Thursday 12 August 2021

gururama vittalaru dasaru bagepalli subramanya dasaru ಗುರುರಾಮವಿಠಲ ದಾಸರು 1912


Name: Gururama vittalaru dasaru  ಗುರುರಾಮವಿಠಲ ದಾಸರು  

Krutis: 345

***


ಶ್ರೀ ಬಾಗೇಪಲ್ಲಿ ಸುಬ್ರಹ್ಮಣ್ಯ ದಾಸರು 
ankita - ಗುರುರಾಮವಿಠಲ

 ನಮ್ಮ ಪ್ರಾತಃ ಸ್ಮರಣೀಯರಾದ ಹರಿದಾಸರು

19ನೇ ಶತಮಾನದ ಪ್ರಖ್ಯಾತ ದಾಸಾರ್ಯರಲ್ಲಿ ಕೋಲಾರದ, ಬಾಗೇಪಲ್ಲಿಗೆ ಸೇರಿದ ದಾಸಾರ್ಯರು ಶ್ರೀ ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು.  ತಂದೆತಾಯಿ - ಮಧ್ವರಾಯ, ನರಸಮ್ಮ...  ತಂದೆತಾಯಿಯವರು ದಾಸರು 4 ವರ್ಷದ ಮಗು ಆಗಿದ್ದ ಕಾಲಕ್ಕೇನೇ ಪರಂಧಾಮ ಸೇರಿದರು.. ನಂತರದಲಿ ಸೋದರಮಾವ ವೆಂಕಟರಾಯರ ಮನೆಯಲ್ಲಿ ಬೆಳೆದ ಸುಬ್ರಹ್ಮಣ್ಯದಾಸರು 12 ವರ್ಷ ವಯಸ್ಸು ಬಂದನಂತರದಿಂದ ದೇಶಸಂಚಾರಕ್ಕೆ ತೆರಳಿದರು... ತಮ್ಮ 23 ನೇ ವಯಸ್ಸಿನಲ್ಲಿ  ಶ್ರೀ ವಿಜಯರಾಮದಾಸರಿಂದ (ಚಿತ್ರದುರ್ಗದ ಮಾಧವರಾಯರು)  ವಿಜಯರಾಮವಿಠಲರಿಂದ (ಶ್ರೀರಾಮವಿಠಲ, ರಾಮವಿಠಲರು) ಅಂಕಿತೋಪದೇಶವನ್ನು ಪಡೆದು ಗುರುರಾಮವಿಠಲ ರಾಗ್ತಾರೆ..  ಸುಬ್ರಹ್ಮಣ್ಯದಾಸರು, ದೊಡ್ಡಬಳ್ಳಾಪುರದ ಮುದ್ದುಮೋಹನದಾಸರ ಸಮಕಾಲೀನರಾಗಿದ್ದರು. ಮುದ್ದುಮೋಹನದಾಸರಿಂದ ನಿರ್ಮಿತವಾದ ವಿಠಲ ಮಂದಿರಕ್ಕೆ ಭೂಮಿಯನ್ನು ದಾನವಾಗಿ ನೀಡಿದರೆಂದು ಹೇಳ್ತಾರೆ... 

ಗುರುರಾಮವಿಠಲರು  ಕುರುಡರಾಗಿದ್ದರು. ಅವರನ್ನು ಕುರುಡದಾಸರೆಂದೇ ಕರೆಯುತ್ತಿದ್ದರಂತೆ. ಕುರುಡರಾದರೂ ಸಹಾ , ಯಾರ ಸಹಾಯವನ್ನೂ ಬೇಡದೆ ಒಂಟಿಯಾಗಿಯೇ ಊರೂರಾ ಸಂಚಾರ ಮಾಡ್ತಿದ್ದರು.ಸಂಚಾರದ ಸಂದರ್ಭದಲ್ಲಿ ಸಜ್ಜನರ ಸಹವಾಸದಿಂದ ಭಾಗವತ್,  ಭಾರತ, ರಾಮಾಯಣ ಇತ್ಯಾದಿ ಶಾಸ್ತ್ರ ಗ್ರಂಥಗಳನ್ನು ಕೇಳಿ ಅವಲೋಕನ ಮಾಡಿದ್ದರಿಂದ ಶಾಸ್ತ್ರ ಜ್ಞಾನವನ್ನೂ ಆಳವಾಗಿ ಪಡೆದವರಾಗಿದ್ದಾರೆ..
ಕಾಶಿಯಿಂದ-ಕನ್ಯಾಕುಮಾರಿ ವರೆಗೂ ಪಾದಚಾರಿಗಳಾಗಿಯೇ ತೀರ್ಥಯಾತ್ರೆ ಮಾಡ್ತಿದ್ದರಂತೆ. ಕುರುಡರಾದರೂ ಸಹಾ ಶ್ರೀಮದಾಚಾರ್ಯರ ಗ್ರಂಥಗಳು, ಹರಿದಾಸರ ಕೀರ್ತನೆಗಳು, ಶಾಸ್ತ್ರ ಜ್ಞಾನ ಎಲ್ಲದರಲ್ಲೂ ನಿಷ್ಣಾತರಾಗಿದ್ದರು. ಯಾರಾದರೂ ಪ್ರಶ್ನೆ ಕೇಳಿದರೆ ಗ್ರಂಥ,ಶ್ಲೋಕದ ಪ್ರಮಾಣದೊಂದಿಗೆ , ಶ್ಲೋಕಗಳ ಸಂಖ್ಯೆಯೊಂದಿಗೆ ಉತ್ತರ ನೀಡ್ತಿದ್ದರಂತೆ... ಬಹುಭಾಷಾ ಕೋವಿದರಾದ ದಾಸಾರ್ಯರು ತಾವು ಯಾತ್ರೆ ಮಾಡಿದ ಎಲ್ಲಾ ಕ್ಷೇತ್ರ ಮೂರ್ತಿಗಳ ವರ್ಣನೆ ಅಲ್ಲಿನವರಿಂದ ತಿಳಿದು, ತಮ್ಮ ಒಳಗಣ್ಣಿನಿಂದ ನೋಡಿ ಆಶುಕವನ ಬರೆಯುತ್ತಿದ್ದರಂತೆ. ಇವರು ಹಾಡಿದ ಪ್ರತಿಯೊಂದು ರಚನೆಯನ್ನು ಬೇರೆಯವರಿಂದ ಬರೆಸಿಡ್ತಿದ್ದರು.. ಹೀಗೆ ಬರೆದಿಟ್ಟಿರುವ ಕೃತಿಗಳು ಮೈಸೂರು ರಾಘವೇಂದ್ರಾಚಾರ್ಯರು, ಬಾಗೇಪಲ್ಲಿ ವಿದ್ವಾಂಸರು ಶ್ರೀನಿವಾಸರಾಯರು ನಿರೂಪಣೆ ಮಾಡಿ 1905 ಪ್ರಕಟಮಾಡಿದ್ದರು. 

ದಾಸರು ಪವಾಡಗಳನ್ನು ಮಾಡಿದ್ದನ್ನು ಇಂದಿಗೂ ಜನರು ನೆನೆಯುತ್ತಾರೆ. ಚಿಂತಾಮಣಿಯಲ್ಲಿ ಒಂದು ಮದುವೆಗೆ ಹೋದಾಗ ಅಲ್ಲಿ ಒಂದು ಬಂಗಾರದ ಸರ ಹೋಗಿದ್ದು, ಆ ಆರೋಪ ದಾಸರಮೇಲೆ ಬಂದದ್ದು, ಅಲ್ಲಿನ ಪೋಲಿಸ್ ಠಾಣೆಗೆ ಕರೆದೊಯ್ದದ್ದು , ಮತ್ತೆ ಸರ ಸಿಕ್ಕಾಗ ಎಲ್ಲರೂ ಬಂದು ದಾಸಾರ್ಯರ ಕಾಲಿಗೆ ಬಿದ್ದು ಕ್ಷಮೆ ಬೇಡಿದ್ದು ಇದೊಂದು ಘಟನೆ ಆಗಿದೆ.. ಎಲ್ಲರೂ ಕಾಲಿಗೆ ಬಿದ್ದು ಕ್ಷಮೆ ಕೇಳಿದಾಗ, ಜನ್ಮಾಂತರದಲಿ ತೀರದ ಪಾಪರಾಶಿಯನ್ನು ಒಂದೇ ದಿನದಲಿ ದೂರಮಾಡಿದರೆಂದು ಹೇಳಿ ಹೊರಟುಹೋದರು.. ಅಷ್ಟು ವೈರಾಗ್ಯಶಾಲಿಗಳೂ, ಹಾಗೂ ಎಲ್ಲವನ್ನೂ ಪರಮಾತ್ಮನ ಲೀಲೆಯೆಂದೆ  ಅನುಸಂಧಾನಪೂರ್ವಕವಾಗಿಯೇ ತಿಳಿದವರಾಗಿದ್ದವರು ಶ್ರೀ ದಾಸಾರ್ಯರು...

ಮತ್ತೊಂದು ಸಂದರ್ಭದಲ್ಲಿ ಒಂದು ಪುಟ್ಟ ಹುಡುಗ ಜ್ವರ ಬಂದು ಊಟ, ನೀರು ಇಲ್ಲದೇ ಬಿದ್ದಿದ್ದನು, ಅದೇ ಸಮಯ ದಾಸರು ಆ ಮನೆಗೆ ಬಂದು ಜ್ವರಹರಹ್ವಯನಾದ ನರಸಿಂಹ ದೇವರ ಸ್ತುತಿಯನ್ನು ಮಾಡಿ, ಆತನ ಜ್ವರವನ್ನು ದೂರಮಾಡಿದರು.. 

ಮತ್ತೊಮ್ಮೆ ಕೋಲಾರದಲ್ಲಿ ಮಳೆಯಿಲ್ಲದೆ ಕುಡಿಯುವುದಕ್ಕೆ ನೀರೂ ಇಲ್ಲದೆ ಜನ ಬಾಧೆ ಪಡ್ತಿದ್ದಾಗ, ಮಳೆ ಬಂದು ಸಂತೋಷ ನೆಳಗೊಳಲೆಂದು ದಾಸಾರ್ಯರು ಸೂರ್ಯ ಮಂಡಲ ಅಂತರ್ಗತ ನಾರಾಯಣನನ್ನು ಸ್ತುತಿಸಿದರು. ಪರ್ಜನ್ಯ ನಾಮಕನಾದ ಪರಮಾತ್ಮನ ದಯೆದಿಂದ ಕುಂಭವೃಷ್ಟಿ ಆಗಿ ಅಲ್ಲಿನ ಜನರ ಸಂತೋಷಕ್ಕೆ ಎಣೆಯಿಲ್ಲವಂತೆ... 

ಇವರು ಶ್ರೀಮದ್ವ್ಯಾಸರಾಜ ಮಠದ ಯತಿಪರಂಪರಾ ಸ್ತುತಿ ರಚನೆ ಮಾಡಿದವರಾಗಿದ್ದಾರೆ. ಅಲ್ಲದೆ ಮಧ್ವಸಿದ್ಧಾಂತ ಸಾರ ಎಂಬ 1055 ಕಂದಪದ್ಯಗಳ  ಗ್ರಂಥವನ್ನು ರಚನೆ ಮಾಡಿದ್ದಾರೆ. (ಇದರಲ್ಲಿಯೇ ಪರಂಪರಾ ಸ್ತುತಿ ಬಂದಿದೆ) 
ವಾರ್ಧಕ ಷಟ್ಪದಿಯಲ್ಲಿ ದಾಸಪೀಳಿಗೆಯ ಕೃತಿ ರಚನೆ ಮಾಡಿದವರಾಗಿದ್ದಾರೆ. ಇವಲ್ಲದೇ ಆತ್ಮನಿವೇದನೆಯ, ಲೋಕದ, ಸಮಾಜದ , ಸಂಪ್ರದಾಯದ, ವಿಶೇಷ ಸಂದರ್ಭದ ಕೃತಿಗಳು ಹೀಗೆ ಒಟ್ಟು ಎಲ್ಲವೂ ಸೇರಿ 350 ಕೃತಿಗಳು ರಚನೆ ಮಾಡಿದರು. ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ ಪಟ್ಟಾಭಿಷೇಕದ ಕೃತಿಯೂ ಸೇರಿದೆ.. 

ಕಥನಗಳ ರೂಪದಲ್ಲಿ ಪುರಂಜನೋಪಾಖ್ಯಾನ ( ತಮ್ಮ ಪೂರ್ವಜರ ಪರಂಪರೆಯ ಸ್ತುತಿ , ಸಂಸ್ಕೃತಿ ಸ್ತುತಿ ),  ಮನ್ಮಥ ಚರಿತ್ರೆ,  ಸಂಕ್ಷಿಪ್ತ ಭಾರತ, ಭಾಗವತ, ದಶಮಸ್ಕಂಥದ ಕೃಷ್ಣನ ಕಥೆ, ವಿಷ್ಣು ಶತಕ ಇವುಗಳ ರಚನೆ ಮಾಡಿದರು. ಅಲ್ಲದೆ ಹರಿಕಥೆಗೆ ಅನುಕೂಲವಾದಂತೆ ಪ್ರಲ್ಹಾದಚರಿತ್ರೆ, ಅನಸೂಯಾ ಚರಿತ್ರೆ,  ದ್ಯೂತಪರ್ವ, ಮಾಧವ ಚರಿತ್ರೆ,  ದೂರ್ವಾಸಚರಿತ್ರೆ ಇತ್ಯಾದಿಗಳ ರಚನೆಯೂ ಮಾಡಿದ್ದಾರೆ... ಪರಮ ವೈರಾಗ್ಯದಿಂದ ಜೀವನವನ್ನು ಸಾಗಿಸಿದ ಶ್ರೀ ದಾಸಾರ್ಯರು 1915 ರ ವರೆಗೂ ಜೀವಿಸಿ ಪರಮಾತ್ಮನ ಸೇರಿದರೆಂದು ಹೇಳ್ತಾರೆ.... ಅವರಿಗೆ ಬಂಗಾರ ಧನ ಇತ್ಯಾದಿಗಳ ಮೋಹ ಇರದೇ ಇದ್ದರೂ  ಎಂದೂ ಕೈಗೆ ಬೆಳ್ಳಿಯ ಕಡಗವನ್ನು ಧರಿಸುತ್ತಿದ್ದರಂತೆ. ಯಾರಾದರೂ ಏಕೆಂದು ಕೇಳಿದಾಗ ನಾವು ಎಂದು ಎಲ್ಲಿ ಇರ್ತಿವಿ ಗೊತ್ತಿಲ್ಲ.  ಬೇರೆಡ ಸಾವು ಬಂದಲ್ಲಿ ಈ ಬೆಳ್ಳಿಯ ಕಂಕಣ ಉಪಯೋಗವಾಗುವುದು ಎಂತಿದ್ದರಂತೆ.. ಅವರ ಮುನ್ನೋಟಕ್ಕೆ , ಮುಂದುಜಾಗ್ರತ್ತೆಗೆ ನಮೋ.. 

ಹೀಗೆ ಕಣ್ಣಿಲ್ಲದವರಾದರೂ, ಒಳಗಣ್ಣಿನಿಂದ ಪರಮಾತ್ಮನ ನಿಜ ದರ್ಶನ ಮಾಡಿ, ಆತನ ಸ್ಮರಣೆ, ಕೃತಿ, ಗ್ರಂಥಗಳ ರೂಪದಲ್ಲಿ ಮಾಡಿ ನಮಗೆ ನೀಡಿದ ಶ್ರೀ ಬಾಗೇಪಲ್ಲಿ ಸುಬ್ರಹ್ಮಣ್ಯದಾಸರ ಗುರುರಾಮವಿಠಲರ ಜೀವನದ ಮಹತ್ವದ ವಿಷಯಗಳನ್ನು ತಿಳಿಸಿ ಹೇಳಲು ನಾನಂತೂ ಬಹಳ ಸಣ್ಣವಳು.. ಆದರೂ ಅವರ ಅನುಗ್ರಹದಂತೆ ಮಾಡಿದ ಪದುಮಳ ಈ ಸಣ್ಣ ಪ್ರಯತ್ನಾ ಸುಮವನ್ನು ಶ್ರೀ ದಾಸಾರ್ಯರ ಅಂತರ್ಗತ ಅವರ ಮನೆದೇವರಾದ ಭಾರತೀರಮಣ ಮುಖ್ಯಪ್ರಾಣಾಂತರ್ಗತ  ನರಸಿಂಹ ದೇವರ ಪದಪದ್ಮಗಳಲ್ಲಿ ವಿನಯಪೂರ್ಕಕ  ಸಮರ್ಪಣೆಯೊಂದಿಗೆ.....
-Smt. Padma Sirish   7 April 2020
ನಾದನೀರಾಜನದಿಂ ದಾಸಸುರಭಿ 
***


info from kannadasiri.in

ಹತ್ತೊಂಬತ್ತನೆಯ ಶತಮಾನದ ಹರಿದಾಸ ಸಾಹಿತ್ಯಕ್ಕೆÉ ತಮ್ಮ ವೈವಿಧ್ಯಮಯ ರಚನೆಗಳ ಮೂಲಕ ಅಪೂರ್ವ ಕೊಡುಗೆಯನ್ನು ನೀಡಿ ಕೇವಲ 50-60 ವರ್ಷಗಳ ಅಂತರದಲ್ಲಿಯೇ ಅe್ಞÁತರ ಪಟ್ಟಿಗೆ ಸೇರಿಹೋದವರು ಬಾಗೇಪಲ್ಲಿ ಸುಬ್ರಹ್ಮಣ್ಯ ದಾಸರು. ಇವರ ಅಂಕಿತ `ಗುರುರಾಮವಿಠಲ'.

ಶ್ರೀಸುಬ್ರಹ್ಮಣ್ಯದಾಸರು ಕೋಲಾರ ಜಿಲ್ಲೆಯ ಬಾಗೇಪಲ್ಲಿಯವರು. ವೈಷ್ಣವರಲ್ಲಿ ಒಂದು ಉಪಪಂಗಡವಾದ ಷಾಷ್ಟಿಕಕುಲ (ಅರವತ್ತೊಕ್ಕಲು)ದವರು. ಶಾಂಡಿಲ್ಯಗೋತ್ರದವರು. ನರಸಿಂಹ ಇವರ ಮನೆದೇವರು. ಬಾಗೇಪಲ್ಲಿಯ ಸಮೀಪದ ಪಾತಪಾಳ್ಯ ಇವರ ಪೂರ್ವಿಕರ ವಾಸಸ್ಥಳ. ಬಾಗೇಪಲ್ಲಿದಾಸರು, ಪಾತಪಾಳ್ಯದ ದಾಸರು, ಸುಬ್ರಹ್ಮಣ್ಯದಾಸರು, ಬಾಗೇಪಲ್ಲಿ ಸುಬ್ರಹ್ಮಣ್ಯದಾಸರು, ಗುರುರಾಮವಿಠಲರು, ಕುರುಡುದಾಸರು ಹೀಗೆ ಹಲವು ಹೆಸರುಗಳಿಂದ ದಾಸರನ್ನು ಕರೆಯುತ್ತಿದ್ದರು. ದಾಸರು ರಚಿಸಿರುವ ಸ್ವವಂಶಾವಳಿ ಶ್ಲೋಕ 25 ಪದ್ಯಗಳ ಒಂದು ಸಂಸ್ಕøತ ಕೃತಿ. ಇದರಲ್ಲಿ ತಮ್ಮ ವಂಶಾವಳಿಯನ್ನು, ಕುಲಗೋತ್ರಗಳನ್ನು ನಿರೂಪಿಸಿದ್ದಾರೆ. 'ಪುರಂಜನೋಪಾಖ್ಯಾನ ' ಎಂಬ ಕೃತಿಯ ಕೊನೆಯ ಭಾಗದಲ್ಲಿ, 'ಒಬ್ಬನೇದಾಸ ಹುಟ್ಟಿದನಿವ' ಎಂಬ ಕೀರ್ತನೆಯಲ್ಲಿಯೂ ತಮ್ಮ ಸ್ವಂತ ವಿಷಯಗಳನ್ನು ತಿಳಿಸಿದ್ದಾರೆ. ಇವರ ತಂದೆಯವರ ಹೆಸರು ಮಧ್ವರಾಯ, ನರಸಪ್ಪ ಪಿತಾಮಹ, ನಾರಣಪ್ಪ ಪ್ರಪಿತಾಮಹ. ದಾಸರ ತಾಯಿಯವರ ಹೆಸರು ನರಸಮ್ಮ, ಆಕೆಯ ತಂದೆ ಅಹೋಬಲರಾಯ.

ಸುಬ್ರಹ್ಮಣ್ಯ ನಾಲ್ಕು ವರ್ಷದವನಾಗಿರುವಾಗಲೇ ತಂದೆತಾಯಿಗಳು ಸ್ವರ್ಗಸ್ಥರಾದರು. ಅನಂತರ ಅವನು ಬೆಳೆದದ್ದು ಸೋದರಮಾವ ವೆಂಕಟರಾಯನ ಮನೆಯಲ್ಲಿ. ಅಜ್ಜಿ ಪುಟ್ಟಮ್ಮ 12ನೆಯ ವಯಸ್ಸಿನವರೆಗೂ ಪೋಷಿಸಿದಳು. ಸೋದರಮಾವ ವೆಂಕಟರಾಯನೇ ಉಪನಯನ ಮಾಡಿದ. ಉಪನಯನವಾದ ಮೇಲೆ ಹಲವಾರು ವರ್ಷಗಳ ಕಾಲ ಸುಬ್ರಹ್ಮಣ್ಯ ಒಬ್ಬೊಂಟಿಗನಾಗಿ ದೇಶಸಂಚಾರ ಮಾಡಿದ 23ನೆಯ ವರ್ಷದಲ್ಲಿ ವಿಜಯರಾಮದಾಸರಿಂದ ದಾಸತ್ವದ ದೀಕ್ಷೆಯನ್ನು ಪಡೆದು ಗುರುರಾಮವಿಠಲ ಎಂಬ ಅಂಕಿತದಿಂದ ಹರಿದಾಸನಾದ.

ದಾಸರ ಇಬ್ಬರು ಸೋದರ ಮಾವಂದಿರಲ್ಲಿ ಒಬ್ಬ ಗೃಹಸ್ಥನಾದರೂ ಮಕ್ಕಳಿರಲಿಲ್ಲ. ಮತ್ತೊಬ್ಬ ಬ್ರಹ್ಮಚಾರಿಯಾಗಿ ಉಳಿದುಕೊಂಡ. ದಾಸರು ಬ್ರಹ್ಮಚಾರಿಯಾಗಿಯೇ ಉಳಿದುಕೊಂಡದ್ದರಿಂದ ತಾಯಿಯ ಅಥವಾ ತಂದೆಯ ಕಡೆ ವಂಶ ಬೆಳೆಯಲಿಲ್ಲ. ಹೀಗಿರುವಾಗ ತನ್ನ ಪಿತೃಗಳಿಗೆ ಮೋಕ್ಷ ದೊರೆಯುವುದಾದರೂ ಹೇಗೆ ಎಂದು ಚಿಂತಿಸಿ ಪಿತೃಗಳ ಉದ್ಧಾರಕ್ಕಾಗಿ vಬಿಬಿÁವು ಹರಿಸ್ತೋತ್ರಗಳನ್ನು ರಚಿಸಿದ್ದಾಗಿ ದಾಸರು ಹೇಳಿಕೊಂಡಿದ್ದಾರೆ. ತಮ್ಮ ಕೃತಿಗಳನ್ನೇ ಮಕ್ಕಳೆಂದು ಭಾವಿಸಿ ಇವೇ ತಮ್ಮ ಪಿತೃಗಳಿಗೆ ಮೋಕ್ಷವನ್ನು ನೀಡುತ್ತವೆಂಬ ಭಾವನೆ ತುಂಬ ಉದಾತ್ತವಾದುದು.

ದಾಸರ ಜೀವಿತಕಾಲವನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲದಿದ್ದರೂ, ಅವರೇ ರಚಿಸಿರುವ ಕೀರ್ತನೆಗಳ ಆಧಾರದ ಮೇಲೆ ಸುಮಾರು ಕ್ರಿ.ಶ.1850 ರಿಂದ 1915 ಎಂದು ಭಾವಿಸಬಹುದು. ವ್ಯಾಸರಾಜ ಮಠದ ಗುರುಪೀಳಿಗೆಯನ್ನು ನಿರೂಪಿಸುವ ಒಂದು ಕೃತಿಯಲ್ಲಿ ವಿದ್ಯಾಶ್ರೀನಿವಾಸ ಯತೀಂದ್ರರು(ಕ್ರಿ.ಶ.1890) ತಮ್ಮ ಸಮಕಾಲೀನರು ಎಂಬುದನ್ನು ಗುರುರಾಮವಿಠಲರು ಉಲ್ಲೇಖಿಸಿದ್ದಾರೆ. ವಿದ್ಯಾಪೂರ್ಣ ತೀರ್ಥರಿಂದ ಪ್ರಾರಂಭಿಸಿ (ಕ್ರಿ.ಶ.1824-1872) ವಿದ್ಯಾರತ್ನಾಕರ ತೀರ್ಥರವರೆಗೆ (ಕ್ರಿ.ಶ.1915) ಇದ್ದ ವ್ಯಾಸರಾಜಮಠದ ಯತಿಗಳು ಗುರುರಾಮವಿಠಲರ ಸಮಕಾಲೀನರು. ಆದರೆ ವಿದ್ಯಾ ಶ್ರೀನಿವಾಸ ತೀರ್ಥರವರಗೆ (ಕ್ರಿ.ಶ.1890) ಮಾತ್ರ ಗುರುಪರಂಪರೆಯ ಸ್ತುತಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ದರಿಂದ ಕ್ರಿ.ಶ.1890ಕ್ಕೆ ಮೊದಲು ಗುರುರಾಮವಿಠಲರು ಈ ಗುರು ಪರಂಪರೆಯನ್ನು ರಚಿಸಿರಬೇಕು. ಗುರುರಾಮವಿಠಲರು ತಮ್ಮ ' ಸಿದ್ಧಾಂತ ಸಾರ ' ಎಂಬ ಗ್ರಂಥವನ್ನು ಕ್ರಿ.ಶ.1893ರಲ್ಲಿ ರಚಿಸಿದ್ದಾಗಿ ತಿಳಿಸಿದ್ದಾರೆ. ಕ್ರಿ.ಶ.1912ರಲ್ಲಿ ದೆಹಲಿಯಲ್ಲಿ ದರ್ಬಾರು ನಡೆಸಿದ ಜಾರ್ಜ್ ದ ಫಿಫ್ತ್‍ದೊರೆಗೆ ರಾಜಾಶೀರ್ವಾದ ಮಾಡಿದ್ದಾರೆ. ಇದರಿಂದ ದಾಸರು ಕ್ರಿ.ಶ.1912ರ ವರೆಗೂ ಜೀವಂತವಾಗಿದ್ದಿರಬೇಕು.

ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಪಟ್ಟಾಭಿಷೇಕವಾದ ಸಂದರ್ಭದಲ್ಲಿ (ಫೆಬ್ರುವರಿ 1, 1895) ಗುರುರಾಮವಿಠಲರು ' ಕೃಷ್ಣನೃಪನು ಸಲಹಲಿ ಉತ್ಕøಷ್ಟ ಫಲಗಳಾಗಲಿ ' ಎಂದು ಕೀರ್ತನೆಯೊಂದರಲ್ಲಿ ಹಾರೈಸಿದ್ದಾರೆ. ಮಹಾ ಎಡ್ವರ್ಡ್ ಚಕ್ರವರ್ತಿ ಹೆಸರನ್ನು ಉಲ್ಲೇಖಿಸಿದ್ದಾರೆ. ಮೈಸೂರಿನ ದಿವಾನರಾಗಿದ್ದ ದಿವಾನ್ ಸಿ.ವಿ.ರಂಗಚಾರ್ಲು ಅವರ ಆಡಳಿತದ ಅವಧಿಯಲ್ಲಿ ಬೆಂಗಳೂರು ಖಜಾನೆಯ ಭಕ್ಷಿಯಾಗಿದ್ದ ಸೇತುರಾಯ ಎಂಬ ಅಧಿಕಾರಿಯನ್ನು ಕರಿತು ' ಸೇತುರಾಯನ ಕತೆ ' ಎಂಬ ಖಂಡಕಾವ್ಯವನ್ನು ರಚಿಸಿದ್ದಾರೆ.

'ಪ್ರಾಣದೇವ ಜೀಯ ದೇಹದಲಿ ಪ್ರಾಣ ತಗ್ಗಿತಯ್ಯ' ಎಂಬ ಕೀರ್ತನೆಯಲ್ಲಿ ಅನಾರೋಗ್ಯ ತಮ್ಮನ್ನು ಕಾಡುತ್ತಿದೆ ಎಂದೂ, ಕೈಕಾಲುಗಳು ಸೋತು ಹೋಗಿದೆಯೆಂದೂ, ಕಾಲ ಮೃತ್ಯು ಸಮೀಪಿಸುತ್ತಿದೆಯೆಂದೂ ತಿಳಿಸಿದ್ದಾರೆ. 'ವರುಷ ಐವತ್ತಾರು ಕಳೆದಿತು ಪರಿಪಾಲಿಪರ್ಯಾರು' ಎಂದು ಹಂಬಲಿಸಿದ್ದಾರೆ. ಸ್ವಕೀಯ ವೃತ್ತಾಂತವನ್ನೊಳಗೊಂಡ ಈ ಕೀರ್ತನೆಯ ರಚನೆಯ ಕಾಲಕ್ಕೆ ದಾಸರಿಗೆ ಐವತ್ತಾರು ವರ್ಷವಾಗಿರಬೇಕು.

ಸುಬ್ರಹ್ಮಣ್ಯದಾಸರು ದೊಡ್ಡಬಳ್ಳಾಪುರದ ಮುದ್ದುಮೋಹನ ವಿಠಲದಾಸರ (ಕ್ರಿ.ಶ.1898) ಸಮಕಾಲೀನರು. ಮುದ್ದುಮೋಹನ ವಿಠಲದಾಸರು ದೊಡ್ಡಬಳ್ಳಾಪುರದಲ್ಲಿ ಕಟ್ಟಿಸಿದ ವಿಜಯ ವಿಠಲ ದೇವಾಲಯಕ್ಕೆ ಸುಬ್ರಹ್ಮಣ್ಯದಾಸರು ಭೂಮಿಯನ್ನು ದಾನವಾಗಿ ನೀಡಿದ್ದರು.

ಈ ಎಲ್ಲದರ ಆಧಾರದ ಮೇಲೆ ಶ್ರೀ ಗುರುರಾಮವಿಠಲರು ಕ್ರಿ.ಶ. ಸುಮಾರು 1850 ರಿಂದ 1915ರವರೆಗೆ ಜೀವಿಸಿದ್ದರೆಂದು ಹೇಳಬಹುದು.

ಗುರುರಾಮವಿಠಲರು ಹುಟ್ಟು ಕುರುಡರಾಗಿದ್ದರೆಂದೂ, ಆದ್ದರಿಂದ ಅವರನ್ನು ಕುರುಡುದಾಸರೆಂದೇ ಕರೆಯುತ್ತಿದ್ದರೆಂದೂ ಪ್ರತೀತಿ. ಆದರೆ ಅವರ ಕೃತಿಗಳಲ್ಲಿರುವ ಅಪಾರ ಲೋಕಾನುಭವ, ಪಾಂಡಿತ್ಯಗಳನ್ನು ಗಮನಿಸಿದರೆ ಇವರು ಹುಟ್ಟು ಕುರುಡರಾಗಿರಲಾರರು. ಬಹುಶಃ ಮಧ್ಯವಯದಲ್ಲಿ ಕಣ್ಣುಗಳನ್ನು ಕಳೆದುಕೊಂಡು ಕುರುಡರಾಗಿ ದೇಶಾಂತರ ಹೊರಟುಹೋದರೆಂದು ಕಾಣುತ್ತದೆ. ಊರೂರು ಅಲೆದು, ನೂರಾರು ವಿಷಯಗಳನ್ನು ತಿಳಿದು, ಭಾರತ, ಭಾಗವತ, ಶಾಸ್ತ್ರ ಗ್ರಂಥಗಳನ್ನು ಕೇಳಿ ಲೋಕಾನುಭವ ಪಡೆದು ದಾಸದೀಕ್ಷೆ ಸ್ವೀಕರಿಸಿರಬೇಕು. ಇವರು ಕುರುಡರಾಗಿದ್ದರೆಂಬುದಕ್ಕೆ ಕೀರ್ತನೆಗಳಲ್ಲೂ ಉಲ್ಲೇಖಗಳು ದೊರೆಯುತ್ತವೆ. ' ಇಹ ಸುಖ ಮೊದಲೇ ಇಲ್ಲ' ಎಂಬ ಕೀರ್ತನೆಯಲ್ಲಿ

'ಕಣ್ಣಲ್ಲದ ಚಿಂತೆ ಒಂದು | ಸದಾ

ಬನ್ನಬಡುವುದು ಯೋಚನೆ ಎರೆಡು

ನಿನ್ನವನೆನಿಸೀ ಕಷ್ಟ ಬಿಡಿಸಿ ಒಳ

ಗಣ್ಣ ಕೊಟ್ಟು ನಿನ್ನ ಸೇವೆಯ ಪಾಲಿಸೋ'

ಎಂದು ತಮಗೆ ಒಳಗಣ್ಣು ನೀಡುವಂತೆ ದೇವರನ್ನು ಬೇಡಿದ್ದಾರೆ. 'ಸಾಕು ಸಾಕು ಸ್ವಾಮಿ ಸಂಸಾರವು' ಎಂಬ ಕೀರ್ತನೆಯಲ್ಲಿ ಕಿವಿಗಳು ಕೇಳದು. ಕಣ್ಣುಕಾಣದು, ಬಂಧುಗಳನ್ನು ಆಶ್ರಯಿಸಿ ಬದುಕುವುದು ಬಹಳ ಕಷ್ಟ ಎಂದು ಭಾಗ್ಯವಲ್ಲಿಯ ಹನುಮಂತನಲ್ಲಿ ತಮ್ಮ ಕಷ್ಟಗಳನ್ನು ನಿವೇದಿಸಿಕೊಂಡಿದ್ದಾರೆ. 'ಒಂದು ಅರಿಯದ ಉಭಯಾಂಧನು ನಾನು' ಎಂದು ಮತ್ತೊಂದು ಕೀರ್ತನೆಯಲ್ಲಿ ಹೇಳಿದ್ದಾರೆ.

ಗುರುರಾಮವಿಠಲರ ಎಲ್ಲ ಕೀರ್ತನೆಗಳನ್ನು ಸಂಗ್ರಹಿಸಿ ತಮ್ಮ ಹರಿಕಥೆಗಳಿಗೆ ಬಳಸಿಕೊಳ್ಳುತ್ತಿದ್ದ ಶ್ರೀ ಟಿ.ಕೆ. ವೇಣುಗೋಪಾಲದಾಸರು ತಮ್ಮ ದತ್ತು ತಾಯಿಯ ತವರು ಮನೆಯ ದಾಯಾದಿಗಳಾದ ಗುರುರಾಮವಿಠಲರ ಬಗ್ಗೆ ಹೀಗೆ ಹೇಳಿದ್ದಾರೆ:'ಸುಬ್ರಹ್ಮಣ್ಯ ದಾಸರನ್ನು ನಮ್ಮ ಜನಕತಂದೆ, ತಾಯಿ, ಹಿರಿಯ ಅಕ್ಕ ಮತ್ತು ಹಿರಿಯ ಅಣ್ಣ ನೋಡಿದ್ದರು, ಅವರು ವರ್ಷಕ್ಕೆ ಒಂದು ಬಾರಿ ನಮ್ಮ ಮನೆಗೆ ಬಂದು ಹೋಗುತ್ತಿದ್ದರಂತೆ. ಅವರು ಹುಟ್ಟು ಕುರುಡರು ಎಂದು ಅವರಿಂದ ತಿಳಿದು ಬಂತು. ಇದು ಅವರನ್ನು ನೋಡಿದವರ ಅಭಿಪ್ರಾಯವಾದರೂ. ಬಹುಶಃ ಹುಟ್ಟುಕುರುಡರಾಗಿರಲಾರರು. ಯೌವ್ವನಾವಸ್ಥೆಯಲ್ಲಿ ಯಾವಾಗಲೋ ಕಣ್ಣು ಕಳೆದುಕೊಂಡು ವೈರಾಗ್ಯಪರರಾಗಿರಬೇಕು'.

ಸುಬ್ರಹ್ಮಣ್ಯದಾಸರು ಕುರುಡರಾದರೂ ಯಾರ ಸಹಾಯವನ್ನೂ ಪಡೆಯದೆ ಒಬ್ಬಂಟಿಗರಾಗಿ ಹೆಗಲ ಮೇಲೆ ಹಸಿಬೆ ಚೀಲವನ್ನು ಹಾಕಿಕೊಂಡು ಊರೂರು ಸಂಚರಿಸುತ್ತಿದ್ದರು. ಕಾಶಿಯಿಂದ ಕನ್ಯಾಕುಮಾರಿಯವರೆಗೂ ಪಾದಚಾರಿಗಳಾಗಿ ತೀರ್ಥಯಾತ್ರೆಯನ್ನು ಮಾಡಿ ಬಂದವರು. ದಾಸರು ಕುರುಡರಾದ್ದರಿಂದ ಓದುವ ಬರೆಯುವ ಅವಕಾಶವೇ ಅವರಿಗಿರಲಿಲ್ಲ. ಆದರೂ ಬಹುಭಾಷಾe್ಞÁನವುಳ್ಳವರಾಗಿದ್ದರು. ಮಧ್ವಾಚಾರ್ಯರ ಕೃತಿಗಳು, ಹರಿದಾಸರ ಕೀರ್ತನೆಗಳು, ಭಾರತ, ಭಾಗವತ, ರಾಮಾಯಣ ಇವುಗಳನ್ನು ಕಂಠಪಾಠ ಮಾಡಿಕೊಂಡಿದ್ದರು. ಯಾವುದಕ್ಕಾದರೂ ಆಧಾರ ಎಲ್ಲಿದೆ ಎಂದು ಕೇಳಿದರೆ ಗ್ರಂಥದ ಹೆಸರನ್ನೂ, ಅಧ್ಯಾಯವನ್ನೂ, ಶ್ಲೋಕಗಳ ಸಂಖ್ಯೆಯನ್ನು ಕೇಳಿದ ನೆನಪಿನಿಂದಲೇ ಹೇಳುತ್ತಿದ್ದರಂತೆ. ತಾವು ಯಾತ್ರೆ ಮಾಡಿದ ಕ್ಷೇತ್ರ ಮೂರ್ತಿಗಳ ವರ್ಣನೆಯನ್ನು ಬೇರೆಯವರಿಂದ ಕೇಳಿ ತಿಳಿದುಕೊಂಡು ಆ ಪ್ರತಿಮೆಗಳ ಉದ್ದ, ಅಗಲ, ಭಂಗಿ, ಅಡಿಯಿಂದ ಮುಡಿಯವರೆಗಿನ ವಸ್ತ್ರ್ತ್ರಾಲಂಕಾರ ತಾವು ಒಳಗಣ್ಣಿಂದ ನೋಡಿದ ದರ್ಶನ ಎಲ್ಲವನ್ನೂ ನಿರೂಪಿಸುತ್ತಿದ್ದರು. ಆಶು ಕವಿಗಳಾಗಿ ಕೇಳಿದ ವಸ್ತುಗಳ ಮೇಲೆಲ್ಲಾ ಪದ್ಯ ಬರೆಯುತ್ತಿದ್ದರು. ಕುಳಿತಲ್ಲೇ ಹತ್ತಾರು ನುಡಿಗಳ ದೇವರನಾಮಗಳನ್ನು ಕಟ್ಟುತ್ತಿದ್ದರು. ಮದುವೆ, ಮುಂಜಿ, ಉತ್ಸವ, ಜಾತ್ರೆ ಹೀಗೆ ಹಲವು ಸಂದರ್ಭಗಳಿಗೆ ಸ್ಪಂದಿಸಿ ಹಾಡು ಹೇಳುತ್ತಿದ್ದರು. ಯಾರಾದರೂ ಬರವಣಿಗೆ ತಿಳಿದವರು ಸಿಕ್ಕಿದರೆ ತಾವು ರಚಿಸಿದ ದೇವರನಾಮಗಳನ್ನು ಮರಯದೆ ಹೇಳಿ ಬರೆಯಿಸುತ್ತಿದ್ದರು. ಈಗ ನಮಗೆ ದೊರೆತಿರುವ ಅವರ ಕೃತಿಗಳೆಲ್ಲವೂ ಇದೇ ಕ್ರಮದಲ್ಲಿ ಬೇರೆಯವರು ಬರೆದುಕೊಂಡ ರಚನೆಗಳು. ತಾವು ರಚಿಸಿದ ಕೃತಿಗಳನ್ನು ಮತ್ತೊಮ್ಮೆ ಅವಲೋಕಿಸಿ ತಿದ್ದುಪಡಿ ಮಾಡುವ ಸಾಧ್ಯತೆಯೂ ದಾಸರಿಗೆ ಇರಲಿಲ್ಲ. ಆದರೆ ದಾಸರ ವಿದ್ವತ್ತನ್ನು, ಕವಿತಾ ಚಾತುರ್ಯವನ್ನು ಮೆಚ್ಚಿಕೊಂಡಿದ್ದ ಆಗಿನ ವಿದ್ವಾಂಸರುಗಳಾದ ಬಾಗೇಪಲ್ಲಿಯ ಸಾಹಿತ್ಯ ವಿದ್ವಾನ್ ಶ್ರೀನಿವಾಸಾಚಾರ್ಯರು ಮೈಸೂರು ರಾಘವೇಂದ್ರಾಚಾರ್ಯರು, ಬೆಂಗಳೂರು ಶಿವರಾಮಶಾಸ್ತ್ರಿಗಳು ಕೃತಿಗಳ ಪರಿಷ್ಕರಣೆಯಲ್ಲಿ ಸಹಾಯ ಮಾಡುತ್ತಿದ್ದರು. ಈ ವಿದ್ವಾಂಸರುಗಳ ಸಹಕಾರದಿಂದ ಸಿದ್ಧಾಂತಸಾರ, ಪಂಚಕಥಾ, ಮತ್ತು ದೇವರನಾಮಗಳು 1905ರಲ್ಲಿ ಪ್ರಕಟವಾದುವು. ಮುದ್ರಿತ ಕೃತಿಗಳಿಂದ ಬರಬಹುದಾದ ಅಲ್ಪಾದಾಯವನ್ನು ಕೂಡಾ ದಾಸರು ಅಪೇಕ್ಷಿಸಲಿಲ್ಲ ತಮ್ಮ ಎಲ್ಲ ಕೃತಿಗಳ ರಿಜಿಸ್ಟರ್ಡ್ ಕಾಪಿರೈಟ್ ಹಕ್ಕನ್ನು ಬಾಗೇಪಲ್ಲಿ ತಾಲ್ಲೂಕು ಪಾತಪಾಳ್ಯದ ಜಗದೇಶವಿಠಲನಾರಾಯಣದಾಸರಿಗೆ ಧರ್ಮವಾಗಿ ಬಿಟ್ಟುಕೊಟ್ಟರು.

ದಾಸದೀಕ್ಷೆ ಪಡೆಯುವ ಪೂರ್ವದಲ್ಲಿ ಮತ್ತು ಅನಂತರ ನಿಂತಲ್ಲಿ ನಿಲ್ಲದೆ ದಾಸರು ದೇಶ ಸಂಚಾರ ಮಾಡಿದರು. ಬೆಂಗಳೂರು, ಕೋಲಾರ, ನೆರೆಯ ಆಂಧ್ರದ ಗಡಿಪ್ರದೇಶಗಳ ಹಳ್ಳಿಹಳ್ಳಿಗಳನ್ನು ಸುತ್ತಿದರು. ಅಲ್ಲಿನ ದೇವಾಲಯಗಳನ್ನು, ದೇವತಾಮೂರ್ತಿಗಳನ್ನು ಕುರಿತು ಕೀರ್ತನೆಗಳನ್ನು ರಚಿಸಿದರು. ಜನರ ನಡವಳಿಕೆಗಳನ್ನು ಆಚಾರ ವಿಚಾರಗಳನ್ನು ಬದಲಾಗುತ್ತಿದ್ದ ಸಾಂಸ್ಕøತಿಕ ನೆಲೆಗಳನ್ನು ಕೇಳಿ ತಿಳಿದು ತಮ್ಮ ಕೃತಿಗಳಲ್ಲಿ ದಾಖಲಿಸಿದರು. ಈ ಅವಧಿಯಲ್ಲಿ ಅವರಿಗೆ ಚೆನ್ನಾಗಿ ದ್ರವ್ಯ ಸಂಪಾದನೆಯೂ ಆಯಿತು. ತಾವು ಸಂಪಾದಿಸಿದ ದ್ರವ್ಯವನ್ನು ಬಡವರಿಗೆ, ದೇವಾಲಯಗಳಿಗೆ ದಾನ ಮಾಡುತ್ತ ಅವಧೂತರಂತೆ ಸಂಚರಿಸಿದರು. 56ನೆಯ ವಯಸ್ಸಿನಲ್ಲಿ ರೋಗದ ಉಪದ್ರವ ಇವರನ್ನು ಬಹಳವಾಗಿ ಕಾಡಿರಬೇಕು. ಶರೀರ ಬೆಂಡಾಯಿತು, ಊಟ ಮಾಡಲು, ಬಟ್ಟೆ ಉಡಲು ಕೂಡಾ ಬೇರೊಬ್ಬರನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಉಂಟಾಯಿತು. ಎಲ್ಲ ಲೌಕಿಕ ಪಾರಮಾರ್ಥಿಕ ಆಸೆಗಳು ದೂರವಾಗಿ ದಾಸರು ಸಂಪೂರ್ಣ ವಿರಕ್ತರಾದರು. ಇದೇ ಸುಮಾರಿನಲ್ಲಿ ಅವರು ಎಲ್ಲಿ ಯಾವಾಗ ದೇಹತ್ಯಾಗ ಮಾಡಿದರೆಂಬ ವಿವರಗಳು ತಿಳಿಯುವುದಿಲ್ಲ. ಏಕೆಂದರೆ ಅವರ ವಂಶಸ್ಥರಲ್ಲಿ ದಾಸರೇ ಕೊನೆಯ ವ್ಯಕ್ತಿ.

ದಾಸರು ತಮ್ಮ ಜೀವಿತಾವಧಿಯಲ್ಲಿ ಕೆಲವು ಪವಾಡಗಳನ್ನು ಮಾಡಿದರೆಂಬ ಪ್ರತೀತಿಯಿದೆ. ಅವರು ನಿಜವಾಗಿ ಪವಾಡಗಳನ್ನೇ ಮಾಡಿದರೋ ಅಥವಾ ಸ್ವಾಭಾವಿಕ ಘಟನೆಗಳೇ ಪವಾಡ ಸದೃಶವಾಗಿ ಕಂಡವೋ ತಿಳಿಯದು. ಒಂದೆರೆಡು ಸಂದರ್ಭಗಳು ಹೀಗಿವೆ :

ಚಿಂತಾಮಣಿಯ ಸಮೀಪದ ಹಳ್ಳಿಯೊಂದರಲ್ಲಿ ದಾಸರು ಒಂದು ಮದುವೆ ಮನೆಗೆ ಹೋಗಿದ್ದರು. ಮದುವೆ ಮನೆಯಲ್ಲಿ ಒಂದು ಬಂಗಾರದ ಸರ ಕಳುವಾಗಿ ದಾಸರೇ ಅದನ್ನು ಕದ್ದಿರಬೇಕೆಂದು ಆರೋಪಿಸಲಾಯಿತು. ಪೋಲಿಸರು ದಾಸರನ್ನು ಎಳೆದೊಯ್ದು ಬೂಟುಕಾಲಿನಿಂದ ಒದ್ದರು. ದಾಸರು ಬೇಸರಗೊಳ್ಳಲಿಲ್ಲ, ರೋದಿಸಲಿಲ್ಲ, ತಾವು ಅಪರಾಧಿ ಅಥವಾ ನಿರಪರಾಧಿ ಎಂಬುದನ್ನು ಹೇಳಲಿಲ್ಲ. ಬದಲಿಗೆ ಒದ್ದವನನ್ನು ಕುರಿತು 'ಮಹಾರಾಯ ನೀನೆಷ್ಟು ದಯಾಮಯ, ನನ್ನ ಪಾಪಗಳನ್ನೆಲ್ಲಾ ದೂರಮಾಡಿಬಿಟ್ಟೆ ಸುಖವಾಗಿರು' ಎಂದು ಹಾರೈಸಿದರು. ರಾತ್ರಿಯೆಲ್ಲಾ ಠಾಣೆಯಲ್ಲಿಯೇ ಕಳೆದರು. ಮಾರನೆಯದಿನ ಬೆಳಗ್ಗೆಯೇ ದೂರು ಕೊಟ್ಟಿದ್ದ ಗೃಹಸ್ಥ ಠಾಣೆಗೆ ಧಾವಿಸಿ ಬಂದ. ಬಂಗಾರದ ಸರ ಸಿಕ್ಕಿತೆಂದೂ, ಅನ್ಯಾಯವಾಗಿ ದಾಸರ ಮೇಲೆ ಅಪವಾದವನ್ನು ಹೊರಿಸಿ ಮಹಾಪರಾಧ ಮಾಡಿದೆನೆಂದೂ ಮತ್ತೆ ಮತ್ತೆ ಅವರ ಕಾಲಿಗೆ ಬಿದ್ದ, ಪೋಲೀಸ್ ಅಧಿಕಾರಿಗೂ ತುಂಬಾ ಭಯವಾಯಿತು ಪಶ್ಚಾತ್ತಾಪಪಡುತ್ತಾ ಅವನೂ ದಾಸರ ಕಾಲಿಗೆ ಬಿದ್ದ. ದಾಸರು ಎಲ್ಲರಿಗೂ ಕೈಮುಗಿದು 'ಎಷ್ಟು ಪ್ರಾಯಶ್ಚಿತ್ತ ಮಾಡಿಕೊಂಡರೂ ಹೋಗದ ಪಾಪರಾಶಿಯನ್ನೆಲ್ಲಾ ಒಂದೇ ರಾತ್ರಿಯಲ್ಲಿ ಪರಿಹಾರವಾಗುವಂತೆ ನೀವೆಲ್ಲರೂ ಮಹೋಪಕಾರ ಮಾಡಿದ್ದೀರಿ, ಪತಿತನನ್ನು ಪಾವನಮಾಡಿದ ನಿಮಗೆಲ್ಲರಿಗೂ ವಂದನೆಗಳು' ಎಂದು ಹೇಳಿ ನಗುತ್ತಾ ಹೊರಟುಹೋದರು. ಈತನೇನು ಹುಚ್ಚನೋ, ಬೆಪ್ಪನೋ, ಅವಧೂತನೋ ಎಂದು ಜನ ವಿಸ್ಮಯಪಟ್ಟರು.

ಬಾಲಕನೊಬ್ಬನಿಗೆ ವಿಪರೀತ ಜ್ವರ ಬಂದು ಅನ್ನನೀರುಗಳನ್ನು ತೆಗೆದುಕೊಳ್ಳದೆ ಬಳಲುತ್ತಿದ್ದ. ಅಕಸ್ಮಾತ್ ದಾಸರು ಆ ಮನೆಗೆ ಬಂದರು. ಬಳಲಿದ ಬಾಲಕನ ಸ್ಥಿತಿಯನ್ನು ಕೇಳಿ ಕನಿಕರ ಉಂಟಾಯಿತು. ಜ್ವರವು ಅಡಗುವಂತೆ ಮೃತ್ಯುಂಜಯನಾದ ಭಯನಿವಾರಣ ನಾರಸಿಂಹನನ್ನು ಒಂದು ಕೀರ್ತನೆಯ ಮೂಲಕ ಸ್ತುತಿಸಿ ಪ್ರಾರ್ಥಿಸಿದರು. (ಕೀ.334) ಬಾಲಕ ಆರೋಗ್ಯವಂತನಾಗಿ ಬದುಕಿಕೊಂಡ.

ಕೋಲಾರಜಿಲ್ಲೆಯಲ್ಲಿ ಸಾಮಾನ್ಯವಾಗಿ ಮಳೆ ಕಡಿಮೆ. ಮಳೆಯಿಲ್ಲದೆ ಒಮ್ಮೆ ಕುಡಿಯುವ ನೀರಿಗೂ ತೊಂದರೆಯಾಗಿ ಜನ ಪರಿತಪಿಸಿ ಮಳೆ ತರಿಸುವಂತೆ ದಾಸರನ್ನು ಬೇಡಿದರು. ಮಳೆ ಬಂದು ಸುಭಿಕ್ಷ ನೆಲಸಲಿ ಎಂದು ಹಾರೈಸುತ್ತಾ ದಾಸರು ಸೂರ್ಯಮಂಡಲ ಮಧ್ಯವರ್ತಿಯಾದ ನಾರಾಯಣನನ್ನು ಸ್ತೋತ್ರಮಾಡಿ ಹಾಡಿದರು. (ಕೀ.337) ಪರ್ಜನ್ಯ ನಾಮಕನಾದ ಶ್ರೀಹರಿ ಸುವೃಷ್ಟಿಯನ್ನು ಕೊಟ್ಟು ಜನರನ್ನು ಸಂತೋಷಪಡಿಸಿದನೆÉಂದು ಹೇಳುತ್ತಾರೆ.

ದಾಸರು ತಮ್ಮ ತೋಳಿನಲ್ಲಿ ಒಂದು ಸೇರು ತೂಕದ ಬೆಳ್ಳಿ ಬಳೆಯನ್ನು ಧರಿಸುತ್ತಿದ್ದರು. ದಾಸರಿಗೇಕೆ ಬೆಳ್ಳಿ ಬಂಗಾರ ಎಂದು ಯಾರಾದರೂ ಕೇಳಿದರೆ 'ನನಗೆ ಹಿಂದೆ ಮುಂದೆ ಯಾರೂ ಇಲ್ಲ, ಯಾವಾಗ ಎಲ್ಲಿ ಸಾಯುತ್ತೇನೆಯೋ ಗೊತ್ತಿಲ್ಲ ಹಣವನ್ನು ಚಂದಾ ಎತ್ತಿ ಅಗ್ನಿ ಸಂಸ್ಕಾರ ಮಾಡುವ ತೊಂದರೆ ಯಾರಿಗೂ ಬೇಡ. ಈ ಬೆಳ್ಳಿಯ ಬಳೆಯನ್ನು ಮಾರಿ ಯಾವನಾದರೂ ಪುಣ್ಯಾತ್ಮ ನನ್ನ ಸಂಸ್ಕಾರ ಮಾಡಲಿ ಎಂದು ಈ ಬಳೆಯನ್ನು ಹಾಕಿಕೊಂಡಿದ್ದೇನೆಯೇ ಹೊರತು ಅಂದ ಚಂದಕ್ಕಲ್ಲ' ಎಂದು ಹೇಳುತ್ತಿದ್ದರಂತೆ.

ಗುರುರಾಮವಿಠಲರು ವಾರ್ಧಕ ಷಟ್ಪದಿಯಲ್ಲಿ ರಚಿಸಿರುವ ದಾಸಪೀಳಿಗೆಯ ಸ್ತುತಿಯಲ್ಲಿ ತಮ್ಮ ಗುರು ಪರಂಪರೆಯನ್ನು ಹೀಗೆ ತಿಳಿಸಿದ್ದಾರೆ :

1. ಶ್ರೀಪಾದರಾಜ (ರಂಗವಿಠ್ಠಲ)

2. ವ್ಯಾಸರಾಜ (ಶ್ರೀಕೃಷ್ಣ)

3. ಪುರಂದರದಾಸ (ಪುರಂದರ ವಿಠಲ)

4. ವಿಜಯದಾಸ (ವಿಜಯವಿಠಲ)

5. ಮೋಹನದಾಸ (ಮೋಹನ ವಿಠಲ)

6. ತಿರುಮಲದಾಸ (ಜನಾರ್ಧನ ವಿಠಲ)

7. ಪ್ರೇಮದಾಸ (ಅಭಿನವ ಜನಾರ್ಧನವಿಠಲ)

8. ದೂರಪ್ಪದಾಸ (ಭಾಗ್ಯನಿಧಿವಿಠಲ)

9. ಚಿತ್ರದುರ್ಗದ ಮಾಧವರಾಯ (ರಾಮವಿಠಲ)

10. ಬಾಗೇಪಲ್ಲಿ ಸುಬ್ರಹ್ಮಣ್ಯದಾಸ (ಗುರುರಾಮವಿಠಲ)

'ಗುರುಸಂತತಿಗೆ ನಮೋ' ಎಂಬ ಕೀರ್ತನೆಯಲ್ಲಿ ಮತ್ತು 'ಪಾರಂಪರ್ಯಾಂಕಿತ ಪದ' ಇವುಗಳಲ್ಲಿ ಆರೋಹಣ ಕ್ರಮದಲ್ಲಿ ತಮ್ಮ ಗುರು ಪರಂಪರೆಯನ್ನು ನಿರೂಪಿಸಿದ್ದಾರೆ. ಇದು ಹಿಂದಿನ ದಾಸ ಪೀಳಿಗೆಗಿಂತ ಸ್ವಲ್ಪ ಭಿನ್ನವಾಗಿದೆ.

1. ಗುರುರಾಮವಿಠಲ (ಬಾಗೇಪಲ್ಲಿ ಸುಬ್ರಹ್ಮಣ್ಯದಾಸ)

2. ಶ್ರೀರಾಮವಿಠಲ, ರಾಮವಿಠಲ, ವಿಜಯರಾಮವಿಠಲ (ಚಿತ್ರದುರ್ಗದ ಮಾಧವರಾಯರು)

3. ಭಾಗ್ಯನಿಧಿವಿಠಲ (ದೂರಪ್ಪದಾಸರು ಅಥವಾ ದೂರ್ವಾಸರಾಯರು)

4. ಅಭಿನವ ಜನಾರ್ದನ ವಿಠಲ (ಪ್ರೇಮದಾಸರು)

5. ಸಿರಿಜನಾರ್ದನವಿಠಲ (ತಿರುಮಲದಾಸರು)

6. ಗುರುಗೋಪಾಲವಿಠಲ (ಶೀನಪ್ಪದಾಸರು)

7. ಗೋಪಾಲವಿಠಲ (ಭಾಗಣ್ಣದಾಸರು)

8. ವಿಜಯವಿಠಲ (ವಿಜಯದಾಸರು)

9. ಪುರಂದರವಿಠಲ (ಪುರಂದರದಾಸರು)

10. ಶ್ರೀಕೃಷ್ಣ (ವ್ಯಾಸರಾಜರು)

11. ರಂಗವಿಠಲ (ಶ್ರೀ ಪಾದರಾಜರು)

ಗುರುರಾಮವಿಠಲರು ರಚಿಸಿರುವ 'ಮಧ್ವಸಿದ್ಧಾಂತಸಾರ' ಎಂಬ ಕೃತಿಯಲ್ಲಿನ 16ನೆಯ ಸಂಧಿಯ ಐದು ಪದ್ಯಗಳಲ್ಲಿ ವ್ಯಾಸರಾಯರಿಂದ ಪ್ರಾರಂಭಿಸಿ ಅವರೋಹಣ ಕ್ರಮದಲ್ಲಿ ಗುರು ಪರಂಪರೆಯನ್ನು ನಿರೂಪಿಸಿದ್ದಾರೆ. ಇದಕ್ಕೂ 'ಗುರುಸಂತತಿಗೆ ನಮೋ' ಮತ್ತು 'ಪಾರಂಪರ್ಯಾಂಕಿತ ಪದ' ಎಂಬ ಕೀರ್ತನೆಯಲ್ಲಿ ಹೇಳಿರುವ ಗುರುಪರಂಪರೆಗೂ ವ್ಯತ್ಯಾಸವಿಲ್ಲ.

'ವಿಷ್ಣುಶತಕ' ಎಂಬ ಕೃತಿಯ ಅಂಕಿತನುಡಿಯಲ್ಲಿ ತಮ್ಮ ಗುರುಪರಂಪರೆಯನ್ನು ಹೀಗೆ ಪ್ರಸ್ತಾಪಿಸಿದ್ದಾರೆ :

ಸಿರಿಪಾದರಾಯರ ಪರಂಪರೆಯೊಳ್

ನೆರೆಪತ್ತೊಂದನೆಯವಂ ಮನದೊಳ್

ಗುರುರಾಮವಿಠಲನು ಪೇಳಿಸಿದಂ-

ತರುಹಿರ್ಪ ವಿಷ್ಣುಶತಕಂ ತರಳಂ

ಇದರಂತೆ ಶ್ರೀಪಾದರಾಜ ಪರಂಪÀರೆಯಲ್ಲಿ ತಾವು ಹನ್ನೊಂದನೆಯವರು ಎಂದು ಹೇಳಿಕೊಂಡಿರುವುದರಿಂದ ಆರೋಹಣ ಕ್ರಮದ ಗುರುಪರಂಪರೆಯೆ ಹೆಚ್ಚು ಸಂಭಾವ್ಯವಾದದ್ದು ಎನ್ನಬಹುದು. ಗುರುರಾಮವಿಠಲರಿಗೆ ಅಂಕಿತ ನೀಡಿದವರು ಚಿತ್ರದುರ್ಗದ ಮಾಧವರಾಯರು. ಇವರು ಬೆಂಗಳೂರಿನಲ್ಲಿ (ಕಲ್ಯಾಣಪುರ) ಹಲವುಕಾಲ ನೆಲೆಸಿದ್ದು ಕೀರ್ತನೆ, ಹರಿಕಥೆ, ಪುರಾಣಗಳನ್ನು ಬೋಧಿಸುತ್ತ ಇದ್ದವರು, e್ಞÁನ, ವೈರಾಗ್ಯ ಮತ್ತು ಸದ್ಭಕ್ತಿಗಳನ್ನು ಹೊಂದಿದ್ದವರು ಎಂದು ದಾಸ ಪೀಳಿಗೆಯ ಷಟ್ಪದಿಯಲ್ಲಿ ಸ್ತುತಿಸಿದ್ದಾರೆ. (ಅನುಬಂಧ-8)



ಗುರುರಾಮವಿಠಲ ಅಂಕಿತದಲ್ಲಿ ದೊರೆತಿರುವ ಕೀರ್ತನೆಗಳ ಸಂಖ್ಯೆ ಸುಮಾರು 350. ಭಗವಂತನ ಮತ್ತಿತರ ದೇವತೆಗಳ ಸಂಕೀರ್ತನೆ, ಆತ್ಮನಿವೇದನೆ, ತಾತ್ವಿಕ ಕೃತಿಗಳು, ಲೋಕನೀತಿ, ಸಮಾಜ ದರ್ಶನ, ಸಂಪ್ರದಾಯದ ಹಾಡುಗಳು, ವಿಶೇಷ ಸಂದರ್ಭದ ಕೃತಿಗಳು, ಹೀಗೆ ಕೀರ್ತನೆಗಳಲ್ಲಿ ವಿಷಯ ವೈವಿಧ್ಯವನ್ನು ಕಾಣಬಹುದು.

ಕಥನರೂಪವಾದ ಮನ್ಮಥ ಚರಿತ್ರೆ, ಪುರಂಜನೋಪಾಖ್ಯಾನ ಲಾವಣಿ, ಆಧ್ಯಾತ್ಮ ರಾಮಾಯಣ, ಸಂಕ್ಷೇಪ ಭಾಗವತ, ಸಂಕ್ಷೇಪಭಾರತ, ಸಂಕ್ಷೇಪ ರಾಮಾಯಣ, ಭಾಗವತ ದಶಮ ಸ್ಕಂಧದ ಕಥೆ, ವಿಷ್ಣುಶತಕ, ಇವು ಕೀರ್ತನ ಸಂಪ್ರದಾಯಕ್ಕೇ ಸೇರುವ ಇತರ ಕೃತಿಗಳು.



ಹರಿಕಥೆಗೆ ಅನುಕೂಲವಾಗುವಂತೆ ಪ್ರಹ್ಲಾದ ಚರಿತ್ರೆ, ಮಾಧವ ಚರಿತ್ರೆ, ಅನಸೂಯಾ ಚರಿತ್ರೆ, ದ್ಯೂತಪರ್ವ ಮತ್ತು ದೂರ್ವಾಸ ಚರಿತ್ರೆ ಎಂಬ ಐದು ಕಥೆಗಳನ್ನು ಕಥಾ ಕೀರ್ತನ ರೂಪದಲ್ಲಿ ರಚಿಸಿದ್ದಾರೆ. ಈ ಕಥಾ ಕೀರ್ತನೆಗಳಲ್ಲಿ ಕೀರ್ತನೆ, ಕಂದ ಪದ್ಯಗಳು, ಷಟ್ಪದಿಗಳು, ಶ್ಲೋಕಗಳು, ವಚನ, ಆರ್ಯೆ, ಜಂಗಲಾರ್ಯ, ಸೀಸಪದ್ಯ, ಕಡಕು, ದ್ವಿಪದಿ, ಸಂಸ್ಕøತ ವೃತ್ತಗಳು ಹೀಗೆ ಹಲವು ರೀತಿಯ ಛಂದೋರೂಪಗಳನ್ನು ಬಳಸಿದ್ದಾರೆ. ಕೀರ್ತನೆಗಳಲ್ಲಿ ಬಹಳಷ್ಟು ಪ್ರಸಿದ್ಧವಾದ ಕನ್ನಡ. ತೆಲುಗು ಮತ್ತು ತಮಿಳು ಮಟ್ಟುಗಳ ಅನುಕರಣೆಯನ್ನು ಕಾಣಬಹುದು. ಸಂಭಾಷಣೆ ಬರುವ ಸಂದರ್ಭಗಳಲ್ಲಿ ಕೀರ್ತನೆಗಳನ್ನು ಅಳವಡಿಸಿರುವುದು ಈ ಕಥಾ ಕೀರ್ತನೆಗಳ ವೈಶಿಷ್ಟ್ಯ. ಈ ಕೀರ್ತನೆಗಳು ಆಯಾ ಕಥಾಸಂದರ್ಭಕ್ಕೆ ಹೊಂದುವಂತಿದ್ದು, ಆಯಾ ಕಥಾನಕದ ಒಂದೊಂದು ಭಾಗವಾಗಿವೆÉ. ಇಂಥ ಕೀರ್ತನೆಗಳನ್ನು ಸ್ವತಂತ್ರ ಕೀರ್ತನೆಗಳೆಂದು ಪ್ರತ್ಯೇಕಿಸಲು ಸಾಧ್ಯವಿಲ್ಲ.

ಭಾಗವತೋತ್ತಮನಾದ ಪ್ರಹ್ಲಾದನ ಕಥೆ ಪ್ರಹ್ಲಾದ ಚರಿತೆಯವಸ್ತು. ಬ್ರಹ್ಮಸೃಷ್ಟಿಯ ಯಾವುದರಿಂದಲೂ ಸಾವು ಬಾರದಂತೆ ಹಿರಣ್ಯಗರ್ಭನಿಂದ ವರವನ್ನು ಪಡೆದ ದೈತ್ಯ ಹಿರಣ್ಯಕಶಿಪು. ಪ್ರಹ್ಲಾದ ಇವನ ಮಗ. ಲೋಕ ಕಂಟಕನಾದ ತಂದೆಗೆ ವಿರುದ್ಧವಾದ ಸ್ವಭಾವ ಪ್ರಹ್ಲಾದನದು. ದೈವ ಭಕ್ತಿ ಸತ್ಯಸಂಧತೆ ಜಿತೇಂದ್ರಿಯತ್ವ ಇತ್ಯಾದಿ ಸದ್ಗುಣಗಳಿಂದ ಕೂಡಿದ ಪ್ರಹ್ಲಾದ ಮಹಾನ್ ವಿಷ್ಣುಭಕ್ತ. ಹಿರಣ್ಯ ಕಶಿಪುವಿನ ದುರಭಿಮಾನ, ಅಹಂಕಾರ, ಮಗನನ್ನು ತನ್ನ ದಾರಿಗೆ ತರಲು ಅವನು ನೀಡಿದ ಹಿಂಸೆಗಳು, ಹಿಂಸೆಗಳನ್ನು ಗಂಭೀರವಾಗಿ ಸ್ವೀಕರಿಸಿದ ಪ್ರಹ್ಲಾದನ ತಾಳ್ಮೆ, ನರಸಿಂಹನ ಅವತಾರ, ಹಿರಣ್ಯ ಕಶಿಪುವಿನ ಸಂಹಾರ ಮತ್ತು ಪ್ರಹ್ಲಾದನಿಗೆ ದೊರೆತ ಅನುಗ್ರಹ -ಈ ಸಂದರ್ಭಗಳನ್ನು ಕಥಾ ಕೀರ್ತನೆಯಲ್ಲಿ ಅಳವಡಿಸಲಾಗಿದೆ.

ಜಾತಿ ನೀತಿಗಳನ್ನು ಮೀರಿದ ಕಾಮಸುಖ ತಾತ್ಕಾಲಿಕವಾದದ್ದೆಂದು ಇದರಿಂದ ಗೌರವ ಘನತೆಗಳು ಕೆಟ್ಟು ಸಂಸಾರಿಗಳು ಭ್ರಷ್ಟರಾಗುತ್ತಾರೆಂಬ ನೀತಿಯನ್ನು ನಿರೂಪಿಸುವ ಕಥೆ ಮಾಧವ ಚರಿತ್ರೆ. ವರ್ಣಾಶ್ರಮ ಧರ್ಮಕ್ಕೆ ವಿರುದ್ಧವಾಗಿ ತಂದೆ ತಾಯಿಗಳನ್ನೂ. ಪತ್ನಿಯನ್ನೂ ದೂರಮಾಡಿ ಕುಂತಳೆ ಎಂಬ ಚಂಡಾಲ ಕನ್ಯೆಯನ್ನು ವರಿಸಿದ 'ದ್ವಿಜ' ಮಾಧವ. ಯೌವ್ವನ ಕಳೆದು ಮುದಿತನ ಮತ್ತು ರೋಗಗಳಿಂದ ಪೀಡಿತನಾದಾಗ ಮಾಧವನಿಗೆ ಪಾಪಪ್ರಜ್ಞೆ ಜಾಗೃತವಾಗುತ್ತದೆ. ಹರಿದಾಸರ ಜೊತೆಯಲ್ಲಿ ತಿರುಪತಿಗೆ ಬಂದ ಮಾಧವ ಆತ್ಮಶೋಧನೆ ಮಾಡಿಕೊಂಡು ಪರಿಶುದ್ಧನಾಗುತ್ತಾನೆ. ಕಾಮವನ್ನು ಭಗವತ್ಪ್ರೇಮವಾಗಿಸುವುದರಲ್ಲಿ ಜೀವನದ ಸಾರ್ಥಕ್ಯ ಅಡಗಿದೆ ಎಂಬ ನೀತಿಯನ್ನು ಗುರುರಾಮವಿಠಲರು ಇಲ್ಲಿ ನಿರೂಪಿಸಿದ್ದಾರೆ.

ದೂರ್ವಾಸ ಚರಿತ್ರೆ ಮಹಾಭಾರತದ ಅರಣ್ಯಪರ್ವದಲ್ಲಿ ನಿರೂಪಿತವಾಗಿರುವ ಕಥೆ. ಪಾಂಡವರನ್ನು ಪರೀಕ್ಷಿಸಲು ಅತಿಥಿಯಾಗಿ ಬಂದ ದೂರ್ವಾಸನ ಆಗಮದಿಂದ ಧರ್ಮರಾಯಾದಿಗಳು ಪಟ್ಟ ಆತಂಕ, ದ್ರೌಪದಿಯ ಕೃಷ್ಣಭಕ್ತಿ, ಕೃಷ್ಣನ ಕರುಣೆ ಇವುಗಳನ್ನು ನಿರೂಪಿಸುವ ಕೃತಿ ಇದು. ಭಕ್ತರ ಮೊರೆಗೆ ತಕ್ಷಣ ಸ್ಪಂದಿಸಿ ಅವರ ತೊಂದರೆಗಳನ್ನು ಪರಿಹರಿಸುವ ಕೃಷ್ಣನ ಕಾರುಣ್ಯವನ್ನು ಈ ಕೃತಿ ನಿರೂಪಿಸುತ್ತದೆ.

ದ್ರೌಪದಿಯ ಮಾನರಕ್ಷಣೆಯ ಮೂಲಕ ಶ್ರೀಕೃಷ್ಣನ ಭಕ್ತಪರಾಧೀನತೆಯನ್ನು ತಿಳಿಸುವುದು ದ್ಯೂತಪರ್ವದ ಉದ್ದೇಶ. ಶಕುನಿಯ ಕುತಂತ್ರ, ದುರ್ಯೋಧನನ ಕ್ರೋಧ, ವಿದುರನ ಪಾಂಡವ ಪಕ್ಷಪಾತ, ಕರ್ಣದುಶ್ಯಾಸನರ ಅಮಾನವೀಯ ನಡವಳಿಕೆ, ಕೃಷ್ಣನ ಕರುಣೆ, ಧೃತಾಷ್ಟ್ರನ ಔದಾರ್ಯ ಹೀಗೆ ಮಾನವ ಸ್ವಭಾವದ ಹಲವು ಮುಖಗಳ ಚಿತ್ರಣವನ್ನು ದ್ಯೂತಪರ್ವದಲ್ಲಿ ಕಾಣಬಹುದು. ಭೀಮ, ಅರ್ಜುನ, ಮತ್ತು ಸಹದೇವರು ಮಾಡಿದ ಪ್ರತಿಜ್ಞೆಗಳಲ್ಲಿ ಖಳ ಚತುಷ್ಟಯರಿಗೆ ಮುಂದೆ ಒದಗಬಹುದಾದ ವಿಪತ್ತನ್ನೂ ದ್ಯೂತಪರ್ವ ಸೂಚಿಸುತ್ತದೆ.

ಅನಸೂಯಾ ಚರಿತ್ರೆ ನಾರದೀಯ ಪುರಾಣದಲ್ಲಿ ಬರುವ ಒಂದು ಕಥಾಭಾಗ. ಪತಿವ್ರತೆಯರ ಎದುರು ಕುಚೇಷ್ಟೆಗಳು ನಡೆಯುವುದಿಲ್ಲ ಎಂಬ ಪೌರಾಣಿಕ ತತ್ವವನ್ನು ನಿರೂಪಿಸುವುದು ಇಲ್ಲಿ ಕೃತಿಕಾರನ ಉದ್ದೇಶ. ಅತ್ರಿ ಅನಸೊಯೆಯರ ಸೌಹಾರ್ದಯುತವಾದ ದಾಂಪತ್ಯ, ನಾರದನ ಚಿತ್ತ ಚಾಂಚಲ್ಯ, ತ್ರಿಮೂರ್ತಿ ಪತ್ನಿಯರ ಗರ್ವಭಂಗವಾದದ್ದು, ಈ ಸಂಗತಿಗಳ ನಿರೂಪಣೆಯಲ್ಲಿ ಅಲ್ಲಲ್ಲಿ ಕಾವ್ಯಾಂಶ ಮಿಂಚುವಂತೆ ಗುರುರಾಮ ವಿಠಲರು ನಿರೂಪಿಸಿದ್ದಾರೆ.

ಸೇತೂರಾಯನ ಕಥೆ ಮಿಶ್ರ ಛಂದಸ್ಸಿನ ಖಂಡ ಕಾವ್ಯ. ಸೇತೂರಾಯ ಮೈಸೂರರಸರ ಖಜಾನೆಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಅಧಿಕಾರಿ. ಹಣ ದುರುಪಯೋಗದ ಆಪಾದನೆಯನ್ನು ಹೊತ್ತು ದೇಶಾಂತರ ಹೊರಟು ಅನಂತರ ಬಂಧನಕ್ಕೆ ಒಳಗಾದ. ದಿವಾನ್ ರಂಗಾಚಾರ್ಯರು ಈ ಬಗ್ಗೆ ವಿಚಾರಣೆಯನ್ನು ನಡೆಸಿ ಸೇತೂರಾಯನನ್ನು ದೋಷ ಮುಕ್ತನನ್ನಾಗಿ ಮಾಡಿದರು. ಚಾಮರಾಜ ಒಡೆಯರು ಸೇತೂರಾಯನನ್ನು ಮತ್ತೆ ಎಷ್ಟೇ ಸಮಾಧಾನಪಡಿಸಿದರೂ ಆತ ರಾಜಸೇವೆಗೆ ಹಿಂತಿರುಗದೆ ವೈರಾಗ್ಯಪರನಾಗಿ ತಿರುಮಕೂಡಲು ನರಸೀಪುರದಲ್ಲಿ ತನ್ನ ಕೊನೆಯ ದಿನಗಳನ್ನು ಕಳೆದು ಬೆಂಗಳೂರಿನಲ್ಲಿ ನಿಧನ ಹೊಂದಿದ.



ಸಿದ್ಧಾಂತ ಸಾರ 1055 ಕಂದಪದ್ಯಗಳ ಒಂದು ಕೃತಿ. ದ್ವೈತ ಸಿದ್ಧಾಂತದ ತತ್ವಗಳು, ಪದ್ಧತಿಗಳು, ಇವುಗಳ ನಿರೂಪಣೆ ಈ ಕೃತಿಯ ವಸ್ತು. ಹರಿಯ ಅವತಾರಗಳು, ಸೃಷ್ಟಿಪ್ರಕರಣ, ಪುರಾಣ ವಿಭಾಗ, ಜೀವಿಗಳ ಸ್ವರೂಪ, ಆತ್ಮದ ಸ್ವರೂಪ, ತಾರತಮ್ಯ, ಭಗವನ್ಮಹಿಮಾ ವರ್ಣನೆ. ಗೀತಾಮೃತಸಾರ, e್ಞÁನ ಭಕ್ತಿ ವೈರಾಗ್ಯಗಳ ಸ್ವರೂಪ, ಸೂರ್ಯಚಂದ್ರವಂಶಾನು ಕೀರ್ತನೆ, ಪ್ರಳಯ ಪ್ರಕರಣ, ಪೂಜಾವಿಧಾನ, ಯೋಗ ವಿಚಾರ, ಮಧ್ವಾಚಾರ್ಯರ ಅವತಾರತ್ರಯಗಳು, ಹೀಗೆ ಸಿದ್ಧಾಂತಸಾರವನ್ನು ಪ್ರತ್ಯೇಕ ವಿಭಾಗಗಳಲ್ಲಿ ನಿರೂಪಿಸಿದ್ದಾರೆ.

ಸಿದ್ಧಾಂತಸಾರದಲ್ಲಿ ಇಷ್ಟೆಲ್ಲಾ ವಿಚಾರಗಳು ಅಡಕವಾಗಿದ್ದರೂ ತಾನು ಏನೂ ಅರಿಯದ ಅಜ್ಞನೆಂಬ ವಿನಯ ಕೃತಿಕಾರನದು. e್ಞÁನ ಭಕ್ತಿ ವೈರಾಗ್ಯಗಳನ್ನು ಅರಿಯದ ಶಾಸ್ತ್ರ ಚಿಂತನೆಗಳನ್ನು ಕನಸಿನಲ್ಲೂ ಕಾಣದ ತಾನು

'ಪವಮಾನಮತಾನುಗರ ಕರುಣ ಬಲದಿಂ ಪೇಳ್ವೆಂ' ಎಂದು ಹೇಳುವಲ್ಲಿಯೂ,

ಕಂದನ ಕಲಭಾಷೆಗಳಾ

ನಂದದೊಳಾಲಿಸುವ ತಂದೆ ತಾಯಿಗಳಂತೀ

ಗ್ರಂಥsÀವನು ಕಂದ ಪದ್ಯಗÀ

ಳೆಂದು ನಿರಾಕರಿಸದೆಲ್ಲ ಕೇಳ್ವುದು ಸುಜನರ್

ಎಂಬಲ್ಲಿಯೂ ಈ ವಿನಯವನ್ನು ಗುರುತಿಸಬಹುದು. ಕಂದ ಪದ್ಯಗಳನ್ನು ನಿರಾಕರಿಸಬೇಡಿ ಎಂದು ಹೇಳುವಾಗ 'ಕಂದಪದ್ಯ' ಎಂಬ ಪದದ ಶ್ಲೇಷಾರ್ಥ ಗಮನಾರ್ಹವಾದುದು. ಇದು ಬಾಲಭಾಷೆಯ ಬರಹಗಳಲ್ಲ, ಮಕ್ಕಳ ಸಾಹಿತ್ಯವೂ ಅಲ್ಲ, ಗಂಭೀರವಾಗಿ ಅಧ್ಯಯನ ಮಾಡಬೇಕಾದ ಕೃತಿ ಎಂಬುದನ್ನು ಸೂಚಿಸಿದ್ದಾರೆ.



ಭೋಜನ ಕಾಲ ನಿರ್ಣಯ ಭಾಮಿನಿ ಷಟ್ಪದಿಯ ಒಂದು ಸಣ್ಣ ಕೃತಿ. ಹಗಲು ರಾತ್ರಿಗಳಲ್ಲಿ, ಯಾವ ಕಾಲದಲ್ಲಿ ಯಾವ ಯಾವ ಆಹಾರವನ್ನು ಸ್ವೀಕರಿಸಬೇಕು ಎಂದು ತಿಳಿಸುವುದೇ ಈ ಕೃತಿಯ ವಸ್ತು. ಈ ಕೃತಿಯಲ್ಲಿ ದಾಸರು ತಮ್ಮ ಸ್ಥಳದ ಬಗ್ಗೆ ಹೇಳಿಕೊಳ್ಳುವ ಸ್ವಂತ ವಿಷಯ ಗಮನಾರ್ಹವಾದುದು :

ಧಾರುಣಿ ಮಂಡಲದೊಳಗೆ ಮಹಿ

ಶೂರ ದೇಶಕೆ ಸೇರಿರುವ ಕೋ-

ಲಾರದ ಭಾಗದಲಿ ಬಾಗೆಪಲ್ಲೆಂತೆಂಬ |

ಚಾರುನಗರದ ವಾಸಿ ಎನಿಸುವ

ಸೂರಿನಿಕರ ವಿಧೇಯ ಸುಬ್ಬನು

ತಾರಚನೆಗೈದಿರುವ ಗುರುರಾಮವಿಠ್ಠಲಾಂಕಿತದಿ ||

ಗುರುರಾಮವಿಠಲರ ಕೀರ್ತನೆಗಳನ್ನು ಅಭ್ಯಾಸದ ದೃಷ್ಟಿಯಿಂದ ಹೀಗೆ ವಿಭಾಗಿಸಿಬಹುದು.

1. ಆತ್ಮಶೋಧನೆ-ಸಮರ್ಪಣೆ, 2. ಹರಿಭಕ್ತಿ, 3. ತತ್ವಪ್ರತಿಪಾದನೆ ಮತ್ತು ಉಪದೇಶಾತ್ಮಕ ಕೃತಿಗಳು.

ಆತ್ಮಶೋಧನೆ-ಸಮರ್ಪಣೆ :ಆತ್ಮಶೋಧನೆಯ ಕೃತಿಗಳಲ್ಲಿ ದಾಸರ ವೈಯಕ್ತಿಕ ವಿಷಯಗಳೂ ಅಡಕವಾಗಿದ್ದು, ಅವರು ಬದುಕಿನಲ್ಲಿ ಅನುಭವಿಸಿದ ಕಷ್ಟಗಳ ನಿರೂಪಣೆಯಿದೆ. ತಮ್ಮ ಜೀವನವನ್ನು ತಾವೇ ವಿಮರ್ಶಿಸಿಕೊಂಡು, ತಮ್ಮ ತಪ್ಪುಗಳನ್ನು ತಾವೇ ಎತ್ತಿ ಹಿಡಿದು, ತಮ್ಮ ನಡವಳಿಕೆಗಳನ್ನು ತಾವೇ ನಿಂದಿಸಿಕೊಂಡು, ತಮ್ಮ ರ್ದೌಬಲ್ಯಗಳಿಗೆ ತಾವೇ ನಾಚಿ ಪಶ್ಚಾತ್ತಾಪದ ಮೂಲಕ ಪರಿಶುದ್ಧರಾಗುವುದೇ ಆತ್ಮಶೋಧನೆಯ ಉದ್ದೇಶ. ಆಸೆಗಳಲ್ಲಿ ಕುಂದಿಕೊರಗಿ ಸಾರವಿಲ್ಲದ ಸುಖಗಳನ್ನು ಬಯಸಿ, ಬಾಲ್ಯದಲ್ಲಿ ಪರಾಧೀನ, ಯೌವ್ವನದಲ್ಲಿ ಅe್ಞÁನ, ವಾರ್ಧಕ್ಯದಲ್ಲಿ ಚಿಂತೆಗಳನ್ನು ಅನುಭವಿಸುವಂತೆ ಮಾಡುವ 'ಬದ್ಧ ಸಂಸಾರ' ದಾಸರಿಗೆ ಬೇಸರಿಕೆÀ ತರಿಸಿತ್ತು.

'ಯಾವ ವಿಧಿ ಸುಖಲೇಶ ಕಾಣೆನೊ ನಾನು

ದೇವ ನಿನ್ನ ಚಿತ್ತವೊ ಪುರಾಕೃತವೊ' (ಕೀ.183)

-ಎಂದು ಹೇಳುವಲ್ಲಿ ಸಾಂಸಾರಿಕ ಕಷ್ಟಸುಖಗಳು ಹರಿಯ ಚಿತ್ತದಂತೆ ಪ್ರಾಪ್ತವಾಗುತ್ತವೆÉ ಇವು ನಮ್ಮ ಅಧೀನದಲ್ಲಿ ಇಲ್ಲ ಎಂಬ ನಿರ್ಧಾರಕ್ಕೆ ಬರುತ್ತಾರೆ. ಮಾನಸದಲ್ಲಿ ದೇವರು ಸಾಕ್ಷಿಯಾಗಿರುವಾಗ ಅವನಿಗರಿವಿಲ್ಲದಂತೆ ನಾವೇನು ತಪ್ಪು ಮಾಡಲು ಸಾಧ್ಯವಿಲ್ಲ. ನಾವು ಮಾಡುವ ಅಪರಾಧ ಮತ್ತು ಸತ್ಕಾರ್ಯಗಳಿಗೆ ಕಾರಣರಾದ ಕರಣಾಭಿಮಾನಿ ದೇವತೆಗಳಿಗೆ ಶ್ರೀ ಹರಿಯೆ ಒಡೆಯ. ಹೀಗಿರುವಾಗ ತಪ್ಪು ಒಪ್ಪುಗಳನ್ನು ನಾನು ಮಾಡಿದೆ ಎಂದು ಹೇಳುವುದರಲ್ಲಿ ಯಾವ ಅರ್ಥವೂ ಇಲ್ಲ.

1. ಏನು ಅರಿಯೆ ನಾನು ಅಸ್ವಾತಂತ್ರನು ಜೀವ

ನೀನೆ ಸರ್ವ ಸ್ವತಂತ್ರ ಗುರುರಾಮವಿಠಲ (ಕೀ.183)

2. ಎಲ್ಲವು ನಿನ್ನಾಧೀನ | ನಾ

ಬಲ್ಲೆನೆಂಬುದ e್ಞÁನ (ಕೀ.182)

3. ಕ್ಷೇಮದಿಂದಿರುವುದಕೂ | ನಿರ್ನಾಮವೈದಿ ಕೆಡುವುದಕೂ

ಪಾಮರ ಜೀವರು ತಾವರಿಯರು ಗುರು-

ರಾಮ ವಿಠಲ ನೀನಾ ಮಮತೆ ಕೊಡದಿರೆ (ಕೀ.182)

4. ಅಣುಗ ನಿನಗೆ ನಾನು | ಅಗಣಿತ

ಗುಣ ಸಮುದ್ರ ನೀನು (ಕೀ.175)

5. ದ್ವಾಸುಪರ್ಣ ಶ್ರುತಿಯ | ಪ್ರಮಾಣದಿ

ದಾಸನು ನಾನಯ್ಯಾ

ಓ ಸೀತಾಪತಿ ಗುರುರಾಮ ವಿಠಲಾ

ಶ್ವಾಸ ಬಿಡುವುದಕೆ ಸ್ವತಂತ್ರವೆನಗಿಲ್ಲ (ಕೀ.175)

-ಹೀಗೆ ಜೀವಿಗಳ ಅಸ್ವಾತಂತ್ರವನ್ನು ಒಪ್ಪಿಕೊಂಡು ಸ್ವಾಹಂಕಾರ ಮತ್ತು ಮಮಕಾರಗಳಿಂದ ದೂರವಾದ ದಾಸತ್ವ ಒಂದೇ ಬದುಕಿಗೆ ಮಾರ್ಗದರ್ಶನ ನೀಡಬಲ್ಲದೆಂಬ ನಂಬಿಕೆ ದಾಸರದು.

ಗುರುರಾಮವಿಠಲರು ಸಂಸಾರಿಗಳಲ್ಲದಿದ್ದರೂ ಸಾಂಸಾರಿಕ ಕಷ್ಟಗಳಿಂದ ದೂರಾದವರೇನೂ ಅಲ್ಲ. ನೆಂಟರಾದವರಿಗೆ 'ಬಾಡಿಗೆ ಎತ್ತಿನ ಪರಿ' ಆಳಾಗಿರಬೇಕು. ಅವರು ಕೇಳಿದ್ದೆಲ್ಲಾ ಕೊಡಬೇಕು. ಸ್ವಾರ್ಥ ಸಾಧನೆಯಾದ ನಂತರ 'ಭವ ಸಮುದ್ರದಲಿ ಮುಳುಗಿಸಿ ಕಡೆÉಯಲಿ ಜವನಾಳ್ಗಳ ಕೈಗೊಪ್ಪಿಸಿ ಕೊಡುವ ' ಸ್ವಭಾವ ನೆಂಟರದು. ಇಂತಹ ದೇಹ ಸಂಬಂಧಿಗಳನ್ನು ನಂಬಿ 'ಕವಳಕೆ ಗತಿಯಿಲ್ಲದ ಪರಿಯಾಯಿತು' ಎಂದು ಕಳವಳಪಡುತ್ತಾರೆ.

ಹಣ, ಅಧಿಕಾರ, ಬಂಧುಗಳು, ದೇಹಬಲ, ಯೌವ್ವನ ಇದ್ದವರೆಗೆ ಮಾತ್ರ ಈ ಸಮಾಜದಲ್ಲಿ ಬೆಲೆಯಿದೆ. ಇವಾವುದೂ ಇಲ್ಲದೆ ಜೊತೆಗೆÉ ಎರಡು ಕಣ್ಣೂ ಇಲ್ಲದ ದಾಸರು ಸಮಾಜದ ಬಂಧುಗಳ ಅವಕೃಪೆಗೆ ಒಳಗಾಗಿ ಸಾಕಷ್ಟು ನೋವನ್ನು ಅನುಭವಿಸಿದರು.

ಜನರ ಬೇಡಲಾರೆ ನಿನಗಿದು

ವಿನೋದವೇನೊ ದೊರೆ (ಕೀ.188)

-ಹೀಗೆ ತಮ್ಮ ನೋವನ್ನು ನಿವೇದಿಸಿಕೊಂಡು ಅನಾದಿ ಕರ್ಮಗಳನ್ನು ಕಳೆಯುವಂತೆ ಪ್ರಾರ್ಥಿಸುತ್ತಾರೆ. ತಮ್ಮ ವೈಯಕ್ತಿಕ ಬದುಕಿನ ಕೊರತೆಗಳನ್ನು ಹೀಗೆ ನಿರೂಪಿಸಿದ್ದಾರೆ :

ಆರೊಂದು ವ್ಯಸನದಿ ಈರೊಂದು ತಾಪದಿ

ಗಾರಾದೆ ಮೋಹದಿ ಕಾರುಣ್ಯ ವಾರಿಧಿ (ಕೀ.185)

ತಂದೆ, ತಾಯಿ, ಪತ್ನಿ, ಸೋದರ ಮೊದಲಾದ ಹೊರಗಿನ ಬಂಧುಗಳು ಯಾರೂ ಇಲ್ಲದ್ದರಿಂದ ದಾಸರು ವೈರಾಗ್ಯದ ಜೊತೆಗೆ ದೃಢವಾದ ಭಕ್ತಿಯನ್ನು ಬೆಳೆಸಿಕೊಂಡಿದ್ದರು. ಸತ್ಯವೇ ತಾಯಿ, e್ಞÁನವೇ ತಂದೆ, ಧರ್ಮವೇ ಸಹೋದರರು, ಶಾಂತಿಯೆ ಸತಿ, ಕ್ಷಮೆಯೆ ಸುತ, -ಹೀಗೆ ಹೊರಗಿನ ಬಂಧುಗಳಿಗಿಂತ ಒಳಗಿನ ಬಂಧುಗಳೇ ಇಹಪರ ಸೌಖ್ಯಕ್ಕೆ ಕಾರಣರೆಂದು ಭಾವಿಸಿದ್ದರು. ಹೊರಗಿನ ಬಂಧುಗಳ ಜೊತೆ ಸಂಬಂಧಗಳು ಕೆಟ್ಟರೂ ಚಿಂತೆಯಿಲ್ಲ, ಒಳಗಿನ ಬಂಧುಗಳ ಸಂಬಂಧಗಳನ್ನು ಗಟ್ಟಿಮಾಡಿಕೊಳ್ಳಬೇಕು ಎಂಬ ಸಂಕಲ್ಪ ಅವರದು (ಕೀ.285) ಈ ಸಂಕಲ್ಪವನ್ನು ಶಾಶ್ವತಗೊಳಿಸುವಂತೆ ದಾಸರು ದೇವರ ಮೊರೆ ಹೋಗುತ್ತಾರೆ. ವಿಹಿತ ಅಹಿತಗಳನ್ನು ಚಿಂತಿಸಿದ ಕುಹುಕಾತ್ಮರಾದವರ ಸ್ನೇಹದಿಂದ ಅನುಭವಿಸಿದ ನೋವುಗಳನ್ನು ವಿವರಿಸಲು ಪದಗಳಿಗೆ ಶಕ್ತಿಯಿಲ್ಲ. ಆದ್ದರಿಂದ ತಪ್ಪು ಒಪ್ಪುಗಳನ್ನು ಭಗವಂತನಲ್ಲಿ ನಿವೇದಿಸಿ ಮತ್ತೆ ಮತ್ತೆ ಶರಣಾಗತಿ ಬೇಡುತ್ತಾರೆ.

ಹರಿದಾಸನಾದ ಮೇಲೂ ಮಾಡಿದ ತಪ್ಪುಗಳು ಹೀಗಿವೆ:

1. ಹೊಟ್ಟೆಗಾಗಿ ನಿಜತತ್ವಂಗಳಂ ಬೆಲೆಮಾಡಿ ಜೀವಿಸುವೆ

ಪಾಪಿಯು ನಾನು (ಕೀ.241)

2. ತವಪಾದ ಧ್ಯಾನವನು ಮಾಡುವ

ಭಾಗ್ಯವ ಬಿಟ್ಟು ಸಂಸರಣದೊಳ್ ಮುಳುಗಿ

ಕವಿಗಳ್ ಪ್ರಶಂಶಿಸುವ ವರ್ಣನೆಗೆ

ಕಿವಿಗೊಟ್ಟು ನಾನಕಟ ಕೆಟ್ಟೆನು (ಕೀ.241)

3 . ಕಾಸಿಗೋಸುಗ ಪರರ ಕಾಡಿಬೇಡಿದೆ ಬರಿದೆ

ವೇಷ ಹಾಕಿದರೇನು ವೇದಾರ್ಥ ತಿಳಿದೀತೇ

ಉದರಂಭರಣಕ್ಕಾಗಿ ಪದ ಪದ್ಯಗಳ ಹೇಳಿ

ಉಂಟಾದುದಿಲ್ಲವೆನ್ನುವೆ

ತುದಿಮೊದಲಿಲ್ಲದ ದೋಷಕೆ ಗುರಿಯಾಗಿ

ಸದಮಲನೆಂದರೆ ಸರ್ವರು ನಗರೇನೊ (ಕೀ.218)

4. ಬವನಾಸಿ ಧರಿಸಿ ದಾಸನೆಂದು ನಾ

ಬರಿದೆ ದೇಶಗಳ ತಿರುಗಿ ಬೆಂಡಾದೆನು

ಯಮನಿಯಮಾಸನಯೋಗ | ಗಳ

ಕ್ರಮವರಿಯೆನು ನರಜನ್ಮದೊಳೀಗ

ಭ್ರಮೆ ಪಡುತ ಬಳಲುವೆ ಯಾವಾಗ

ಮಮ ಎಂಬುದರಿಂದ ಬಂದಿತು ರೋಗ (ಕೀ.178)

ಖಳಸ್ನೇಹ, ಅಸ್ವಾಭಾವಿಕ ಬಯಕೆಗಳು, ಕಳವಳ, ಬಳಲಿಕೆ, ದುಷ್ಟತನ, ವ್ಯಾಮೋಹ, ಸ್ವಾರ್ಥಕ್ಕಾಗಿ ಪರರ ಸ್ತೋತ್ರ ಮಾಡುವುದು ನೀತಿಹೇಳಿದವರನ್ನು ನಿಂದಿಸುವುದು, ಮಾತಿನಲ್ಲಿ ನಿಸ್ಪøಹನಾಗಿ ಮನದಲ್ಲಿ ಚಂಚಲನಾಗಿ ಆತ್ಮe್ಞÁನವಿಲ್ಲದ ದುರಾಸಕ್ತನೆನಿಸುವುದು -ಹೀಗೆ ತಪ್ಪುಗಳ ಪಟ್ಟಿ ಬೆಳೆಯುತ್ತಲೇ ಹೋಗುವುದು. ಇವುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡಾಗ ನಿತ್ಯಕರ್ಮಗಳಲ್ಲಿ ಆಸಕ್ತಿ ಮೂಡುತ್ತದೆ. ಹೀಗೆ ಆತ್ಮಶೋಧನೆ ಹರಿದಾಸರ ಸಾಧನಪಥದಲ್ಲಿ ಒಂದು ಪ್ರಮುಖವಾದ ಘಟ್ಟ. ಆತ್ಮಾವಲೋಕನದಿಂದ ಪಾಪಪ್ರಜ್ಞೆ ಉಂಟಾಗಿ ಪಶ್ಚಾತ್ತಾಪಪಡದ ಹೊರತು ಬದುಕಿನಲ್ಲಿ ಬದಲಾವಣೆ ಆಗುವುದಿಲ್ಲ. ಈ ಪಶ್ಚತ್ತಾಪದಿಂದ ಜೀವನಪಥವೇ ಬದಲಾಗುತ್ತದೆ. ಹೊರಗಿನ ಡಂಭವ ಬಿಟ್ಟು, ಒಳಗೆ ನಿಶ್ಚಲನಾಗಿ, ಪರಹಿತವ ಕೋರುತ್ತ, ಕರಣತ್ರಯ ಶುದ್ಧಿಯಿಂದ ಹರಿಧ್ಯಾನ ಮಾಡಬೇಕೆಂಬ ಹಾದಿಯನ್ನು ದಾಸರು ಕಂಡುಕೊಳ್ಳುತ್ತಾರೆ. (ಕೀ.218) e್ಞÁನ, ಭಕ್ತಿ, ವೈರಾಗ್ಯ, ದಾನ, ಧರ್ಮಾದಿ ಸದ್ಗುಣಗಳು ತಾವಾಗಿಯೇ ಸ್ವಾಧೀನವಾಗುತ್ತವೆÉ. ಕಾಮ ಕ್ರೋಧಾದಿ ತಾಮಸ ಗುಣಗಳು ನಿರ್ನಾಮವಾಗುತ್ತವೆ. ಬದುಕಿನ ಪ್ರಯೋಜನವೇನು ಎಂಬ ಪ್ರಶ್ನೆಗೆ ಉತ್ತರವು ದೊರೆಯುತ್ತದೆ. ಆ ಉತ್ತರ ಹೀಗಿದೆ.

1. ದೇವರ ದಿವ್ಯ ಗುಣಂಗಳ ಪೊಗಳುವುದು

ಜೀವರಿಗಿದುವೆ ಪ್ರಯೋಜನವು

ಭಾವದಿ ತೋರುವ ವಿಷಯಗಳೆಲ್ಲವು

ಭಕ್ತಿಯೊ4.ಳರಿತು ಸಮರ್ಪಿಸುತ (ಕೀ.220)

2. ಪರಸೌಖ್ಯವಿದೆ ಮಾನವ ನಿನಗೆ

ನಿರತಂ ಹರಿಪಾದ ಭಜನೆ (ಕೀ.226)

-ಹೀಗೆ ಆತ್ಮಶೋಧನೆ ಭಕ್ತಿಗೂ ಸಮರ್ಪಣ ಭಾವಕ್ಕೂ ಕಾರಣವಾಗುತ್ತದೆ.

1. ನಡೆವುದು ನುಡಿವುದು ಕೊಡುವುದು ಬಿಡುವುದು

ಒಡೆಯ ಹರಿಯ ಪ್ರೇರಣೆಯೆಂದು

ದೃಢಮನದಲಿ ತಿಳಿದಾವಾಗಲು ತಾ

ಮೃಢಸಖನÀಡಿ ಧ್ಯಾನಕೆ ತಂದು (ಕೀ.220)

2. ಈಶನಾಧೀನ ಸಕಲ ಜೀವನ

<ಈಔಓಖಿ ಜಿಚಿಛಿ

****

No comments:

Post a Comment