Wednesday 1 May 2019

subodhendra teertharu 1835 nanjangud matha rayara mutt yati 27 chaitra bahula triteeya ಸುಬೋಧೇಂದ್ರ ತೀರ್ಥರು




shri gurubyO namaha...hari Om

chaitra bahuLa trithIya is the ArAdhane of shri subOdhEndra tIrtharu of rAyara maTa.

shri subOdhEndra tIrtharu:

ArAdhane: chaitra bahuLa trithIya
parampare: rAyara maTa
Ashrama Period: 1799 - 1807 
gurugaLu: shri bhuvanEndra tIrtharu
shishyaru: shri sujanEndra tIrtharu
brindAvana: nanjangUdu  1835 check


ಸುಧಾಸೇವ ಸಮದ್ಭೂತ ಸುಖಸಂವಿತ್ಸಮಾಶ್ರಯಂ |
ಸುಜನಾಭೀಷ್ಟದಾತಾರಂ ಸುಭೋದೇಂದ್ರಗುರುಂ ಭಜೇ ||

सुधासेव समद्भूत सुखसंवित्समाश्रयं ।
सुजनाभीष्टदातारं सुभोदेंद्रगुरुं भजे ॥



shri subOdhEndra tIrtha guruvantargata, bhAratIramaNa mukhyaprAnantargata, sItA pate shri mUla rAma dEvara pAdaravindakke gOvindA, gOvindA...


shri krishnArpaNamastu...

*****

ArAdhane: chaitra bahuLa trithIya
parampare: rAyara maTa
Period: 1799 - 1835
gurugaLu: shri bhuvanEndra tIrtharu
shishyaru: shri sujanEndra tIrtharu

brindAvana: nanjangUdu

***********

" ಗರಳಪುರಿ ವಾಸರೂ - ಶ್ರೀ ಸೂರ್ಯದೇವರ ಅಂಶ ಸಂಭೂತರಾದ ಶ್ರೀ ಸುಬೋಧೇಂದ್ರತೀರ್ಥರು "
" ಈದಿನ - > ದಿನಾಂಕ : 29.04.2021 ಗುರುವಾರ - ಶ್ರೀ ಪ್ಲವ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಚೈತ್ರ ತೃತೀಯಾ - ಶ್ರೀ ಸುಬೋಧೇಂದ್ರತೀರ್ಥರ ಆರಾಧನಾ ಮಹೋತ್ಸವ., ನಂಜನಗೂಡು "
ರಾಗ : ಪೂರ್ವೀ  ತಾಳ : ಏಕ 
ಅಭಯವೀಗಲೇ ಬೇಡೆ । ಗುರು ।
ಸುಬೋಧೇಂದ್ರಾರ್ಯರ -
ನೋಡೆ ಸಖಿ  ।। ಪಲ್ಲವಿ ।।
ಪಾಪ ಕಳೆವಳಾಕಾಶ -
ಗಂಗೆ । ಬಹು ।
ತಾಪ ಕಳೆವ ದ್ವಿಜನಾಥ ।
ಆ ಪಾದಪ ದೈನ್ಯ ಹರೀ -
ಸುಗುಣವು ।
ಈ ಪುರುಷರಿಗೊಪ್ಪುವುದಲ್ಲೇ -
ಸಖಿ ।। ಚರಣ ।।
ಮೀನಾ ಕೂರ್ಮ ದ್ವಿಜ -
ನೋಡಿ ಸ್ಮರಿಸಿ ಮುಟ್ಟಿ ।
ಸೂನುಗಳನು ಸಲಹುವ ತೆರದಿ ।
ಸು ನೋಟದಿ ನೆನೆದು -
ಪಾದಸ್ಪರ್ಶ । ವಿ ।
ತ್ತಾನುತರನು ಪೋರೆವರು -
ಬಿಡದೆ ಸಖಿ ।। ಚರಣ ।।
ಈ ಸಂಯಮಿಗಳ 
ಕೃಪೆಯೊಂದಿರುತಿರೆ ।
ಏನು ಸಾಧನ ಇನ್ನೇತಕೆಲೆ ।
ನಾಶ ವೈಕುಂಠವೇ ಸರಿ । ಪ್ರಾ ।
ಣೇಶವಿಠ್ಠಲ ನಿವರಲ್ಲಿಹದಕೆ -
ಸಖಿ  ।। ಚರಣ ।। 
ಸ್ವಾಮೀ ಸುಬೋಧೇಂದ್ರತೀರ್ಥ ಗುರುವರ್ಯರೇ! 
ನಿಮ್ಮ ಮಹಿಮೆಯು ಅಗಾಧವಾಗಿದೆ. 
ನೀವು - ಕುತ್ಸಿತ ಪರವಾದಿ ವಿಬುಧ ಸಂಗವನ್ನು ನಿಮ್ಮ ವಾಗ್ವೈಖರಿ - ಚಾತುರ್ಯಗಳಿಂದ ವಾದದಲ್ಲಿ ಸುಲಭವಾಗಿ ಜಯಿಸಿ ದುರ್ವಾದಿಗಳ ಗರ್ವ ಪರಿಹಾರ ಮಾಡುವವರಾಗಿದ್ದೀರಿ. 
ಅವೈದಿಕವಾದ ತಮ್ಮ ಮತವೇ ಆ ತತ್ತ್ವಗಳೇ ಶ್ರೇಷ್ಠವೆಂಬ ಅವರ ಛಲವನ್ನು ನಿಮ್ಮ ವಾದ ಚಾತುರ್ಯದಿಂದ ನಿವಾರಿಸಿದವರಾಗಿದ್ದೀರಿ. 
ನಿಮ್ಮ ಪಾಠ ಪ್ರವಚನ ಉಪದೇಶಗಳನ್ನು ಕಂಡು ವಿದ್ವಜ್ಜನರು ಸದಾ ನಿಮ್ಮನ್ನು ಸೇವಿಸುತ್ತಾರೆ. 
ಅಥವಾ 
ಬುಧನಿಂದ ( ಪಂಡಿತರಿಂದ ಸೇವ್ಯರೂ ) ಪಂಡಿತ ಮಂಡಲಿಗೆ ( ಅಮರ ಸಂಘಕ್ಕೆ ) ಪ್ರಭು ( ಆಚಾರ್ಯ ) ಗಳಾದ ಶ್ರೀ ಬೃಹಸ್ಪತ್ಯಾಚಾರ್ಯರನ್ನು ನಿಮ್ಮ ವಿದ್ಯಾ ವೈಭವ ಉಪದೇಶ ವೈಖರಿಗಳಿಂದ ಸಂತೋಷ ಪಡಿಸುವವರಾಗಿದ್ದೀರಿ. 
ಅಥವಾ 
ಬುಧಾದಿ ಸೇವ್ಯನೂ - ಸುರ ನಿಕರಕ್ಕೆ ಪ್ರಭುವೂ ಆದ ಶ್ರೀ ಇಂದ್ರದೇವರನ್ನು ಅರ್ಥಾತ್ ಶ್ರೀ ಇಂದ್ರಾವತಾರಿಗಳಾದ ಶ್ರೀ ಜಯತೀರ್ಥರನ್ನು ನಿಮ್ಮ ಪಾಠ ಪ್ರವಚನ ಚಾತುರ್ಯದಿಂದ ಹರ್ಷಗೊಳಿಸಿದ್ದೀರಿ. 
ಇಷ್ಟೇ ಅಲ್ಲ.....
ಯಾದವ - ಯಜ್ಞ ಸಂಭವನೂ - ಯಜ್ಞ ನಾಮಕನೂ ಆದ ಶ್ರೀ ಮೂಲರಾಮಚಂದ್ರ -  ದೈತ್ಯ ದಂಡನಕಾರಿ ಶ್ರೀ ಕೃಷ್ಣ - ವಃ - ಶ್ರೇಷ್ಠರಾದ ಶ್ರೀ ವೇದವ್ಯಾಸದೇವರುಗಳ ಶತ್ರುಗಳಾದ ರಾವಣ - ಕುಂಭಕರ್ಣ - ಕಂಸ - ಜರಾಸಂಧ - ಶಿಶುಪಾಲ - ಮಣಿಮಂತ - ಕಾಲನೇಮಿ - ಕಲಿ ಮೊದಲಾದ ದೈತ್ಯರ ಗರ್ವ ಹಾರಕನಾದ ಶ್ರೀಮನ್ನಾರಾಯಣನ ಸನ್ಮತವಾದ ವೈದಿಕ ಸದ್ವೈಷ್ಣವ ಸಿದ್ಧಾಂತವನ್ನು ಪ್ರಸಾರ ಮಾಡುವವರಾಗಿದ್ದೀರಿ. 
ಅಥವಾ 
ಶ್ರೀ ರಾಮ - ಕೃಷ್ಣ ವೇದವ್ಯಾಸದೇವರ ರಿಪುಗಳಾದ ದೈತ್ಯರ ಮದವನ್ನು ಪರಿಹರಿಸುವ ಶ್ರೀ ಭೀಮಸೇನದೇವರಿಗೆ ಸಮ್ಮತವಾದ ಶ್ರೀ ಹರಿಸರ್ವೋತ್ತಮತ್ವ ಪ್ರತಿಪಾದಕ ದ್ವೈತ ಸಿದ್ಧಾಂತವನ್ನು ಪ್ರಸಾರ ಮಾಡುವವರಾಗಿದ್ದೀರಿ. 
ಅಥವಾ 
ಶ್ರೀ ರಾಮಚಂದ್ರ - ಶ್ರೀ ಕೃಷ್ಣ - ಶ್ರೀ ವೇದವ್ಯಾಸದೇವರು ಮತ್ತು ಅವರ ಭಕ್ತರಾದ ಶ್ರೀ ಹನುಮ - ಭೀಮ - ಮಧ್ವಾವತಾರರಾದ ಶ್ರೀ ವಾಯುದೇವರ ಶತ್ರುಗಳಾದ ರಾವಣ - ಕುಂಭಕರ್ಣ; ಕಂಸ - ಜರಾಸಂಧ - ಶಿಶುಪಾಲ - ಕೌರವ - ಮಣಿಮಂತ - ಕಾಲನೇಮಿ - ಕಲಿ ಮೊದಲಾದ ದೈತ್ಯರ ಅಹಂಕಾರವನ್ನು ಮುರಿಯುವ ಮೂಲರೂಪದ ಶ್ರೀ ನಾರಾಯಣ ಮತ್ತು ಶ್ರೀ ವಾಯುದೇವರುಗಳಿಗೆ ಪರಮ ಸಮ್ಮತವಾದ ವೈದಿಕ ಸದ್ವೈಷ್ಣವ ದ್ವೈತ ಸಿದ್ಧಾಂತ ತತ್ತ್ವಗಳನ್ನು ಚೆನ್ನಾಗಿ ಪ್ರಸಾರ ಮಾಡುತ್ತಿರುವವರು ಪ್ರಾತಃ ಸ್ಮರಣೀಯ ಪರಮ ಪೂಜ್ಯ ಶ್ರೀ ಸುಬೋಧೇಂದ್ರತೀರ್ಥರು!!
" ಶ್ರೀ ಸುಬೋಧೇಂದ್ರ ತೀರ್ಥರ ಪೂರ್ವೇತಿಹಾಸ "
ಶ್ರೀ ಸುಬೋಧೇಂದ್ರತೀರ್ಥರು ಇಂದಿನ ಪ್ರಖ್ಯಾತ ರಿತ್ತಿ ಮನೆತನದ ಪೂರ್ವಾಚಾರ್ಯರು. 
ಶ್ರೀ ವಿಜಯೀಂದ್ರತೀರ್ಥರ ಪೂರ್ವಾಶ್ರಮ ತಮ್ಮಂದಿರ ಔರಸ ಸಂತತಿಯವರು. 
" ಸ್ಮೃತಿ ಮುಕ್ತಾವಲೀ " ಗ್ರಂಥಕಾರರಾದ ಸಾಕ್ಷಾತ್ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ ವಿದ್ಯಾ ಶಿಷ್ಯರಾದ ಶ್ರೀ ಕೃಷ್ಣಾಚಾರ್ಯರು ಇವರ ವಂಶದ ಪೂರ್ವೀಕರು. 
ಶ್ರೀ ರಾಯರ ಪೂರ್ವಾಶ್ರಮ ಮರಿಮಕ್ಕಳಾದ ಶ್ರೀ ವಾದೀಂದ್ರತೀರ್ಥರ ಪೂರ್ವಾಶ್ರಮ ಮಕ್ಕಳಾದ ಶ್ರೀ ಜಯರಾಮಾಚಾರ್ಯ ( ಶ್ರೀ ಧೀರೇಂದ್ರ ತೀರ್ಥರ ) ರ ಅಳಿಯಂದಿರಾದ ಅಂದರೆ.....
ಅವರ ಪುತ್ರಿ ಸಾಧ್ವೀ ಕೃಷ್ಣಮ್ಮನವರ ಪತಿಗಳಾದ ಶ್ರೀ ರಾಜಗೋಪಾಲಾಚಾರ್ಯರ ದೊಡ್ದಪ್ಪಂದಿರು. 
ಹೀಗೆ ಶ್ರೀ ವಿಜಯೀಂದ್ರತೀರ್ಥರ - ಶ್ರೀ ರಾಯರ - ಶ್ರೀ ಧೀರೇಂದ್ರ ತೀರ್ಥರ ವಂಶದಲ್ಲಿ ಬಂದ ಮಹನೀಯರು.   
ಶ್ರೀ ಗುರುರಾಜರ ಪೀಠದಲ್ಲಿ ವಿರಾಜಿಸಿದ - ಸಕಲ ವಿದ್ಯಾ ಪಾರಂಗತರೂ - ನ್ಯಾಯ - ವೇದಾಂತ - ವ್ಯಾಕರಣ - ಮೀಮಾಂಸಾದಿ ಶಾಸ್ತ್ರಗಳಲ್ಲಿ ಶ್ರೀ ತ್ರ್ಯಂಬಕ ಶಾಸ್ತ್ರಿಗಳೇ ಮೊದಲಾದ ನೂರಾರು ಜನ ಪಂಡಿತ ಪರವಾದಿಗಳನ್ನು ಜಯಿಸಿ - " ದ್ವೈತ ಸಿದ್ಧಾಂತದ ವಿಜಯ ಪತಾಕೆ " ಯನ್ನು ಎಲ್ಲೆಡೆ ಮೆರೆಸಿದ - ನ್ಯಾಯ ವೇದಾಂತಾದಿ ಶಾಸ್ತ್ರಗಳ ಮೇಲೆ ಅನೇಕ ಗ್ರಂಥಗಳನ್ನು ರಚಿಸಿ ವಿದ್ವನ್ಮಂಡಲಿಯಿಂದ ಸೇವ್ಯರೂ - ಕರ್ನಾಟಕ - ಮಹಾರಾಷ್ಟ್ರ - ಹೈದರಾಬಾದ್ ಸಂಸ್ಥಾನಗಳ ರಾಜರುಗಳಿಂದ ಗ್ರಾಮ,  ಭೂಮಿಗಳನ್ನೂ, ಬಿರುದಾವಳಿಗಳನ್ನೂ ಗಳಿಸಿ ಕೀರ್ತಿ ಶಾಲಿಗಳಾದ - ಮೈಸೂರಿನ ಧೊರೆ ಶ್ರೀ ಮುಮ್ಮುಡಿ ಕೃಷ್ಣರಾಜ ಒಡೆಯರಿಂದ ಅನೇಕ ಗ್ರಾಮ - ಭೂಮಿ - ತಾಮ್ರ ಶಾಸನ - ತಸ್ತೀಕು - ಮಠ  ಮುಂತಾದ ಆಸ್ತಿಗಳನ್ನೂ; ಶ್ವೇತ ಛತ್ರ - ಹಗಲು ದೀವಟಿಕೆ - ಆನೆಯ ಮೇಲೆ ಅಂಬಾರಿ ಮುಂತಾದ ಅಸಾಧಾರಣ ಪ್ರಶಸ್ತಿ ಬಿರುದುಗಳನ್ನು ಶ್ರೀ ಮಹಾ ಸಂಸ್ಥಾನಕ್ಕೆ ಸಂಪಾದಿಸಿಕೊಟ್ಟು ಶ್ರೀಮದಾಚಾರ್ಯರ ಮಹಾ ಸಂಸ್ಥಾನದ ಕೀರ್ತಿ ಬೆಳಗುವಂತೆ ಮಾಡಿದ ಶ್ರೀ ಸುಜನೇಂದ್ರತೀರ್ಥರಂಥಹಾ ( ಶ್ರೀ ಸುಬೋಧೇಂದ್ರ ತೀರ್ಥರ ತಮ್ಮನ ಮಕ್ಕಳು ) ಜ್ಞಾನಿ ನಾಯಕರಾದ ಶಿಷ್ಯರನ್ನು ಮಹಾ ಸಂಸ್ಥಾನಕ್ಕೂ; ವಿದ್ವತ್ಪ್ರಪಂಚಕ್ಕೂ ನೀಡಿದ ಮಹನೀಯರು ನಮ್ಮ ಶ್ರೀ ಸುಬೋಧೇಂದ್ರತೀರ್ಥ ಶ್ರೀಪಾದಂಗಳವರು!
" ಶ್ರೀ ಸುಬೋಧೇಂದ್ರತೀರ್ಥರ ಸಂಕ್ಷಿಪ್ತ ಮಾಹಿತಿ "
ಹೆಸರು : ವಿದ್ವಾನ್ ಶ್ರೀ ಮುದ್ದು ಕೃಷ್ಣಾಚಾರ್ಯರು 
ವಿದ್ಯಾ ಗುರುಗಳು : ಶ್ರೀ ವ್ಯಾಸತತ್ತ್ವಜ್ಞತೀರ್ಥರು 
ಆಶ್ರಮ ಗುರುಗಳು : ಶ್ರೀ ಭುವನೇಂದ್ರತೀರ್ಥರು 
ಆಶ್ರಮ ನಾಮ : ಶ್ರೀ ಸುಬೋಧೇಂದ್ರತೀರ್ಥರು 
ಕಾಲ : ಕ್ರಿ ಶ 1799 - 1835
ಅಂಶ : ಶ್ರೀ ಸೂರ್ಯಾಂಶ 
ಶಬರೀ ವಲ್ಲಭನಂಘ್ರಿ ।
ಅಬುಜಾಳಿ ಸೂರ್ಯ । ಸ ।
ನ್ನಿಭ ವಾದಿ ಗಜಸಿಂಹ ।
ಸುಬೋಧೇಂದ್ರ ತೀರ್ಥಾ ।।
ಕಕ್ಷೆ : 12
ರಾಗ : ಕಾಂಬೋಧಿ ತಾಳ : ಏಕ  
ಪಾಹಿ ಪಾಹಿ ಜಿತಮಾರ ।
ಪಾಹಿ ಸುಬೋಧೇಂದ್ರ ಸಮೀರ ।
ಮಹಾ ಮತಾಬ್ದೀಂದು ದೀನಾಮರ ।
ಮಹಿಜ ಸುಹಿತ ಮಹಿತ ।। ಪಲ್ಲವಿ ।।
ನಿರ್ಮಲಾತ್ಮ ಸದ್ಗುರು ಧೀರ ।
ಕರ್ಮ ವಿಷಯಾಪೇಕ್ಷ ದೂರ ।
ಧರ್ಮಾಸಕ್ತ ಲೋಕೋದ್ಧಾರ ಶರ್ಮ । ಸು ।
ಶರ್ಮಾದ ಭರ್ಮಾಂಗ ಮರ್ಮಜ್ಞ ।। ಚರಣ ।।
ಅರ್ಕ ಮಹಿಮನೆ ಧೀಮಂತ ।
ಅರ್ಕಜನೋಲಿದಾನೀ ಶಾಂತ ।
ಮರ್ಕಟ ದುರ್ವಾದಿ ಧ್ವಾಂತ ಅರ್ಕ । ಕು ।
ತರ್ಕ ಸಂಪರ್ಕಾರ್ಹ ಅರ್ಕಾಭ ಪಾಹಿ ।। ಚರಣ ।।
ತೀರ್ಥ ಪಾಲಾ ಭಕ್ತಾಧೀನಾ ।
ತೀರ್ಥಾ೦ಗ್ರಿ ಪ್ರಾಣೇಶ ವಿಠ್ಠಲನ ।
ತೀರ್ಥ ದೂತ ನೀನಿದ್ದ ಸ್ಥಾನ ತೀರ್ಥವು ।
ತೀರ್ಥಪ ತೀರ್ಥಪ ತೀರ್ಥ ಮಾಂ ಪಾಹಿ ।। ಚರಣ ।।
ಆಶ್ರಮ ಶಿಷ್ಯರು : ಶ್ರೀ ಸುಜನೇಂದ್ರತೀರ್ಥರು 
ಆರಾಧನೆ : ಚೈತ್ರ ಬಹುಳ ತೃತೀಯಾ 
ಬೃಂದಾವನ ಸ್ಥಳ : ನಂಜನಗೂಡು 
ವಿವರಣೆ :
ಜಿತಮಾರ = ಮನ್ಮಥನ ಗೆದ್ದವರು 
ಅಮರ ಮಹಿ = ಕಲ್ಪವೃಕ್ಷ 
ಶರ್ಮ = ಆನಂದ 
ಸುಶರ್ಮದ = ಬ್ರಹ್ಮ ಜ್ಞಾನವನ್ನು ಕೊಡುವವ 
ಭರ್ಮಾಂಗ = ಬಂಗಾರದಂತಹ ಕಾಂತಿಯುಳ್ಳ ಅಂಗ ಉಳ್ಳವರು 
ಅರ್ಕ = ಸೂರ್ಯ 
ಅರ್ಕ ಮಹಿಮಾ = ಅನಂತ ಮಹಿಮಾ 
ಸಂಪರ್ಕಾಹ = ಮಿಥ್ಯಾವಾದದ ಸಂಪರ್ಕವನ್ನು ಹಾಳು ಮಾಡತಕ್ಕವರು 
ತೀರ್ಥ ಪಾಲ = ಸದ್ಧರ್ಮಗಳನ್ನು ಪಾರಿಪಾಲಿಸುವವ 
ತೀರ್ಥಾ೦ಘ್ರಿ = ಪಾದದಿಂದ ಗಂಗೆಯನ್ನು ಪಡೆದವನು
ತೀರ್ಥ ದೂತ = ಧರ್ಮ ದೂತ 
ತೀರ್ಥವು = ಪುಣ್ಯ ಕ್ಷೇತ್ರ 
ತೀರ್ಥಪ = ಶಾಸ್ತ್ರ ಪಾಲನ 
ತೀರ್ಥಪ = ಯತಿ ಶ್ರೇಷ್ಠ 
ತೀರ್ಥಮಾಂ = ನನ್ನನ್ನು ಪುನೀತನನ್ನಾಗಿ ಮಾಡು!!
by ಆಚಾರ್ಯ ನಾಗರಾಜು ಹಾವೇರಿ 
     ಗುರು ವಿಜಯ ಪ್ರತಿಷ್ಠಾನ
*******



No comments:

Post a Comment