Wednesday 14 April 2021

subbaraya dasaru 1940 chaitra shukla navami ಸುಬ್ಬರಾಯ ದಾಸರು

||ಶ್ರೀ ವಿಠ್ಠಲ ಪ್ರಸೀದ||
ಹರಿದಾಸ ಪರಂಪರೆಯ ಲೇಖನ 

ಸುಬ್ಬರಾಯ ದಾಸರು
ಅಂಕಿತ ತಂದೆ ಮೋಹನ ದಾಸ 

ಚೈತ್ರ ಶುದ್ಧ ನವಮಿ 

ಹರಿದಾಸರಲ್ಲಿ ಚೈತ್ರ ಶುದ್ಧ ನವಮಿ ಹರಿಪಾದವನ್ನು ಸೇರಿದವರು ತಂದೆ ಮೋಹನ ದಾಸ ಅಂಕಿತರಾದ “ಪರಮಪ್ರಿಯ” ಬಿರುದಾಂಕಿತರಾದ ಶ್ರೀಸುಬ್ಬರಾಯ ದಾಸರು.
ನಮ್ಮ ಹಿರಿಯರು ಬರೆದಿದ್ದ ಹಾಗೆ ( ಬಾಣದ ಗುರುತು ಹಾಕಿದ್ದಹಾಗೆ ) ವರ ವಿಠ್ಠಲ ದಾಸರು
(ವರಾಹ ವಿಠ್ಠಲರು ಎಂದು ಕೂಡ ಇದೆ). ಇಬ್ಬರಿಗೆ ದಾಸದೀಕ್ಷೆ ನೀಡಿದ್ದರು . ಅವರು ದೊಡ್ಡಬಳ್ಳಾಪುರದ ರಾಘವಪ್ಪ 
(ಮುದ್ದು ಮೋಹನ ದಾಸರು.) ಹಾಗು  ಶ್ರೀ ಸುಬ್ಬರಾಯದಾಸರು ತಂದೆ ಮುದ್ದು ಮೋಹನ ವಿಠಲಾಂಕಿತರು. ಇವರನ್ನು ನಮ್ಮ ಹಿರಿಯರು
ಭಾಗವತ ಸುಬ್ಬರಾಯರೆಂದು ಗುರುತಿಸಿದ್ದಾರೆ.
ಆದರೆ ಇದರ ಮಾಹಿತಿ  ಇಲ್ಲ .
ತುಮಕೂರು ಜಿಲ್ಲೆಯ ನರಸೀಪುರ  ಎಂಬ ಗ್ರಾಮ ಸುಬ್ಬರಾಯರ ಜನ್ಮಸ್ಥಳ .ಶೇಷಪ್ಪ ಲಕ್ಷ್ಮೀದೇವಮ್ಮ ಎಂಬ ಜನನಿ ಜನಕರು  . ೧೮೬೫ ರಲ್ಲಿ ಜನನ 
ವ್ಯಾಸರಾಜ ಪೀಠದಲ್ಲಿ ವಿರಾಜಮಾನರಾಗಿದ್ದ 
ಶ್ರೀ ಲಕ್ಷ್ಮಿಪ್ರಿಯತೀರ್ಥರು ಇವರಿಗೆ ಉಪನಯನದಲ್ಲಿ ಗುರೂಪದೇಶ ನೀಡಿದವರು.
ಮುಂದೆ ಅಚ್ಚಮ್ಮ ಎಂಬ ಕನ್ಯೆಯೊಂದಿಗೆ ವಿವಾಹ . ಮುಂದಿನ ಶಾಸ್ತ್ರಭ್ಯಾಸ ಚಿಂಚೋಳಿ 
ವೆಂಕಣ್ಣಾಚಾರ್ಯರಲ್ಲಿ ನಡೆಯಿತು . ಅವರಿಗೆ ಬ್ರಹ್ಮಜ್ಞಾನ ಸಂಪಾದಿಸುವ ತವಕ ಅನೇಕ ದಿನಗಳು ಗುಡ್ಡಗಾಡಿನಲ್ಲಿ ಧ್ಯಾನಾಸಕ್ತರಾಗಿರುತ್ತಿದ್ದರು . ಅನೇಕ ದಾಸರಾಯರ ಧಿವ್ಯ ಚರಿತ್ರೆಯನ್ನು ಓದಿ ತಾವೂ
ಹರಿದಾಸರಾಗುವ ಇಚ್ಛೆ ಹೊಂದಿದರು . ಹರಿದಾಸರಾಗುವುದಕ್ಕೆ  ಮುಖ್ಯವಾದದ್ದು ತಂಬೂರಿ . ಅದನ್ನು ಖರೀದಿಸಿದರು . ಅದನ್ನು
ಹಿಡಿದು ದೇವರಾಯನದುರ್ಗದ ಕರಿಗಿರಿ ನರಸಿಂಹನ ರತೋತ್ಸವಕ್ಕೆ ಹೋದರು . ಅಲ್ಲಿ ನರಸಿಂಹ ದೇವರಿಂದ “ ಅಂಕಿತ ಸ್ವೀಕಾರದ ಸೂಚನೆ ಸಿಕ್ಕಿತು “ ಅಂಕಿತವಿಲ್ಲದ ದೇಹ ನಿಷಿದ್ಧ ಎಂದು ಬಗೆದು ಸುಬ್ಬರಾಯರು  ಅಂಕಿತವನ್ನು ಕರುಣಿಸುವಂತ ಗುರುವನ್ನು ನೀನೆ ಕರುಣಿಸು ಎಂದು ಕರಿಗಿರಿ ನರಸಿಂಹನನ್ನೇ ಬೇಡಿದರು .
ಅವರಿಗೆ ಅಂದಿನ ದಿನಗಳಲ್ಲಿ ಪ್ರಸಿದ್ಧ  ಹರಿದಾಸರು ದೊಡ್ಡಬಳ್ಳಾಪುರದಾಸರಾಗಿದ್ದ  ಶ್ರೀ
ಮುದ್ದುಮೊಹನ ವಿಠ್ಠಲದಾಸರು .
ನಮ್ಮ ಮಾತಾಮಹರು ಬರೆದಿದ್ದಂತೆ ಅಷ್ಟು ಸುಲಭವಾಗಿ ಶಿಷ್ಯತ್ವ ಕೊಡುತ್ತಿರಲಿಲ್ಲ ಕಠಿಣ ಪರೀಕ್ಷೆ ಒಡ್ಡುತ್ತಿದ್ದರುಶ್ರೀಮುದ್ದು ಮೊಹನದಾಸರು .  ದಾಸರು, ಸನ್ಯಾಸಿಗಳಂತೆ ಪೂಜೆ ಮಾಡುತ್ತಿದ್ದರು  . ನೈವೇದ್ಯ ಹಸ್ತೋದಕ್ಕಾಗಿಪ್ರತ್ಯೇಕ ಅಡಿಗೆ ತಯಾರಾಗುತ್ತಿತ್ತು
ತುಂಬಾ ಪ್ರಾಮಾಣಿಕವಾದ ಇಚ್ಚೆಯನ್ನು ಭಗವಂತ ಪೂರೈಸುತ್ತಾನಂತೆ . ಮುದ್ದುಮೊಹನದಾಸರು ನರಸೀಪುರಕ್ಕೆ ಆಗಮಿಸಿದರು . ಅವರವೇಷ ಕೃಷ್ಣಾಜಿನ  ಕಸೆ  ಅಂಗಿ . ಕುದುರೆಯಮೇಲೆ ಆಗಮಿಸಿದ ಅವರು
ಮಾರ್ಗಾಯಾಸ ಪರಿಹರಿಸಿಕೊಳ್ಳಲು  , ಹಾಗು
ಸುಬ್ಬರಾಯರ ತಂದೆಯವರ ಪ್ರಾರ್ಥನೆಯಂತೆ 
ಅದರಲ್ಲೂ ಅಂದು ಸುಬ್ಬರಾಯರ ಪತ್ನಿಯವರ 
ಸೀಮಂತ ವಿದ್ದುದರಿಂದ ಅವರ ಮನೆಯಲ್ಲೇ ವಾಸ್ತವ್ಯ ಹೂಡಿದರು .ದೇವತಾರ್ಚನೆ ನೈವೇದ್ಯ ಎಲ್ಲವು ಆಯಿತು . ಒಂದು ವಿಶೇಷವೆಂದರೆ ಮುದ್ದು ಮೋಹನದಾಸರು   ಸಂಸ್ಥಾನಗಳಂತೆ ಪೂಜಾಸಮಯದಲ್ಲಿ ನಗಾರಿ ವಾದ್ಯಗಳನ್ನು ಬಾರಿಸಿಸುತ್ತಿದ್ದರಂತೆ . ಈ ಸಂದರ್ಭದಲ್ಲಿ ಸುಬ್ಬರಾಯರು ತಮಗೆ ಅಂಕೀತೋಪದೇಶ ಮಾಡಬೇಕೆಂದು ಕೇಳಿಕೊಂಡರಂತೆ . ಅವರ
ವೈರಾಗ್ಯ ಗುರುಗಳಿಗೆ ಒಪ್ಪಿಗೆಯಾದರು ತೋರಗೊಡದೆ ಮತ್ತಷ್ಟು ಪರೀಕ್ಷೆ ಮಾಡಲು ಬಯಸಿ  ಏನೊಂದು ಹೇಳದೆ ತಮ್ಮ ಶಿಷ್ಯರೊಡನೆ ಅಲ್ಲಿಂದ ಹೊರಟರು . ಕುದುರೆಯಮೇಲಿದ್ದ  ದಾಸರು ತಮಗೆ ಮಾರ್ಗ ತೋರಲು ಸುಬ್ಬರಾಯರನ್ನೇ ಆರಿಸಿಕೊಂಡರು .
ಇದೇ ಒಂದು ಅವಕಾಶ ಗುರುಗಳಿಗೆ ತನ್ನಮೇಲೆ 
ಕರುಣೆ ಬರುವುದೇನೋ ಎಂದು ದಾಸರ ಪಕ್ಕದಲ್ಲಿ ಕುದುರೆಯ ಸಮವಾಗಿ ನಡೆದರು ಹಾದಿ ತೋರುವ ನೆಪದಲ್ಲಿ . ಗುರುಗಳು ಸುಬ್ಬಣ್ಣ ಹಿಂದಿರುಗು ಎಂದು ಆಜ್ಞೆ ಇತ್ತರು. ಸುಬ್ಬರಾಯರು ನಿರಾಸೆಗೊಂಡರು . ಇದನ್ನು ಗಮನಿಸುತ್ತಿದ್ದ ದಾಸರು ಅವರಮೇಲೆ ಕರುಣೆ ಇಟ್ಟು  ತಲೆಯನ್ನು ನೇವರಿಸಿ “ ತಾವು ತುಮಕೂರಿನ  ವ್ಯಾಸರಾಜಮಠದಲ್ಲಿ ವಾಸ್ತವ್ಯ
ಹೂಡುತ್ತೇವೆ ಅಲ್ಲಿ ಬಂದು ನೋಡಲು ಹೇಳಿದರು.  ಇಷ್ಟು ಆಸಕ್ತರಾದ ಸುಬ್ಬರಾಯರಿಗೆ ದಾಸದೀಕ್ಷೆ ಕೊಡಲು ನಿರ್ದರಿಸಿಕೊಂಡರು .
ಮರುದಿನ ಭೇಟಿಯಾದ ಆಕಾಂಕ್ಷಿ ಸುಬ್ಬರಾಯರಿಗೆ ತಲೆಯಮೇಲೆ ಕೈ ಇಟ್ಟು
ತಂದೆ ಮುದ್ದುಮೊಹನ ವಿಠ್ಠಲ ಎಂದು ಅಂಕಿತ ಪ್ರಧಾನ ಮಾಡಿ  ಉದ್ಧರಿಸಿದರು . ಅಲ್ಲಿಂದ ಪ್ರಾರಂಭವಾಯಿತು ಅವರ ಲೋಕೋದ್ದಾರ .
ದೇವರಾಯನ ದುರ್ಗ ದಾಸಕೂಟ ಸ್ಥಾಪನೆ ಆಯಿತು ೧೯೦೦ ರಲ್ಲಿ. ದೇಶದೇಶ ಸಂಚರಿಸಿ 
ದಾಸಕೂಟವನ್ನು ಬೆಳೆಸಿದರು .  
ಶ್ರೀಸತ್ಯಧ್ಯಾನ  ಶ್ರೀಗಳಿಂದ ಆಜ್ಞಾಪಿತರಾಗಿ  ಶ್ರೀ
ಶ್ರೀಮನ್ಮಧ್ವ ಸಿದ್ದಂತನ್ನೋಹಿನಿ ಸಭಾ  ನಡೆಸುವ ಪರೀಕ್ಷೆಗಳಿಗೆ ಪರೀಕ್ಷಕರಾಗಿ ೧೦ ವರ್ಷಗಳು ಕಾರ್ಯನಿರ್ವಹಿಸಿದರು .
ಇವರು ಮಾಡಿದ ಸಮಾಜಮುಖಿ ಜನಹಿತ ಕಾರ್ಯವೆಂದರೆ  , ಇವರ ಭೋದನಾ ಶೈಲಿ ಗಮನಿಸಿದ  ಬೆಂಗಳೂರಿನ ಸೆಂಟ್ರಲ್ ಜೈಲ್ ಅಧಿಕಾರಿಗಳು  ಅವರನ್ನು ಜೈಲಿನ ಆವರಣಕ್ಕೆ ಕರೆಸಿ ಖೈದಿಗಳಿಗೆ ವಾರಕ್ಕೊಮ್ಮೆ ಧರ್ಮ ಭೋದನೆ ಮಾಡುವಂತೆ ಪ್ರಾರ್ಥಿಸುತ್ತಿದ್ದರು .
ಅವರ ಹೃದಯ ಕರಗುವಂತ ಭೋದನೆಗಳನ್ನು ಕೇಳಿ ಸನ್ಮಾರ್ಗದಿಂದ ಕೈದಿಗಳು  ಬಿಡುಗಡೆ ಹೊಂದಿದ್ದರು ಅಷ್ಟು ಹೃದಯ ಕರುಗುವಂತೆ ಉಪನ್ಯಾಸ  ಮಾಡುತ್ತಿದ್ದರು.
ದೂರದಲ್ಲಿರುವ  ಭಕ್ತ ವೃಂದವನ್ನು ಮನಸ್ಸಿನಲ್ಲಿಟ್ಟು ದ್ವೈತ ಮತ ಪ್ರಚಾರಕ್ಕೆ ಮಾಸಪತ್ರಿಕೆಯೊಂದನ್ನು ಪ್ರಾರಂಭಿಸಿದರು . ಎಲ್ಲರಿಗು ತಲುಪಲಿ ಎಂದು ಕನಿಷ್ಠ ದರವನ್ನು ಇಟ್ಟು ನಷ್ಟವಾದರೂ ಧರ್ಮ ಪ್ರಸಾರ ಅವರ
ಉದ್ದಿಶ್ಯವಾಗಿತ್ತು . ಅನೇಕ ಯಾತ್ರಾಸ್ಥಳಗಳಿಗೆ ಭೇಟಿಯಿತ್ತರು .ಕದರಮಂಡಲಿಯಿಂದ ಪ್ರಾಣದೇವರ ಪ್ರತೀಕ ತಂದರು .
ಭಗವಂತನ ದಾಸತ್ವಕ್ಕೆ ಕುಲವು ಮುಖ್ಯವಲ್ಲ 
ಎಂದು ಸಾರಿದವರು. ಸಂಚಾರದಲ್ಲಿ ಉಡುಪಿಗೆ ಭೇಟಿಯಿತ್ತಾಗ ಅವರ ಸಮಾಜ ಸೇವೆ ನೋಡಿ ಅಂದಿನ ಪುತ್ತಿಗೆ  ಸ್ವಾಮಿಗಳು  “ಪರಮಪ್ರಿಯ”
ಎಂಬ ಬಿರುದು ಕೊಟ್ಟು ಗೌರವಿಸಿದರು .
ಅನೇಕ ಪರಂಪರೆಗಳು ಶಿಷ್ಯರಿಲ್ಲದೆ ಸ್ಥಗಿತಗೊಂಡಿದ್ದವು . ಹಿಂದಿನ ಲೇಖನದಲ್ಲಿ ಹೇಳಿದಂತೆ , ಜಗನ್ನಾಥದಾಸರ  
ಮೋಹನದಾಸರ , ಗೋಪಾಲದಾಸರ ಶಿಷ್ಯ ಪರಂಪರೆಗಳು ನಿಂತಿದ್ದಾಗ ವೇಣುಗೋಪಾಲದಾಸರ ಶಿಷ್ಯ ಪರಂಪರೆ ಮುಂದುವರೆಯುವಹಾಗೆ ಮಾಡಿದವರು ತಂದೆ
ಮುದ್ದುಮೊಹನ ವಿಠ್ಠಲ ದಾಸರು,
ಸಾವಿರಕ್ಕೂ ಮಿಕ್ಕಿ ದಾಸಧೀಕ್ಷೆ ಕೊಟ್ಟವರು .
ಅವರು ನಡೆಸುತ್ತಿದ್ದ “ ಪಾರಮಾರ್ಥ ಚಂದ್ರೋದಯ “ ಎಂಬ ಮಾಸ ಪತ್ರಿಕೆಯ ನಿರ್ವಹಣೆ ಮಗನಿಗೆ ವಹಿಸಿದರು . ಕದರಮಂಡಗಿಯಿಂದ ತಂದ ಪ್ರಾಣದೇವರ ವಿಗ್ರಹವನ್ನು ಪ್ರತಿಷ್ಠೆ ಮಾಡಲು ಮುಹೂರ್ತ   ಇಟ್ಟರು . ಪ್ರಮಾದಿ ಸಂವತ್ಸರ  ಫಾಲ್ಗುಣ ಬಹುಳ ಪಂಚಮಿ ಗುರುವಾರ “ಸುಂದರೇಶ ಪ್ರಾಣದೇವರ” ಪ್ರತಿಷ್ಠೆ ಮಾಡಿದರು .
ವಿಕ್ರಮ ಸಂವತ್ಸರ  ಚೈತ್ರ ಶುದ್ಧ ರಾಮನವಮಿ 
೧೬ - ೪- ೧೯೪೦ ನೇ ಇಸವಿ ಮಧ್ಯಾನ್ಹ  
ಭಗವಂತನ ಚಿಂತನೆ ಮಾಡುತ್ತಾ  ಹರಿಪಾದ ಸೇರಿದರು. ಅನೇಕ ಭಗವದ್ಭಕ್ತರಿಗೆ ಹರಿದಾಸದೀಕ್ಷೆ ಕೊಟ್ಟ ಕೀರ್ತಿ ಅವರದು .
 ಅವರ ಪುಣ್ಯದಿನ 
             ನಾಹಂ ಕರ್ತಾ ಹರಿಃ ಕರ್ತಾ
          ||ಶ್ರೀ ಕೃಷ್ಣಾರ್ಪಣಮಸ್ತು ||
******

.

No comments:

Post a Comment