Friday 30 April 2021

galagali avva 1760 ಗಲಗಲಿ ಅವ್ವ

Galagali Avva 

ದಾಸರ ಹೆಸರು : ಗಲಗಲಿಅವ್ವನವರು

ಜನ್ಮ ಸ್ಥಳ     : ಭೋಗಾಪುರ (ಜಿಲ್ಹೆ ಕೊಪ್ಪಳ)

ತಂದೆ ಹೆಸರು : ಅಲಭ್ಯ (ಭೋಗಾಪುರೇಶ ದೇವಸ್ಥಾನ ಅರ್ಚಕರ ಮಗಳು)

ಕಾಲ             : check 1670 to 

ಅಂಕಿತನಾಮ : ರಮೇಶ, ರಮೇಶ, ರವಿಯರಸು

ಲಭ್ಯ ಕೀರ್ತನೆಗಳ ಸಂಖ್ಯೆ: 266

ಗುರುವಿನ ಹೆಸರು : (ಮಕ್ಕಳಿಂದಲೇ ಕೇಳಿ ತಿಳಿದದ್ದು)

ರೂಪ         : ಕೆಂಪು ಮೈ ಬಣ್ಣದ ಮಧ್ಯಮಗಾತ್ರದವರು

ಪೂರ್ವಾಶ್ರಮದ ಹೆಸರು: ರಮಾಬಾಯಿ

ಮಕ್ಕಳು: ಅವರ ಹೆಸರು: ಅಲಭ್ಯ (ನಿರ್ಧರಿಸಬೇಕಿದೆ)

ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು: ಅಲಂಕಾರ ತಾರತಮ್ಯ ಸೇತು ಬಂದನಹಾಡುಗಳು (ಶ್ರೀ ಕೃಷ್ಣ ಜನ್ಮದ ಸುದೀರ್ಘ ಜೋಗುಳ ಹಾಡು. 57 ನುಡಿಗಳು.

ಪತಿ: ಪತ್ನಿಯ ಹೆಸರು: ಗಲಗಲಿ ಮುದ್ದಲಾಚಾರ್ಯ

ಕಾಲವಾದ ಸ್ಥಳ ಮತ್ತು ದಿನ: ಶೂರ್ಪಾಲಿ (ತಾ. ಜಮಖಂಡಿ)

ಕೃತಿಯ ವೈಶಿಷ್ಟ್ಯ: ಮು್ಯು ಕೊಡುವ ಮತ್ತು ಹಿಂದಿರುಗಿಸುವ ಸಂಪ್ರದಾಯದ ನೆಪದಲ್ಲಿ ಭಾರತ ಭಾಗವತಾರಿ ಪುರಾಣ ಪ್ರಸಂಗಗಳು, ಪುರಾಣವಾತ್ರಗಳು ಅವರ ಸ್ವಭಾವ ಇತ್ಯಾದಿಗಳ ಚಿತ್ರಣವಿದೆ. ಮಾತಿನ ಚಕಮಕಿ, ಹಾಸ್ಯ ವಿಡಂಬನೆ ಸರ್ಡರ ಸಂಭವ್ರಗಳ ನಿರೂಪಣೆ ಲವಲವಿಕೆುಂದ ಕೂಡಿದೆ.

ಇತರೆ : 1. ಇವರು ಪ್ರಥಮ ಹರಿದಾಸ ಮಹಿಳೆ 3. ಅವ್ವನವರನ್ನು ಅವರ ಪತಿ, ಮುದ್ಗಲಾಚಾರ್ಯರನ್ನು ಆದರಿಸುವಂತೆಯೇ ಮೈಸೂರಿನ ಅರಸರು ಸನ್ಮಾನಿಸುತ್ತಿದ್ದರು. ಇವರಲ್ಲಿಯ ವಿಶೇಷ ಪಾಂಡಿತ್ಯ ದ್ವೇವೀಶಕ್ತಿ ಭಕ್ತಿಗಳಿಂದ್ದಾಗಿ ಅರಮನೆಯಲ್ಲೇ ಇವರಿಗೆ ದೇವರ ಪೂಜೆ ನೈವೇದ್ಯಗಳ ವ್ಯವಸ್ಥೆಯನ್ನೂ ಮಾಡಿದರು. ಪಲ್ಲಕ್ಕಿ ಮೇಣೆ ಛತ್ತ ಚಾಮರ ಧನಿಕನ ಭೂಮಿ ಕಾಣಿಕೆಗಳನ್ನು ಕೊಟ್ಟು ಗೌರವಿಸಿದ್ದಾರೆ. 4. ಇವರ ಶಿಷ್ಯೆ ಭಾಗವ್ವ, ಇವರ ಒಂದಿಷ್ಟು ಕೀರ್ತತಿಗಳೂ ಲಭ್ಯವಾಗಿದೆ. ಪ್ರಯಾಗವ್ವ, ಪಾಂಡುರಂಗ ಅಂಕಿತಗಳಿಂದ ಹಾಡುಗಳನ್ನು ರಚಿಸಿದ್ದಾರೆ. ವಿಜಯಧ ಜ್ವೀಯ ಟೀಕೆಗೆ ಅನುಗುಣವಾಗಿ ಭಾಗವತದ ತೃತೀಯಸ್ಕಂದವನ್ನು ಸರಸಸುಂದರವಾಗಿ ಕನ್ನಡದಲ್ಲಿ ರಚಿಸಿರುವರು.

****



info from kannadasiri.in

By Hanamanta Tasgaonkar

ಕನ್ನಡ ಸಾಹಿತ್ಯಕ್ಕೆ, ಅದರಲ್ಲೂ ಮಾಧ್ವವಾಙ್ಮಯಕ್ಕೆ ಮಹಿಳೆಯರ ಕೊಡುಗೆಯೂ ಗಣನೀಯವಾಗಿದೆ. ಶ್ರೀ ಪುರಂದರದಾಸರ ಪತ್ನಿ-ಪುತ್ರಿಯರು, ಶ್ರೀ ರಾಘವೇಂದ್ರಸ್ವಾಮಿಗಳ ತಾಯಿಯವರು ಕಾವ್ಯರಚಿಸಿದ್ದರೆಂಬ ಮಾತಿದ್ದರೂ ಈಗ ಉಪಲಬ್ದವಿರುವ ಮಹಿಳಾ ಕೀರ್ತನಕಾರರಲ್ಲಿ ಗಲಗಲಿಯ ಅವ್ವನವರೇ ಮೊದಲಿಗರೆಂದು ಹೇಳಬಹುದು. ಗಲಗಲಿ ಮನೆತನ ಹಿಂದಿನಿಂದಲೂ ಶೌರ್ಯ, ಪಾಂಡಿತ್ಯಗಳಿಗೆÉ ಹೆಸರುವಾಸಿ. ಆದಿಲಶಾಹಿ, ನಿಜಾಮರು, ಪೇಶೆÉ್ವ, ರಾಣಿಸರಕಾರ, ಮೈಸೂರು ಅರಸರು ಹಾಗೂ ಇದೀಗ ಭಾರತ ಸರಕಾರದಿಂದಲೂ ಮಾನ-ಸಮ್ಮಾನಗಳನ್ನು ಪಡೆದ ಪ್ರಾಜ್ಞರು ಈ ಮನೆತನದವರು. ಇಂದು ರಾಷ್ಟ್ರಮಟ್ಟದ ಮನ್ನಣೆಗಳಿಸಿರುವ, ಸಂಸ್ಕøತ-ಕನ್ನಡ ಉಭಯ ಭಾಷಾಪ್ರವೀಣ ಗಲಗಲಿ ಆಚಾರ್ಯರ ವಂಶದ ಹಿರಿಯರು, ಗಲಗಲಿಯ ಅವ್ವನವರು. ಈಕೆ ಗಲಗಲಿ ಆಚಾರ್ಯರ ವಂಶದ, ಮಹರ್ಷಿಗಳ ಮನೆತನದವರೆÀಂದೇ ಪ್ರಸಿದ್ಧರಾಗಿದ್ದ ಶ್ರೀ ಮುದ್ಗಲಾಚಾರ್ಯರ ಧರ್ಮಪತ್ನಿ, ಹೆಸರು ರಮಾ. ಗಲಗಲಿ ವಂಶಸ್ತರು 'ಅಪ್ಪನವರು - ಅವ್ವನವರು’ - ಎಂದು ಮುದ್ಗಲಾ ಚಾರ್ಯರು ಮತ್ತು ರಮಾ ದಂಪತಿಗಳನ್ನು ಗೌರವಿಸಿ ಪೂಜಿಸುತ್ತಾರೆ. ಕ್ರಿ.ಶ.1927ರ ‘ಬಾಲಬೋಧ' (ಬೆಳಗಾವಿಯ ಶ್ರೀ ರಾಮತತ್ವ ಪ್ರಕಾಶನದವರು ಪ್ರಕಟಿಸಿದ ಪುಸ್ತಕ) ಪುಸ್ತಕದ ಪ್ರಸ್ತಾವನೆಯನ್ನು ಬರೆದಿರುವ ಗಲಗಲಿ ಮಧ್ವಮುನಿ ಆಚಾರ್ಯರು' ಅನುಸರಿಸಿ ಬರೆದ ಸಂಕ್ಷಿಪ್ತ ಚರಿತ್ರೆ'ಯಿಂದ ತಾವು ವಿಷಯ ಗ್ರಹಣ ಮಾಡಿರುವುದಾಗಿ ಸೂಚಿಸಿದ್ದಾರೆ. ಅದರಲ್ಲಿ ರಮಾ ಹಾಗೂ ಮುದ್ಗಲಾಚಾರ್ಯರ ಪಾಣಿಗ್ರಹಣ ಸಂದರ್ಭದ ಉಲ್ಲೇಖವಿದೆ. ಭೋಗಾಪುರ ಗ್ರಾಮದ ಶ್ಯಾನುಭೋಗರ ಮಗಳಾದ ಈಕೆಯನ್ನು ಶ್ರೀ ಮುದ್ಗಲಾಚಾರ್ಯರು ಶಾಸ್ತ್ರ ಸಂಪನ್ನರಾದ ತಮ್ಮ ಮಕ್ಕಳೆಲ್ಲರ ಅನುಮತಿಪಡೆದು, ಕನ್ಯೆಯ ಮಾತಾಪಿತೃಗಳ ಸಮ್ಮತಿಯೊಂದಿಗೇ ವಿವಾಹವಾದರೆಂದು ಹೇಳಿದೆÀ. ವಿವಾಹದ ವಿಚಾರವೂ ತುಂಬ ಕುತೂಹಲಕಾರಿಯಾದದ್ದೇ. ಒಮ್ಮೆ ಬಾಗಲಕೋಟ ಜಿಲ್ಲೆಯ ಗಲಗಲಿಯ ಪಂಡಿತ ಮುದ್ಗಲಾಚಾರ್ಯರು ತಮ್ಮ ಐದುಜನ ವಿದ್ವಾಂಸ ಪುತ್ರರೊಂದಿಗೆ ಮೈಸೂರಿನ ರಾಜಾಸ್ಥಾನಕ್ಕೆ ಹೋಗಿದ್ದರಂತೆ. ಅಲ್ಲಿಯ ವಿದ್ವಾಂಸರನ್ನು ವಾದದಲ್ಲಿ, ಪಾಂಡಿತ್ಯದಲ್ಲಿ ಸೋಲಿಸಿ, ಮಾನ-ಮರ್ಯಾದೆಯೊಂದಿಗೆ ಹಿಂತಿರುಗಿ ಬರುವಾಗ ಭೋಗಾಪುರ ಗ್ರಾಮದ ಭೋಗಾಪುರೇಶ ದೇವಸ್ಥಾನದಲ್ಲಿ ತಂಗಿದ್ದರು. ಅಲ್ಲಿ ಓಡಾಡಿಕೊಂಡಿದ್ದ ಅವಿವಾಹಿತೆ ಶ್ಯಾನುಭೋಗರ1 ಮಗಳು ಹನ್ನೆರಡರ ಬಾಲೆಯನ್ನು ಕಂಡು, ಅವಳನ್ನೆ ಮದುವೆಯಾಗಲು ನಿರ್ಧರಿಸಿದರು. ಮೊದಲು ಮಕ್ಕಳ ಒಪ್ಪಿಗೆ ಪಡೆದು ಬಳಿಕ ಶ್ಯಾನುಭೋಗರಿಗೆ ಸಾವಿರದ ಇನ್ನೂರು ರೂ. ತೆರಕೊಟ್ಟು, ತೊಂಬತ್ತು ವಯಸ್ಸಿನ ವಯೋವೃದ್ಧ ಮುದ್ಗಲಾಚಾರ್ಯರು2, ಈ ಕನ್ಯೆಯನ್ನು ಮದುವೆ ಮಾಡಿಕೊಂಡರು; ಮದುವೆಯಾದ ಎಂಟೇ ದಿನಗಳಲ್ಲಿ ಪರಲೋಕ ಯಾತ್ರೆ ಮಾಡಿದರು. ಸಾಯುವಾಗ ಮಕ್ಕಳನ್ನು ಬಳಿಗೆ ಕರೆದು, ತಮ್ಮ ವಿಧವೆ ಹೆಂಡತಿಗೆ ನೀವೇ ವಿದ್ಯಾಭ್ಯಾಸ ಮಾಡಿಸಬೇಕೆಂದು ಹೇಳಿದ್ದರಿಂದ ಮಕ್ಕಳೇ ಅವ್ವನಿಗೆ ವಿದ್ಯಾಗುರುಗಳೂ ಆದರು. ಕ್ರಮೇಣ ಅವ್ವನವರು ನ್ಯಾಯಶಾಸ್ತ್ರದಲ್ಲಿ ವಿಶೇಷ ಪರಿಣಿತಿಯನ್ನು ಪಡೆದದ್ದಲ್ಲದೆ ಪುಣೆಯ ಪೇಶ್ವೆ ದರ್ಬಾರಿನಲ್ಲಿ, ಔತ್ತರೇಯ ವಿದ್ವಾಂಸರು ದಕ್ಷಿಣದ ವಿದ್ವಾಂಸರನ್ನೆಲ್ಲ ಸೋಲಿಸಿದೆವೆಂದು ಬೀಗುತ್ತಿದ್ದಾಗ ಮುದ್ಗಲಾಚಾರ್ಯರ ಮಕ್ಕಳಾದ ಪಂಡಿತ ಷಟ್ಕರು ಸೋಲುವ ಸ್ಥಿತಿ ಬಂತೆಂದೂ ಆಗÀ ಅವ್ವನವರ ಸಹಾಯ ಪಡೆದು ವಾದಮಾಡಿ ಗೆದ್ದರೆಂದೂ ಪ್ರತೀತಿ. ಈ ಮಾತಿಗೆ ಪೇಶವಾಯಿಯವರು ಅವ್ವನವರಿಗೆ ಬಾಗಲಕೋಟ ಜಿಲ್ಲೆಯ ಬೀಳಗಿ ಟ್ರೇಜರಿಯಲ್ಲಿ ವರ್ಷಾಶನ ಹಾಕಿಕೊಟ್ಟಿದ್ದುದೇ ಸಾಕ್ಷಿ.

ಅವ್ವನವರ ಹಾಡುಗಳಲ್ಲಿ ದೊರೆಯುವ ಆಧಾರಗಳಿಂದ ಅವರ ಕಾಲವನ್ನು ಹೀಗೆ ಗುರ್ತಿಸಬಹುದು. ತಮ್ಮ ಮುಯ್ಯದ ಹಾಡಿನಲ್ಲಿ ಹಾಡು ಬರೆದು ಮುಗಿಸಿದ ದಿನವನ್ನು ಹೀಗೆ ಹೇಳಿದ್ದಾರೆ.

'ಜ್ಯೇಷ್ಠ ಬಹುಳ ಉತ್ಕøಷ್ಠ ಪಂಚಮಿತಿಥಿ

ಶ್ರೇಷ್ಠವಾಗಿದ್ದ ಬುಧವಾರ| ಈ ಕÀವನ ಶ್ರೀ

ಕೃಷ್ಣಗರ್ಪಿಸಿದೆ ಹರುಷಾಗಿ

ಭಾವ (ಯುವ?) ಸಂವತ್ಸರದಿ ದೇವಾಧಿದೇವನ

ಪಾವನವಾದ ಚರಿತ್ರೆಯ ರಚಿಸಿದೆ'

ಈ ವಿವರಗಳು ಎಫಿಮೆರಿಸ್ ಪ್ರಕಾರ 1695ನೇ ಇಸವಿ ಮೇ 22ನೇ ತಾರೀಕು ಬುಧವಾರ ಸರಿಯಾಗುತ್ತವೆ. ಉಳಿದಂತೆ ಕೆಲವು ಪೂರಕ ಅಂಶಗಳು ಹೀಗಿವೆ:

1. ಒಮ್ಮೆ ಶ್ರೀ ಮುದ್ಗಲಾಚಾರ್ಯರು ಉತ್ತರಾದಿಮಠದ ಸ್ವಾಮಿಗಳಾಗಿದ್ದ ಶ್ರೀ ಸತ್ಯಪೂರ್ಣ ತೀರ್ಥರನ್ನು ಸುಧಾಮಂಗಳಕ್ಕೆಳ ಆಮಂತ್ರಿಸಿದಾಗ ಶ್ರೀಪಾದಂಗಳವರು ಒಂದು ನಿರೂಪ ಪತ್ರ ಬರೆದಿದ್ದು, ಅದರಲ್ಲಿ ‘ಜಯ ಸಂವತ್ಸರದ ವೈಶಾಖ ಶುದ್ಧ ದಶಮಿ...' ಎಂಬ ಉಲ್ಲೇಖವಿದ್ದು, ‘ಮಿಗಿಲಾದ ವರ್ತಮಾನ ವಿದ್ಯಾಧೀಶಾಚಾರ್ಯರು ಹೇಳಲಾಗಿ ಮನಸ್ಸಿಗೆ ಬಂದಿತು ಇತಿ ನಿರೂಪ' - ಎಂದಿರುವರು. ಅಂದರೆ, ಮುದ್ಗಲಾಚಾರ್ಯರು ತಮ್ಮ ಪುತ್ರ ವಿದ್ಯಾಧೀಶಾಚಾರ್ಯರೊಡನೆ ಶ್ರೀಗಳವರಿಗೆ ಹೇಳಿ ಕಳುಹಿಸಿದ್ದರೆಂಬ ವಿಚಾರ ಇಲ್ಲಿ ಸ್ಪಷ್ಟವಾಗಿದೆ. ಮಠಾಧೀಶರ ಮೂಲ ಪತ್ರದಿಂದ ಈ ವಿಚಾರ ತಿಳಿಯುತ್ತದೆ.

2. ಪೇಶವೆ ದರ್ಬಾರಿನಲ್ಲಿ ಅವ್ವನವರು ತಮ್ಮ ವಿದ್ವತ್ತನ್ನು ಪ್ರದರ್ಶಿಸಿ ಜಯಗಳಿಸಿ ಕೊಟ್ಟದ್ದಕ್ಕಾಗಿ ವರ್ಷಾಶನ ಪಡೆದ ವಿಚಾರವನ್ನು ಪ್ರಸ್ತಾಪಿಸಲಾಗಿದೆಯಷ್ಟೆ. ಕ್ರಿ.ಶ.1740ರ ಅನಂತರ ಪೇಶವೆಗಳ ಆಳ್ವಿಕೆಯ ಅವಸಾನ ಪ್ರಾರಂಭವಾಗುವುದರಿಂದ ಅದಕ್ಕೆ ಮುಂಚೆಯೇ ಅವ್ವನವರು ಈ ವರ್ಷಾಶನವನ್ನು ಪಡೆದಿರಬೇಕು.

3. ಮೈಸೂರಿನ ಅರಸರಾಗಿದ್ದ ಶ್ರೀ ಕೃಷ್ಣರಾಜ ಒಡೆಯರಿಂದಲೂ ಅವ್ವನವರಿಗೆ ಸನ್ಮಾನದೊರಕಿದೆ. ಅರಸರು ಇವರಿಗೆ ಮೇಣೆ, ನಗನಾಣ್ಯ, ವಸ್ತ್ರಾಭರಣಗಳನ್ನಿತ್ತು ಗೌರವಿಸಿದ್ದರು. ಇವರ ವಿದ್ವತ್ತನ್ನು ಕಂಡು ಕೇಳಿದ್ದ ರಾಜರು ಸ್ವತಃ ಇವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ವೈಭವದಿಂದ ಅರಮನೆಗೆ ಕರೆದುಕೊಂಡು ಹೋಗಿದ್ದರೆನ್ನಲಾಗಿದೆ.

4. ಬಾಗಲಕೋಟೆಯಲ್ಲಿ ಜನಿಸಿದ ಶ್ರೀ ಪ್ರಸನ್ನವೆಂಕಟದಾಸರು (ಕ್ರಿ.ಶ.1680/1752) ಈ ಮುದ್ಗಲಾಚಾರ್ಯರ ಶಿಷ್ಯರು. ಇವರಲ್ಲೇ ಶಾಸ್ತ್ರಾಭ್ಯಾಸ ಮಾಡಿದವರು. ಗುರುಗಳನ್ನು ಕುರಿತು 'ಭಜಿಸಿ ಬದುಕೆಲೋ ಮುದ್ಗಲಾರ್ಯರನು' ಎಂದು ಸ್ತುತಿಸಿರುವರು. ಅಲ್ಲದೆ 'ಸ್ವೀಯಪಾದ ನೀರಜಾನುರಕ್ತ ಮುದ್ಗಲಸ್ಯಮೇ| ಶ್ರೀಗುರೋರು ಮಾನಸಾಂಬು ಜಾಲಯೋದಯೋದಧಿ :'-ಎಂದಿದ್ದಾರೆ.

ಮೇಲಣ ಈ ಕೆಲವು ಆಧಾರಗಳಿಂದ ಅವ್ವನವರು ಕ್ರಿ.ಶ.1670 ರಿಂದ 1760ರ ಕಾಲದಲ್ಲಿ ಜೀವಿಸಿದ್ದರೆನ್ನ ಬಹುದು. ಅವರು ತಮ್ಮ ಕೊನೆಗಾಲವನ್ನು ತಮ್ಮ ಹಿರಿಯರು ಬಾಳಿ ಬದುಕಿದ್ದ ಶೂರ್ಪಾಲಿ ಗ್ರಾಮದಲ್ಲೇ ಕಳೆದು, ಅಲ್ಲಿಯೇ ಹರಿಪಾದವನ್ನು ಸೇರಿದರು.

ಇನ್ನೊಂದು ಸ್ವಾರಸ್ಯವಾದ ವಿಚಾರವೆಂದರೆ ಅವ್ವನವರು ತಮ್ಮ ಹಾಡಿನಲ್ಲಿ ಗುರುಪರಂಪರೆ ಹೇಳುತ್ತ ಕ್ರಿ.ಶ.1797ರಲ್ಲಿದ್ದ ಶ್ರೀ ಸತ್ಯಧರ್ಮ ತೀರ್ಥರನ್ನೂ ಸ್ತುತಿಸಿದ್ದಾರೆ ಬಹುಶಃ ಈ ಹೆಸರನ್ನು ಅಂದು ಹಾಡನ್ನು ಪ್ರತಿ ಮಾಡಿದವರು ಬರೆದು ಸೇರಿಸಿರಬೇಕು; ಅಥವಾ ಅವ್ವನವರು ದೀರ್ಘಾಯುಷಿಗಳಾಗಿದ್ದು ಸು.125 ವರ್ಷಗಳ ಕಾಲ ಬಾಳಿ ಬದುಕಿದ್ದಿರಬೇಕು. ಹೀಗಾಗಿ ಅವ್ವನವರ ಕಾಲವನ್ನು ಖಚಿತವಾಗಿ ಹೇಳುವುದು ಸಾಧ್ಯವಿಲ್ಲ. ಅದಕ್ಕೆ ಇನ್ನೂ ಸಾಕಷ್ಟು ಸಂಶೋಧನೆ ನಡೆಯಬೇಕಿದೆ.

ಕೀರ್ತನೆಗಳು

ಹದಿನೇಳನೆಯ ಶತಮಾನದ ಉತ್ತರಾರ್ಧ ಹಾಗೂ ಹದಿನೆಂಟನೆಯ ಶತಮಾನದ ಪೂರ್ವಾರ್ಧದಲ್ಲಿ ಜೀವಿಸಿದ್ದಿರಬಹುದಾದ ಅವ್ವನವರು ರಾಮೇಶ, ರಮಿಅರಸು, - ಇತ್ಯಾದಿ ಅಂಕಿತಗಳಿಂದ ಭಕ್ತಿಪ್ರದ ಮುಯ್ಯದ ಹಾಡುಗಳು, ಬೀಗರ ಹಾಡುಗಳು ಕೋಲು ಹಾಡುಗಳು, ಶೃಂಗಾರ ತಾರತಮ್ಯ ಮೋರೆಗೆ ನೀರುತಂದ ಹಾಡುಗಳು ಮೊದಲಾದ ಕೃತಿಗಳನ್ನು ರಚಿಸಿರುವುದಾಗಿ ತಿಳಿದುಬರುತ್ತದೆ ಆದರೆ ಈಗ ನಮಗೆದೊರೆತಿರುವುದು ಮುಯ್ಯದ ಹಾಡುಗಳು ಮಾತ್ರ. ಅಡಿಗೆ ಮಾಡುತ್ತ ಮಾಡುತ್ತಲೇ ಆಲಿಸುತ್ತ,ಮಾತ್ರ ಕೇವಲ ಶ್ರವಣ ಮಾತ್ರದಿಂದಲೇ ಮಕ್ಕಳಿಂದ ಶಾಸ್ತ್ರಾಭ್ಯಾಸಮಾಡಿ ಪಂಡಿತರಾದ ಅವ್ವನವರು, ' ಬಲ್ಲಿದ ಗುರುಗಳ ಎಲ್ಲ ಹಿರಿಯರ ದಯದಿ | ಬಲ್ಲಷ್ಟು ತತ್ವರಚಿಸಿದೆ' ಎಂದಿದ್ದಾರೆ.

'ಮುದ್ಗಲ್ಲವಾಸನ ಶುದ್ಧನಾಮದವರು

ಮುದ್ದುಪಾದಗಳ ಸ್ಮರಿಸುತ ರಚಿಸಿದ ಅ

ಪದ್ಧÀ ನೋಡದಲೆ ಹರಿಕೊಳ್ಳೊ'

ಮೂಢಳು ನಾನೊಂದು ಬೇಡಿ ಬಯಸಿಕೊಂಡೆ

ಮಾಡಿದೆ ರಚನಿ ಮನಉಬ್ಬಿ’ - ಎಂದು ವಿನಯವನ್ನು ಮೆರೆದಿರುವರು. ಕೊಂಗಬುದ್ಧಿಯನ್ನು ಅಷ್ಟಮದಗಳನ್ನು ತಂದೆ ರಾಮೇಶನ ಪಾದಕ್ಕೆ ಅರ್ಪಿಸಿ, e್ಞÁನಸೂರ್ಯನ ಉದಯಮಾಡಿಸಬೇಕೆಂದು ಕೇಳುವ ಪರಿ ಹೀಗಿದೆ:

'ಅಷ್ಟಮದವು ತಮವುಎಂಬೊ

ಕುಟ್ಟಿ ಹಿಟ್ಟುಮಾಡಿಸಿ

ಸಿಟ್ಟು ಕೋಪವೆಂಬೊ ಬಣವಿ

ಒಟ್ಟಿ ಕೆಂಡ ಹೇರಿಸಿ'

ಸತ್ವ ರಜವು ತಮವು ಎಂಬೊ

ಕತ್ತಲಿಯ ಅಡಗಿಸಿ

ಮತ್ತೆ e್ಞÁನ ಸೂರ್ಯನ ಪ್ರ

ಶಸ್ತ ಉದಯ ಮಾಡಿಸಿ...'

ಮುಯ್ಯದ ಹಾಡುಗಳು ಅವ್ವನವರ ವಿಶೇಷ ರಚನೆಗಳು. ಪುರಾಣದ ಹಿನ್ನೆಲೆಯಲ್ಲಿ ರಚಿತವಾಗಿರುವಂಥ ಹಾಡುಗಳವು. ‘ಮುಯ್ಯಿ' ಕೊಡುವ ಮತ್ತು ಹಿಂತಿರುಗಿಸುವ ಸಂಪ್ರದಾಯದ ನೆವದಲ್ಲಿ ಭಾರತ ಭಾಗವತಾದಿ ಪುರಾಣ ಪಾತ್ರಗಳು, ಪುರಾಣ ಪ್ರಸಂಗಗಳು, ಅವುಗಳ ಮನೋಧರ್ಮ, ಬಗೆಬಗೆಯ ವರ್ಣನೆಗಳು ನಾಮುಂದು ತಾಮುಂದು ಎಂದು ಧುಮ್ಮಿಕ್ಕುತ್ತವೆ. ಪರಸ್ಪರ ಮಾತಿನ ಚಕಮಕಿ, ಹಾಸ್ಯ, ವಿಡಂಬನೆಗಳು ಮುಗಿಲು ಮುಟ್ಟುತ್ತವೆ, ಅವ್ವನವರ ಮುಯ್ಯದ ಹಾಡುಗಳನ್ನು `ಮುಯ್ಯಕೊಟ್ಟಹಾಡು' ಮತ್ತು `ಮುಯ್ಯ ಹಿಂತಿರುಗಿಸಿದ ಹಾಡು' - ಎಂದು ಎರಡು ನೆಲೆಗಳಲ್ಲಿ ಪರಿಭಾವಿಸಬಹುದು. ಈ ಹಾಡುಗಳಲ್ಲಿ ಉದ್ದಕ್ಕೂ ದ್ರೌಪದಿ, ಸುಭದ್ರೆ, ರುಕ್ಮಿಣಿ, ಸತ್ಯಭಾಮೆ, ಗಂಗೆ-ಗೌರಿ, ಕೃಷ್ಣ, ವಿಷ್ಣು-ಶಿವ ಈ ಎಲ್ಲ ಪಾತ್ರಗಳ ಸಡಗರ ಸಂಭ್ರಮಗಳೊಂದಿಗೆ ಶ್ರೀಹರಿಯ ದಿವ್ಯಲೀಲಾ ವಿಭೂತಿಗಳೂ ಕೋಡಿವರಿದಿವೆ.


ಸುಭದ್ರೆ ದ್ರೌಪದಿಯರು ತಮ್ಮ ಅಣ್ಣ ಶ್ರೀಕೃಷ್ಣನ ದರ್ಶನಾಕಾಂಕ್ಷಿಗÀಳಾಗಿ ಮುಯ್ಯದ ನೆಪ ಮಾಡಿಕೊಂಡು ದ್ವಾರಕೆಗೆ ಬರುವರು. ಕೃಷ್ಣನ ಹಾಗೂ ಅವನ ಪತ್ನಿಯರಾದ ರುಕ್ಮಿಣಿ ಸತ್ಯಭಾಮೆಯರನ್ನು ಮನಸೋಚ್ಛೆ ಸ್ತುತಿಸಿ ಅವರೊಂದಿಗೆ ವಾದ ಮಾಡಿದಂತೆ ನಟಿಸಿ ಧನ್ಯರಾಗುವರು. ತಾವು ಧನ್ಯರಾದುದಲ್ಲದೆ ಮುಂಬರುವ ಭಕ್ತರೂ ಈ ಪದ್ಧತಿಯನ್ನನುಸರಿಸಿ ಧನ್ಯತೆಪಡೆಯಲಿ ಎಂದು ಆಶಿಸಿ, ಆಣಿಯಿಟ್ಟು ತಮ್ಮ ತಮ್ಮ ಮನೆಗಳಿಗೆ ಹಿಂತಿರುಗುವರು ಇದು ಸ್ಥೂಲವಾಗಿ ಮುಯ್ಯಕೊಟ್ಟ ಹಾಡಿನ ವಸ್ತು. ಅಂತೆಯೇ ತಮಗೆ ಪ್ರೀತಿಪಾತ್ರರೂ ಭಗವದ್ಭಕ್ತರೂ ಆದ ಪಾಂಡವರನ್ನು ಕಾಣಲು, ಪ್ರೀತಿಯಿಂದ ಆಲಿಂಗಿಸಲು ಬಯಸಿದ ಶ್ರೀಕೃಷ್ಣ ತನ್ನ ಪತ್ನಿಯರಿಂದಕೂಡಿ ವೈಭವದಿಂದ ಮುಯ್ಯ ಹಿಂತಿರುಗಿಸಲು ಹಸ್ತಿನಾವತಿಗೆ ಬರುತ್ತಾನೆ. ಪುನಃ ಅಲ್ಲಿ ಪರಸ್ಪರರಿಗೆ ವಾಗ್ವಾದಗಳು, ಹಾಸ್ಯ, ವಿಡಂಬನೆ ಎಲ್ಲ ಸಾವಕಾಶವಾಗಿ ನಡೆದು ಎಲ್ಲರೂ ಸಂತೋಷ ಸಡಗರ ಸಂಭ್ರಮಗಳಿಂದ ಶುಭ ಹಾರೈಸುತ್ತ ಹಿಂತಿರುಗುವರು. -ಇದು ಮುಯ್ಯ ಹಿಂತಿರುಗಿಸಿದ ಹಾಡಿನ ವಸ್ತು.

ದಿಕ್ಕು ತುಂಬಿತು ಲೆಕ್ಕವಿಲ್ಲದೆ ಜನರು

ಕಾಶತುಂಬಿತು ಎಲ್ಲಕೋಶತುಂಬಿತು

ಆಶೆಬಡುತಲೆ ಜನರು ಸೋಸಿನ ಮುಯ್ಯಕ್ಕೆ

ಹಾದಿ ತುಂಬಿತು ಎಲ್ಲ ಬೀದಿ ತುಂಬಿತು

ಅಂಬರ ತುಂಬಿತು ಪಟ್ಟಣ ತುಂಬಿತು

ಒಂದಿಷ್ಟೂ ಬಿಡದಲೆ||

ಮುಯ್ಯಕೊಡುವ ಮಂಗಳಕಾರ್ಯದಲ್ಲಿ ಪಾಂಡವರೊಡಗೂಡಿ ಸುಭದ್ರೆ ದ್ರೌಪದಿಯರು ಮಾತ್ರ ಭಾಗವಹಿಸಿರಲಿಲ್ಲ. ದೇವಾನುದೇವತೆಗÀಳು ತಾಳ ತಂಬೂರಿಯವರು, ತುಂಬುರ ನಾರದರು, ಸಿದ್ಧ ಸಾಧ್ಯರು, ಪ್ರಸಿದ್ಧ ನಾಟಕಕಾರರು ಎಲ್ಲರೂ ಕೂಡಿ ' ಕೋಟಿ ಸೂರ್ಯರ ಧಾಟಿ ತೋರೋ ಅಂಗಳದಿ | ಮುತ್ತಿನ ತೋರಣ ನವರತ್ನದ ಹಂದರ | ಪಚ್ಚದ ಪಾವಟಿಗೆ ರತ್ನ ಹಚ್ಚಿದ ಹೊಸ್ತಿಲ'ನ್ನು ದಾಟಿ ಒಳಗೆ ಪ್ರವೇಶಿಸಿದರಂತೆ! ಇದು ಕೃಷ್ಣನ ದ್ವಾರಕೆಯ ವೈಭವ. ಕೃಷ್ಣಾರ್ಜುನರ, ರುಕ್ಮಿಣಿ ಸತ್ಯಭಾಮೆ; ಸುಭದ್ರೆದ್ರೌಪದಿಯರ ಪರಿಹಾಸ್ಯಭರಿತ ಸಂಭಾಷಣೆಗಳು ರಸವತ್ತಾಗಿವೆ. ಅವ್ವನವರ ಭಾಷೆ, ಉಪಮಾ-ರೂಪಕಾದಿ ಅಲಂಕಾರಗಳು, ನಾಣ್ಣುಡಿ, ಪದಪುಂಜಗಳು ನಿಜಕ್ಕೂ ಅಚ್ಚರಿಯುಂಟು ಮಾಡುತ್ತವೆ.

'ನೇತ್ರವೆಂಬೊ ಕುಮುದ ಚಕ್ಕನರಳುತ'

'ಕಂದಗೆÉ ಸ್ತನವೊಂದುಬಿಂದು ಬಾಯೊಳಗಿಟ್ಟು'

'ತಾರಕ್ಕಿ ಹೊಳೆವಂತೆ ತೋರ ದೀವಿಗೆ ಎಷ್ಟ'-ಇವು

ಎಲ್ಲೋ ಒಂದೆರಡು ಉದಾಹರಣೆಗÀಳು. 'ಘಿಲಿ ಘಿಲಿ ಘಿಲಿಕೆಂದು ಗೆಜ್ಜೆ...ಘಿಲಕು ಎನ್ನುತಲಿ' -ಎಂದು ಆ ನರ್ತನ ಪ್ರಿಯ ಹರಿಯನ್ನು ಭಕ್ತಿಯಿಂದ ತಾಳಕ್ಕೆ ತಕ್ಕಂತೆ ಕುಣಿಸಿದ್ದಾರೆ, ಅವ್ವನವರು. ಸಜ್ಜನರ ಸಹವಾಸ ಹೇಗಿರುತ್ತದೆ ಎಂಬುದನ್ನು ‘ಭಾವಜ್ಞರ ಸಂಗ ಶಾವಿಗೆ ಉಂಡಂತೆ' -ಎಂದು ಹೇಳಿರುವುದಲ್ಲದೆ' ಪಾಮರರ ಸಹವಾಸ ಬೇವಿನಹಾಲು ಕುಡಿದಂತೆ' -ಕಕ್ಕಟ್ಟೆ ಕಹಿ ಅನುಭವ ವೆಂಬುದನ್ನು ಹೇಳಿರುವರು ಹೀಗೆ ಅವ್ವನವರ ಕಾವ್ಯದ ರಸಾನುಭೂತಿ, ಭಕ್ತಿಯಕುಲುಮೆಯಲ್ಲಿ ಅನುಭವದ ಮೇಲೆ ಪುಟಗೊಂಡೇ ಪುಟಿಯುತ್ತದೆ. ‘ಹಾಡುಗಳಲ್ಲಿ ಬರುವ ಪರಸ್ಪರ ಮಾತಿನ ಚಕಮಕಿಗಳು, ಮಾರ್ಮಿಕ ಉತ್ತರಗಳು, ಪ್ರಸಂಗಾವಧಾನದ ರೀತಿ ಲವಲವಿಕೆಯಿಂದ ಕೂಡಿದೆ' ಸುಭದ್ರೆ-ರುಕ್ಮಿಣಿ ಹಾಗೂ ರುಕ್ಮಿಣಿ-ದ್ರೌಪದಿಯರ ಮಾತುಗಳು ಈ ದೃಷ್ಟಿಯಿಂದ ಗಮನಾರ್ಹ.

'ಜೋಗುಳದಹಾಡು' ಅವ್ವನವರ ಇನ್ನೊಂದು ಕೃತಿ, ಇದೂ ಕೂಡ ಸರಳ ಮಾತುಗಳಲ್ಲಿ ಸುಲಭಧಾಟಿಯಲ್ಲಿ ನಿರೂಪಿತವಾಗಿದೆ. 52 ನುಡಿಗಳಲ್ಲಿರುವ ಈ ಹಾಡಿನಲ್ಲಿ ಮಗು ಕೃಷ್ಣನನ್ನು ವಿಧಿವತ್ತಾಗಿ ತೊಟ್ಟಿಲಿನಲ್ಲಿ ಮಲಗಿಸಿ ಜೋಗುಳ ಹಾಡಿದ ಪ್ರಸ್ತಾಪವಿದೆ. ಕೃಷ್ಣ ಹುಟ್ಟಿದ ಕೂಡಲೇ ಕಂಸನ ಭಯದಿಂದ ವಸುದೇವ ಅವನನ್ನೆತ್ತಿಕೊಂಡು ಗೋಕುಲದಲ್ಲಿ ಯಶೋದೆಯ ಬಳಿಯಲ್ಲಿಟ್ಟು ಯಶೋದೆಯ ಮಡಿಲಿನ ಹೆಣ್ಣುಕೂಸನ್ನು ಒಯ್ದು ದೇವಕಿಯ ಬದಿಯಲ್ಲಿಟ್ಟನೆಂಬುದರಿಂದ ಕೀರ್ತನೆ ಪ್ರಾರಂಭವಾಗುತ್ತದೆ. ಕ್ರಮವಾಗಿ ಮಗುವಿಗೆ ಎರೆದು ಜಾತಕರ್ಮಮಾಡಿ, ತೊಟ್ಟಿಲಿಡುವ ಶಾಸ್ತ್ರವನ್ನು ಹಂತಹಂತವಾಗಿ ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. ಇನ್ನೊಂದು ಸೇತುಬಂಧನದ ಹಾಡು. ರಾಮಭಕ್ತ ಹನುಮ ಮತ್ತು ಕೃಷ್ಣ ಭಕ್ತ ಪಾರ್ಥರನಡುವೆ ರಾಮಹೆಚ್ಚು ಕೃಷ್ಣಹೆಚ್ಚು ಎನ್ನುವ ವಾಗ್ವಾದ ಪ್ರಾರಂಭವಾಗುತ್ತದೆ. ವಾಗ್ವಾದದ ನೆಪದಲ್ಲಿ ರಾಮ-ಕೃಷ್ಣರಿಬ್ಬರ ಮಹಿಮೆಗಳನ್ನೂ ಹೇಳುತ್ತ ಹೋಗುವ ತಂತ್ರ ಮೆಚ್ಚುವಂಥದ್ದು. ಕೊನೆಗೆ ಪಾರ್ಥ ಸೋತರೂ ಹನುಮ ಅವನ ಧ್ವಜದಲ್ಲಿ ನೆಲೆಸಿದನೆನ್ನುವಲ್ಲಿಗೆ ಕೀರ್ತನೆ ಮುಗಿದಿದೆ. ಮೇಲಿನ ಈ ಎರಡು ಕೀರ್ತನೆಗಳನ್ನೂ ಅವ್ವನವರವೆಂದು ಹಾಡುತ್ತಾರಾದರೂ, ಅವರವೇ ಎಂದು ಖಚಿತವಾಗಿ ಹೇಳುವುದು ಕಷ್ಟ ಆದ್ದರಿಂದ ಅವುಗÀಳನ್ನು ಅನುಬಂಧವಾಗಿ ಕೊಟ್ಟಿದೆ. (ನೋಡಿ :ಅನುಬಂಧ-1)

ಅವ್ವನವರೊಂದಿಗೆ ಅವರ ಶಿಷ್ಯೆ ಭಾಗಮ್ಮ ಸದಾ ಇರುತ್ತಿದ್ದರೆನ್ನಲಾಗಿದೆ. ಪ್ರಯಾಗಮ್ಮ ಅಂಕಿತದಿಂದ ಪ್ರಸಿದ್ಧರಾಗಿದ್ದ ಇವರು ಅವ್ವನವರೊಂದಿಗೆ ಕಾಶಿಯಲ್ಲಿ ವಾಸಿಸುತ್ತಿದ್ದಾಗ ರೋಗಪೀಡಿತರಾಗಿದ್ದು ಅವ್ವನವರ ಆe್ಞÁನುಸಾರ ಭಾಗವತ ತೃತೀಯ ಸ್ಕಂಧವನ್ನು ಕನ್ನಡದಲ್ಲಿ ರಚಿಸಿ ರೋಗÀ ಮುಕ್ತರಾದರಂತೆ. `ಏಸುಜನ್ಮದ ಪುಣ್ಯವಾಸವಾಯಿತೋ ವಿಷ್ಣುದಾಸರ ದಾಸಿ ನಾನಾದೆ'-ಎಂದು ಧನ್ಯತಾಭಾವವನ್ನು ವೆÀುರೆದಿರುವರು 'ಕಾಶಿ ಪಟ್ಟಣದಲ್ಲಿ ವಾಸಾದ ಭಾಗಮ್ಮನು ಕಟ್ಟಿದ ಪದ್ಯವನು ಭೂಸುರರೆಲ್ಲರು ಉದಾಸೀನ ಮಾಡದೆ ಲೇಸಾಗಿ ಪದ್ಯವ ತಿದ್ದುವದÀು’ -ಎಂಬ ವಿನಯವನ್ನು ಮೆರೆದಿದ್ದಾರೆ, ಭಾಗಮ್ಮ.

ಒಟ್ಟಿನಲ್ಲಿ ಸಂಸ್ಕøತ ವಿದ್ವಾಂಸರ, ಶಾಸ್ತ್ರಸಂಪನ್ನರ, ವೇದಪಾರಂಗತರ ಮನೆಯ ಹೆಣ್ಣು ಮಗಳೊಬ್ಬಳು ಕನ್ನಡದಲ್ಲಿ ಕೃತಿರಚನೆ ಮಾಡಿದ್ದಲ್ಲದೆ, ಅಂದಿನ ಸಾಮಾಜಿಕ ಪರಿಸರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ವಹಿಸಿದ್ದು ಹೆಗ್ಗಳಿಕೆಯೇ ಸರಿ. ಉತ್ತರ ಕರ್ನಾಟಕದ ಕೆಲವೆಡೆಗಳಲ್ಲಿ ಇಂದಿಗೂ ಅವ್ವನವರ ಮುಯ್ಯದ ಹಾಡು, ಸೇತುಬಂಧನದ ಹಾಡುಗಳನ್ನು ಹಬ್ಬ ಹರಿದಿನಗಳಲ್ಲಿ ಶ್ರದ್ಧೆ-ಭಕ್ತಿಗಳಿಂದ ಹಾಡುತ್ತಾರೆ.

ಹಸ್ತಪ್ರತಿ - ಸಂಪಾದನೆ

ಅವ್ವನವರ ಕೀರ್ತನೆಗಳು ಬಾಯಿಂದ ಬಾಯಿಗೆ ಸಾಗಿಬಂದಿದ್ದು, ಕೆಲವರು ಅವುಗಳನ್ನು ಬರೆದಿಟ್ಟುಕೊಳ್ಳವ ಮನಸ್ಸು ಮಾಡಿದ್ದು ನಿಜಕ್ಕೂ ಸಂತಸದ ಸಂಗತಿ. ನನ್ನ ಮಾವಂದಿರಾದ ಪಂಡಿತ ಪ್ರಾಣನಾಥಾಚಾರ್ಯ ಕೂರ್ಮಾಚಾರ್ಯ ಗಲಗಲಿಯವರಲ್ಲಿದ್ದ ಅಂತಹ ಒಂದು ಹಸ್ತಪ್ರತಿ ನನಗೆ ದೊರೆಯಿತು. 1927 ರಲ್ಲಿ ಪ್ರಕಟಗೊಂಡ ಕೆಲ ಹಾಡುಗಳ ಮುದ್ರಿತ ಪ್ರತಿಯೊಂದು ದೊರೆಯಿತು. ಬಾಲಬೋಧ ಲಿಪಿಯ (ದೇವನಾಗÀರೀ ಲಿಪಿ) ಪುಸ್ತಕವದು. ಸುಮಾರು ಎರಡು ವರ್ಷಗಳ ಕಾಲ ಊರೂರು ಅಲೆದು ಅವ್ವನವರ ಕೀರ್ತನೆಗಳ ಹಸ್ತಪ್ರತಿಗಾಗಿ ಹುಡುಕಾಡಿದೆ. ಬಲ್ಲವರೊಡನೆ ಅವರ ಜೀವನ-ಕೃತಿಗಳನ್ನು ಕುರಿತು ಚರ್ಚೆ ಮಾಡಿ ಸಾಕಷ್ಟು ವಿಷಯ ಸಂಗ್ರಹಿಸಿದೆ. ಕೆಲವರಲ್ಲಿ ಅಲ್ಪಸ್ವಲ್ಪ ಮಾಹಿತಿ ಇದ್ದರೂ ಅವರು ಕೊಡಲು ಒಪ್ಪಲಿಲ್ಲ. ಅಂತಹ ಕೆಲವರ ಮನಸ್ಸು ಒಲಿಸಿ ಅವರನ್ನು ಕಾಡಿಸಿ, ಪೀಡಿಸಿ ಅಲ್ಪಸ್ವಲ್ಪ ಸಂಗ್ರಹಿಸಲು ಸಾಧ್ಯವಾಯಿತು. ಆ ಪೈಕಿ ಗಲಗಲಿಯ ಕು.ಸೌ.ಶೀಲಾಬಾಯಿಗುಡಿ ಅವರಲ್ಲಿ ಹೆಚ್ಚಿನ ಹಾಡುಗಳು ದೊರೆತವು ಬೇರೆ ಬೇರೆ ಸ್ಥಳಗÀಳಲ್ಲಿ ಹೆಚ್ಚನ ಪ್ರತಿಗಳು ದೊರೆತರೂ ಅವೆಲ್ಲ ತದ್ರೂಪಿ ಪ್ರತಿಗಳೇ ಆಗಿದ್ದುವು. ಹೀಗೆ ಒಟ್ಟಾರೆ ದೊರೆತ ಹತ್ತು ಹಸ್ತಪ್ರತಿಗಳಲ್ಲಿ ಕು.ಸೌ.ಶೀಲಾಬಾಯಿಗುಡಿ ಮತ್ತು ಕು.ಸೌ.ಶಾಲಿನಿಯದುನಂದನ ಗಲಗಲಿ ಇವರಲ್ಲಿದ್ದ ಹಸ್ತ ಪ್ರತಿಗಳ ಸಹಾಯದಿಂದ ಪ್ರಸ್ತುತ ಸಂಪುಟವನ್ನು ಸಂಪಾದಿಸಲಾಗಿದೆ. ಹಸ್ತಪ್ರತಿಗಳಲ್ಲಿ ಸ್ಖಾಲಿತ್ಯಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಗದ್ಯವನ್ನು ಬರೆಯುವ ಹಾಗೆ ಸಾಲುಗಳನ್ನು ಉದ್ದಕ್ಕೆ ಬರೆಯಲಾಗಿದೆ. ಕೇವಲ ಹಾಡುಗರ ಯಾ ಓದುಗರ ಶ್ರದ್ಧೆಯನ್ನು ಮಾತ್ರ ಆ ಕೀರ್ತನೆಗಳ ಬರವಣೆಗೆಯಲ್ಲಿ ಕಾಣುತ್ತೇವೆ. ಅಕ್ಷರಗಳೂ ಅಷ್ಟು ಸ್ಫುಟವಾಗಿಲ್ಲ. ಹಾಗಾಗಿ ಆನೇಕಬಾರಿ ಓದಿ, ತಿದ್ದಿಬರೆದು ಪ್ರಾಸಕ್ಕನುಗುಣವಾಗಿ ಸಾಲುಗಳನ್ನು ವಿಂಗಡಿಸುವುದು ಸಾಕಷ್ಟು ಶ್ರಮಸಾಧ್ಯವಾದ ಕೆಲಸವಾಯಿತು.

ಪ್ರಸ್ತುತ ಸಂಪುಟದ ಸಂಪಾದನೆಯ ಕೆಲಸವನ್ನು ಇದೀಗ ಮುಗಿಸಿ ನಿಮ್ಮ ಮುಂದಿಡುತ್ತಿದ್ದೇನೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಮಗ್ರದಾಸವಾಙ್ಮಯ ಪ್ರಕಟಣಾ ಯೋಜನೆಯನ್ನು ಹಮ್ಮಿಕೊಂಡಿರುವುದು. ಸ್ತುತ್ಯಾರ್ಹ. ಆ ಯೋಜನೆಯಡಿ `ಗಲಗಲಿ ಅವ್ವನವರ ಕೀರ್ತನೆಗಳು' ಸಂಪುಟವನ್ನು ಸಿದ್ಧಪಡಿಸಲಾಗಿದೆ. ಈ ಸಂಪುಟದ ಕೆಲಸವನ್ನು ನನಗೆ ವಹಿಸಿಕೊಟ್ಟ ಇಲಾಖೆಯ ನಿರ್ದೇಶಕ ಶ್ರೀ ವೈ.ಕೆ.ಮುದ್ದುಕೃಷ,್ಣ ಹೆಜ್ಜೆ ಹೆಜ್ಜೆಗೂ ಸೂಕ್ತ ಸಲಹೆ ಸಹಕಾರಗಳನ್ನಿತ್ತು ಸಹಕರಿಸಿದ ಯೋಜನೆಯ ನಿರ್ವಾಹಕ ಸಂಪಾದಕರಲ್ಲೊಬ್ಬರಾದ ಡಾ.ಟಿ.ಎನ್.ನಾಗರತ್ನ ಅವರಿಗೂ, ಪ್ರೇರಣೆ ಪ್ರೋತ್ಸಾಹಗಳನ್ನಿತ್ತ ಮತ್ತೊಬ್ಬ ಸಂಪಾದಕ ಡಾ.ಶ್ರೀನಿವಾಸ ಹಾವನೂರರಿಗೂ ನನ್ನ ಕೃತಜ್ಞತಾಪೂರ್ವಕ ನಮಸ್ಕಾರಗಳು ಸಲ್ಲುತ್ತವೆ. 

- ಹಣಮಂತ ತಾಸಗಾಂವಕರ

****

ಗಲಗಲಿ ಅವ್ವನವರು



ಪ್ರಪ್ರಥಮ ಹರಿದಾಸಿನಿ ಎಂದು ಹರಿದಾಸ ಸಾಹಿತ್ಯ ದಲ್ಲಿ ಗುರುತಿಸಲ್ಪಡುವ ಗಲಗಲಿ ಅವ್ವನವರು ವಾಸವಾಗಿದ್ದ ಮನೆ 
ಮತ್ತು
ತಾವೂ ಗಲಗಲಿ  ಶ್ರೀ ಮುದ್ಗಲಾಚಾರ್ಯರ ಕೈ ಹಿಡಿದು ಗಂಡನ ಮನೆಗೆ ಹೋಗುವಾಗ ತನ್ನ ಹುಟ್ಟೂರಾದ ಮತ್ತು ಕುಲಸ್ವಾಮಿ ಯಾದ ಭೋಗಾಪುರೇಶನ ನೆನಪಿಗಾಗಿ ಅಲ್ಲಿಂದ ಒಂದು ಪ್ರಾಣದೇವರ ಮೂರ್ತಿ ತೆಗೆದುಕೊಂಡು ಬರುತ್ತಾರೆ.
ಅದು ಅಲ್ಲಿ ಇವಾಗ ಭೊಗಾಪುರೇಶ ಎಂದು ಪ್ರಸಿದ್ಧಿ.

ಮೇಲಿನ ಪ್ರಾಣದೇವರ ಚಿತ್ರ👆👆
ಭೋಗಾಪುರ (ನವಲಿ)ದಿಂದ ಗಲಗಲಿಗೆ ಅವ್ವನವರು ತಂದ ಶ್ರೀ ಪ್ರಾಣದೇವರು. ಶ್ರೀ ಭೋಗಾಪುರೇಶ ಎಂದೇ ಪ್ರಸಿದ್ಧ
ಸ್ಥಳ: ಗಲಗಲಿ

ಹೀಗೆ ಭೋಗಾಪುರೇಶನ ಅರ್ಚಕ ಮನೆತನದ ರಮಾ ಅಥವ ರಮಾಬಾಯಿ ಅವರು ಗಲಗಲಿ ಗೆ ಹೋದ ಮೇಲೆ ಗಲಗಲಿ ಅವ್ವನವರು ಎಂದು ಪ್ರಸಿದ್ಧಿ ಯಾಗಿ ಅನೇಕ ಕೃತಿ ಕೀರ್ತನೆಗಳನ್ನು ರಚನೆ ಮಾಡುತ್ತಾರೆ.
ಪೋಟೊ ಕೃಪೆ.
ಶ್ರೀ ನಾರಾಯಣ ಕಾಖಂಡಕಿ ಸರ್ 4 june 2020
***

info from:  Haridasa Sahitya (seven) WOMEN POETS
ARCHIVE | DECEMBER 3, 2013
There have been a lot of focus and innumerable articles on Haridasas of Karnataka and their invaluable contribution to the growth and development of Bhakti movement in Karnataka.

The Haridasas were essentially Vaishnavas and all of them, irrespective of the region they came from and their

social and economic status, adhered to the tenets of Madhwacharya, the saint-philosopher, and propounded his Dwaitha or theory of dualism.

The Haridasas had an enormous impact on the life and times of society and people like Purandara Dasa, Kanaka Dasa, Vijaya Dasa and Jagannatha Dasa held the mirror of literature to society so that it could rectify its failings.

While there are hundreds of Haridasas and they are practically from every region in the State from Achalananda Dasa of the eighth century in Bangalore to Purandara Dasa in Hampi, Vijaya Dasa in Raichur and Mahipati Dasa in Bijapur, the role of women poets or Haridasis has not received the attention that these remarkable women deserve.

The composition of these poet-composers is simple, touching and musical. Yet, and this is really intriguing, they are the product of  those whose world revolved around domesticity of homes, and more specifically, to the kitchen.

These women poets rose above the mundane and stitched a high place in the literary field. Many of them had to face problems of a typical Brahmin household such as superstition, tradition, rigidity and in cases domestic strife. But these women overcame all odds and today they are a force to reckon with and a shining example of what women can do in times of adversity.

A shining example of resilience and strength of will power is Galgali Avva. Born in 1670, she was just 12 when she was married off to a 95-year-old man. Her marriage lasted exactly eight days and she was widowed on the ninth.

As was the practice in those days, Avva had to tonsure her hair and observe the stringent practice of widowhood. However, her five grown up step-sons, all of them scholars, taught her to read and write, and Avva who soon gave expression to her literary talent,  became a composer, writing under the ankita Rama.

Today we are fortunate in possessing 261 of her songs and some of them like “Bheegara Haadu,”  describes a ritual in a typical Brahmin wedding. In “Sringara Tara Tamya”, she gives a vivid and evocative description of various ornaments worn by a woman. She then becomes philosophical and says of all the ornaments, the only two worth possessing and which are ever lasting are bhakti and gnana.

In “Muyyada Haadu”, she writes about the exchange of gifts during Gowri puja. Ironically, she would not have been allowed for the pooje as she was a widow. She died in 1760.

This entry was posted on December 3, 2013, in Uncategorized.
****

 " ಶ್ರೀ ರಮೇಶಾ೦ಕಿತ ಗಲಗಲಿ ಅವ್ವನವರು "

ಭಕ್ತಿ ಪರವಾದ ಗೀತ ಪದ್ಯಗಳನ್ನು ಮತ್ತು ಪ್ರಮೇಯ ಭಾಗವನ್ನು ತಿಳಿಸುವ ಪದ - ಪದ್ಯಗಳನ್ನು ಬರೆದು ಉತ್ತರ ಕರ್ನಾಟಕದಲ್ಲಿ ಸುಪ್ರಸಿದ್ಧಳಾದ ಇನ್ನೊಬ್ಬ ಮಹಿಳೆಯೆಂದರೆ " ಗಲಗಲಿ ಅವ್ವ " ನವರು!!

ಧಕ್ಷಿಣ ಭಾರತದಲ್ಲಿ ಮಹರ್ಷಿಗಳ ಮನೆತನೆವೆಂದು ಪ್ರಸಿದ್ಧವಾದ ಪೂಜ್ಯ ಗಲಗಲಿ ಆಚಾರ್ಯರ ವಂಶದ ತಪೋ ವಿಭೂತಿಗಳಾದ ಶ್ರೀ ಮುದ್ಗಲಾಚಾರ್ಯರ ಧರ್ಮಪತ್ನಿಯೇ ಈ ಅವ್ವನವರು!

ಉತ್ತರಾದಿ ಮಠದ ಶ್ರೀ ಸತ್ಯಧರ್ಮತೀರ್ಥರೂ ಕೂಡಾ ಅವ್ವನವರ ಪ್ರಮೇಯ ಜ್ಞಾನಕ್ಕೆ ತಲೆದೂಗಿದರಂತೆ. ಅವ್ವನವರಿಗೆ ನ್ಯಾಯ ಶಾಸ್ತ್ರದಲ್ಲಿ ಅಪ್ರತಿಮ ಪಾಂಡಿತ್ಯವಿದ್ದಿತು.

ಅವ್ವನವರಿಗೆ ಆರು ಜನ ದಿಗ್ಗಜ ಪಂಡಿತರಾದ ಮಕ್ಕಳಿದ್ದರು. ಪುಣೆಯ ಪೇಶ್ವೆಯ ದರ್ಬಾರದಲ್ಲಿ ಸರ್ವಜ್ಞ " ಷಟ್ಕ " ಎಂದು ಪ್ರಸಿದ್ಧರಾದ ಆರೂ ಗಾಲವ ಪಂಡಿತರು ಉತ್ತರ ದೇಶದ ಕಾಶೀ ಪಂಡಿತರೊಡನೆ ತರ್ಕ ಶಾಸ್ತ್ರದಲ್ಲಿ ವಾಕ್ಯಾರ್ಥಕ್ಕೆ ಇಳಿದಾಗ ಯಾವುದೋ ಒಂದು ವಿಷಯ ನಿಂತಾಗ ಜನಾನಖಾನಾದಲ್ಲಿ ಕುಳಿತ ಅವ್ವನವರು ಕೂಡಲೇ ಅದಕ್ಕೆ ಉತ್ತರ ಸೂಚಿಸಿದರಂತೆ.

ಅದನ್ನು ನೋಡಿ ಆಶ್ಚರ್ಯ ಚಕಿತರಾದ ಪೇಶ್ವೆಯವರು ಅವ್ವನವರ ಹೆಸರಿನಿಂದಲೇ ವರ್ಷಾಶನ ಹಾಕಿ ಕೊಟ್ಟರು. ಅದು ಸಂಸ್ಥಾನಗಳ ವಿಲೀನೀಕರಣವಾಗುವ ವರೆಗೆ ಈ ಮನೆತನಕ್ಕೆ ನಡೆಯುತ್ತಿತ್ತು.

ಅವ್ವನವರ ಈ ವಿಚಿತ್ರ ಪಾಂಡಿತ್ಯ ಕೀರ್ತಿ ಕೇಳಿದ ಮೈಸೂರು ಮಹಾರಾಜರು ಅವರನ್ನೂ, ಅವರ ಪಂಡಿತ ಪುತ್ರರನ್ನೂ ಮೈಸೂರಿಗೆ ಬರ ಮಾಡಿಕೊಂಡು ಅವರಿಗೆ ಭೂಮಿ ಕಾಣಿಕೆಗಳನ್ನಿತ್ತು ಗೌರವಿಸಿದರು. ಅವ್ವನವರು...

ಮುಯ್ಯದ ಹಾಡು

ಶೃಂಗಾರ ತಾರತಮ್ಯ

ಮೋರೆಗೆ ನೀರು ತಂದ ಹಾಡುಗಳು

ಮುಂತಾದ ಆಧ್ಯಾತ್ಮ ಗೀತ ಕಾವ್ಯಗಳನ್ನು ಬರೆದಿದ್ದಾರೆ.

ಅವ್ವನವರ ಶಿಷ್ಯೆಯೊಬ್ಬಳು ತನ್ನ ಗಂಡನನ್ನು ಅಲಂಕಾರ ಆಭರಣಗಳಿಗಾಗಿ ಬಹಳ ಪೀಡಿಸುತ್ತಿದ್ದಳಂತೆ. ಅವಳಿಗೆ ತಿಳುವಳಿಕೆ ಹೇಳಲಿಕ್ಕಾಗಿ ಈ ಶೃಂಗಾರ ತಾರತಮ್ಯ ಎಂಬ ಪ್ರಮೇಯ ಪ್ರಚುರವಾದ ಗೇಯ ಪ್ರಬಂಧವನ್ನು ಅವ್ವನವರು ರಚಿಸಿದರಂತೆ...

ಹರಿಯು ಒಬ್ಬ ಸರ್ವೋತ್ತಮ ।

ತರುವಾಯ ಶ್ರೀದೇವಿಯಂದು ।

ಪರಮ ಭಕ್ತಿಯಿಂದ ಮುಕ್ತಿ ।

ಕರದೊಳು ಪಿಡಿದವರ ಸಂಗಾ ಮಾಡು ।।

ತಾರತಮ್ಯ ಪದ್ಧತಿಯಿಂದ ।

ಸಾರ ಭೂಷಣವನ್ನಿಟ್ಟ ಬಾಲೇರು ।

ಶ್ರೀ ರಮೇಶನ ದಯದಿ । ಮುಕ್ತಿ ।

ಸಾರವನ್ನೇ ಪಡೆದವರ ಸಂಗವ ಮಾಡೋ ।।

ಮುಂತಾದ ಹೆಣ್ಣು ಮಕ್ಕಳಿಗೆ ಅವರಿಗೆ ಪ್ರಿಯವಾದ ಆಭರಣ ಅಲಂಕಾರಗಳ ಮೂಲಕವೇ ದೇವತಾ ತಾರತಮ್ಯದ ತತ್ತ್ವವನ್ನೆಲ್ಲಾ ತಿಳಿಯಾಗಿ ತಿಳಿಸಿ ಕೊಟ್ಟಿದ್ದಾರೆ. ಇದರಲ್ಲಿ ಶಾಸ್ತ್ರ ಮತ್ತು ಸಾಹಿತ್ಯ ಎರಡರಲ್ಲಿಯೂ ಅವ್ವನವರ ಪ್ರಭುತ್ವವನ್ನೂ ಹಾಗೂ ವೈರಾಗ್ಯ ಭಾವವನ್ನೂ ಕಾಣಬಹುದು.

ಅವ್ವನವರ ಮುಯ್ಯದ ಪದಗಳಲ್ಲಿ ಭಕ್ತಿಯ ಜೊತೆಗೆ ಶೃಂಗಾರ, ಹಾಸ್ಯ, ಕರುಣೆಗಳ ಕಾರಂಜಿಯೂ ಅಲ್ಲಲ್ಲಿ ಪುಟಿದು ಹೊಸದಾದ ಒಂದು ರಸರಂಗವೇ ಏರ್ಪಟ್ಟಂತೆ ತೋರುತ್ತದೆ.

ಗಂಗೆ - ಗೌರೀ, ದ್ರೌಪದೀ - ಸುಭದ್ರೆ, ರುಕ್ಮಿಣೀ - ಸತ್ಯಭಾಮೆ ಮುಂತಾದವರ ಮೂದಲಿಕೆಯ ಮಾತುಗಳು ಮಾರ್ಮಿಕವೂ, ಮನ ರಂಜಕವೂ ಆಗಿವೆ. ಸುಭದ್ರೆ ದ್ರೌಪದಿಗೆ ಹೇಳುವ ಚುಚ್ಚು ಮಾತು...

ಕೆಂಡವ ತುಂಬಿದ ಕುಂಡದೀ ಪುಟ್ಟೀದಿ ।

ಕಂಡ ಜನಕೆಲ್ಲ ಭಯವಾದಿ ।

ಕಂಡ ಜನಕೆಲ್ಲ ಭಯವಾದಿ । ಭೀಮ ನಿನ ।

ಗಂಡ ಎಂಥವನ ಎದೆಗಾರ ।।

ಪಲ್ಯದ ತುದಿಯಿಂದ ।

ಎಲ್ಲ ಪದಾರ್ಥವ ಮಾಡಿ ।

ಬಲ್ಲಿದ ಮುನಿಗೆ ಉಣಿಸೀದಿ । ಇಂದ್ರ ।

ಜಾಲ ಬಲ್ಲವಳಿಗೆಂಥ ಭಯವುಂಟು ।।

ಪ್ರಬಲ ಹೆಂಡಂದಿರಾದ ರುಕ್ಮಿಣೀ - ಸತ್ಯಭಾಮೆಯರ ನಡುವೆ ತನ್ನ ಅಣ್ಣ ಕೃಷ್ಣಯ್ಯನ ಪಾಡು ಏನಾಯಿತೆಂಬುದು ದ್ರೌಪದಿಯ ಮಾತಿನಲ್ಲಿ ಮಾರ್ಮಿಕವಾಗಿ ಮೂಡಿ ಬಂದಿದೆ. ಅದರಲ್ಲಿ ಈ ಮೂದಲಿಕೆಯ ನೆವದಿಂದ ಕೊನೆಗೆ ವ್ಯಕ್ತವಾಗುವುದು. ಶ್ರೀ ಕೃಷ್ಣನ ಅಚಿಂತ್ಯಾದ್ಭುತ ಮಹಿಮೆಯೇ!

ಈ ಕೃತಕ ಕಲಹಗಳೆಲ್ಲ ಹರಿಯ ಚರಿತ್ರೆ ಹಾಗೂ ದಿವ್ಯ ಲೀಲಾ ವಿಭೂತಿಗಳನ್ನು ಬಗೆ ಬಗೆಯಿಂದ ಸ್ಮರಣಕ್ಕೆ ತಂದು ಕೊಳ್ಳಲಿಕ್ಕೆ ಮತ್ತು ಅದರಿಂದ  ಮತ್ತೆ ಅವನಲ್ಲಿ ಹೆಚ್ಚಿನ ಭಕ್ತಿ ಮಾಡಲಿಕ್ಕೆ ಆ ದೇವ ಚರಿತೆಯ ನೆನಪಿಗೊಂದು ಮೀಟಗೋಲಾಗುತ್ತದೆ ಅಷ್ಟೇ!!

ನಾರೇರಿಬ್ಬರ ಬಿಟ್ಟು ನೀರೊಳಗಡಿಗಿದಾ ।

ಮೋರೆ ತೋರದಲೆ ನೆಲವನು ಸಖಿ ।

ಮೋರೆ ತೋರದಲೆ ನೆಲವ ಬಗೆದು ಅತಿ ।

ಕ್ರೂರನಾದರೂ ಬಿಡರಲೇ ಸಖಿಯೇ ।।

ತಿರಕತಾಯಿ ಸುದ್ದಿ ಅರಿತವನಲ್ಲದೆ ।

ದೊರೆತನವ ಬಿಟ್ಟು ದನವನೇ ಸಖಿಯೇ ।

ದೊರೆತನ ಬಿಟ್ಟು ದಾನವನು ಕಾಯಿದಾರು । ನಿಮ್ಮ ।

ಕರಿ ಕರಿ ಒಂದು ಬಿಡರೆಲ್ಲಾ ಸಖಿಯೇ ।।

ಮುದ್ದು ರಮೇಶಗೆ ಕದ್ದು ಓಲೆಯ ಬರೆಯೆ ।

ಹದ್ದು ವಾಹನನು ಎರಗಿದಾ ಸಖಿಯೇ ।

ಹದ್ದು ವಾಹನನು ಎರಗೀದ ಕಾರಣ ।

ವಿದ್ವಜ್ಜನರೆಲ್ಲ ನಮಿಸೂತ ಸಖಿಯೇ ।।

ಅವ್ವನವರ ಕಾವ್ಯದಲ್ಲಿ ನವರಸಗಳೆಲ್ಲಾ ಉಕ್ಕೇರಿ ಹರಿಯುತ್ತಿದ್ದರೂ ಅವೆಲ್ಲವೂ ಭಕ್ತಿಯ ಭಟ್ಟಿಯಲ್ಲಿ ಪಾವನತೆಯ ಪುಟಗೊಂಡೇ ಬರುತ್ತವೆ.

ಉಪಮೇ - ಉತ್ಪ್ರೇಕ್ಷ - ಅಲಂಕಾರ - ವಕ್ರೋಕ್ತಿ ಎಲ್ಲವೂ ಅವ್ವನವರ ಕಾವ್ಯದಲ್ಲಿ ನೀತಿ ಬೋಧಕವಾಗಿ ಹರಿ ಪ್ರೀತಿ ಕಾರಣವಾಗಿಯೇ ಬೆಳಗುತ್ತದೆ. ಸಜ್ಜನ ಸಹವಾಸದ ಮಹಿಮೆಯನ್ನು ಪಾಮರರಿಗೂ ತಿಳಿಸುವ ಅವರ ಸರಳ - ಸರಸ ದೃಷ್ಟಾಂತ ಪ್ರದರ್ಶನದ ಸುಂದರ ಪದ್ಧತಿಯ ಒಂದು ಮಾದರಿ...

ಭಾವಜ್ಞರ ಸಂಗ ಶಾವೀಗೆ ಉಂಡಂತೆ ।

ಭಾವವರಿಯದಾ ಪಾಮರರ ।

ಭಾವವರಿಯದಾ ಪಾಮರರ । ಸ ।

ಹವಾಸ ಬೇವಿನ ಹಾಲು ಕುಡಿದಂತೆ ।।

ಅವ್ವನವರು  ಶೂರ್ಪಾಲಿಯಿಂದ ಒಲಿದು ಬಂದ ಗಲಗಲಿ ಕ್ಷೇತ್ರದ ಶ್ರೀ ನೃಸಿಂಹ ದೇವರ ಉಪಾಸಕರು.

ಲಕ್ಷಮೀ ರಮಣನೇ ಪಕ್ಷಿವಾಹನ ಸ್ವಾಮಿ ।

ಕುಕ್ಷಿಲೆ ಜಗವ ಸಲಹುವಿ ।

ಕುಕ್ಷಿಲೆ ಜಗವ ಸಲಹುವಿ । ಶೂ ।

ರ್ಪಾಲಿ ವೃಕ್ಷರಾಜನ ಬಲಗೊಂಬೆ ।

ಗಲಗಲಿ ನರಸಿಂಹ ಬಲು ದಯವಂತನು ।

ಸುಲಭಾದಿ ವರವ ಕೊಡುವನಾ ।

ಸುಲಭಾದಿ ವರವ ಕೊಡುವ ರಮೇಶನ ।

ಚೆಲುವ ಮೂರುತಿಯ ಬಲಗೊಂಬೆ ।।

ಉತ್ತರ ಕನ್ನಡದ ಹೆಂಗಳೆಯರು ಅವ್ವನವರ ಪದ್ಯಗಳನ್ನು ಸಪ್ತಾಹ ಕ್ರಮದಲ್ಲಿ ಹೇಳುವ ಸಂಪ್ರದಾಯ ಈಗಲೂ ಉಂಟು!!

by ಆಚಾರ್ಯ ನಾಗರಾಜು ಹಾವೇರಿ

    ಗುರು ವಿಜಯ ಪ್ರತಿಷ್ಠಾನ

****


Galagali Avva is said to be the first women poet or first woman Haridasi in Dasa Sahitya history having written a number of devaranamas.

Know more here

  CLICK GALAGALI AVVA-FIRST HARIDASI

***


No comments:

Post a Comment