Friday 30 April 2021

vaikunta dasaru 1550 ವೈಕುಂಠ ದಾಸರು

 Vaikunta Dasaru

Name: Keshavacharya Iyengar

Ankita: Vaikunta Vittala, vaikunta keshava

ದಾಸರ ಹೆಸರು: ಬೇಲೂರು ವೈಕುಂಠದಾಸರು

ಜನ್ಮ ಸ್ಥಳ: ಬೇಲೂರು ಹಾಸನಜಿಲ್ಲೆ

ತಂದೆ ಹೆಸರು: ತಿರುಮಲಾರ್ಯ

ಕಾಲ 1480 - 1550

ಅಂಕಿತನಾಮ: ವೈಕುಂಠ ಕೇಶವ

ಲಭ್ಯ ಕೀರ್ತನೆಗಳ ಸಂಖ್ಯೆ: 65

ಗುರುವಿನ ಹೆಸರು: ತಿರುಮಲಾರ್ಯ

ಆಶ್ರಯ: ಬೇಲೂರು ಚೆನ್ನಕೇಶವನ ಸನ್ನಿಧಿ

ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು: 1. ಗಜೇಂದ್ರಮೋಕ್ಷ 2. ಶನೀಶ್ವರದಂಡಕ

ವೃತ್ತಿ : ಅರ್ಚನೆ. ದಾಸವೃತ್ತಿ

ಕೃತಿಯ ವೈಶಿಷ್ಟ್ಯ: ವಿಶಿಷ್ಟ ದ್ವೈತ ತತ್ವ ಪ್ರತಿಪಾದನೆ

ಇತರೆ : ವಾದಿರಾಜರು, ಪುರಂದರ, ಕನಕ, ಅಚ್ಯುತದಾಸರು ತೆಲುಗಿನ ಚಿನ್ನಯ್ಯ ಮುಂತಾದವರಿಂದ ಸ್ತುತಿಸಲ್ಪಟ್ಟಿರುವ ದಾಸೋತ್ತಮರಾಗಿದ್ದರು..

*** 

by Sri Nagaraj Acharya

" ಶ್ರೀ ಇಂದ್ರದೇವರ ಅಂಶ ಸಂಭೂತರು ಶ್ರೀ ವೈಕುಂಠದಾಸರು "

ಭಾರತ ಭೂಮಿ ಹಲವು ಸಂಸ್ಕೃತಿಗಳ ತವರಾಗಿದೆ. 

ಹಲವು ಧರ್ಮಗಳ ಆಗರವಾಗಿದೆ. 

ಅದರಲ್ಲೂ ಕರ್ನಾಟಕವಂತೂ ವಿವಿಧ ಭಕ್ತಿ ಪಂಥಗಳ ನೆಲೆಯಾಗಿದೆ. 

ಹರಿದಾಸ ಸಾಹಿತ್ಯದ ಆದ್ಯ ಪ್ರವರ್ತಕರು 13ನೇ ಶತಮಾನದಲ್ಲಿ ಶ್ರೀ ಹರಿಯ ಆಜ್ಞೆಯಂತೆ ಧರೆಗಿಳಿದು ಬಂದ ಶ್ರೀ ವಾಯುದೇವರ ಅವತಾರಿಗಳಾದ ಶ್ರೀಮನ್ಮಧ್ವಾಚಾರ್ಯರು. 

ಅವರಿಂದ ಪ್ರಾರಂಭಗೊಂಡ ಹರಿದಾಸ ಸಾಹಿತ್ಯದ ಬೆಳವಣಿಗೆಗೆ ನಾಂದಿ ಹಾಡಿದವರು ಶ್ರೀ ನರಹರಿತೀರ್ಥರು. 

ಶ್ರೀ ನರಹರಿತೀರ್ಥರ ನಂತರ ದಾಸ ಸಾಹಿತ್ಯಕ್ಕೆ ಮೆರಗು ಕೊಟ್ಟವರು ಶ್ರೀ ಧ್ರುವಾಂಶ ಶ್ರೀಪಾದರಾಜರು. 

ಶ್ರೀ ಶ್ರೀಪಾದರಾಜರಿಂದ ಮುಂದುವರೆದ ಈ ಸಾಹಿತ್ಯದ ಉಜ್ವಲ ಪರಂಪರೆಯನ್ನು ಬೆಳೆಸಿದವರು 

ಶ್ರೀ ಶಂಖುಕರ್ಣಾವತಾರಿಗಳಾದ ಶ್ರೀ ಪ್ರಹ್ಲಾದರೇ ವ್ಯಾಸರಾಜ ಗುರುಸಾರ್ವಭೌಮರು. 

ಶ್ರೀ ವ್ಯಾಸರಾಜರ ನೇತೃತ್ವದಲ್ಲಿ ದಾಸಕೂಟ ಪ್ರಾರಂಭವಾಯಿತು. 

ಶ್ರೀ ಭಾವಿಸಮೀರ ವಾದಿರಾಜರು - ಶ್ರೀ ಯಮಾಂಶ ಕನಕದಾಸರು ಮತ್ತು ಶ್ರೀ ನಾರದಾಂಶ ಪುರಂದರದಾಸರು ಈ ದಾಸ ಕೂಟಕ್ಕೆ ಸೇರಿದವರು. 

ಶ್ರೀ ಪುರಂದರದಾಸರ ಕಾಲವಂತೂ ಹರಿದಾಸ ಸಾಹಿತ್ಯದ " ಸುವರ್ಣ ಕಾಲ " ವೆನ್ನುತ್ತಿದ್ದರು. 

ಇವರು ಸಾಮಾಜಿಕ ಮತ್ತು ಲೋಕ ನೀತಿಯ ಕುರಿತು ಖಡಾ ಖಂಡಿತವಾಗಿ ಆಡು ಭಾಷೆಯಲ್ಲಿ ಕೀರ್ತನೆಗಳನ್ನು ರಚಿಸಿದ್ದಾರೆ. 

ಶ್ರೀ ಪುರಂದರದಾಸರ ಜಾಡಿನಲ್ಲಿಯೇ ಸಾಗಿದ ಮತ್ತೊಬ್ಬ ದಾಸ ಶ್ರೇಷ್ಠರೆಂದರೆ ಕವಿಸಾರ್ವಭೌಮ ಶ್ರೀ ಕನಕದಾಸರು. 

ಹೀಗೆ ಹರಿದಾಸರುಗಳಿಂದ ಬೆಳೆದು ಹೆಮ್ಮರವಾಗಿ ದಾಸ ಸಾಹಿತ್ಯವು ಫಲವೀಯ್ಯುತ್ತಾ ಪ್ರಥಮ ಘಟ್ಟದ ಬೆಳವಣಿಗೆಗೆ ಸಾಧನವಾಯಿತು. 

ದಾಸ ಸಾಹಿತ್ಯ ಎನ್ನುವುದು ವ್ಯಾಸ ಸಾಹಿತ್ಯದ ಇನ್ನೊಂದು ರೂಪ.

ವ್ಯಾಸ ಸಾಹಿತ್ಯ ಎನ್ನುವುದು ಹಣ್ಣಿನಂತೆ. 

ದಾಸ ಸಾಹಿತ್ಯ ಎನ್ನುವುದು ಹಣ್ಣಿನ ರಸದಂತೆ. 

ಹಣ್ಣು ತಿನ್ನಲಾಗದಿದ್ದವರು ರಸವನ್ನು ಸುಲಭವಾಗಿ ಕುಡಿಯುವಂತೆ; ಸಂಸ್ಕೃತ ಬಾರದೇ ಇರುವ ಪಾಮರರಿಗೆ ದಾಸ ಸಾಹಿತ್ಯ ಒಂದು ವರದಂತೆ. 

" ಸುಧಾ ಓದು ಪದ ಮಾಡು " ಎನ್ನುವ ವಾಕ್ಯದಂತೆ ಪಂಡಿತರಿಗೂ ಕೂಡಾ ದಾಸ ಸಾಹಿತ್ಯ ಕ್ಲಿಷ್ಟವಾಗಬಹುದು. 

ಅಲ್ಲದೇ ಅವರವರ ಯೋಗ್ಯತೆಗೆ ತಕ್ಕಂತೆ ದಾಸ ಸಾಹಿತ್ಯ ಅರ್ಥವಾಗಬಹುದು.


" ಶ್ರೀ ವೈಕುಂಠ ದಾಸರ ಸಂಕ್ಷಿಪ್ತ ಮಾಹಿತಿ "

ಹೆಸರು : ಶ್ರೀ ಕೇಶವಚಾರ್ಯ ಅಯ್ಯಂಗಾರ್ 

ತಂದೆ :ಶ್ರೀ ತಿರುಮಲಾಚಾರ್ಯ ಅಯ್ಯಂಗಾರ್ 

ಕಾಲ : ಕ್ರಿ ಶ 1480 - 1550

ಅಂಶ : ಶ್ರೀ ಇಂದ್ರದೇವರು 

ಕ್ಷಕೆ : 08

" ಸಮಕಾಲೀನ ಯತಿಗಳು "

ಶ್ರೀ ವ್ಯಾಸರಾಜರು - ಶ್ರೀ ವಾದಿರಾಜರು - ಶ್ರೀ ಗೋವಿಂದ ಒಡೆಯರು - ಶ್ರೀ ವಿಜಯೀ೦ದ್ರರು 

" ಸಮಕಾಲೀನ ಹರಿದಾಸರು "

ಶ್ರೀ ಪುರಂದರ ದಾಸರು - ಶ್ರೀ ಕನಕ ದಾಸರು - ಶ್ರೀ ನವಸಾಲ್ಪುರಿ ತಿಪ್ಪಣ್ಣಾರ್ಯರು 

" ಕೃತಿಗಳು "

ಗಜೇಂದ್ರ ಮೋಕ್ಷ - ಶ್ರೀ ಶನೈಶ್ಚರ ದಂಡಕಮ್ 

ಪದ 14 - ಸುಳಾದಿ 3

ಶ್ರೀ ವಾದಿರಾಜ ಗುರುಸಾರ್ವಭೌಮರು ಸಂಚಾರ ಕ್ರಮದಲ್ಲಿ ಬೇಲೂರಿಗೆ ಬಂದಾಗ - ಶ್ರೀ ಕೇಶವ ಅಯ್ಯಂಗಾರ್ ಅವರು ಶ್ರೀ ವಾದಿರಾಜರ ಸನ್ನಿಧಿಗೆ ಬಂದು ವಿಶೇಷವಾಗಿ ಸೇವೆ ಸಲ್ಲಿಸಿದರು. 

ಅವರ ಸೇವೆಗೆ ಮೆಚ್ಚಿದ - ಶ್ರೀ ವಾದಿರಾಜ ಗುರುಸಾರ್ವಭೌಮರು ಶ್ರೀ ಹಯಗ್ರೀವ ಸಾಲಿಗ್ರಾಮ ಕೊಟ್ಟು ನಿತ್ಯ ಪೂಜಿಸಿ ಶ್ರೀ ಹಯಗ್ರೀವ ಪರಮಾನುಗ್ರಹ ಮಾಡುತ್ತಾನೆ ಎಂದು ಹೇಳಿ ಕೊಟ್ಟರು. 

ಶ್ರೀ ಬೇಳೂರು ಕೇಶವ ದಾಸರು ಪ್ರತಿನಿತ್ಯ ಶ್ರೀ ಹಯಗ್ರೀವ ಸಾಲಿಗ್ರಾಮವನ್ನು ಭಕ್ತಿ ಶ್ರದ್ಧೆಗಳಿಂದ ಪೂಜಿಸಿ ಶ್ರೀ ಹಯವದನನ್ನು ಸಾಕ್ಷಾತ್ಕಾರ ಪಡೆದು ಅವನಿಂದಲೇ " ವೈಕುಂಠ ವಿಠಲ " ಯೆಂಬ ಅಂಕಿತವನ್ನು ಸ್ವೀಕರಿಸಿ ಪದ - ಸುಳಾದಿಗಳನ್ನು ರಚಿಸಿದರು. 

" ಶಿಷ್ಯರು "

ಶ್ರೀ ಅಚ್ಯುತ ವಿಠಲ - ಶ್ರೀ ವರದ ಕೇಶವ - ಶ್ರೀ ಚೆನ್ನ ಕೇಶವ ಮತ್ತು ಬೈಲಾಪುರಿ ಕೇಶವ

ಶ್ರೀ ಬೈಲಾಪುರಿ ಕೇಶವಾಂಕಿತ ಶ್ರೀ ನಂಜುಂಡ ಶ್ರೀ ವೈಕಂಠ ದಾಸರಿಗೆ ಅಚ್ಚುಮೆಚ್ಚಿನ ಪ್ರೀತಿಯ ಶಿಷ್ಯ. 

ಶ್ರೀ ವೈಕುಂಠದಾಸರು ತಮ್ಮ ಪ್ರೀತಿಯ ಶಿಷ್ಯನಾದ ಶ್ರೀ ನಂಜುಂಡನನ್ನು... ... 


ರಾಗ : ತೋಡಿ    ತಾಳ : ಆದಿ 


ಬದುಕೋ ಬದುಕೋ 

ನಂಜುಂಡಾ । ಮ ।

ತ್ತೊದಗಿ ನೂರು ವರುಷ 

ಪರಿಯಂತ ।। ಪಲ್ಲವಿ ।।


ಜನನಿಯಾ ಮಾತು

ಮೀರಾದೆ । ಪರ ।

ವನಿತೆಯರಿಗೆ ಮನ 

ಸೋಲಾದೆ ನಂಜಾ ।

ಬಿನುಗು ದೈವಂಗಳಿಗೆರಗದೆ 

ದುರ್ಜನರ ಸಂಗವನು 

ಮಾಡಾದೆ ನಂಜಾ ।। ಚರಣ ।।


ತಪ್ಪು ದಾರಿಯಲ್ಲಿ 

ನಡಿಯಾದೆ ಆರು ।

ವಪ್ಪಾದೆ ಕರ್ಮವು 

ಮಾಡಾದೆ ನಂಜಾ ।

ತಪ್ಪು ಕಥೆಗಳ ನೀ ಕೇಳಾದೆ ।

ಅಪಸವ್ಯ ವಾಕ್ಕ್ಯಾಗಳಾ-

ನಾಡಾದೆ ನಂಜಾ ।। ಚರಣ ।। 


ಹರಿಗೆರಗೂತಲಿರು 

ಶರಣರ್ಗೆ ನಿರುತಾದಿ ।

ಹರಿಯ ಪೂಜೆಯನು 

ನೀ ಮಾಡುತಾ ನಂಜಾ ।

ಹರಿ ಸರ್ವೋತ್ತಮನೆಂತೆಂದು 

ಇರು ಕಂಡ್ಯಾ ।

ಹರಿ ಶ್ರೀ ವೈಕುಂಠ ವಿಠಲ 

ರಕ್ಷಿಸುವನು ನಿನ್ನಾ ।। ಚರಣ ।।


ಮುಂದೆ ಶ್ರೀ ವೈಕುಂಠ ದಾಸರು " ಶ್ರೀ ಪಂಗನಾಮದ ತಿಮ್ಮಣ್ಣದಾಸರಾಗಿಯೂ - ಶ್ರೀ ಮೊದಲಕಲ್ಲು ಶ್ರೀ ಶೇಷದಾಸರಾಗಿಯೂ ದಾಸ ರೂಪದಲ್ಲಿ ಅವತಾರ ಮಾಡಿದರು. 

ಈ ಶ್ರೀ ನಂಜುಂಡನೇ ಮುಂದೆ " ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯರಾಗಿ [ ಶ್ರೀ ವ್ಯಾಸ ವಿಠಲ ] ಅವತಾರ ಮಾಡಿದ ಪೂತಾತ್ಮರು. 

ಶ್ರೀ ವೈಕುಂಠದಾಸರ ರಚನೆಗಳು... 

೧. ಏಳಿ ಸುನಂದನಾ ನೀ ಬ್ಯಾಗದಿ 

೨. ಮದಕರಿಯೇ ವದನಕವಳವನಾದೆಲೊ ದೇವ 

೩. ಪಾಪಾತ್ಮ ನಾನಲ್ಲ ಪಾಪ ಎನಗಿನಿತಿಲ್ಲ 

೪. ನೀನೆ ಶ್ರಾದ್ಧದನ್ನವನುಂಡವಾ ನಾನರಿಯದಂತೆ 

೫. ಕೊಡುವದಿಲ್ಲವೆ ಪೋದ ಕಂಣು ನಾಲಿಗೆಯಾ 

೬. ಪಾಲಿಪೆದು ನಯನಗಳ ನಾಲಿಗೆಯ ನೀನು 

೭.ಶ್ರೀರಂಗ ಯಾತ್ತ್ರಿಯನು ಮಾಡಿ ಬಾರೆಂದೆನ್ನ 

೮. ನೋಡಾಲ ಬೇಕೇ ಎನ್ನೊಡೆಯನ 

೯. ಅಕಟಕಟ ಬಹಳ ಬಡತನವಡಸಿತೆ ನಿನಗೆ 

೧೦. ಮಗುವು ಕಾಣೆಯ್ಯಾ ಮಾಯದ ಮಗುವು ಕಾಣೆಯ್ಯಾ 

೧೧. ಏನು ಕಾರಣ ಎನಗ ತಿಳಿಯದಿದಕೋ 

೧೨. ಕೊಂಡಾಡಬಹುದೇ ಯತೀಂದ್ರ ಎನ್ನಾ ಪಾಂಡವ ಪ್ರಿಯನಾ ಪೂಜಕ ವಾದಿರಾಜ ಯತೀ 

೧೩. ಎಂಥಾ ಗಾಡಿಕಾರನೇ ಕೃಷ್ಣಯ್ಯ 

" ಸುಳಾದಿ "

೧. ಲಕ್ಷುಮೀಯ ಮಸ್ತಕಕೆ ಮಣಿ ಮೌಳಿಯಾದ 

೨. ಎಲ್ಲಿಹ ಮಧುರಾ ಪುರ ಇನ್ನೆಲ್ಲಿಹ ಕಂಸಾಸುರನೆ 

೩. ನೋಡಲೇ ಮನವೇ ಜಗದೀಶನ

by ಆಚಾರ್ಯ ನಾಗರಾಜು ಹಾವೇರಿ

ಗುರು ವಿಜಯ ಪ್ರತಿಷ್ಠಾನ

***

1 comment:

  1. ಮಂತ್ರಾಲಯಕ್ಕೆ ಹೊಂದಿ ಇರುವ ನದಿ ತುಂಗಭದ್ರಾ, ಕೃಷ್ಣ ನದಿ ಅಲ್ಲ.

    ReplyDelete