Tuesday 1 January 2019

ಮಧ್ವಾಚಾರ್ಯರು 04 madhwacharya 04




" ವಿಶ್ವಗುರು ಶ್ರೀಮದಾನಂದತೀರ್ಥರು "
*ದಿನಾಂಕ : ೧೯.೧೦.2018 ಶ್ರೀಮಧ್ವ ಜಯಂತಿ*
ಶ್ರೀ ಆಚಾರ್ಯ ಮಧ್ವರ ಅವತಾರ : ಕ್ರಿ ಶ 1238
ಶ್ರೀಮದಾಚಾರ್ಯರು ಬದರಿಕಾಶ್ರಮ ಪ್ರವೇಶ : ಕ್ರಿ ಶ 1317
ಶ್ರೀಮಧ್ವವಿಜಯ...
ಮುಕುಂದಭಕ್ತೈ ಗುರುಭಕ್ತಿಜಾಯೈ ಸತಾಂ ಪ್ರಸತ್ತೈ ಚ ನಿರಂತರಾಯೈ ।
ಗರೀಯಸೀ೦ ವಿಶ್ವಗುರೋರ್ವಿಶುದ್ಧಾ೦ ವಕ್ಷ್ಯಾಮಿ ವಾಯೋರವತಾರ
ಲೀಲಾಮ್ ।।
ಶ್ರೀ ವಾಯುದೇವರು ಮೋಕ್ಷ ಯೋಗ ಜೀವರಿಗೆ ಗುರುವಾಗಿರುವುದ
ರಿಂದ " ವಿಶ್ವಗುರು " ಯೆಂದೆನಿಸಿರುವರು. ಶ್ರೀ ವಾಯುದೇವರು ಶ್ರೀ
ಹನುಮದವತಾರ, ಶ್ರೀ ಭೀಮಸೇನಾವತಾರ, ಶ್ರೀ ಮಧ್ವಾವತಾರ
ಗಳೆಂಬ ಮೂರು ಅವತಾರಗಳನ್ನು ಸ್ವೀಕರಿಸಿರುವರು.
ಆ ಮೂರು ಅವತಾರಗಳಲ್ಲಿಯೂ ನಾನಾ ವಿಧಗಳಾದ ಲೀಲೆಗಳನ್ನು
ಮಾಡಿರುವರು. ಆ ಲೀಲೆಗಳೆಲ್ಲವೂ ಪರಿಶುದ್ಧವಾದವುಗಳೂ; ಅತಿ
ಶ್ರೇಷ್ಠವಾದವುಗಳೂ ಮತ್ತು ಮೋಕ್ಷಕ್ಕೆ ಸಾಧನವಾದವುಗಳು.
ಮೋಕ್ಷದಾಯಕವಾದದ್ದು ಮುಕುಂದನ ಭಕ್ತಿ. ಆ ಮುಕುಂದನ ಭಕ್ತಿ
ಗುರುಗಳ ಭಕ್ತಿಯಿಂದ ಹುಟ್ಟುತ್ತದೆ. ಅದು ಮಾತ್ರವಲ್ಲ. ಸಜ್ಜನರ
ಅನುಗ್ರಹವೂ ಮುಕುಂದನ ಭಕ್ತಿಗೆ ಸಾಧನವಾಗುತ್ತದೆ. ಆ ಸಜ್ಜನರ
ಅನುಗ್ರಹವನ್ನು ಎಡೆಬಿಡದಂತೆ ಸಾಧಿಸಬೇಕು. ಅದಕ್ಕಾಗಿ ಶ್ರೀ
ವಾಯುದೇವರ ಅವತಾರ ಲೀಲೆಗಳನ್ನು ಹೇಳುವೆನು!!
" ಶ್ರೀ ಭೃಗು ಮಹರ್ಷಿಗಳ ಅಂಶ ಸಂಭೂತರಾದ ಶ್ರೀ ಗುರುಮಧ್ವ
ಪತಿವಿಠ್ಠಲರ ಮಾತಲ್ಲಿ.... "
ಶ್ರೀಪತಿ ನಾಭಿಯಿಂದ ಅಜನು ಜನಿಸಿದನು । ಅಜನ ಮಾನಸ
ಪುತ್ರರೇ ಸನಕಾದ್ಯರು । ಸನಕಾದಿಗಳ ಪುತ್ರರೇ ದುರ್ವಾಸರು ।
ದುರ್ವಾಸರ ಶಿಷ್ಯರೇ ಸತ್ಯಪ್ರಜ್ಞರು । ಸತ್ಯಪ್ರಜ್ಞರ ಶಿಷ್ಯರೇ
ಪರತೀರ್ಥರು । ಪರತೀರ್ಥರ ಶಿಷ್ಯರೇ ಪ್ರಾಜ್ಞತೀರ್ಥರು ।
ಪ್ರಾಜ್ಞತೀರ್ಥರ ಶಿಷ್ಯರೇ ಅಚ್ಯುತಪ್ರೇಕ್ಷರು । ಅಚ್ಯುತಪ್ರೇಕ್ಷರ
ಕರ ಸಂಜಾತರೇ ಪೂರ್ಣಪ್ರಜ್ಞರು । ಪೂರ್ಣಪ್ರಜ್ಞರೇ ನಮ್ಮ
ಭಾಷ್ಯಕಾರರು । ನಮ್ಮ ಭಾಷ್ಯಕಾರರೇ ಶ್ರೀಮದಾನಂದ
ತೀರ್ಥರು । ಗುರು ಮಧ್ವಪತಿವಿಠ್ಠಲನ್ನ ನಿಜ ದಾಸರು ।।
" ಪ್ರಸ್ತಾವನೆ "
" ಶ್ರೀ ವೆಂಕಟವಿಠ್ಠಲರ ಮಾತಲ್ಲಿ... "
ಹನುಮ ಭೀಮ ಮಧ್ವಮುನಿರಾಯ ಪೈಸರಿಲಿಂ ।
ಮಣಿ ಭೂರುಹ ಧೇನು ಯೆನಿಸಿ ಕೊಳುವಾ ।
ಘನತರದ ವೇದದಿಂದಲಿ ವಿರಾಜಿಸುತಿಪ್ಪ ।
ಪ್ರಣತ ಜನರಿಗೆ ಅಭೀಷ್ಟಗಳ ಕೊಡುವ ।।
ಮನೋವಾಚಕಯದಲಿ ಅನುದಿನದಲಿ ।
ನೈನೆವರಿಗೆ ಜನನ ಯವ್ವನ ಜರಾ ಮೃತ್ಯು ಕಡಿವಾ ।
ಅನಿಲದೇವನೆ ಯೆನ್ನ ಜನುಮ ಜನುಮಗಳಲಿ ।
ವನಜನಾಭನ ಚರಣ ವನಜ ಸೇವಿಯೊಳಿಟ್ಟು ।।
700 ವರ್ಷಗಳ ಹಿಂದಿನ ಮಾತು. ಪಶ್ಚಿಮ ಕರಾವಳಿಯ
ಶಿವಳ್ಳಿ ಗ್ರಾಮದ ಶ್ರೀ ಅನಂತೇಶ್ವರ ದೇವಸ್ಥಾನದೆದುರು
ಅಂದು ಭಾರೀ ಗಲಾಟೆ.
ಉಡುಪಿಯ ಕ್ಷೇತ್ರ ಸ್ವಾಮಿಯಾದ ಶ್ರೀ ಅನಂತೇಶ್ವರ ಶ್ರೀ
ಪರಶುರಾಮ ಕ್ಷೇತ್ರದ ಆದಿದೈವ. ಸಂಕ್ರಮಣ ದಿನದಂದು
ಅಲ್ಲಿ ನೆರೆಯುವ ದೊಡ್ಡ ಜಾತ್ರೆಗೆ ಅಸಂಖ್ಯ ಭಕ್ತರು ಕಿಕ್ಕಿರಿದು
ನೆರೆದಿದ್ದರು.
ಮಂಗಲ ವಾದ್ಯಗಳು ಭೋರ್ಗೋರೆಯುತ್ತಿದ್ದವು. ವಿದ್ವಾಂಸರು
ವೇದ ಘೋಷ ಮಾಡುತ್ತಿದ್ದರು. ಉತ್ಸಾಹದ ಕಾರ್ಯ ಕಲಾಪ
ಗಳನ್ನು ನಿರೀಕ್ಷಿಸುವ ಕುತೂಹಲದಿಂದ ದೇವಸ್ಥಾನದೆದುರು ಜನ
ಜಾತ್ರೆಯು ಕೋಲಾಹಲವನ್ನು ಮಾಡುತ್ತಲಿತ್ತು.
ದೇವಾಲಯದ ಎದುರು ಗಗನ ಚುಂಬಿತವಾದ ಗರುಡಗಂಬ
ವೊಂದು ತಲೆ ಎತ್ತಿ ನಿಂತಿದೆ. ಜನರ ಗುಂಪಿನೊಳಗಿಂದ
ಹುಚ್ಚನಂತೆ ಕಾಣುವ ಒಬ್ಬ ಮನುಷ್ಯನು ಆ ಗರುಡಗಂಬವನ್ನು
ಸರಸರ ಏರ ತೊಡಗಿದನು. ಜನರೆಲ್ಲರೂ ಕುತೂಹಲದಿಂದ
ಉಸಿರು ಬಿಗಿ ಹಿಡಿದು ಅವನೆಡೆಗೆ ನೋಡ ಹತ್ತಿದರು. ಆ
ಕಂಬವನ್ನು ಏರುವವನ ಮೈಯಲ್ಲಿ ದೇವರ ಆವೇಶವು ಬಂದಂತೆ
ಇತ್ತು.
ತಲೆ ಎತ್ತಿ ನೋಡಿದರೆ ಕಣ್ಣು ತಿರುವಂತಿದ್ದ ಆ ಎತ್ತರ ಕಂಬವನ್ನು
ಚಪಲತೆಯಿಂದ ಅರೆಚಣದಲ್ಲಿ ಏರಿದ ಆ ಅರೆ ಹುಚ್ಚ. ಅಂಗೈ
ಅಗಲದ ಕಂಬದ ತುದಿಯಲ್ಲಿ ಅವನು ಕುಣಿಯ ತೊಡಗಿದ.
ರಂಗಭೂಮಿಯ ಮೇಲೆ ನಟ ಸಾರ್ವಭೌಮನ ನೃತ್ಯದಂತೆ ಇತ್ತು
ಅವನ ಆ ಸ್ವಚ್ಛಂಧ ನಾಟ್ಯ. ಜನರ ಸದ್ದು ಗದ್ದಲಗಳೆಲ್ಲ ಒಮ್ಮೆಲೆ
ಶಾಂತವಾದವು. ಎವೆ ಪಿಳಕಿಸದ ಸಾವಿರಾರು ಕಣ್ಣುಗಳು
ಅವನಲ್ಲಿ ಕೇಂದ್ರೀಕೃತವಾದವು.
ಸ್ತಂಭದ ತುದಿಯಲ್ಲಿ ಸ್ವಚ್ಛಂಧವಾಗಿ ತಾಂಡವಗೈವ ಆ ನೃತ್ಯ
ಧೀರನು ಎರಡೂ ಕೈಗಳನ್ನು ಮೇಲೆತ್ತಿ ಘೋಷಣೆ ಗೈದ. " ಸ್ವಲ್ಪ
ದಿನಗಳಲ್ಲಿ ಸರ್ವಜ್ಞರ ಅವತಾರ. ಸಜ್ಜನರಿಗೆಲ್ಲ ಕಲ್ಯಾಣ. ಅದು
ಕೂಡಾ ಈ " ಶ್ರೀ ಪರಶುರಾಮ ಕ್ಷೇತ್ರ " ದಲ್ಲಿ ಬೇಗನೆ ಆಗಲಿರುವದು "
ಅವನು ಈ ಮಾತನ್ನು ಮೂಲ ಸಲ ಜನರಿಗೆಲ್ಲಾ " ಕೇಳಿರಿ "
" ಕೇಳಿರಿ " ಯೆಂದು ಕೈ ಎತ್ತಿ ಮತ್ತೆ ಮತ್ತೆ ಹೇಳಿದ. ಆಣೆಯಿಟ್ಟು
ಹೇಳಿದಂತೆ ಯಿತ್ತು ಅವನ ಆ ನಿರ್ಧಾರದ ಕಣಿ.
ಹುಸಿ ಹೋಗಲಿಲ್ಲ ಆ ಹುಚ್ಚನ ಮಾತು. ಮುಂದೆ ಕೆಲವೇ ದಿನಗಳಲ್ಲಿ
ಉಡುಪಿಯ ಸಮೀಪದ " ಪಾಜಕಾ ಕ್ಷೇತ್ರ " ದಲ್ಲಿ " ಜೀವೋತ್ತಮ
ರಾದ ಶ್ರೀ ವಾಯುದೇವರು " ಅವತಾರ ಮಾಡಿದರು.
" ಪವಿತ್ರಂ ಪಾಜಕ ಕ್ಷೇತ್ರಂ "
ಪಾಜಕ ಕ್ಷೇತ್ರವು ಶ್ರೀ ಪರಶುರಾಮದೇವರ ಕಾಲದಿಂದಲೂ ಪ್ರಸಿದ್ಧ
ಕ್ಷೇತ್ರವೆನಿಸಿದೆ. ಈ ಗ್ರಾಮದ ಬದಿಯ ಬೆಟ್ಟದಲ್ಲಿ ಆ ರಾಮ ಕೃಷ್ನನ
ತಂಗಿಯನ್ನು ಪ್ರತಿಷ್ಠೆ ಮಾಡಿದ. ಶ್ರೀ ಪರಶುರಾಮರ ಈ ದುರ್ಗಾ
ಪ್ರತಿಷ್ಠಾ ಮಹೋತ್ಸವವನ್ನು ನೋಡಲು ಅಂದು ವಿಮಾನದಲ್ಲಿ
ಬಂದಿದ್ದರಂತೆ. ಅದಕ್ಕಾಗಿಯೇ " ವಿಮಾನಗಿರಿ " ಯೆಂದು ಈಗಲೂ
ಅದಕ್ಕೆ ಹೆಸರು.
ಈ ಪಾಜಕದ ಸುತ್ತಲೂ ಶ್ರೀ ಪರಶುರಾಮದೇವರ ಬಿಲ್ಲು - ಬಾಣ -
ಕೊಡಲಿ - ಗದೆಗಳಿಂದ ರೂಪುಗೊಂಡಿವೆ ನಾಲ್ಕು ತೀರ್ಥಗಳು.
ನಿಸರ್ಗ ಸೌಂದರ್ಯದ ನೆಲೆವೀಡಾದ ಈ ಪಾವನ ಕ್ಷೇತ್ರವೆಲ್ಲವೂ
ಮಧ್ಯಗೇಹ ಮನೆತನದ ಸಾಗರಿ ನಾರಾಯಣಾಚಾರ್ಯರ ಮನಸ್ಸನ್ನು
ಸೆಳೆಯಿತು. ಅವರನ್ನು ಶ್ರೀ ಮಧ್ಯಗೇಹಭಟ್ಟರೆಂದೂ ಕರೆಯುತ್ತಿದ್ದರು.
ಶ್ರೀ ಭಟ್ಟರು ತಮ್ಮ ಗ್ರಾಮವನ್ನು ಬಿಟ್ಟು ಪಾಜಕ ಕ್ಷೇತ್ರ " ದಲ್ಲಿ
ನೆಲೆಸಿದರು.
ಶ್ರೀ ಮಧ್ಯಗೇಹಭಟ್ಟರು ಉಡುಪಿಯ ಶ್ರೀ ಅನಂತೇಶ್ವರ ಸ್ವಾಮಿಯ
ಏಕನಿಷ್ಠ ಭಕ್ತರು. ಇತಿಹಾಸ - ಪುರಾಣಗಳೆಲ್ಲಾ ಅವರ ಕರತಲದಲ್ಲಿ
ಆ ಮಲಕ. ಮಧುರ ಕಂಠದಿಂದ ಅವರು ಪುರಾಣ ಹೇಳಹತ್ತಿದರೆ
ಜನರ ಸರ್ವೇ೦ದ್ರಿಯಗಳಿಗೂ ಆಪ್ಯಾಯಮಾನವಾಗುತ್ತಿತ್ತು.
ಶ್ರೀ ಮಧ್ಯಗೇಹಭಟ್ಟರು ಸತ್ ಸಂತಾನಕ್ಕಾಗಿ ೧೨ ವರ್ಷ ಶ್ರೀ
ಅನಂತೇಶ್ವರನನ್ನು ಸೇವಿಸಿದರು. ಅವರ ಮಡದಿ ಸಾಧ್ವೀ ವೇದವತಿ
ಯೂ ಆ ಸ್ವಾಮಿಯ ಸೇವೆಯಲ್ಲಿ ಮೈ ಸವೆಯಿಸಿದಳು. ಶ್ರೀ ಭಟ್ಟರಿಗೆ
ಬೇಕಾದದ್ದು ಬರೀ ತಮ್ಮ ವಂಶ ಉದ್ಧಾರ ಮಾಡುವ ಮಗನಲ್ಲ.
ವಿಶ್ವೋದ್ಧಾರ ಮಾಡುವ ಮಗ. ಇಂಥಹಾ ಮಗನಿಗಾಗಿ ಆ
ದಂಪತಿಗಳು ತಮ್ಮ ಕುಲಸ್ವಾಮಿಗೆ ಹರಕೆ ಹೊತ್ತರು. ಪಯೋವ್ರತ
ಮೊದಲಾದ ವ್ರತಗಳನ್ನು ಮಾಡಿದರು. ದೇವ ದೇವೋತ್ತಮನಾದ
ಜಗನ್ನಾಥನು ಕಣ್ತೆರೆದ!
" ಶ್ರೀಮದಾಚಾರ್ಯರ ಅವತಾರ "
ಶ್ರೀ ಮಧ್ವ ವಿಜಯ...
ಸಂತುಷ್ಯತಾಂ ಸಕಲಸನ್ನಿಕರೈರಸಾದ್ಭಿ:
ಖಿದ್ಯೇತ ವಾಯುರಯಮಾವಿರಭೂತ್ ಪೃಥುವ್ಯಾ೦ ।
ಆಖ್ಯಾನಿತೀವ ಸುರದುಂದುಭಿಮಂದ್ರನಾದಃ
ಪ್ರಾಶ್ರಾವಿ ಕೌತುಕವಶೈರಿಹ ಮಾನವೈಶ್ಚ ।।
ವಿಜಯದಶಮೀ ಮಹಾ ಶುಭ ದಿನದಂದು " ಶ್ರೀ ಮಧ್ಯಗೇಹ
ಭಟ್ಟರು " ಶ್ರೀ ಅನಂತೇಶ್ವರನ ದರ್ಶನಕ್ಕೆ ಉಡುಪಿಗೆ ಹೋಗಿದ್ದರು.
ಸ್ವಾಮಿಯ ಸೇವೆ ಮಾಡಿ ಶ್ರೀಭಟ್ಟರು ಮಗೆಗೆ ಮರಳಿದಾಗ
ಹೊತ್ತು ನೆತ್ತಿಗೇರಿತ್ತು. ಶ್ರೀ ಭಟ್ಟರು ಮನೆಯ ಹತ್ತಿರಕ್ಕೆ ಬಂದಾಗ
ಮಂಗಳ ವಾದ್ಯಗಳು ಮೊಳಗುತ್ತಿರುವುದು ಕೇಳಿಸಿತು. ಅವು
ಮಾನವರು ಬಾರಿಸುವ ವಾದ್ಯಗಳಲ್ಲ. ಆಗಸದ ಓಲಗದವರು
ಬಾರಿಸಿದ ದೇವದುಂದುಭಿಗಳೇ ಆಗಿದ್ದವು.
ಅಂಥಹಾ ಮಧುರವಾದ ಮಂಗಳ ವಾದ್ಯಗಳ ಮಂಜುಲ
ಘೋಷವನ್ನು ನೆಲದ ಜನರು ಎಂದೂ ಕೇಳಿರಲಿಲ್ಲ. ಅದನ್ನು
ಕೇಳಿದ ಜನರೆಲ್ಲರೂ ಕೌತುಕದ ಕೊನೆ ಏರಿ ನಿಂತರು. ಶ್ರೀಮದಾ
ಚಾರ್ಯರು ಅವತರಿಸಿದರು. ಸಜ್ಜನರು ಸಂತೋಷಗೊಂಡರು.
ದೇವತೆಗಳು ನಲಿದಾಡಿದರು.
ಶ್ರೀ ಮಧ್ಯಗೇಹಭಟ್ಟರು ಮನೆಗೆ ಬಂದು ತಮ್ಮ ಸುಂದರ
ಮಗುವನ್ನು ಕಣ್ಣು ತುಂಬಾ ನೋಡಿ ತಣಿದರು. ೧೨ ವರ್ಷ ತಾವು
ಸೇವಿಸಿದ ಶ್ರೀ ಮುಕುಂದನ ದಯೆಯೇ ಈ ಕಂದನ ರೂಪದಿಂದ
ಬಂದಿದೆ ಎಂದು ತೋರಿತು ಅವರ ಮನಸ್ಸಿಗೆ. ಅವರು
ನಿಂತಲ್ಲಿಂದಲೇ ಶ್ರೀ ಅನಂತೇಶ್ವರನನ್ನು ವಂದಿಸಿದರು.
ಶ್ರೀ ವಾಯುದೇವರ ಅವತಾರ ಭೂತರಾದ ಆ ಮಗುವಿಗೆ
ತಂದೆಯಿಟ್ಟ ಹೆಸರು " ಶ್ರೀ ವಾಸುದೇವ ".
" ಶ್ರೀ ವೆಂಕಟವಿಠ್ಠಲರ ಕಣ್ಣಲ್ಲಿ..."
ಶುದ್ಧ ಸತ್ತ್ವಾತ್ಮಕ ಶರೀರ ಶ್ರೀ ಗುರುವಾರಾ ।
ಮಧ್ವರಾಯರೇ ಕರುಣದಿ ।
ಮಧ್ಯಗೇಹ್ಯಾರೆಂಬ ಸುರರ ಸತಿ ಉದರದಲಿ ।
ಉದ್ಭವಿಸಿಮ್ಯರದೆ ಜಗದಿ ।।
ಸದ್ವೈಷ್ಣವರ ಪೊರೆದು ಅದ್ವೈತರ ಸದದು ।
ಮಧ್ವಮತ ಸಿದ್ಧಾಂತವನು ಮಾಡಿದೆ ।
ವಿದ್ಯಾರಣ್ಯ ಮಣಿಮಂತ ದೈತ್ಯರನೆಲ್ಲ ।
ವೊದ್ದೊದ್ದು ಅವರ ಅಂಧಂತಮಕೆ ಗುರಿಮಾಡ್ದೆ ।।

" ಕೂಸಿನ ಕಂಡೀರಾ ಗುರು ಮುಖ್ಯಪ್ರಾಣನ ಕಂಡೀರಾ "
ಆ ಶುಶುವಿಗೆ ಹಾಲು ಉಣಿಸಲಿಕ್ಕಾಗಿ ಒಂದು ಹಸುವನ್ನು
ಕೊಟ್ಟ ಮೂಡಿಲ್ಲಾಯರಿಗೆ ಮೋಕ್ಷ ವಿದ್ಯೆಯು ಕರತಲಾಮಲಕ
ವಾಯಿತು. ಶ್ರೀ ಭಟ್ಟರು ಒಂದುದಿನ ಆ ಮಗುವನ್ನು ಉಡುಪಿಗೆ
ಕರೆದುಕೊಂಡು ಹೋಗಿ ಶ್ರೀ ಅನಂತೇಶ್ವರನ ಪಾದದ ಮೇಲೆ
ಹಾಕಿದರು. ಆ ಭಗವಂತನ ಆಶೀರ್ವಾದ ಪಡೆದು ಮಗುವಿನೊಂದಿಗೆ
ಮರಳಿ ಹೊರಟರು. ರಾತ್ರಿ ಕಾಡಿನಲ್ಲಿ ನಡೆದು ಬರುವಾಗ ಇವರನ್ನು
ಕಬಳಿಸ ಬಂದ ಒಂದು ಭೂತವು ಆ ಮಗುವಿಗೆ ಹೆದರಿ ಅವರನ್ನು
ಬಿಟ್ಟು ದೂರಹೋಯಿತು.
" ಖಂಡಗ ಹುರಳಿ ತಿಂದಿತು ಕೂಸು "
ಒಮ್ಮೆ ತಾಯಿ ಮನೆಯಲ್ಲಿ ಇಲ್ಲದಾಗ ಮಗುವು ಅಳತೊಡಗಿತು.
ರೋದನವು ಜೋರಾದಾಗ ಅವನ ಅಕ್ಕ ಏನು ಮಾಡುವದು
ತಿಳಿಯದೆ ದನಕ್ಕೆ ತಿನ್ನಿಸಲಿಕ್ಕೆ ನೆನೆಸಿಯಿಟ್ಟ ಹುರಳಿಯನ್ನು ತಿನ್ನಲು
ಕೊಟ್ಟಳು. ಅವೆಲ್ಲವನ್ನೂ ತಿಂದು ತೇಗಿತು ಆ ಪುಟ್ಟ ಕೂಸು.
ತಾಯಿ ಬಂದು ಅದನ್ನು ಕೇಳಿ ಗಾಬರಿಯಾದಳು. ಅವಳಿಗೇನು
ಗೊತ್ತು ಹಿಂದೆ ಎರಡು ಸಲ ವಿಷವುಂಡು ಪಚನ ಮಾಡಿಕೊಂಡ
ಮಗು ಇದೆಂದು. ಭಂಡಿ ಅನ್ನ ಉಂಡ ಕೂಸು ಇದು!!
ಶ್ರೀ ವಾಸುದೇವನು ತುಸು ದೊಡ್ಡವನಾದಾಗ ಶ್ರೀ ಭಟ್ಟ
ದಂಪತಿಗಳಿಗೆ ಅವನನ್ನು ಹಿಡಿಯುವುದೇ ಕಷ್ಟವಾಯಿತು.
ಒಂದುದಿನ ಬೆಳಿಗ್ಗೆ ಎತ್ತಿನ ಬಾಲ ಹಿಡಿದು ಆ ಕೂಸು ಕಾಡಿಗೆ
ಹೋಗಿಬಿಟ್ಟಿತು. ಮನೆಯ ಜನ ಊರೆಲ್ಲಾ ಹುಡುಕಾಡಿ
ದಿಗ್ಭ್ರಾ೦ತರಾಗಿ ಕುಳಿತು ಕೊಂಡಿದ್ದರು. ಸಂಜೆಯ ವೇಳೆಗೆ
ಬಸವನ ಹಿಂದೆ ಬಾಲವಾಗಿ ಲೀಲೆಯಿಂದ ಜೋಕಾಲಿ ಆಡುತ್ತಾ
ಮಗು ಮನೆಗೆ ಬಂದ!!
" ಉಪನಯನ - ಅಧ್ಯಯನ "
ಶ್ರೀ ಮಧ್ವ ವಿಜಯ...
ಸಮುಚಿತ ಗ್ರಹ ಯೋಗ ಗುಣಾನ್ವಿತಂ
ಸಮವಧಾರ್ಯ ಮುಹೂರ್ತಮದೂಷಣಮ್ ।
ಪ್ರಣಯ ಬಂಧುರ ಬಾಂಧವವಾನಸೌ
ದ್ವಿಜಕುಲಾಕುಲ ಮುತ್ಸವಮಾತನೋತ್ ।।
ಶ್ರೀ ವಾಸುದೇವನು ಎಂಟನೇ ವಯಸ್ಸಿನಲ್ಲಿದ್ದಾಗ ಶ್ರೀ ಮಧ್ಯ
ಗೇಹಭಟ್ಟರು ಎಲ್ಲ ಆಪ್ತೇಷ್ಟರಿಂದೊಡಗೂಡಿ ಅವನ ಉಪನಯ
ನವನ್ನು ನೆರವೇರಿಸಿದರು. ಉಪನಯನವಾದ ಬಳಿಕ ಶ್ರೀ ಭಟ್ಟರು
ವಾಸುದೇವನನ್ನು ವೇದ ಶಾಸ್ತ್ರಗಳ ಅಧ್ಯಯನಕ್ಕಾಗಿ
ತೋಟಂತಿಲ್ಲಾಯ ಎಂಬ ವಿದ್ವಾಂಸರ ಬಳಿಗೆ ಕಳುಹಿಸಿದರು.
ಗುರುಗಳು ವಾಸುದೇವನ ವಿಲಕ್ಷಣ ಪ್ರತಿಭೆಯನ್ನು ಕಂಡು
ಬೆರಳು ಕಚ್ಚಿದರು. ಸರ್ವಜ್ಞರ ಸಂಕ್ಷಿಪ್ತ ಆವೃತ್ತಿಯಂತಿದ್ದ
ವಾಸುದೇವನು ಕೆಲವು ದಿನಗಳಲ್ಲಿಯೇ ತೋಟಂತಿಲ್ಲಾಯರಲ್ಲಿ
ಓದುವ ಶಾಸ್ತ್ರ ಮಾಡಿ ಮುಗಿಸಿದರು. ಕೊನೆಗೆ ಅವರಿಗೆ
ಗುರುದಕ್ಷಿಣಾ ರೂಪವಾಗಿ " ಐತರೇಯೋಪತ್ತಿ " ನ
ರಹಸ್ಯಾರ್ಥವನ್ನು ತಿಳಿಸಿದರು. ಅದರಿಂದ ಆ ಗುರುಗಳಿಗೆ
ಗೋವಿಂದನಲ್ಲಿ ಭಕ್ತಿ ಹುಟ್ಟಿತು. ಮುಕ್ತಿ ಕಾರಗತವಾಯಿತು.
ಉಪನಯನವಾದ ಬಳಿಕ ಶ್ರೀ ವಾಸುದೇವನ ವೃತ್ತಿ
ವಿಲಕ್ಷಣವಾಗಿದ್ದಿತು. ವೈಷ್ಣವ ಸಿದ್ಧಾಂತದ ಪ್ರಸಾರ ಮತ್ತು
ವೇದ ಸಿದ್ಧಾಂತದ ಪುನರುದ್ಧಾರವನ್ನು ಮಾಡಬೇಕೆಂದು.
ಶ್ರೀ ಹರಿಯು ಅಂದು ತಮಗೆ ಮಾಡಿದ ಆದೇಶದ ಅರಿವು
ಅವರ ಹೃದಯದಲ್ಲಿ ನಿತ್ಯ ನಿಶ್ಚಳವಾಗಿದ್ದಿತು.
" ಸಂನ್ಯಾಸ ಸ್ವೀಕಾರ "
ಶ್ರೀ ಮಧ್ವ ವಿಜಯ...
ಅಥೋಪಗಮೈಷ ಗುರು ಜಗದ್ಗುರು:
ಪ್ರಸಾದ್ಯ ತಂ ದೇವವರ ಪ್ರಸಾದಿತಃ ।
ಸದಾ ಸಮಸ್ತಾಶ್ರಮಭಾಕ್ ಸುರೇಶ್ವರೋ
ವಿಶೇಷತಃ ಖಲ್ವಭಜದ್ವರಾಶ್ರಮಮ್ ।।
ರುದ್ರಾದಿ ದೇವತೆಗಳು ಒಲಿಸಿದ ಶ್ರೀ ವಾಸುದೇವ ಗುರುವಾದ
ಶ್ರೀ ಅಚ್ಯುತಪ್ರೇಕ್ಷಾಚಾರ್ಯರಲ್ಲಿಗೆ ತೆರಳಿ ಅವರನ್ನು ಪಡಿಸಿದರು
ಸದಾ ಎಲ್ಲ ರೀತಿಯ ಆಶ್ರಮ ಧರ್ಮಗಳನ್ನೂ ಪರಿಪಾಲಿಸುವ
ದೇವ ಶ್ರೇಷ್ಠರಾದ ಅವರು ಆಗ ವಿಶೇಷವಾಗಿ
ಸಂನ್ಯಾಸಾಶ್ರಮವನ್ನು ಸ್ವೀಕರಿಸಿದರು.
" ವೇದಾಂತ ಸಾಮ್ರಾಜ್ಯ ಪಟ್ಟಾಭಿಷೇಕ "
ವೇದಾಂತವಿದ್ಯಾನಿಜರಾಜ್ಯಪಾಲನೇ
ಸಂಕಲ್ಪ್ಯಮಾನೋ ಗುರುಣಾಗರೀಯಸೀ ।
ಅದಭ್ರಚೇತಾ ಅಭಿಷಿಚ್ಯತೇ ಪುರಾ ಸ
ವಾರಿಭಿರ್ವಾರಿಜ ಪೂರಿತೈರಥ ।।

" ವೇದಾಂತ ವಿದ್ಯೆ " ಎಂಬುವ ತಮ್ಮ ಸಾಮ್ರಾಜ್ಯದ
ಪರಿಪಾಲನೆ ಎಂಬ ಹಿರಿದಾದ ಕಾರ್ಯದಲಿ ಸರ್ವಜ್ಞರಾದ
ಶ್ರೀ ಪೂರ್ಣಪ್ರಜ್ಞರನ್ನು ನಿಯಮಿಸಬೇಕೆಂದು ನಿಶ್ಚಯಿಸಿ
ಗುರುಗಳಾದ ಶ್ರೀ ಅಚ್ಯುತಪ್ರೇಕ್ಷರು ಅವರಿಗೆ ಶಂಕದಲ್ಲಿ
ತುಂಬಿದ ಪುಣ್ಯ ಜಲಗಳಿಂದ ಅಭಿಷೇಕ ಮಾಡಿದರು.
ಶ್ರೀ ವಾಸುದೇವನು " ಆನಂದತೀರ್ಥ " ರಾದರು.
ಆನಂದ ರೂಪಸ್ಯ ಪರಸ್ಯ ಪಾತ್ರದೀರಾ
ನಂದಸಂದಾಯಿಸುಶಾಸ್ತ್ರಕೃತ್ ಸ ಯತ್ ।
ಆನಂದತೀರ್ಥೇತಿ ಪದಂ ಗುರೂದಿತಂ
ಬಭೂವ ತಸ್ಯಾತ್ಯನುರೂಪರೂಪಕಮ್ ।।
ಆನಂದ ರೂಪನೂ; ಸರ್ವೋತ್ತಮನೂ ಆದ ಶ್ರೀ
ಹರಿಯಲ್ಲಿಯೇ ನೆಲೆಸಿದ ಮನಸ್ಸಿನ ಸ್ವರೂಪಾನಂದಕ್ಕೆ
ಸಾಧನವಾಗುವ ಶಾಸ್ತ್ರವನ್ನು ರಚಿಸಿರುವ ಶ್ರೀ ಪೂರ್ಣಪ್ರಜ್ಞರಿಗೆ
ಗುರುಗಳಿರಿಸಿದ " ಆನಂದತೀರ್ಥ " ಯೆಂಬ ಹೆಸರು ಅತ್ಯಂತ
ಅರ್ಥಪೂರ್ಣವೆನಿಸಿತು.
ಕಕ್ಷೆ ; 3
ಅಂಶ : ಸಾಕ್ಷಾತ್ ಶ್ರೀ ವಾಯುದೇವರು
( ಭಾವಿ ಬ್ರಹ್ಮದೇವರು )
" ಶ್ರೀ ಜಗನ್ನಾಥದಾಸರ ಕಣ್ಣಲ್ಲಿ.... "
ಶ್ರೀ ಮರುತಾತ್ಮ ಸಂಭೂತ ಹನುಮ ।
ಭೀಮ ಮಧ್ವಾಖ್ಯ ಯತಿನಾಥ ಮೂಲ ।
ರಾಮ ಕೃಷ್ಣಾರ್ಪಿತ ಸುಚೇತಾ ।
ಮಾಮ ಸ್ವಾಮಿ ಚೈತ್ತೈಸೆನ್ನ ಮಾತಾ ।।
ಚತುರಶ್ಚತುರಾನನಃ ಸ್ವಯಂ ಪವನೋ ವಾ
ವ್ರತಿರೂಪ ಆವ್ರಜನ್ ।
ಶ್ರುತಿನಾಥದಿಧೃಕ್ಷಯಾನ್ಯಥಾ ನ ಖಲು
ಸ್ಯಾನ್ನಿಖಿಲಾಗ್ರ್ಯಲಕ್ಷ್ಮವಾನ್ ।।
ಶ್ರುತಿನಾಥರಾದ ಶ್ರೀ ವೇದವ್ಯಾಸದೇವರನ್ನು ಕಾಣುವ
ಬಯಕೆಯಿಂದ ಸ್ವತಃ ಚತುರ್ಮುಖ ಬ್ರಹ್ಮದೇವರೋ
ಅಥವಾ ವಾಯುದೇವರೋ ಯತಿ ರೂಪದಿಂದ
ಬರುತ್ತಿರುವಂತಿದೆ. ಇಲ್ಲವಾದಲ್ಲಿ ಹೀಗೆ ಸಕಲ ಲಕ್ಷಣಗಳನ್ನು
ಹೊಂದಿರಲು ಸಾಧ್ಯವಿಲ್ಲ.
ಆಶ್ರಮ ಗುರುಗಳು : ಶ್ರೀ ಅಚ್ಯುತಪ್ರೇಕ್ಷಾಚಾರ್ಯರು
ಆಶ್ರಮ ಶಿಷ್ಯರು :
ಶ್ರೀ ಮರುದಂಶ ಪ್ರಾಣೇಶದಾಸರ ನುಡಿಮುತ್ತುಗಳಲ್ಲಿ
ಶ್ರೀಮದಾಚರ್ಯರಿಂದ ಸ್ಥಾಪನೆಗೊಂಡ ಮಠಗಳೂ
ಹಾಗೂ ಯತಿಗಳು..
ಸುಖತೀರ್ಥರೆದುವರನ । ಸ್ಥಾಪಿ ।
ಸ್ಯೊಂಭತ್ತೆತಿಗಳನು ಮಾಡಿ ಅವರವರಿಗೆ ।
ಅಕಳಂಕ ನಾಮಗಳ ಮೂರ್ತಿಗಳ ಕೊಟ್ಟು ।
ವಿವರ ಬಣ್ಣಿಸುವೆ ಸುಜನರು ಕೇಳಿ ।।

ಶ್ರೀ ಪದ್ಮನಾಭ ಹೃಷಿಕೇಶ ।
ನರಹರಿ ಜನಾರ್ದನ ಯತಿ ।
ಉಪೇಂದ್ರತೀರ್ಥ ಪಾಪಘ್ನ ವಾಮನ ಮುನಿಪಾ ।

ವಿಷ್ಣು ಯತಿ ರಾಮತೀರ್ಥಧೋಕ್ಷಜತೀರ್ಥರು ।।
*******

No comments:

Post a Comment