Monday 2 August 2021

orebai lakshmidevamma dasaru ಓರಬಾಯಿ ಲಕ್ಷ್ಮೀದೇವಮ್ಮ ದಾಸರು



Name: Orebai Lakshmidevamma ಓರಬಾಯಿ ಲಕ್ಷ್ಮೀದೇವಮ್ಮ

Ankita: Narasimhavittalaನರಸಿಂಹವಿಠಲ 

ದಾಸರ ಹೆಸರು: ಓರಬಾಯಿ ಲಕ್ಷ್ಮೀದೇವಮ್ಮ
ಜನ್ಮ ಸ್ಥಳ      : ಸೊಂಡೂರು sandoor 
ತಂದೆ ಹೆಸರು: ಲಕ್ಷ್ಮಣರಾಯರು - ಕೆಲವು ಕಾಲ ಸೊಂದೂರಿನ ದಿವಾನರಾಗಿದ್ದರು
ತಾಯಿ ಹೆಸರು: ಗೋದಾವರೀಬಾಯಿ
ಕಾಲ : from 1865 - 1950
ಅಂಕಿತನಾಮ: ನರಸಿಂಹವಿಠಲ
ಲಭ್ಯ ಕೀರ್ತನೆಗಳ ಸಂಖ್ಯೆ: ಸುಮಾರು 154
ಗುರುವಿನ ಹೆಸರು: ತಂದೆಯವರಾದ ಲಕ್ಷ್ಮಣರಾಯರು
ಆಶ್ರಯ            : ಗಂಡನ ಮನೆ
ರೂಪ                : ಕೇಬಿಗೆ ಬಣ್ಣದ ಮಟ್ಟಸನಿಲುವಿನ ರೂಪತಿಯಾಗಿದ್ದರು
ಪೂರ್ವಾಶ್ರಮದ ಹೆಸರು: ಲಕ್ಷ್ಮೀಬಾಯಿ
ಮಕ್ಕಳು: ಅವರ ಹೆಸರು: ಒಂದೇ ಗಂಡು ಮಗು ಅದೂ ವರ್ಷದ ಒಳಗಾಗಿ ತೀರಿಕೊಂಡಿತು
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು: ಕೆಲವು ಬಿಡಿ ಹಾಡುಗಳು ತರಕಋಇ ಹಡು, ಉರುಟನೆ ಹಾಡು, ಸ್ವಾಭಿಯರ ರೋತ್ಸ್ವ ಹಾಗು ಇತ್ಯಾದಿ
ಪತಿ: ಪತ್ನಿಯ ಹೆಸರು: ಓರಬಾಯಿ ಮಧ್ವರಾಯರು
ಒಡಹುಟ್ಟಿದವರು: ಇಲ್ಲ
ವೃತ್ತಿ : ಗೃಹಿಣಿ
ಕಾಲವಾದ ಸ್ಥಳ ಮತ್ತು ದಿನ: ಆರವನಿ ಸನ್ 1950 ನೇ ಇಸವಿ ಜನವರಿ ಮೊದಲನೇ ವಾರ
ವೃಂದಾವನ ಇರುವ ಸ್ಥಳ: ಹೆಂಗಸರಿಗೆ ವೃಂದಾವನ ಇರುವುದಿಲ್ಲ
ಕೃತಿಯ ವೈಶಿಷ್ಟ್ಯ: ಸರಳ ಸುಂದರ, ಸ್ಪಷ್ಟ ಶ್ನೇಷೆಗಳು ಅಲ್ಲಲ್ಲಿ ಕಂಡು ಬರುತ್ತದೆ.

ಇತರೆ : ಇವರಿಗೆ ಉತ್ತರಾದಿಮಠದ ಸತ್ಯಧ್ಯನ ತೀರ್ಥರ ಮಂತ್ರಾಲಯದ ಸುಶೀಲೇಂದ್ರ ಮತ್ತು ಸೋದಾಸ್ವಾಮಿಗಳ ಸಾನ್ನಿಧ್ಯ ಆಗಾಗಿ ದೊರಕುತ್ತಿತ್ತು. ಬಳ್ಳಾರಿಯ ಅಸ್ಕಸಾಲಿಗರ ಬೀದಿಯಲ್ಲಿ ಲಕ್ಷ್ಮೀನರಸಿಂಹನ ಮಂದಿರವನ್ನು ಕಟ್ಟಿಸಿ ಅದರಲ್ಲಿ ಮಂತ್ರಾಲಯದ ರಾಯರ ಹಗೂ ಸತ್ಯಧ್ಯಾನ ಸ್ವಾಮಿಗಳ ವೃತ್ತಿ ಬೃಂದಾವನವನ್ನು ಸ್ಥಾಪಿಸಿದರು ಹೀಗೆ ಇಬ್ಬರು ಸ್ವಾಮಿಗಳ ಬೃಂದಾವನ ಬಿರುಪುದ ಅಪರೂಪ 50 ಓಶಲ ವಿದ್ಯೆಯಲ್ಲಿ ಗೃಹವೈದ್ಯದಲ್ಲಿ ನಿಪುಣರಾಗಿದ್ದರು.
****
.
ಬಳ್ಳಾರಿಯಲ್ಲಿ ವಾಸಿಸಿದ  ಶ್ರೇಷ್ಠ  ಹರಿದಾಸಿ, ನರಸಿಂಹ ದೇವರನ್ನು ಆರಾಧಿಸಿ ಅನುಗ್ರಹ ಪಡೆದಂತಹವರು,, ಶ್ರೀ ರಾಯರ ಪರಮ ಭಕ್ತೆ, ಭಕ್ತಿಯಿಂದ ಪ್ರಾರ್ಥಿಸಿದರೆ ಪರಮಾತ್ಮನ ಅನುಗ್ರಹ ಸುಲಭವೆಂದೇ ತಿಳಿಸಿ ಹೇಳಿದ ತಾಯಿ ಹರಪನಹಳ್ಳಿ ಭೀಮವ್ವನವರ ಹಾದಿಯಲ್ಲಿ ನಡೆದು, ಭಕ್ತಿಪೂರ್ವಕವಾಗಿ, ತಮ್ಮ ಕೃತಿಗಳಿಂದಲೇ ಪರಮಾತ್ಮನ ಸ್ತುತಿಮಾಡಿ ಒಲಿಸಿಕೊಂಡ ಗರತಿ *ನರಸಿಂಹವಿಠಲ* ಎನ್ನುವ ಅಂಕಿತದಿಂದ *ಐದು ಶುಕ್ರವಾರದ ಹಾಡು, ಶನಿವಾರದ ಹಾಡು, ಮಂಗಳ ಗೌರಿಯ ಹಾಡು, ಚೇಳಿನಹಾಡು, ಕೃಷ್ಣ ದಾನವ್ರತ* ಇತ್ಯಾದಿ ಸಂಪ್ರದಾಯ ಕೃತಿಗಳ ರಚನೆಯ ಜೊತೆಗೆ, ಪರಮಾತ್ಮನ ದಿವ್ಯಲೀಲೆಗಳನ್ನು ವಿವರಿಸುವ ಕೃತಿಗಳನ್ನು  ಅದ್ಭುತವಾಗಿ ರಚನೆ ಮಾಡಿ ದಾಸ ಸಾಹಿತ್ಯದ ಸೇವೆಯನ್ನು ಮಾಡಿದಂತಹ, ಶ್ರೇಷ್ಠ ಹರಿದಾಸಿ  ತಾಯಿ *ಓರವಾಯಿ ಲಕ್ಷ್ಮೀದೇವಮ್ಮನವರ* ಆರಾಧನಾ ಮಹೋತ್ಸವ ಇಂದು....   *ಶ್ರೀ ಲಕ್ಷ್ಮೀವಲ್ಲಭತೀರ್ಥರ ಅನುಗ್ರಹ, ತಾಯಿ ಲಕ್ಷ್ಮೀದೇವಮ್ಮನವರ* ಆಶೀರ್ವಾದ  ಸದಾಕಾಲ ನಮ್ಮ ಮೇಲೆ ಇರಲೆಂದು ಅವರಲ್ಲಿ ಅವರ ಅಂತರ್ಗತ ಭಾರತೀರಮಣಮುಖ್ಯಪ್ರಾಣಾಂತರ್ಗತಲಕ್ಷ್ಮೀನಾರಸಿಂಹಾಭಿನ್ನ ವೆಂಕಪ್ಪನಲ್ಲಿ  ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ....  
Smt. Padma Sirish
*ಜೈ ವಿಜಯರಾಯ*.  *ನಾದನೀರಾಜನದಿಂ ದಾಸಸುರಭಿ* 🙏🏽
***

No comments:

Post a Comment