Friday 30 April 2021

sheshagiri dasa son of vijaya dasa 1720+ bhadrapada shukla bidige ಶೇಷಗಿರಿ ದಾಸ



 bhadrapada shukla bidige 


ಶ್ರೀ ಶೇಷಗಿರಿ ದಾಸರಿಗೆ ಹಯಗ್ರೀವ ವಿಠ್ಠಲ ಎಂದು ಅಂಕಿತ ಉಪದೇಶವನ್ನು ಕೊಟ್ಟವರು ಶ್ರೀ ವಿಜಯಪ್ರಭುಗಳು.

ನಂತರದಲ್ಲಿ ಅವರು ಗೋಪ್ಯವಾಗಿ ಸಾಧನೆ ಯನ್ನು ಮಾಡಿಕೊಳ್ಳುತ್ತಾ ಇದ್ದರು.

ತಮ್ಮ ಮಗನಿಗೆ ಎರಡು ವರ್ಷಗಳ ಕಾಲ ತಮ್ಮ ಆಯುಸ್ಸು ಧಾರೆ ಎರೆದ ಮೇಲೆ ಶಾಲಿವಾಹನ ಶಕೆ ೧೬೭೩ ನೇ ಪ್ರಜೋತ್ಪತ್ತಿ ನಾಮ ಸಂವತ್ಸರದ ಭಾದ್ರಪದ ಮಾಸದ ಶುಕ್ಲ ಪಾಡ್ಯಮಿ ದಿನಕ್ಕೆ ಶ್ರೀರಂಗ ಪಟ್ಟಣಕ್ಕೆ

 ಶ್ರೀ ವಿಜಯಪ್ರಭುಗಳು ತಮ್ಮ ಪರಿವಾರಸಮೇತರಾಗಿ  ಪ್ರಯಾಣ ಬೆಳೆಸಿದರು.

ಅಲ್ಲಿ ಗೌತಮ ಋಷಿಗಳು ತಪಸ್ಸು ಮಾಡಿದ ಸ್ಥಳಕ್ಕೆ ಬಂದರು.ಅಂದು ಶೇಷಗಿರಿ ದಾಸರಿಗೆ ದೇಹಾಲಸ್ಯವಾಯಿತು. ಮರುದಿನ ಬಿದಿಗೆ ಭಾನುವಾರ ದಿನ ಶೇಷಗಿರಿ ದಾಸರು ಶ್ರೀ ಹರಿಯ ಪುರವನ್ನು ಸೇರಿದರು.

ಆಗ ಶ್ರೀ ವಿಜಯಪ್ರಭುಗಳು ತಮ್ಮ ಎದುರಿಗೆ ತಮ್ಮ ಮಗನಾದ ಶೇಷಗಿರಿ ದಾಸರು ಕಾಲವಾದುದನ್ನು ಕಂಡು ಹನ್ನೆರಡು ಪದಗಳನ್ನು ಅಂದರೆ ಕೃತಿಗಳನ್ನು ರಚನೆ ಮಾಡುತ್ತಾರೆ. ನಂತರದಲ್ಲಿ ಮುಂದಿನ ಕಾರ್ಯಕ್ರಮ ಗಳನ್ನು ನೆರವೇರಿಸಿ ಮುಂದೆ ಪ್ರಯಾಣವನ್ನು ಬೆಳೆಸುತ್ತಾರೆ. 

ಶ್ರೀ ವಿಜಯಪ್ರಭುಗಳ ಕಡೆಯಲ್ಲಿ ಅಷ್ಟು ಜ್ಞಾನ ಉಪದೇಶ, ಉಪನಯನ, ಅಂಕಿತ ಮದುವೆ,ಮತ್ತು ಎರಡು ವರುಷದ ಆಯುಸ್ಸು ದಾನವನ್ನು ಪಡೆದುಕೊಂಡು ಮತ್ತು ತಂದೆಯ ಅಪ್ಪಣೆಯಂತೆ ಆ ಎರಡು ವರುಷಗಳ ಕಾಲ ಕ್ಷಣಬಿಡದೆ ಸಾಧನೆಯನ್ನು ಮಾಡಿಕೊಂಡು ಅವರ ಕಣ್ಣಿನ ಎದುರಿಗೆ ದೇಹಯಾತ್ರೆ ಮಾಡಿ ಅವರಿಂದ ಅಂತ್ಯಕರ್ಮಗಳನ್ನು ಮಾಡಿಸಿಕೊಂಡ ಶ್ರೀ ಶೇಷಗಿರಿ ದಾಸರಂತಹ ಸುಜೀವಿ ನಿಜಕ್ಕೂ ಸಾಮಾನ್ಯ ಜೀವಿಯಲ್ಲ..

ಇಂತಹ ವರ ಸ್ಮರಣೆ ನಮ್ಮ ಜೀವನ ಧನ್ಯ.

ಬೆಳಿಗ್ಗೆ ಪೋಸ್ಟ ಮಾಡಿದ ಶ್ರೀ ಹಯಗ್ರೀವ ವಿಠ್ಠಲ ಅಂಕಿತ ಶ್ರೀ ಶೇಷಗಿರಿ ದಾಸರ ಜೀವನ ಚರಿತ್ರೆಯನ್ನು ಅವರ ಅಂತರ್ಯಾಮಿಯಾದ ಶ್ರೀ ಶೇಷಗಿರಿ ವಾಸನ ಪಾದಕ್ಕೆ ಸಮರ್ಪಣೆ

- prasadacharya

***

ಶ್ರೀ ವಿಜಯದಾಸರ ಮಕ್ಕಳಾದ ಶ್ರೀ ಶೇಷಗಿರಿದಾಸರ ಆರಾಧನಾ ದಿನ. ಅವರ ಬಗ್ಗೆ ಹೆಚ್ಚಿನ ಪ್ರಚಲಿತ ವಿಲ್ಲ.


ಶ್ರೀ ವಿಜಯ ವಿಠ್ಠಲನ ಅನುಗ್ರಹದಿಂದ ಜನಿಸಿದ ಒಬ್ಬ ಉತ್ತಮವಾದ ಸಾಂಶ ಜೀವ ಶ್ರೀವಿಜಯದಾಸರಲ್ಲಿ ಜನಿಸಿದ ಕೂಸು ಇಂದಿನ ಕಥಾ ನಾಯಕರು.


ಶ್ರೀ ವಿಜಯದಾಸರು ತಮ್ಮ ಕುಲದೈವವಾದ ಶೇಷಾಚಲವಾಸನಾದ ಆ ಸ್ವಾಮಿಯ ಹೆಸರನ್ನೇ ತಮ್ಮ ಮಗನಿಗೆ ಶೇಷಗಿರಿ ದಾಸ ಅಂತ ನಾಮಕರಣ ವನ್ನು ಮಾಡಿದರು.

ಕೆಲ ಕಾಲದ ನಂತರ ಅವರು ಬೆಳೆದು ದೊಡ್ಡವರಾದ ಮೇಲೆ ಅವರಿಗೆ ಇದ್ದಕ್ಕಿದ್ದಂತೆ ದೇಹಾಲಸ್ಯವಾಗುತ್ತದೆ.ವ್ಯಾಧಿ ಮಿತಿ ಮೀರಿತು.

ಇದನ್ನು ಕಂಡ ಅರಳಮ್ಮನವರು ಬಹು ವ್ಯಸನಗೊಂಡು ಚಿಂತಿತರಾಗಿ ದಾಸರ ಬಳಿಗೆ ಬಂದು ನಮ್ಮ ಮಗ ಶೇಷಗಿರಿ ಇಷ್ಟು ದೇಹಾಲಸ್ಯದಿಂದ ಇದ್ದಾಗ ನೀವು ನಿಮ್ಮ ಪಾಡಿಗೆ ಇರುವದು ಸರಿಯೇ!! ಅವನ ಆರೋಗ್ಯ ದ ಬಗ್ಗೆ  ಸ್ವಾಮಿಯ ಬಳಿ ಪ್ರಾರ್ಥನೆ ಮಾಡಿ ಅಂತ ಮೊರೆ ಇಡುತ್ತಾರೆ.

ತಕ್ಷಣ ಶ್ರೀ ವಿಜಯದಾಸರು ಮಗನ ಬಳಿ ಬಂದು ನೋಡಿದಾಗ ಪ್ರಬಲ ಕರ್ಮ ಇವನಿಗೆ ಬೆನ್ನು ಹತ್ತಿದೆ.ಅದರ ನಿವಾರಣೆಗೆ ಶ್ರೀಹರಿಯ ಕರುಣ ಬೇಡುವದು ಬಿಟ್ಟು ಬೇರೆ ಯಾವ ಔಷಧ ಉಪಚಾರ ಗಳಿಂದ ಆಗದು ಅಂತ ಅವರಿಗೆ ತಿಳಿಯುತ್ತದೆ.

ತಕ್ಷಣ ತಮ್ಮ ಮಗನ ಅಪಮೃತ್ಯು ಪರಿಹಾರಕ್ಕಾಗಿ ಒಂದು ಸುಳಾದಿ ಯನ್ನು ರಚನೆಯನ್ನು ಮಾಡಿ ತಮ್ಮ ಉಪಾಸ್ಯ ಮೂರುತಿಯಾದ ಶ್ರೀ ವಿಜಯವಿಠ್ಠಲನಲ್ಲಿ ಪ್ರಾರ್ಥನೆ ಮಾಡುತ್ತಾರೆ.

ಆ ಸುಳಾದಿ ಹೀಗಿದೆ.👇

ಹಗರಣ ಮಾಡದಿರು ಹರಿಯೆ| ನಿನಗೆ ಕರವ ಮುಗಿದು ಬೇಡಿಕೊಂಬೆ| ಭಕ್ತ ಜನರ ಬಗೆಬಗೆಯಿಂದ ಬಂದ ಕ್ಲೇಶ ಕಳೆದು| ನಂಬಿಗೆ ಇತ್ತು ಪಾಲಿಸುವ ಗುಣವಾರಿಧಿ||..


ಅಂತ ರಚನೆಯನ್ನು ಮಾಡಿ ಅದರಲ್ಲಿ ಹೇಳುತ್ತಾರೆ ತಮ್ಮ ಮಗನ ಬಗ್ಗೆ. ಆ ಜೀವಿ ಎಂತಹದ್ದು ಅಂತ.


ಉದ್ದವನ್ನ ಶಾಪದಿಂದ ಮುಕ್ತನಮಾಡಿ| ಉದ್ದರಿಸಿದೆ ತತ್ವವ ಉಪದೇಶಿಸಿ|

ಶುದ್ದ ವೈಷ್ಣವನಿವ| ನಿರ್ಮತ್ಸರದವ| ಮಧ್ವರಾಯರ ಪಾದ ಪದ್ಮವೆ ಪೊಂದಿದ ತದ್ದಾಸರ ದಾಸ ಭೃತ್ಯನೆನಿಪನಿವ||

ಶ್ರದ್ಧೆ ಯುಳ್ಳವನಿವ| ಸೌಮ್ಯಗುಣದವ ಸಿದ್ದಾಂತ| ಪ್ರಮೇಯಗಳ ಪದ್ದತಿ ಬಲ್ಲವ|

ಉದ್ದಂಡನಲ್ಲವೋ| ಕರ್ಮನಿಷ್ಟನಿವ|

ಕ್ಷುದ್ರ ನಾದರೆ ನಾ ನಿನಗೆ ಪ್ರಾರ್ಥಿಸುವನೆ||

ಅಂತ ಕೇಳಿಕೊಂಡರು.

ಆದರು ಸಹ ಅವರ ಆರೋಗ್ಯ ಸುಧಾರಣೆ ಆಗಲಿಲ್ಲ

ತಕ್ಷಣ ಎರಡು ಉಗಾಭೋಗ ಗಳನ್ನು ರಚಿಸಿ ಆ ಶ್ರೀ ಹರಿಗೆ ಒಪ್ಪಿಸಿ ,

ಸ್ವಾಮಿ!! ಸಣ್ಣವನು ಇವನು ವಿವಾಹವಾಗಿದೆ .ಇವನೊಬ್ಬನೇ ಮಗ.ನನ್ನವಳ ಕೊರಗು ಸೊಸೆಯ ದುಃಖ ನೋಡಲಾಗದು.ನನಗೆ ನೀನು ಕೊಟ್ಟ ತಿಳುವಳಿಕೆ ಎಲ್ಲಡಿಗಿತು ಏನೋ ನಿನ್ನ ಬಂಧ ಶಕುತಿಯನ್ನು ಮೀರಿದವರನ್ನು ನಾ ಕಂಡಿಲ್ಲ ಹರಿಯೇ ಇನ್ನೂ ಇವನಿಗೆ ಆಯುಷ್ಯ ಇಲ್ಲ. ಆದುದರಿಂದ ನನ್ನ ಆಯುಸ್ಸಿನಲ್ಲಿ ಎರಡು ವರ್ಷ ಇವನಿಗೆ ಧಾರೆ ಎರೆದಿದ್ದೇನೆ..

ಉಳಿಸು ಇವನನ್ನು ಎಂದು ಆ ವಿಜಯವಿಠ್ಠಲನಲ್ಲಿ ಮೊರೆ ಇಟ್ಟರು.

ಮರುದಿನದಿಂದಲೆ ಶೇಷಗಿರಿ ದಾಸರ ಆರೋಗ್ಯ ಸುಧಾರಣೆ ಆಯಿತು.


ಮುಂದೆ ಎರಡು ವರುಷದ ನಂತರ ಶ್ರಾವಣಮಾಸ ಬಂದಾಗ ತಮ್ಮ ಕುಟುಂಬದ ಜೊತೆಗೂಡಿ ಶ್ರೀರಂಗಪಟ್ಟಣ ಕ್ಕೆ ಪಯಣ ಬೆಳೆಸಿದರು.

 *ಶ್ರೀರಂಗಪಟ್ಟಣ ಹಿಂದೆ ಮೂರು ಮೈಲಿ ಕರಿಘಟ್ಟವೆಂಬ 

ಶ್ರೀನಿವಾಸನ ಕ್ಷೇತ್ರದಲ್ಲಿ ವಾಸ ಮಾಡುತ್ತಾರೆ.*

 ನಂತರ ಕೆಲದಿನವಾದ ಮೇಲೆ ಅಲ್ಲಿ ಇಂದ ಮುಂದೆ ಕಾವೇರಿ ನದಿ ತೀರದ ಹತ್ತಿರ ಇರುವ ಗೌತಮ ಋಷಿ ಗಳು ತಪಸ್ಸು ಮಾಡಿದ ಗೌತಮ ಕ್ಷೇತ್ರದಲ್ಲಿ ಉಳಿದುಕೊಳ್ಳುವರು.

ಆ ಸಮಯದಲ್ಲಿ ಇದ್ದಕ್ಕಿದ್ದಂತೆ ಶೇಷಗಿರಿದಾಸರ ದೇಹಾಲಸ್ಯವಾಗುತ್ತದೆ.

ಮರುದಿನವೇ ಭಾದ್ರಪದ ಶುದ್ಧ ಬಿದಿಗೆ ಅಂದೇ ಶ್ರೀ ಶೇಷಗಿರಿ ದಾಸರು ಶ್ರೀ ನಾರಾಯಣ ಸ್ಮರಣೆ ಪೂರ್ವಕ ದೇಹವನ್ನು ತ್ಯಾಗ ಮಾಡುತ್ತಾರೆ.

ಮಗನ ಅಂತ್ಯಕ್ರಿಯೆ ಕಾರ್ಯಗಳನ್ನು  ಶ್ರೀ ವಿಜಯದಾಸರು ನೆರೆವೇರಿಸಿ ಅಲ್ಲಿಂದ ಮುಂದೆ ಹೊರಡುತ್ತಾರೆ.

ತಮ್ಮ ಎದುರಿಗೆ ತಮ್ಮ ಮಕ್ಕಳಾದ ಶೇಷಗಿರಿ ದಾಸರು ದೇಹತ್ಯಾಗ ಮಾಡಿದ್ದನ್ನು ಕಂಡು ೧೨ ಪದಗಳಿಂದ ಭಗವಂತನಿಗೆ ಪ್ರಾರ್ಥನೆ ಮಾಡುತ್ತಾರೆ.


 ಶ್ರೀ ವಿಜಯದಾಸರ ಮಗನಾಗಿ ಹುಟ್ಟಿದ ಶ್ರೀಶೇಷಗಿರಿ ದಾಸರು  ದಾಸರಿಂದ ಆಯುರ್ದಾನ ಪಡೆದ ಪುಣ್ಯಜೀವಿ ಹಾಗು ಅವರಿಂದ ಹೊಗಳಿಸಿಕೊಂಡವರು..

ನಿಜವಾಗಿಯೂ ಬಹು ದೊಡ್ಡ ಸಾಧನಾ ಜೀವಿಯೇ ಇರಬೇಕು...

ಅಂತಹವರ ಸ್ಮರಣೆ ಮಾಡಿದರೆ ನಮ್ಮ  ಜನ್ಮ ಕಿಂಚಿತ್ತು ಉದ್ದಾರವಾಗಬಹುದು.

ವಿಧಿ ಸಂವತ್ಸರ ಭಾದ್ರಪದ ಶುಕ್ಲ ದ ಭಾನು| ಬಿದಿಗಿಯಲಿ ಪ್ರವರ ಗೌತುಮ ಸಂಗಮಾ

|ನಿಧಿಯಲಿ ವಿಜಯವಿಠ್ಠಲನಂಘ್ರಿಯುಗಳವನು|

 ಹೃದಯದಲ್ಲಿ ಇಟ್ಟು ದೇಹವ ತ್ಯಾಗ ಮಾಡ್ದೆ||


ಧನ್ಯನೋ ಶೇಷಗಿರಿದಾಸ ನೀನೂ|

ಪುಣ್ಯವಂತನು ಅಹುದೊ ಮನೋ ವಾಚದಲಿ ನಿತ್ಯ|

***


 

No comments:

Post a Comment