಥರಿಂದ ಆಶ್ರಮ ಪ್ರದಾನ. 

" ಆಶ್ರಮ ನಾಮ "

ಶ್ರೀ ವಿಶ್ವೇಶ ತೀರ್ಥರು 

" ಆಶ್ರಮ ಶಿಷ್ಯರು "

ಶ್ರೀ ವಿಶ್ವ ಪ್ರಸನ್ನ ತೀರ್ಥರು 

" ವೇದಾಂತ ಸಾಮ್ರಾಜ್ಯಾಧಿಕಾರ " 

ಕ್ರಿ ಶ 1938 - 2019 

" ವೃಂದಾವನ ಪ್ರವೇಶ "

ದಿನಾಂಕ : 29.12.2019 ಪುಷ್ಯ ಶುದ್ಧ ತೃತೀಯಾ ಭಾನುವಾರ

" ದ್ವೈತ ವೇದಾಂತ ಕೋವಿದ "

ಶ್ರೀ ಭಂಡಾರಕೇರಿ ಮಠದ ಪ್ರಾತಃ ಸ್ಮರಣೀಯ ಶ್ರೀ ವಿದ್ಯಾಮಾನ್ಯ ತೀರ್ಥರಲ್ಲಿ 12 ವರ್ಷ ಅಧ್ಯಯನ ಮಾಡಿ ನ್ಯಾಯ ವೇದಾಂತಾದಿ ಶಾಸ್ತ್ರಗಳಲ್ಲಿ ಅನ್ಯಾದೃಶವಾದ ಪಾಂಡಿತ್ಯ, ಪ್ರಭುತ್ವ, ಪ್ರವಚನ ಪಟುತ್ವ, ವಾಕ್ಯಾರ್ಥ ಪ್ರಾವೀಣ್ಯತೆ ಗಳ ನ್ನೂ ಪಡೆದ ಶ್ರೀ ವಿಶ್ವೇಶ ತೀರ್ಥರು ಇಂದಿನ ಮಾಧ್ವ ಸಮಾಜದ ಉದ್ಧಾರಕರು ಆಗಿದ್ದಾರೆಂದರೆ ಅತಿಶಯೋಕ್ತಿಯಲ್ಲ.

ಅವರ ಕಾರ್ಯ ಬಹು ಮುಖ.

ಅವರ ಜೀವನ ಅನಂತ ಮುಖ.

ಅವರ ದೃಷ್ಟಿ ವಿಶ್ವತೋ ಮುಖ.

ಸಮಾಜದೆಡೆಗೆ ಸರ್ವಾದಪಿ ಕರುಣೋನ್ಮುಖ.

ಶ್ರೀ ವಿದ್ಯಾಮಾನ್ಯ ತೀರ್ಥರ ವೇದಾಂತ ಗರಡಿಯಿಂದ ತಲೆಯಲ್ಲಿ ವೇದ ಶಾಸ್ತ್ರ ವಿದ್ಯಾ ಭಾರವನ್ನು ಹೊತ್ತು ಹೊರ ಬಂದ ಎಳೆವರಯದ ಶ್ರೀ ಶ್ರೀಗಳವರಿಗೆ ಸಮಾಜದ ವಿಕಟ ಚಿತ್ರವು ಕಣ್ಣೆದುರಿಗೆ ನಿಂತಿತು.

" ಸಮಾಜೋದ್ಧಾರ "

ಒಂದು ಕಡೆ ಆಂಗ್ಲ ವಿದ್ಯಾ ಪ್ರಭಾವದಿಂದ ಜಡವಾದ, ನಾಸ್ತಿಕವಾದ, ಭೌತವಾದದ ಕಡೆಗೆ ಸೇಳೆಯಲ್ಪಟ್ಟು ಆಚಾರ ವಿಚಾರಗಳನ್ನು ಬಿಟ್ಟು ಶುದ್ಧ ನಾಸ್ತಿಕ ಆಗುತ್ತಿರುವ ಬ್ರಾಹ್ಮಣ ಸಮಾಜದ ಶೋಚನೀಯ ಪರಿಸ್ಥಿತಿ.

ಇನ್ನೊಂದು ಕಡೆ ಸಂಸ್ಕೃತವನ್ನು ಓದಿ ಪ್ರೋತ್ಸಾಹ ಇಲ್ಲದೇ, ಉಪ ಜೀವನಕ್ಕೆ ದಿಕ್ಕಿಲ್ಲದೆ, ದಾರಿದ್ರ್ಯದಿಂದ ದೀನ ದೂನರಾಗಿ, ಶಾಸ್ತ್ರ ಓಡಿದ್ದಕ್ಕಾಗಿ ಪಶ್ಚಾತ್ತಾಪ ಪಡುತ್ತಿರುವ ಪಂಡಿತ ವರ್ಗ ಇನ್ನೊಂದು ಕಡೆಗೆ.

ಆರ್ಥಿಕ ಮುಗ್ಗಟ್ಟಿನ ಲ್ಲಿ ಸಿಲುಕಿ ಪೀಠಾಧಿಪತಿಗಳ ಮಾರ್ಗದರ್ಶನ ಇಲ್ಲದೇ ಗುರು ಮಠಗಳ ಕಡೆಗೆ ಸಾಶಂಕ ದೃಷ್ಟಿಯಿಂದ ನೋಡುವ ಸಮಾಜದ ಅಕರ್ಮಣ್ಯ ಅವಸ್ಥೆ ಇನ್ನೊಂದು ಕಡೆಗೆ.

ಹೀಗೆ ದೃಷ್ಟಿ ಹರಿಸಿದತ್ತೆಲ್ಲ ಕಡೆಗೆ ಸಮಾಜದ ಪುನರುತ್ಥಾನ.

ಸಿದ್ಧಾಂತದ ಪ್ರಸಾರ.

ಬ್ರಾಹ್ಮಣ ಜಾತಿಯ ಪುನಃ ಸಂಘಟನೆ.

ನಾಸ್ತಿಕ್ಯವಾದ ನಿರಾಕರಣ ಪೂರ್ವಕವಾಗಿ ಆಸ್ತಿಕ್ಯದೆಡೆಗೆ ಜನರ ಸಮಾಕರ್ಷಣೆ.

ಗುರು ಶಿಷ್ಯರ ನಡುವೆ ಮಧುರ ಸಂಬಂಧ ಸ್ಥಾಪನೆ.

ಪಂಡಿತ ಪೋಷಣೆ ಮೊದಲಾದ ಅನೇಕ ಅವಶ್ಯಕ ಕಾರ್ಯಗಳು ಕೈಮಾಡಿ ಕರೆಯುತ್ತಲಿದ್ದವು. 

ಆಚಾರ್ಯ ನಾಗರಾಜು ಹಾವೇರಿ " ವೆಂಕಟನಾಥ " ಮುದ್ರಿಕೆಯಲ್ಲಿ... 

ಶ್ರೀ ವಿಶ್ವೇಶ ತೀರ್ಥ ಸ್ತುತಿ......

ವೇದವ್ಯಾಸ ಮಧ್ವ ಪ್ರಿಯಂ

ನಮಃ ಕಾರುಣ್ಯ ವಾರಿಧೇ ।

ವಿಶ್ವಮಾನ್ಯ ಸುತಂ ವಂದೇ

ವಿಶ್ವೇಶಾರ್ಯ ಗುರುಂ ಭಜೇ ।।

***

" ಶ್ರೀ ವಿಶ್ವೇಶ - 2 "

ವಿಶ್ವ ನಾಮಕ ವಿಶ್ವಂಭರ ಪ್ರಿಯ ।

ವಿಶ್ವ ಮಯ ಸದನಕೆ ಪೊರಟರು ।

ವಿಶ್ವ ಜಾಗರ ವೆಂಕಟನಾಥನ ಸೇವಿಸಲು ।

ವಿಶ್ವೇಶ ತೀರ್ಥರು ಮುಕ್ತಿಪಥದಿ ನಡೆದರು  ।।

ಓರ್ವ ದೈವೀ ಪುರುಷನ ಮಾಂತ್ರಿಕ ಹಸ್ತ ಸ್ಪರ್ಶಕ್ಕಾಗಿ ನೂರಾರು ಕೆಲಸಗಳು ಕಾದುಕೊಂಡು ಕುಳಿತಿದ್ದವು. 

ಜೀವನದ ವಸಂತ ಮಾಸದಲ್ಲಿ ಕಾಲಿಡುತ್ತಿರುವ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಎದುರು ಶ್ರೀ ಕೃಷ್ಣನ ಪರ್ಯಾಯ ಪೀಠವೂ ಇವರ ಆರೋಹಣಕ್ಕಾಗಿ ನಿರೀಕ್ಷಿಸುತ್ತಲಿತ್ತು. 

ಶುರುವಾಯಿತು ಆ ದಿಶೆಯಲ್ಲಿ ಕಾರ್ಯ. 

ಅಖಿಲ ಭಾರತ ಮಾಧ್ವ ಮಹಾ ಮಂಡಳವು ಪ್ರಾರಂಭವಾಯಿತು. 

ಪ್ರಾಚೀನ ಗುರುಕುಲ ಪದ್ಧತಿಯಿಂದ ದಿಗ್ಗಜ ಪಂಡಿತರನ್ನು ಸಿದ್ಧಪಡಿಸಲಿಕ್ಕಾಗಿ " ಪೂರ್ಣಪ್ರಜ್ಞ ವಿದ್ಯಾ ನಿಲಯ " ಕಾರ್ಯ ಪ್ರವೃತ್ತವಾಯಿತು. 

ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಮಹಾ ಪ್ರಯತ್ನಗಳ ಫಲವಾಗಿ ಊರೂರಿಗೆ ಮಾಧ್ವ ವಿದ್ಯಾರ್ಥಿ ನಿಲಯಗಳು ತಲೆ ಎತ್ತಿದವು. 

ಒಂದಲ್ಲದಂತೆ ಮೂರು ಭಾಷೆಗಳಲ್ಲಿ " ತತ್ತ್ವವಾದ " ವೆಂಬ ಮಾಸ ಪತ್ರಿಕೆಯು ಸಿದ್ಧಾಂತ ಪ್ರಸಾರದ ಕಾರ್ಯವನ್ನು ಭರದಿಂದ ನಡೆಸಿತು. 

ಪ್ರತಿವರ್ಷವೂ ಜ್ಞಾನಸತ್ರ, ಶಿಬಿರ, ವಿದ್ವದ್ಗೋಷ್ಠಿ, ತತ್ತ್ವಜ್ಞಾನ ಸಮ್ಮೇಳನ, ವಿದ್ವತ್ಸಭಾ ಮುಂತಾದವುಗಳ ಮುಖಾಂತರ ಶ್ರೀಮದಾಚಾರ್ಯರ ಸಂದೇಶವು ಮನೆ ಮನೆಗೆ ಮುಟ್ಟುವಂತಾಯಿತು. 

ಸಂಸ್ಕೃತ ಪಂಡಿತರಿಗೂ, ಸಾಮಾನ್ಯರಿಗೂ ಸ್ನೇಹ ಏರ್ಪಟ್ಟಿತು. 

ಪ್ರತಿ ಪ್ರಾಂತದಲ್ಲಿಯೂ ಆಂಗ್ಲ ಭಾಷೆ ಓದುತ್ತಲಿರುವ ವಿದ್ಯಾರ್ಥಿಗಳಿಗೆ ಮಧ್ವ ಮತದಲ್ಲಿ ಆಸಕ್ತಿಯನ್ನು ಹುಟ್ಟಿಸಿ ಸಾಲ ರೂಪ ಶಿಷ್ಯ ವೃತ್ತಿಯನ್ನು ಕೊಟ್ಟು ಪ್ರೋತ್ಸಾಹಿಸಲಾಯಿತು. 

ಹೀಗೆ ವಿದ್ಯಾರ್ಥಿ ನಿಲಯ ಮತ್ತು ಶಿಷ್ಯ ವೃತ್ತಿಗಳಿಂದ ಮತನಿಷ್ಠಕಾದ ಹೊಸ ಮಾಧ್ವ ಪೀಳಿಗೆಯೇ ನಿರ್ಮಾಣಗೊಂಡಿತು. 

ಅತ್ತ ವಿದ್ಯಾಪೀಠದಲ್ಲಿ ಪಂಡಿತರ ಪಡೆ ನಿರ್ಮಾಣವಾಗುತ್ತಾ ನಡೆಯಿತು. 

ಇತ್ತ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ವರ್ಚಸ್ಸಿನಿಂದ ಸ್ವಾಮಿ ಸ್ವಾಮಿಗಳವರಲ್ಲಿಯೂ, ಸಾಮಾಜಿಕರಲ್ಲೊಯೂ, ಎಲ್ಲಾ ಮಾಧ್ವರಲ್ಲಿಯೂ ಸ್ನೇಹಮಯವಾದ ಸೌಹಾರ್ದವು ಕುದುರಲು ಅನುಕೂಲವಾಯಿತು. 

ಇವಲ್ಲದೆ ಗ್ರಂಥ ಸಂಶೋಧನೆ, ಗ್ರಂಥ ಭಾಂಡಾರ, ಗ್ರಂಥ ಪ್ರಕಾಶನ, ಪ್ರಾಚೀನ ಗ್ರಂಥ ಮುದ್ರಣ, ಗೋ ರಕ್ಷಣೆ, ವಿಶ್ವ ಹಿಂದೂ ಪರಿಷನ್ಮಾರ್ಗದರ್ಶನ, ಶ್ರೀ ಕೃಷ್ಣ ಸೇವಾಶ್ರಮ ಸ್ಥಾಪನಾ ಮುಂತಾಗಿ ವಿವಿಧ ಬಗೆಗಳಿಂದ ಸಾಮಾಜಿಕ, ಸಾಂಸ್ಕೃತಿಕ, ಸೈದ್ಧಾಂತಿಕ ಕಾರ್ಯಗಳು ಮುಂದುವರೆಯುತ್ತಲೇ ಇವೆ. 

ಅನೇಕ ಬಾರಿ ಬದರೀ, ಕಾಶೀ, ಕೊಚಿನ್, ಕುಂಭಕೋಣ, ರಾಮೇಶ್ವರದ ವರೆಗೆ ( ಯಾವತ್ ಭಾರತ ) ಸಂಚರಿಸಿ ಪಂಡಿತರ ಜೊತೆಗೆ ವಾಕ್ಯಾರ್ಥ ಮಾಡಿ ಪರವಾದಿಗಳನ್ನು ನಿಗ್ರಹಿಸಿದ್ದಾರೆ. 

ದ್ವೈತ ದುಂದುಭಿಯನ್ನು ಮೊಳಗಿಸಿದ್ದಾರೆ. 

ಮಧ್ವ ಮತವನ್ನು ಪ್ರಸಾರ ಮಾಡಿದ್ದಾರೆ. 

ಗ್ರಂಥ ರಚನೆ ಮಾಡಿದ್ದಾರೆ. 

ಶ್ರೀ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರಂತೆ ಸುಧಾ ಪಾಠ ಪ್ರಾರಂಭ ಪೂರ್ವಕವಾಗಿ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಶ್ರೀ ಕೃಷ್ಣನ ಪ್ರಥಮ ಪರ್ಯಾಯದ ಕೈಂಕರ್ಯವನ್ನು ಅಂದು ಅಲ್ಲಿ ಉಡುಪಿಯ ಶ್ರೀ ಕೃಷ್ಣನ ಪರಮ ಪವಿತ್ರವಾದ ಕ್ಷೇತ್ರದಲ್ಲಿ ಸೇರಿದ ಸಾವಿರಾರು ಪಂಡಿತ - ಪಾಮರ - ಪರಿವ್ರಾಜಕ - ಲೌಕಿಕ -ವೈದಿಕ - ಯೋಗಿ - ಯಾಗಿ - ತ್ಯಾಗಿ - ವಿರಾಗಿ ಜನಸ್ತೋಮದ ಎದುರು ಸಮಾಜ ಸೇವೆಯ ವ್ರತವನ್ನು ಹರಿ ಗುರುಗಳೆದುರು ಸ್ವೀಕರಿಸಿ ಕೊನೆಯ ದಿನದ ವರೆಗೂ ಸತ್ಕರ್ಮಾಚರಣೆಯೊಂದಿಗೆ ತತ್ತ್ವಜ್ಞಾನ ಪ್ರಸಾರ - ಸಮಾಜ ಸುಧಾರಣೆ ಕಾರ್ಯದಲ್ಲಿಯೇ ಇದ್ದು...

ದಿನಾಂಕ : 29.12.2019 ಪುಷ್ಯ ಶುದ್ಧ ತೃತೀಯಾ ಭಾನುವಾರದಂದು ಶ್ರೀ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀ ಕೃಷ್ಣೋsಭಿನ್ನ ಶ್ರೀ ಹರಿಯ ಪಾದಾರವಿಂದ ಸೇರಿದರು!!

ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ ..... 

ವಿದ್ಯಾಮಾನ್ಯರಲಿ -

ಶಿಷ್ಯತ್ವ ವಹಿಸಿ ।

ವೇದವ್ಯಾಸರ -

ಮಾತನು ಆಲಿಸಿ ।

ಮೋದತೀರ್ಥ 

ಸಿದ್ಧಾಂತವನು 

ಪ್ರಸಾರಗೈದು ।।

ಯಾದವರಾಯನ 

ಪದಾರ್ಚನೆ ಮಾಡುತಾ ।

ಮುದದಿ ವೇಂಕಟನಾಥನ 

ಕಿಂಕರನೆನಿಸಿದ । 

ಸದಮಲ ವಿಶ್ವೇಶರೇ 

ವಿಶ್ವಪ್ರಸನ್ನರ ಪಿತನು ।।

by ಆಚಾರ್ಯ ನಾಗರಾಜು ಹಾವೇರಿ

ಗುರು ವಿಜಯ ಪ್ರತಿಷ್ಠಾನ

****


   ಮಾರ್ಗಶಿರ ಶುಕ್ಲ ಚತುರ್ಥಿ
ತಪಸ್ವಾಧ್ಯಾಯಶುಶ್ರೂಷಾ
ಕೃಷ್ಣಪೂಜಾರತಂ ಮುನಿಮ್/
ವಿಶ್ವೇಶಮಿಷ್ಟದಂ ವಂದೇ
ಪರಿವ್ರಾಟ್ ಚಕ್ರವರ್ತಿನಮ್//

ಶ್ರೀ ವಿಶ್ವೇಶತೀರ್ಥ ಯತೀಂದ್ರಶ್ರೀಗಳು ನಮ್ಮನ್ನಗಲಿದಾಗ ಶ್ರೀಗಳ ಅದ್ಭುತವಾದ ಸ್ವಭಾವ, ಕಾರ್ಯಗಳ ಕುರಿತು  ಶ್ರೀ ಡಾ. ವಿಜಯೇಂದ್ರ ದೇಶಾಯ್  ಅವರ ಅದ್ಭುತವಾದ ಲೇಖನ ಓದೋಣ ಬನ್ನಿ...

👇🏽👇🏽👇🏽👇🏽👇🏽👇🏽👇🏽


ಪಂಚ ವೈಭವದ ಪೇಜಾವರ ಶ್ರೀ ಗಳು --


ಕಣ್ಮರೆಯಾಗಿದ್ದಾರೆ. ಆದರೆ

ಮನದಿಂದ ಮರೆಯಾಗಿಲ್ಲ. 

ಅವರು ನಮಗೆ ಎಂದೂ ವರ್ತಮಾನವೇ.

ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರ ಚರಣಕಮಲಗಳಿಗೆ ಸಾಷ್ಟಾಂಗ ನಮಸ್ಕರಿಸುತ್ತೇನೆ.

ಒಂದು ವರ್ಷ ತಿಳಿಯದೇ ಕಳೆದು ಹೋಯಿತು.

ಅವರ ಸ್ಮರಣೆ ನಿತ್ಯ ಹಸಿರು.

ಇಂದು ಮತ್ತೆ ಮತ್ತೆ ಅವರನ್ನು ಸ್ಮರಿಸ ಬೇಕು.

ಅವರಾದರೋ ಚಿರಪರಿಚಿತರು. ಎಲ್ಲರಿಗೂ.

ಮತ್ತೆ ಯಾಕೆ ಸ್ಮರಣೆ?

ಒಂದು ಬಾರಿ ಸ್ಮರಣೆ ಸಾಲದೇ?

ಅವರ ಸ್ಮರಣೆ ನಮ್ಮನ್ನು ಪಾವನೀಕರಿಸುತ್ತದೆ.

ನಮ್ಮ ಅಧ್ಯಾತ್ಮಿಕ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ.

ನಮ್ಮನ್ನು ಉದ್ಧರಿಸುತ್ತದೆ.

ಶ್ರೀವಾದಿರಾಜ ಶ್ರೀಪಾದಂಗಳ ನಂತರ ಪಂಚಪರ್ಯಾಯ ಮಾಡಿದವರು. 

ಮಿಂಚಿನ ದಾಖಲೆ ನಿರ್ಮಿಸಿದವರು ಅವರು.

ಈ ಅದ್ವಿತೀಯ ಪಂಚಪರ್ಯಾಯಸ್ಥರನ್ನು 

'ಪಂಚ ವೈಭವ'ಗಳ ಮಧ್ಯೆ ನೆನಪಿಸಿ ಕೊಳ್ಳುತ್ತೇನೆ. 

ಏನದು ಪಂಚ ವೈಭವಗಳು? ---

ಶ್ರೀಗಳ

1) ಜ್ಞಾನ ವೈಭವ -

'ಜ್ಞಾನೇವೈವ ಪರಂ ಪದಂ'

ಎಂದು ನಂಬಿದವರು.

'ನಹಿ ಜ್ಞಾನೇನ ಸದೃಶಂ'

ಎಂದು ನಡೆದವರು.

ಎಲ್ಲರಿಗೂ ಅಧ್ಯಾತ್ಮಿಕ ಜ್ಞಾನ ದೊರೆಯ ಬೇಕು. ದೇವರ ಮಹಿಮೆ ತಿಳಿಯ ಬೇಕು.

- ವಿದ್ಯಾಪೀಠ ಸ್ಥಪನೆ

ಇಂದು ಬೆಂಗಳೂರಿನಲ್ಲಿ, 

ಅಂದು ಸ್ವಾಮೀಜಿ ಸ್ಥಾಪಿಸಿದ 

ಪೂರ್ಣಪ್ರಜ್ಣ ವಿದ್ಯಾಪೀಠ

ಅಧ್ಯಾತ್ಮಿಕ ವಿಶ್ವವಿದ್ಯಾಲಯವಾಗಿ ಮೆರೆಯುತ್ತಿದೆ.

ವಿದ್ಯರ್ಥಿಗಳಿಗೆ ಉಚಿತ ಅಶನ,ವಸನ,ವಸತಿ.

ಮತ್ತೆ ಸಮರ್ಥ ಪಂಡಿತ, ಪ್ರಾಧ್ಯಾಪಕರಿಂದ, ಶಾಸ್ತ್ರ, ವೈದಿಕ, ಸರ್ವಮೂಲ ವಿದ್ಯಾಭ್ಯಾಸ.

ಅವರನ್ನು ಪಂಡಿತರನ್ನಾಗಿ ಮಾಡುವದು. ಸ್ವಾವಲಂಬಿಗಳನ್ನಾಗಿಸುವದು.

ದೇಶದ ಉದ್ದಗಲಕ್ಕೂ ಮಠ, ವಿದ್ಯಾಪೀಠಗಳಿಗೆ ಕಳುಹಿಸುವದು. 

ಅಲ್ಲಿಯ ಜನರಿಗೆ ಮತ್ತೆ ಪಾಠ ಪ್ರವಚಚನ. ವಿದ್ಯಾ ಪ್ರಸಾರ. ಲೌಕಿಕ ಅಲೌಕಿಕ ಎರಡೂ ಪ್ರಯೋಜನ.

- ವಿದ್ಯಾರ್ಥಿ ನಿಲಯ - 

ಕಲಿಯುವವರಿಗೆ, ತಮ್ಮ ಧರ್ಮ ಕಾಯ್ದುಕೊಂಡು ವಿದ್ಯಾಭ್ಯಾಸ ಮಾಡಲು

ಉಚಿತ ವಿದ್ಯಾರ್ಥಿ ನಿಲಯಗಳು ಪ್ರಲ್ಹಾದ ವಿದ್ಯಾರ್ಥಿ ನಿಲಯದಂತೆ.

-‌ ಮಾಧ್ವ ಮಹಾಮಂಡಲದಂಥ ಸಂಘಗಳು

ಮಧ್ವ ಸಿದ್ಧಾಂತ ಅನುಸರಿಸುವದು, 

ಎತ್ತಿ ಹಿಡಿಯುವದು,

ಮರೆತವರಿಗೆ ನೆನಪಿಸುವದು

ಬಯಸುವರಿಗೆ ಕಲಿಸುವದು 

ಇದಕ್ಕಾಗಿ ಸಂಘಟನೆ

ಗ್ರಂಥ ಪ್ರಕಾಶನ -

ಗ್ರಂಥಗಳು ಸಂಸ್ಕ್ರತದಲ್ಲಿ. 

ಕಠಿಣ ಭಾಷೆ.

ಕನ್ನಡ ಅನುವಾದ ಅತಿ ಅವಶ್ಯವಾಗಿತ್ತು.

ವಿಶ್ವೇಶತೀರ್ಥರ ಶ್ರೇಷ್ಠ ದೂರದೃಷ್ಟಿ.

ದಶಕಗಳ ಹಿಂದೆಯೇ ಸಂಕಲ್ಪ.

ಸರ್ವಮೂಲ ಸರ್ವಸ್ವ ಕನ್ನಡದಲ್ಲಿ ಅನುವಾದಿಸುವದು.

ಹರಿ,ವಾಯು,ಗುರುಗಳ ಅನುಗ್ರಹ.

ಅವರ ಜೀವಿತಾವಧಿಯಲ್ಲೇ ಸತ್ ಸಂಕಲ್ಪ ಸಂಪೂರ್ಣ.  

ಕನ್ನಡದಲ್ಲಿ ಸರ್ವ  ಗ್ರಂಥ ಪ್ರಕಾಶನ.

ಸುಲುಭದ ಬೆಲೆ.

ಸಾವಿರ ಸಾವಿರ ಜನರಿಗೆ ಅದರ ಪ್ರಯೋಜನ.

ಗ್ರಂಥ ರಚನೆ -

ಸ್ವಾಮೀಜಿ ಶ್ರೇಷ್ಠ ಅಧ್ಯಾತ್ಮಿಕ ಸಾಹಿತಿಯೂ ಹೌದು.

ಅವರಿಂದ ರಚಿತ

ಶ್ರೀ ಮನ್ಯಾಯ ಸುಧಾ ಸಾರಾಂಶ ಭಾಗ ೧ ಮತ್ತು ೨ ಚಿಕ್ಕ ಹೊತ್ತಿಗೆಗಳು.

ಸುಂದರ ಸುಲಲಿತ ಭಾಷೆ. ತಿಳಿಗನ್ನಡ.

ಮನಮುಟ್ಟುವ ದೃಷ್ಟಾಂತಗಳು.

ದೊಡ್ಡ ಆನೆಯನ್ನು ಚಿಕ್ಕ ಕನ್ನಡಿಯಲ್ಲಿ ತೋರಿಸುವಂತೆ.

ಬೃಹನ್ ನ್ಯಾಯ ಸುಧಾ ಸಾರಾಂಶ ಚಿಕ್ಕ ಪುಸ್ತಕ ರೂಪ. ಇದು ಅವರ ಅದ್ಭುತ ಸಾಮರ್ಥ್ಯ.

ರಚಿಸಿದ್ದು ಹೇಗೆ? 

ವಾಹನಗಳಲ್ಲಿ, ವಿಮಾನದಲ್ಲಿ ಪ್ರಯಾಣಿಸುವಾಗ. ಸಮಯ ವ್ಯರ್ಥವಾಗ ಬಾರದು.ಆವಾಗಲೇ ರಚಿಸಿದ್ದು. 

ವೇದವ್ಯಾಸರ ಸೇವೆ ಮಾಡಿದ್ದು.

ಸಮಯ ಸದುಪಯೋಗವಾಗಿದ್ದು.

ಮಾಸ ಪತ್ರಿಕೆಗಳು -

ತತ್ವ ವಾದಗಳಂಥ ಮಾಸಿಕಗಳು.

ಚಿಕ್ಕ ಲೇಖನ. ಚೊಕ್ಕ ಜ್ಞಾನ ಪ್ರಸಾದ

ಧರ್ಮದ ಅರಿವು.


2) ಸೇವಾ ವೈಭವ --

ಸಾಮಾಜಿಕ ಸೇವೆ ದೇವರಿಗೆ ಕೊಡುವ ಕರ ಎನ್ನುತ್ತಿದ್ದರು.

-  ಎಲ್ಲ ಹಿಂದೂಗಳೂ ಒಂದಾಗ ಬೇಕು.

ವಿಪ್ರರು ಒಂದಾಗ ಬೇಕು. ಎಲ್ಲ ವರ್ಗಗಳೂ, ಸಂಖ್ಯಾತರು, ಅಲ್ಪಸಂಖ್ಯಾತರು ತಮ್ಮಲ್ಲಿ ಒಕ್ಕಟ್ಟಾಗ ಬೇಕು. ಮತ್ತೆ ಎಲ್ಲ ವರ್ಗಗಳಲ್ಲಿ ಸಾಮೂಹಿಕ ಒಕ್ಕಟ್ಟು ಬೇಕು.

ಪರಸ್ಪರ ಸಹಕಾರ ಬೇಕು. 

ಕೂಡಿ ನಡೆದಾಗ ನಾಡು ಉದ್ಧಾರವಾದೀತು. ದೇಶದ ಉನ್ನತಿ ಆದೀತು. ಇದು ಅವರ ಅಚಲ ನಂಬಿಕೆ.

ಬಡವರಾಗಲಿ, ಬಲ್ಲಿದರಾಗಲಿ.

ಪಂಡಿತರಾಗಲಿ, ಪಾಮರರಾಗಲಿ

ದೀನರಾಗಲಿ ದಲಿತರಾಗಲಿ 

ಬರ, ಪ್ರವಾಹ ಪೀಡೀತರಾಗಲಿ, 

ಇಲ್ಲ ನಕ್ಸಲಪೀಡಿತರಾಗಲಿ 

ಎಲ್ಲೇ ಆಗಲಿ, ಎಲ್ಲಿ ಸಮಸ್ಯೆಯೋ 

ಅಲ್ಲಿ ಪರಿಹಾರಕ್ಕಾಗಿ ಮೊದಲ ಹೆಜ್ಜೆ ಪೇಜಾವರಶ್ರೀಗಳದು.

ತಮ್ಮಿಂದ ಏನೇನು ಸಾಧ್ಯವೋ ಎಲ್ಲವೂ ಅರ್ಪಿತ. ಸಮಸ್ಯೆಗೆ ಪರಿಹಾರ ಖಚಿತ.

ಅದಕ್ಕಾಗಿಯೇ ದೇಶದ ಉದ್ದಗಲಕ್ಕೂ

ಎಡಬಿಡದ ಸಂಚಾರ. 

ಇಂದು ಇಲ್ಲಿ  ನಾಳೆ ದಿಲ್ಲಿ 

ಮರುದಿನ ಉಡುಪಿ.

'ಜನ ಸೇವೆ ಜನಾರ್ದನನ ಸೇವೆ'- ಅವರ ನಂಬಿಕೆ.

-- ಮಠಗಳ ಸ್ಥಾಪನೆ

ತೀರ್ಥಯಾತ್ರಾ, ಕ್ಷೇತ್ರ ಸ್ಥಳಗಳಲ್ಲಿ, ಭಾರತದ ತುಂಬೆಲ್ಲ ಮಠಗಳ ಸ್ಥಾಪನೆ. 

ಯಾತ್ರಿಕರಿಗೆ ವಸತಿ ವ್ಯವಸ್ಥೆ. 

ಬರಿ ಲೌಕಿಕವಾಗಬಾರದು.

ಪಾರಮಾರ್ಥಿಕತೆ ಬೆರೆಯ ಬೇಕು.

ಅಲ್ಲೊಂದು ಸುಂದರ ದೇವಾಲಯ. ಅದರಲ್ಲೊಂದು ಸುಂದರ ಕೃಷ್ಣನ ಮೂರ್ತಿ.

ಅದಕ್ಕೆ ಪೂಜೆ ಪುನಸ್ಕಾರ ವ್ಯವಸ್ಥೆ.‌ 

ಬಂದವರಿಗೆಲ್ಲ ತೀರ್ಥ ಪ್ರಸಾದ.

ಹೀಗೆ ಭಕ್ತರ ಸೇವೆ - ಭಕ್ತವತ್ಸಲನ ಸೇವೆ.


-  ಧನ್ವಂತರಿ ಸೇವೆ --

ಆರೋಗ್ಯ ಧಾಮಗಳು. 

ಉಚಿತ ವೈದ್ಯಕೀಯ ಸೇವೆ. 

ಬಡವರ ಪಾಲಗೆ ಧನ್ವಂತರಿ ಅವರು.

ನಾವು ಬದರಿಗೆ ಹೋಗಿದ್ದೆವು.

ಮೊದಲು ಕಂಡದ್ದು ಒಂದು Mobile clinic.

ಒಂದು ಚಿಕ್ಕ  Ambulance vanನಲ್ಲಿ.

ಶಿಸ್ತು ಬದ್ಧ ಸಿಬ್ಬಂದಿಯಿಂದ ಉಚಿತ ವೈದ್ಯಕೀಯ ಸೇವೆ.

ಇದೆಲ್ಲ 'ಪೇಜಾವರಮಠ' ಫಲಕದ ಅಡಿಯಲ್ಲಿ. ಯಾತ್ರಿಕರಿಗೆ ತೊಂದರೆ ಆಗಬಾರದು.

ದೂರದ, ಎತ್ತರದ, ಶೀತದ,ಪರ್ವತಮಯ 

ಪ್ರದೇಶದಲ್ಲಿ.

ಎಂಥ ದೂರದೃಷ್ಟಿ, ಎಂಥ ಸೇವಾ ನಿಷ್ಠೆ ಪೇಜಾವರಶ್ರೀಗಳದ್ದು!


3)ಯತಿ ವೈಭವ --

ಬಾಲ ಸನ್ಯಾಸ. 

ದಾಖಲೆಯ ದೀರ್ಘ ಯತ್ಯಾಶ್ರಮ. 

ಚ್ಯುತಿ ಇಲ್ಲ. ಅತಿ ನಿಷ್ಠೆ. 

ಯತಿಜೀವನ ಪರಾಕಾಷ್ಠೆ.

ಒಪ್ಪಿದ ವಿರಕ್ತ ಜೀವನ ಪರಿ.

ತಪ್ಪದ ಕಠಿಣ ದಿನಚರಿ.

ಅರುಣೋದಯಕ್ಕೆ ಉತ್ಥಾನ.

ಅಧ್ಯಯನ, ಅಧ್ಯಾಪನ, 

ಸುಧಾದಿ  ಪಾಠ,ಪ್ರವಚನ. 

ಸಂಸ್ಥಾನ ಪೂಜನ.

ನಿಷ್ಠೆಯ ಜಪ,ತಪ,ವೃತ ನಿಯಮನ.

ತೀರ್ಥ ಪ್ರಸಾದ ವಿತರಣ.

ಮಧ್ಯಾನ್ಹ ಹೆಸರಿಗೆ ವಿಶ್ರಾಂತಿ. 

ಸಾರ್ವಜನಿಕರ ದರ್ಶನ. 

ಸಮಸ್ಯೆಗಳ ಶ್ರವಣ. 

ಅವುಗಳಿಗೆ ಪರಿಹರಣ.

ಸಂದರ್ಶಕರು. ಸಮಾಧಾನ.

ಸಂಜೆ ಪ್ರವಚನ.

ಮತ್ತೆ ಅವಿರತ ಕಾರ್ಯಕ್ರಮಗಳು.

ಅನೇಕರಿಗೆ ಯತ್ಯಾಶ್ರಮ ಪ್ರದಾನ.

ನಿಷ್ಠೆ ಇದ್ದವರಿಗೆ ವೈಷ್ಣವ ದೀಕ್ಷೆ  ದಾನ.

ಅಹರ್ನಿಶಿ ನಿರಂತರ ಕಾರ್ಯ ನಿರತರು

ಮಹಾನ್ ಸಾಮರ್ಥ್ಯದ ಶ್ರೀಗಳು ಯತಿಶ್ರೇಷ್ಠರು.


4) ಪರ್ಯಾಯ ವೈಭವ --

ಶ್ರೀ ವಾದಿರಾಜರ ನಂತರ ಪಂಚಪರ್ಯಾಯ, ಪಂಚರೂಪಿ ಪರಮಾತ್ಮನ ಸೇವೆ.

ಮಾಡಿದ ದಾಖಲೆ.

ಪ್ರತಿ ಪರ್ಯಾಯ ವೈಭವಯುತ. 

ಹೀಗೆ ಪಂಚ ಪರ್ಯಾಯ. 

ಆದುದರಿಂದ 

ವೈಭವದ ಪರ್ಯಾಯಗಳ ವೈಭವ.

ಮತ್ತೆ ಪ್ರತಿ ಪರ್ಯಾಯದಲ್ಲಿ ಎಲ್ಲವೂ ವೈಭವ.

ಕೃಷ್ಣನಿಗೆ ಪೂಜೆಯ ವೈಭವ.

ಕೃಷ್ಣ ಮಠಕ್ಕೆ ವಿಶೇಷ ಯೋಜನೆಯ ವೈಭವ.

ಭಕ್ತರಿಗೆ

ಕರ್ಣಂಗಳಿಗೆ ಜ್ಞಾನ ಶ್ರವಣದ ವೈಭವ

ನಾಲಿಗೆಗೆ ನೈವೇದ್ಯದ ಆಹಾರ ವೈಭವ

ನಯನಂಗಳಿಗೆ ಕೃಷ್ಣ ದರ್ಶನದ ವೈಭವ

ವಿವಿಧ ಯತಿಗಳ,ಪಂಡಿತರ ಅನುಗ್ರಹ ವೈಭವ.


5) ಕೀರ್ತಿ ವೈಭವ --

ಕೀರ್ತಿಯ ಬೆನ್ನು ಬಿದ್ದವರಲ್ಲ. 

ಕೀರ್ತಿಯೇ ಅವರ ಬೆನ್ನು ಹತ್ತಿದ್ದು.

ಪೂಜ್ಯ ವಿಶ್ವೇಶತೀರ್ಥರ ಕೀರ್ತಿ ಅಜರಾಮರ.

ದೇಶದ ಉದ್ದಗಲಕ್ಕೂ ವ್ಯಾಪ್ತ. 

ಮಿಕ್ಕಿ ವಿದೇಶಗಳಿಗೂ ವಿಸ್ತ್ರತ.

ಎಲ್ಲ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ.

ಯತಿಗಳಲ್ಲಿ ತಿಲಕಪ್ರಾಯ.

ಭಕ್ತರಲ್ಲಿ ಅಪಾರ ಭಕ್ತ ಸಮೂಹದ ಒಡೆಯ.

ಭಕ್ತಿಯಲ್ಲಿ ಕೃಷ್ಣನಿಗೆ ಅತಿಪ್ರಿಯ ಭಕ್ತ. 

ಇವರ ಪೂಜೆ ಅವನಿಗೆ ಪ್ರಿಯ.

ಅದಕ್ಕಾಗಿಯೇ ಅಲ್ಲವೇ, ಐದು ಪರ್ಯಾಯ ಕೊಟ್ಟು ತನ್ನ ಪೂಜೆ ಕೃಷ್ಣ ಮಾಡಿಸಿ ಕೊಂಡಿದ್ದು!. 

ಪರ್ಯಾಯ ಮುಗಿದೊಡೆ

ತನ್ನೆಡೆ ಕರೆಸಿ ಕೊಂಡಿದ್ದು!

ಮಂತ್ರಿಗಳು, ಮುಖ್ಯ ಮಂತ್ರಿಗಳು, ಪ್ರಧಾನಮಂತ್ರಿಗಳು, ಪಕ್ಷ ನಾಯಕರು, ವಿಪಕ್ಷನಾಯಕರು, ಎಲ್ಲರೂ ಇವರ ಬಳಿಗೇ

ಬಂದಿದ್ದು. 

ಸಮಸ್ಯೆ ಪರಿಹರಿಸಿ ಕೊಂಡಿದ್ದು.

ಅನುಗ್ರಹ ಪಡೆದು ಮರಳಿದ್ದು.

ಪಾಮರರು ಪಂಡಿತರೂ ಎಲ್ಲರಿಗೂ ಇವರ ಮೇಲೆ ಪ್ರೀತಿ, ಗೌರವ.

ಅವರ ಮೇಲೆ ಇವರಿಗೂ ಅತಿ ಜೀವ. ಪಾದಪೂಜೆಗೆ ಬಂದರೆ ಮನೆಯ ಪ್ರತಿ ಸದಸ್ಯನ  ಯೋಗಕ್ಷೇಮ ವಿಚಾರಣೆ. 

ಚಿಕ್ಕ ಮಗುವನ್ನೂ ಬಿಡುತ್ತಿರಲಿಲ್ಲ. 

ಹಣ್ಣು ಕೊಟ್ಟು

ಅನುಗ್ರಹಿಸಿಯೇ ಮುಂದಿನ ಹೆಜ್ಜೆ.

'ಇಂಥ ಸ್ವಾಮಿ ಮತ್ತೊಮ್ಮೆ ಸಿಗುವದಿಲ್ಲ'

ಎಂಥವರ ಬಾಯಲ್ಲೂ ಈ ಮಾತು. 

ಎಲ್ಲರ ಬಾಯಲ್ಲೂ ಇಂಥ ಮಾತೇ.

ಇಂಥ ಖ್ಯಾತಿಯ ಅಂಥ ಕೀರ್ತಿಯ

ಇಂಥ ಸ್ವಾಮಿಗಳ ದರ್ಶನ, ಪಾದ ಸ್ಪರ್ಶನ, ಅನುಗ್ರಹ ದೊರೆತದ್ದೇ ನಮ್ಮ ಭಾಗ್ಯ. 

ಅವರ ಕರುಣೆ. ಕೃಷ್ಣನ ಕೃಪೆ.

ಏನಾದರಾಗಲಿ, 

ಅವರು ಕಣ್ಣ ಮುಂದೆ ಇರಲಿ ಇಲ್ಲದಿರಲಿ, ಇಂಥ ಪಂಚವೈಭವದ 

ಯತಿಕುಲತಿಲಕ ಪೇಜಾವರ 

ಪರಮ ಪೂಜ್ಯ ಶ್ರೀ ವಿಶ್ವೇಸತೀರ್ಥರ ಕೃಪಾದೃಷ್ಟಿ ಸದಾ ನಮ್ಮ ಮೇಲಿರಲಿ.

ಇಂತು ನಮಿಸೋಣ, ಪ್ರಾರ್ಥಿಸೋಣ.

ಈ ಎಲ್ಲ, ಮುಖ್ಯ ಪ್ರಾಣಾಂತರ್ಗತ ಉಡುಪಿ ಶ್ರೀ ಕೃಷ್ಣನಿಗೆ ಸಮರ್ಪಿತ.

ಡಾ.ವಿಜಯೇಂದ್ರ. ದೇಸಾಯಿ.
ಶ್ರೀ ಕೃಷ್ಣಾರ್ಪಣಮಸ್ತು 

***

No comments:

Post a Comment