Thursday 15 April 2021

jolada hadagi ramadasaru ಜೋಳದ margashira bahula dashami 1940 ಹಡಗಿ ರಾಮದಾಸರು muslim

Name:  jolada hadagi ramadasaru

Ankita:  shreerama    

****

ದಾಸರ ಹೆಸರು: ರಾಮದಾಸರು

ಜನ್ಮ ಸ್ಥಳ: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕು ಜೋಳದಹೆಡಿಗೆ

ತಂದೆ ಹೆಸರು: ಚಾಚಾ ಸಾಹೇಬ್

ತಾಯಿ ಹೆಸರು: ಪೀರಮ್ಮ

ಕಾಲ : 1882 -

ಅಂಕಿತನಾಮ: ಶ್ರೀರಾಮ

ಲಭ್ಯ ಕೀರ್ತನೆಗಳ ಸಂಖ್ಯೆ: 800

ಗುರುವಿನ ಹೆಸರು: ಶ್ರೀರಾಮಧೂತ

ಆಶ್ರಯ: ಜಿಲ್ಲೆ ಅಂಗಧ

ರೂಪ: ತೆಳು, ಗಿಡ್ಡ, ಬಡಹಲು ಶರೀರ

ಪೂರ್ವಾಶ್ರಮದ ಹೆಸರು: ಬಡೇ ಸಾಹೇಬ್

ಮಕ್ಕಳು: ಅವರ ಹೆಸರು: ಒಬ್ಬ ಮಗ- ಸೂಫಿ - (ನಿಧನ)

ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು: ಉಗಾಭೋಗ, ಶತಾಷ್ಟಕಗಳು

ಪತಿ: ಪತ್ನಿಯ ಹೆಸರು: ಇಬ್ಬರು - ಹುಸೇನಮ್ಮ, ಅಲ್ಲಮ್ಮ

ಒಡಹುಟ್ಟಿದವರು: ಇಲ್ಲ

ವೃತ್ತಿ: ಗಾದಿ ಹಾಕುವುದು (ಪಿಂಜಾಳ)

ಕಾಲವಾದ ಸ್ಥಳ ಮತ್ತು ದಿನ: 1940 - ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಲಿಂಗದ ಹಳ್ಳಿಯಲ್ಲಿ

ವೃಂದಾವನ ಇರುವ ಸ್ಥಳ: ಲಿಂಗದಹಳ್ಳಿ

ಕೃತಿಯ ವೈಶಿಷ್ಟ್ಯ: ಭಕ್ತಿ, ದ್ವೈತ ಸಿದ್ಧಾಂತ, ಸಾಮಾಜಿಕ ಚಿಂತನೆ

ಇತರೆ: ಶ್ರೀರಾಮನನ್ನು ಅಂಕಿತವಾಗಿದ್ದು ಕೆಂಪದ್ದು ದಾಸ ಸಾಹಿತ್ಯದಲ್ಲಿ ದಾಖಲೆ, ಹಿಂದು ಇಸ್ಲಾಂ - ದಾವಿರ್ಂಕ್ಯ ಸಾಣರಸ್ಯ - ಭಾತ್ವೈಕ್ಯ.

****


ಶ್ರೀಂ ಶ್ರೀ ಕಂ ಕಪಿಲಾಯ ನಮಃ

7 Jan 2021 margashira bahula dashami

ಯಾವ ಮತವಾದರೇನು, ಹರಿಯಮತ ಎನ್ನದು ಎಂದೇ ನಂಬಿ ಹನುಮನಮತದ ಹಿರಿಮೆಯನ್ಸಾರಿದ ಯಮಾಂಶಜರಾದ ಶ್ರೀ ಕನಕದಾಸಾರ್ಯರು ನಮಗೆ ಸದಾ ಪರಮಪೂಜ್ಯರೇ ಸರಿ.. ಇವರ ಹಾದಿಯಲ್ಲೇ ನಡೆದು ನಮ್ಮ ಹರಿದಾಸರಲ್ಲಿ ಧೀಟಾಗಿ ಸೇರಿದ 18ನೇ ಶತಮಾನದ ರಾಯಚೂರು ಜಿಲ್ಲೆಯ,  ದೇವದುರ್ಗದ ಜೋಳದಹೆಡಗಿ ಗ್ರಾಮದಲ್ಲಿ ಜನಿಸಿದ, ಮುಸ್ಲಿಂ ಪಂಥಕ್ಕೆ ಸೇರಿದರೂ ರಾಮ ಶ್ರೀರಾಮ ಅಂಕಿತನಾಮಗಳಿಂದ ಶ್ರೀಹರಿಯ ಗುಣಗಾನವನ್ನು ಮಾಡಿದ, ಹರಿ ಸರ್ವೋತ್ತಮ,  ವಾಯುಜೀವೋತ್ತಮತ್ವವನ್ನು ಸಾರಿದ , ಸುಮಾರು  800 ಕ್ಕೆ ಹೆಚ್ಚಿನ ಪದಗಳು,  100 ಉಗಾಭೋಗಗಳೂ, 460 ನುಡಿಗಳುಳ್ಳ ಶ್ರೀ ರಾಮಭಜನೆ ಎನ್ನುವ ಮೇರು ಕೃತಿಯೂ, 5 ಶತಾಷ್ಟಕಗಳನ್ನು ರಚನೆ ಮಾಡಿ, ಪರಮಾತ್ಮನ ಪದಗಳಲ್ಲಿ ಸಮರ್ಪಣೆ ಮಾಡಿ ನಮ್ಮನ್ನು ತಮ್ಮ ಪಥದಲ್ಲಿ ನಡೆಯಲು ಪ್ರೇರಕರಾದ, ಹರಿದಾಸ ಪಂಥದಲ್ಲಿ ಶ್ರೇಷ್ಠ ವಜ್ರದಂತೆ ವಿರಾಜಮಾನರಾದ, ಅವಧೂತರೆಂದೇ ಬದುಕನ್ನು ಹರಿಯ ಚರಣಗಳಲ್ಲಿ ನಿಲಿಸಿದ ದಾಸ ಶ್ರೇಷ್ಠರಾದ ಶ್ರೀ ಜೋಳದಹಡಗಿ ರಾಮದಾಸರ  ಪುಣ್ಯದಿನ ಇಂದು..

ಶ್ರೀ ದಾಸಾರ್ಯರ ಅನುಗ್ರಹ ಸದಾ ನಮ್ಮ ಸಮೂಹದಲಿ ಎಲ್ಲಾ ಸದಸ್ಯರ ಮೇಲಿರಲೆಂದು ಪ್ರಾರ್ಥನೆ ಮಾಡುತ್ತಾ.....

-Smt. Padma Sirish

ನಾದನೀರಾಜನದಿಂ ದಾಸಸುರಭಿ

***


year 2021

ಶ್ರೀ ರಾಮಾವಧೂತವರಜ ಶ್ರೀ ರಾಮಾಂಕಿತ ಯೋಗಿನೇ/

ಜ್ಞಾನ ವೈರಾಗ್ಯ ಸಿದ್ಧ್ಯರ್ಥಂ ನಮಾಮಿ ಚ ಪುನಃ// 


ಅನ್ಯ ಮತದಲ್ಲಿ ಹುಟ್ಟಿದರೇನು ಹರಿಯಮತವೇ ಶ್ರೇಷ್ಠವೆಂದು ತಿಳಿದು ಜೀವನವನ್ನು ಕಳೆದವರಾದ, ಭಾರತೀರಮಣ ಮುಖ್ಯಪ್ರಾಣಾಂತರ್ಗತ ಶ್ರೀರಾಮನನ್ನು ಅವಿರತ ಸೇವಿಸಿ ಜೀವದ ಭಕ್ತಿಯಿಂದ ಆರಾಧನೆ ಮಾಡಿ ಆ ಭಕ್ತಿಯನ್ನು ತಮ್ಮ ಅತ್ಯದ್ಭುತವಾದ ಕೃತಿಗಳ ಮುಖಾಂತರ ಸಜ್ಜನ ವರ್ಗಕ್ಕೆ ಅನುಗ್ರಹ ಮಾಡಿದವರಾದ,  ಕನ್ನಡ, ಸಂಸ್ಕೃತ,  ದಖನಿ ಉರ್ದು ಭಾಷೆಯಲ್ಲಿ ವಿಶೇಷವಾದ ಪದಪ್ರಯೋಗಗಳಿಂದ ಅಸಾಮಾನ್ಯ ರೀತಿಯಲ್ಲಿ ಕೃತಿ ರಚನೆ ಮಾಡಿದವರಾದ, ಸಾಧಕರಾದವರು ಪರಮಾತ್ಮನ ಅನುಗ್ರಹದಿಂದ ಸಂಸಾಕರಕ್ಕೆ ಬಂದಾಗ ಅವರ ಸಾಧನೆಯ ಕ್ರಮ ಹೇಗಿರಬೇಕೆಂದು ರಚಿಸಿ ತಿಳಿಸಿದವರಾದ, ಅವಧೂತರಂತೆಯೇ ತಮ್ಮ ಜೀವನವನ್ನು ಪರಮಾತ್ಮನಿಗೆ ಸಮರ್ಪಿಸಿದವರಾದ ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಅನುಗ್ರಹ ಪಡೆದವರೂ,  ಶ್ರೀ ಬುದ್ದಿನ್ನಿ ಮಾಧವತೀರ್ಥ ಯತಿವರೇಣ್ಯರನ್ನೇ ತಮ್ಮ ಸ್ವರೂಪೋದ್ಧಾರಕ ಗುರುಗಳನ್ನಾಗಿ ಪಡೆದವರಾದ, ಶ್ರೀ ಇಟಗಿ ಹನುಮಂತಾಚಾರ್ಯರಂತ ಜ್ಞಾನಿಗಳನ್ನು ಶಿಷ್ಯರನ್ನಾಗಿ ಪಡೆದವರಾದ, 18 ನೆಯ ಶತಮಾನದ ಕೊನೆಯಲ್ಲಿ ಆಗಿಹೋದ ಮಹಾನ್ ದಾಸಾರ್ಯರಾದ

 ಶ್ರೀ ಲಿಂಗದಹಳ್ಳಿ ರಾಮದಾಸರ ಮಧ್ಯಾರಾಧನೆಯ ಶುಭಸ್ಮರಣೆಗಳು..

ಶ್ರೀ ರಾಮಾವಧೂತವರಜ ಶ್ರೀ ರಾಮಾಂಕಿತ ಯೋಗಿನೇ/

ಜ್ಞಾನ ವೈರಾಗ್ಯ ಸಿದ್ಧ್ಯರ್ಥಂ ನಮಾಮಿ ಚ ಪುನಃ ಪುನಃ//


ತುರುಕರ ಕುಲದಲಿ ಜನಿಸಿದರಾದರು, 

ಹರಿಯೆ ಪರನೆಂದು ಕರವೆತ್ತಿ ಸಾರಿದಾ/ 

ದಾಸರಿಗೂಂದಿಸು ನೀನು ಮನವೇ 

ದಾಸರಿಗೊಂದಿಸು ನೀನು 

ಎಂದು,


ಸ್ವಾರ್ಥ ಇಲ್ಲದೆ ಸಕಲ ತೀರ್ಥಯಾತ್ರೆಯಾಚರಿಸಿ/ 

ಪಾರ್ಥಸಾರಧಿಯ ಮಹಿಮೆಗಳನೆಲ್ಲಾ ತಿಳಿದು/

ಕರ್ತೃ ಶ್ರೀರಾಮನೆಂದು ಡಂಗುರವ ಸಾರಿ/

ಸ್ವಾರ್ಥಿಗಳ ಮದವನ್ನು ಕೊಚ್ಚಿದ ಮಹಿಮನೆ


ವಂದಿಸುವೆ ಅಡಿಗಳಿಗೆ ತಂದೆ ದಾಸಾರ್ಯ

ಬಂದ ಭಯಗಳ ಕಳೆದೆನ್ನ ಎಂದೆಂದು ಉದ್ಧರಿಸು/ 


ಎಂದೇ ಶ್ರೀ ವೇದಮೂರ್ತಿ ಇಟಗಿ ಹನುಮಂತಾಚಾರ್ಯರಿಂದ ಗೇಗೀಯಮಾನರಾದ 19 ನೆಯ ಶತಮಾನದ ಮಹಾನ್ ದಾಸರು, ಸಾಧಕರಾದವರು ಯಾವ ಮತದಲ್ಲಿ ಹುಟ್ಟಿ ಬಂದರೂ ಹರಿ ಸರ್ವೋತ್ತಮ,  ವಾಯು ಜೀವೋತ್ತಮತ್ವವನ್ನು ನಂಬಿ ಬದುಕಿದರೆ ಅವರಿಗೆ ಉದ್ಧಾರವು ನಿಶ್ಚಿತ ಎಂದು ತಮ್ಮ ಜೀವನದಿಂದ,  ಅದ್ಭುತವಾದ ಕೃತಿಗಳಿಂದ ಸಾರಿದವರು, ಶ್ರೀರಾಮನ ಪದಕಮಲಗಳಲ್ಲಿ ತಮ್ಮ ಇಡೀ ಜೀವನವನ್ನು ಸಮರ್ಪಣೆ ಮಾಡಿದವರೂ ಆದ ಶ್ರೀ ಲಿಂಗದಹಳ್ಳಿ ರಾಮದಾಸರ ಉತ್ತರಾರಾಧನೆಯ ಶುಭವಂದನೆಗಳು...

*ವೇದಮೂರ್ತಿ ಶ್ರೀ ಇಟಗಿ ಹನುಮಂತಾಚಾರ್ಯರ* ರಚನೆಯನ್ನು ನೋಡೋಣ. ಈ ಕೃತಿಯಲ್ಲಿ ಶ್ರೀ ಹನುಮಂತಾಚಾರ್ಯರು ಶ್ರೀ ರಾಮದಾಸರ ಜೀವನ ಚರಿತ್ರೆಯನ್ನು ವಿವರಿಸಿದ್ದು ಕಾಣಬಹುದು.


*ವೇದಮೂರ್ತಿ ಶ್ರೀ ಇಟಗಿ ಹನುಮಂತಾಚಾರ್ಯರ* ರಚನೆ


ಇಂಥಾ ಮಹಿಮರ ಕಾಣೆನೊ ಈ ಜಗದೊಳಗೆ


ಇಂಥಾ ಮಹಿಮರ ಕಾಣೆ ಮಾಕಾಂತ ಪ್ರಿಯ ಭಕ್ತ

ಅನಂತ ಮಹಿಮೆಯ ತೋರ್ದ ಶಾಂತ ಶ್ರೀ ರಾಮಾಂಕಿತರ


ವರ ನಂದಿನೀ ಲೋಮದಿ ಧರೆಗೆ ಬಂದ

ಪರಧರ್ಮದೊಳು ಜನಿಸಿದಾ

ದುರುಳ ಸಂಸಾರದಿ ಪರಿಪರಿತಾಪಮೀರೆ

ತೊರೆವೆ ಪ್ರಾಣವನೆಂದು ವರಹಜ ತೀರಕೆ ಪೋಗಿ

ಧರೆಸುತೆವರನಾ ಚರಣತಲೆಸಯುವ 

ಹರಿ ಆಯುಧತೀರ್ಥದಲಿ ಧುಮುಕಲು

ಗುರುವರ ಪವನನು ಪೊರಿಯುತ ಕರುಣಿಸೆ

ವರ ಅಂಕಿತಪೊಂದಿ ಮೆರೆದ ಶರಣರಾ


ಗಾನಲೋಲನ ಭಜಿಸುತಾ ನೇಮದಿ ಬಂದು 

ಗೋನವಾರದಿ ನೆಲೆಸುತ

ಶಾನಭೋಗ ದೈವಜ್ಞರ ಸ್ನೇಹದಿ ತಾನು 

ಜಾನಕಿವರ ವರಪಾವನ

ಜೀವನಪರನೊ ಸಾನುರಾಗದಿ ಸಾರುತ ಮುದದಲಿ

ದೀನಜನರನುದ್ಧರಿಸುತ ಕುಜನರ

ಜ್ಞಾನವ ಕಳೆದು ಮಾರಮಣ ಕರುಣ ಪಡೆಯುವ ಮಾರ್ಗತೋರ್ದರಾ


ಯಾತ್ರೆ ತೀರ್ಥವ ಚರಿಸುತ ಇವರು 

ಜಗದ್ಧಾತ್ರನ ಮಹಿಮೆ ಪೊಗಳುತ

ಚಿತ್ರಲೀಲೆಯ ತೋರಿ ವಿಕ್ರಮವತ್ಸರ 

ಮಾರ್ಗಶಿರಸಿತ ಹತ್ತನೆ ದಿನದಲ್ಲಿ

ನಕ್ರಹರನ ಸ್ಮರಿಸುತ

ಶಕ್ರಲೋಕವತಿಗ್ರಮಿಸಿ ತಾವಕ್ರನಿಂದ ತಾರಕವ ಪೊಂದಿ

ಚಕ್ರಪಾಣಿ *ಶ್ರೀ ನರಶಿಂಹವಿಠಲನ*

ಅಕ್ಕರಪುರಕೆ ಗಕ್ಕನೆ ಏರ್ದರ 


ಶ್ರೀ ರಾಮದಾಸರ ಮಧ್ನಾರಾಧನೆಯ ಶುಭವಂದನೆ

-Smt. Padma Sirish

ನಾದನೀರಾಜನದಿಂ ದಾಸಸುರಭಿ

***

No comments:

Post a Comment